Tag: gaurav gupta

  • ಹೂ ಮಾರಿ SSLC ಪರೀಕ್ಷೆಗೆ ತಯಾರಾಗ್ತಿದ್ದ ವಿದ್ಯಾರ್ಥಿನಿಗೆ ಸಿಕ್ತು ಲ್ಯಾಪ್‍ಟಾಪ್

    ಹೂ ಮಾರಿ SSLC ಪರೀಕ್ಷೆಗೆ ತಯಾರಾಗ್ತಿದ್ದ ವಿದ್ಯಾರ್ಥಿನಿಗೆ ಸಿಕ್ತು ಲ್ಯಾಪ್‍ಟಾಪ್

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷಾ ತಯಾರಿಯ ಜೊತೆಗೆ ಹೂವು ಮಾರುವ ಯುವತಿ ಬನಶಂಕರಿಗೆ ಇಂದು ಲ್ಯಾಪ್ ಟಾಪ್ ಹಸ್ತಾಂತರ ಮಾಡಲಾಯಿತು. ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದ ಆದಿಶಕ್ತಿ ದೇವಾಲಯದಲ್ಲಿ ಹೂವು ಮಾರುವ ಯುವತಿ ಬನಶಂಕರಿ ಓದಿಗೆ ಹಲವು ಕೈಗಳು ನೆರವು ಮುಂದುವರಿಸಿದೆ.

    ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಬನಶಂಕರಿ ಓದಿಗೆ ಸಹಾಯ ಆಗಲೀ ಎಂದು ಲ್ಯಾಪ್ ಟಾಪ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಮೀಷನರ್, ವಿದ್ಯೆ ಬಡತನ ದೂರ ಮಾಡುತ್ತದೆ. ಆಕೆಯ ಆಸಕ್ತಿ ಕಂಡು ನಾನು ಲ್ಯಾಪ್ ಟ್ಯಾಪ್ ವಿತರಣೆ ಮಾಡಿರುವೆ. ಇದನ್ನ ಯುವತಿ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಿ ಎಂದರು.

    ಇದೇ ವೇಳೆ ಯುವತಿ ಬನಶಂಕರಿ ಮಾತನಾಡಿ, ತುಂಬಾ ಖುಷಿ ಆಯಿತು. ಓದುವಾಗ ಈ ನೆರವು ಸಿಕ್ಕಿದು ನನ್ನ ಭಾಗ್ಯ ಎಂದರು. ನೆನ್ನೆಯಷ್ಟೇ ಪಬ್ಲಿಕ್ ಟಿವಿ ವತಿಯಿಂದ ಯುವತಿ ಓದಿಗಾಗಿ ಟ್ಯಾಬ್ ವಿತರಣೆ ಸಹ ಮಾಡಲಾಗಿದೆ. ಇದನ್ನೂ ಓದಿ: ಹೂ ಮಾರುವ ಹುಡ್ಗಿ ಮತ್ತು ಪಬ್ಲಿಕ್ ಟಿವಿ ಬಿಗ್ ಬುಲೆಟಿನ್‍ನ ಆ ಬ್ರೇಕ್..!

  • ಜನರ ಬಳಿಗೆ ವ್ಯಾಕ್ಸಿನ್ ವಿತರಣೆ ತಲುಪಿಸಲು ಬಿಬಿಎಂಪಿ ಕ್ರಮ

    ಜನರ ಬಳಿಗೆ ವ್ಯಾಕ್ಸಿನ್ ವಿತರಣೆ ತಲುಪಿಸಲು ಬಿಬಿಎಂಪಿ ಕ್ರಮ

    ಬೆಂಗಳೂರು: ನಗರದಲ್ಲಿ ವ್ಯಾಕ್ಸಿನ್ ವಿರಣೆಗೆ ಹೆಚ್ಚು ಒತ್ತು ಕೊಡುತ್ತಿದ್ದು, 45 ವರ್ಷ ಮೇಲ್ಪಟ್ಟವರಲ್ಲಿ ಈಗಾಗಲೇ ಶೇ. 50 ಜನರಿಗೆ ವ್ಯಾಕ್ಸಿನ್ ಹಂಚಲಾಗಿದೆ. ಇನ್ನೂ ಹೆಚ್ಚಳ ಮಾಡುವ ಬಗ್ಗೆ ಮಾತನಾಡಿದ, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಈಗಾಗಲೇ ಲಸಿಕೆ ನೀಡುವ ಕಾರ್ಯಕ್ರಮ ಹೆಚ್ಚು ವೇಗದಿಂದ ನಡೆಯುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಕೆಲವು ವಾರ್ಡ್ ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲ. ಆ ವಾರ್ಡ್ ಗಳಲ್ಲಿ ಇತರೆ ಜಾಗಗಳಲ್ಲಿ ಲಸಿಕೆ ಕ್ಯಾಂಪ್ ನಡೆಸಲಾಗ್ತಿದೆ. 18 ರಿಂದ 45 ವರ್ಷದ ಜನರಿಗೆ, 30 ವಿಭಾಗಗಳ ಜನರಿಗೆ ಅವರು ಕೆಲಸ ಮಾಡುವ ಜಾಗಗಳಿಗೆ ಹೋಗಿ ಅವರಿಗೆ ಲಸಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದರು.

    ಸದ್ಯ ಬಂದಿರುವ ಮಾಹಿತಿಯ ಪ್ರಕಾರ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸಾಕಷ್ಟು ಜನ ದೂರದಲ್ಲಿದ್ದಾರೆ. ಅವರ ಸ್ಥಳಕ್ಕೆ ಹೋದರೆ ಮಾತ್ರ ಕೆಲವರು ಲಸಿಕೆ ಪಡೆಯುತ್ತಾರೆ. ಈ ಹಿನ್ನಲೆ ಈಗಾಗಲೇ ಡೋರ್ ಟೂ ಡೋರ್ ಸರ್ವೇ ಮಾಡುತ್ತಿದ್ದೇವೆ. ಸರ್ವೆಯಲ್ಲಿ ಯಾರು ಲಸಿಕೆ ಪಡೆದಿಲ್ಲ ಅವರ ಪಟ್ಟಿ ಮಾಡುತ್ತಿದ್ದೇವೆ. ಪಟ್ಟಿಯಲ್ಲಿ ಯಾವ ಕ್ಷೇತ್ರದ ಜನ ಲಸಿಕೆ ತೆಗೆದುಕೊಂಡಿಲ್ಲ. ಲಸಿಕೆ ತೆಗೆದುಕೊಳ್ಳಲು ಯಾಕೆ ಮುಂದಾಗಿಲ್ಲ ಅನ್ನೊದನ್ನ ತಿಳಿದುಕೊಂಡು ಆ ಸ್ಥಳದಲ್ಲೇ ವಿಶೇಷ ಲಸಿಕೆ ಕ್ಯಾಂಪ್ ಮಾಡಲು ಮುಂದಾಗಿದ್ದೇವೆ ಎಂದರು. ಇದನ್ನೂ ಓದಿ: ಲಸಿಕೆ ಪಡೆಯದವರಿಗೆ ಇಲ್ಲ ಹೇರ್ ಕಟ್ಟಿಂಗ್, ಶೇವಿಂಗ್ – ಸಲೂನ್ ಮಾಲೀಕರ ನಿರ್ಧಾರ

    ಈ ಕುರಿತು ಎಲ್ಲ ಸಿದ್ಧತೆಯಾಗಿದ್ದು ಮುಂದಿನ ದಿನಗಳಲ್ಲಿ ಚಾಲ್ತಿಗೆ ಬರಲಿದೆ. ಫ್ಯಾಕ್ಟರಿಗಳಲ್ಲಿ ಈಗಾಗಲೇ ಲಸಿಕೆ ಕ್ಯಾಂಪ್ ಗಳನ್ನ ಮಾಡಲಾಗಿದೆ. ಬೆಂಗಳೂರು ಅಪಾರ್ಟ್‍ಮೆಂಟ್ ಫೆಡರೇಶನ್ ಅವರು ಕೂಡ ಖಾಸಗಿ ಆಸ್ಪತ್ರೆಗಳ ಜೊತೆ ಲಿಂಕ್ ಅಪ್ ಮಾಡಿಕೊಂಡು ಲಸಿಕೆ ಕ್ಯಾಂಪ್ ಮಾಡಿದ್ದಾರೆ. ಇನ್ನು ಖಾಸಗಿ ರಂಗದ ಸಂಸ್ಥೆಗಳು ಹಲವು ಕಡೆ ಕ್ಯಾಂಪ್ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೆ ಉಪಯೋಗವಾಗುವಂತೆ ಜನರ ಮನೆಯ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಕೆಲಸ ಬಿಬಿಎಂಪಿ ಕಡೆಯಿಂದ ಮಾಡುತ್ತೇವೆ ಎಂದರು.

  • ಬೆಂಗಳೂರಲ್ಲಿ ಡೆಲ್ಟಾ ಪ್ಲಸ್ ಬಂದಿದ್ದ ವ್ಯಕ್ತಿ ಸಂಪೂರ್ಣ ಗುಣಮುಖ- ಗೌರವ್ ಗುಪ್ತ

    ಬೆಂಗಳೂರಲ್ಲಿ ಡೆಲ್ಟಾ ಪ್ಲಸ್ ಬಂದಿದ್ದ ವ್ಯಕ್ತಿ ಸಂಪೂರ್ಣ ಗುಣಮುಖ- ಗೌರವ್ ಗುಪ್ತ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿಯೂ ಒಂದು ಪ್ರಕರಣದಲ್ಲಿ ಕೊರೊನಾ ಕುಲಾಂತರಿ ಸೋಂಕು ಡೆಲ್ಟಾ ಪ್ಲಸ್ ಕಂಡುಬಂದಿದೆ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಕೇಸ್ ಡೆಲ್ಟಾ ಪ್ಲಸ್ ಅಂತ ಗುರುತಿಸಲಾಗಿದೆ. ಈ ಕೇಸ್ ಗಳ ಪರಿಶೀಲನೆ ಮಾಡಿದಾಗ ಬಹಳ ಹಿಂದೆಯೇ ರಾಜ್ಯ ಸರ್ಕಾರದ ಮಟ್ಟದಲ್ಲಿ ಜಿನೋಮ್ ಸೀಕ್ವೆನ್ಸ್ ಸಹ ಮಾಡಲಾಗಿತ್ತು. ಆ ಮೂಲಕ ಇದು ಗುರುತಿಸಲಾಗಿದೆ. ಇಡೀ ದೇಶದಲ್ಲಿಯೇ ಮ್ಯೂಟೆಂಟ್ ವೈರೆಸ್ ಡೆಲ್ಟಾ ಪ್ಲಸ್ ಎಂದು ಪ್ರತ್ಯೇಕಿಸಿ ಈ ಕೇಸ್ ಗುರುತಿಸಲಾಗಿದೆ. ಡೆಲ್ಟಾ ಗಿಂತ ಸ್ವಲ್ಪ ಭಿನ್ನವಾದ ವೆರೆಯಂಟ್ ಅಂತ ಪ್ರತ್ಯೇಕಿಸಿ ಇಡಲಾಗಿತ್ತು. ಈಗ ಇದಕ್ಕೆ ಡೆಲ್ಟಾ ಪ್ಲಸ್ ಎಂದು ಹೆಸರಿಸಲಾಗಿದೆ ಎಂದರು.

    ಬಹಳ ಹಿಂದೆ ಆಗಿರುವ ಪ್ರಕರಣ ಆದ್ದರಿಂದ ಈ ವ್ಯಕ್ತಿ ಈಗ ಗುಣಮುಖರಾಗಿದ್ದಾರೆ. ಇವರ ಸಂಪರ್ಕದಲ್ಲಿದ್ದ ಕುಟುಂಬಸ್ಥರು ಸಹ ಗುಣಮುಖರಾಗಿದ್ದಾರೆ. ನಗರದಲ್ಲಿಯೂ ಜಿನೋಮ್ ಸೀಕ್ವೆನ್ಸಿಂಗ್ ಬಗ್ಗೆ ಹೆಚ್ಚು ಒತ್ತು ಕೊಡಲಾಗುತ್ತದೆ ಎಂದರು.

    ಆರ್ ಟಿ ಪಿಸಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಾಗ, ಯಾವ ವೈರಸ್ ವೆರೆಯಂಟ್ ಎಂಬ ಬಗ್ಗೆಯೂ ಚೆಕ್ ಮಾಡಲಾಗುತ್ತದೆ. ಇದು ಹೊಸ ಕೆಲಸ ಹೆಚ್ಚಿನ ಒತ್ತು ಕೊಟ್ಟು ಕೆಲಸ ಮಾಡಲಾಗುತ್ತದೆ ಎಂದರು. ಈ ಡೆಲ್ಟಾ ಪ್ಲಸ್ ವೈರಸ್ ಹಾಗೂ ಡೆಲ್ಟಾ ವೈರಸ್ ನ ನಡುವೆ ಇರುವ ವ್ಯತ್ಯಾಸ, ಗುಣಲಕ್ಷಣಗಳ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದರು. ತಜ್ಞರ ಸಲಹೆ ಮೇರೆಗೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.

    ಇನ್ನು ಬಿಬಿಎಂಪಿ ನಡೆಸಿರುವ ಡೆತ್ ಆಡಿಟ್ ರಿಪೋರ್ಟ್ ವಿಚಾರವಾಗಿ ಮಾತನಾಡಿದ ಗೌರವ್ ಗುಪ್ತಾ, ಈ ವಿಶ್ಲೇಷಣೆ ಪಡೆಯಲಾಗಿದೆ. ಈ ಪ್ರಕರಣಗಳಲ್ಲಿ 6 ಲಕ್ಷಕ್ಕಿಂತ ಹೆಚ್ಚು ಮಂದಿ ಹೋಂ ಐಸೋಲೇಷನ್ ನಲ್ಲಿದ್ದರು. ಎರಡೂ ಅಲೆಯಲ್ಲಿ 15 ಲಕ್ಷ ಕೇಸ್ ಈಗಾಗಲೇ ವರದಿಯಾಗಿದೆ. ಈ ಪೈಕಿ ಶೇ.90 ರಷ್ಟು ಜನರು ಹೋಂ ಐಸೂಲೇಷನ್ ನಲ್ಲಿದ್ದರು. ಶೇ.1 ಕ್ಕಿಂತ ಕಡಿಮೆ ಹೋಂ ಐಸೋಲೇಷನ್ ಡೆತ್ ಆಗಿದೆ. ಇದನ್ನು ಇನ್ನೂ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಇನ್ನು ನಿನ್ನೆ ನಗರದಲ್ಲಿ ಗಾಳಿಪಟದ ದಾರದಿಂದ ಕತ್ತು ಕೊಯ್ದು ವ್ಯಕ್ತಿಯೊಬ್ಬರಿಗೆ ತೀವ್ರ ಗಾಯವಾಗಿರುವ ವಿಚಾರವಾಗಿ ಮಾತನಾಡಿ, ಗಾಳಿಪಟ ಮಾಂಜಾ ದಾರ ಬ್ಯಾನ್ ಆಗಿದೆ. ಇದನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಎಂಎಸ್‍ವಿ ಕನ್‍ಸ್ಟ್ರಕ್ಷನ್ ಕಂಪನಿ ವಿರುದ್ಧ ಕಾನೂನು ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

    ಎಂಎಸ್‍ವಿ ಕನ್‍ಸ್ಟ್ರಕ್ಷನ್ ಕಂಪನಿ ವಿರುದ್ಧ ಕಾನೂನು ಕ್ರಮ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

    ಬೆಂಗಳೂರು: ಕಾನುನು ಉಲ್ಲಂಘಿಸಿ ಟೆಂಡರ್ ಪಡೆದುಕೊಂಡಿರುವ ಆರೋಪವಿರುವ ಎಂಎಸ್‍ವಿ ಕನ್‍ಸ್ಟ್ರಕ್ಷನ್ ಕಂಪನಿ ವಿರುದ್ಧ ಸದ್ಯದಲ್ಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ತಿಳಿಸಿದ್ದಾರೆ.

    ನಿನ್ನೆ ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ರಮೇಶ್ ಎನ್ ಆರ್ ಅವರು ಈ ಬಗ್ಗೆ ವಿಸ್ತೃತವಾಗಿ ಬಿಬಿಎಂಪಿ ಆಯುಕ್ತರಿಗೆ ದೂರನ್ನ ಸಲ್ಲಿಸಿದ್ದರು. ಈ ದೂರಿನಲ್ಲಿ ಹಲವಾರು ವರ್ಷಗಳಿಂದಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ನೂರಾರು ಕೋಟಿ ರೂಪಾಯಿಗಳ ಮೊತ್ತದ ಕಾಮಗಾರಿಗಳ ಗುತ್ತಿಗೆದಾರರಾಗಿ ಅವಕಾಶ ಪಡೆದಿರುವ ವೆಂಕಟೇಶ್ (MSV Construction Company) ಎಂಬ ಗುತ್ತಿಗೆದಾರರು ತಮ್ಮ ಲೆಕ್ಕ ಪರಿಶೋಧಕರ ಮೂಲಕ ಸತ್ಯಕ್ಕೆ ದೂರವಾದ ಮಾಹಿತಿಗಳನ್ನು / ದಾಖಲೆಗಳನ್ನು ನೀಡಿ ನೂರಾರು ಕಾಮಗಾರಿಗಳ ಗುತ್ತಿಗೆಯನ್ನು ಪಡೆದಿದ್ದಾರೆ. ಪ್ರಸ್ತುತ ಇವರು-ಅವರೇ ಪ್ರಮಾಣೀಕರಿಸಿರುವ ದಾಖಲೆಗಳಂತೆ ಪಾಲಿಕೆ ವ್ಯಾಪ್ತಿಯಲ್ಲಿ ಅವರ ಒಟ್ಟು Bid Capacity ಮೊತ್ತ ಕೆ. 108.88 (ಒಂದು ನೂರಾ ಎಂಟು ಕೋಟಿ ಎಂಬತ್ತೆಂಟು ಲಕ್ಷ) ಕೋಟಿಗಳಾಗಿರುತ್ತದೆ. ಆದರೆ, ಅವರು ನಕಲಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಸುಮಾರು 380 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತದ ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸಿರುವ ಅಂಶ ಬೆಳಕಿಗೆ ಬಂದಿರುತ್ತದೆ.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಆರ್.ಅಂಬಿಕಾಪತಿ, ಸಾಮಾಜಿಕ ಹೋರಾಟಗಾರ ನರಸಿಂಹ ಮೂರ್ತಿ ಹಾಗೂ ವಕೀಲರುಗಳಾದ ಹೆಚ್.ಎನ್.ರವಿಶಂಕರ್, ಎಂ. ಮುರಳಿಧರ್ ಮತ್ತು ತೇಜರಾಜ್ ಅವರುಗಳು ಈ ಸಂಬಂಧ ಎಂ.ಎಸ್.ವೆಂಕಟೇಶ್ ಅಲಿಯಾಸ್ ಗಿಲಿ ಗಿಲಿ ವೆಂಕಟೇಶ್ ಎಂಬ ಗುತ್ತಿಗೆದಾರರ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ನಗರಾಭಿವೃದ್ಧಿಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಬಿಬಿಎಂಪಿಯ ಆಯುಕ್ತರಿಗೆ ಹಲವಾರು ದೂರುಗಳನ್ನು ನೀಡಿದ್ದಾರೆ.

    ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳ ಮತ್ತು ಪಾಲಿಕೆಯ ಆಯುಕ್ತರ ಆದೇಶದಂತೆ ಪಾಲಿಕೆಯ ಟಿವಿಸಿಸಿ ಇಲಾಖೆಯ ಅಧಿಕಾರಿಗಳು ವೆಂಕಟೇಶ್ ಅವರಿಗೆ ಸಂಬಂಧಿಸಿದಂತೆ ಸಮಗ್ರವಾದ ವರದಿಯನ್ನು ಪಾಲಿಕೆಯ ಮುಖ್ಯ ಆಯುಕ್ತರಿಗೆ ಸಲ್ಲಿಸಿರುತ್ತಾರೆಂಬ ವಿಷಯ ತಿಳಿದು ಬಂದಿರುತ್ತದೆ.

    ಕಳೆದ ಒಂದೂವರೆ ವರ್ಷದ ಹಿಂದಷ್ಟೇ, ಪಾಲಿಕೆ ವ್ಯಾಪ್ತಿಯ ರಸ್ತೆಗಳ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆಂದು ಪ್ರಾರಂಭಿಸಲಾಗಿರುವ Hot Batch Mix Plant ನ ಗುತ್ತಿಗೆಯನ್ನು ಪಡೆದುಕೊಂಡಿದ್ದ ಇದೇ ವೆಂಕಟೇಶ್ ಅವರು ಗುತ್ತಿಗೆ ಕಾರ್ಯವನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ನೀಡಿದ್ದ ಆದೇಶದಂತೆ ಅವರ ಗುತ್ತಿಗೆಯನ್ನು ರದ್ದು ಪಡಿಸಿರುವುದು ಸರಿಯಷ್ಟೇ. ಆದರೆ, ಗುತ್ತಿಗೆ ಕರಾರುಪತ್ರದ ಷರತ್ತುಗಳನ್ನು ಪಾಲಿಸದ ಉಲ್ಲಂಘಿರುವ ವೆಂಕಟೇಶ್ ಅವರನ್ನು ನಿಯಮಗಳಿಗೆ ಅನುಸಾರವಾಗಿ ಕಪ್ಪುಪಟ್ಟಿಗೆ ಸೇರಿಸಬೇಕಿರುತ್ತದೆ ಎಂದು ಆಗ್ರಹಿಸಿದ್ದರು.

    ಈ ಎಲ್ಲಾ ಕಾರಣಗಳಿಂದಾಗಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹಿತ ದೃಷ್ಟಿಯಿಂದ ವೆಂಕಟೇಶ್ (MSV Construction Company) ಎಂಬ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸುವುದು ಅತ್ಯಂತ ಸೂಕ್ತವಾಗಿರುತ್ತದೆ ಎಂಬ ವಾಸ್ತವವನ್ನು ತಿಳಿಸುತ್ತಾ, ಎಂತಹುದೇ ರಾಜಕೀಯ ಪ್ರಭಾವಗಳಿಗೆ ಒಳಗಾಗದೇ ವೆಂಕಟೇಶ್ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದರು.

    ಈ ಬಗ್ಗೆ ಇಂದು ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸದ್ಯದಲ್ಲೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

  • ಬೆಂಗಳೂರಲ್ಲಿ ಅನ್‍ಲಾಕ್ ಅನಿವಾರ್ಯ: ಗೌರವ್ ಗುಪ್ತಾ

    ಬೆಂಗಳೂರಲ್ಲಿ ಅನ್‍ಲಾಕ್ ಅನಿವಾರ್ಯ: ಗೌರವ್ ಗುಪ್ತಾ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನ್‍ಲಾಕ್ ಅನಿವಾರ್ಯ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಲ್ಲಿ ಅನ್ ಲಾಕ್ ಗೆ ಸಿದ್ಧವಾಗಬೇಕು. ಎರಡು ತಿಂಗಳು ಎಲ್ಲರೂ ನೊಂದಿದ್ದಾರೆ. ಹಂತ ಹಂತವಾಗಿ ಅನ್ ಲಾಕ್ ಆಗಲೇಬೇಕಾಗಿದೆ. ಎಲ್ಲ ವಲಯಗಳಲ್ಲೂ ಆನ್ ಲಾಕ್ ಆಗಬೇಕಿದೆ. ಉದ್ದಿಮೆಗಳು ಆರ್ಥಿಕ ಚೇತರಿಕೆ ಕಾಣಲು ಅಗತ್ಯ ಇದೆ ಎಂದರು.

    ಲಾಕ್ ಡೌನ್ ಸಡಿಲಿಕೆ ಹಂತ ಹಂತವಾಗಿ ಮಾಡಬೇಕು. ಕೇಸ್ ಪ್ರಮಾಣ ಕಡಿಮೆ ಆಗಬೇಕು, ತಳಮಟ್ಟದಲ್ಲಿ ಸೋಂಕಿತರು ಐಸೋಲೇಷನ್ ಆಗಬೇಕು. ಸದ್ಯದ ಸ್ಥಿತಿಯಲ್ಲಿ ಎರಡೂ ಆಗ್ತಾ ಇದೆ. ಸಾಮಾಜಿಕ ಜೀವನದ ಬಗ್ಗೆ ನಮಗೆ ಕಾಳಜಿ ಇದೆ. ಹಂತ ಹಂತವಾಗಿ ರಿಲೀಫ್ ಮಾಡಿದರೆ ಉತ್ತಮ ಎಂದು ಹೇಳುವ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡಿದರು.

     ಒಟ್ಟಿನಲ್ಲಿ ಜೂನ್ 7ರಂದು ಪ್ರಸ್ತುತ ಇರುವ ಲಾಕ್ ಡೌನ್ ಕೊನೆಗೊಳ್ಳಲಿದ್ದು, ಇತ್ತ ತಜ್ಞರು ಲಾಕ್ ಡೌನ್ ಮುಂದುವರಿಸಿ ಎಂದು ಹೇಳುತ್ತಿದ್ದಾರೆ. ಆದರೆ ಸರ್ಕಾರ ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

  • ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

    ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?

    ಬೆಂಗಳೂರು:  ದಕ್ಷಿಣ ವಿಭಾಗದ ಕೋವಿಡ್ ವಾರ್ ರೂಂನಲ್ಲಿ ಒಂದೇ ಸಮುದಾಯದ 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ ಎಂಬುದಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವಿವರಣೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿಗಳ ಪ್ರಕಾರ ಇವರನ್ನು ಕೆಲವು ದಿನದ ಹಿಂದೆಯೇ ಕೆಲಸದಿಂದ ತೆಗೆದು ಹಾಕಲಾಗಿದೆ. ಇವರು ಒಂದು ಸಂಸ್ಥೆಯ ಮೂಲಕ ಬಂದಿರುವ ವ್ಯಕ್ತಿಗಳು. ಕೋವಿಡ್ 19 ವಾರ್ ರೂಂನಲ್ಲಿರುವವರು ಎಲ್ಲ ತಾತ್ಕಾಲಿಕ ಗುತ್ತಿಗೆ ಸಿಬ್ಬಂದಿ ಎಂದು ತಿಳಿಸಿದರು.

    ಯಾಕೆ ಅವರ ಮೇಲೆ ಆಪಾದನೆ ಇದೆ? ಯಾಕೆ ಅವರನ್ನು ತೆಗೆಯಲಾಗಿದೆ? ಎನ್ನುವುದನ್ನು ಸ್ಥಳೀಯವಾಗಿ ಪರಿಶೀಲನೆ ಮಾಡಿ ಹೇಳುತ್ತಾರೆ. ನಮ್ಮ ದಕ್ಷಿಣ ವಲಯದಲ್ಲಿರುವ ವಲಯವಾರು ಕಮಿಷನರ್ ತುಳಸಿ ಮದ್ದಿನೇನಿ ಆ ವಿಚಾರಕ್ಕೆ ಉತ್ತರ ಕೊಡುತ್ತಾರೆ ಎಂದು ಹೇಳಿದರು.

    ದಕ್ಷಿಣ ವಲಯ ವಾರ್ ರೂಂ ಏಜೆನ್ಸಿ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ಏಜೆನ್ಸಿಗಳ ವರ್ತನೆ, ಅವರು ಯಾವ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನೆಲ್ಲಾ ನೋಡಿ ಏಜೆನ್ಸಿಗಳ ಬದಲಾವಣೆ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಅಲ್ಲದೆ ಹೊಸ ಸಾಫ್ಟ್ ವೇರ್ ಅಳವಡಿಸಿಕೊಳ್ಳುವ ಬಗ್ಗೆಯೂ ಸಿದ್ಧತೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.

    ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ತಪ್ಪು ನಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ಪ್ರತ್ಯೇಕ ದೂರುಗಳು ಬಂದಿವೆ. ದಿನಕ್ಕೆ 800 ರಿಂದ 1000 ಪ್ರಕರಣಗಳಲ್ಲಿ ಬೆಡ್ ಅಲಾಟ್ ಮಾಡುತ್ತಿದ್ದೇವೆ. ಕೆಲವು ಪ್ರಕರಣಗಳಲ್ಲಿ ನಾವು ಬೆಡ್ ಹಂಚಿಕೆ ಮಾಡಿದ ನಂತರವೂ ಜನರು ಅಲ್ಲಿಗೆ ಹೋಗುವುದಿಲ್ಲ. ಆಗ ಅದನ್ನು ಅನ್ ಬ್ಲಾಕ್ ಮಾಡಿ ಇನ್ಮೊಬ್ಬರಿಗೆ ಅಲಾಟ್ ಮಾಡುವ ಪ್ರಕ್ರಿಯೆ ಇದೆ ಎಂದು ತಿಳಿಸಿದರು.

    ಕಳೆದ ವರ್ಷ ಅಭಿವೃದ್ಧಿ ಮಾಡಿರುವ ಸಾಫ್ಟ್ ವೇರ್ ನಲ್ಲೇ ಬೆಡ್ ಬ್ಲಾಕಿಂಗ್ ಮಾಡಲಾಗುತ್ತಿದೆ. ಸಾಫ್ಟ್ ವೇರ್ ಅಭಿವೃದ್ಧಿಪಡಿಸುವ ಅಗತ್ಯವೂ ಇದ್ದು ಇದಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಿದ್ದೇವೆ. ಪೊನ್ನುರಾಜ್ ನೇತೃತ್ವದಲ್ಲಿರುವ ಸಮಿತಿ ಇವತ್ತು ನಮಗೆ ವರದಿ ನೀಡಲಿದೆ. ಸಾಫ್ಟ್ ವೇರ್ ಸುಧಾರಣೆ ಮಾಡುವ ನಿಟ್ಟಿನಲ್ಲೂ ಈಗಾಗಲೇ ಕ್ರಮವನ್ನ ತೆಗೆದುಕೊಂಡಿದ್ದಾರೆ ಎಂದರು.


    ಹಿಂದೆ ವಾರ್ ರೂಂನಲ್ಲಿ ಐಎಎಸ್ ಕೆಎಎಸ್ ಪ್ರೊಬೇಷನರಿಗಳನ್ನು ನೇಮಿಸಲಾಗಿತ್ತು. ವಾರ್ ರೂಮ್ ನಲ್ಲಿ ಸರ್ಕಾರಿ ಅಧಿಕಾರಿ ಖಾಯಂ ಆಗಿ ಇರಬೇಕು. ಹೀಗಿದ್ದಾಗ ವಾರ್ ರೂಂ ಮೇಲುಸ್ತುವಾರಿ ಮಾಡಲು ಸಾಧ್ಯವಾಗುತ್ತದೆ. ಮ್ಯಾನೇಜ್ಮೆಂಟ್ ಸ್ಟ್ರಕ್ಚರ್ಸ್ ನಲ್ಲೂ ಕೆಲವು ಸುಧಾರಣೆ ಮಾಡುತ್ತಿದ್ದೇವೆ. ಇದರಿಂದಾಗಿ ಜನರ ಅನುಮಾನವನ್ನು ಪರಿಹರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಆಸ್ಪತ್ರೆಗಳಿಗೆ ಎಷ್ಟು ಸಾಮರ್ಥ್ಯ ಇದೆಯೋ ಅದಕ್ಕೆ ತಕ್ಕಷ್ಟು ರೋಗಿಗಳನ್ನು ಅಡ್ಮಿಟ್ ಮಾಡಿಕೊಳ್ಳಬೇಕು. ಕೆಲವು ಆಸ್ಪತ್ರೆಗಳಲ್ಲಿ ಅಷ್ಟೊಂದು ಪ್ರಮಾಣದಲ್ಲಿ ಆಕ್ಸಿಜನ್ ಇರುವುದಿಲ್ಲ. ಸ್ಟೋರೇಜ್ ವ್ಯವಸ್ಥೆ ಇರುವುದಿಲ್ಲ. ಆದರೂ ಹೆಚ್ಚಿನ ರೋಗಿಗಳನ್ನ ಅಡ್ಮಿಟ್ ಮಾಡುತ್ತಿರುವುದರಿಂದ ತೊಂದರೆ ಆಗುತ್ತಿದೆ ಎಂದು ವಿವರಿಸಿದರು.