Tag: gallantry award

  • ಆಪರೇಷನ್ ಸಿಂಧೂರದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ – 16 BSF ಯೋಧರಿಗೆ ಶೌರ್ಯ ಪದಕ

    ಆಪರೇಷನ್ ಸಿಂಧೂರದಲ್ಲಿ ಅಪ್ರತಿಮ ಸಾಹಸ ಪ್ರದರ್ಶನ – 16 BSF ಯೋಧರಿಗೆ ಶೌರ್ಯ ಪದಕ

    ನವದೆಹಲಿ: ಆಪರೇಷನ್ ಸಿಂಧೂರ (Operation Sindoor) ಸಮಯದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಗಡಿ ಭದ್ರತಾ ಪಡೆಯ (BSF) 16 ಸಿಬ್ಬಂದಿಗೆ ಕೇಂದ್ರ ಸರ್ಕಾರ ಶೌರ್ಯ ಪದಕ (Gallantry Medals) ಘೋಷಿಸಿದೆ.

    ಆಪರೇಷನ್ ಸಿಂಧೂರದ ವೇಳೆ ಅಚಲ ಪರಾಕ್ರಮ, ಅಪ್ರತಿಮ ಸಾಹಸ ತೋರಿದ್ದಕ್ಕಾಗಿ 16 ಬಿಎಸ್‌ಎಫ್ ಯೋಧರಿಗೆ ಸ್ವಾತಂತ್ರ್ಯೋತ್ಸವದಂದು (Independence Day) ಶೌರ್ಯ ಪದಕ ನೀಡಲಾಗುವುದು. ಈ ಪದಕಗಳು ಗಡಿ ಭದ್ರತಾ ಪಡೆಯ ಮೇಲೆ ದೇಶವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಬಿಎಸ್‌ಎಫ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇದನ್ನೂ ಓದಿ: ದಾವಣಗೆರೆ | ಅಪ್ರಾಪ್ತನಿಂದ ಬೈಕ್ ರೈಡ್ – ಮಾಲೀಕನಿಗೆ 25,000 ದಂಡ

    ಪದಕ ವಿಜೇತರಲ್ಲಿ ಡೆಪ್ಯೂಟಿ ಕಮಾಂಡರ್, ಇಬ್ಬರು ಸಹಾಯಕ ಕಮಾಂಡರ್ ಮತ್ತು ಒಬ್ಬ ಇನ್ಸ್ಪೆಕ್ಟರ್ ಸೇರಿದ್ದಾರೆ. ಸ್ವಾತಂತ್ರ‍್ಯ ದಿನಾಚರಣೆಯ ಮುನ್ನಾದಿನದಂದು ಕೇಂದ್ರ ಮತ್ತು ರಾಜ್ಯ ಪಡೆಗಳ 1,090 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಸರ್ಕಾರ ಪ್ರಕಟಿಸಿದೆ. ಇದನ್ನೂ ಓದಿ: ದರ್ಶನ್ ಮತ್ತೆ ಜೈಲಿಗೆ; ಚಿತ್ರರಂಗಕ್ಕೆ ದೊಡ್ಡ ನಷ್ಟ ಎಂದ ನಟಿ ಉಮಾಶ್ರೀ

    ಕೇಂದ್ರ ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, 233 ಸಿಬ್ಬಂದಿಗೆ ಶೌರ್ಯ ಪದಕ, 99 ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು 758 ಜನರಿಗೆ ಪ್ರತಿಭಾನ್ವಿತ ಸೇವಾ ಪದಕ ಘೋಷಿಸಲಾಗಿದೆ. ಇದರಲ್ಲಿ ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣಾ ಮತ್ತು ತಿದ್ದುಪಡಿ ಸೇವಾ ಸಿಬ್ಬಂದಿಗೆ ಪದಕಗಳು ಸೇರಿವೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!

  • ಕ್ವಾರಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸಿ ತಾನೇ ಸಾವನ್ನಪ್ಪಿದ ಬಾಗಲಕೋಟೆಯ ಬಾಲಕಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ

    ಕ್ವಾರಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸಿ ತಾನೇ ಸಾವನ್ನಪ್ಪಿದ ಬಾಗಲಕೋಟೆಯ ಬಾಲಕಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ

    ಬಾಗಲಕೋಟೆ: ಕ್ವಾರಿಯಲ್ಲಿ ಬಿದ್ದ ಬಾಲಕನನ್ನು ರಕ್ಷಿಸಿ ತಾನೆ ಸಾವನ್ನಪ್ಪಿದ ಬಾಲಕಿಯೊಬ್ಬಳಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ಲಭಿಸಿದೆ.

    ಜಿಲ್ಲೆಯ ಹುನಗುಂದ ತಾಲೂಕಿನ ವಡ್ಡರಹೊಸೂರು ಗ್ರಾಮದ ನೇತ್ರಾವತಿ ಚೌಹಾಣ್ ಎಂಬ ಯುವತಿ ಈ ಪ್ರಶಸ್ತಿಗೆ ಆಯ್ಕೆಯಾದ ಬಾಲಕಿ. 2017ರ ಮೇ 13ರಂದು ಕಲ್ಲಿನ ಕ್ವಾರಿಯ ನೀರಲ್ಲಿ ಆಕೆಯ ಮಾವನ ಮಕ್ಕಳಾದ 14 ವರ್ಷದ ಮಾಂತೇಶ್ ಮತ್ತು 13 ವರ್ಷದ ಗಣೇಶ್ ಆಟವಾಡುವ ವೇಳೆ ಅಕಸ್ಮತಾಗಿ ಕಲ್ಲಿನ ಕ್ವಾರಿಯ ನೀರಲ್ಲಿ ಬಿದ್ದು ಮುಳುಗುತ್ತಿದ್ದರು.

    ಈ ವೇಳೆ ಬಟ್ಟೆ ತೊಳೆಯುತ್ತಿದ್ದ ನೇತ್ರಾ ಚೌಹಾಣ್ ಕ್ವಾರಿಗೆ ಹಾರಿ ಮಾಂತೇಶನನ್ನು ಬದುಕಿಸಿದ್ದಳು. ಇನ್ನೊಬ್ಬ ಬಾಲಕ ಗಣೇಶನನ್ನು ಬದುಕಿಸುವ ಪ್ರಯತ್ನದಲ್ಲಿ ನೇತ್ರಾ ತಾನು ಮುಳುಗಿ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ನೇತ್ರಾ ಮತ್ತು ಗಣೇಶನನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ವಡ್ಡರ ಹೊಸೂರು ಗ್ರಾಮಸ್ಥರಲ್ಲಿ ದುಃಖದ ವಾತಾವರಣ ಮಡುಗಟ್ಟಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು.

    ಈಗ ಬಾಲಕಿ ನೇತ್ರಾಳ ಸಾಹಸ ಕಂಡು, ಜನವರಿ 26ರ ಗಣರಾಜ್ಯೋತ್ಸವ ದಿನದಂದು ಮರಣೋತ್ತರವಾಗಿ ಆಕೆಗೆ ಪ್ರಧಾನಿ ಮೋದಿ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.

  • ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?

    ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?

    ನವದೆಹಲಿ: ಇದೂವರೆಗೂ ಎಷ್ಟು ಮಂದಿಗೆ ಭಾರತ ಸರ್ಕಾರ ಪರಮವೀರ ಚಕ್ರ ಗೌರವ ನೀಡಿದೆ? ಪರಮವೀರ ಚಕ್ರ ಪಡೆದ ಸೈನಿಕರ ಸಾಹಸ ಏನು? ಈ ಪ್ರಶ್ನೆಗಳಿಗೆ ಇಲ್ಲಿಯವರೆಗೆ ಸುಲಭವಾಗಿ ಬೇಗನೆ ಉತ್ತರ ಸಿಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ನೀವು ಬೆರಳ ತುದಿಯಲ್ಲಿ ಪರಮವೀರ ಚಕ್ರ, ಮಹಾವೀರ ಚಕ್ರ ಸೇರಿದಂತೆ ಶೌರ್ಯ ಗೌರವಕ್ಕೆ ಪಾತ್ರರಾದ ಸೈನಿಕರ ಮಾಹಿತಿಯನ್ನು ಪಡೆಯಬಹುದು.

    ದೇಶಕ್ಕಾಗಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಗೌರವ ಪದಕ ಪಡೆದ ಸೈನಿಕರ ಮಾಹಿತಿ ತಿಳಿಸುವ ಸಂಬಂಧ ಹೊಸ ವೆಬ್‍ಸೈಟನ್ನು ಆರಂಭಿಸಿದೆ. 71ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ http://gallantryawards.gov.in/ ವೆಬ್‍ಸೈಟನ್ನು ಲೋಕಾರ್ಪಣೆ ಮಾಡಿದ್ದಾರೆ.

    ವೆಬ್ ಸೈಟ್ ಲೋಕಾರ್ಪಣೆ ಮಾಡಿ ಟ್ವೀಟ್ ಮಾಡಿದ ಮೋದಿ, ದೇಶಕ್ಕಾಗಿ ಶೌರ್ಯ ತೋರಿದ ಸೈನಿಕರು, ನಾಗರಿಕರ ಬಗ್ಗೆ ಜನರಿಗೆ ಮಾಹಿತಿ ನೀಡಲು ಈ ವೆಬ್‍ಸೈಟನ್ನು ತೆರೆಯಲಾಗಿದೆ. ಈ ವೆಬ್‍ಸೈಟ್ ನಲ್ಲಿ ಪ್ರಕಟವಾಗಿರುವ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ, ಫೋಟೋಗಳು ಇದ್ದರೆ ಕಳುಹಿಸಿಕೊಡಿ. ಈ ವೆಬ್‍ಸೈಟ್ ಮತ್ತಷ್ಟು ಸುಧಾರಣೆ ಮಾಡಲು ನೀವು ಸಲಹೆ, ಪ್ರತಿಕ್ರಿಯೆಗಳನ್ನು ನೀಡಬಹುದು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ವೆಬ್‍ಸೈಟ್ ನಲ್ಲಿ ಏನಿದೆ?
    ಪರಮ ವೀರ ಚಕ್ರ, ಮಹಾ ವೀರ ಚಕ್ರ, ವಿರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ ಪಡೆದವರ ಫೋಟೋ ಮತ್ತು ವಿವರಗಳನ್ನು ನೀಡಲಾಗಿದೆ. 1950 ರಿಂದ ಪ್ರಾರಂಭವಾಗಿ 2017ರ ವರೆಗೆ ಈ ಗೌರವ ಪಡೆದ ವ್ಯಕ್ತಿಗಳ ವಿವರ ಈ ತಾಣದಲ್ಲಿ ಇದೆ.

    ಈ ಪದಕವನ್ನು ಯಾಕೆ ನೀಡಲಾಗುತ್ತದೆ? ಈ ಪದಕದಲ್ಲಿರುವ ವಿಶೇಷತೆ ಏನು? ಈ ಗೌರವ ಪಡೆಯಲು ಬೇಕಾಗಿರುವ ಮಾನದಂಡಗಳು ಏನು ಎನ್ನುವುದನ್ನು ವಿವರಿಸಲಾಗಿದೆ. 2006 ನೇ ಇಸ್ವಿಯಿಂದ ರಾಷ್ಟ್ರಪತಿಗಳು ಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವ ಫೋಟೋ/ ವಿಡಿಯೋಗಳು ಈ ತಾಣದಲ್ಲಿ ಸಿಗುತ್ತದೆ.

    ಮಾಹಿತಿ ಪಡೆಯುವುದು ಹೇಗೆ?
    ಹೋಮ್ ಪೇಜ್ ನಲ್ಲಿರುವ awardees ವಿಭಾಗಕ್ಕೆ ಹೋದರೆ ಪರಮ ವೀರ ಚಕ್ರ, ಮಹಾ ವೀರ ಚಕ್ರ, ವಿರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರದ ಫೋಟೋ ಕಾಣುತ್ತದೆ. ನೀವು ಆ ಫೋಟೋದ ಮೇಲೆ ಕ್ಲಿಕ್ ಮಾಡಿದರೆ ಇದೂವರೆಗೂ ಆ ಗೌರವಕ್ಕೆ ಪಾತ್ರರಾದವರ ಫೋಟೋಗಳು ಕಾಣುತ್ತದೆ. ಈ ಫೋಟೋದ ಮೇಲೆ ಕ್ಲಿಕ್ ಮಾಡಿದರೆ ಆ ವ್ಯಕ್ತಿಗೆ ಸಂಬಂಧಿಸಿದ ವಿವರ ಇರುವ ಹೊಸ ಪೇಜ್ ಓಪನ್ ಆಗುತ್ತದೆ.