Tag: Gayatri mantra

  • Upakarma | ಉಪಾಕರ್ಮದ ಮಹತ್ವ ಏನು?

    Upakarma | ಉಪಾಕರ್ಮದ ಮಹತ್ವ ಏನು?

    ಶ್ರಾವಣಮಾಸದ ಶ್ರವಣ ನಕ್ಷತ್ರದಂದು (Shravana Nakshatra) ಆಶ್ವಲಾಯನ ಮತ್ತು ಆಪಸ್ತಂಭ ಉಪಾಕರ್ಮ (Upakarma) ವ್ರತಗಳು ಬರುತ್ತವೆ. ಈ ದಿನ ಬೆಳಗ್ಗೆ ದೇವಸ್ಥಾನದಲ್ಲಿ ಸಾಮೂಹಿಕ ಹೋಮ, ಹವನಗಳನ್ನು ಮಾಡಿ ಮಂತ್ರಸಹಿತ ಜನಿವಾರಗಳನ್ನು ಧರಿಸುತ್ತಾರೆ. ಬ್ರಹ್ಮಚಾರಿಗಳು ಮೂರೆಳೆಯ, ಗೃಹಸ್ಥರು ಆರು ಅಥವಾ ಒಂಬತ್ತು ಎಳೆಯ ಜನಿವಾರಗಳನ್ನು ಹಾಕಿಕೊಂಡರೆ ಈ ದಿನ ದೇವರಿಗೂ ನೂತನ ಜನಿವಾರವನ್ನು ಹಾಕುತ್ತಾರೆ. ಜನಿವಾರವನ್ನು ಯಜ್ಞೋಪವೀತವೆಂದೂ, ಗಾಯತ್ರೀ ಎಂದು ಕರೆಯುತ್ತಾರೆ. ಗಾಯತ್ರೀ ಮಂತ್ರವನ್ನು ಜಪಿಸುತ್ತಾ ಜನಿವಾರ ಧರಿಸುವುದು ಕ್ರಮ. ಈ ಸಮಾರಂಭವನ್ನು ಜನಿವಾರದ ಹಬ್ಬ ಎಂದು ಕೆಲವು ಕಡೆಗಳಲ್ಲಿ ಕರೆಯಲಾಗುತ್ತದೆ. ಬ್ರಾಹ್ಮಣರು ಮಾತ್ರವಲ್ಲದೇ ಇತರ ಅನೇಕ ಸಮಾಜಗಳ ಜನರು ಸಹ ಯಜ್ಞೋಪವೀತವನ್ನು ಧರಿಸುತ್ತಾರೆ.

    ಉಪಾಕರ್ಮ ಅಂದರೆ ಪ್ರಾರಂಭ ಅಥವಾ ಉಪಕ್ರಮ (ಜ್ಞಾನದ ಕುರಿತಾಗಿ ಸಾಗುವುದು/ ಉಪಕ್ರಮಿಸುವುದು) ಎಂದು ಅರ್ಥ. ಉಪನಯನ ಸಂಸ್ಕಾರವಾದವರೆಲ್ಲರೂ ಯಜ್ಞೋಪವೀತವನ್ನು ಧರಿಸುತ್ತಾರೆ. ಜನಿವಾರ ಧರಿಸುವವರು ಪ್ರತಿನಿತ್ಯ ಮೂರು ಬಾರಿ ಸಂಧ್ಯಾವಂದನೆ ಮಾಡಬೇಕು ಎಂಬುದು ವಿಧಿ. ಉಪನಯನ ಎಂದರೆ ಮತ್ತೊಂದು ಕಣ್ಣು ಎಂದರ್ಥ. ಈ ಮೂರನೇಯ ಕಣ್ಣು ಹೊರಗಿನ ಪ್ರಪಂಚದ ಜ್ಞಾನವನ್ನಷ್ಟೇ ಅಲ್ಲದೆ, ನಮ್ಮ ಬಗ್ಗೆ, ಆಂತರ್ಯದ ಕಣ್ಣನ್ನೂ ತೆರೆಸುತ್ತದೆ ಎಂಬುದು ಆಶಯ.

    ಗಾಯತ್ರೀ ಮಂತ್ರ (Gayatri Mantra)ಬಹು ಶ್ರೇಷ್ಠವಾದುದು. ಇದರ ಸಾಧನೆಯಿಂದ ಬ್ರಹ್ಮನಿಗೆ ಸೃಷ್ಟಿ ನಿರ್ಮಾಣ ಶಕ್ತಿ ಪ್ರಾಪ್ತವಾಯಿತು. ತನ್ನ ನಾಲ್ಕು ಮುಖಗಳಿಂದ ನಾಲ್ಕು ವೇದಗಳನ್ನು ಬಿತ್ತರಿಸಿದನು. ಪ್ರಾಚೀನ ಋಷಿ ಮಹರ್ಷಿಗಳೆಲ್ಲರೂ ಈ ಮಂತ್ರದ ಮಹತ್ವವನ್ನು ಸಾಕ್ಷತ್ಕರಿಸಿಕೊಂಡಿದ್ದಾರೆ. ದೈವೀ ಅನುಭವವನ್ನು ಪಡೆದಿದ್ದಾರೆ. ಇದು ಸರ್ವ ಮಂತ್ರಗಳಲ್ಲಿಯೂ ಶ್ರೇಷ್ಠ ಮಂತ್ರ. ಗಾಯತ್ರೀ ಜಪದಿಂದ ಆಯಸ್ಸು, ವಿದ್ಯೆ, ಸಂತಾನ, ಕೀರ್ತಿ, ಲಾಭ ಮತ್ತು ಬ್ರಹ್ಮ ತೇಜಸ್ಸು ಪ್ರಾಪ್ತವಾಗುತ್ತದೆ. ಯಾವುದೇ ದುರ್ಗುಣಗಳು ದೂರವಾಗುತ್ತವೆ. ಸಂಯಮ, ಸತ್ಯನಿಷ್ಠೆ, ಧರ್ಮಶ್ರದ್ಧೆ ಮೊದಲಾದ ಸದ್ಗುಣಗಳು ಬೆಳೆಯುತ್ತವ ಎಂಬ ನಂಬಿಕೆಯಿದೆ. ಇದನ್ನೂ ಓದಿ: ಅಣ್ಣ-ತಂಗಿಯರ ಪವಿತ್ರ ಬಂಧವನ್ನು ಸಾರುವ ಹಬ್ಬವೇ ರಕ್ಷಾ ಬಂಧನ!

    ಗಾಯತ್ರೀ ದೇವಿಯು ಭಗವಂತನ ಸ್ವರೂಪ, ಭಗವಂತನನ್ನು ಜಗನ್ಮಾತೆಯ ರೂಪದಲ್ಲಿ ಉಪಾಸನೆ ಮಾಡುವುದರಿಂದ, ಸಮಸ್ತ ನಾರೀಲೋಕದ ಬಗೆಗೂ ಪವಿತ್ರತೆ ಸದಾಚಾರ, ಸದ್ಭಾವನೆ ಮೂಡುತ್ತವೆ. ಗಾಯತ್ರೀ ಮಂತ್ರವು ಸಕಲ ಸದ್ಭಕ್ತರಿಗೆ ಕಲ್ಪತರು ಆಗಿದೆ; ಇಷ್ಟಾರ್ಥಗಳನ್ನು ಪೂರೈಸುವುದರಿಂದ ಕಾಮಧೇನುವೂ ಆಗಿದೆ. ಆತ್ಮಕಲ್ಯಾಣ ಹಾಗೂ ಲೋಕಕಲ್ಯಾಣಕರವಾದ ಈ ಮಹಾಮಂತ್ರವನ್ನು ಹಿಂದೆ ಋಷಿ-ಮರ್ಷಿಗಳು ಕೋಟಿಗಟ್ಟಲೆ ಜಪಮಾಡಿ ಸಿದ್ಧಿ ಪಡೆದಿದ್ದಾರೆ.

    ಗಾಯತ್ರೀ ಮಹಾತ್ಮೆಯನ್ನು ಕೊಂಡಾಡುವ ಉಪಾಕರ್ಮದ ದಿನವನ್ನು ನೂಲು ಹುಣ್ಣಿಮೆ, ರಕ್ಷಾ ಪೂರ್ಣಿಮೆ ಎಂದೂ ಕರೆಯುತ್ತಾರೆ. ಆದಿಮಾನವ ಆದುನಿಕ ಮಾನವನಾಗುವಲ್ಲಿ ನೂಲು ಮಹತ್ವದ ಪಾತ್ರ ವಹಿಸಿದೆ. ತನ್ನ ಸೌಲಭ್ಯ, ಸೌಂದರ್ಯ ಸಾಧಕವಾದ ಈ ವಸ್ತ್ರ ಸಂಶೋಧನೆ ಕಲ್ಪನೆಗೆ ಕೃತಜ್ಞತೆಯನ್ನು ಸೂಚಿಸುವುದೇ ನೂಲು ಹುಣ್ಣಿಮೆ ಎಂಬ ಪದದ ಸಾಂಕೇತಿಕ ಅರ್ಥವಾಗಿರಬಹುದು.

  • ಉತ್ತರಪ್ರದೇಶ ಜೈಲಿನಲ್ಲಿ ಮೊಳಗಲಿದೆ ಗಾಯತ್ರಿ, ಮಹಾ ಮೃತ್ಯುಂಜಯ ಮಂತ್ರ

    ಉತ್ತರಪ್ರದೇಶ ಜೈಲಿನಲ್ಲಿ ಮೊಳಗಲಿದೆ ಗಾಯತ್ರಿ, ಮಹಾ ಮೃತ್ಯುಂಜಯ ಮಂತ್ರ

    ಲಕ್ನೋ: ಇನ್ನು ಮುಂದೆ ಉತ್ತರ ಪ್ರದೇಶದ ಎಲ್ಲ ಜೈಲುಗಳಲ್ಲಿ ಗಾಯತ್ರಿ ಮಂತ್ರ ಮತ್ತು ಮಹಾ ಮೃತ್ಯುಂಜಯ ಮಂತ್ರಗಳು ಮೊಳಗಲಿವೆ.

    ಜೈಲಿನಲ್ಲಿರುವ ಖೈದಿಗಳ ಮಾನಸಿಕ ಶಾಂತಿಗಾಗಿ ಈ ಮಂತ್ರಗಳನ್ನು ಮೊಳಗಿಸಲಾಗುತ್ತದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಈಗಾಗಲೇ ರಾಜ್ಯ ಕಾರಾಗೃಹ ಸಚಿವ ಧರಂವೀರ್ ಪ್ರಜಾಪತಿ ಅವರು ಕಾರಾಗೃಹ ಆಡಳಿತ ಮಂಡಳಿಗೆ ಈ ಮಂತ್ರಗಳನ್ನು ಮೊಳಗಿಸುವಂತೆ ಆದೇಶಿಸಿದ್ದಾರೆ. ಇದನ್ನೂ ಓದಿ: ಶಕ್ತಿ ಸ್ವರೂಪಿಣಿ ದೇವಿಯು ಅಪಾರ ದ್ವೇಷದಿಂದ ಕೂಡಿದ ಬಿಜೆಪಿ ನಾಯಕರ ಆತ್ಮವನ್ನು ಶುದ್ಧೀಕರಿಸಲಿ: ಸುರ್ಜೇವಾಲಾ

    jail

    ಮಾಹಿತಿ ಪ್ರಕಾರ ಧರಂವೀರ್ ಪ್ರಜಾಪತಿ ಅವರ ಸೂಚನೆ ಮೇರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗಾಯತ್ರಿ, ಮಹಾಮೃತ್ಯುಂಜಯ ಮಂತ್ರಗಳು ಕೇಳಿ ಬರುತ್ತಿವೆ. ಈ ಮಂತ್ರಗಳ ಪಠಣ ಮಾಡುವುದರಿಂದ ಖೈದಿಗಳಿಗೆ ನೆಮ್ಮದಿ ಸಿಗುತ್ತದೆ. ಜೈಲಿನಿಂದ ಹೊರಬಂದು ಉತ್ತಮ ನಾಗರಿಕರಾಗುತ್ತಾರೆ. ಜೊತೆಗೆ ಅವರು ಆಧ್ಯಾತ್ಮಿಕತೆಯೊಂದಿಗೆ ಸಂಪರ್ಕ ಹೊಂದಿರುತ್ತಾರೆ ಎಂಬುದು ಸರ್ಕಾರದ ನಂಬಿಕೆ. ಆದ್ದರಿಂದ ಕಾರಾಗೃಹಗಳಲ್ಲಿ ಈ ಮಂತ್ರಗಳ ರಾಗಗಳನ್ನು ನುಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

    ಇದರೊಂದಿಗೆ ಯೋಗಿ ಆದಿತ್ಯನಾಥ್ ಸರ್ಕಾರವು ಕಾರಾಗೃಹಗಳಲ್ಲಿ ಪ್ಲಾಸ್ಟಿಕ್ ಬಾಟಲಿ ಹಾಗೂ ಸರಕನ್ನು ನಿಷೆಧಿಸಿದೆ.

  • ಹೆರಿಗೆ ನೋವು ಕಡಿಮೆಯಾಗಲು ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರ ಪ್ಲೇ!

    ಹೆರಿಗೆ ನೋವು ಕಡಿಮೆಯಾಗಲು ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರ ಪ್ಲೇ!

    – ಚರ್ಚೆಗೆ ಗ್ರಾಸವಾದ ರಾಜಸ್ಥಾನ ಜಿಲ್ಲಾಸ್ಪತ್ರೆ ನಡೆ
    – ಗಾಯತ್ರಿ ಮಂತ್ರವನ್ನು ನಿಲ್ಲಿಸುವಂತೆ ಮುಸ್ಲಿಮರಿಂದ ಆಗ್ರಹ

    ಜೈಪುರ: ಹೆರಿಗೆ ನೋವು ಕಡಿಮೆಯಾಗಲು ರಾಜಸ್ಥಾನದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯತ್ರಿ ಮಂತ್ರದ ಆಡಿಯೋ ಪ್ಲೇ ಮಾಡುತ್ತಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

    ಮಹಿಳೆಯು ಗಾಯತ್ರಿ ಮಂತ್ರವನ್ನು ಆಲಿಸಿದರೆ ಆಕೆಯ ಹೆರಿಗೆ ನೋವು ಕಡಿಮೆಯಾಗುತ್ತದೆ ಎಂಬ ನಂಬಿಕೆಯನ್ನು ಆಸ್ಪತ್ರೆಯ ಸಿಬ್ಬಂದಿ ಇಟ್ಟುಕೊಂಡಿದ್ದಾರೆ. ಆದ್ದರಿಂದ ಸಿರೋಹಿ ಜಿಲ್ಲಾಸ್ಪತ್ರೆಯ ಹೆರಿಗೆ ಕೋಣೆಯಲ್ಲಿ ಕಳೆದ ಒಂದು ವರ್ಷದಿಂದಲೂ ಗಾಯತ್ರಿ ಮಂತ್ರವನ್ನು ಪ್ಲೇ ಮಾಡಲಾಗುತ್ತಿದೆ.

    ಸರ್ಕಾರಿ ಆಸ್ಪತ್ರೆಗೆ ಕೇವಲ ಹಿಂದೂ ರೋಗಿಗಳು ಮಾತ್ರ ಬರುವುದಿಲ್ಲ. ಮುಸ್ಲಿಂ ಹಾಗೂ ಇತರೇ ಧರ್ಮದವರು ಕೂಡ ಬರುತ್ತಾರೆ. ಹೀಗೆ ಗಾಯತ್ರಿ ಮಂತ್ರವನ್ನು ಮಾತ್ರ ಪ್ಲೇ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ಕೇಳಿಬಂದಿದೆ.

    ಮುಸ್ಲಿಂ ಸಮುದಾಯದ ಕೆಲವು ಮಂದಿ ಆಸ್ಪತ್ರೆಯ ನಿರ್ಧಾರದ ವಿರುದ್ಧ ಪ್ರತಿಭಟನೆಗೆ ನಿಂತಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ, ಹುಟ್ಟುವ ಮಗುವಿನ ಕಿವಿಗೆ ಮೊದಲು ಆಜಾನ್ ಎಂಬ ಪದ ಬೀಳಬೇಕು ಎಂದು ಪ್ರತಿಭಟನಾಕಾರ ಆಶ್ಫಾಕ್ ಕಾಯಂಖಾನಿ ಹೇಳಿದ್ದಾರೆ.

    ಜಿಲ್ಲಾಸ್ಪತ್ರೆಗಳ ಹೆರಿಗೆ ಕೊಠಡಿಗಳಲ್ಲಿ ನಾವು ಗಾಯತ್ರಿ ಮಂತ್ರವನ್ನು ಪ್ಲೇ ಮಾಡುತ್ತೇವೆ. ಜಿಲ್ಲೆಯ ಇತರ 20 ಆರೋಗ್ಯ ಕೇಂದ್ರಗಳ ಹೆರಿಗೆ ಕೊಠಡಿಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುತ್ತೇವೆ ಎಂದು ಸವಾಯ್ ಮಾಧೋಪುರದ ಮುಖ್ಯ ವೈದ್ಯಾಧಿಕಾರಿ ಡಾ.ತೇಜರಾಮ್ ಮೀನಾ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಜಿಲ್ಲಾ ಶಿಶು ಆರೋಗ್ಯಾಧಿಕಾರಿ ಡಾ.ಅಶೋಕ್ ಆದಿತ್ಯ ಅವರು ಉದಯಪುರದ ಸರ್ಕಾರಿ ಆಸ್ಪತ್ರೆಯಲ್ಲಿಯೂ ಈ ವ್ಯವಸ್ಥೆ ತರಲು ಸಿದ್ಧತೆಗಳು ನಡೆದಿದೆ ಎಂದು ತಿಳಿಸಿದ್ದಾರೆ.

    ಜಿಲ್ಲಾ ವೈದ್ಯಾಧಿಕಾರಿಗಳಿಗೆ ಆಸ್ಪತ್ರೆಗಳಲ್ಲಿ ಈ ರೀತಿ ಹಾಡನ್ನು ಪ್ಲೇ ಮಾಡಿ ಎಂಬ ಯಾವುದೇ ಸೂಚನೆ ನೀಡಿಲ್ಲ ಎಂದು ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಆದರೆ ಹೆರಿಗೆ ಕೊಠಡಿಗಳಲ್ಲಿ ನೋವು ಕಡಿಮೆ ಮಾಡುವುದಕ್ಕೆ ಪೂರಕವಾದ ಹಾಡನ್ನು ಅಥವಾ ಆಡಿಯೋವನ್ನು ಮಾತ್ರವೇ ಪ್ಲೇ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿರುವುದಾಗಿ ಆರೋಗ್ಯ ಇಲಾಖೆ ವಿಶೇಷ ಕಾರ್ಯದರ್ಶಿ ಡಾ.ಸಮಿತ್ ಶರ್ಮಾ ಹೇಳಿದ್ದಾರೆ.

    ಈ ನಿಟ್ಟಿನಲ್ಲಿ ಕೆಲವೊಂದು ಆಡಿಯೋಗಳನ್ನು ನಾವೇ ಕಳುಹಿಸಿದ್ದೇವೆ. ಅದನ್ನು ಬಳಸುವುದು ಅಥವಾ ಬಿಡುವುದು ಆಸ್ಪತ್ರೆ ಸಿಬ್ಬಂದಿಗೆ ಬಿಟ್ಟ ವಿಷಯ. ಆದರೆ, ಗಾಯತ್ರಿ ಮಂತ್ರ ಪ್ಲೇ ಮಾಡಿರುವ ವಿಷಯದ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.