Tag: gangsters

  • ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – 8 ದರೋಡೆಕೋರರ ಬಂಧನ, 248 ಕೆ.ಜಿ ಬೆಳ್ಳಿ ವಶ

    ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – 8 ದರೋಡೆಕೋರರ ಬಂಧನ, 248 ಕೆ.ಜಿ ಬೆಳ್ಳಿ ವಶ

    ದಾವಣಗೆರೆ: ಹೆದ್ದಾರಿಗಳಲ್ಲಿ ಕಾರುಗಳನ್ನು ನಿಲ್ಲಿಸಿ ಲಕ್ಷಾಂತರ ರೂಪಾಯಿ ದರೋಡೆ ಮಾಡುವವರನ್ನು ಬಂಧಿಸುವಲ್ಲಿ ಜಿಲ್ಲೆಯ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

    ರಾಬರಿ ಮಾಡಿ ಬೆಳ್ಳಿ ದೋಚಿದ್ದ ಎಂಟು ಜನರ ಬಂಧನ ಮಾಡಿದ್ದು, ಮಹರಾಷ್ಟ್ರ ಮೂಲದ ನಿಸಾರ್, ರಾಹುಲ್, ನದೀಮ್, ಜಾಕೀರ್, ಬಳ್ಳಾರಿಯ ನಾಗರಾಜ್, ಶ್ಯಾಮ್ ಸುಂದರ್, ಮನೋಹರ್ ಮತ್ತು ಉದಯ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 240 ಕೆಜಿ ಬೆಳ್ಳಿ, ಎರಡು ಕಾರ್, ಒಂದು ರಿವಾಲ್ವರ್ ಹಾಗೂ ಐದು ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಸ್ಸಿನಲ್ಲಿ ಸುಮಾರು 40 ಕೆ.ಜಿಯ 700 ಬೆಳ್ಳಿ ದೀಪಗಳು ವಶ

    ಕಳೆದ ಡಿಸೆಂಬರ್ 29 ರಂದು ಕೊಲ್ಲಾಪುರದಿಂದ ತಮಿಳುನಾಡಿಗೆ ಬೆಳ್ಳಿ ಆಭರಣ ಮಾಡಿಸಿಕೊಳ್ಳಲು ಜಗನ್ನಾಥ್ ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಇವರನ್ನ ಹಿಂಬಾಲಿಸಿದ ಹೆದ್ದಾರಿ ಹಂತಕರ ತಂಡ, ಒಂದು ದಿನ ಪೂರ್ತಿ ಅವರ ಹಿಂದೆಯೇ ತಿರುಗಿದ್ದಾರೆ. ಅಲ್ಲದೆ ಬಳ್ಳಾರಿಯಲ್ಲಿ ಕಾಂಟ್ಯಾಕ್ಟ್ ಇಟ್ಟುಕೊಂಡಿದ್ದ ತಂಡಕ್ಕೆ ಬೆಳ್ಳಿ ತಗೆದುಕೊಂಡು ಹೋಗುತ್ತಿರುವುದರ ಮಾಹಿತಿ ನೀಡಿದ್ದಾರೆ.

    ಈ ವೇಳೆ ಮತ್ತೊಂದು ತಂಡ ಕೂಡ ಇವರೊಂದಿಗೆ ಜಗನ್ನಾಥ್ ಅವರನ್ನ ಹಿಂಬಾಲಿಸಿಕೊಂಡು ಬಂದು 29ರ ರಾತ್ರಿ 3:30ಕ್ಕೆ ದಾವಣಗೆರೆ ತಾಲೂಕು ಹೆಬ್ಬಾಳ್ ಟೋಲ್ ಮುಂಭಾಗದ ಹುಣಸೆಕಟ್ಟೆ ಗ್ರಾಮದ ಬಳಿ ಅಡ್ಡಗಟ್ಟಿ ಜಗನ್ನಾಥ್ ಅವರನ್ನ ರಿವಾಲ್ವಾರ್ ನಿಂದ ಬೆದರಿಸಿ ಕಾರಿನಲ್ಲಿದ್ದ ಸುಮಾರು 300 ಕೆ.ಜಿ ಬೆಳ್ಳಿ ಗಟ್ಟಿಯನ್ನು ಹೊತ್ತೊಯ್ದಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬಂದ ಜಗನ್ನಾಥ್ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರಿಂದ, ಪೊಲೀಸರು ಹೆದ್ದಾರಿ ಹಂತಕರನ್ನ ಬಂಧಿಸಿ ಅವರಿಂದ 58 ಲಕ್ಷ ಮೌಲ್ಯದ ಸುಮಾರು 248 ಕೆ.ಜಿ ಬೆಳ್ಳಿ ವಶ ಪಡಿಸಿಕೊಂಡಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ದಾವಣಗೆರೆ ಎಸ್.ಪಿ ಚೇತನ್ ಆರ್ ಹೇಳಿದ್ದಾರೆ.

    ಹೆದ್ದಾರಿ ಡಕಾಯಿತರಲ್ಲಿ ನಿಸಾರ್, ಈ ಹಿಂದೆಯ ಜ್ಯುವೆಲ್ಲರಿ ಮಾಲೀಕ ಜಗನ್ನಾಥ್ ಅವರಿಗೆ ಪರಿಚಯವಾಗಿದ್ದನು. ಅಲ್ಲದೆ ಕೆಲವೊಂದು ಕೆಲಸಕ್ಕೆ ನಿಸಾರ್ ಅವರನ್ನ ಜಗನ್ನಾಥ್ ಬಳಸಿಕೊಂಡಿದ್ದರು. ಆದರೆ 28 ರಂದು ಜಗನ್ನಾಥ್ ಅವರು ಬೆಳ್ಳಿ ತೆಗೆದುಕೊಂಡು ತಮಿಳುನಾಡಿಗೆ ಹೋಗುವ ವಿಚಾರ ತಿಳಿದ ಮೇಲೆ ಅವರನ್ನ ಇತರೆ ಡಕಾಯಿತರಾದ ರಾಹುಲ್, ನದೀಮ್, ಜಾಕೀರ್, ಅವರನ್ನ ಬಳಸಿಕೊಂಡು ಜಗನ್ನಾಥ್ ಅವರ ಕಾರನ್ನ ಹಿಂಬಾಲಿಸಿದ್ದಾರೆ. ಜೊತೆಗೆ ಕರ್ನಾಟಕದವರಾದ ಬಳ್ಳಾರಿ ನಾಗ, ಶ್ಯಾಮ್ ಮನೋಹರ್, ಉದಯ್, ಅವರಿಗೆ ಮಾಹಿತಿ ಮುಟ್ಟಿಸಿದ್ದಾರಲ್ಲದೆ ಕೃತ್ಯಕ್ಕೆ ಅವರ ಸಾಥ್ ಕೂಡ ಪಡೆದುಕೊಂಡಿದ್ದಾರೆ. ಈ ವೇಳೆ ಎಲ್ಲರೂ ಒಟ್ಟುಗೂಡಿ ಹೆಬ್ಬಾಳ್ ಟೂಲ್ ಬಳಿಯ ಹುಣಸೆಕಟ್ಟೆ ಗ್ರಾಮದ ಬಳಿ ಅಡ್ಡಗಟ್ಟಿ ಗನ್ ನಿಂದ ಹೆದರಿಸಿ ಅವರ ಬಳಿ ಇದ್ದ ಬೆಳ್ಳಿ ಹಾಗೂ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ.

    ಕೇವಲ 10 ದಿನದಲ್ಲಿ ಬೆಳ್ಳಿ ಕದ್ದು ಜ್ಯುವೆಲ್ಲರಿ ಮಾಲೀಕರಿಗೆ ಭಯ ಹುಟ್ಟಿಸಿದ್ದ ಹೆದ್ದಾರಿ ಚೋರರು ಈಗ ಕಂಬಿ ಹಿಂದೆ ಅಂದರ್ ಆಗಿದ್ದಾರೆ. ಅಲ್ಲದೆ ಈ ಹಂತಕರನ್ನ ಬೇಧಿಸಿದ ಪೊಲೀಸ್ ತಂಡಕ್ಕೆ ಎಸ್‍ಪಿ ಚೇತನ್ ಬಹುಮಾನ ಕೂಡ ಘೋಷಣೆ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರೇಮಿಗಳಂತೆ ನಟಿಸಿ ಪೊಲೀಸರಿಂದ ಕಿಡ್ನಾಪರ್ಸ್ ಅರೆಸ್ಟ್!

    ಪ್ರೇಮಿಗಳಂತೆ ನಟಿಸಿ ಪೊಲೀಸರಿಂದ ಕಿಡ್ನಾಪರ್ಸ್ ಅರೆಸ್ಟ್!

    ಬೆಂಗಳೂರು: ಶಿವಾಜಿನಗರ ಪೊಲೀಸರು ಪ್ರೇಮಿಗಳಂತೆ ನಟಿಸಿ ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆಂಧ್ರ ಪ್ರದೇಶದಲ್ಲಿ ಅಪಹರಣಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ತಿಂಗಳ 9 ರಂದು ನಗರದ ಕ್ವೀನ್ಸ್ ರಸ್ತೆಯಲ್ಲಿ ಕಿಡ್ನಾಪ್ ನಡೆದಿತ್ತು. ಡೈರೆಕ್ಟ್ ಸೆಲ್ಲಿಂಗ್ ಟೂರ್ಸ್ ಆಂಡ್ ಟ್ರಾವೆಲ್ಸ್ ಸಿಬ್ಬಂದಿ ಕಾರ್ತಿಕ್ ಎಂಬವರನ್ನು ಕಿಡ್ನಾಪ್ ಮಾಡಲಾಗಿತ್ತು. ಆದರೆ ಈಗ ಪೊಲೀಸರು ಪ್ರೇಮಿಗಳಂತೆ ನಟನೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಹಫೀಜ್, ಗೌಸ್ ಪೀರ್, ಫಯಾಜ್ ಹಾಗೂ ಶೇಖ್ ಎಂಬವರು ಟ್ರಾವೆಲ್ಸ್ ನಲ್ಲಿ ಪ್ಯಾಕೇಜ್ ಬುಕ್ ಮಾಡಿದ್ದರು. ನಂತರ ಟೂರ್ ಪ್ಯಾಕೇಜ್ ಇಷ್ಟವಿಲ್ಲ ಎಂದು ಹಣ ನೀಡುವಂತೆ ಮಾಲೀಕನಿಗೆ ಬೆದರಿಕೆ ಹಾಕಿದ್ದರು. ಇಲ್ಲವಾದಲ್ಲಿ ಸಿಬ್ಬಂದಿ ಕಾರ್ತಿಕ್ ನನ್ನು ಕಿಡ್ನಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅದರಂತೆಯೇ ದಿನಾಂಕ 9ರಂದು ಟೂರ್ಸ್ ಆಂಡ್ ಟ್ರಾವೆಲ್ಸ್ ನ ಮಾಲೀಕ ಸಂಜೀವ್ ಗೆ ಕರೆ ಮಾಡಿ ಕಿಡ್ನಾಪ್ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

    ಇದರಿಂದ ಮಾಲೀಕ ಸಂಜೀವ್ ಭಯದಿಂದ ಶಿವಾಜಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲಿಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಅಷ್ಟೇ ಅಲ್ಲದೇ ಶಿವಾಜಿನಗರದ ಪೊಲೀಸರು ಆರೋಪಿಗಳ ಪತ್ತೆಗೆ ಇನ್ಸ್ ಪೆಕ್ಟರ್ ತಬ್ರೇಜ್ ಹಾಗೂ ಸಬ್ ಇನ್ಸ್ ಪೆಕ್ಟರ್ ಶೀಲಾ ಪ್ರತ್ಯೇಕ ತಂಡಗಳಾಗಿ ತೆರಳಿದ್ದರು. ತನಿಖೆಯಲ್ಲಿ ಆಂಧ್ರ ಪ್ರದೇಶದಲ್ಲಿ ಆರೋಪಿಗಳು ಇರುವುದು ಪತ್ತೆಯಾಗಿತ್ತು.

    ಪೊಲೀಸರು ದರೋಡೆಕೋರರಿಗೆ ಅನುಮಾನ ಬಾರದಿರಲಿ ಅಂತ ಪೊಲೀಸರಂತೆ ಹೋಗುವ ಬದಲು ಪ್ರೇಮಿಗಳಂತೆ ಹೋಗಿದ್ದು, ಶಿವಾಜಿನಗರ ಸಬ್ ಇನ್ಸ್ ಪೆಕ್ಟರ್ ಶೀಲಾ ಹಾಗೂ ಕ್ರೈಂ ಸಿಬ್ಬಂದಿ ಪ್ರೇಮಿಗಳಂತೆ ನಟನೆ ಮಾಡಿದ್ದಾರೆ. ಬಳಿಕ ಆರೋಪಿಗಳಿಗೆ ಅನುಮಾನ ಬಾರದಂತೆ ಅವರ ಸಮೀಪ ಹೋಗಿ ಅವರನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಬರ್ಸ್ ಬಂಧನಕ್ಕೆ ವರ್ಕೌಟ್ ಆಯ್ತು ಅಣ್ಣಾಮಲೈ ಕೊಟ್ಟ ಪ್ಲಾನ್

    ರಾಬರ್ಸ್ ಬಂಧನಕ್ಕೆ ವರ್ಕೌಟ್ ಆಯ್ತು ಅಣ್ಣಾಮಲೈ ಕೊಟ್ಟ ಪ್ಲಾನ್

    -ಆರೋಪಿಗಳ ಬಂಧನಕ್ಕೆ ಪೊಲೀಸರನ್ನೆ ಲಾರಿ ಡ್ರೈವರ್ ಮಾಡಿದ್ದ ಡಿಸಿಪಿ

    ಬೆಂಗಳೂರು: ದಕ್ಷಿಣ ವಿಭಾಗ ಪೊಲೀಸರ ನಿದ್ದೆಗೆಡಿಸಿದ್ದ ನಟೋರಿಯಸ್ ರಾಬರ್ಸ್ ಗ್ಯಾಂಗ್ ಅದು. ಖರ್ತನಾಕ್ ಗ್ಯಾಂಗ್‍ನ ಹೆಡೆ ಮುರಿಕಟ್ಟಲು ಪೊಲೀಸರು ಎಲ್ಲಿಲ್ಲದ ಹರಸಹಾಸಪಡುತ್ತಿದ್ದರು. ದರೋಡೆಕೋರರ ಗ್ಯಾಂಗ್ ಬೆನ್ನ ಹಿಂದೆ ಬಿದ್ದಿದ್ದ ಪೊಲೀಸರಿಗೆ ಅಣ್ಣಾಮಲೈ ಕೊಟ್ಟ ಪ್ಲಾನ್ ನಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಟೋರಿಸ್ ರಾಬರ್ಸ್ ಗ್ಯಾಂಗ್ ಒಂದೇ ವಾರದಲ್ಲಿ ಲಾರಿ ಚಾಕನನ್ನ ಕೊಲೆ ಮಾಡಿ ಮತ್ತೊಬ್ಬನಿಗೆ ಇರಿದು ಹಣ ದೋಚಿದ್ದರು. ಇದು ದಕ್ಷಿಣ ವಿಭಾಗ ಪೊಲೀಸರ ಕಣ್ಣು ಕೆಂಪಾಗಿಸಿತ್ತು. ಲಾರಿ ಚಾಲಕರನ್ನು ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಖದೀಮರ ಗ್ಯಾಂಗ್ ಬಂಧಿಸಲು ಪೊಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದರು. ಆರೋಪಿಗಳ ಬಂಧನಕ್ಕೆ ಶ್ರಮಿಸುತ್ತಿದ್ದ ಪೊಲೀಸರಿಗೆ ತಕ್ಕ ಫಲ ಸಿಕ್ಕಿರಲಿಲ್ಲ. ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಆರೋಪಿಗಳ ಬಂಧನಕ್ಕೆ ಚಕ್ರವ್ಯೂಹ ರೆಡಿ ಮಾಡಿದ್ದಾರೆ. ಡಿಸಿಪಿ ಅಣ್ಣಾಮಲೈ ರಚಿಸಿದ್ದ ಚಕ್ರವ್ಯೂಹ ಆರೋಪಿಗಳು ಸಿಲುಕಿ ಹಾಕಿಕೊಂಡಿದ್ದಾರೆ.

    ಲಾರಿ ಸ್ಟ್ಯಾಂಡ್ ಗಳೆಲ್ಲವನ್ನ ಪರಿಶೀಲನೆ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಿದ್ದ ತನಿಖಾ ತಂಡಕ್ಕೆ ಅಣ್ಣಾಮಲೈ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಟ್ಟಿದ್ದಾರೆ. ಡಿಸಿಪಿ ಅಣ್ಣಾಮಲೆ ಕೊಟ್ಟ ಸಲಹೆ ಅಂತೆ ಕುಮಾರಸ್ವಾಮಿ ಲೇಔಟ್ ಪೊಲೀಸರು ಕಾರ್ಯಚರಣೆಗೆ ಇಳಿದಿದ್ದಾರೆ. ಲಾರಿ ಸ್ಟ್ಯಾಂಡ್ ನಿಂದ ಮೂರು ಲಾರಿ ಪಡೆದ ಪೊಲೀಸರು ಲಾರಿ ಚಾಲಕರು ಹಾಗೂ ಕ್ಲೀನರ್ ಆಗಿ ನೈಸ್ ರಸ್ತೆಗೆ ಲಗ್ಗೆ ಇಡುತ್ತಾರೆ. ಸತತ ಮೂರು ದಿನಗಳ ಕಾಲ ಆರೋಪಿಗಳಿಗಾಗಿ ಪೊಲೀಸರು ನೈಸ್ ರಸ್ತೆಯಲ್ಲಿ ಕಾದು ಕುಳಿತು ನಾಲ್ಕನೇ ದಿನಕ್ಕೆ ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪ್ರಕರಣ ಸಂಬಂಧ ತೋಹಿದ್ ವರ್ದಾ, ಮುಧಾಸಿರ್, ಸಲ್ಮಾನ್ ಎಂಬವರನ್ನು ಬಂಧಿಸಿ ಪೊಲೀಸರು ತನಿಖೆ ಮಾಡಿದ್ದಾಗ ಇದೇ ತಿಂಗಳು ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಮಾಡಿದ್ದನ್ನ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಈ ಹಿಂದೆ ರಾಮನಗರದಲ್ಲಿ ಎರಡು ಕಡೆ ಹಾಗೂ ವೆಸ್ಟ್ ಡಿವಿಷನ್ ನಲ್ಲಿ ಒಂದು ಕಡೆ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಒಟ್ಟನಲ್ಲಿ ಪೊಲೀಸರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆರೋಪಿಗಳಿಗೆ ಡಿಸಿಪಿ ಅಣ್ಣಾಮಲೈ ಪ್ಲಾನ್ ಮಾಸ್ಟರ್ ಸ್ಟ್ರೋಕ್ ನೀಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ಮೇಲೆ ಗುಂಡಿನ ದಾಳಿ – ತಾನೇ ಗುಂಡು ಹಾರಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ ಗ್ಯಾಂಗ್‍ಸ್ಟರ್

    ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ಮೇಲೆ ಗುಂಡಿನ ದಾಳಿ – ತಾನೇ ಗುಂಡು ಹಾರಿಸಿದ್ದಾಗಿ ಫೇಸ್ ಬುಕ್ ಪೋಸ್ಟ್ ಹಾಕಿದ ಗ್ಯಾಂಗ್‍ಸ್ಟರ್

    ಚಂಡಿಗಢ :  ಖ್ಯಾತ ಪಂಜಾಬಿ ಗಾಯಕ ಪರ್ಮಿಶ್ ವರ್ಮಾ ಹಾಗೂ ಅವರ ಸ್ನೇಹಿತನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದಾರೆ.

    ಮೊಹಾಲಿಯ ಸೆಕ್ಟರ್ 74 ರಲ್ಲಿ ಶುಕ್ರವಾರ ತಡ ರಾತ್ರಿ ದಾಳಿ ನಡೆಸಿ ಪರಾರಿಯಾಗಿದ್ದರು. ಈ ದಾಳಿಯಲ್ಲಿ ಗಾಯಗೊಂಡಿರುವ ಪರ್ಮಿಶ್ ಹಾಗೂ ಆತನ ಸ್ನೇಹಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗುಂಡಿನ ದಾಳಿಯಲ್ಲಿ ಪರ್ಮಿಶ್ ಅವರ ಕಾಲಿಗೆ ಗುಂಡೇಟು ತಗುಲಿದೆ. ರಾತ್ರಿ ವೇಳೆ ಕಾರ್ಯಕ್ರಮವೊಂದರ ಪ್ರಚಾರ ಕಾರ್ಯ ನಡೆಸಿ ಹಿಂದಿರುಗುತ್ತಿದ್ದ ವೇಳೆ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕುಲ್ ದೀಪ್ ಚಹಲ್ ಮಾಹಿತಿ ನೀಡಿದ್ದಾರೆ.

    ಪರ್ಮಿಶ್ ವರ್ಮಾ ಪಂಜಾಬಿಯ ಖ್ಯಾತ ಗಾಯಕರಾಗಿದ್ದು, ಇವರ ಸೂಪರ್ ಹಿಟ್ ‘ಗಾಲ್ ನಿ ಕದ್ನಿ’ ಹಾಡನ್ನು ಸುಮಾರು 11 ಕೋಟಿ ಬಾರಿ ವಿಕ್ಷಣೆ ಮಾಡಲಾಗಿದೆ. ಇವರ ಇತ್ತೀಚಿನ ಮತ್ತೊಂದು ಹಾಡು ಸಹ ಹಿಟ್ ಲಿಸ್ಟ್ ನಲ್ಲಿ ಸೇರಿತ್ತು. ಪಮಿರ್ಶ್ ಜನಪ್ರಿಯತೆ ಹೆಚ್ಚಾಗುತ್ತಿದಂತೆ ಗ್ಯಾಂಗ್‍ಸ್ಟರ್ ಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

    ಗ್ಯಾಂಗ್ ಸ್ಟರ್ ಕೈವಾಡ?
    ಘಟನೆ ಬಳಿಕ ಪರ್ಮಿಶ್ ಮೇಲೆ ತಾವೇ ಗುಂಡಿನ ದಾಳಿಯನ್ನು ತಾವೇ ನಡೆಸಿದ್ದಾಗಿ ಗ್ಯಾಂಗ್‍ಸ್ಟರ್ ದಿಲ್ ಪ್ರೀತ್ ಸಿಂಗ್ ದಹನ್ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ. ಪೋಸ್ಟ್ ನಲ್ಲಿ ಗ್ಯಾಂಗ್ ನ ವ್ಯಕ್ತಿ ಪಿಸ್ತೂಲ್ ನೊಂದಿಗೆ ಪರ್ಮಿಶ್ ಫೋಟೋವನ್ನು ಹಾಕಿ ದಾಳಿಯ ಕುರಿತು ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಮೊಹಾಲಿ ಪೊಲೀಸರು ತನಿಖೆ ನಡೆಸಿದ್ದಾರೆ.