Tag: gavi gangadhara

  • 2020ಕ್ಕಿಂತಲೂ ಘೋರವಾಗಲಿದೆಯಂತೆ 2021ನೇ ವರ್ಷ..!

    2020ಕ್ಕಿಂತಲೂ ಘೋರವಾಗಲಿದೆಯಂತೆ 2021ನೇ ವರ್ಷ..!

    – ಭಾರೀ ತೊಂದರೆಯ ಮುನ್ಸೂಚನೆ ಎಂದು ಜ್ಯೋತಿಷಿಗಳು

    ಬೆಂಗಳೂರು: ವರ್ಷದ ಆರಂಭದಲ್ಲಿಯೇ ಅಪಶಕುನದ ಮುನ್ಸೂಚನೆ ಕೇಳಿ ಬಂದಿದೆ. ಇಡೀ ಜಗತ್ತು ಯುದ್ಧದ ಭೀಕರತೆಯಿಂದ ಅಲ್ಲೋಲ ಕಲ್ಲೋಲವಾಗಬಹುದು. ಕೊರೊನಾದಿಂದ ಹೇಗೆ ಸಾವು-ನೋವುಗಳು ಸಂಭವಿಸಿತೋ ಅದೇ ರೀತಿ ಈ ಬಾರಿಯೂ ಸಾವಿನ ಮಹಾಯಜ್ಞ ಸಂಭವಿಸಬಹುದು ಅಂತ ವೈದಿಕರೇ ಭವಿಷ್ಯ ನುಡಿದಿದ್ದಾರೆ.

    ಮಕರ ಸಂಕ್ರಾಂತಿಯಂದು ಸೂರ್ಯ ತನ್ನ ಪಥವನ್ನ ಬದಲಾವಣೆ ಮಾಡುವ ದಿನ. ಪ್ರತೀವರ್ಷ ಮಕರಸಂಕ್ರಮಣ ದಿನದಂದು ಬೆಂಗಳೂರಿನ ಗವಿಗಂಗಾದರೇಶ್ವರ ದೇವಸ್ಥಾನದ ಶಿವಲಿಂಗವನ್ನ ಸೂರ್ಯ ಕಿರಣಗಳು ಸ್ಪರ್ಶಿಸುತ್ತಿತ್ತು. ನಾಲ್ಕೈದು ನಿಮಿಷಗಳ ಕಾಲ ಸಂಭವಿಸೋ ಈ ಸೂರ್ಯ ಚಮತ್ಕಾರನ ಸಾವಿರಾರು ಭಕ್ತರು ಕಣ್ತುಂಬಿಕೊಳ್ಳುತ್ತಿದ್ದರು. ಈ ವರ್ಷವೂ ಭಕ್ತಗಣ, ದೇವಾಲಯದಲ್ಲಿ ಅರ್ಚಕರು ಸೂರ್ಯನನ್ನು ಎದುರು ನೋಡ್ತಿದ್ರು. ಆದರೆ ಈ ಬಾರಿ ಸೂರ್ಯ ರಶ್ಮಿ ಸ್ಪರ್ಶಿಸಲಿಲ್ಲ. ಅಗೋಚರವಾಗಿಯೇ ಸೂರ್ಯ ತನ್ನ ಪಥ ಬದಲಿಸಿದ.

    ಸೂರ್ಯ ಗೋಚರಿಸದೇ, ಕಿರಣಗಳನ್ನು ಶಿವಲಿಂಗಕ್ಕೆ ಸ್ಪರ್ಶಿಸದೇ ಪಥ ಬದಲಿಸಿದ್ದು ಮಹಾ ಗಂಡಾಂತರದ ಮುನ್ಸೂಚನೆ ಅಂತಾ ಹೇಳಲಾಗ್ತಿದೆ. 53 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸದೆ ಪಥ ಬದಲಿಸಿಕೊಂಡಿದ್ದಾನೆ. ಅಗೋಚರವಾಗಿ ಈಶ್ವರನಿಗೆ ಪೂಜೆ ಸಲ್ಲಿಸಿ ಭಾಸ್ಕರ ಹೊರಟಿದ್ದಾನೆ ಅಂತ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ.

    ಇದು ಮತ್ತೊಂದು ಆತಂಕದ ಅಲೆ ಎಬ್ಬಿಸಿದೆ. 2021ರಲ್ಲಿಯೂ ಕೂಡ 2020ರಲ್ಲಿ ನಡೆದಂತೆ ಸಾವು-ನೋವು ಸಂಭವಿಸಲಿದ್ಯಾ..? ಜಗತ್ತೇ ಅಲ್ಲೋಲ ಕಲ್ಲೋಲವಾಗಲಿದೆಯಾ..? ಸೋಮಸುಂದರ್ ದೀಕ್ಷಿತ್ ಗುರೂಜಿ ಹೇಳಿದಂತೆ ಯುದ್ಧಕಾಂಡದಿಂದ ರಕ್ತಪಾತವೇ ನಡೆದೋಗುತ್ತಾ ಅನ್ನೋ ಹಲವು ಭಯಗಳು ಕಾಡ್ತಿವೆ. ಈ ಗಂಡಾಂತರ ನಿವಾರಣೆಗೆ ಅಂತಿಂಥ ಯಾಗವಲ್ಲ, ಮಹಾರುದ್ರಯಾಗ ನಡೆಸೋದು ಸೂಕ್ತ ಅಂತಾನೂ ಎಚ್ಚರಿಸಿದ್ದಾರೆ.

    ಪ್ರಕೃತಿಯಲ್ಲಾದ ಸಣ್ಣ ಬದಲಾವಣೆ, ಸೂರ್ಯನ ಕಿರಣ ಈಶ್ವರನ ಮೇಲೆ ಬೀಳದಂತೆ ಮಾಡಿದೆ. ಹೀಗಾಗಿ ಈ ಘಟನೆಯಿಂದ ಈ ವರ್ಷವೂ ಮತ್ತೇನಾದ್ರೂ ಅನಾಹುತಗಳು ಆಗಿಬಿಡ್ತಾವಾ ಎಂಬ ಭಯ ಕಾಡತೊಡಗಿದೆ. ಕಳೆದ ವರ್ಷ ವಿಶ್ವವೇ ಕೊರೋನಾ ಹೊಡೆತಕ್ಕೆ ತತ್ತರಿಸಿತ್ತು. ಈಗ ಲಸಿಕೆ ಸಿಕ್ಕಿದೆ. ಎಲ್ಲಾ ಮುಗೀತು ಅನ್ನುವಷ್ಟರಲ್ಲಿ ಈ ಗಂಡಾಂತರ ಮುನ್ಸೂಚನೆ ಮತ್ತಷ್ಟು ದಿಗ್ಭ್ರಾಂತಗೊಳಿಸಿದೆ.

  • ಈ ಬಾರಿ ಗವಿಗಂಗಾಧರನಿಗಿಲ್ಲ ಸೂರ್ಯ ರಶ್ಮಿಯ ಅಭಿಷೇಕ

    ಈ ಬಾರಿ ಗವಿಗಂಗಾಧರನಿಗಿಲ್ಲ ಸೂರ್ಯ ರಶ್ಮಿಯ ಅಭಿಷೇಕ

    ಬೆಂಗಳೂರು: ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾದ ಪರಿಣಾಮ ಈ ಬಾರಿ ಗವಿಗಂಗಾಧರನಿಗೆ ಸೂರ್ಯ ರಶ್ಮಿಯ ಅಭಿಷೇಕ ಇಲ್ಲ.

    ಸಂಕ್ರಾಂತಿ ಸಡಗರದ ನಡುವೆ ಸೂರ್ಯ ತನ್ನ ಪಥ ಬದಲಾವಣೆಗಾಗಿ ಪ್ರತಿ ವರ್ಷ ಭಾಸ್ಕರನ ಅನುಮತಿಯನ್ನ ಇಂದು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ನಗರದ ಐತಿಹಾಸಿಕ ದೇವಾಲಯ ಗವಿಗಂಗಾಧರೇಶ್ವರನ ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಮೋಡ ಅಡ್ಡವಾದ ಪರಿಣಾಮ ಸೂರ್ಯ ತನ್ನ ಪಥ ಬದಲಿಸಿದ್ದಾನೆ.

    ಇಂದು 5.25 ರಿಂದ 5.27 ಕ್ಕೆ ಸೂರ್ಯ ರಶ್ಮಿ ಸ್ಪರ್ಶವಾಗಬೇಕಿತ್ತು. ಗವಿಗಂಗಾಧರನನ್ನು ಸ್ಪರ್ಶಿಸದೆ ಭಾಸ್ಕರ ತನ್ನ ಪಥ ಬದಲಿಸಿದ್ದಾನೆ. ಮೋಡ ಅಡ್ಡ ಬಂದ ಪರಿಣಾಮ ಸೂರ್ಯ ರಶ್ಮಿಯ ಸ್ಪರ್ಶ ಅಗೋಚರವಾಗಿದೆ. ಈ ಹಿನ್ನೆಲೆಯಲ್ಲಿ ಅಗೋಚರವಾಗಿಯೇ ಗವಿ ಗಂಗಾಧರನನ್ನು ಸ್ಪರ್ಶಿಸಿ ಸೂರ್ಯ ಮುಂದೆ ಹೋಗಿದ್ದಾನೆ.

    ಗವಿಗಂಗಾಧರ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಶಿವನಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯ ಜರುಗಿತ್ತು. ಸಂಜೆಯ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳಿಗೆ ದೇವಸ್ಥಾನದ ಆವರಣದಲ್ಲಿ ಪೆಂಡಲ್ ಹಾಕಿ ಎಲ್‍ಇಡಿ ಟಿವಿ ಅಳವಡಿಸಲಾಗಿತ್ತು.

    ಒಂದು ವೇಳೆ ಭಕ್ತಾದಿಗಳು ಸಹಕರಿಸದಿದ್ದರೆ ದೇವಸ್ಥಾನ ಕ್ಲೋಸ್ ಮಾಡ್ತೇವೆ. ಭಕ್ತಾದಿಗಳಿಗೆ ಒಳಗಡೆ ಬಿಡಬೇಡಿ ಅಂತ ಸರ್ಕಾರ ಈಗಾಗಲೇ ಹೇಳಿದೆ. ನೂಕು ನುಗ್ಗಲು ಆಗುತ್ತೆ. ಕೊರೊನಾ ಪರಿಸ್ಥಿತಿಗೆ ಅನುಗುಣವಾಗಿ ಈ ಆದೇಶ ಕೊಟ್ಟಿದ್ದಾರೆ. ಆದ್ದರಿಂದ ಭಕ್ತಾದಿಗಳು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಬಂದರೆ ಮೂಲಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಡ್ತೇವೆ ಅಂತ ದೇವಾಲಯದ ಪ್ರಧಾನ ಅರ್ಚಕರಾದ ಸೋಮಸುಂದರ್ ಹೇಳಿದ್ದರು.