Tag: Ganesh Temple

  • ಮಗಳಿಗೆ ಗಣಪತಿ, ಆಂಜನೇಯನ ದರ್ಶನ ಮಾಡಿಸಿದ ನಟಿ ಪ್ರಿಯಾಂಕಾ ಚೋಪ್ರಾ

    ಮಗಳಿಗೆ ಗಣಪತಿ, ಆಂಜನೇಯನ ದರ್ಶನ ಮಾಡಿಸಿದ ನಟಿ ಪ್ರಿಯಾಂಕಾ ಚೋಪ್ರಾ

    ಲವು ಕಾರ್ಯಕ್ರಮಗಳ ನಿಮಿತ್ತ ಮುಂಬೈಗೆ (Mumbai) ಬಂದಿಳಿದಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra), ಬೆಳಗ್ಗೆ ಮುಂಬೈನ ಪ್ರಸಿದ್ಧ ಗಣಪತಿ, ಆಂಜನೇಯನ ದೇವಸ್ಥಾನಕ್ಕೆ (Ganesh Temple) ಮಗಳೊಂದಿಗೆ ಭೇಟಿ ನೀಡಿದ್ದಾರೆ. ಗಣಪತಿ ಬಗ್ಗೆ ಅಪಾರ ಭಕ್ತಿ ಹೊಂದಿರುವ ಅವರು ಮಗಳಿಗೆ ಗಣಪತಿಯ ದರ್ಶನ ಮಾಡಿಸಿದ್ದಾರೆ. ಮಗಳ ಭವಿಷ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.

    ಅಂಬಾನಿ ಸಾಂಸ್ಕೃತಿಕ ಭವನೆ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿರುವ ಅವರು ಇದೇ ಮೊದಲ ಬಾರಿಗೆ ಭಾರತಕ್ಕೆ ಮಗಳನ್ನೂ ಕರೆತಂದಿದ್ದಾರೆ. ಅಮೆರಿಕಾದಲ್ಲಿ ಬೀಡುಬಿಟ್ಟಿರುವ ಪ್ರಿಯಾಂಕಾ, ಮಗಳು ಹುಟ್ಟಿದ ನಂತರ ಇದೇ ಮೊದಲ ಬಾರಿಗೆ ಅವರು ಭಾರತಕ್ಕೆ ಕಾಲಿಟ್ಟಿದ್ದಾರೆ. ಹಾಗಾಗಿ ಹಿಂದಿನ ಎಲ್ಲ ನೆನಪುಗಳನ್ನೂ ಅವರು ಮರುಸೃಷ್ಟಿ ಮಾಡುತ್ತಿದ್ದಾರೆ.  ಇದನ್ನೂ ಓದಿ: ಸುದೀಪ್ ಖಾಸಗಿ ವಿಡಿಯೋ ಬೆದರಿಕೆ ಹಿಂದೆ ಕಾರು ಡ್ರೈವರ್ ಇರುವ ಶಂಕೆ

    ಮೊನ್ನೆಯಷ್ಟೇ ಪತಿ ನಿಕ್ ಜೊತೆ ಆಟೋದಲ್ಲಿ ಮುಂಬೈ ಸುತ್ತಿದ್ದ ಪ್ರಿಯಾಂಕಾ, ಆಟೋದಲ್ಲಿಯೇ ಪತಿಗೆ ಮುಂಬೈ ಪರಿಚಯಿಸಿದ್ದರು. ಆಟೋ ಪ್ರಯಾಣದ ಅನುಭವನ್ನು ಅಭಿಮಾನಿಗಳ ಜೊತೆ ಅವರು ಹಂಚಿಕೊಂಡಿದ್ದರು. ಅಲ್ಲದೇ, ತಾವು ಓಡಾಡಿದ ಜಾಗವನ್ನೆಲ್ಲ ಪತಿಗೆ ಪ್ರಿಯಾಂಕಾ ಪರಿಚಯಿಸುತ್ತಿದ್ದಾರೆ.

    ಬಾಲಿವುಡ್ ತೊರೆದ ನಂತರ ಪ್ರಿಯಾಂಕಾ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಹಲವಾರು ವೆಬ್ ಸೀರಿಸ್ ನಲ್ಲಿ ಮತ್ತು ಬ್ಯುಸಿನೆಸ್ ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇಂಗ್ಲಿಷ್ ನ ಹಲವಾರು ಶೋಗಳಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದಾರೆ.

  • ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ

    ಪಾಕ್‍ನಲ್ಲಿ ಹಿಂದೂ ದೇವಾಲಯ ಧ್ವಂಸ ಮಾಡಿದ 22 ಮಂದಿಗೆ 5 ವರ್ಷ ಜೈಲು ಶಿಕ್ಷೆ

    ಇಸ್ಲಾಮಾಬಾದ್: ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ(ಎಟಿಸಿ)ವು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದ 22 ಆರೋಪಿಗಳಿಗೆ ಬುಧವಾರ ತಲಾ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

    ಜುಲೈ 2021 ರಲ್ಲಿ, ಮಂದ್ರಸಾದಲ್ಲಿ 8 ವರ್ಷದ ಬಾಲಕ ಮೂತ್ರ ವಿಸರ್ಜನೆ ಮಾಡಿದ್ದಾನೆ. ಈ ಹಿನ್ನೆಲೆ ಮುಸ್ಲಿಮರು ನಮ್ಮ ದೇವರಿಗೆ ಈ ಬಾಲಕ ಅಪವಿತ್ರಗೊಳಿಸಿದ್ದಾನೆ ಎಂದು ಆಕ್ರೋಶ ಹೊರಹಾಕಿದು. ಪರಿಣಾಮ ಗಣೇಶ ಮಂದಿರದ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಮರಣಾತಿಕ ಆಯುಧಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ದೇವಾಲಯವನ್ನು ಧ್ವಂಸಗೊಳಿಸುವುದಲ್ಲದೇ, ಭದ್ರತೆಗಾಗಿ ನಿಯೋಜಿಸಿದ್ದ ಪೆÇಲೀಸರ ಮೇಲೆ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆ 84 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.

    ಈ ಹಿನ್ನೆಲೆ ಘಟನೆಗೆ ಸಂಬಂಧಿಸಿದಂತೆ 84 ಶಂಕಿತರನ್ನು ವಿಚಾರಣೆ ನಡೆಸಿದ್ದು, 22 ಮಂದಿಗೆ ಶಿಕ್ಷೆಯನ್ನು ಕೊಡಲಾಗಿದೆ. ಬುಧವಾರ, ಎಟಿಸಿ ನ್ಯಾಯಾಧೀಶ(ಬಹ್ವಾಲ್ಪುರ್) ನಾಸಿರ್ ಹುಸೇನ್ ಅವರು ತೀರ್ಪನ್ನು ಪ್ರಕಟಿಸಿದರು. ನ್ಯಾಯಾಧೀಶರು 22 ಶಂಕಿತರಿಗೆ ತಲಾ ಐದು ವರ್ಷಗಳ ಜೈಲು ಶಿಕ್ಷೆಯನ್ನು ನೀಡಿದರು. ಉಳಿದ 62 ಮಂದಿಯನ್ನು ಬಿಡುಗಡೆ ಮಾಡಿದರು. ಇದನ್ನೂ ಓದಿ: ಭಗವಂತ್ ಮಾನ್ ಭೇಟಿಯಾದ ನಂತರ ಊಟದ ತಟ್ಟೆಗೆ ಕಿತ್ತಾಡಿದ ಶಿಕ್ಷಕರು, ಪ್ರಾಂಶುಪಾಲರು 

    ಪಾಕಿಸ್ತಾನದ ಸಂಸತ್ತು ಕೂಡ ನಿರ್ಣಯವನ್ನು ಅಂಗೀಕರಿಸುವ ಮೂಲಕ ದೇವಾಲಯದ ದಾಳಿಯನ್ನು ಖಂಡಿಸಿತ್ತು.