Tag: garbage dumping

  • ರಾತ್ರೋರಾತ್ರಿ ಕಸ ಡಂಪಿಂಗ್ ಮಾಡ್ತಿದ್ದಾಗ ಸಿಕ್ಕಿಬಿದ್ದ ಬಿಬಿಎಂಪಿ ಲಾರಿಗಳು

    ರಾತ್ರೋರಾತ್ರಿ ಕಸ ಡಂಪಿಂಗ್ ಮಾಡ್ತಿದ್ದಾಗ ಸಿಕ್ಕಿಬಿದ್ದ ಬಿಬಿಎಂಪಿ ಲಾರಿಗಳು

    – ಗ್ರಾಮವನ್ನ ಗಬ್ಬೆಬ್ಬಿಸಿರುವ ಬಿಬಿಎಂಪಿ ವಿರುದ್ಧ ಆಕ್ರೋಶ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದ್ದು, ಕಸ ಹಾಕಲು ಜಾಗವಿಲ್ಲದೆ ನಗರದ ಹೊರವಲಯದ ಜಮೀನೊಂದರಲ್ಲಿ ಬಿಬಿಎಂಪಿ ಕಸದ ಲಾರಿಗಳು ಡಂಪಿಂಗ್ ಮಾಡಿ ಗ್ರಾಮವೊಂದು ಗಬ್ಬು ನಾರುವಂತೆ ಮಾಡಿಬಿಟ್ಟಿದೆ.

    ರಾತ್ರೋರಾತ್ರಿ ರಸ್ತೆಗಳಲ್ಲಿ, ಬೆಂಗಳೂರು ಸುತ್ತಮುತ್ತಲ ಗ್ರಾಮದ ಜಮೀನುಗಳಲ್ಲಿ ಕಸ ಸುರಿದು ಬಿಬಿಎಂಪಿ ಕಸದ ಲಾರಿಗಳು ಹೋಗುತ್ತಿದೆ. ಹೀಗೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಮೈಲ್ ಸಂದ್ರ ಗ್ರಾಮದಲ್ಲಿ ಬಿಬಿಎಂಪಿ ಕಸದ ಲಾರಿಗಳು ಕಸ ಡಂಪಿಂಗ್ ಮಾಡಿ ಇಡೀ ಗ್ರಾಮವನ್ನೇ ಗಬ್ಬು ನಾರುವಂತೆ ಮಾಡಿದೆ. ಬಿಬಿಎಂಪಿ ಇಲ್ಲಿ ಕಸ ಡಂಪಿಂಗ್ ಮಾಡಲು ಯಾವುದೇ ಒಪ್ಪಿಗೆ ಪಡೆದಿಲ್ಲ. ಆದರೂ ಕೂಡ ರಾತ್ರೋರಾತ್ರಿ ಅಥವಾ ಬೆಳಗಿನ ಜಾವ ಬಿಬಿಎಂಪಿ ಕಸದ ಲಾರಿಗಳು ಮೈಲ್ ಸಂದ್ರದಲ್ಲಿ ಕಸ ಡಂಪಿಂಗ್ ಮಾಡಿ ಹೋಗುತ್ತಿದೆ.

    ಹೀಗೆ ಬೆಳಗಿನ ಜಾವ 3ಗಂಟೆ ಸುಮಾರಿಗೆ ಬಿಬಿಎಂಪಿ ಲಾರಿಗಳ ಚಾಲಕರು ಮೈಲ್ ಸಂದ್ರ ನಿವಾಸಿ ಪಾಪರಾಜು ಜಮೀನಿನಲ್ಲಿ ಕಸ ಡಂಪಿಂಗ್ ಮಾಡುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಕೆಲ ಚಾಲಕರು ಲಾರಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಊರಿನಲ್ಲಿ ಕಸ ಸುರಿದ ಕಾರಣಕ್ಕೆ ಗ್ರಾಮದ ಸುತ್ತಮುತ್ತ ಗಬ್ಬು ನಾರುತ್ತಿದೆ. ಹೀಗೆ ಬಿಬಿಎಂಪಿ ಬೇಕಾಬಿಟ್ಟಿ ಕಂಡಕಂಡಲ್ಲಿ ಕಸ ಸುರಿಯುವುದು ತಪ್ಪು ಎಂದು ಗ್ರಾಮಸ್ಥರು ಆಕ್ರೋಕ ವ್ಯಕ್ತಪಡಿಸಿದ್ದಾರೆ. ನಿರ್ಲಕ್ಷ್ಯ ತೋರಿದ ಬಿಬಿಎಂಪಿ ಅಧಿಕಾರಿಗಳಿಗೆ ಗ್ರಾಮಸ್ಥರು ಶಾಪ ಹಾಕುತ್ತಿದ್ದಾರೆ.

  • ಕಸಕ್ಕೂ ಬಂತು ಬಾರ್ ಕೋಡ್

    ಕಸಕ್ಕೂ ಬಂತು ಬಾರ್ ಕೋಡ್

    ಬೆಂಗಳೂರು: ಕಸದ ಆಟೋ, ಟಿಪ್ಪರ್‌ಗಳ ತಪ್ಪು ಲೆಕ್ಕದ ತಲೆನೋವಿನಿಂದ ಪಾರಾಗಲು ಪಾಲಿಕೆ ಹೊಸ ಐಡಿಯಾ ಮಾಡಿದೆ. ಇನ್ನು ರೀಡ್ ಟ್ಯಾಗ್ ಇನ್ ಮಿನಿಟ್ಸ್ ಬಾರ್ ಕೋಡ್‍ಗಳನ್ನ ಆಟೋಗಳಿಗೆ ಅಳವಡಿಸಲು ಪಾಲಿಕೆಯಿಂದ ಸೂಚಿಸಲಾಗಿದೆ.

    ಈ ಪ್ರಕಾರ ಜಿಯೋ ಟ್ಯಾಗಿಂಗ್ ವ್ಯವಸ್ಥೆ ಮತ್ತಷ್ಟು ಕಾರ್ಯೋನ್ಮುಖವಾಗಲಿದೆ. ಆಗ ಪ್ರತಿ ರಸ್ತೆಗೂ ಸಹ ಹಾಕಲಾದ ಬಾರ್ ಕೋಡ್‍ಗಳನ್ನು ಆಟೋಗಳು ಸ್ಕ್ಯಾನ್ ಮಾಡುವ ಮೂಲಕ ಕಸ ತೆಗೆಯಲಾಗಿದೆ ಎಂಬ ದೃಢಿಕರಣ ನೀಡಬೇಕಾಗುತ್ತದೆ. ಈ ಮೂಲಕ ಆಟೋ ತಪ್ಪು ಲೆಕ್ಕ ಹಾಗೂ ಮನೆಗಳ ಕಸ ತೆಗೆಯದೇ ಇರುವುದನ್ನ ತಪ್ಪಿಸಬಹುದು ಎಂದು ವಿಶೇಷ ಆಯುಕ್ತ ರಂದೀಪ್ ಮಾಹಿತಿ ನೀಡಿದರು.

    ಕಸದಿಂದ ವಿದ್ಯುತ್ ಉತ್ಪಾದನೆಗೆ ಕಡೆಗೂ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಗರದ ಹೊರವಲಯದ ವಿದ್ಯುತ್ ಉತ್ಪಾದನೆ ಘಟಕಗಳಿಗೆ ಈಗಾಗಲೇ ಟೆಂಡರ್ ನೀಡಲಾಗಿದೆ.

    ಚಿಕ್ಕನಾಗಮಂಗಲದ ತ್ರೀ ವೇಸ್ಟ್, ಕೆಪಿಸಿಎಲ್‍ನ ಬಿದಡಿ ಸಂಸ್ಥೆ, ದೊಡ್ಡಬಿದಿರೆಕಲ್ಲಿನ ಇಂಡಿಯಂ, ಕನ್ನಹಳ್ಳಿಯ ಸಾತರಾಂ ಸೇರಿದಂತೆ ನಗರದ 4 ಕಡೆ ವಿದ್ಯುತ್ ಉತ್ಪಾದನೆಗೆ ತಯಾರಿ ನಡೆಯುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದರು. ಈ ಘಟಕಗಳು ಕೆಲಸ ಆರಂಭಿಸಿದರೆ ಮುಂದಿನ ವರ್ಷ ಕಸದಿಂದ ವಿದ್ಯುತ್ ತಯಾರಿಸಲು ಅನುಕೂಲ ಆಗಲಿದೆ. ಮಿಕ್ಸ್ ತ್ಯಾಜ್ಯವನ್ನ ನೀಡಿದರೆ ಟಾರ್ಗೆಟ್ ವಿದ್ಯುತ್ ಉತ್ಪಾದನೆ ಆಗಲಿದೆ.

    ಪಾರ್ಕ್‍ಗಳಲ್ಲಿ ಕಸ ನಿರ್ಹಣೆಗೆ ಚಿಂತನೆ:
    ಬೆಂಗಳೂರಿನ 198 ವಾರ್ಡ್‌ಗಳಲ್ಲೂ ಸಾವಿರಕ್ಕೂ ಹೆಚ್ಚು ಪಾರ್ಕ್‍ಗಳಿದ್ದು, ಹಸಿ ಕಸವನ್ನ ಕಾಂಪೋಸ್ಟ್ ಮಾಡಲು ಆಲೋಚಿಸಲಾಗಿದೆ. ಈಗಾಗಲೇ ಹೆಚ್.ಎಸ್.ಆರ್ ಲೇಔಟ್‍ನಲ್ಲಿ ಯಶಸ್ವಿಯಾಗಿ ಈ ಯೋಜನೆ ನಡೆಯುತ್ತಿದೆ. ಕಸ ನಿರ್ವಹಣೆಗೆ ಪ್ರತ್ಯೇಕ ಕಾರ್ಪೋರೆಷನ್ ಮಾಡಿ, ಬೆಂಗಳೂರಿನ ಕಸ ನಿರ್ವಹಣೆಗಾಗಿ ಪತ್ಯೇಕ ಕಾರ್ಪೋರೆಟರ್ ಮಾಡಲು ಸರ್ಕಾರ ಸೂಚಿಸಿದೆ. ಈ ಸಂಬಂಧ ಬಿಬಿಎಂಪಿ ಸಿದ್ಧತೆ ಕೈಗೊಂಡಿದೆ. ಇದು ಪಾಲಿಕೆಯ ಅಂಗವಾಗಿಯೇ ಉಳಿಯಲಿದ್ದು, ಯಾವುದೇ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹೇಳಿದರು.

    ಸರ್ಕಾರದಿಂದ ಕ್ವಾರಿಗಳಿಗೆ ಅನುಮತಿ:
    ಇನ್ನು ಮುಂದಿನ 10 ದಿನಗಳಲ್ಲಿ ಬೆಳ್ಳಳಿ ಕ್ವಾರಿಗೆ ಹೋಗುತ್ತಿರುವ ಕಸ ಹಂತ ಹಂತವಾಗಿ ನಿಲ್ಲಿಸಲಾಗುತ್ತದೆ. ಈಗಾಗಲೇ ಬೆಳ್ಳಳಿ ಕ್ವಾರಿ ಭರ್ತಿಯಾಗಿದೆ. ಹೀಗಾಗಿ ಬೆಂಗಳೂರಿನ ಕಸ ಸುರಿಯಲು 15 ಕೋಟಿ ವೆಚ್ಚದಲ್ಲಿ ಮಿಟ್ಟಗಾನಹಳ್ಳಿ ಸಮೀಪ ಕ್ವಾರಿ ಸಿದ್ಧವಾಗಿದ್ದು, ಮುಂದಿನ 4 ತಿಂಗಳು ನಗರದ ಕಸ ಹಾಕಲು ಇಲ್ಲಿ ಅವಕಾಶವಿದೆ. ಸರ್ಕಾರಕ್ಕೆ ಸದ್ಯ ಬಾಗಲೂರು ಹಾಗೂ ಹುಲ್ಲಹಳ್ಳಿಯಲ್ಲೂ ಕ್ವಾರಿ ಪೀಟ್ ತಯಾರು ಮಾಡಲು ಪ್ರಸ್ತಾವನೆ ನೀಡಲಾಗಿದೆ ಎಂದು ವಿಶೇಷ ಆಯುಕ್ತ ರಂದೀಪ್ ತಿಳಿಸಿದರು.

  • ಸಿಲಿಕಾನ್ ಸಿಟಿ ಮತ್ತೆ ಗಾರ್ಬೇಜ್ ಸಿಟಿ- ರಾಜಧಾನಿಯಲ್ಲಿ 3 ದಿನಗಳಿಂದ ವಿಲೇವಾರಿ ಆಗಿಲ್ಲ ಕಸ

    ಸಿಲಿಕಾನ್ ಸಿಟಿ ಮತ್ತೆ ಗಾರ್ಬೇಜ್ ಸಿಟಿ- ರಾಜಧಾನಿಯಲ್ಲಿ 3 ದಿನಗಳಿಂದ ವಿಲೇವಾರಿ ಆಗಿಲ್ಲ ಕಸ

    ಬೆಂಗಳೂರು: ಬೆಳ್ಳಳ್ಳಿ ಕ್ವಾರಿಯಲ್ಲಿ ಕಸ ಹಾಕಲು ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿರುವ ಪರಿಣಾಮ ಕಳೆದ 3 ದಿನಗಳಿಂದ ರಾಜಧಾನಿಯಲ್ಲಿ ಕಸ ವಿಲೇವಾರಿ ಸ್ಥಗಿತಗೊಂಡಿದೆ. ಕಸ ಹಾಕಲು ಜಾಗ ಇಲ್ಲದ ಕಾರಣ ಕಸದ ಲಾರಿಗಳನ್ನು ರಸ್ತೆಯ ಬದಿಗಳಲ್ಲಿ ನಿಲ್ಲಿಸಲಾಗಿದೆ.

    ನಗರದ ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಗಾಂಧಿನಗರ ಹಲೆವೆಡೆ ಮನೆಗಳಿಂದ ತಂದ ಕಸ ರಸ್ತೆಗಳ ಮಧ್ಯೆಯೇ ನಿಂತಿದೆ. ಇದರಿಂದ ಗಲ್ಲಿ ಗಲ್ಲಿಗಳು ಗಬ್ಬು ನಾರುತ್ತಿದೆ. ಈ ಮೂಲಕ ಮತ್ತೆ ನಗರದಲ್ಲಿ ಕಸದ ಕಾಟ ಶುರುವಾಗಿದೆ.

    ಸದ್ಯ ಕಸ ವಿಲೇವಾರಿಯನ್ನು ಬೇರೆ ಕಡೆ ಮಾಡಲು ಪಾಲಿಕೆ ಬಳಿ ಸೂಕ್ತ ಪ್ಲಾನ್‍ನ ಕೊರತೆಯಿದ್ದು, ಬೆಂಗಳೂರಿನ ಜನರು ಮೂಗು ಮುಚ್ಚಿಕೊಂಡು ಓಡಾಡಲು ಸಿದ್ಧವಾಗಬೇಕಾಗಿದೆ.

    198 ವಾರ್ಡ್‍ಗಳಲ್ಲೂ ಕಸದ ಲಾರಿ ರಸ್ತೆ ಬದಿಯೇ ನಿಂತಿಕೊಂಡಿದೆ. ಕನಿಷ್ಠ 2 ಕ್ಯಾಂಪ್ಯಾಕ್ಟ್ ಕಸ ಶೇಖರಣೆಯಾಗಿದ್ದು, ಕಸದ ವಾಸನೆಯಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಕಸ ಹಾಕಬಾರದೆಂದು ಸ್ಥಳೀಯರು ವಿರೋಧಿಸಿದ್ದರಿಂಧ ಜನವರಿ ಅಂತ್ಯದ ವೇಳೆಗೆ ಕಸದ ಹಾಕುವ ಬೆಳ್ಳಳ್ಳಿ ಕ್ವಾರಿಯೂ ಕಸದಿಂದ ಮುಚ್ಚಲಿದೆ. ಬೆರಳೆಣಿಕೆಯ ದಿನಗಳಲ್ಲಿ ಪಾಲಿಕೆ ಬೇರೆ ಕಡೆ ಕಸ ಹಾಕಲು ಸ್ಥಳವನ್ನು ಹುಡುಕಬೇಕಾಗಿದೆ.

    ಬೆಳ್ಳಳ್ಳಿ ಸ್ಥಳೀಯರು ಈ ಹಿಂದೆ ಕಸ ವಿಲೇವಾರಿ ಮಾಡಲು ವ್ಯವಸ್ಥಿತವಾಗಿ ಕ್ರಮ ತೆಗೆದುಕೊಳ್ಳಿ. ಕ್ವಾರಿ ಸುತ್ತಮುತ್ತ ದುರ್ವಾಸನೆ ತಡೆಯುವಂತೆ ಕ್ರಮ ತೆಗೆದುಕೊಳ್ಳಿ ಅಂತ ಪಾಲಿಕೆ ಅಧಿಕಾರಿ ಬಳಿ ಮನವಿ ಮಾಡಿದ್ದರು. ಆದರೂ ಕೂಡ ಪಾಲಿಕೆ ಅಧಿಕಾರಿಗಳು ನಿರ್ಲಕ್ಷಿಸಿದ್ದರಿಂದ ಸಮಸ್ಯೆ ಈಗ ಉಲ್ಬಣಗೊಂಡಿದೆ. ಸ್ಥಳೀಯರ ಪ್ರತಿಭಟನೆಯಿಂದ ಕ್ವಾರಿ ಬಳಿ 250 ಟ್ರಕ್‍ಗಳು ನಿಂತಲ್ಲೇ ನಿಂತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv