Tag: Friendship

  • ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    ನಾವೇನು ಚಿಕ್ಕ ಹುಡುಗರಾ? ಯಾಕೆ ದೂರಾದ್ವಿ ಅನ್ನೋದು ನಮಗೆ ಗೊತ್ತಿದೆ – ದರ್ಶನ್‌ ಬಗ್ಗೆ ಕಿಚ್ಚನ ಮಾತು

    – ಸೂರ್ಯ – ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದ ಸುದೀಪ್‌

    ನಾವೇನು ಚಿಕ್ಕವರಲ್ಲ, ನಾವು ದೂರಾಗಿದ್ದು ಯಾಕೆ ಅನ್ನೋದು ನಮಗೆ ಗೊತ್ತಿದೆ ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರು ನಟ ದರ್ಶನ್ (Actor Darshan) ಬಗ್ಗೆ ಹೇಳಿದರು.

    ಸೆ.2ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ನಟ ದರ್ಶನ್ ಹಾಗೂ ತಮ್ಮ ಸ್ನೇಹದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರ ಸಿನಿಮಾಗೆ ಒಳ್ಳೇದಾಗಲಿ. ಅವರಿಗೆ ಅವರದ್ದೇ ಆದ ನೋವು ಇರುತ್ತೆ. ಅದರ ಹಿಂದೆ ಅವರ ಅಭಿಮಾನಿಗಳು ಇರುತ್ತಾರೆ. ಅಭಿಮಾನಿಗಳಿಗೂ ಒಂದು ನಂಬಿಕೆ ಇರುತ್ತದೆ. ನಾವು ಮಾತಾಡೋದು ತಪ್ಪಾಗುತ್ತೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕು ಅದನ್ನ ಮಾಡ್ತಾ ಇರ್ತಾರೆ. ಅದಕ್ಕೂ ನಾವು ಅಡ್ಡ ಬರಬಾರದು. ಯಾರೂ ಕೈಕಟ್ಕೊಂಡು ಸುಮ್ಮನೇ ಕುಳಿತಿರಲ್ಲ. ಆದರೆ ಕೆಲವೊಂದಕ್ಕೆ ನಾನು ತಲೆಹಾಕೋಕೆ ಹೋಗಲ್ಲ. ಯಾಕಂದ್ರೆ ನಂಗೆ ವೈಯಕ್ತಿಕವಾಗಿ ಇಂಟ್ರೆಸ್ಟ್ ಇಲ್ಲ. ಮಾತಾಡಿದ್ರೆ ಅದು ಎಲ್ಲವನ್ನೂ ಹಾಳಮಾಡುತ್ತೆ. ಜೊತೆಗೆ ಅದು ಕೆಲವೊಮ್ಮೆ ಅಂತರ ಸೃಷ್ಟಿ ಮಾಡುತ್ತೆ ಎಂದು ಹೇಳಿದರು.ಇದನ್ನೂ ಓದಿ: ಪರಮ ಸುಂದರಿಯಾದ ರಮ್ಯಾ!

    ಇನ್ನೂ ನಾವಿಬ್ಬರು ಯಾಕೆ ಮಾತಾಡಲ್ಲ ಅಂದ್ರೆ ಅದಕ್ಕೆ ಕೆಲವು ಕಾರಣಗಳಿವೆ. ಯಾರೂ ಆ ಕಾರಣಗಳ ಬಗ್ಗೆ ಕೇಳಲ್ಲ. ಆದ್ರೆ ನಮಗೆ ಗೊತ್ತಿರುತ್ತೆ. ಇನ್ನೂ ಯಾರದ್ದೋ ಮಾತು ಕೇಳಿಕೊಂಡು ಹೀಗೆ ಮಾಡುವಷ್ಟು ನಾವು ಚಿಕ್ಕವರಲ್ಲ, ನಮಗೆ ಕೆಲವು ವಿಷಯಗಳು ಅರ್ಥ ಆಗುತ್ತವೆ. ನಾವ್ಯಾಕೆ ಹೀಗೀದಿವಿ ಅಂತ ನಮ್ಮ ಸತ್ಯ ನಮಗೆ ಗೊತ್ತಿರುತ್ತೆ. ಸೂರ್ಯ ಹಾಗೂ ಚಂದ್ರ ಅದರ ಜಾಗದಲ್ಲಿ ಎರಡು ಚೆನ್ನಾಗಿರುತ್ತೆ ಎಂದರು.

    ಕಿಚ್ಚ ಸುದೀಪ್ ಸೋಮವಾರ (ಸೆ.1) ರಾತ್ರಿ 9 ರಿಂದ 12 ಗಂಟೆವರೆಗೆ ಅಭಿಮಾನಿಗಳ ಜೊತೆ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ. ಇದನ್ನೂ ಓದಿ: ಹೃದಯಾಘಾತ – ಸಿನಿಮಾ ರೈಟರ್ ಎಸ್.ಎಸ್ ಡೇವಿಡ್ ನಿಧನ

  • ಅವಳ ಮೂಗಿನ ತುದಿ ಕೋಪ ನಂಗಿಷ್ಟ!

    ಅವಳ ಮೂಗಿನ ತುದಿ ಕೋಪ ನಂಗಿಷ್ಟ!

    ದೆಂತ ವಿಚಿತ್ರ! ಎಲ್ಲ್ರೂ ಪ್ರೀತ್ಸೋ ಹುಡುಗಿಯ ನಗು ಇಷ್ಟ.. ಅವಳ ಮುಂಗುರುಳು ಸರಿಸುವಾಗ ಆ ಕುಡಿ ನೋಟ ಇಷ್ಟ ಅಂತ ಬರೆದ್ರೆ ಇವನೇನು ಅವಳ ಕೋಪ ಇಷ್ಟ ಅಂತಾನೇ ಅಂತ ಆಶ್ಚರ್ಯನಾ?! ನಿಜ ನನಗೆ ಅವಳ ಕೋಪ ತುಂಬಾ ಇಷ್ಟ..! ಅದಕ್ಕೆ ಅವಳಿಗೆ ಆಗಾಗ ಬೇಕು ಅಂತಾನೇ ರೇಗಿಸಿ ಬೇಜಾರು ಮಾಡಿ ಸಿಟ್ಟು ಬರೋ ಹಾಗೇ ಮಾಡ್ತೀನಿ! ಆದ್ರೆ ನನಗೆ ಈ ಥರ ಕೋಪ ಬರಿಸೋ ಚಾನ್ಸ್‌ ತುಂಬಾ ಕಡಿಮೆನೇ ಸಿಕ್ಕಿದ್ದು.. ಯಾಕಂದ್ರೆ ಅವಳಿಗೆ ಕೋಪ ಮೂಗಿನ ಮೇಲೆ ಇರ್ತಿತ್ತು..!

    ಹೌದು ಕಣ್ರೀ..! ಎಲ್ಲಾ ಹುಡುಗಿಯರು ತಮ್ಮ ಮೂಗಿಗೆ ಮೂಗು ಬೊಟ್ಟಿಂದ ಅಲಂಕಾರ ಮಾಡ್ಕೊಂಡಿದ್ರೆ.. ಇವಳು ಕೋಪಾನೇ ಮೂಗಿನ ತುದಿಯಲ್ಲಿಟ್ಟುಕೊಂಡು ಅಲಂಕಾರ ಮಾಡ್ಕೊಂಡಿರ್ತಿದ್ಲು! ಅಷ್ಟು ಕೋಪಿಷ್ಟೇ.. ಕೋಪ ಮಾಡ್ಕೊಂಡಾಗೆಲ್ಲ ಅವಳು ಅಷ್ಟೇ ಮುದ್ದಾಗಿ ಸಹ ಕಾಣ್ತಿದ್ಲು… ಆಗೆಲ್ಲ ಅವಳು ರೇಡಿಯೋ ಆಗಿರೋಳು.. ನಾನು ಕೇಳುಗನಾಗಿ ಇರ್ತಿದ್ದೆ..! ಹೇಳಿದ್ದನ್ನೇ ನೂರು ಸಲ ಹೇಳಿ, ಕೊನೆಗೆ ಯಾಕೆ ಸಿಟ್ಟು ಮಾಡ್ಕೊಂಡಿದ್ದೆ ಅಂತ ಕೇಳಿದ್ರೆ ನನಗೆ ಗೊತ್ತಿಲ್ಲ.. ಮರೆತು ಹೋಯ್ತು ಅಂತ ನಗಾಡೋ ಅಷ್ಟು ಹೊತ್ತಿಗೆ ಈ ಕೋಪ ಕರಗಿದೆ ಅನ್ನೋದು ತಿಳಿತಾ ಇತ್ತು. ಇದನ್ನೂ ಓದಿ: ನೀ ʻಅಮೃತʼಧಾರೆ – ಬಾಡಿದ ಹೃದಯಕುಂಡದಲ್ಲಿ ಒಲವರಳಿಸಿದ ಮಳೆ!

    ಆದ್ರೆ ಮತ್ತೆ ಒಂದು ಮಾತು ಹೇಳೋಳು.. ಏನಂಥ ಗೊತ್ತಾ? ನನಗೆ ಯಾಕೆ ಕೋಪ ಬಂತು ಹೇಳು? ನಿನಗೆ ಗೊತ್ತಿಲ್ವಾ? ಆಹಾ.. ನನಗೆ ಸಿಟ್ಟು ಬಂದಿದ್ದು ಯಾಕೆ ಅಂತಯ ನೆನಪಿರಲ್ಲ ಅಲ್ವಾ? ಅಷ್ಟೊಂದು ಮರೆವಾ ನಿನಗೆ? ನನ್ನನ್ನೂ ಮರೆತು ಬಿಡ್ತೀಯ ಬಿಟ್ರೆ ಅಲ್ವಾ? ಹೀಗೆ ಪುಂಡ ಬೆಕ್ಕಿನ ಥರ ಪುಟ್ಟ ಪುಟ್ಟ ಜಗಳ ಅವಳದ್ದು..!

    ಹಾಗಂತ ಅದೆಲ್ಲ ತುಂಬಾ ಸೀರಿಯಸ್‌ ಆದ ವಿಚಾರಗಳೇನೂ ಅಲ್ಲ.. ಆ ಕೋಪಕ್ಕೆ ಕಾರಣಗಳು ಬೇಕಿರಲಿಲ್ಲ,,! ಯಾಕೆ ಸಿಟ್ಟು ಅಂತ ಕೇಳಿದ್ರೆ… ನನಗೆ ನಿನ್ನ ಹತ್ರ ಮಾತ್ರ ಕೋಪ ಮಾಡ್ಬೇಕು, ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆ ಮಾಡ್ಬೇಕು ಅನ್ಸುತ್ತೆ ಕಣೋ..! ನನ್ನ ಸಿಟ್ಟು.. ನನ್ನ ಇಷ್ಟ..! ಸಿಟ್ಟು ಮಾಡ್ಕಳ್ಳೋಕು ನಾನು ನಿನ್ನ ಕೇಳ್ಬೇಕಾ..? ನಿನ್‌ ಹತ್ರ ಮಾತ್ರ ನಾನು ಚಿಕ್ಕವಳ ಥರ ಆಡ್ಬೇಕು.. ಹಠ ಮಾಡ್ಬೇಕು.. ಸಿಟ್ಟು ಮಾಡ್ಬೇಕು ಅನ್ಸುತ್ತೆ ಗೋಪಾಲ… ಯಾಕೆ ಅಂತ ನೀನೇ ಹೇಳು? ಅವಳ ಪ್ರಶ್ನೆಗೆ ನನಗೂ ಉತ್ತರ ಇರಲಿಲ್ಲ.. ಅದಕ್ಕೆ.. ಅಷ್ಟೇ ತಾನೇ, ನಿನಗೆ ಏನು ಅನ್ಸತ್ತೋ ಹಾಗೆ ಇರು ಪುಟ್ಟ ಅಂತ ಹೇಳ್ಬಿಡ್ತಿದ್ದೆ..! ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!

    ಒಮ್ಮೊಮ್ಮೆ ಅನ್ಸೋದು.. ಹೌದಲ್ವಾ ಅವಳು ಪ್ರೀತಿ ಆದ್ರೂ, ಕೋಪ ಆದ್ರೂ ಯಾರನ್ನ ಮಾಡ್ತಾಳೆ.. ನನ್ನ ಬಿಟ್ರೆ ಯಾರಿದಾರೆ ಅವಳಿಗೆ ಅಂತ ತುಂಬಾ ಸಲುಗೆ ಕೊಟ್ಟೆ.. ಅವಳು ಅಷ್ಟೇ ಮಗು ಅಮ್ಮನ ಹತ್ರ ಹಠ ಮಾಡಿದ ಹಾಗೆ ಹಠ ಮಾಡ್ಕೊಂಡು.. ನನ್ನನ್ನೇ ಪ್ರಪಂಚ ಅಂದ್ಕೊಂಡಿದ್ಲು… ಇದೆಲ್ಲ ಸುಮಾರು ಆರೇಳು ವರ್ಷಗಳ ಹಿಂದಿನ ಕತೆ.. ಮೊನ್ನೆ ಮೊನ್ನೆ ಮತ್ತೆ ಸಿಕ್ಕಿದ್ಲು. ದೂರಾಗಿ ಇಷ್ಟು ವರ್ಷ ಆದ್ಮೇಲೂ, ಅದೇ ಕೋಪ.. ಅದೇ ಕಣ್ಣು ಹಾಗೇ..! ಮತ್ತೆ ನಿನ್ನ ಹತ್ರ ಸಿಟ್ಟು ಮಾಡ್ಬೇಕು ಅನ್ನಿಸ್ತಿದೆ ಮಾಡ್ಲಾ? ಹ್ಞೂಂ ಅಂದೆ.. ಅವಳಿಗೆ ಅಳುನೇ ಬಂದು ಹೋಯ್ತು..!

    ಅವಳಿಗೆ ಅವತ್ತು ಯಾಕೆ ಅಳು ಬಂತೋ ಗೊತ್ತಿಲ್ಲ.. ಆದ್ರೆ.. ಇವತ್ತಿಗೂ ಅದೇ ಪ್ರೀತಿ ಅವಳ ಮನಸ್ಸಲ್ಲಿ ಇದೆ.. ಈ ‘ಸುರಗಿ’ ಮರದಿಂದ ಉದುರಿದ ಮೇಲೂ ವರ್ಷಾನೂಗಟ್ಟಲೇ ಅದರ ಘಮ ಉಳಿಯುವ ಹಾಗೆ..! ಹೌದು.. ಅದ್ಯಾವ ಕಾರಣಕ್ಕೆ ನಾವು ದೂರ ಆದ್ವಿ ಅಂತ ಗೊತ್ತಿಲ್ಲ. ಇಬ್ಬರ ಹೃದಯದಲ್ಲೂ ಇವತ್ತಿಗೂ ಅದೇ ಪ್ರೇಮದ ಘಮ ಇದೆ. ನನಗೆ ಅವಳ ಕೋಪದಲ್ಲಿ ಕಂಡಿದ್ದು ಪ್ರೇಮದ ಘಮ.. ಆ ಕೋಪ ಮತ್ತೆ ನನ್ನ ಮೇಲೆ ಪ್ರಯೋಗ ಮಾಡ್ಬೇಕು ಅವಳು. ಪುಟ್ಟ ಮಗು ತನ್ನ ಸಿಟ್ಟನ್ನ ತನ್ನ ಅಮ್ಮನ ಮೇಲೆ ತೋರಿಸೋ ಹಾಗೆ, ಅದನ್ನ ನಾನು ತಾಯಿಯಾಗಿ ಸಂಭ್ರಮಿಸಬೇಕು..!

    ಪ್ರೀತಿ ಅಂದ್ರೆ ಹೀಗೆ ಅಲ್ವಾ..? ನನಗೆ ಏನು ಬೇಕೋ ಅದನ್ನ ಹುಡುಕಿ ಸಂಭ್ರಮಿಸೋದಲ್ಲ. ನಮಗೆ ಸಿಕ್ಕ ಪ್ರೀತಿಯಲ್ಲಿ ಏನಿದಿಯೋ ಅದನ್ನೇ ಹೃದಯಕ್ಕೆ ಇಳಿಸಿಕೊಳ್ಳೋದು.. ಅದ್ಕೆ ಇರಬೇಕು ನನಗೆ ಅವಳ ಮುದ್ದು ಕೋಪ ಇಷ್ಟ ಆಗಿದ್ದು. ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?

    ಅವಳ ಕೋಪಕ್ಕೊಂದು ಮಾಧುರ್ಯ ಇತ್ತು. ಆ ಕೋಪದಲ್ಲಿ ಅವಳ ನಾಚಿಕೆ ಇತ್ತು. ಮಲ್ಲಿಗೆ ಕನಕಾಂಬರದ ಮಿಶ್ರಣದ ಬಣ್ಣ.. ಸುಗಂಧ ರಾಜನ ಘಮ ಎಲ್ಲವೂ ಇತ್ತು. ಅದೆಲ್ಲ ಮೀರಿದ ವಾತ್ಸಲ್ಯ ಇತ್ತು. ಒಮ್ಮೊಮ್ಮೆ ಅವಳು ಹೇಳ್ತಿದ್ಲು, ನಾನು ಕೋಪ ಮಾಡ್ಕೋತಿನಿ.. ನೀನು ನನ್ನ ಮುದ್ದು ಮುದ್ದು ಮಾತಾಡಿ ಸಮಾಧಾನ ಮಾಡ್ಬೇಕು ಅಂತ. ನಾನು ಸಮಾಧಾನ ಮಾಡ್ಬೇಕು ಅಂತಾನೇ ಕೋಪ ಮಾಡ್ಕೊಳ್ಳೋಳು..! ಅದೊಂಥರ ಕೋಪದ ಚೆಂದದ ಆಟ ಅವಳಿಗೆ..! ಆ ಕೋಪದ ಕೆಂಪು ಮೂಗಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಇದನ್ನ ಓದಿ, ಆ ಸಂಭ್ರಮದಲ್ಲಿ ಚೂರಾದ್ರೂ ಅಳ್ಬೇಕು ಅಂತ ಇಷ್ಟೆಲ್ಲ ನೆನಪನ್ನ ಬರೆದೆ..!!

    – ಗೋಪಾಲಕೃಷ್ಣ

  • ಕುಡಿದ ನಶೆಯಲ್ಲಿ ಗೆಳೆಯನ ಹತ್ಯೆಗೈದ ಸ್ನೇಹಿತ

    ಕುಡಿದ ನಶೆಯಲ್ಲಿ ಗೆಳೆಯನ ಹತ್ಯೆಗೈದ ಸ್ನೇಹಿತ

    ವಿಜಯಪುರ: ಕುಡಿದ ನಶೆಯಲ್ಲಿ ವ್ಯಕ್ತಿಯೊಬ್ಬ ತನ್ನ ಗೆಳೆಯನನ್ನೇ ಹತ್ಯೆಗೈದ ಘಟನೆ ವಿಜಯಪುರ (Vijayapura) ನಗರದ ಮಹಾನಗರ ಪಾಲಿಕೆಯ ಬಳಿ ನಡೆದಿದೆ.

    ಸಮೀರ ಬಡಿಗರ್ (35) ಹತ್ಯೆಯಾಗಿರುವ ದುರ್ದೈವಿ. ಗೆಳೆಯ ವಿನಯ ಎಂಬಾತನಿಂದ ಹತ್ಯೆ ನಡೆದಿದೆ. ಕುಡಿದ ನಶೆಯಲ್ಲಿ ಸಮೀರ ದೇಹಕ್ಕೆ ಏಳಕ್ಕಿಂತ ಹೆಚ್ಚು ಬಾರಿ ಚಾಕುವಿನಿಂದ ಹಲ್ಲೆಗೈದು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ: ದೀಪಾವಳಿಯೊಳಗೆ ಕಾಂಗ್ರೆಸ್‌ ಸರ್ಕಾರ ಢಮಾರ್‌: ಸಿಟಿ ರವಿ

    ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ‘ಡಿ’ ಗ್ಯಾಂಗ್‌ಗೆ ಜೈಲೇ ಗತಿ – ಮತ್ತೆ 3 ದಿನ ನ್ಯಾಯಾಂಗ ಬಂಧನ ವಿಸ್ತರಣೆ

  • ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ: ಏಳು ಬೀಳಿನ ಗೆಳೆತನ

    ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ: ಏಳು ಬೀಳಿನ ಗೆಳೆತನ

    ಡಾ. ವಿಷ್ಣುವರ್ಧನ್ (Vishnuvardhan) ಜೊತೆ ಸಿನಿಮಾ ಮಾಡಲು ಅತಿರಥ ಮಹಾರಥ ನಿರ್ದೇಶಕರು, ನಿರ್ಮಾಪಕರು ದುಂಬಾಲು ಬೀಳುತ್ತಿದ್ದರು ಎನ್ನುವುದಕ್ಕೆ ಅವರ ಚಿತ್ರಗಳೇ ಸಾಕ್ಷಿ. ಡಾ. ರಾಜಕುಮಾರ್ ಗರಡಿಯಿಂದ ಬಂದ ಸಾಕಷ್ಟು ನಿರ್ದೇಶಕರು ಮತ್ತು ನಿರ್ಮಾಪಕರು ವಿಷ್ಣುವರ್ಧನ್ ಅವರ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದರು. ಎಲ್ಲ ಹಂಗುಗಳನ್ನು ತೊರೆದುಕೊಂಡು ಬಂದು ವಿಷ್ಣು ಮುಂದೆ ನಿಲ್ಲುತ್ತಿದ್ದರು. ಅಂತಹ ಕಾಲ್‌ಶೀಟ್‌ಗಾಗಿ ಕಾದ ನಿರ್ದೇಶಕ, ನಿರ್ಮಾಪಕ ಮತ್ತು ಕಲಾವಿದರಲ್ಲಿ ದ್ವಾರಕೀಶ್ ಕೂಡ ಒಬ್ಬರು.

    ವಿಷ್ಣುವರ್ಧನ್ ಮತ್ತು ದ್ವಾರಕೀಶ್ (Dwarakish) ಅವರ ಚೊಚ್ಚಲ ಸಿನಿಮಾ `ಕಳ್ಳ ಕುಳ್ಳ’ ಬರುವ ಹೊತ್ತಿಗೆ ದ್ವಾರಕೀಶ್ ಅವರು ಕನ್ನಡ ಚಿತ್ರೋದ್ಯಮದಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದರು. ಹೆಸರಾಂತ ನಟರಾಗಿ ಗುರುತಿಸಿಕೊಂಡಿದ್ದರು. ದ್ವಾರಕೀಶ್ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದ ದಿನಮಾನಗಳವು. ಅಂತಹ ವೇಳೆಯಲ್ಲಿ ವಿಷ್ಣುವರ್ಧನ್ ಜೊತೆ ಸಿನಿಮಾ ಮಾಡಬೇಕು ಎಂದು ಕನಸುಕಂಡರು ಕನ್ನಡದ ಕುಳ್ಳ ದ್ವಾರಕೀಶ್. ತಮ್ಮ ಮನೆಯ ಬಾಗಿಲಿಗೆ ಬಂದ ಯಾರನ್ನೂ ವಿಷ್ಣು ನಿರಾಸೆಗೊಳಿಸುತ್ತಿರಲಿಲ್ಲ. ದ್ವಾರಕೀಶ್‌ನಂತಹ ಮೇರು ನಟ ಬಂದರೆ, ಖಾಲಿ ಕೈಯಲ್ಲಿ ಕಳುಹಿಸುವ ಮಾತೇ ಇಲ್ಲ. `ಆಯಿತು ಒಟ್ಟಿಗೆ ಸಿನಿಮಾ ಮಾಡೋಣ’ ಎಂದು ಹೇಳಿಬಿಟ್ಟಿದ್ದರು ವಿಷ್ಣು. ಆಗ ತಯಾರಾಗಿದ್ದೆ `ಕಳ್ಳ ಕುಳ್ಳ’ ಚಿತ್ರ. 1975ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಗೆದ್ದಿತು. ಕನ್ನಡ ಸಿನಿಮಾ ರಂಗದ `ಕಳ್ಳ ಕುಳ್ಳ ಜೋಡಿ’ ಎಂದೇ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಅವರನ್ನು ಕರೆಯುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಈ ಜೋಡಿಯ ಪಯಣ 1986ರ ಹೊತ್ತಿಗೆ ಒಂದು ಡಜನ್‌ನಷ್ಟು ಸಿನಿಮಾಗಳನ್ನು ಮಾಡಿಸಿತು.

    ಕಳ್ಳ ಕುಳ್ಳ ನಂತರ ಕಿಟ್ಟು ಪುಟ್ಟು, ಭಲೇ ಹುಡುಗ, ಸಿಂಗಪುರ್‌ನಲ್ಲಿ ರಾಜಾಕುಳ್ಳ, ಅವಳ ಹೆಜ್ಜೆ, ಗುರು ಶಿಷ್ಯರು, ಪೆದ್ದಗೆದ್ದ, ಜಿಮ್ಮಿಗಲ್ಲು, ಇಂದಿನ ರಾಮಾಯಣ, ಮದುವೆ ಮಾಡು ತಮಾಷೆ ನೋಡು… ಹೀಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತಾ ಹೋಯಿತು. ವಿಷ್ಣುವರ್ಧನ್ ಮೇಲೆ ದ್ವಾರಕೀಶ್ ಅವರಿಗೆ ಎಷ್ಟು ನಂಬಿಕೆ ಬಂತೆಂದರೆ ವಿಷ್ಣುವಿದ್ದರೆ ಗಲ್ಲಾಪೆಟ್ಟಿಗೆ ತುಂಬುವುದರಲ್ಲಿ ಅನುಮಾನವಿಲ್ಲ ಎನ್ನುವಷ್ಟರ ಮಟ್ಟಿಗೆ ನಂಬಿದ್ದರು. ಅದು ನಿಜವೂ ಆಗಿತ್ತು. ಈ ಧೈರ್ಯದಿಂದಲೇ ಅವರು `ರಾಜಾ ಕುಳ್ಳ’ ಸಿನಿಮಾವನ್ನು ಸಿಂಗಾಪುರದಲ್ಲಿ ಚಿತ್ರೀಕರಣ ಮಾಡಲು ಮುಂದಾದರು.

    ಎಪ್ಪತ್ತರ ದಶಕದಲ್ಲಿ ಮದರಾಸು, ಬೆಂಗಳೂರು, ಮೈಸೂರಿನ ಸುತ್ತಲಿನ ಸ್ಟುಡಿಯೋಗಳಲ್ಲಿ ಅಥವಾ ಆ ಸ್ಟುಡಿಯೋಗಳನ್ನೇ ಆಶ್ರಯಿಸಿಕೊಂಡಿದ್ದ ಹೊರಾಂಗಣದಲ್ಲಿ ಚಿತ್ರೀಕರಣ ಮಾಡುವ ವಾಡಿಕೆಯಿತ್ತು. ಬಜೆಟ್ ಕೂಡ ಹಿಗ್ಗಿಸುವಂತಹ ಧೈರ್ಯ ಮಾಡುತ್ತಿರಲಿಲ್ಲ. ಆದರೆ, ಪ್ರಪ್ರಥಮವಾಗಿ ತಮ್ಮ ಸಿನಿಮಾವನ್ನು ಸಿಂಗಾಪುರದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿದ್ದರು. ಅದರಲ್ಲಿ ಯಶಸ್ವಿ ಕೂಡ ಆದರು ದ್ವಾರಕೀಶ್. ಕನ್ನಡ ಚಿತ್ರರಂಗದಲ್ಲೇ ಸಿಂಗಾಪುರದಲ್ಲಿ ಶೂಟಿಂಗ್ ಆದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ `ರಾಜಾ ಕುಳ್ಳ’ ಪಾತ್ರವಾಯಿತು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅದೊಂದು ಮೈಲಿಗಲ್ಲಾಯಿತು. ನಿರ್ಮಾಪಕರಾಗಿ ಸಾಕಷ್ಟು ಹೆಸರು ಮಾಡಿದ ದ್ವಾರಕೀಶ್, 1985ರಲ್ಲಿ ತೆರೆಕಂಡ ವಿಷ್ಣುವರ್ಧನ್ ಮತ್ತು ಭವ್ಯ ಜೊತೆಯಾಗಿ ನಟಿಸಿದ್ದ `ನೀ ಬರೆದ ಕಾದಂಬರಿ’ ಸಿನಿಮಾದ ಮೂಲಕ ನಿರ್ದೇಶಕರಾಗಿಯೂ ಯಶಸ್ಸಿನ ತುತ್ತ ತುದಿಯಲ್ಲಿ ಕೂತರು. ದ್ವಾರಕೀಶ್ ಗೆಲುವಿನ ಹಿಂದೆ ಶಕ್ತಿಯಾಗಿ ನಿಂತದ್ದು ಇದೇ ವಿಷ್ಣುವರ್ಧನ್. ಆದರೆ, ಈ ಜೋಡಿಯ ಮಧ್ಯೆಯೂ ಬಿರುಕುಂಟಾಯಿತು.

     

    ಯಶಸ್ಸು ಯಾವತ್ತಿಗೂ ಒಂದಾಗಿರುವುದಕ್ಕೆ ಬಿಡುವುದಿಲ್ಲ. ಅದನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಯಶಸ್ಸಿನ ಅಮಲು ತಲೆಗೇರಿಸಿಕೊಂಡರೆ ಎಂತಹ ಅನಾಹುತ ಆಗುತ್ತದೆ ಎನ್ನುವುದಕ್ಕೆ ದ್ವಾರಕೀಶ್ ನಡೆಯೇ ಸಾಕ್ಷಿ. ಸಿನಿಮಾಗಳು ಗೆಲ್ಲುತ್ತಾ ಹೋದವು. ಹಣವೂ ಹಾಗೆಯೇ ಹರಿದು ಬಂತು. ಗೆಲ್ಲುವ ಕುದುರೆ ಎಂಬ ವಿಷ್ಣುವರ್ಧನ್ ಎಲ್ಲರಿಗೂ ಪ್ರಿಯವಾಗಿ ಹೋದರು. ಬರೀ ದ್ವಾರಕೀಶ್ ಮಾತ್ರ ಶ್ರೀಮಂತನಾಗಬೇಕಾ? ನಮಗೂ ಕಾಲ್‌ಶೀಟ್ ಕೊಡಿ ಎಂದು ನಿರ್ಮಾಪಕರು ದುಂಬಾಲು ಬಿದ್ದರು. ನಮಗೂ ಒಂದು ಯಶಸ್ಸು ದಯಪಾಲಿಸಿ ಎಂದು ಇತರ ನಿರ್ದೇಶಕರು ವಿಷ್ಣುವರ್ಧನ್ ಅವರಲ್ಲಿ ಮನವಿ ಮಾಡಿಕೊಂಡರು. ಕಷ್ಟ ಅಂತ ಬಂದರೆ ತಕ್ಷಣವೇ ಕರಗುತ್ತಿದ್ದ ಅವರು ಇತರರಿಗೆ ಕಾಲ್‌ಶೀಟ್ ಕೊಡಲು ಶುರು ಮಾಡಿದರು. ಅಲ್ಲಿಗೆ ದ್ವಾರಕೀಶ್ ಕೋಪಗೊಂಡರು. ನನ್ನಿಂದ ಬೆಳೆದ ಹುಡುಗ, ನನ್ನ ವಿರುದ್ಧವೇ ಜಿದ್ದಿಗೆ ಬಿದ್ದನಲ್ಲ ಎಂದು ಅಪಾರ್ಥ ಮಾಡಿಕೊಂಡರು. ಗೆಳೆತನದ ವಿಷಯದಲ್ಲಿ ವ್ಯಾಪಾರವನ್ನೂ ಎಳೆತಂದರು. ಅದು ವಿಷ್ಣುವರ್ಧನ್ ಅವರಿಗೆ ಇಷ್ಟವಾಗಲಿಲ್ಲ. ಯಾರಾದರೂ ತಮ್ಮನ್ನು ಬೆಳೆಸಿದೆ ಎಂದು ಹೇಳಿಬಿಟ್ಟರೆ ವಿಷ್ಣುವರ್ಧನ್ ಅವರಿಗೆ ಆಗುತ್ತಿರಲಿಲ್ಲ. ಯಾರೂ, ಯಾರನ್ನೂ ಬೆಳೆಸುವುದಿಲ್ಲ ಎನ್ನುವ ಸಿದ್ಧಾಂತದಲ್ಲಿ ಬದುಕಿದ್ದ ಜೀವವದು. ದ್ವಾರಕೀಶ್ ಮಾತು ಇಷ್ಟವಾಗಲಿಲ್ಲ. ಪರಸ್ಪರ ಕಿತ್ತಾಡಿಕೊಂಡರು. ದ್ವಾರಕೀಶ್ ಅವರಿಂದ ದೂರವೇ ಆದರು. ಇಬ್ಬರೂ ಕೂತು ಮಾತನಾಡಿದ್ದರೆ ಸರಿ ಹೋಗಬಹುದಿತ್ತು. ಹರಿದ ಕೌದಿ ಹೊಳೆಯಲು ತುಂಬಾ ಜಾಣ್ಮೆ ಬೇಕಿರಲಿಲ್ಲ. ಎದುರು ಕೂತು ಮಾತನಾಡಿದ್ದರೆ ಸಾಕಿತ್ತು. ಆದರೆ ದ್ವಾರಕೀಶ್ ಹಾಗೆ ಮಾಡಲಿಲ್ಲ. ವಿಷ್ಣು ಎದುರಿಗೆ ಹೊಸ ಹೀರೋಗಳನ್ನು ತಂದು ನಿಲ್ಲಿಸುತ್ತೇನೆ ಎಂದು ಘೋಷಿಸಿದರು. ಹೊಸಬರನ್ನು ಹಾಕಿಕೊಂಡು ಡಾನ್ಸ್ ರಾಜ ಡಾನ್ಸ್, ಶ್ರುತಿ ಹಾಕಿದ ಹೆಜ್ಜೆ-ಹೀಗೆ ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ, ಗೆದ್ದದ್ದು ಮೂರು ಮತ್ತೊಂದು ಮಾತ್ರ. ಬಹುತೇಕ ಚಿತ್ರಗಳು ನೆಲಕಚ್ಚಿದ ಪರಿಣಾಮ ಆರ್ಥಿಕವಾಗಿ ಕುಸಿದು ಬಿಟ್ಟರು. ಮಾಡಿಟ್ಟಿದ್ದ ಆಸ್ತಿ ಮಾರಬೇಕಾಗಿ ಬಂತು. ದ್ವಾರಕೀಶ್ ಅಕ್ಷರಶಃ ಕಂಗಾಲಾದರು. ದ್ವಾರಕೀಶ್ ಜೊತೆ ವಿಷ್ಣುವರ್ಧನ್ ಮಾತಾಡದೇ ಇದ್ದರೂ, ಹಿರಿಜೀವಕ್ಕೆ ಹೀಗಾಗುತ್ತಿದೆಯಲ್ಲ ಎಂದು ಒಳಗೊಳಗೆ ಸಂಕಟ ಪಟ್ಟರು. ದ್ವಾರಕೀಶ್ ದುಡುಕಬಾರದಿತ್ತು ಎಂದು ಕಣ್ಣೀರಿಟ್ಟರು. ಕನ್ನಡ ಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿರುವ, ಕಲಾವಿದರಿಗೆ ಅನ್ನ ಹಾಕಿರುವ, ಅಸಂಖ್ಯಾತ ಅಭಿಮಾನಿಗಳನ್ನು ರಂಜಿಸಿರುವ ಹಿರಿಯ ನಟರೊಬ್ಬರು ಬೀದಿಗೆ ಬೀಳಬಾರದು ಎನ್ನುವ ಕಕ್ಕುಲಾತಿಯಿಂದಾಗ ವಿಷ್ಣು ಮತ್ತೆ ದ್ವಾರಕೀಶ್ ಅವರ ಕೈ ಹಿಡಿದರು. ಮತ್ತೆ ಕಾಲ್‌ಶೀಟ್ ಕೊಟ್ಟರು. ದ್ವಾರಕೀಶ್ ಮಾಡಿದ್ದ ಅಷ್ಟೂ ಸಾಲವನ್ನು `ಆಪ್ತಮಿತ್ರ’ ಸಿನಿಮಾ ತೀರಿಸಿತು. ವಿಷ್ಣುವರ್ಧನ್ ಜೊತೆಗಿನ ತಮ್ಮ ವೈಷಮ್ಯವನ್ನು ದ್ವಾರಕೀಶ್ ಅವರೇ ಸ್ವತಃ ಹಲವಾರು ಬಾರಿ ಹೇಳಿಕೊಂಡಿದ್ದಿದೆ. `ನಾನು ಅಹಂ ತೋರಿಸಬಾರದಿತ್ತು. ತಪ್ಪು ಮಾಡಿಬಿಟ್ಟೆ. ನನ್ನೊಂದಿಗೆ ವಿಷ್ಣು ಇದ್ದಿದ್ದರೆ ಇನ್ನೂ ಸಾಕಷ್ಟು ದಾಖಲೆಗಳನ್ನು ಮಾಡಬಹುದಿತ್ತು. ನಮ್ಮ ಯಶಸ್ಸಿನ ಜೋಡಿಯ ಮುಂದೆ ಇತರರು ಹೆದರುತ್ತಿದ್ದರು. ಅದೇ ನನ್ನನ್ನು ಮೂರ್ಖನನ್ನಾಗಿ ಮಾಡಿಸಿತು. ದೂರವಾದ ನಂತರ ಆರ್ಥಿಕ ಮುಗ್ಗಟ್ಟಿಗೆ ಬಳಲಿದೆ, ಆರೋಗ್ಯ ಹಾಳಾಯಿತು, ಆಸ್ತಿ ಕಳೆದುಕೊಂಡೆ. ಕೇವಲ ವಿಷ್ಣು ಮೇಲಿನ ಕೋಪದಿಂದ ಹಲವಾರು ಹೊಸ ಕಲಾವಿದರನ್ನು ಪರಿಚಯಿಸಿದೆ. ನೆಲಕ್ಕೆ ಬಿದ್ದೆ. ಆದರೆ, ಮತ್ತೆ ನನ್ನನ್ನು ಮೇಲಕ್ಕೆ ಎತ್ತಲಿಕ್ಕೆ ನನ್ನ ವಿಷ್ಣುನೇ ಬರಬೇಕಾಯಿತು’ ಎಂದು ಭಾವುಕರಾಗಿ ಹೇಳಿಕೊಂಡಿದ್ದಿದೆ. ನಾನು ವಿಷ್ಣುವನ್ನು ಮರೆತರೆ ದೇವರು ಎಂದೂ ನನ್ನನ್ನು ಕ್ಷಮಿಸುವುದಿಲ್ಲ ಎಂದು ಹೇಳಿದ್ದೂ ಇದೆ. `ಕನ್ನಡ ಸಿನಿಮಾ ರಂಗಕ್ಕೆ ದ್ವಾರಕೀಶ್ ಆಲದ ಮರವಿದ್ದಂತೆ. ಈಗ ಅವರು ಕುಸಿದಿದ್ದಾರೆ. ಬಸವಳಿದಿದ್ದಾರೆ. ಮತ್ತೆ ಅವರಿಗೆ ನಾವೆಲ್ಲ ಚೈತನ್ಯ ತುಂಬಬೇಕು. ಶಕ್ತಿಯಾಗಿ ನಿಲ್ಲಬೇಕು’ ಎಂದು ಪತ್ರಿಕೆಯೊಂದರ ಸಂದರ್ಶನದಲ್ಲೂ ವಿಷ್ಣು ಹೇಳಿದ್ದರು. ಆಪ್ತಮಿತ್ರ ಸಿನಿಮಾಗೆ ಕಾಲ್‌ಶೀಟ್ ಕೊಟ್ಟರು. ಈ ಸಿನಿಮಾದ ಗೆಲುವು ದ್ವಾರಕೀಶ್ ಅವರಿಗೆ ಮರುಜನ್ಮ ನೀಡಿತು.

  • ಚೈತ್ರಾ ಆಚಾರ್ ಗೆ  ಬೆಸ್ಟ್ ಗಿಫ್ಟ್ ಅಂದರೆ ರುಕ್ಮಿಣಿ ವಸಂತ್

    ಚೈತ್ರಾ ಆಚಾರ್ ಗೆ ಬೆಸ್ಟ್ ಗಿಫ್ಟ್ ಅಂದರೆ ರುಕ್ಮಿಣಿ ವಸಂತ್

    ಪ್ತ ಸಾಗರದಾಚೆ ಎಲ್ಲೋ  ಸಿನಿಮಾದಲ್ಲಿ ಒಟ್ಟಾಗಿ ನಟಿಸಿದವರು ಚೈತ್ರಾ ಆಚಾರ್ (Chaitra Achar) ಮತ್ತು ರುಕ್ಮಿಣಿ ವಸಂತ್ (Rukmini Vasant). ಈ ಜೋಡಿಯು ಚಿತ್ರದಲ್ಲಿ ಸಖತ್ ಮೋಡಿ ಮಾಡಿತ್ತು. ಅಲ್ಲಿಂದ ಈ ಜೋಡಿ ಸದಾ ಜೊತೆಯಾಗಿಯೇ ಇರುತ್ತದೆ. ಒಬ್ಬರಿಗೊಬ್ಬರ ಸಿನಿಮಾಗಳನ್ನು ಪ್ರಮೋಟ್ ಮಾಡ್ತಾ, ಇತರರ ಚಿತ್ರಗಳಿಗೂ ಪ್ರೋತ್ಸಾಹ ನೀಡುತ್ತಾ ತಮ್ಮ ಗೆಳೆತನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ರುಕ್ಮಿಣಿ ವಸಂತ್ ಜೊತೆಗಿರುವ ಫೋಟೋವೊಂದನ್ನು ಚೈತ್ರಾ ಆಚಾರ್ ಪೋಸ್ಟ್ ಮಾಡಿ, ನನ್ನ ಜೀವನದಲ್ಲಿ ಸಿಕ್ಕಿ ಬೆಸ್ಟ್ ಗಿಫ್ಟ್ ಅಂದರೆ ಅದು ರುಕ್ಮಿಣಿ ವಸಂತ್ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರುಕ್ಮಿಣಿ ಅವರಿಗೆ ತಮ್ಮ ಜೀವನದಲ್ಲಿ ಯಾವ ರೀತಿಯ ಮಹತ್ವವನ್ನು ನೀಡಲಾಗಿದೆ ಎನ್ನುವುದನ್ನು ಸಾರಿದ್ದಾರೆ.

    ಚೈತ್ರಾ ಆಚಾರ್ ಅವರು ಹೊಸ ಹೊಸ ಪಾತ್ರಗಳಿಗೆ ಕಾದು ಕೂತಿದ್ದರೆ, ರುಕ್ಮಿಣಿ ವಸಂತ್ ಈಗಾಗಲೇ ರಾಜ್ಯದ ಗಡಿದಾಟಿ ಬೇರೆ ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ತಮಿಳು ಸಿನಿಮಾವೊಂದರ ಶೂಟಿಂಗ್ ನಲ್ಲೂ ಅವರು ಭಾಗಿಯಾಗಿದ್ದಾರೆ.

  • ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ: ದರ್ಶನ್ ಬಗ್ಗೆ ಸುದೀಪ್ ಮಾತು

    ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ: ದರ್ಶನ್ ಬಗ್ಗೆ ಸುದೀಪ್ ಮಾತು

    ಕಿಚ್ಚ ಸುದೀಪ್ (Sudeep) ಮತ್ತು ದರ್ಶನ್ (Darshan) ಸ್ನೇಹದ (Friendship) ವಿಚಾರವಾಗಿ ಹಲವು ವರ್ಷಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರೂ ದೂರವಾಗಿರುವ ವಿಚಾರ ಗುಟ್ಟಿನದ್ದೇನಲ್ಲ. ಆದರೂ, ಇಬ್ಬರು ಮತ್ತೆ ಒಂದಾಗುತ್ತಾರೆ, ಮತ್ತೆ ಮೊದಲಿನಂತೆ ಸ್ನೇಹಿತರಾಗಿ ಅಭಿಮಾನಿಗಳಿಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕಾಯುವಿಕೆ ಇಬ್ಬರ ಅಭಿಮಾನಿಗಳಲ್ಲೂ ಇದೆ. ಮೊನ್ನೆ ಅಂಥದ್ದೊಂದು ಸನ್ನಿವೇಶ ಸೃಷ್ಟಿಯಾಗಿತ್ತು. ಆದರೂ, ಇಬ್ಬರೂ ಮಾತಾಡಲಿಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿ ಇತ್ತು.

    ಈ ಕುರಿತು ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಕುರಿತಾಗಿ ಮಾತನಾಡಿದ ಕಿಚ್ಚ, ‘ನಾನು ಸುಮಲತಾ ಅವರ ಹುಟ್ಟು ಹಬ್ಬದ ಪಾರ್ಟಿಗೆ ಹೋಗಿದ್ದೆ. ಮುಂಚೆನೇ ದರ್ಶನ್ ಇರ್ತಾರೆ ಅಂತ ನಂಗೂ ಗೊತ್ತಿತ್ತು. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನೋದು ಕಲ್ಪನೆ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ನನ್ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ. ಪ್ರಶ್ನೆಗಳು ಬರ್ತಾವೆ, ಒಳ್ಳೇದು, ಕೆಟ್ಟದು ಇರ್ತಾವೆ. ಶೇಕ್ ಹ್ಯಾಂಡ್ ಮಾಡೋದು ದೊಡ್ಡ ವಿಚಾರವಲ್ಲ. ಇಬ್ರು matured ಇದೀವಿ. ಎಲ್ಲವೂ ಸರಿ ಹೋಗ್ಬೇಕು, ಅಂದಾಗ ಸರಿ ಹೋಗುತ್ತೆ’ ಎಂದರು.

     

    ಸುದೀಪ್ ಮತ್ತು ದರ್ಶನ್ ಯಾವ ಕಾರಣಕ್ಕೆ ದೂರವಾದರು ಎನ್ನುವುದು ಈಗಲೂ ಯಕ್ಷ ಪ್ರಶ್ನೆ. ಆದರೂ, ದರ್ಶನ್ ಬಗ್ಗೆ ಸುದೀಪ್ ಅವರಿಗೆ ಈಗಲೂ ಅದೇ ಸ್ನೇಹವಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಸುದೀಪ್ ಮನೆಯಲ್ಲಿ ಈಗಲೂ ದರ್ಶನ್ ಫೋಟೋವಿದೆ. ಸುದೀಪ್ ಮತ್ತು ದರ್ಶನ್ ಆದಷ್ಟು ಬೇಗ ಒಂದಾಗಲಿ ಎನ್ನುವುದು ಅವರ ಅಭಿಮಾನಿಗಳ ಆಸೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದ್ವೇಷ ಮರೆತು ಮತ್ತೆ ಸ್ನೇಹಿತರಾಗುವುದಾಗಿ ನಂಬಿಸಿ ವ್ಯಕ್ತಿಯ ಬರ್ಬರ ಹತ್ಯೆ

    ದ್ವೇಷ ಮರೆತು ಮತ್ತೆ ಸ್ನೇಹಿತರಾಗುವುದಾಗಿ ನಂಬಿಸಿ ವ್ಯಕ್ತಿಯ ಬರ್ಬರ ಹತ್ಯೆ

    ನವದೆಹಲಿ: ಮತ್ತೆ ಗೆಳೆಯರಾಗುವುದಾಗಿ ಹೇಳಿ ಮದ್ಯಪಾನ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವನನ್ನು ಕರೆದೊಯ್ದು ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಪದೇ ಪದೇ ಇರಿದು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದ್ದು, ಹತ್ಯೆಯ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

    ಆಶಿಶ್ (22) ಹತ್ಯೆಯಾದ ಯುವಕ. ವಿಕಾಸ್ ಮತ್ತು ವಂಶು ಎಂಬ ಯುವಕರು ಈ ಕೊಲೆಯನ್ನು ಮಾಡಿದ್ದು, ಇವರು ಆಶಿಶ್‌ನೊಂದಿಗೆ ದೀರ್ಘಕಾಲದ ದ್ವೇಷವನ್ನು ಹೊಂದಿದ್ದರು. ಅಲ್ಲದೇ ಜೂನ್ 24ರಂದು ದೆಹಲಿಯ ಕಂಟೋನ್ಮೆಂಟ್‌ನಲ್ಲಿರುವ ತಮ್ಮ ಮನೆಗೆ ಬಂದು ಆಶಿಶ್‌ನೊಂದಿಗೆ ಮತ್ತೆ ಸ್ನೇಹಿತರಾಗುವುದಾಗಿ (Friends) ಹೇಳಿದ್ದಾರೆ. ಬಳಿಕ ಬಾರ್‌ಗೆ (Bar) ಹೋಗೋಣ. ಅಲ್ಲಿ ಬಿಲ್ ನಾವೇ ಕೊಡುತ್ತೇವೆ ಎಂದು ಹೇಳಿದ್ದರು ಎಂದು ಮೃತ ಆಶಿಶ್ ತಂದೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭೀಮ್ ಆರ್ಮಿ ಮುಖ್ಯಸ್ಥನ ಮೇಲೆ ದಾಳಿ ಮಾಡಿದ್ದ ನಾಲ್ವರ ಬಂಧನ

    CRIME

    ಮತ್ತೆ ಸ್ನೇಹಿತರಾಗಲು ಬಯಸಿದ್ದನ್ನು ಗಮನಿಸಿದ ಆಶಿಶ್ ತಂದೆ ಅನುಮಾನಗೊಂಡು ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಮೂವರೂ ಸುಮಾರು ಅರ್ಧಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ವಿಕಾಸ್ ಆಶಿಶ್ ಜೊತೆ ಜಗಳ ಮಾಡಿದ್ದಾನೆ. ಇವರಿಬ್ಬರ ಜಗಳಕ್ಕೆ ವಂಶು ಕೂಡಾ ಸೇರಿಕೊಂಡು ಇದ್ದಕ್ಕಿದ್ದಂತೆ ಆಶಿಶ್‌ಗೆ ಚಾಕುವಿನಿಂದ (Knife) ಇರಿದಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಹೊರರಸ್ತೆಯಲ್ಲಿ ಎಮ್ಮೆಯ ತಲೆ ಪತ್ತೆ- ಅಪ್ರಾಪ್ತ ಸೇರಿದಂತೆ ಇಬ್ಬರ ಬಂಧನ

    ಚಾಕುವಿನಿಂದ ಇರಿದ ಬಳಿಕ ವಿಕಾಸ್ ಮತ್ತು ವಂಶು ಅಲ್ಲಿಂದ ಪರಾರಿಯಾಗಿದ್ದಾರೆ. ಘಟನೆಯ ವಿಡಿಯೋದಲ್ಲಿ ವಿಕಾಸ್ ಹಾಗೂ ವಂಶು ಆಶಿಶ್‌ನ ಬೆನ್ನಿಗೆ ಹಲವು ಬಾರಿ ಇರಿದಿದ್ದು, ಬಳಿಕ ರಸ್ತೆಯಲ್ಲಿ ಆತನನ್ನು ಥಳಿಸಿರುವುದು ಸೆರೆಯಾಗಿದೆ. ಘಟನೆಯಿಂದ ಭೀಕರ ಗಾಯಗೊಂಡಿದ್ದ ಆಶಿಶ್‌ನನ್ನು ಆತನ ತಂದೆ ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ಕರೆದೊಯ್ದಿದ್ದಾರೆ. ಈ ವೇಳೆ ಸಾರ್ವಜನಿಕರು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಬ್ಲಾಸ್ಟ್ ಕೇಸ್‌ – ರೊಬೊಟ್‌ ಬಳಸಿ‌ ಭಾರತದಲ್ಲಿ ದಾಳಿಗೆ ಮುಂದಾಗಿದ್ದ ಐಸಿಸ್

    ಈ ಹಿನ್ನೆಲೆ ಪೊಲೀಸ್ ತಂಡವು ಘಟನಾ ಸ್ಥಳಕ್ಕೆ ಧಾವಿಸಿದ್ದು, ಬಳಿಕ ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಆಶಿಶ್ ಮೃತಪಟ್ಟಿದ್ದು, ಆತನ ತಂದೆಯ ಹೇಳಿಕೆಯನ್ನು ತೆಗೆದುಕೊಂಡು ಅದೇ ದಿನ ಸಂಜೆ ವಿಕಾಸ್ ಮತ್ತು ವಂಶುವನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆ ಜೊತೆ ಕಂಡಕ್ಟರ್ ಸೆಕ್ಸ್- ವೀಡಿಯೋ ವೈರಲ್

    ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ಆರೋಪಿಗಳು ಆಶಿಶ್‌ನನ್ನು ಕೊಲೆ ಮಾಡಲು ಒಂದು ದಿನ ಮೊದಲೇ ಯೋಜನೆ ಹಾಕಿಕೊಂಡಿದ್ದೆವು ಎಂದು ಒಪ್ಪಿಕೊಂಡಿದ್ದು, ಆತನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗುವ ಸಲುವಾಗಿ ಮತ್ತೆ ಸ್ನೇಹಿತರಾಗುವ ನಾಟಕವಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಅನ್ಯ ಜಾತಿ ಹುಡ್ಗನನ್ನ ಪ್ರೀತಿಸಿ ಮದ್ವೆಯಾಗಿದ್ದಕ್ಕೆ ಬದುಕಿದ್ದಾಗಲೇ ಮಗಳ ಅಂತ್ಯಸಂಸ್ಕಾರ ಮಾಡಿದ ತಂದೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ

    ತುಮಕೂರು: ನಂಬಿಕೆ ದ್ರೋಹ ಅನ್ನೋದು ಮನುಷ್ಯನ ಹುಟ್ಟುಗುಣ. ಇಂಥ ಮೋಸಗಳಿಗೆ ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಒಳಗಾಗುತ್ತಿರುತ್ತಾರೆ. ಅಂಥದ್ದೇ ಒಂದು ಘಟನೆ ತುಮಕೂರಿನಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನವರಾದ ಅಂತರಾಜ್ ಎಂಬವರು ತಮ್ಮ ಪುಟ್ಟ ಕುಟುಂಬದೊಂದಿಗೆ ತುಮಕೂರಿ (Tumakuru) ನಲ್ಲಿ ವಾಸ ಮಾಡುತ್ತಿದ್ದರು. ಜೀವನಕ್ಕಾಗಿ ಒಳ್ಳೆಯ ಸಂಪಾದನೆ ಮಾಡಿ ಬಂಗಲೆ, ಕಾರುಗಳು, ಬೈಕ್‍ಗಳ ಮಾಲೀಕರಾಗಿದ್ರು. ಆದರೆ ಸದ್ಯಕ್ಕೆ ಈ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದೆ.

    ಹೌದು. ಸಿರಿವಂತ ಅಂತರಾಜ್ ತಮ್ಮ ಬಂಗಲೆ ಮಾರಿಕೊಂಡು ಈಗ ನೆಂಟರ ಹಂಗಿನಲ್ಲಿದ್ದಾರೆ. ಐಷಾರಾಮಿ ಕಾರಲ್ಲಿ ಓಡಾಡುತ್ತಿದ್ದವರು ಈಗ ಟ್ರೈನ್ ಟಿಕೆಟ್‍ಗೂ ಪರದಾಡ್ತಿದ್ದಾರೆ. ಅಷ್ಟಕ್ಕೂ ಈ ಕುಟುಂಬದ ಈ ಸ್ಥಿತಿಗೆ ಕಾರಣ ನಂಬಿದ ವ್ಯಕ್ತಿಯೊಬ್ಬ ಮಾಡಿದ ಮಹಾದೋಖಾ. ಒಂದಷ್ಟು ಹಣ ಇಟ್ಕೊಂಡು ಸುಖವಾಗಿದ್ದ ಅಂತರಾಜ್‍ಗೆ ಕೆಲವು ವರ್ಷಗಳ ಹಿಂದೆ ವೈ.ಸಿ ಸಿದ್ದರಾಮಯ್ಯ ಎಂಬವರ ಪರಿಚಯ ಆಗಿತ್ತು.

    ಈ ಪರಿಚಯ ವ್ಯವಹಾರಕ್ಕೆ ತಿರುಗಿ ಅವರ ಸಂಬಂಧಿ ಬಸವರಾಜ್ ಎಂಬವರ ತ್ರಿ ಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸ್ತಾ ಇದ್ದರು. ಮುಂದೆ ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದು ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರಂತೆ. ಇದನ್ನೂ ಓದಿ: ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ – SC, ST ಸಮುದಾಯಗಳಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್‌

    ಸ್ವತಃ ವೈ.ಸಿ.ಸಿದ್ದರಾಮಯ್ಯರೇ ಅಂತರಾಜ್‍ನನ್ನು ಬೆಂಗಳೂರಿ (Bengaluru) ನಿಂದ ಕರೆದುಕೊಂಡು ಬಂದು ಹೊಟೆಲ್ ಬಾಡಿಗೆಗೆ ಕೊಡಿಸಿದ್ರು. ಬಳಿಕ ಇವರ ಮಾತುಗಳನ್ನ ನಂಬಿದ ಅಂತರಾಜ್ ಕೋಟಿ ಕೋಟಿ ರೂಪಾಯಿ ಬಂಡವಾಳ ಹಾಕಿ ಈ ಹೋಟೆಲ್ (Hotel) ರೆಡಿ ಮಾಡಿಸಿದ್ರಂತೆ. ಆದರೆ ಈಗ ಅಂತರಾಜ್ ಅವರನ್ನೇ ಹೋಟೆಲ್‍ನಿಂದ ಹೊರಹಾಕಿ, ಹಣ ವಾಪಸ್ ನೀಡಲು ಸಾಧ್ಯ ಇಲ್ಲ ಎಂದು ಧಮ್ಕಿ ಹಾಕಿದ್ದಾರಂತೆ. ನಷ್ಟ ಆದ ಸುಮಾರು 1.5 ಕೋಟಿ ರೂಪಾಯಿಯಲ್ಲಿ 70 ಲಕ್ಷ ಕೊಡೋದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದ ವೈ.ಸಿ.ಸಿದ್ದರಾಮಯ್ಯ ಮತ್ತೇ ಉಲ್ಟಾ ಹೊಡೆದಿದ್ದಾರಂತೆ.

    ಸದ್ಯ ಹೊಟೇಲ್‍ಗಾಗಿ ಅಂತರಾಜ್ ಸುಮಾರು 2 ಕೋಟಿ ರೂಪಾಯಿ ಬ್ಯಾಂಕಿನಿಂದ ಸಾಲ ಮಾಡಿದ್ರಿಂದ ಬ್ಯಾಂಕ್‍ನವರು ಅಂತರಾಜ್ ಅವರ ಡುಫ್ಲೆಕ್ಸ್ ಮನೆ, ಮತ್ತೊಂದು 3 ಅಂತಸ್ತಿನ ಮನೆಯನ್ನು ಹರಾಜು ಹಾಕಿದ್ದಾರೆ. ಜೊತೆಗೆ ಎಕ್ಸ್ ಯುವಿ ಕಾರು, ಇನ್ನೋವಾ ಕಾರು ಹಾಗೂ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನೂ ಮಾರಿ ಅಂತರಾಜ್ ಕುಟುಂಬ ಹೋಟೆಲ್ ಮುಂದಿನ ರಸ್ತೆಯಲ್ಲಿ ನ್ಯಾಯಕ್ಕಾಗಿ ಧರಣಿ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರ ನಗ್ನ ವೀಡಿಯೋ ಮಾಡಿ ಹಣ ದೋಚುತ್ತಿದ್ದ ಬೆಂಗ್ಳೂರಿನ ಗ್ಯಾಂಗ್ ಅರೆಸ್ಟ್

    ಮಹಿಳೆಯರ ನಗ್ನ ವೀಡಿಯೋ ಮಾಡಿ ಹಣ ದೋಚುತ್ತಿದ್ದ ಬೆಂಗ್ಳೂರಿನ ಗ್ಯಾಂಗ್ ಅರೆಸ್ಟ್

    – ಮಹಾಲಕ್ಷ್ಮೀ ಲೇಔಟ್ ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ

    ಬೆಂಗಳೂರು: ಡಿವೋರ್ಸ್ ಆಗಿರುವ ಹಾಗೂ ಗಂಡ ಸತ್ತು ಒಂಟಿಯಾಗಿರುವ ಮಹಿಳೆಯರನ್ನ ಟಾರ್ಗೆಟ್ ಮಾಡಿ ಟ್ರ್ಯಾಪ್ ಮಾಡಿ ವಿಕೃತಿ ಮೆರೆದು ದೋಚುತ್ತಿದ್ದ ಗ್ಯಾಂಗ್‌ವೊಂದನ್ನು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಮಂಗಳಾ, ರವಿ, ಶಿವಕುಮಾರ್, ಶ್ರೀನಿವಾಸ್ ಬಂಧಿತ ಆರೋಪಿಗಳು. ಮಂಗಳಾ ಮತ್ತು ರವಿ ಗಂಡ ಹೆಂಡತಿಯರು. ಇವರು ಡಿವೋರ್ಸ್ ಆಗಿರುವ ಹಾಗೂ ಗಂಡ ಸತ್ತು ಒಂಟಿಯಾಗಿರುವ ಮಹಿಳೆಯರನ್ನು ಗುರುತು ಮಾಡಿ, ನಂತರ ಈ ಗ್ಯಾಂಗ್‌ನಲ್ಲಿದ್ದ ಓರ್ವ ಮಹಿಳೆ ಟಾರ್ಗೆಟ್ ಮಾಡಿದ್ದವರ ಗೆಳೆತನ ಸಂಪಾದನೆ ಮಾಡ್ತಿದ್ಲು. ಬಳಿಕ ಫೋನ್ ಮೂಲಕ ಮಾತನಾಡ್ತಿದ್ರು. ಬನ್ನಿ ಮೀಟ್ ಮಾಡೋಣ ಎಂದು ಕರೆಯುತ್ತಿದ್ದರು. ಮೀಟ್ ಮಾಡಲು ಬಂದ ನಂತರ ಮಹಿಳೆಯರನ್ನ ಕಾರಿನ ಒಳಗೆ ಬರಲು ತಿಳಿಸುತ್ತಿದ್ದರು. ಬಳಿಕ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದರು.

    ಕಿಡ್ನಾಪ್ ಮಾಡಿ ನಿರ್ಜನ ಪ್ರದೇಶದಕ್ಕೆ ಗ್ಯಾಂಗ್ ಕರೆದುಕೊಂಡು ಹೋಗುತ್ತಿದ್ದರು. ಬಹುತೇಕ ಬಾರಿ ತಾವರೆಕೆರೆ ಕಡೆಯ ಅರಣ್ಯ ಪ್ರದೇಶದಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮಹಿಳೆಗೆ ಬಟ್ಟೆ ಬಿಚ್ಚಿಲು ಹೇಳುತ್ತಿದ್ದರು. ಒಪ್ಪದೇ ಇದ್ದಾಗ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸುತ್ತಿದ್ದರು. ನಂತರ ನಗ್ನ ವೀಡಿಯೋ ಮಾಡಿ ಮೊಬೈಲ್ ಇಟ್ಟುಕೊಳ್ತಿದ್ದ ಗ್ಯಾಂಗ್, ಬಳಿಕ ಈ ವಿಡಿಯೋ ಹೊರಗೆ ಬರಬಾರ್ದು ಅಂದರೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಮಹಾಲಕ್ಷ್ಮೀ ಲೇಔಟ್‌ನ ಮಹಿಳೆ ಓರ್ವರಿಂದ ಒಂದು ಚಿನ್ನದ ಚೈನ್, ಕಿವಿಯೋಲೆ, ಉಂಗುರ ಕಿತ್ತುಕೊಂಡಿದ್ದಾರೆ. ಕೊನೆಗೆ ಫೋನ್ ಫೇ ಮೂಲಕ 84 ಸಾವಿರ ರೂ.ಗಳಷ್ಟು ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಮತ್ತೆ ಹಣ ಬೇಕು ಎಂದು ಎಟಿಎಂ ಕಾರ್ಡ್ ಮೂಲಕ 40 ಸಾವಿರ ಡ್ರಾ ಮಾಡಿಸಿದ್ದಾರೆ.

    ನಂತರ ಮೊಬೈಲ್ ಸಿಮ್ ಕಾರ್ಡ್ ಕಿತ್ತುಕೊಂಡು ನಡುರಸ್ತೆಯಲ್ಲಿ ಬಿಟ್ಟುಹೋಗಿದ್ದರು. ಘಟನೆ ನಂತರ ಮಹಾಲಕ್ಷ್ಮೀ ಲೇಔಟ್ ಠಾಣೆಗೆ ಮಹಿಳೆ ದೂರು ನೀಡಿದ್ದು, ಮಹಿಳೆ ದೂರಿನ ಅನ್ವಯ ಕೇಸ್ ದಾಖಲು ಮಾಡಿಕೊಂಡಿದ್ದ ಪೊಲೀಸರು ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಎಂಟು ಮಹಿಳೆಯರಿಗೆ ಹಿಂಸೆ ನೀಡಿ ರಾಬರಿ ಮಾಡಿರುವುದನ್ನೂ ಬಯಲಿಗೆಳೆಯಲಾಗಿದೆ. 8 ಮಹಿಳೆಯರು ಹೆದರಿ ಪೊಲೀಸ್ ಠಾಣೆಗೆ ದೂರನ್ನೆ ನೀಡಿರಲಿಲ್ಲ, ಸದ್ಯ ನೊಂದ ಮಹಿಳೆಯರಿಗೆ ಘಟನೆ ನಡೆದ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಮನವಿ ಮಾಡಲಾಗಿದೆ ಎಂದು ಮಹಾಲಕ್ಷ್ಮೀ ಲೇಔಟ್ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿದ್ದರಾಮಯ್ಯ ಹೆಡ್‌ಫೋನ್ ತೆಗೆದ ಯಡಿಯೂರಪ್ಪ – ಸಿದ್ದುಗೆ ಶಾಕ್!

    ಸಿದ್ದರಾಮಯ್ಯ ಹೆಡ್‌ಫೋನ್ ತೆಗೆದ ಯಡಿಯೂರಪ್ಪ – ಸಿದ್ದುಗೆ ಶಾಕ್!

    ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವೆ ಕುಚುಕು ಕುಚುಕು ಎನ್ನುವಂತಹ ವಾತಾವರಣ ನಿರ್ಮಾಣವಾಗಿತ್ತು. ವಿಧಾನಸಭೆ ಕಲಾಪ ಆರಂಭವಾಗಿ ಪ್ರಶ್ನೋತ್ತರ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಳಿ ಮಾಜಿ ಸಿಎಂ ಯಡಿಯೂರಪ್ಪ ಹೋಗಿ ಕುಳಿತಿದ್ದರು.

    ಗುರುವಾರ ಮಧ್ಯಾಹ್ನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶಾಸಕರು ಹಾಗೂ ಮಾಧ್ಯಮದವರಿಗೆ ಮಾಜಿ ಸಿಎಂ ಯಡಿಯೂರಪ್ಪ ಭೋಜನಕೂಟ ಏರ್ಪಡಿಸಿದ್ದಾರೆ. ಈ ಭೋಜನಕೂಟಕ್ಕೆ ಆಹ್ವಾನಿಸಲು ಯಡಿಯೂರಪ್ಪ ಸಿದ್ದರಾಮಯ್ಯ ಬಳಿ ತೆರಳಿದ್ದರು. ಈ ವೇಳೆ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಕೈ-ಕೈ ಹಿಡಿದು ಕೆಲಕಾಲ ಮಾತುಕತೆ ನಡೆಸಿದ್ದರು. ಇದನ್ನೂ ಓದಿ: ಹಿಂದೂ ಜಾತ್ರೆಗಳಲ್ಲಿ ಮುಸ್ಲಿಮ್‌ ವರ್ತಕರಿಗೆ ವ್ಯಾಪಾರ ನಿಷೇಧ ವಿಚಾರ: ಸಿಡಿದೆದ್ದ ಕರಾವಳಿ ಶಾಸಕರು

    ಇಬ್ಬರ ನಡುವಿನ ಮಾತುಕತೆ ವಿಧಾನಸಭೆಯಲ್ಲಿದ್ದ ಎಲ್ಲರ ಗಮನ ಸೆಳೆಯಿತು. ನಗುನಗುತ್ತಾ ಇಬ್ಬರು ನಾಯಕರು ಉಭಯಕುಶಲೋಪರಿ ವಿಚಾರಿಸಿಕೊಂಡರು. ಸಿದ್ದರಾಮಯ್ಯ ಹೆಡ್‌ಫೋನ್ ಹಾಕಿಕೊಂಡಿದ್ದಾಗ ಹಿಂದಿನಿಂದ ಹೋಗಿ ಯಡಿಯೂರಪ್ಪ ಹೆಡ್‌ಫೋನ್ ತೆಗೆದಿದ್ದರು. ಹೆಡ್‌ಫೋನ್ ತೆಗೆದಿದ್ದು ಯಾರು ಎಂದು ಸಿದ್ದರಾಮಯ್ಯ ಗಾಬರಿಯಿಂದ ನೋಡಿದಾಗ ಅದು ಯಡಿಯೂರಪ್ಪ ಎಂಬುದು ತಿಳಿದು ನಕ್ಕಿದ್ದರು. ಇದನ್ನೂ ಓದಿ: ಚರಂಡಿಗಿಳಿದು ಕೊಳಚೆ ಶುಚಿಗೊಳಿಸಿದ ಆಪ್ ಕೌನ್ಸಿಲರ್‌ಗೆ ಹಾಲಿನ ಸ್ನಾನ..!

    ಅಂದಹಾಗೆ ಯಡಿಯೂರಪ್ಪ, ಸಿದ್ದರಾಮಯ್ಯ ನಡುವಿನ ವೈಯಕ್ತಿಕ ಸಂಬಂಧ ಚೆನ್ನಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಒಟ್ಟಾಗಿ ಮಾತನಾಡುವ, ಕೆಲ ಕಡೆ ಒಟ್ಟಾಗಿ ಕಾಣಿಸಿಕೊಂಡಿರುವ ಹಲವು ನಿದರ್ಶನಗಳು ಇವೆ.

    ಇದೇ ವೇಳೆ ಇಬ್ಬರು ನಾಯಕರ ಬಳಿ ಮಂಗಳೂರಿನಲ್ಲಿ ಮುಸ್ಲಿಂ ವರ್ತಕರಿಗೆ ಅವಕಾಶ ನೀಡದ ಬಗ್ಗೆ ಯುಟಿ ಖಾದರ್ ಪ್ರಸ್ತಾಪಿಸಿದ ಘಟನೆಯೂ ನಡೆಯಿತು.