Tag: Ganapati idol

  • ಭಾರತದ ಅತಿ ಎತ್ತರದ ಏಕಶಿಲಾ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಬೆಂಗಳೂರಿನಲ್ಲಿ ಅಡಿಗಲ್ಲು

    ಭಾರತದ ಅತಿ ಎತ್ತರದ ಏಕಶಿಲಾ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಬೆಂಗಳೂರಿನಲ್ಲಿ ಅಡಿಗಲ್ಲು

    ಬೆಂಗಳೂರು: ಭಾರತದ ಅತಿ ಎತ್ತರದ ಏಕಶಿಲಾ ಗಣಪನ ಮೂರ್ತಿ ಪ್ರತಿಷ್ಠಾಪನೆಗೆ ಅಡಿಗಲ್ಲು ಕಾರ್ಯಕ್ರಮ ಇಂದು ಬೆಂಗಳೂರಿನ ನಾಗವಾರದಲ್ಲಿ ನಡೆಯಿತು.

    ಸರಿ ಸುಮಾರು 32 ವರ್ಷಗಳ ಹಿಂದೆ ಏಕಶಿಲಾ ವಿಗ್ರಹದ ಕೆತ್ತನೆ ಕಾರ್ಯಕ್ಕೆ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ದೇವೇಗೌಡರು ಚಾಲನೆ ನೀಡಿದ್ದರು. ಸುಮಾರು 42 ಅಡಿ ಎತ್ತರದ ಏಕಶಿಲಾ ಪಂಚಮುಖಿ ನಾಗಲಿಂಗ ಗಣಪನ ವಿಗ್ರಹ ಇದಾಗಿದೆ. ಮೂರ್ತಿ ಕೆತ್ತನೆಗೆ ಮಾಲೂರಿನಿಂದ ಏಕಶಿಲೆ ತಂದು 40 ಕ್ಕೂ ಹೆಚ್ಚು ಶಿಲ್ಪಿಗಳು ಕೆತ್ತನೆ ಮಾಡಿದ್ದಾರೆ. ಇದನ್ನೂ ಓದಿ: ಆಂಧ್ರ ವ್ಯಕ್ತಿಯ ಕೈ ಹಿಡಿದ ಟರ್ಕಿ ಮಹಿಳೆ

    ಈಗ ಗಣೇಶನ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಬರದಿಂದ ಸಾಗುತ್ತಿದ್ದು, ಇಂದು ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಅಡಿಗಲ್ಲು ಹಾಕುವ ಕಾರ್ಯವನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದ್ದಾರೆ.

    ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ನಾಗವಾರ ಗ್ರಾಮದ ನಾಗಲಿಂಗ ಗಣಪತಿ ದೇವಾಲಯ ಆವರಣದಲ್ಲಿ ಭಾರತದ ಅತಿ ಎತ್ತರದ ಗಣಪನ ಮೂರ್ತಿ ಕೆಲವೇ ತಿಂಗಳಲ್ಲಿ ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಅರುವನಹಳ್ಳಿ ಗ್ರಾಮದಿಂದ 42 ಅಡಿ ಎತ್ತರದ ಏಕಶಿಲೆಯನ್ನು ನಾಗವಾರದ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ 1990ರಲ್ಲಿ ಬೃಹತ್ ಲಾರಿಯ ಮೂಲಕ ತರಲಾಗಿತ್ತು. ಇದನ್ನೂ ಓದಿ: ಕೋವಿಡ್‌ ಲಸಿಕೆಯ 4ನೇ ಬೂಸ್ಟರ್‌ ಡೋಸ್‌ಗೆ ಇಸ್ರೇಲ್‌ ಅನುಮೋದನೆ

    ಈಗ ಗಣಪತಿ ವಿಗ್ರಹ ಅಂತಿಮ ರೂಪ ಪಡೆದುಕೊಳ್ಳುತ್ತಿದೆ. ಮಹಾಬಲಿಪುರಂನ ಶಿಲ್ಪಿ ಅಂಬಿಕಾಪತಿ ನೇತೃತ್ವದಲ್ಲಿ ಗಣಪತಿಯ ಮೂರ್ತಿಯ ಕೆತ್ತನೆ ಕಾರ್ಯ ನಡೆದಿತ್ತು. ಏಕಶಿಲಾ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿ ಸಿದ್ದಗಂಗಾ ಸ್ವಾಮೀಜಿ ಅವರು ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು.

  • ಮೋದಿ, ಅಭಿನಂದನ್, ಸಿಂಧು ಜೊತೆ ನಿಂತ ಗಣಪ

    ಮೋದಿ, ಅಭಿನಂದನ್, ಸಿಂಧು ಜೊತೆ ನಿಂತ ಗಣಪ

    ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವಿವಿಧ ವಿನ್ಯಾಸದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಜಿಲ್ಲೆಯ ಕಲಾವಿದರೊಬ್ಬರು ಗಣ್ಯರೊಂದಿಗೆ ಗಣಪನ ಮೂರ್ತಿಯನ್ನು ವಿನ್ಯಾಸಗೊಳಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಮೈಸೂರಿನ ಕಲಾವಿದರಾದ ಕುಂಬಾರಗೇರಿಯ ರೇವಣ್ಣ ಹಲವು ಅವರು ಗಣ್ಯರೊಂದಿಗೆ ಗಣಪನ ಮೂರ್ತಿಯನ್ನು ವಿನ್ಯಾಸಗೊಳಿಸಿ ಹೊಸ ಪ್ರಯತ್ನ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿಂಗ್ ಕಮಾಂಡರ್ ಅಭಿನಂದನ್, ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಅವರೊಂದಿಗೆ ಗಣಪತಿ ನಿಂತಿರುವ ಮೂರ್ತಿಗಳನ್ನು ಕಲಾವಿದರು ಮಾಡಿದ್ದಾರೆ. ಮತ್ತೊಂದು ವಿನ್ಯಾಸದಲ್ಲಿ ಇತ್ತೀಚೆಗೆ ನಿಧನರಾದ ಬಿಜೆಪಿ ನಾಯಕರು ಅನಂತಕುಮಾರ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರ ಮೂರ್ತಿಗಳ ಜೊತೆ ಗಣಪ ನಿಂತಿರುವುದನ್ನು ಕೂಡ ಮಾಡಿದ್ದಾರೆ.

    ಇದಲ್ಲದೇ, ಸಿಎಂ ಯಡಿಯೂರಪ್ಪ ಹಾಗೂ ಈ ಬಾರಿಯ ದಸರಾ ಉದ್ಘಾಟಕರಾದ ಸಾಹಿತಿ ಡಾ.ಎಸ್.ಎಲ್ ಭೈರಪ್ಪ ಅವರ ಜೊತೆಯೂ ಗಣಪ ನಿಂತಿರುವ ಪೂರ್ತಿಗಳು ಇವೆ. ಜೊತೆಗೆ ಶಿವನ ಹಸ್ತದ ಒಳಗೆ ಮೋದಿ ಧ್ಯಾನ ಸ್ಥಿತಿಯಲ್ಲಿ ಕೂತಿರುವಂತೆ ಒಂದು ಮೂರ್ತಿಯನ್ನು ಮಾಡಲಾಗಿದೆ. ಈ ವೈಶಿಷ್ಟ್ಯಪೂರ್ಣ ವಿನ್ಯಾಸಗಳು ಈಗ ಜನರ ಗಮನ ಸೆಳೆಯುತ್ತಿವೆ.

    ಈ ಬಗ್ಗೆ ಮಾತನಾಡಿದ ಕಲಾವಿದ ರೇವಣ್ಣ ಅವರು, ನಾನು ಸುಮಾರು 35 ವರ್ಷದಿಂದ ಮೈಸೂರಿನಲ್ಲಿ ಗೌರಿ, ಗಣಪತಿಯನ್ನು ತಯಾರಿ ಮಾಡಿಕೊಂಡು ಬಂದಿದ್ದೇನೆ. ಜೇಡಿ ಮಣ್ಣಿನಿಂದ ಪರಿಸರ ಸ್ನೇಹಿ ಗಣಪನನ್ನು ನಾನು ತಯಾರಿಸುತ್ತಾ ಬಂದಿದ್ದೇನೆ. ಕಳೆದ 20 ವರ್ಷದಿಂದ ನನ್ನದೇ ಪರಿಕಲ್ಪನೆಯಲ್ಲಿ ವಿಶೇಷ ವಿನ್ಯಾಸದ ಗಣಪತಿಗಳನ್ನು ನಾನು ಮಾಡಿಕೊಂಡು ಬಂದಿದ್ದೇನೆ ಎಂದರು.

    ನಾನು ಈ ಬಾರಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರವನ್ನು ಮನದಲ್ಲಿ ಇಟ್ಟುಕೊಂಡು ಗಣಪತಿಗಳನ್ನು ತಯಾರಿಸಿದ್ದೇನೆ ಎಂದು ಹೇಳಿದರು. ಜೊತೆಗೆ ತಮ್ಮ ದೇಶಕ್ಕೆ ಕೀರ್ತಿ ತಂದ ಹೆಮ್ಮೆಯ ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಹಾಗೂ ಆಟಗಾರ್ತಿ ಪಿ.ವಿ ಸಿಂಧು ಅವರ ಮೂರ್ತಿಯೊಂದಿಗೆ ಕೂಡ ಗಣಪ ಇರುವ ಮೂರ್ತಿಯನ್ನು ರೇವಣ್ಣ ತಯಾರಿಸಿದ್ದಾರೆ.