Tag: gauri

  • ನನ್ನ ರಕ್ಷಣೆಗೆ ದೇವರು ಇದ್ದಾನೆ, ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ: ರಮಾನಾಥ ರೈ

    ನನ್ನ ರಕ್ಷಣೆಗೆ ದೇವರು ಇದ್ದಾನೆ, ಇದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ: ರಮಾನಾಥ ರೈ

    ಮಂಗಳೂರು: ನಾನು ಎಲ್ಲಾ ಜಾತಿ, ಧರ್ಮದ ಜನರನ್ನು ಪ್ರೀತಿಸುತ್ತೇನೆ. ಹಾಗೆಯೇ ಎಲ್ಲರೊಂದಿಗೂ ಬೆರೆಯುವವನು. ಹೀಗಾಗಿ ಜನರ ಪ್ರೀತಿಯ ಮೂಲಕ ನಾನು ದೇವರನ್ನು ಕಾಣುತ್ತೇನೆ. ಅವರ ಆಶೀರ್ವಾದವೇ ನನಗೆ ರಕ್ಷಣೆ ಅಂತ ಸಚಿವ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.

    ಗೌರಿ ಹತ್ಯೆಯ ಶಂಕಿತರು ತನ್ನ ಮೇಲೆ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಮಾಹಿತಿಯ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಬಗ್ಗೆ ನನಗೆ ನಿಖರ ಮಾಹಿತಿಯಿಲ್ಲ. ನಾವು ಜನರನ್ನು ಪ್ರೀತಿಸೋರು. ಎಲ್ಲರ ಜೊತೆ ಬೆರೆಯುವವರು. ಸನಾತನ ಹಿಂದೂ ಧರ್ಮದ ವಿಚಾರಗಳನ್ನು ಬಹಳ ಆಳವಾಗಿ ತಿಳಿದುಕೊಂಡವರು. ಸನತಾನ ಹಿಂದೂ ಧರ್ಮದ ಎಲ್ಲಾ ಆಚಾರ-ವಿಚಾರಗಳನ್ನು ಕರಾರುವಕ್ಕಾಗಿ ಮಾಡುತ್ತೇನೆ. ನಾಗಮಂಡಲದಂತಹ ಕಾರ್ಯಕ್ರಮ, ದೇವಸ್ಥಾನದ ಜೀರ್ಣೋದ್ಧಾರ, ಇದರ ಜೊತೆ ಎಲ್ಲಾ ಧರ್ಮದ ಕೇಂದ್ರಗಳ ಅಭಿವೃದ್ಧಿಗಳಲ್ಲಿ ನನ್ನ ಪಾತ್ರವಿದೆ ಅಂತ ಹೇಳಿದ್ರು. ಇದನ್ನೂ ಓದಿ: ಗೌರಿ ಹತ್ಯೆಗೆ ಆಯುಧ ಒದಗಿಸಿದ್ದು ನಾನೇ – ಎಸ್‍ಐಟಿ ಮುಂದೆ ನವೀನ್ ಹೇಳಿಕೆ

    ಕಷ್ಟದಲ್ಲಿ ಬಂದಂತಹ ಎಲ್ಲರ ಸೇವೆಯನ್ನೂ ಮಾಡುತ್ತೇನೆ. ನನ್ನ ರಕ್ಷಣೆಗೆ ದೇವರು ಇರುತ್ತಾನೆ. ಈ ಕುರಿತು ನಾನು ತಲೆಕೆಡಿಸಿಕೊಳ್ಳಲ್ಲ. ಮನುಷ್ಯರು ಎಲ್ಲರೂ ಒಂದೇ ಅನ್ನೋದು ನನ್ನ ಸೈದ್ಧಾಂತಿಕ ನಿಲುವಾಗಿದೆ. ನಾವು ಅರ್ಜಿ ಹಾಕಿ ಭೂಮಿ ಕೊಟ್ಟಿದವರು ಯಾರೂ ಇಲ್ಲ ಅಂತ ತಿಳಿಸಿದ್ರು.

    ನಾನು ಮನುಷ್ಯ ವಿರೋಧಿ ಅಲ್ಲ. ಬದಲಾಗಿ ಅವರನ್ನು ಪ್ರೀತಿಸುತ್ತೇನೆ. ಹೀಗಾಗಿ ಅವರ ಆಶೀರ್ವಾದವೇ ನನಗೆ ರಕ್ಷಣೆ. ನನ್ನನ್ನು ಯಾರೂ ಕೂಡ ಜಾತಿವಾದಿ ಮತ್ತು ಮತೀಯವಾದಿ ಎಂದು ಟೀಕಾಕಾರರು ಕೂಡ ಹೇಳಿಲ್ಲ. ಒಟ್ಟಿನಲ್ಲಿ ಆಸ್ತಿಕವಾಗಿ ಒಬ್ಬ ಮನಷ್ಯ ಹೇಗಿರಬೇಕೋ ಹಾಗೆಯೇ ನಾನಿದ್ದೇನೆ ಅಂತ ರೈ ಹೇಳಿದ್ರು. ಇದನ್ನೂ ಓದಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಶಂಕಿತ ಆರೋಪಿಯನ್ನ ವಶಕ್ಕೆ ಪಡೆದ ಎಸ್‍ಐಟಿ

    ಮಂಗಳೂರಲ್ಲಿ ಇಷ್ಟೊಂದು ಕೊಲೆಗಳಾಗಿವೆ. ಇವುಗಳಲ್ಲಿ ನನ್ನ ಪಾತ್ರವಿಲ್ಲ. ಒಟ್ಟಿನಲ್ಲಿ ನನ್ನ ಹತ್ಯೆಗೆ ಸಂಚು ರೂಪಿಸಿರುವ ಕುರಿತು ನನಗೆ ಯಾವುದೇ ಪೊಲೀಸ್ ಭದ್ರತೆ ಬೇಡ. ಜನರೇ ರಕ್ಷಣೆ ನನಗೆ ಅಂತ ಅವರು ವಿವರಿಸಿದ್ರು.

  • ಕರ್ನಾಟಕದಲ್ಲೂ ಜಿಗ್ನೇಶ್ ಮೆವಾನಿ ಪ್ರಚಾರ – ದಲಿತ ಮತಗಳ ಕ್ರೂಢೀಕರಣಕ್ಕೆ `ಕೈ’ ಅಸ್ತ್ರ

    ಕರ್ನಾಟಕದಲ್ಲೂ ಜಿಗ್ನೇಶ್ ಮೆವಾನಿ ಪ್ರಚಾರ – ದಲಿತ ಮತಗಳ ಕ್ರೂಢೀಕರಣಕ್ಕೆ `ಕೈ’ ಅಸ್ತ್ರ

    ಬೆಂಗಳೂರು: ಗುಜರಾತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ ವಡಗಾಂವ್ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಶೀಘ್ರದಲ್ಲೇ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ರಾಜ್ಯಕ್ಕೂ ಬರುತ್ತೇನೆ. ಕರ್ನಾಟಕದಲ್ಲೇ ಕ್ಯಾಂಪೈನ್ ಮಾಡ್ತೇನೆ ಅಂತ ರಣಕಹಳೆ ಊದಿದ್ದಾರೆ.

    ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕು. ಶೀಘ್ರ ಕರ್ನಾಟಕಕ್ಕೆ ಬರುತ್ತೇನೆ. ಅಲ್ಲೇ ಹೋರಾಟ ಮಾಡ್ತೀನಿ. ಈಗ ಹಿರಿಯ ಪತ್ರಕರ್ತೆ ಗೌರಿ ಇದ್ದಿದ್ದರೆ ಅವರು ಹೆಚ್ಚು ಖುಷಿ ಪಡ್ತಿದ್ರು. ಅಲ್ಲದೇ ನನಗೆ ವಿಮಾನ ಟಿಕೆಟ್ ಬುಕ್ ಮಾಡಿ ಕರ್ನಾಟಕಕ್ಕೆ ಕರೆಸಿಕೊಳ್ಳುತ್ತಿದ್ದರು. ಅವರು ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಕೂಡ ಮಾಡ್ತಿದ್ರು ಅಂತ ಹೇಳಿದ್ರು. ಇದನ್ನೂ ಓದಿ: ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಫೆಬ್ರವರಿಯಿಂದ ರಾಜ್ಯದ ದಲಿತ ಬಾಹುಳ್ಯ ಕ್ಷೇತ್ರಗಳಲ್ಲಿ ಮೇವಾನಿ ಸಂಚಾರ ಮಾಡಲಿದ್ದು, ಸಿಎಂ ಸಿದ್ದರಾಮಯ್ಯ ಅವರ ಜೊತೆ ರಾಜ್ಯ ಪ್ರವಾಸವನ್ನು ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?

    ವಡಂಗಾವ್ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಜಿಗ್ನೇಶ್ ಮೇವಾನಿ, ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಿಂದ ಜಯ ಗಳಿಸಿದ್ದರು. ಫಲಿತಾಂಶದಲ್ಲಿ ಜಿಗ್ನೇಶ್ 95,497 ಮತಗಳನ್ನು ಪಡೆದ್ರೆ, ಬಿಜೆಪಿಯ ಚಕ್ರವರ್ತಿ ವಿಜಯ್ ಕುಮಾರ್ ಹರ್ಖಾಭಾಯ್ ಅವರು 75,801 ಮತಗಳನ್ನು ಪಡೆದಿದ್ದರು. ಇದನ್ನೂ ಓದಿ: ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ? ಕಾಂಗ್ರೆಸ್ ಸೋತಿದ್ದೆಲ್ಲಿ?