Tag: Ganesh Festival

  • ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಸೆ.5ಕ್ಕೆ ಸಭೆ: ಆರ್.ಅಶೋಕ್

    ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಸೆ.5ಕ್ಕೆ ಸಭೆ: ಆರ್.ಅಶೋಕ್

    ಬೆಂಗಳೂರು: ಗಣೇಶೋತ್ಸವಕ್ಕೆ ಯಾವ ರೀತಿ ಅನುಮತಿ ನೀಡಬೇಕೆಂದು ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿಗಳು ಸಭೆ ನಡೆಸಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಇಂದಿನ ಸಭೆಯಲ್ಲಿ ಗಣೇಶೋತ್ಸವ ಆಚರಣೆ ಕುರಿತು ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

    ಸಿಎಂ ಜೊತೆಗಿನ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗಣೇಶ ಹಬ್ಬದ ಕುರಿತು ದೊಡ್ಡ ಹೆಜ್ಜೆ ಇರಿಸಬೇಕಾಗುತ್ತದೆ. ಹಲವು ಜಿಲ್ಲೆಗಳಲ್ಲಿ ದೊಡ್ಡದಾಗಿ ಹಬ್ಬವನ್ನ ಆಚರಣೆ ಮಾಡಲಾಗುತ್ತೆ. ಈ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಎಸ್.ಪಿ ಅವರಿಂದ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಜೊತೆಗೆ ದೊಡ್ಡ ಮಟ್ಟದಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಮಾಡುವ ಆಯೋಜಕರೊಂದಿಗೆ ಸಿಎಂ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

    ಸಂಕಷ್ಟ ಹರ ಗಣಪತಿ ಬಂದ ಮೇಲೆ ನಮಗೆಲ್ಲ ಒಳ್ಳೆಯದ್ದು ಅಗಿರುವುದು. ನಮ್ಮ ಸಂಕಷ್ಟಗಳು ಮುಗಿದು ಹೋಯಿತು. ಗಣಪತಿ ಹಬ್ಬಕ್ಕೆ ಇರುವ ಎಲ್ಲ ಸಂಕಷ್ಟಗಳು ನಿವಾರಣೆಯಾಗಲಿ ಎಂದು ನಾನು ನಿಮ್ಮೆಲ್ಲರ ಪರವಾಗಿ ವಾದವನ್ನು ಮಂಡಿಸಿದ್ದೇನೆ  ಎಂದಿದ್ದಾರೆ. ಇದನ್ನೂ ಓದಿ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ- ಜಾವೆಲಿಸ್ ಎಸೆದು ಚಿನ್ನ ಪಡೆದ ಸುಮಿತ್

    ಸರ್ಕಾರ ಕೊರೊನಾವನ್ನು ಗಮನದಲ್ಲಿಟ್ಟುಕೊಂಡು ಗಣೇಶ ಹಬ್ಬಕ್ಕೆ ಯಾವ ರೀತಿ ಅನುಮತಿ ಕೊಡಬಹುದು ಎನ್ನುವುದನ್ನು ಯೋಚನೆ ಮಾಡುತ್ತೀದ್ದೇವೆ. ಗಣೇಶ ನಮ್ಮ ಆರಾಧ್ಯ ದೈವನಾಗಿದ್ದಾನೆ. ವಿಘ್ನ ವಿನಾಯಕನ ಆರಾಧನೆ ಮಾಡುವುದಕ್ಕಿ ಮುಖ್ಯಮಂತ್ರಿಗಳು ಪಾಸಿಟಿವ್ ಆಗಿ ಯೋಚನೆ ಮಾಡುತ್ತಿದ್ದಾರೆ ಎಂದಿದ್ದಾರೆ.

    ನಾವು ಸಭೆಯನ್ನು ನಡೆಸಿದ್ದೇವೆ, ನಾನು ಕೂಡಾ ಪರವಾಗಿ ಬ್ಯಾಟಿಂಗ್ ಮಾಡಿದ್ದೇನೆ. ಜನರ ಆರೋಗ್ಯ, ಕೊರೊನಾ ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ತೀರ್ಮಾನವನ್ನು ಮುಖ್ಯಂತ್ರಿಗಳು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

  • ಈ ಬಾರಿಯೂ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು: ಬಿಎಸ್‍ವೈ

    ಈ ಬಾರಿಯೂ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು: ಬಿಎಸ್‍ವೈ

    – ಹಬ್ಬದ ನಂತರ ರಾಜ್ಯಾದ್ಯಂತ ಪ್ರವಾಸ

    ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಈ ಬಾರಿಯೂ ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು.

    ಯಡಿಯೂರಪ್ಪನವರು ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪಕ್ಕದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಈ ಹಂತದಲ್ಲಿ ವೈಭವದಿಂದ ಗಣೇಶೋತ್ಸವ ಆಚರಣೆ ಸರಿಯಲ್ಲ. ಈ ಬಗ್ಗೆ ನಮ್ಮ ಸರ್ಕಾರ ಚರ್ಚೆ ನಡೆಸಿ, ತೀರ್ಮಾನಿಸಲಿದೆ ಎಂದರು. ಇದನ್ನೂ ಓದಿ: ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು ಹೇಳಿಕೆ ವಾಪಸ್ ಪಡೆಯಲ್ಲ: ಕತ್ತಿ

    ರಾಜ್ಯ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದ್ದು, ಮುಂಬರುವ ದಿನಗಳಲ್ಲಿ ಪಕ್ಷ ಸ್ವತಂತ್ರವಾಗಿ, ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ. ಗೌರಿ ಗಣೇಶ ಹಬ್ಬದ ನಂತರ ಪಕ್ಷ ಸಂಘಟನೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಜಿಲ್ಲಾ ಪ್ರವಾಸದ ನಂತರ ವಿಧಾನಸಭಾ ಕ್ಷೇತ್ರವಾರು ಪ್ರವಾಸ ನಡೆಸಿ, ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು.

    ಮುಂದಿನ ಬಾರಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಹೋರಾಟ ನಡೆಸುತ್ತೇನೆ. 135-140 ಸ್ಥಾನ ಬಂದರೆ ನನ್ನ ಹೋರಾಟ ಸಾರ್ಥಕ ಆಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಕೇವಲ ಶಿವಮೊಗ್ಗ ಜಿಲ್ಲೆಗೆ ಮಾತ್ರ ಕೆಲಸ ಮಾಡಿದ್ದೇನೆ ಎಂದು ಭಾವಿಸುವುದು ಬೇಡ. ಎಲ್ಲ ಜಿಲ್ಲೆಗಳಿಗು, ಸಮುದಾಯದ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿದ್ದೇನೆ. ಜನರ ಕೆಲಸ ಮಾಡಲು ಅಧಿಕಾರ ಮುಖ್ಯ ಅಲ್ಲ, ಅಧಿಕಾರ ಇರದಿದ್ದರೂ ಕೆಲಸ ಮಾಡುತ್ತಿದ್ದೇನೆ. ಜನರ ಸೇವೆಗಾಗಿ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದರು.

  • ಸತತ 2ನೇ ವರ್ಷವೂ ಕೊಡಗಿನಲ್ಲಿ ಗಣೇಶೋತ್ಸವದ ಸಂಭ್ರಮ ಇಲ್ಲ

    ಸತತ 2ನೇ ವರ್ಷವೂ ಕೊಡಗಿನಲ್ಲಿ ಗಣೇಶೋತ್ಸವದ ಸಂಭ್ರಮ ಇಲ್ಲ

    ಮಡಿಕೇರಿ: ಈ ವರ್ಷವೂ ಕೊಡಗಿನಲ್ಲಿ ಗಣೇಶೋತ್ಸವದ ಸಂಭ್ರಮ ಹೆಚ್ಚಾಗಿ ಕಂಡು ಬರುತ್ತಿಲ್ಲ. ಕಳೆದ ಮೂರು ವರ್ಷಗಳಿಂದ ಮಹಾಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಗಣೇಶೋತ್ಸವಕ್ಕೆ ಕೊಡಗಿನಲ್ಲಿ ಅಡ್ಡಿ ಉಂಟಾಗಿತ್ತು. ಈ ವರ್ಷವು ಪ್ರವಾಹ ಹಾಗೂ ಭೂಕುಸಿತದ ಜೊತೆಗೆ ಕೊರೊನಾ ಸಹ ಸೇರಿಕೊಂಡು ಈ ಬಾರಿ ಹಬ್ಬದ ಸಂಭ್ರಮವನ್ನು ಕಸಿದಿದೆ.

    ಕೊಡಗು ಜಿಲ್ಲೆಯಲ್ಲಿ ಈ ವೇಳೆಗೆ ವಿವಿಧ ಸಂಘಟನೆಗಳು ಗಣೇಶೋತ್ಸವ ಆಚರಣೆಗೆ ತಯಾರಿ ನಡೆಸುತ್ತಿದ್ದವು. ಆದರೆ ಈ ಬಾರಿ ಅಷ್ಟು ಹೆಚ್ಚಾಗಿ ಜಿಲ್ಲೆಯಲ್ಲಿ ಸಂಭ್ರಮ ಕಾಣಿಸುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ವಿನಾಯಕ ಸೇವಾ ಸಮಿತಿಗಳು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿರುವ ದೃಶ್ಯಗಳು ಮಾತ್ರ ಕಂಡು ಬರುತ್ತಿದೆ.

    ಮಂಜಿನ ನಗರಿ ಮಡಿಕೇರಿ ಐತಿಹಾಸಿಕ ದೇವಾಲಯದ ಶ್ರೀ ಕೋಟಿ ಮಹಾಗಣಪತಿ ದೇವಾಲಯದಲ್ಲಿ ಬೆರಳೆಣಿಕೆಯಷ್ಟು ಭಕ್ತರು ಬಂದು ಈಡುಗಾಯಿ ಸೇವೆ ಸಲ್ಲಿಸಿ ದೇವರ ದರ್ಶನ ಪಡೆದು ತೆರಳುತ್ತಿದ್ದಾರೆ.

  • ಚೀನಿ ವೈರಸ್ ಎಫೆಕ್ಟ್: ಗಣೇಶ ಉತ್ಸವದಿಂದ ಹಿಂದೆ ಸರಿದ ಮಂಡಳಿ

    ಚೀನಿ ವೈರಸ್ ಎಫೆಕ್ಟ್: ಗಣೇಶ ಉತ್ಸವದಿಂದ ಹಿಂದೆ ಸರಿದ ಮಂಡಳಿ

    ಮುಂಬೈ: ದೇಶದ್ಯಾಂತ ಕೊರೊನಾ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಪರಿಣಾಮ ಈಗಾಗಲೇ ದೇಶದ ವಿವಿಧ ಭಾಗಗಳಲ್ಲಿ ನಡೆಯಬೇಕಿದ್ದ ಹಲವು ಹಬ್ಬಗಳ ಆಚರಣೆಯನ್ನು ಕೈಬಿಡಲಾಗಿದ್ದರೆ, ಕೆಲ ಆಚರಣೆಗಳನ್ನು ಸಾರ್ವಜನಿಕರನ್ನು ದೂರವಿಟ್ಟು ನಡೆಸಲಾಗಿದೆ. ಆದರೆ ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಕಾರಣದಿಂದ ಈ ಬಾರಿಯ ಗಣೇಶ ಉತ್ಸವ ಆಯೋಜಿಸುವುದಿಲ್ಲ ಎಂದು ಲಾಲ್‍ಬೌಚಾ ರಾಜಾ ಗಣೇಶ ಉತ್ಸವ ಮಂಡಳಿ ಘೋಷಣೆ ಮಾಡಿದೆ.

    ಮುಂಬೈನಲ್ಲಿ ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ವಿನಾಯಕನಿಗೆ ನವರಾತ್ರಿ ವಿಶೇಷ ಪೂಜೆ ಕೈಗೊಂಡು ಭಾರೀ ಸಂಖ್ಯೆಯ ಜನರೊಂದಿಗೆ ಗಣೇಶಮೂರ್ತಿಯ ವಿಸರ್ಜನ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆದರೆ ಈ ಬಾರಿ ವಿನಾಯಕನ ಹಬ್ಬಕ್ಕೂ ಕೊರೊನಾ ಎಫೆಕ್ಟ್ ತಟ್ಟಲಿದೆ.

    ಮುಂಬೈನಲ್ಲಿ ಕೊರೊನಾ ಉತ್ಸವ ಏರ್ಪಡಿಸುವ ಸ್ಥಳಗಳಲ್ಲಿ ಸದ್ಯ ಕೊರೊನಾ ಕಾರಣದಿಂದ ರಕ್ತ ಮತ್ತು ಪ್ಲಾಸ್ಮಾ ದಾನ ಮಾಡುವ ಕ್ಯಾಪ್‍ಗಳನ್ನು ನಿರ್ವಹಿಸಲಾಗುತ್ತಿದೆ. ಕಳೆದ ವರ್ಷ ಚಂದ್ರಯಾನ-2 ವಿಶೇಷವಾಗಿ ನಿರ್ಮಿಸಿದ್ದ ಗಣೇಶ ಉತ್ಸವ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಈಗಾಗಲೇ ಹಲವು ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಜನರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಾಧಿಸದಂತೆ ದೇವರಲ್ಲಿ ಪ್ರಾರ್ಥನೆ ಮಾಡಿ ಮೂರ್ತಿಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ ಎಂದು ಗಣೇಶ ಮೂರ್ತಿ ನಿರ್ಮಾಣ ಮಾಡುವ ಉತ್ಸವ ಕಮಿಟಿ ಅಧ್ಯಕ್ಷರು ತಿಳಿಸಿದ್ದಾರೆ.

  • ಡಿಜೆ ಬೇಡ ಎಂದವರ ಮನೆಗೆ ಪಟಾಕಿ ಎಸೆದ ಪುಂಡರು!

    ಡಿಜೆ ಬೇಡ ಎಂದವರ ಮನೆಗೆ ಪಟಾಕಿ ಎಸೆದ ಪುಂಡರು!

    ಬೆಳಗಾವಿ: ಗಣೇಶ ಉತ್ಸವ ಮೆವಣಿಗೆಯಲ್ಲಿ ಡಿಜೆ ಬೇಡ ಎಂದು ಪೊಲೀಸರಿಗೆ ಮನವಿ ಮಾಡಿದ್ದ ವ್ಯಕ್ತಿಗಳ ಮನೆಯೊಳಗೆ ಪುಂಡರು ಪಟಾಕಿ ಎಸೆದಿದ್ದಾರೆ. ಪರಿಣಾಮ ಜಿಲ್ಲೆಯ ಸವದತ್ತಿ ತಾಲೂಕಿನ ಸತ್ತಿಗೇರಿ ಗ್ರಾಮದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದೆ.

    ಸತ್ತಿಗೇರಿ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಯುವಕರ ತಂಡ ಅದ್ಧೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದರು. ಗಣಪತಿ ವಿಸರ್ಜನೆ ವೇಳೆ ಡಿಜೆ ಅನುಮತಿ ನೀಡಿ ಎಂದು ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಗ್ರಾಮದ ಸರನಾಡಗೌಡ್ರ ಸೇರಿದಂತೆ ಕೆಲವು ವ್ಯಕ್ತಿಗಳು ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಡಿಜೆ ಹಾಕಲು ಅನುಮತಿ ನೀಡಬಾರದೆಂದು ಪೊಲೀಸರಿಗೆ ದೂರು ಕೊಟ್ಟಿದ್ದರು.

    ಪೊಲೀಸರಿಗೆ ಡಿಜೆ ಬಳಸದಂತೆ ದೂರು ಕೊಟ್ಟ ಹಿನ್ನೆಲೆಯಲ್ಲಿ, ಆಕ್ರೋಶಗೊಂಡ ಕೆಲ ಯುವಕರು ಗಣೇಶ ಉತ್ಸವದ ಮೆರವಣಿಗೆಯ ವೇಳೆ ಉದ್ದೇಶ ಪೂರ್ವಕವಾಗಿ ದೂರು ಕೊಟ್ಟ ಸರನಾಡಗೌಡ್ರ ಸೇರಿದಂತೆ ಹಲವರ ಮನೆಗಳ ಒಳಗೆ ಪಟಾಕಿ ಹಚ್ಚಿ ಎಸೆದಿದ್ದಾರೆ. ಅಲ್ಲದೆ ಮನೆ ಮುಂದೆ ಪಟಾಕಿ ಹಚ್ಚಿ ಕುಣಿದು ಕುಪ್ಪಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯುವಕರ ಈ ವರ್ತನೆಯಿಂದಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಮುರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಸದ್ಯ ಗ್ರಾಮದಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣೇಶ ವಿಸರ್ಜನೆ ವೇಳೆ ಗಲಾಟೆ – ಪೊಲೀಸರಿಂದ ಲಾಠಿ ಚಾರ್ಚ್

    ಗಣೇಶ ವಿಸರ್ಜನೆ ವೇಳೆ ಗಲಾಟೆ – ಪೊಲೀಸರಿಂದ ಲಾಠಿ ಚಾರ್ಚ್

    ಕೋಲಾರ: ಜಿಲ್ಲೆಯಲ್ಲಿ ಭಜರಂಗದಳ ಹಾಗೂ ಶ್ರೀರಾಮ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

    ಕೋಲಾರ ನಗರದ ಅಮ್ಮವಾರಿಪೇಟೆ ಸರ್ಕಲ್ ಬಳಿ ಗಣೇಶನ ಮೆರವಣಿಗೆ ವೇಳೆ ಈ ಘಟನೆ ನಡೆದಿದೆ. ಮೆರವಣಿಗೆ ವೇಳೆ ಆಟೋ ಚಾಲಕನೊಬ್ಬ ಅನಗತ್ಯವಾಗಿ ಅಡ್ಡಿ ಉಂಟು ಮಾಡಿದ್ದಾನೆ. ಕೂಡಲೇ ಎಚ್ಚೆತ್ತ ಪೊಲೀಸರು ಮಧ್ಯೆ ಪ್ರವೇಶಿಸಿ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

    ಭಜರಂಗದಳ ಹಾಗೂ ಶ್ರೀರಾಮ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಗಣೇಶ್ ವಿಸರ್ಜನೆ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ಈ ವೇಳೆ ಆಟೋ ಚಾಲಕನೊಬ್ಬ ಮೆರವಣಿಗೆಗೆ ಅಡ್ಡಿಪಡಿಸಿದ್ದಾನೆ. ಆಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಎರಡು ಗುಂಪುಗಳ ನಡುವೆ ಗುಂಪು ಘರ್ಷಣೆ ನಡೆದಿದೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಎರಡು ಗುಂಪುಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕನ್, ಮಟನ್, ಮೊಟ್ಟೆ, ಕಿಕ್ ಕೊಡೋ ಎಣ್ಣೆಯೇ ಪಾರ್ವತಿ ಸುತನಿಗೆ ನೈವೇದ್ಯ!

    ಚಿಕನ್, ಮಟನ್, ಮೊಟ್ಟೆ, ಕಿಕ್ ಕೊಡೋ ಎಣ್ಣೆಯೇ ಪಾರ್ವತಿ ಸುತನಿಗೆ ನೈವೇದ್ಯ!

    ಕೊಪ್ಪಳ: ಹಬ್ಬದಂದು ಗಣಪನಿಗೆ ಎಲ್ಲೆಡೆ ಕರಿಗಡಬು, ಉಂಡಿ, ಚಕ್ಕುಲಿ ಮಾತ್ರವಲ್ಲದೇ ತರತರದ ಹಣ್ಣು-ಹಂಪಲು ನೈವೇದ್ಯ ಇಡುವುದನ್ನು ನೋಡಿದ್ದೇವೆ ಆದರೆ ಇಲ್ಲೊಂದು ಕುಟುಂಬ ಚಿಕನ್, ಮಟನ್, ಮೊಟ್ಟೆ ಜೊತೆಗೆ ಕಿಕ್ ಕೊಡೋ ಎಣ್ಣೆಯನ್ನು ಪಾರ್ವತಿ ಸುತನಿಗೆ ನೈವೇದ್ಯ ಆಗಿ ಇಟ್ಟಿದೆ.

    ಎಲ್ಲಡೆ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಲಾಗುತ್ತಿದೆ. ಅದೇ ರೀತಿ ಕೊಪ್ಪಳದ ಭಾಗ್ಯನಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮುದಾಯದ ಕುಟುಂಬಗಳು ಗಣೇಶ ಚತುರ್ಥಿಯನ್ನು ವಿಶಿಷ್ಠವಾಗಿ ಆಚರಿಸಿ ಸುದ್ದಿಯಾಗಿದೆ.

    ಕುಟುಂಬದವರು ಕಡ್ಡಾಯವಾಗಿ ಕೆಂಪು ಬಣ್ಣದ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮೊದಲ ಎರಡು ದಿನ ಎಲ್ಲರಂತೆ ಸಿಹಿ ತಿಂಡಿ-ತಿನಿಸು ನೈವೇದ್ಯ ಸಲ್ಲಿಸುತ್ತಾರೆ. ಮೂರನೇ ದಿನವಾದ ಇಂದು ಮಾತ್ರ ಗಣಪನಿಗೆ ನಾನ್ ವೆಜ್ ಅಡುಗೆಯೇ ನೈವೇದ್ಯ. ಚಿಕನ್ ಮಟನ್, ಮೊಟ್ಟೆ ಜೊತೆಗೆ ಮದ್ಯವನ್ನೂ ಇಟ್ಟು ನೈವೇದ್ಯ ಮಾಡಿ ಭಕ್ತಿ ಭಾವದಿಂದ ಪೂಜಿಸಿದ್ದಾರೆ.

    ನಾನ್ ವೇಜ್ ಯಾಕೆ ಇಡುತ್ತಾರೆ?
    ಈ ಕುಟುಂಬ ಮೂಲತಃ ಮಹಾರಾಷ್ಟ್ರದವರಾಗಿದ್ದು ಮಾಂಸಾಹಾರಿ ಹೋಟೆಲ್ ನಡೆಸಿಕೊಂಡು ಬಂದಿದೆ. ಈ ಭಾಗದಲ್ಲಿ ಸಾವಜಿ ಖಾನಾವಳಿ ಎಂದೇ ಪ್ರಸಿದ್ಧಿ. ಸಾವಜಿ ಖಾನಾವಳಿ ಅಂದರೆ ನಾನ್ ವೆಜ್‍ಗೆ ಫೇಮಸ್ ಕೂಡ ಆಗಿದೆ. ಹೀಗಾಗಿ ತಮ್ಮ ಉದ್ಯೋಗದಲ್ಲಿ ಇನ್ನಷ್ಟು ಶ್ರೇಯಸ್ಸು ಸಿಗಲಿ ಅಂತ ಗಣೇಶ ಚತುರ್ಥಿಯ ಮೂರನೇ ದಿನದಂದು ನಾನ್ ವೆಜ್ ನೈವೇದ್ಯವನ್ನು ಗಣೇಶನಿಗೆ ಇಡುತ್ತಾರೆ. ಈ ಪದ್ಧತಿ ಇಂದು ನಿನ್ನೆಯದಲ್ಲ ಹಿರಿಯರ ಕಾಲದಿಂದ ನಡೆದುಕೊಂಡು ಬಂದಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿವಮೊಗ್ಗದಲ್ಲಿ ಘನತೆ ತಂದ ಮೊಹರಂ-ಗಣೇಶ ಹಬ್ಬ

    ಶಿವಮೊಗ್ಗದಲ್ಲಿ ಘನತೆ ತಂದ ಮೊಹರಂ-ಗಣೇಶ ಹಬ್ಬ

    ಶಿವಮೊಗ್ಗ: ಒಂದು ಧರ್ಮದ ಫ್ಲೆಕ್ಸ್ ಇವರು ಕಿತ್ತು ಹಾಕಿದರು, ಅವರ ಫ್ಲೆಕ್ಸ್ ಗೆ ಇವರ ಬೆಂಕಿ ಹಚ್ಚಿದರು ಎಂಬಂತ ಕಾರಣಕ್ಕೆ ಊರು ಹೊತ್ತಿ ಉರಿದ ಘಟನೆಗಳು ಇಂದಿನ ದಿನಗಳಲ್ಲಿ ಸಾಮಾನ್ಯ. ಇಂಥ ಸುದ್ದಿಗಳ ನಡುವೆ ಶಿವಮೊಗ್ಗದ ವಿಜಯನಗರದ ಸೌಹಾರ್ದ ಗಣಪತಿ ಗಮನ ಸೆಳೆಯುತ್ತಿದೆ.

    ಶಿವಮೊಗ್ಗ ಕೋಮು ಸೂಕ್ಷ್ಮ ಪ್ರದೇಶ. ಈ ವರ್ಷ ಮೋಹರಂ ಹಾಗೂ ಗಣಪತಿ ಹಬ್ಬ ಒಂದೇ ದಿನ ಬಂದಿರುವುದು ಜಿಲ್ಲೆಯ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಆದರೆ, ಪೊಲೀಸರ ತಲೆನೋವು ಕಡಿಮೆ ಮಾಡುವಂತಹ ಕಾರ್ಯ ವಿಜಯನಗರ ಫಸ್ಟ್ ಮೈನ್ ನಲ್ಲಿರೋ ಎರಡನೇ ತಿರುವಿನಲ್ಲಿ ನಡೆದಿದೆ.

    ಈ ಕೇರಿಯಲ್ಲಿ ಹಿಂದೂಗಳು ಹಾಗೂ ಅಷ್ಟೇ ಪ್ರಮಾಣದ ಮುಸ್ಲಿಮರೂ ಇದ್ದಾರೆ. ಎರಡೂ ಹಬ್ಬಗಳು ಒಟ್ಟಿಗೆ ಬಂದಿದ್ದು ಇಲ್ಲಿನ ಜನರಲ್ಲಿ ಸಂಭ್ರಮ ಮೂಡಿಸಿದೆ. ಈ ರಸ್ತೆಯ ಗೌರಿಪುತ್ರ ಗೆಳೆಯರ ಬಳಗ ಪ್ರತೀ ವರ್ಷದಂತೆ ಈ ವರ್ಷವೂ ಗಣೇಶನನ್ನು ಕೂರಿಸಿದೆ. ಇಲ್ಲಿನ ಯುವಕರು ಮೋಹರಂ ಹಾಗೂ ಗಣಪತಿ ಶುಭಾಶಯದ ಒಂದೇ ಕಡೆ ಫ್ಲೆಕ್ಸ್ ಹಾಕಿದ್ದಾರೆ. ಇಡೀ ರಸ್ತೆಯನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದಾರೆ.

    ಕೇಸರಿ ಬಾವುಟದ ಜೊತೆಗೆ ಹಸಿರ ಬಾವುಟವೂ ಹಾರಾಡುತ್ತಿದೆ. ಮುಸ್ಲಿಂ ಹುಡುಗರು ಗಣಪತಿ ಮುಂದೆ ಡೋಲು ಬಾರಿಸುತ್ತಾರೆ. ಪ್ರಸಾದ ಹಂಚಲು ನಿಲ್ಲುತ್ತಾರೆ. ಇದೆಲ್ಲವನ್ನೂ ಕಣ್ಣಿಂದ ನೋಡುವುದೇ ಒಂದು ಸಂಭ್ರಮ. ಗಣಪತಿ ಪೆಂಡಾಲ್ ನಿಂದ ನೂರು ಮೀಟರ್ ದೂರದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಮೌಲಾ ಆಲಿ ಮಖಾನ್ ಕೂರಿಸಿದ್ದಾರೆ. ಇಲ್ಲಿಯೂ ಹಿಂದೂಗಳು ಪೂಜೆ ಮಾಡಿಸುತ್ತಾರೆ. ಮೆರವಣಿಗೆಯಲ್ಲಿ ಸಾಗುತ್ತಾರೆ. ಹಲವು ವರ್ಷಗಳಿಂದ ಹಿಂದೂ- ಮುಸ್ಲಿಂ ಧರ್ಮದ ಎಲ್ಲಾ ಹಬ್ಬಗಳನ್ನೂ ಒಟ್ಟಿಗೇ ಆಚರಿಸುತ್ತಿದ್ದರು. ಆದರೆ, ಈ ವರ್ಷ ಗಣಪತಿ ಹಬ್ಬ- ಮೊಹರಂ ಒಟ್ಟಿಗೆ ಬಂದಿದ್ದರಿಂದ ಯಾವುದೇ ತಲೆಬಿಸಿ ಇಲ್ಲದೆ ಸಂಭ್ರಮ- ಸಡಗರದಿಂದ ಎರಡೂ ಧರ್ಮದವರು ಸೇರಿ ಒಟ್ಟಿಗೆ ಹಬ್ಬ ಮಾಡುತ್ತಿದ್ದಾರೆ.

    ಧರ್ಮ ನಾವು ಮಾಡಿಕೊಂಡಿರುವುದು. ನಾವು ಚೆನ್ನಾಗಿದ್ದರೆ ನಮ್ಮ ನಮ್ಮ ಧರ್ಮವೂ ಚೆನ್ನಾಗಿರುತ್ತದೆ. ಮನುಷ್ಯತ್ವ- ಮಾನವೀಯ ಸಂಬಂಧಗಳು ಮೊದಲು ಎಂಬ ತತ್ವಾದರ್ಶ ಇಟ್ಟುಕೊಂಡ ಇಲ್ಲಿನ ಜನ ಇಡೀ ರಾಜ್ಯ- ದೇಶಕ್ಕೇ ಮಾದರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಯಾಂಡಲ್‍ವುಡ್ ನಟರ ಮನೆಯಲ್ಲಿ ರಾರಾಜಿಸುತ್ತಿದ್ದಾನೆ ಗಣಪ!

    ಸ್ಯಾಂಡಲ್‍ವುಡ್ ನಟರ ಮನೆಯಲ್ಲಿ ರಾರಾಜಿಸುತ್ತಿದ್ದಾನೆ ಗಣಪ!

    ಬೆಂಗಳೂರು: ಗಣೇಶ ಹಬ್ಬ ಬಂದರೆ ಸಾಕು ಬೀದಿ ಬೀದಿಯಲ್ಲೂ ಗಣಪನನ್ನು ಕೂರಿಸಿ ಪೂಜೆ ಮಾಡಿ ಗಣೇಶ ಎಲ್ಲರಿಗೂ ಒಳ್ಳೇಯದನ್ನ ಮಾಡಪ್ಪ ಅಂತಾ ಬೇಡಿಕೊಳ್ಳತ್ತಾರೆ. ಹಾಗೆಯೇ ನಮ್ಮ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಸಹ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಮಾಡಿದ್ದಾರೆ.

    ಹೌದು, ನಮ್ಮ ಚಂದನವನದ ಸ್ಟಾರ್ ದಂಪತಿಗಳ ಮನೆಯಲ್ಲೂ ಗಣಪನ ಆರಾಧನೆ ಜೋರಾಗಿಯೇ ನಡೆದಿದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿದೇರ್ಶಕ ಪ್ರೇಮ್ ಮನೆಯಲ್ಲಿ ಗಣೇಶ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ.

    ಉಪೇಂದ್ರ ನಿವಾಸದಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಸ್ಥಾಪಿಸಿ ಉಪೇಂದ್ರ ದಂಪತಿ ಒಟ್ಟಿಗೆ ಪೂಜೆ ಮಾಡಿದರು. ಮನೆ ಮಂದಿಯಲ್ಲಾ ಸೇರಿ ಈ ಹಬ್ಬವನ್ನ ನಾವು ಮಾಡುತ್ತೇವೆ. ನನಗೆ ಗಣೇಶ ಅಂದರೆ ತುಂಬಾ ಪ್ರೀತಿ. ನಾಡಿನ ಜನತೆಗ ಗಣಪ ಒಳ್ಳೆಯದನ್ನ ಮಾಡಲಿ ಅಂತಾ ಉಪ್ಪಿ ಶುಭಾಶಯಯವನ್ನು ಕೋರಿದ್ದಾರೆ. ಗಣೇಶ ಹಬ್ಬ ಮಾಡೋದಕ್ಕೆ ಬಹಳ ಖುಷಿಯಾಗುತ್ತೆ. ಮನೆ ಮಕ್ಕಳೆಲ್ಲ ಸೇರಿ ಹಬ್ಬವನ್ನ ಮಾಡ್ತಿವಿ ಅಂತಾ ಹಬ್ಬದ ಸಂಭ್ರಮದಲ್ಲಿದ್ದ ಪ್ರಿಯಾಂಕಾ ಉಪೇಂದ್ರ ತಿಳಿಸಿದರು.

    ಜೋಗಿ ಪ್ರೇಮ್ ಮನೆಯಲ್ಲೂ ಗಣೇಶನ ಸಂಭ್ರಾಮಚರಣೆ ಅದ್ಧೂರಿಯಾಗಿಯೇ ನಡೆದಿದ್ದು, ಪರಿಸರ ಸ್ನೇಹಿ ಗಣೇಶನಿಗೆ ರಕ್ಷಿತಾ ಪ್ರೇಮ್ ದಂಪತಿ ಗಣೇಶನಿಗೆ ಪೂಜೆ ಮಾಡಿದರು. ಜೊತೆಗೆ ಬಹು ನಿರೀಕ್ಷೆ ಹುಟ್ಟಿಸಿರೋ `ದಿ ವಿಲನ್’ ಸಿನಿಮಾ ರಿಲೀಸ್ ಡೇಟ್ ಅನ್ನ ವಿನಾಯಕನ ಸಮ್ಮುಖ ಅನೌನ್ಸ್ ಮಾಡಿದ ಜೋಗಿ ಪ್ರೇಮ್ ಅಕ್ಟೋಬರ್ 18 ರಂದು ರಾಜ್ಯಾದ್ಯಂತ ದಿ ವಿಲನ್ ಬಿಡುಗಡೆಯಾಗುತ್ತೆ. ಅಷ್ಟೇ ಅಲ್ಲದೇ ಕನ್ನಡ, ತೆಲುಗು, ತಮಿಳು, ಭಾಷೆಯಲ್ಲಿ ಏಕಕಾಲಕ್ಕೆ ತೆರಗೆ ಬರಲಿದೆ ಅಂತಾ ಅಭಿಮಾನಿಗಳಿಗೆ ಖುಷಿ ವಿಚಾರವನ್ನು ನೀಡಿದ್ದಾರೆ.

    ತೆರೆ ಮೇಲೆ ಮಿಂಚುವ ಸಿನಿ ನಟರು ತಮ್ಮ ಮನೆಯಲ್ಲಿ ಗಣೇಶನ ಮೂರ್ತಿಯನ್ನ ಪ್ರತಿಸ್ಥಾಪಿಸಿ, ಅಲಾಂಕರ ಮಾಡಿ ಪೂಜೆ ಪುನಸ್ಕಾರ, ಹೋಮ ಹವನ ಮಾಡಿ ಭಗವಂತನ ಕೃಪೆಗೆ ಪಾತ್ರರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮನೆಯಲೇ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಯನ್ನು ಕೂರಿಸಿ ಹಬ್ಬ ಆಚರಣೆ!

    ಮನೆಯಲೇ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಯನ್ನು ಕೂರಿಸಿ ಹಬ್ಬ ಆಚರಣೆ!

    ತುಮಕೂರು: ನಗರದ ವಿದ್ಯಾನಗರದ ಸಪ್ತಗಿರಿ ನಿವಾಸದಲ್ಲಿ ಒಂದಲ್ಲಾ ಎರಡಲ್ಲಾ ಬರೋಬ್ಬರಿ ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಲಾಗಿದೆ

    ವಿವಿಧ ರೀತಿಯ ಭಂಗಿಗಳಲ್ಲಿರೋ ಗಣೇಶನ ನೋಡುತ್ತಿದ್ದರೆ ನಿಜವಾಗಿಯೂ ವಿಸ್ಮಯವಾಗುತ್ತದೆ. ಶ್ರೀಧರ್ ಎಂಬವರ ಮನೆಯಲ್ಲಿ 1,241 ಗಣೇಶನ ಮೂರ್ತಿಗಳನ್ನ ಕೂರಿಸಿಲಾಗಿದೆ. ಪಲ್ಸರ್ ಮೇಲೆ ತನ್ನ ವಾಹನ ಇಲಿ ಜೊತೆ ಜಾಲಿ ಡ್ರೈವ್ ಮಾಡುತ್ತಿರುವ ಗಣಪತಿ, ಹಾಸಿಗೆ ಮೇಲೆ ಮಲಗಿರೋ ಗಣಪ, ನೃತ್ಯ ಮಾಡುತ್ತಿರುವ ಗಣಪ, ಯೋಗದಲ್ಲಿ ಮಗ್ನನಾಗಿರುವ ಗಣೇಶ, ಮತ್ತೊಂದು ಕಡೆ ಎತ್ತಿನಗಾಡಿ ಮೇಲೆ ಸವಾರಿ ಗಣಪತಿ, ಇದೆಲ್ಲಕ್ಕಿಂತ ಮಿಗಿಲಾಗಿ ಪ್ಲೈಟ್ ಮೇಲೂ ಗಣಪತಿ ಹಾರಾಟ ನಡೆಸುತ್ತಿರುವ ಗಣಪನನ್ನು ಕೂರಿಸಿದ್ದಾರೆ.

    ಇಲ್ಲಿ ಇಡೀ ಸಾವಿರ ಗಣಪತಿಗಳಲ್ಲಿ ತುಂಬಾ ವಿಶೇಷವಾಗಿ ಕಾಣೋದು ಅಂದ್ರೆ ಮಹಾತ್ಮ ಗಾಂಧಿಜಿಯವರನ್ನ ಹೋಲಿಕೆ ಮಾಡೋ ಗಣಪ ಹಾಗೂ ಇಡಗುಂಜಿ ಗಣೇಶ ಈ ಎರಡೂ ಗಣಪತಿಗಳು ಇಡೀ ಇವರ ಮನೆಯಲ್ಲಿ ಕೇಂದ್ರ ಬಿಂದು. ಇಷ್ಟೊಂದು ಇಟ್ಟಿರೋದು ಶೋ ಮಾಡೋಕಂತೂ ಅಲ್ಲ. ಇಡೀ ಕುಟುಂಬ ಅಪ್ಪಟ ಗಣೇಶನ ಭಕ್ತರು ಅದಕ್ಕಿಂತ ಮೇಲಾಗಿ ಗಣಪನನ್ನ ಗುರು, ನಂಬಿಕೆ, ಮಾರ್ಗದರ್ಶಕ, ಆತ್ಮ, ಅಂತೆಲ್ಲಾ ತಿಳಿದುಕೊಂಡು ಆರಾಧಿಸಿತ್ತಿರೋ ಕುಟುಂಬವಾಗಿದೆ.

    ದೇಶದ ಯಾವುದೇ ಮೂಲೆಗೋದರೂ ಅಲ್ಲಿನ ವಿಶೇಷವಾದ ಗಣಪನ ಮೂರ್ತಿಗಳನ್ನ ತಂದಿಟ್ಟಿದ್ದಾರೆ. ಇವರು ಜಾಸ್ತಿದಿನ ತಮ್ಮ ಮನೆಯಲ್ಲಿ ಈ ಕ್ಯೂಟ್ ಗಣಪಗಳನ್ನ ಇಟ್ಕೊಳ್ಳೋದಿಲ್ಲ ಕೇವಲ ಮೂರೇದಿನ ಇಟ್ಟು ಮತ್ತೆ ಪ್ಯಾಕ್ ಮಾಡಿ ರೂಮ್ ಗೆ ಇಟ್ಟು ಸ್ವಲ್ಪವೂ ಹೆಚ್ಚು ಕಡಿಮೆಯಾಗದಂತೆ ಪ್ರತಿದಿನ ಪೂಜೆ ಮಾಡುತ್ತಾರೆ. ಕಳೆದ ಏಳು ವರ್ಷಗಳಿಂದ ಈ ಹಬ್ಬವನ್ನ ಹೀಗೇ ಆಚರಿಸಿಕೊಂಡು ಬರುತ್ತಿರೋ ಇವರು ಪ್ರತಿ ವರ್ಷ ಗಣೇಶ ಹಬ್ಬದಂದು ನೂರು ಗಣಪತಿಗಳನ್ನ ಹೊಸದಾಗಿ ಕೊಂಡು ಹೀಗೆಲ್ಲಾ ಅಲಂಕಾರ ಮಾಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv