Tag: Gautam Gambhir

  • ಪಂತ್ ಎಂದಿಗೂ ಧೋನಿ ಆಗಲು ಸಾಧ್ಯವಿಲ್ಲ: ಗಂಭೀರ್

    ಪಂತ್ ಎಂದಿಗೂ ಧೋನಿ ಆಗಲು ಸಾಧ್ಯವಿಲ್ಲ: ಗಂಭೀರ್

    ನವದೆಹಲಿ: ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್ ಅವರನ್ನು ಧೋನಿಗೆ ಹೋಲಿಕೆ ಮಾಡಿ ಮಾತನಾಡುವುದನ್ನು ನಿಲ್ಲಿಸಬೇಕಿದೆ. ಏಕೆಂದರೆ ಪಂತ್ ಎಂದಿಗೂ ಧೋನಿ ಆಗಲೂ ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

    2020ರ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಧೋನಿ ನಿವೃತ್ತಿ ಘೋಷಿಸಿದ್ದರು. ಧೋನಿ ಸ್ಥಾನವನ್ನು ತಂಡದಲ್ಲಿ ತುಂಬುವ ಯುವ ಆಟಗಾರರ ಹುಡುಕಾಟವನ್ನು ನಡೆಸಿದ್ದ ಬಿಸಿಸಿಐ ಆಯ್ಕೆ ಸಮಿತಿ ರಿಷಬ್ ಪಂತ್ ಅವರಿಗೆ ಅವಕಾಶ ನೀಡಿತ್ತು. ಐಪಿಎಲ್ ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಪಂತ್ ಕೂಡ ಬೇಗ ತಂಡವನ್ನು ಸೇರಿಕೊಂಡಿದ್ದರು.

    ಆದರೆ 2019 ಮತ್ತು 2020ರ ಐಪಿಎಲ್ ಆವೃತ್ತಿ ಮತ್ತು ಟೀಂ ಇಂಡಿಯಾ ಪರ ಪಂತ್ ನಿರೀಕ್ಷಿತ ಪ್ರಮಾಣದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿಲ್ಲ. ಇದರೊಂದಿಗೆ ಟೀಂ ಇಂಡಿಯಾ ಪರ ಸಿಮೀತ ಓವರ್ ಗಳ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಂತ್ ಬ್ಯಾಟಿಂಗ್ ಕುರಿತು ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ಧೋನಿ ವಾರಸುದಾರ ಪಂತ್ ಎಂದು ಕರೆಯುವುದನ್ನು ನಿಲ್ಲಿಸಬೇಕಿದೆ. ಮಾಧ್ಯಮಗಳು ಇಂದಿಗೂ ಧೋನಿ, ಪಂತ್ ನಡುವೆ ಹೋಲಿಕೆ ಮಾಡುತ್ತವೆ. ಆದರೆ ಪಂತ್ ಎಂದಿಗೂ ಧೋನಿ ಆಗಲು ಸಾಧ್ಯವಿಲ್ಲ. ಆತ ರಿಷಬ್ ಪಂತ್‍ನಂತೆಯೇ ಉಳಿಯುತ್ತಾರೆ ಎಂದು ಹೇಳಿದ್ದಾರೆ.

    ಭಾರೀ ಸಿಕ್ಸರ್ ಸಿಡಿಸುವ ಸಾಮರ್ಥ್ಯವಿರುವುದರಿಂದ ಹೋಲಿಕೆ ಮಾಡಲಾಗುತ್ತಿದೆ. ಆದರೆ ಪಂತ್ ಇನ್ನು ಕೀಪಿಂಗ್, ಬ್ಯಾಟಿಂಗ್ ಎರಡಲ್ಲೂ ಸಾಕಷ್ಟು ಸುಧಾರಿಸಿಬೇಕಿದೆ ಎಂದು ಗಂಭೀರ್ ವಿವರಿಸಿದ್ದಾರೆ. 2020ರ ಆವೃತ್ತಿಯಲ್ಲಿ 12 ಪಂದ್ಯಗಳನ್ನು ಆಡಿರುವ ಪಂತ್ ಕೇವಲ 109 ಸ್ಟ್ರೈಕ್ ರೇಟ್‍ನೊಂದಿಗೆ 285 ರನ್ ಮಾತ್ರ ಗಳಿಸಿದ್ದಾರೆ. ಟೂರ್ನಿಯ ಆರಂಭದ 2 ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಮಿಂಚಿದ್ದ ಸಂಜು ಸ್ಯಾಮ್ಸನ್ ಅವರನ್ನು ಕಾಂಗ್ರೆಸ್ ನಾಯಕ ಶಶಿ ತರೂರ್, ಧೋನಿಗೆ ಹೋಲಿಕೆ ಮಾಡಿದ್ದರು. ಈ ವೇಳೆಯೂ ಗಂಭೀರ್ ಪ್ರತಿಕ್ರಿಯೆ ನೀಡಿ, ಆತ ಎಂದಿಗೂ ಸಂಜು ಸ್ಯಾಮ್ಸನ್ ಆಗಿಯೇ ಇರಬೇಕು. ಬೇರೆ ಆಟಗಾರನಂತೆ ಬದಲಾಗುವ ಅಗತ್ಯವಿಲ್ಲ ಎಂದಿದ್ದರು.

  • ದಿನೇಶ್ ಕಾರ್ತಿಕ್ ಕ್ಯಾಪ್ಟನ್ಸಿ ಕೈಬಿಡಲು ನಿಜವಾದ ಕಾರಣ ಬಹಿರಂಗಪಡಿಸಿದ ಗಂಭೀರ್

    ದಿನೇಶ್ ಕಾರ್ತಿಕ್ ಕ್ಯಾಪ್ಟನ್ಸಿ ಕೈಬಿಡಲು ನಿಜವಾದ ಕಾರಣ ಬಹಿರಂಗಪಡಿಸಿದ ಗಂಭೀರ್

    ಮುಂಬೈ: ಐಪಿಎಲ್ 2020ರ ಆವೃತ್ತಿಯ ಮಧ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಹೊಸ ಕ್ಯಾಪ್ಟನ್ ಆಗಮನವಾಗಿದ್ದು, ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ಸ್ಥಾನದಿಂದ ದೂರವಾಗಿದ್ದರು. ಇಂಗ್ಲೆಂಡ್ ಕ್ಯಾಪ್ಟನ್ ಇಯಾನ್ ಮಾರ್ಗನ್ ಹೊಸ ನಾಯಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದರು.

    ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸಲು ನಾಯಕತ್ವ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ದಿನೇಶ್ ಕಾರ್ತಿಕ್ ಹೇಳಿದ್ದರು. ಆದರೆ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ಸ್ಥಾನದಿಂದ ಕೆಳಗಿಳಿಯಲು ಬೇರೆಯದ್ದೇ ಕಾರಣವಿದೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ನಾಯಕ ಗೌತಮ್ ಗಂಭಿರ್ ಅಭಿಪ್ರಾಯಪಟ್ಟಿದ್ದಾರೆ.

    ಕೋಲ್ಕತ್ತಾ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಗಂಭೀರ್, ಟೂರ್ನಿಯ ನಡುವೆ ಕ್ಯಾಪ್ಟನ್ ಬದಲಾಯಿಸುವುದರಿಂದ ಯಾವುದೇ ಪ್ರಯೋಜನ ಇರುವುದಿಲ್ಲ ಎಂದಿದ್ದಾರೆ. ಕ್ರಿಕೆಟ್ ಎಂಬುವುದು ಸಂಬಂಧಗಳಿಗೆ ಸಂಬಂಧಿಸಿದ ವಿಚಾರವಲ್ಲ, ಅದು ಆಟಕ್ಕೆ ಸಂಬಂಧಿಸಿದೆ. ಮಾರ್ಗನ್ ಕ್ಯಾಪ್ಟನ್ ಆಗುವುದರಿಂದ ಹೆಚ್ಚಿನ ಪ್ರಯೋಜನ ಇರುವುದಿಲ್ಲ. ಸೀಜನ್ ಆರಂಭದಲ್ಲೇ ಈ ನಿರ್ಧಾರ ಮಾಡಿದ್ದರೆ ಉತ್ತಮವಾಗಿರುತ್ತಿತ್ತು. ಕೋಚ್, ಕ್ಯಾಪ್ಟನ್ ನಡುವಿನ ಸಂಬಂಧವೂ ಉತ್ತಮವಾಗಿರುವುದು ಉತ್ತಮ ಎಂದಿದ್ದಾರೆ.

    ವಿಶ್ವಕಪ್ ಗೆದ್ದ ತಂಡದ ಕ್ಯಾಪ್ಟನ್ ತಂಡದಲ್ಲಿದ್ದಾರೆ ಎಂದು ಪದೇ ಪದೇ ಹೇಳುವ ಮೂಲಕ ಕಾರ್ತಿಕ್ ಮೇಲೆ ಒತ್ತಡ ತರುವುದು ಬದಲು ಮೊದಲೇ ಮಾರ್ಗನ್‍ಗೆ ನಾಯಕತ್ವ ವಹಿಸಬಹುದಿತ್ತು. ಕಾರ್ತಿಕ್ ಬ್ಯಾಟಿಂಗ್ ಮೇಲೆ ಹೆಚ್ಚು ಗಮನಹರಿಸಲು ನಾಯಕತ್ವದಿಂದ ಕೆಳಗಿಳಿದಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಆತನ ನಾಯಕತ್ವದ ಮೇಲೆ ತಂಡದ ಮ್ಯಾನೇಜ್‍ಮೆಂಟ್ ಅಸಮಾಧಾನವಿದೆ ಎಂದು ಪದೇ ಪದೇ ಹೇಳುತ್ತಿದ್ದದ್ದು, ಆತನ ತೀರ್ಮಾನಕ್ಕೆ ಕಾರಣವಾಗಿದೆ ಎಂದು ಗಂಭೀರ್ ಹೇಳಿದ್ದಾರೆ.

    ಕಳೆದ 8 ಪಂದ್ಯಗಳಲ್ಲಿ ಕಾರ್ತಿಕ್ 112 ರನ್ ಗಳಿಸಿದ್ದು, 58 ರನ್ ಆವೃತ್ತಿಯ ಅತ್ಯಾಧಿಕ ರನ್ ಆಗಿದೆ. ನಾಯಕತ್ವದ ಬದಲಾವಣೆಯ ಬಳಿಕವೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮಾರ್ಗನ್ ನಾಯಕತ್ವದ ಮೊದಲ ಪಂದ್ಯದಲ್ಲೂ ಮುಂಬೈ ವಿರುದ್ಧ 8 ವಿಕೆಟ್ ಸೋಲುಂಡಿತ್ತು.

  • ಟೆನ್ನಿಸ್ ಬಾಲ್ ಮ್ಯಾಚಿನಿಂದ ಸೂಪರ್ ಓವರ್ ಬೌಲರ್ – ಆರ್‌ಸಿಬಿ ಸೈನಿಯ ಕ್ರಿಕೆಟ್ ಪ್ರಯಾಣದ ಕಥೆ

    ಟೆನ್ನಿಸ್ ಬಾಲ್ ಮ್ಯಾಚಿನಿಂದ ಸೂಪರ್ ಓವರ್ ಬೌಲರ್ – ಆರ್‌ಸಿಬಿ ಸೈನಿಯ ಕ್ರಿಕೆಟ್ ಪ್ರಯಾಣದ ಕಥೆ

    – ಗಂಭೀರ್ ಗುರುತಿಸಿ ಕರೆತಂದ, ರಾಹುಲ್ ಡ್ರಾವಿಡ್ ಗರಡಿಯಲ್ಲಿ ಪಳಗಿದ ಪ್ರತಿಭೆ
    – ಬಸ್ ಚಾಲಕನ ಮಗ, ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗ

    ನವದೆಹಲಿ: ಶ್ರದ್ಧೆ, ಪರಿಶ್ರಮ ಇದ್ದಾರೆ ಏನಾನ್ನದರೂ ಸಾಧಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಎಂದರೆ ಅದು ಆರ್‌ಸಿಬಿ ತಂಡದ ಸ್ಟಾರ್ ಬೌಲರ್ ನವದೀಪ್ ಸೈನಿ. ಹಣಕ್ಕಾಗಿ ಟೆನ್ನಿಸ್ ಬಾಲ್ ಮ್ಯಾಚ್ ಆಡುತ್ತಿದ್ದ ಸೈನಿ ಇಂದು ಭಾರತದ ಪರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೌಲ್ ಮಾಡಿದ್ದಾರೆ.

    ಹರಿಯಾಣದಲ್ಲಿ ಜನಿಸಿದ ಸೈನಿ ಅವರ ತಂದೆ ಸರ್ಕಾರಿ ಬಸ್ ಚಾಲಕರಾಗಿದ್ದಾರೆ. ಇವರ ತಾತ ಕರಮ್ ಸಿಂಗ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಸುಭಾಷ್ ಚಂದ್ರ ಭೋಸ್ ಅವರ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸದಸ್ಯರಾಗಿದ್ದರು. ಸೈನಿ 1992 ನವೆಂಬರ್ 23ರಂದು ಹರಿಯಾಣದ ಕರ್ನಾಲ್ ಅಲ್ಲಿ ಜನಿಸಿದ್ದರು.

    ಗಂಭೀರ್ ಗುರುತಿಸಿದ್ದ ಪ್ರತಿಭೆ
    ಸೈನಿಯವರು ಮೊದಲು ಖರ್ಚಿಗಾಗಿ ಟೆನ್ನಿಸ್ ಪಂದ್ಯಗಳನ್ನು ಆಡುತ್ತಿದ್ದರು. ಇದರಲ್ಲಿ ಒಂದು ಪಂದ್ಯಕ್ಕೆ 250ರಿಂದ 300ರೂ.ಗಳನ್ನು ಪಡೆಯುತ್ತಿದ್ದರು. ಟೆನ್ನಿಸ್ ಬಾಲಿನಲ್ಲಿ ಉತ್ತಮವಾಗಿ ಆಡುತ್ತಿದ್ದ ಸೈನಿಯವರನ್ನು ಒಂದು ದಿನ ಭಾರತ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ನೋಡಿದ್ದರು. 2013ರಲ್ಲಿ ಸೈನಿಯನ್ನು ಭೇಟಿ ಮಾಡಿದ್ದ ಗಂಭೀರ್ ಅವರನ್ನು ಡೆಲ್ಲಿ ತಂಡಕ್ಕೆ ನೆಟ್ ಪ್ರಾಕ್ಟೀಸ್ ವೇಳೆ ಬೌಲ್ ಮಾಡಲು ಕರೆ ತಂದಿದ್ದರು.

    2013ರ ಡಿಸೆಂಬರ್ ನಲ್ಲಿ ಸೈನಿ ಡೆಲ್ಲಿ ತಂಡಕ್ಕೆ ನೆಟ್ ಅಭ್ಯಾಸದ ವೇಳೆ ಬೌಲ್ ಮಾಡಿದ್ದರು. ಅಂದು ಸೈನಿಗೆ ಬೌಲಿಂಗ್ ಟಿಪ್ಸ್ ಕೊಟ್ಟಿದ್ದ ಗಂಭೀರ್, ಟಿನ್ನಿಸ್ ಬಾಲಿನಲ್ಲಿ ಹೇಗೆ ಬೌಲ್ ಮಾಡುತ್ತಿದ್ದೆ, ಹಾಗೇ ಇಲ್ಲಿಯೂ ಮಾಡು ಭಯಪಡಬೇಡ. ಉಳಿದಿದ್ದು ತಾನಾಗಿಯೇ ಸರಿ ಹೋಗುತ್ತೆ ಎಂದು ಹೇಳಿದ್ದರಂತೆ. ಇಂದು ನಾನು ಈ ಹಂತಕ್ಕೆ ಬಂದಿದ್ದೇನೆ ಎಂದರೆ ಅದಕ್ಕೆ ಗಂಭೀರ್ ಅವರೇ ಕಾರಣ, ಅವರ ಬಗ್ಗೆ ಮಾತನಾಡುವಾಗ ನಾನು ಭಾವುಕನಾಗುತ್ತೇನೆ ಎಂದು ಸೈನಿ ಈ ಹಿಂದೆ ಮಾಧ್ಯಮವೊಂದಕ್ಕೆ ಹೇಳಿದ್ದರು.

    ಡೆಲ್ಲಿ ಆಟಗಾರರಿಗೆ ಅಭ್ಯಾಸದ ವೇಳೆ ಬೌಲ್ ಮಾಡುತ್ತಿದ್ದ ಸೈನಿ, ಹಲವರ ವಿರೋಧದ ನಡುವೆಯೂ ಕೂಡ ಡೆಲ್ಲಿ ತಂಡದ ಅಧಿಕೃತ ಆಟಗಾರನಾಗಿ ಆಯ್ಕೆಯಾಗಿದ್ದರು. 15 ನಿಮಿಷ ಸೈನಿ ಬೌಲಿಂಗ್ ನೋಡಿದ್ದ ಗಂಭೀರ್ ನಿನಗೆ ಬಹಳ ಒಳ್ಳೆಯ ಟ್ಯಾಲೆಂಟ್ ಇದೆ ಎಂದು ಹೇಳಿದ್ದರು. ಜೊತೆಗೆ ಅವರನ್ನು ರಣಜಿ ಟ್ರೋಫಿಗೆ ಆಯ್ಕೆ ಮಾಡುವಂತೆ ಡೆಲ್ಲಿ ಆಯ್ಕೆಗಾರರ ಬಳಿ ಜಗಳವಾಡಿ ಗಂಭೀರ್ ಸೈನಿಯನ್ನು ರಣಜಿ ಟ್ರೋಫಿ ಆಡುವಂತೆ ಮಾಡಿದ್ದರು.

    ಈ ವೇಳೆ ರಣಜಿ ಟ್ರೋಫಿಯ ಸೆಮಿಫೈನಲ್ ಅನ್ನು ಡೆಲ್ಲಿ ತಂಡ ಪಶ್ಚಿಮಾ ಬಂಗಾಳದ ವಿರುದ್ಧ ಆಡಿತ್ತು. ಆ ಪಂದ್ಯದಲ್ಲಿ ಸೈನಿ 140 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದರು. ಅಂದು ಸೈನಿ ಬಾಲಿಗೆ ಬ್ಯಾಟ್ ಕೊಡಲು ಬಂಗಾಳದ ಬ್ಯಾಟ್ಸ್ ಮ್ಯಾನ್‍ಗಳು ಸುಸ್ತಾಗಿದ್ದರು. ಇದಾದ ನಂತರ 2017ರ ಡಿಸೆಂಬರ್ ನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಸರಣಿ ಆರಂಭವಾಗಿತ್ತು. ಅಲ್ಲಿಯೂ ಕೂಡ ನೆಟ್ಸ್ ಅಭ್ಯಾಸದ ವೇಳೆ ಭಾರತದ ಬ್ಯಾಟ್ಸ್ ಮ್ಯಾನ್‍ಗಳಿಗೆ ಸೈನಿ ಬೌಲ್ ಮಾಡಿ ಸೈ ಎನಿಸಿಕೊಂಡಿದ್ದರು.

    ದ್ರಾವಿಡ್ ಗರಡಿಯ ಹುಡುಗ
    ಈ ವೇಳೆಗಾಗಲೇ ಭಾರತ ಕ್ರಿಕೆಟ್‍ನಲ್ಲಿ ಸೈನಿ ಒಂದು ಮಟ್ಟದ ಹೆಸರು ಮಾಡಿದ್ದರು. ಇದೇ ವೇಳೆಗೆ ಸೈನಿ ಭಾರತ-ಎ ತಂಡಕ್ಕೆ ಆಯ್ಕೆಯಾಗಿದ್ದರು. 2017ರಲ್ಲಿ ಭಾರತ-ಎ ತಂಡ ದಕ್ಷಿಣ ಆಫ್ರಿಕಾಗೆ ಟೂರ್ ಹೋಗಿತ್ತು. ಅಂದು ಭಾರತ-ಎ ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಸೈನಿಗೆ ಉತ್ತಮವಾಗಿ ತರಬೇತಿ ನೀಡಿದ್ದರು. ಕೆಲವು ಅಮೂಲ್ಯವಾದ ಬೌಲಿಂಗ್ ಸಲಹೆಗಳನ್ನು ಕೊಟ್ಟಿದ್ದರು.

    ನಂತರ 2017ರ ಐಪಿಎಲ್‍ನಲ್ಲಿ ಸೈನಿಯವರನ್ನು ಡೆಲ್ಲಿ ಡೇರ್ ಡೆವಿಲ್ಸ್ ತಂಡ 10 ಲಕ್ಷ ಕೊಟ್ಟ ಖರೀದಿ ಮಾಡಿತ್ತು. ಇದಾದ ನಂತರ 2018ರಲ್ಲಿ ಆರ್‍ಸಿಬಿ ಸೈನಿಯವರಿಗೆ ಬರೋಬ್ಬರಿ ಮೂರು ಕೋಟಿ ಕೊಟ್ಟು ಕೊಂಡುಕೊಂಡಿತ್ತು. 2019 ಡಿಸೆಂಬರ್ 22 ರಂದು ವೆಸ್ಟ್ ಇಂಡೀಸ್ ಪರ ಬೌಲಿಂಗ್ ಮಾಡುವ ಮೂಲಕ ಸೈನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ಈಗ ಅದೇ ಸೈನಿ ನಿನ್ನೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪರ ಸೂಪರ್ ಓವರಿನಲ್ಲಿ ಬೌಲ್ ಮಾಡಿ ಕೇವಲ 7 ರನ್ ನೀಡಿದ್ದಾರೆ.

  • ಸಂಜು ಭವಿಷ್ಯದ ಧೋನಿ ಅಂದ್ರು ತರೂರ್- ನಾನು ಒಪ್ಪಲ್ಲವೆಂದ ಗಂಭೀರ್

    ಸಂಜು ಭವಿಷ್ಯದ ಧೋನಿ ಅಂದ್ರು ತರೂರ್- ನಾನು ಒಪ್ಪಲ್ಲವೆಂದ ಗಂಭೀರ್

    ನವದೆಹಲಿ: ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್‍ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಸಂಜು ಸ್ಯಾಮ್ಸನ್ ಭವಿಷ್ಯದ ಧೋನಿ ಎಂದು ಹೇಳಿದ್ದಾರೆ. ಆದರೆ ತರೂರ್ ಅವರ ಈ ಹೇಳಿಕೆಗೆ ಬಿಜೆಪಿ ಸಂಸದ, ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಪಂಜಾಬ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ 224 ರನ್‍ಗಳ ಬೃಹತ್ ಮೊತ್ತದ ಗುರಿಯನ್ನು ಚೇಸ್ ಮಾಡಿ ರಾಜಸ್ಥಾನ ರಾಯಲ್ಸ್ ತಂಡ 3 ಎಸೆತ ಬಾಕಿ ಇರುವಂತೆಯೇ ಗೆಲುವು ಪಡೆಯಿತು. ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಸಂಜು ಸ್ಯಾಮ್ಸನ್ ಗೆಲುವಿಗೆ ಕೊಡುಗೆ ನೀಡಿದ್ದರು. ಐಪಿಎಲ್ 2020ರ ಟೂರ್ನಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಅರ್ಧ ಶತಕ ಗಳಿಸಿರುವ ಸಂಜು ಒಟ್ಟು 159 ರನ್‍ಗಳನ್ನು ಗಳಿಸಿದ್ದಾರೆ. ಸಂಜು ಬ್ಯಾಟಿಂಗ್ ಶೈಲಿಗೆ ಹಲವು ವಿಶ್ಲೇಷಕರು ಮೆಚ್ಚುಗೆ ಸೂಚಿಸಿದ್ದಾರೆ.

    ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೂಡ ಸಂಜು ಸ್ಯಾಮ್ಸನ್‍ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದು, ಭಾರತ ಕ್ರಿಕೆಟ್‍ನಲ್ಲಿ ಮುಂದಿನ ಧೋನಿ, ಸಂಜು ಸ್ಯಾಮ್ಸನ್ ಆಗುತ್ತಾರೆ ಎಂದು ಆತ 14 ವರ್ಷದವನಾಗಿದ್ದಾಗಲೇ ಹೇಳಿದ್ದೆ. ಆ ದಿನ ಈಗ ಬಂದಿದ್ದು, ಐಪಿಎಲ್‍ನ 2 ಇನ್ನಿಂಗ್ಸ್ ಗಳ ಬಳಿಕ ಎಲ್ಲರಿಗೂ ಅಂತಾರಾಷ್ಟ್ರೀಯ ಮಟ್ಟದ ಆಟಗಾರನ ಆಗಮನವಾಗಿದೆ ಎಂದು ತಿಳಿದಿದೆ ಎಂದು ಟ್ವೀಟ್ ಮಾಡಿದ್ದರು.

    ಶಶಿ ತರೂರ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ಬೇರೋಬ್ಬರಂತೆ ಆಗುವ ಅಗತ್ಯ ಸಂಜು ಸ್ಯಾಮ್ಸನ್‍ಗೆ ಇಲ್ಲ. ಆತ ಎಂದಿಗೂ ಭಾರತ ಕ್ರಿಕೆಟ್‍ನಲ್ಲಿ ಸಂಜು ಸ್ಯಾಮ್ಸನ್ ಆಗಿಯೇ ಇರಬೇಕು ಎಂದು ಹೇಳಿದ್ದಾರೆ.

    ಇತ್ತ ತರೂರ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟಿಗ ಶ್ರೀಶಾಂತ್, ಸಂಜು ಸ್ಯಾಮ್ಸನ್ ಧೋನಿ ವಾರಸುದಾರ ಅಲ್ಲ. ಆತ ಎಂದಿಗೂ ಸಂಜು ಸ್ಯಾಮ್ಸನ್ ಆಗಿಯೇ ಇರುತ್ತಾನೆ. 2015 ರಿಂದಲೂ ಸಂಜು ಟೀಂ ಇಂಡಿಯಾ ಪರ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲೂ ಆಡಬೇಕಿತ್ತು. ಆದರೆ ಸರಿಯಾದ ಅವಕಾಶ ಆತನಿಗೆ ಲಭಿಸಿಲ್ಲ. ವಿಶ್ವಕಪ್ ಗೆಲುವಿಗೂ ಆತ ಸಹಕಾರಿ ಆಗುತ್ತಿದ್ದ. ಭವಿಷ್ಯದಲ್ಲೂ ಸಂಜು ಉತ್ತಮ ಆಟ ಪ್ರದರ್ಶಿಸುತ್ತಾರೆ. ಆತನನ್ನು ಯಾರಿಗೂ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.

    ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್‍ನಲ್ಲಿ ಸತತವಾಗಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಆತನಿಗೆ ಟೀಂ ಇಂಡಿಯಾ ಪರ ಆಡುವ ಹೆಚ್ಚಿನ ಅವಕಾಶಗಳು ಲಭಿಸಿಲ್ಲ. 2015 ರಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್ ಇದುವರೆಗೂ ಕೇವಲ 4 ಅಂತಾರಾಷ್ಟ್ರೀಯ ಪಂದ್ಯಗಳನಷ್ಟೇ ಆಡಿದ್ದಾರೆ.

  • ಕನಿಷ್ಠ ಮುಂದೆ ನಿಂತು ಮುನ್ನಡೆಸಿ- ಧೋನಿಗೆ ಗಂಭೀರ್ ಕ್ಲಾಸ್

    ಕನಿಷ್ಠ ಮುಂದೆ ನಿಂತು ಮುನ್ನಡೆಸಿ- ಧೋನಿಗೆ ಗಂಭೀರ್ ಕ್ಲಾಸ್

    – ವೈಯುಕ್ತಿಕ ರನ್ ಗಳಿಕೆ ಮುಖ್ಯವಲ್ಲ

    ನವದೆಹಲಿ: ಐಪಿಎಲ್ 2020ರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಧೋನಿ ತಮ್ಮ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಿಂಬಡ್ತಿ ಪಡೆದ ಬಗ್ಗೆ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ರಾಜಸ್ಥಾನ್ ರಾಯಲ್ಸ್ ನೀಡಿದ್ದ 217 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ್ದ ಚೆನ್ನೈ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಗಳಷ್ಟೇ ಗಳಿಸಲು ಶಕ್ತವಾಯಿತು. ಪಂದ್ಯದ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಗಂಭೀರ್, 217 ರನ್ ಬೆನ್ನಟ್ಟುವ ವೇಳೆ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವುದಾ? ಆತನ ನಿರ್ಧಾರ ನನಗೆ ಅಚ್ಚರಿ ತಂದಿತ್ತು. ಇದು ನಾಯಕತ್ವ ಎನಿಸಿಕೊಳ್ಳುವುದಿಲ್ಲ. ಸೋಲುಂಡರೂ ಕನಿಷ್ಠ ಮುಂದೆ ನಿಂತು ಮುನ್ನಡೆಸಬೇಕಿತ್ತು. ಫಾಫ್ ಡುಫ್ಲೆಸಿಸ್ ಮಾತ್ರ ಏಕಾಂಗಿ ಹೋರಾಟ ನಡೆಸಿದ್ದರು ಎಂದು ಗಂಭೀರ್ ಹೇಳಿದ್ದಾರೆ. ಇದನ್ನೂ ಓದಿ: ಸ್ಟೇಡಿಯಂ ಹೊರಕ್ಕೆ ಧೋನಿ ಸಿಕ್ಸರ್- ಚೆಂಡನ್ನು ಮನೆಗೆ ಕೊಂಡೊಯ್ದ ಲಕ್ಕಿ ಮ್ಯಾನ್

    ಅಂತಿಮ ಓವರಿನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವುದು ಮುಖ್ಯವಲ್ಲ. ಅದು ಕೇವಲ ವೈಯುಕ್ತಿಕ ರನ್ ಗಳಿಕೆ ಅಷ್ಟೇ. ಧೋನಿ ಸ್ಥಾನದಲ್ಲಿ ಬೇರೆ ಯಾವುದೇ ತಂಡದ ನಾಯಕ ಸ್ಲೋ ಬ್ಯಾಟಿಂಗ್ ಮಾಡಿದ್ದರೇ ಭಾರೀ ಚರ್ಚೆಗೆ ಕಾರಣವಾಗುತ್ತಿತ್ತು. ಋತುರಾಜ್, ಕರ್ರನ್, ಜಾದವ್, ಫಾಫ್ ಡುಪ್ಲೆಸಿಸ್, ವಿಜಯ್ ಈ ಎಲ್ಲರ ಆಟಗಾರರು ಧೋನಿಗಿಂತ ಉತ್ತಮ ಎಂದು ಅಂಗೀಕರಿಸಿದಂತಿದೆ.

    ಚೆನ್ನೈ ಇನ್ನಿಂಗ್ಸ್ ನ 6ನೇ ಓವರ್ ವೇಳೆಗೆ ಅವರು ಪಂದ್ಯವನ್ನು ಸಂಪೂರ್ಣವಾಗಿ ಕೈಬಿಟ್ಟಂತೆ ಕಾಣುತ್ತಿತ್ತು. ಧೋನಿ ಅಂತಿಮ ಎಸೆತದವರೆಗೂ ಬ್ಯಾಟಿಂಗ್ ಲಯ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ಮುಂದಿನ ಪಂದ್ಯಗಳಲ್ಲಿಯಾದರೂ ಮುಂದೇ ನಿಂತು ತಂಡವನ್ನು ಮುನ್ನಡೆಸಲು ಪ್ರಯತ್ನಿಸಬೇಕಿದೆ. ಆಗ ತಂಡಕ್ಕೆ ಸ್ಫೂರ್ತಿಯಾದರೂ ಲಭಿಸುತ್ತದೆ ಎಂದು ಗಂಭಿರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾವಿ ಪತಿ ಪ್ರಶಸ್ತಿ ಪಡೆಯುತ್ತಿದ್ದಂತೆ ಟಿವಿ ಎದುರೇ ಚಹಲ್ ಪ್ರೇಯಸಿ ಡ್ಯಾನ್ಸ್

    ಪಂದ್ಯದ ಸೋಲಿನ ಬಳಿಕ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಕುರಿತು ಪ್ರತಿಕ್ರಿಯೆ ನೀಡಿದ ಧೋನಿ, ಸರಿ ಸುಮಾರು ಒಂದುವರೆ ವರ್ಷದ ಬಳಿಕ ಕ್ರಿಕೆಟ್ ಆಡುತ್ತಿದ್ದೇವೆ. 14 ದಿನಗಳ ಕ್ವಾರಂಟೈನ್ ಕೂಡ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಕರ್ರನ್‍ಗೆ ಅವಕಾಶ ನೀಡಿ ಹೊಸ ಪ್ರಯೋಗ ಮಾಡುವ ಚಿಂತನೆ ಇತ್ತು. ಆದರೆ ಅದು ಯಶಸ್ವಿಯಾಗಲಿಲ್ಲ ಎಂದು ಧೋನಿ ಸ್ಪಷ್ಟಪಡಿಸಿದ್ದರು.

    ಪಂದ್ಯದಲ್ಲಿ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್ ಗಳೊಂದಿಗೆ 29 ರನ್ ಗಳಿಸಿದ್ದರು. ಅಂತಿ ಓವರ್ ವೇಳೆಗೆ 6 ಎಸೆತಗಳಲ್ಲಿ 38 ರನ್ ಬೇಕಾಗಿತ್ತು. ಪಂದ್ಯದ ಬಳಿಕ ಹಲವು ಕ್ರಿಕೆಟ್ ವಿಶ್ಲೇಷಕರು ಸ್ಯಾಮ್ ಕರ್ರನ್ ಮುನ್ನವೇ ಧೋನಿ ಬ್ಯಾಟಿಂಗ್ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದರು. ಇದನ್ನೂ ಓದಿ: ತೀರ್ಪು ಬದಲಿಸಿದ ಅಂಪೈರ್ ಜೊತೆಗೆ ಧೋನಿ ವಾದ- ಸಾಕ್ಷಿ ಗರಂ

  • ರೈನಾ ಹೊರಬಂದಿರುವುದು ಧೋನಿಗೆ ಒಳ್ಳೆಯ ಅವಕಾಶ: ಗಂಭೀರ್

    ರೈನಾ ಹೊರಬಂದಿರುವುದು ಧೋನಿಗೆ ಒಳ್ಳೆಯ ಅವಕಾಶ: ಗಂಭೀರ್

    ನವದೆಹಲಿ: ರೈನಾ ಐಪಿಎಲ್‍ನಿಂದ ಹೊರಬಂದಿರುವುದು ಧೋನಿಗೆ ಮೂರನೇ ಕ್ರಮಾಂಕದಲ್ಲಿ ಆಡಲು ಒಳ್ಳೆಯ ಅವಕಾಶ ಎಂದು ಮಾಜಿ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.

    ಕೆಲ ವೈಯಕ್ತಿಕ ಕಾರಣಗಳಿಂದ ಸುರೇಶ್ ರೈನಾ ಅವರು, ಐಪಿಎಲ್-2020ಯಿಂದ ಹೊರಬಂದಿದ್ದಾರೆ. ಐಪಿಎಲ್‍ನಲ್ಲಿ ಭಾಗವಹಿಸಲು ಅಗಸ್ಟ್ 21ರಂದು ಯುಎಇಗೆ ತೆರಳಿದ್ದ ರೈನಾ, ಕಳೆದ ಮೂರು ದಿನಗಳ ಹಿಂದೆ ಭಾರತಕ್ಕೆ ವಾಪಸ್ ಬಂದಿದ್ದರು. ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾರೂ ಮೂರನೇ ಕ್ರಮಾಂಕದಲ್ಲಿ ಆಡಬೇಕು ಎಂಬ ವಿಚಾರ ಬಹಳ ಚೆರ್ಚೆಯಾಗುತ್ತಿದೆ.

    ಈ ವಿಚಾರವಾಗಿ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಗಂಭೀರ್, ರೈನಾ ಐಪಿಎಲ್‍ನಿಂದ ಹೊರಬಂದಿರುವುದು ಧೋನಿಗೆ ಮೂರನೇ ಕ್ರಮಾಂಕದಲ್ಲಿ ಆಡಲು ಒಳ್ಳೆಯ ಅವಕಾಶ. ಇದನ್ನು ಧೋನಿಯವರು ಬಳಸಿಕೊಳ್ಳಲಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಈಗ ರೈನಾ ಟೂರ್ನಿ ಆಡುತ್ತಿಲ್ಲ. ಮೂರನೇ ಕ್ರಮಾಂಕದಲ್ಲಿ ಅನುಭವಿ ಆಟಗಾರ ಬ್ಯಾಟ್ ಮಾಡಬೇಕಿದೆ. ಹೀಗಾಗಿ ಈ ಸ್ಥಾನವನ್ನು ಧೋನಿ ತುಂಬಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.

    ಧೋನಿ ಕಳೆದ ಒಂದು ವರ್ಷದಿಂದ ಕ್ರಿಕೆಟ್‍ನಿಂದ ದೂರವಿದ್ದಾರೆ. ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಆಡಿದರೆ ಹೆಚ್ಚು ಬಾಲ್ ಎದುರಿಸಬಹುದು. ಜೊತೆಗೆ ಒಳ್ಳೆಯ ಇನ್ನಿಂಗ್ಸ್ ಕಟ್ಟುವ ನಿಟ್ಟಿನಲ್ಲಿ ಬ್ಯಾಟ್ ಬೀಸಬಹುದು. ಧೋನಿ ಮೂರನೇ ಕ್ರಮಾಂಕದಲ್ಲಿ ಆಡಿದರೆ, ಅವರ ನಂತರ ಬಂದು ಮ್ಯಾಚ್ ಫಿನಿಶ್ ಮಾಡುವ ಆಟಗಾರರು ಇದ್ದಾರೆ. ಧೋನಿ ನಂತರ ಕೇದಾರ್ ಜಾಧವ್, ಡ್ವೇನ್ ಬ್ರಾವೋ ಮತ್ತು ಸ್ಯಾಮ್ ಕರ್ರನ್ ಬಂದು ಮ್ಯಾಚ್ ಫಿನಿಶ್ ಮಾಡುತ್ತಾರೆ ಎಂದು ಗಂಭೀರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಐಪಿಎಲ್-2020 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇದರ ನಡುವೆ ಕೊರೊನಾ ಕೆರಿನೆರಳು ದೂರದ ಯುಎಇಯಲ್ಲೂ ಐಪಿಎಲ್ ಮೇಲೆ ಬಿದ್ದಿದೆ. ಇತ್ತೀಚೆಗಷ್ಟೆ ಚೆನ್ನೈ ತಂಡದ ಇಬ್ಬರು ಆಟಗಾರರು ಸೇರಿದಂತೆ 13 ಮಂದಿಗೆ ಕೊರೊನಾ ಸೋಂಕು ತಗಲುಲಿದೆ. ಈ ನಡುವೆ ತಂಡದ ಸ್ಟಾರ್ ಆಟಗಾರ ಸುರೇಶ್ ರೈನಾ ಐಪಿಎಲ್‍ನಿಂದ ಹೊರಕ್ಕೆ ಬಂದಿದ್ದಾರೆ. ಇದು ಚೆನ್ನೈ ತಂಡದ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಸೆಪ್ಟಂಬರ್ 19ರಿಂದ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ.

  • ಧೋನಿ ಫಿಟ್ ಆಗಿದ್ದರೆ ಭಾರತಕ್ಕಾಗಿ ಆಡಿ ಪಂದ್ಯಗಳನ್ನು ಗೆಲ್ಲಿಸಿಕೊಡಲಿ: ಗಂಭೀರ್

    ಧೋನಿ ಫಿಟ್ ಆಗಿದ್ದರೆ ಭಾರತಕ್ಕಾಗಿ ಆಡಿ ಪಂದ್ಯಗಳನ್ನು ಗೆಲ್ಲಿಸಿಕೊಡಲಿ: ಗಂಭೀರ್

    – ನಿವೃತ್ತಿ ವೈಯಕ್ತಿಕ ವಿಚಾರ, ವಯಸ್ಸು ಕೇವಲ ಅಂಕೆಯಷ್ಟೆ

    ನವದೆಹಲಿ: ಎಂಎಸ್ ಧೋನಿ ಅವರು ಫಿಟ್ ಆಗಿ ಇದ್ದರೆ ಅವರು ಭಾರತಕ್ಕಾಗಿ ಆಡಿ ಪಂದ್ಯವನ್ನು ಗೆಲ್ಲಿಸಿಕೊಡಲಿ ಎಂದು ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ಸಂಸದ ಗೌತಮ್ ಗಂಭೀರ್ ಅವರು ಹೇಳಿದ್ದಾರೆ.

    2019ರ ವಿಶ್ವಕಪ್ ನಂತರ ಭಾರತದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಧೋನಿಯವರು ಕ್ರಿಕೆಟ್‍ನಿಂದ ದೂರ ಉಳಿಸಿದ್ದಾರೆ. ಈ ನಡುವೆ ಅವರ ನಿವೃತ್ತಿ ವಿಚಾರದ ಬಗ್ಗೆ ಹಲವಾರು ಉಹಾಪೋಹಗಳು ಹರಿದಾಡುತ್ತಿವೆ. ಈಗ ಈ ವಿಚಾರವಾಗಿ ಮಾತನಾಡಿರುವ ಗಂಭೀರ್, ನಿವೃತ್ತಿ ಎಂಬುದು ಆಟಗಾರರ ವೈಯಕ್ತಿಕ ವಿಚಾರ. ಅದನ್ನು ಯಾರು ಪ್ರಶ್ನೆ ಮಾಡಬಾರದು ಎಂದು ಹೇಳಿದ್ದಾರೆ.

    ಈ ವಿಚಾರವಾಗಿ ಖಾಸಗಿ ಕ್ರೀಡಾ ಮಾಧ್ಯಮದಲ್ಲಿ ಮಾತನಾಡಿರುವ ಗಂಭೀರ್, ನೀವು ಒಳ್ಳೆಯ ಲಯದಲ್ಲಿ ಇದ್ದೀರಾ, ಚೆನ್ನಾಗಿ ಬಾಲ್ ಅನ್ನು ದಂಡಿಸುತ್ತೀರಾ ಎಂದರೆ ವಯಸ್ಸು ಎಂಬುದು ಕೇವಲ ನಂಬರ್ ಅಷ್ಟೆ. ಧೋನಿಯವರು ಇನ್ನೂ ಉತ್ತಮ ಲಯದಲ್ಲಿ ಇದ್ದು, ಅವರಿಗೆ ಆರು ಅಥವಾ ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ದೇಶಕ್ಕಾಗಿ ಪಂದ್ಯಗನ್ನು ಗೆಲ್ಲಿಸಿಕೊಡುವ ಶಕ್ತಿ ಇದ್ದರೆ ಅವರು ಇನ್ನೂ ಕ್ರಿಕೆಟ್ ಆಡಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಧೋನಿ ಈಗಲೂ ಕ್ರಿಕೆಟ್ ಆಡಲು ಫಿಟ್ ಆಗಿದ್ದರೆ, ಒಳ್ಳೆಯ ಫಾರ್ಮ್‍ನಲ್ಲಿ ಇದ್ದರೆ ಕ್ರಿಕೆಟ್ ಆಡಬಹುದು. ಯಾರಿಗೂ ಕೂಡ ಆಟಗಾರರನ್ನು ನಿವೃತ್ತಿ ಪಡೆದುಕೊಳ್ಳಿ ಎಂದು ಒತ್ತಾಯ ಮಾಡುವ ಅಧಿಕಾರವಿಲ್ಲ. ಎಂಎಸ್ ಧೋನಿಯಂತಹ ಆಟಗಾರರಿಗೆ ಒತ್ತಡ ಬರುವುದು ಸಹಜ. ಕ್ರಿಕೆಟ್ ಆಡಬೇಕು ಎಂದು ನಾವು ವೈಯಕ್ತಿಕವಾಗಿ ನಿರ್ಧಾರ ಮಾಡಿರುತ್ತೇವೆ. ಹಾಗೆಯೇ ನಿವೃತ್ತಿಯನ್ನು ಕೂಡ ನಾವು ವೈಯಕ್ತಿವಾಗಿ ಪಡೆದುಕೊಳ್ಳಬೇಕು ಎಂದು ಗಂಭೀರ್ ತಿಳಿಸಿದ್ದಾರೆ.

    ಧೋನಿ ಅವರು 2019ರ ವಿಶ್ವಕಪ್ ಸೆಮಿಫೈನಲ್‍ನಲ್ಲಿ ಕೊನೆ ಬಾರಿಗೆ ಬ್ಯಾಟ್ ಬೀಸಿದ್ದರು. ಇದಾದ ನಂತರ ಅವರು ಕ್ರಿಕೆಟ್‍ನಿಂದ ದೂರು ಉಳಿದಿದ್ದಾರೆ. ಈ ಮಧ್ಯೆ ಅವರು ಭಾರತೀಯ ಸೇನೆಯಲ್ಲಿ ಸೇವೆ ಕೂಡ ಸಲ್ಲಿಸಿದ್ದರು. ನಂತರ ಚೆನ್ನೈಗೆ ಬಂದ ಧೋನಿ ಐಪಿಎಲ್-2020ರಲ್ಲಿ ಆಡಲು ತಯಾರಿ ನಡೆಸಿದ್ದರು. ಆದರೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಟೂರ್ನಿ ಮುಂದಕ್ಕೆ ಹೋಗಿತ್ತು. ಈಗ ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಿಲಿದ್ದು, ಧೋನಿಯವರನ್ನು ಮೈದಾನದಲ್ಲಿ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

    ಇದರ ನಡುವೆ ಎಂಎಸ್ ಧೋನಿಯವರ ನಿವೃತ್ತಿಯ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಕೆಲ ಮಾಜಿ ಆಟಗಾರರು ಮತ್ತು ಕ್ರಿಕೆಟ್ ಪಂಡಿತರ ಧೋನಿ ರಾಷ್ಟ್ರೀಯ ತಂಡಕ್ಕೆ ಮರಳುವುದು ಸಾಧ್ಯವಿಲ್ಲ. ಈಗಾಗಲೇ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಕೆಎಲ್ ರಾಹುಲ್ ಉತ್ತಮ ಲಯದಲ್ಲಿ ಇದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಸಿಎಂ ಕೇಜ್ರಿವಾಲ್ 21ನೇ ಶತಮಾನದ ತುಘ್ಲಕ್: ಗೌತಮ್ ಗಂಭೀರ್

    ಸಿಎಂ ಕೇಜ್ರಿವಾಲ್ 21ನೇ ಶತಮಾನದ ತುಘ್ಲಕ್: ಗೌತಮ್ ಗಂಭೀರ್

    ನವದೆಹಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು 21ನೇ ಶತಮಾನದ ತುಘ್ಲಕ್ ರಾಜ ಎಂದು ಕರೆದಿದ್ದಾರೆ.

    ದೆಹಲಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳ ವರದಿ ಆಗಿವೆ. ಕೆಲ ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದು, ಆಪ್ ಸರ್ಕಾರ ಮತ್ತು ಬಿಜೆಪಿ ಇದರ ಕ್ರೆಡಿಟ್ ತೆಗೆದುಕೊಳ್ಳಲು ಟ್ವಿಟ್ಟರ್ ನಲ್ಲಿ ಯುದ್ಧಕ್ಕೆ ಇಳಿದಿವೆ. ನಿನ್ನೆ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ದೆಹಲಿಯ ಆಪ್ ಸರ್ಕಾರ ಜಾಹಿರಾತು ಮತ್ತು ಹ್ಯಾಶ್ ಟ್ಯಾಗ್ ಗಾಗಿ ಮಾಡಿದ ಖರ್ಚನ್ನು ಕೆಲಸದಲ್ಲಿ ತೊಡಗಿಸಬೇಕಿತ್ತು. ಈ ಟ್ವೀಟ್ ನನ್ನು ಸಿಎಂ ಕೇಜ್ರಿವಾಲ್‍ಗೆ ಟ್ಯಾಗ್ ಮಾಡಿ 21ನೇ ಶತಮಾನದ ತುಘ್ಲಕ್ ಎಂದಿದ್ದಾರೆ. ಮಾಧ್ಯಮಗಳ ಮುಂದೆ ಯಾವುದೇ ಕ್ರೆಡಿಟ್ (ಹೆಸರು) ಬೇಡ ಅಂತಾ ಹೇಳ್ತಾರೆ. ಟ್ವಿಟ್ಟರ್ ನಲ್ಲಿ ಎಲ್ಲವೂ ನಾನೇ ಮಾಡಿದ್ದು ಅಂತಾರೆ ಎಂದು ಟೀಕಿಸಿದ್ದಾರೆ.

    ಮಗದೊಂದು ಟ್ವೀಟ್ ನಲ್ಲಿ ಚುನಾವಣೆಗೂ ಮುನ್ನ ಉಚಿತ ವಿದ್ಯುತ್ ಮತ್ತು ಶುದ್ಧ ನೀರು ಎಂದು ಹೇಳಿದ್ದರು. ಇದೀಗ ತುಘ್ಲಕ್ ರೀತಿಯಲ್ಲಿ ಮನಸ್ಸಿಗೆ ಬಂದಂತೆ ಆಡಳಿಯ ನಡೆಸುತ್ತಿದ್ದಾರೆ ಎಂದು ಗಂಭೀರ್ ಆರೋಪಿಸಿದ್ದರು.

    ಎರಡು ದಿನಗಳ ಹಿಂದೆ ಸಿಎಂ ಕೇಜ್ರಿವಾಲ್ ದೆಹಲಿಯ ಎಲ್ಲ ಸಂಸದರು ಮತ್ತು ಆಪ್ ಪಕ್ಷದ ರಾಜ್ಯಸಭಾ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ್ದರು. ಈ ವೇಳೆ ಕಾಂತಿನಗರದಲ್ಲಿ ಕೂಡಲೇ ಐಸೋಲೇಶನ್ ಕೇಂದ್ರ ಆರಂಭಿಸಬೇಕು ಎಂದು ಗಂಭೀರ್ ಸರ್ಕಾರವನ್ನು ಒತ್ತಾಯಿಸಿದ್ದರು.

  • ಭಾರತದ ಕ್ರಿಕೆಟ್ ಮೇಲೆ ಗಂಗೂಲಿಗಿಂತ ದ್ರಾವಿಡ್ ಪ್ರಭಾವವೇ ಹೆಚ್ಚು: ಗಂಭೀರ್

    ಭಾರತದ ಕ್ರಿಕೆಟ್ ಮೇಲೆ ಗಂಗೂಲಿಗಿಂತ ದ್ರಾವಿಡ್ ಪ್ರಭಾವವೇ ಹೆಚ್ಚು: ಗಂಭೀರ್

    ನವದೆಹಲಿ: ಭಾರತದ ಕ್ರಿಕೆಟ್ ಮೇಲೆ ಮಾಜಿ ನಾಯಕ ಸೌರವ್ ಗಂಗೂಲಿ ಅವರಿಗಿಂತ ಮಿಸ್ಟರ್ ಡಿಪೆಂಡಬಲ್ ರಾಹುಲ್ ದ್ರಾವಿಡ್ ಅವರ ಪ್ರಭಾವವೇ ಹೆಚ್ಚು ಎಂದು ಬಿಜೆಪಿ ಸಂಸದ, ಮಾಜಿ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

    ಭಾರತೀಯ ಕ್ರಿಕೆಟ್ ಎಂದಾಕ್ಷಣ ಎಲ್ಲರೂ ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಮಾತನಾಡುತ್ತಾರೆ. ಆದರೆ ರಾಹುಲ್ ದ್ರಾವಿಡ್ ಅವರ ಪಾತ್ರ ಬಹಳ ಪ್ರಮುಖವಾದದ್ದು ಎಂದು ದ್ರಾವಿಡ್ ಕುರಿತು ಗಂಭೀರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    ಸೌರವ್ ಗಂಗೂಲಿ ನಾಯಕತ್ವದಲ್ಲಿ ಏಕದಿನ ಕ್ರಿಕೆಟ್‍ಗೆ ನಾನು ಪಾದಾರ್ಪಣೆ ಮಾಡಿದ್ದೆ. ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದೆ. ಆದರೆ ಯಾರು ಕೂಡ ದ್ರಾವಿಡ್ ಅವರ ನಾಯಕತ್ವಕ್ಕೆ ಕ್ರೆಡಿಟ್ ನೀಡಲಿಲ್ಲ. ಕೇವಲ ಗಂಗೂಲಿ, ಧೋನಿ, ವಿರಾಟ್ ಕೊಹ್ಲಿ ಕುರಿತು ಮಾತ್ರ ಮಾತನಾಡುತ್ತಾರೆ. ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಅತ್ಯುತ್ತಮ ನಾಯಕರು ಎಂಬುವುದನ್ನು ಗ್ರಹಿಸಬೇಕಿದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

    ಟೆಸ್ಟ್ ಕ್ರಿಕೆಟ್‍ನಲ್ಲಿ ದ್ರಾವಿಡ್ ಅವರನು ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಯುವಂತೆ ಸೂಚಿದರು ಆಡುತ್ತಿದ್ದರು. ಅಲ್ಲದೇ ವಿಕೆಟ್ ಕೀಪಿಂಗ್, ಮ್ಯಾಚ್ ಫಿನಿಷರ್ ಆಗಿ ತಂಡಕ್ಕೆ ಅಗತ್ಯವಾದ ಸಮಯದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದ್ದರು. ನನ್ನ ದೃಷ್ಟಿಯಲ್ಲಿ ಭಾರತದ ಕ್ರಿಕೆಟ್ ಮೇಲೆ ರಾಹುಲ್ ದ್ರಾವಿಡ್ ಅವರ ಪ್ರಭಾವ ಹೆಚ್ಚು. ಸಚಿನ್ ತೆಂಡೂಲ್ಕರ್ ಅವರೊಂದಿಗೆ ಆಡಿದ್ದ ಪರಿಣಾಮ ಅವರಿಗೆ ಸಲ್ಲಬೇಕಾದ ಗೌರವ ಲಭಿಸಲಿಲ್ಲ ಎಂದು ಗಂಭೀರ್ ವಿವರಿಸಿದ್ದಾರೆ.

    ಮ್ಯಾಚ್ ಫಿಕ್ಸಿಂಗ್ ವಿವಾದ ಬಳಿಕ ತಂಡದ ನಾಯಕತ್ವ ವಹಿಸಿಕೊಂಡಿದ್ದ ಗಂಗೂಲಿ ತಂಡವನ್ನು ಅತ್ಯುತ್ತಮವಾಗಿ ರೂಪಿಸಿದ್ದರು. ಅನುಭವಿ ಆಟಗಾರರಾದ ಸಚಿನ್, ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಅನಿಲ್ ಕುಂಬ್ಳೆ, ಶ್ರೀನಾಥ್‍ ರಂತಹ ಆಟಗಾರ ನೆರವಿನಿಂದ ಸಾಕಷ್ಟು ಜಯಗಳನ್ನು ತಂಡಕ್ಕೆ ತಂದುಕೊಟ್ಟಿದ್ದರು. ಅಲ್ಲದೇ ಯುವ ಆಟಗಾರರಿಗೂ ಸೂಕ್ತ ಅವಕಾಶ ನೀಡಿದ್ದರು. 2003ರ ವಿಶ್ವಕಪ್‍ನಲ್ಲಿ ತಂಡವನ್ನು ಫೈನಲ್‍ವರೆಗೂ ಮುನ್ನಡೆಸಿದ್ದರು. ಗಂಗೂಲಿ ಬಳಿಕ ತಂಡದ ನಾಯಕತ್ವ ವಹಿಸಿಕೊಂಡ ದ್ರಾವಿಡ್, ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ತಂದಿದ್ದರು. ಆ ಬಳಿಕ 2006-07ರ ಅವಧಿಯಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್ ವಿರುದ್ಧ ಜಯ ಪಡೆದಿದ್ದರು. ಆದರೆ 2007ರ ವಿಶ್ವಕಪ್ ಸೋಲಿನಿಂದ ದ್ರಾವಿಡ್ ಅವರ ಗೆಲುವುಗಳಿಗೆ ಲಭಿಸಬೇಕಾದ ಸೂಕ್ತ ಗೌರವ ಲಭಿಸಲಿಲ್ಲ ಎಂದು ಹೇಳಿದ್ದಾರೆ.

  • ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ, ಗೆಲ್ಲೋದು ತುಂಬಾ ಇದೆ: ಗಂಭೀರ್

    ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ, ಗೆಲ್ಲೋದು ತುಂಬಾ ಇದೆ: ಗಂಭೀರ್

    ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕನಾಗಿ ಏನನ್ನೂ ಗೆದ್ದಿಲ್ಲ. ಆತ ಸಾಧಿಸುವುದು ಇನ್ನೂ ತುಂಬಾ ಇದೆ ಎಂದು ಭಾರತ ತಂಡದ ಮಾಜಿ ಆಟಗಾರ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

    ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಗಂಭೀರ್, ಕೇವಲ ವೈಯಕ್ತಿಕವಾಗಿ ಉತ್ತಮವಾಗಿ ಆಡುವುದರಿಂದ ಟೀಮ್ ಅನ್ನು ಗೆಲ್ಲಿಸಲು ಆಗುವುದಿಲ್ಲ. ನಾಯಕ ವೈಯಕ್ತಿಕ ಆಟದ ಜೊತೆಗೆ ತಂಡದ ಸದಸ್ಯರನ್ನು ಹುರಿದುಂಬಿಸಬೇಕು ಎಂದು ಕೊಹ್ಲಿ ಅವವರಿಗೆ ಸಲಹೆ ನೀಡಿದ್ದಾರೆ.

    ಕ್ರಿಕೆಟ್ ಒಂದು ಟೀಮ್ ಸೇರಿ ಆಡಬೇಕಾದ ಕ್ರೀಡೆ. ನೀವು ವೈಯಕ್ತಿಕವಾಗಿಯೂ ಸ್ಕೋರ್ ಮಾಡಬೇಕು. ಆದರ ಜೊತೆ ತಂಡವನ್ನು ದೊಡ್ಡ ದೊಡ್ಡ ಟೂರ್ನಿಯಲ್ಲಿ ಗೆಲ್ಲಿಸಬೇಕು. ವೆಸ್ಟ್ ಇಂಡೀಸ್ ಬ್ರಿಯಾನ್ ಲಾರಾ, ಸೌತ್ ಆಫ್ರಿಕಾದ ಜಾಕ್ ಕಾಲಿಸ್ ಬಹಳ ರನ್ ಹೊಡೆದರು. ಆದರೆ ಅವರು ಟ್ರೋಫಿ ಗೆಲ್ಲಲಿಲ್ಲ. ಹಾಗೆಯೇ ಕೊಹ್ಲಿ ಕೂಡ ನಾಯಕನಾಗಿ ಏನನ್ನೂ ಗೆದ್ದಿಲ್ಲ. ಇನ್ನೂ ಸಾಧಿಸಬೇಕಿರುವುದು ತುಂಬಾ ಇದೆ ಎಂದು ಹೇಳಿದ್ದಾರೆ.

    ನೀವು ಎಷ್ಟೇ ದೊಡ್ಡ ಮಟ್ಟದ ರನ್ ಹೊಳೆಯನ್ನೇ ಹರಿಸಿ, ಆದರೆ ನನ್ನ ಪ್ರಕಾರ ದೊಡ್ಡ ಟ್ರೋಫಿಯನ್ನು ಗೆಲ್ಲದೇ ಇದ್ದರೆ, ನಿಮ್ಮ ಕ್ರೀಡಾ ಜೀವನ ಪೂರ್ಣಗೊಳ್ಳಲ್ಲ. ಹಾಗಾಗಿ ಕೊಹ್ಲಿ ತಮ್ಮ ತಂಡವನ್ನು ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗಬೇಕು. ಬೇರೆ ಆಟಗಾರರನ್ನು ಇವರಿಗೆ ಹೋಲಿಸಬಾರದು. ಎಲ್ಲ ಆಟಗಾರರಿಗೂ ಅವರದ್ದೇ ಆದ ಸ್ಕಿಲ್ ಇರುತ್ತದೆ. ಈ ನಿಟ್ಟಿನಲ್ಲಿ ಕೊಹ್ಲಿ ತಂಡದ ಆಟಗಾರರನ್ನು ಹುರಿದುಂಬಿಸಿ ಆಡಬೇಕು ಎಂದು ಗೌತಮ್ ತಿಳಿಸಿದ್ದಾರೆ.

    ತಂಡದಲ್ಲಿರುವ ಯುವ ಆಟಗಾರರನ್ನು ಕೊಹ್ಲಿ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ದೊಡ್ಡ ದೊಡ್ಡ ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ತಂಡವನ್ನು ಸರಿಯಾಗಿ ನಿರ್ವಹಣೆ ಮಾಡುವುದರಲ್ಲಿ ಎಡವಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಎಂಎಸ್ ಧೋನಿ ನಂತರ ಕೊಹ್ಲಿ 2017ರಲ್ಲಿ ಭಾರತದ ನಾಯಕನಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಮತ್ತು 2019ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದರು. ಆದರೆ ತಂಡ ಟ್ರೋಫಿಯನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ನಾಕೌಟ್ ಹಂತದಲ್ಲಿ ಟೂರ್ನಿಯಿಂದ ಔಟ್ ಆಗಿತ್ತು.

    ಭಾರತದ ರನ್ ಮಷಿನ್ ಎಂದೇ ಖ್ಯಾತಿಯಾಗಿರುವ ಕೊಹ್ಲಿ ವೈಯಕ್ತಿಕವಾಗಿ ಉತ್ತಮವಾಗಿ ಆಡುತ್ತಿದ್ದಾರೆ. ಟಿ-20 ಮಾದರಿಯಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಏಕದಿನ ಮಾದರಿಯಲ್ಲಿ ಈಗಾಗಲೇ ಒಟ್ಟು 11,867 ರನ್ ಸಿಡಿಸಿರುವ ಕೊಹ್ಲಿ, 205 ಪಂದ್ಯಗಳಲ್ಲೇ 10,000 ರನ್ ಪೂರೈಸಿ 2018ರಲ್ಲಿ ಅತೀ ಬೇಗ 10 ಸಾವಿರ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದರು. ಜೊತೆಗೆ ಟೆಸ್ಟ್ ಮಾದರಿಯಲ್ಲಿ ಐಸಿಸಿ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಆದರೆ ನಾಯಕನಾಗಿ ಇಲ್ಲಿಯವರೆಗೂ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ.