Tag: Future

  • ವಿಶ್ವಾಸ ಮತಯಾಚನೆ ಮೊದಲೇ ಬಿಎಸ್‍ವೈರ ಭವಿಷ್ಯ ನುಡಿದ ಜ್ಯೋತಿರ್ವಿಜ್ಞಾನಿ

    ವಿಶ್ವಾಸ ಮತಯಾಚನೆ ಮೊದಲೇ ಬಿಎಸ್‍ವೈರ ಭವಿಷ್ಯ ನುಡಿದ ಜ್ಯೋತಿರ್ವಿಜ್ಞಾನಿ

    ಉಡುಪಿ: ಇಂದು ಸಂಜೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಬಿ.ಎಸ್ ಯಡಿಯೂರಪ್ಪ ವಿಜಯ ಶಾಲಿಯಾಗಲಿದ್ದಾರೆ ಎಂದು ಉಡುಪಿಯ ಪ್ರಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

    ಪ್ರಕಾಶ್ ಅಮ್ಮಣ್ಣಾಯ, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಯಡಿಯೂರಪ್ಪ ನ ಚಂದ್ರನಿಗೆ ಇಂದು ನೀಚಭಂಗ. ಬಿ.ಎಸ್ ಯಡಿಯೂರಪ್ಪನಿಗೆ ರಾಜಯೋಗ ಅಂತ ಹೇಳಿದ್ದಾರೆ. ಯಡಿಯೂರಪ್ಪ ನ ಏಕಾದಶ ಸ್ಥಾನದಲ್ಲಿ ಗುರುಬಲ ಇದೆ. ಇಂದಿನ ದಿನವೂ ಚೆನ್ನಾಗಿದೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅತಂತ್ರ ಸರ್ಕಾರ ನಿರ್ಮಾಣ- ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

    ಸಂಜೆ 4.30 ರ ಒಳಗೆ ವಿಶ್ವಾಸಮತ ಯಾಚನೆ ಮಾಡಬೇಕು. ಸಂಜೆ 5 ಗಂಟೆ ನಂತರ ಗಳಿಗೆಗಳು ಸರಿಯಿಲ್ಲ. ಬಿ.ಎಸ್ ವೈಭವ ರದ್ದು ಹೋರಾಟವೇ ಜೀವನ. ಇವತ್ತು ಕೂಡಾ, ಹೋರಾಟ ನಡೆಸಿಯೇ ಗೆಲ್ಲುತ್ತಾರೆ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

  • ರಾಜಕಾರಣಿಗಳ ಎಲೆಕ್ಷನ್ ರಿಸಲ್ಟ್ ಹೇಳುತ್ತೆ ಈ ವಿಸ್ಮಯಕಾರಿ ಕಲ್ಲು!

    ರಾಜಕಾರಣಿಗಳ ಎಲೆಕ್ಷನ್ ರಿಸಲ್ಟ್ ಹೇಳುತ್ತೆ ಈ ವಿಸ್ಮಯಕಾರಿ ಕಲ್ಲು!

    ಸಾಮಾನ್ಯ ಮನುಷ್ಯನೊಬ್ಬನಿಗೆ ಭವಿಷ್ಯತ್ತಿನಲ್ಲಿ ಆಗಿಹೋಗೋ ಘಟನೆಗಳ ಬಗ್ಗೆ ಕಲ್ಪನೆ ಇರೋಕೆ ಸಾಧ್ಯಾನಾ? ಅಥವಾ ನಾಳೆ ಏನಾಗುತ್ತೆ ಅನ್ನೋದನ್ನ ಇಂದೇ ಊಹಿಸೋದಕ್ಕೆ ಸಾಧ್ಯಾನಾ? ಖಂಡಿತಾ ಇಲ್ಲ. ಇಂತಹಾ ಒಂದು ಶಕ್ತಿ ಸಿದ್ಧಿಸಿದ್ರೆ, ಅದನ್ನ ಅತೀಂದ್ರಿಯ ಅಂತಾರೆ. ಇಂಥದ್ದೇ ಒಂದು ಪವಾಡ ಧಾರವಾಡದಲ್ಲಿ ನಡೀತಿದೆ. ಧಾರವಾಡದ ರಾಯಣ್ಣ ಅನ್ನೋ ವ್ಯಕ್ತಿ ತಮ್ಮ ಜೀವನದ 18 ವರ್ಷಗಳನ್ನ ದೇಶ ಸೇವೆಯಲ್ಲೇ ಕಳೆದವರು. ಏರ್ ಫೋರ್ಸ್ ನ ನಿವೃತ್ತ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.

    1958ನಿಂದ ದೇಶಸೇವೆಗೆ ಕಟಿಬದ್ಧರಾಗಿ ನಿಂತ ರಾಯಣ್ಣ ನಂತರ ಪ್ಯಾರಚೂಟ್ ಜಂಪಿಂಗ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿದ್ರು. ಈಗ ನಿವೃತ್ತಿ ತೆಗೆದುಕೊಂಡು ತಮ್ಮ ಪರಿವಾರದ ಜೊತೆ ನೆಮ್ಮದಿಯ ಜೀವನ ನಡೆಸ್ತಿದ್ದಾರೆ. ಅದೊಂದು ದಿನ ರಾಯಣ್ಣರಿಗೆ ವಿಸ್ಮಯಕಾರಿ ವಸ್ತುವೊಂದು ಕಣ್ಣಿಗೆ ಬಿತ್ತು. ಅದುವೇ ಇಲ್ಲಿ ಕಾಣ್ತಿರೋ ದೊಡ್ಡ ಕಲ್ಲು. ಹಾಗಂತ ಇದು ಬರೀ ಕಲ್ಲು ಅಂತಾ ಹೇಳಿ ಹಾಗೇ ಸುಮ್ಮನೆ ದಾರಿಯಲ್ಲಿ ಬಿಡೋ ಹಾಗಿರ್ಲಿಲ್ಲ. ಅದೇನನಿಸಿತೋ ಏನೋ. ರಾಯಣ್ಣ ಗಟ್ಟಿ ನಿರ್ಧಾರ ಮಾಡೇ ಬಿಟ್ರು. ಅದನ್ನು ನೇರವಾಗಿ ಮನೆಗೆ ತಂದಿಟ್ರು.

    ಹೀಗೆ ಮನೆಗೆ ಕಲ್ಲನ್ನ ತಂದಿಟ್ಟ ನಂತ್ರ, ರಾಯಣ್ಣನವರ ಬದುಕಿನಲ್ಲಿ, ಮನೆಯಲ್ಲಿ ಅನೇಕ ಬದಲಾವಣೆಗಳಾಗ್ತಿರೋದು ಗಮನಕ್ಕೆ ಬಂತು. ಒಂದು ರೀತಿಯ ಸಕಾರಾತ್ಮಕ ಶಕ್ತಿ ತುಂಬ್ತಾ ಇರೋದನ್ನ ರಾಯಣ್ಣ ಗಮನಿಸಿದ್ರು. ಮನೆಯವರಿಗೂ ಇದು ಅನುಭವಕ್ಕೆ ಬಂದಿತ್ತು. ಹೀಗಾಗಿ, ಈ ಕಲ್ಲಿಗೆ ನಿತ್ಯ ಪೂಜೆ ಮಾಡೋಕೆ ಶುರು ಮಾಡಿದ್ರು. ಅಷ್ಟೇ. ಆ ಬಳಿಕ ಅನೇಕ ವಿಸ್ಮಯಗಳು ನಡೆಯೋದಕ್ಕೆ ಶುರುವಿಟ್ಕೊಳ್ತು. ಅಂದ ಹಾಗೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಚಾಯ್ ವಾಲಾ ಆಗಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಇದೇ ಟೀ ಮಾರ್ತಿದ್ದ ವ್ಯಕ್ತಿ ಮುಂದೊಂದು ದಿನ ಪ್ರಧಾನಿಯಾಗ್ತಾರೆ ಅಂತಾ ಹೇಳಿದ್ದು ಇದೇ ಕಲ್ಲು ಅಂದ್ರೆ ನೀವು ನಂಬ್ಲೇಬೇಕು. ಅಂದು ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ನರೇಂದ್ರ ಮೋದಿಯವರು ಗೆಲ್ತಾರೆ ಅಂತ ಈ ಕಲ್ಲು ಮೊದಲೇ ಭವಿಷ್ಯ ನುಡಿದಿತ್ತಂತೆ.

    ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ. ಆರ್ಟ್ ಆಫ್ ಲೀವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಕೂಡಾ ಈ ಆದಿಶಕ್ತಿಯ ಪವಾಡಗಳನ್ನು ನೋಡಿ ಬೆರಗಾಗಿದ್ದಾರೆ. ಧಾರವಾಡಕ್ಕೆ ಬಂದು ದರ್ಶನ ಕೂಡಾ ಪಡೆದುಕೊಂಡಿದ್ದಾರೆ. ರಾಯಣ್ಣನವರನ್ನು ತಮ್ಮ ಆಶ್ರಮಕ್ಕೂ ಆಹ್ವಾನಿಸಿ ತಮ್ಮ ಭಕ್ತರಿಗೂ ಇದ್ರ ಬಗ್ಗೆ ಹೇಳಿದ್ರು. ಇನ್ನು ಅಡ್ವಾಣಿ, ಅರುಣ್ ಜೇಟ್ಲಿ, ಕಿರಣ್ ಬೇಡಿ ಹೀಗೆ ಸಾಕಷ್ಟು ಜನ ಈ ದೇವಿಯ ಚಮತ್ಕಾರವನ್ನು ಕಂಡು ಚಕಿತರಾಗಿದ್ದಾರೆ.

    ಹಾಗಂತ ಈ ಕಲ್ಲು ಮಾತಾಡುತ್ತಾ ಅಂತಾ ನೀವ್ ಕೇಳ್ಬೋದು. ಖಂಡಿತಾ ಮಾತಾಡಲ್ಲ. ರಾಯಣ್ಣ ಅವ್ರ ದೇಹದಲ್ಲಿ ಆವಾಹಿಸಲ್ಪಡೋ ದೇವಿ ಮಾತಾಡ್ತಾಳೆ. ರಾಯಣ್ಣ ಹೇಳೋ ಪ್ರಕಾರ ಈ ಆದಿಶಕ್ತಿಯ ಸ್ವರೂಪವಾದ ಕಲ್ಲು ಪ್ರಪಂಚದ ಎಲ್ಲಾ ಭಾಷೆಗಳನ್ನೂ ಗ್ರಹಿಸಬಲ್ಲದು. ರಾಯಣ್ಣ ತಮಗೆ ಸಿದ್ಧಿಸಿದ ಈ ಅತಿಮಾನುಷ ಶಕ್ತಿಯಿಂದ ಆದಿಶಕ್ತಿಯ ಜೊತೆ ಮಾತಾಡೋಕೆ ಶುರು ಮಾಡಿದ್ರಂತೆ. ಉದಾಹರಣೆಗೆ, ಈ ವರ್ಷ ತನಗೆ ಒಳ್ಳೆ ಕೆಲಸ ಸಿಗುತ್ತಾ ಇಲ್ವಾ ಅಂತಾ ಯಾರಾದ್ರೂ ಪ್ರಶ್ನೆ ಕೇಳಿದ್ರು ಅಂತಿಟ್ಕೊಳ್ಳಿ. ಒಂದ್ವೇಳೆ ಕೆಲಸ ಆಗುತ್ತೆ ಅಂತಂದ್ರೆ, ಈ ಕಲ್ಲನ್ನ ಸುಲಭವಾಗಿ ಎತ್ತೋಕೆ ಸಾಧ್ಯ. ಒಂದು ವೇಳೆ ನೀವು ಯೋಚಿಸ್ತಿರೋ ಕೆಲಸ ಆಗಲ್ಲ ಅಂತಾದ್ರೆ, ಈ ಕಲ್ಲು ಜಪ್ಪಯ್ಯ ಅಂದ್ರೂ ಇರೋ ಜಾಗದಿಂದ ಒಂದಿಂಚೂ ಕದಲೋದಿಲ್ಲ. ಇದೊಂದೇ ಅಲ್ಲ, ಅನೇಕ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಸಿಗುತ್ತೆ. ಎಲೆಕ್ಷನ್ ಸಂದರ್ಭದಲ್ಲಂತೂ ಈ ಕಲ್ಲಿಗೆ ಸಿಕ್ಕಾಪಟ್ಟೆ ಡಿಮಾಂಡ್ ಕ್ರಿಯೇಟ್ ಆಗಿದೆ.

    -ಕ್ಷಮಾ ಭಾರದ್ವಾಜ್, ಉಜಿರೆ

  • ಶಾಸ್ತ್ರಿಯಂತೆ ರಾಷ್ಟ್ರದ ಮಹಾನ್ ನಾಯಕನಿಗೆ ವಿಷಪ್ರಾಶನ: ಕೋಡಿ ಶ್ರೀ ಭವಿಷ್ಯ

    ಶಾಸ್ತ್ರಿಯಂತೆ ರಾಷ್ಟ್ರದ ಮಹಾನ್ ನಾಯಕನಿಗೆ ವಿಷಪ್ರಾಶನ: ಕೋಡಿ ಶ್ರೀ ಭವಿಷ್ಯ

    ಧಾರವಾಡ: ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ರೀತಿಯಲ್ಲಿಯೇ, ಈ ದೇಶದಲ್ಲಿ ಮತ್ತೊಬ್ಬ ಮಹಾನ್ ನಾಯಕನ ಅವನತಿಯಾಗುತ್ತದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

    ದಸರಾ ಜಂಬೂ ಸವಾರಿ ಉತ್ಸವಕ್ಕೆ ಆಗಮಿಸಿದ್ದ ಶ್ರೀಗಳು, ರಾಷ್ಟ್ರ ರಾಜಕಾರಣದ ಬಗ್ಗೆ ಈಗಲೇ ಮಾತನಾಡಲ್ಲ ಆದರೆ ಹಿಂದೆ, ಚೋಟು ಗೇಣಿನ ವೀರ. ಭಾರತದ ಕುವರ ತಕ್ಕಡಿಯ ಊರಿನಲ್ಲಿ ವಿಷಪಾನ ಮಾಡುತ್ತಾನೆ’ ಎಂದು ಹೇಳಿದ್ದೆ. ಈ ಹೇಳಿಕೆಯ ಬಳಿಕ ಆಗ ತಾಷ್ಕೆಂಟ್ ನಲ್ಲಿ ಲಾಲಬಹದ್ದೂರ್ ಶಾಸ್ತ್ರಿ ಅವರ ಸಾವು ಸಂಭವಿಸಿತ್ತು. ಈಗ ಅಂಥದ್ದೇ ಘಟನೆ ಈ ದೇಶದಲ್ಲಿ ಮರುಕಳಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದರು.

    ರಾಜ್ಯ ಸರ್ಕಾರ ಮೌಢ್ಯ ನಿಷೇಧ ಪ್ರತಿಬಂಧಕ ಕಾಯ್ದೆ ತರುತ್ತಿರುವದು ಸ್ವಾಗತಾರ್ಹ. ಜನರು ಮೊದಲಿನಿಂದಲೂ ಸತ್ಯಕ್ಕಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕೆಲವರು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಜನರ ಸುಲಿಗೆ ಮಾಡುತ್ತಿದ್ದಾರೆ. ಹಾಗಾಗಿ ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡುತ್ತಿರುವುದು ಒಳ್ಳೆಯ ಕಾರ್ಯ ಎಂದರು. ಈ ಕಾಯ್ದೆ ಬಂದರೆ ಸತ್ಯ ಉಳಿಯುತ್ತದೆ. ಇನ್ನೂ ಜನವರಿವರೆಗೆ ಇದೇ ರೀತಿ ಅಕಾಲಿಕ ಮಳೆಯಾಗಲಿದೆ ಎಂದು ಹೇಳಿದರು.

    ಶಾಸ್ತ್ರಿ ಮೃತಪಟ್ಟಿದ್ದು ಹೇಗೆ?
    ಪಾಕಿಸ್ತಾನ ವಿರುದ್ಧದ ಎರಡನೇ ಯುದ್ಧದಲ್ಲಿ ಭಾರತ ಜಯಗಳಿಸಿತ್ತು. ಈ ವೇಳೆ ಎರಡು ದೇಶಗಳ ಮಧ್ಯೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ 1966 ಜನವರಿ 10 ರಂದು ರಷ್ಯಾದ ತಾಷ್ಕೆಂಟ್‍ನಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಪಾಕಿಸ್ತಾನದ ಅಂದಿನ ಅಧ್ಯಕ್ಷರಾದ ಆಯೂಬ್ ಖಾನ್ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಈ ಶಾಂತಿ ಸಭೆಯಲ್ಲಿ ಭಾಗವಹಿಸಿದ್ದರು. ಉಭಯ ದೇಶಗಳ ನಾಯಕರು ರಷ್ಯಾದ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು.

    ಶಾಸ್ತ್ರಿ ಅವರು ಸಹಿ ಹಾಕಿದ ಗಂಟೆಯಲ್ಲೇ ಹೃದಯಾಘಾತದಿಂದ ಸಾವನ್ನಪಿದ್ದರು. ರಷ್ಯಾ ವೈದ್ಯರು ಕೂಡ ಶಾಸ್ತ್ರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದರು. ಆದರೆ ಶಾಸ್ತ್ರಿಯವರ ಕುಟುಂಬದ ನಿಕಟವರ್ತಿಯಾಗಿದ್ದ ಪತ್ರಕರ್ತ ಕುಲದೀಪ್ ನಯ್ಯರ್ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರನ್ನು ವಿಷಪ್ರಾಶನ ಮಾಡಿ ಹತ್ಯೆ ಮಾಡಲಾಗಿದೆ ಎನ್ನುವ ಅನುಮಾನ ವ್ಯಕ್ತಪಡಿಸಿದ್ದರು. ಶಾಸ್ತ್ರಿ ಕುಟುಂಬದ ಸದಸ್ಯರು ರಷ್ಯಾದಲ್ಲಿ ಮರಣೋತ್ತರ ಪರೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸಿದ್ದರು. ಒಟ್ಟಿನಲ್ಲಿ ಇಲ್ಲಿಯವರೆಗೂ ಶಾಸ್ತ್ರಿ ಮೃತಪಟ್ಟ ವಿಚಾರ ಚಿದಂಬರ ರಹಸ್ಯವಾಗಿಯೇ ಉಳಿದಿದೆ.