Tag: friends

  • ಕೊಡಗು ಪ್ರವಾಸಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದ ಸಾವು

    ಕೊಡಗು ಪ್ರವಾಸಕ್ಕೆ ಬಂದಿದ್ದ ಯುವತಿ ಅನುಮಾನಾಸ್ಪದ ಸಾವು

    ಮಡಿಕೇರಿ: ಪ್ರವಾಸಕ್ಕೆಂದು ಕೊಡಗಿಗೆ ಬಂದು ಮಡಿಕೇರಿಯ ಹೋಂಸ್ಟೇಯಲ್ಲಿ ತಂಗಿದ್ದ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

    ಮುಂಬೈ ಮೂಲದ ಈಶ್ವರ್ ಅವರ ಮಗಳು ವಿಘ್ನೇಶ್ವರಿ(24) ಮೃತ ಯುವತಿಯಾಗಿದ್ದು, ಇದೇ ಶನಿವಾರ ಕೊಡಗು ಜಿಲ್ಲೆಗೆ ತನ್ನ ನಾಲ್ವರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದಿದ್ದರು. ಮಡಿಕೇರಿ ನಗರದ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ತಂಗಿದ್ದರು. ಬಳಿಕ ಕೊಡಗಿನ ಪ್ರವಾಸಿತಾಣಗಳಿಗೆ ಭೇಟಿ ನೀಡಿದ ಯುವತಿಯರ ತಂಡ ಭಾನುವಾರವೂ ಜಿಲ್ಲೆಯ ವಿವಿಧ ಪ್ರವಾಸಿತಾಣಗಳಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಬೇರೆ ಮನೆ ಮಾಡಲು ಒಪ್ಪದ ಪತಿ -ಕಂದನನ್ನು ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ

    ಭಾನುವಾರ ರಾತ್ರಿ ಸ್ನಾನಕ್ಕೆಂದು ವಿಘ್ನೇಶ್ವರಿ ಬಾತ್ ರೂಮಿಗೆ ತೆರಳಿದ್ದ ಯುವತಿ ಬಾತ್ ರೂಮಿನಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಬಾತ್ ರೂಮಿಗೆ ಅಳವಡಿಸಿದ್ದ ಗೀಸರ್ ನಿಂದ ಗ್ಯಾಸ್ ಲೀಕ್ ಆಗಿ ಯುವತಿ ಮೃತಪಟ್ಟಿರಬಹುದು ಎನ್ನಲಾಗಿದೆ. ಯುವತಿ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆ ಜೊತೆಯಲ್ಲಿದ್ದ ಉಳಿದ ನಾಲ್ವರು ಯುವತಿಯರು ಹೋಂಸ್ಟೇ ಮಾಲೀಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ತಕ್ಷಣವೇ ಮಾಲೀಕ ಮುಕ್ತರ್ ಸ್ಥಳಕ್ಕೆ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಯುವತಿ ಮೃತಪಟ್ಟಿದ್ದಾಳೆ. ಇದನ್ನೂ ಓದಿ:  ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳಲು ವಿರೋಧಿಸಿದ್ದಕ್ಕೆ ತಂಗಿಯನ್ನೇ ಕೊಂದ ಅಕ್ಕ!

    ಯುವತಿಯ ಮೃತದೇಹವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ಮಾಡಿ ಬಳಿಕ ಪೋಷಕರಿಗೆ ಹಸ್ತಾಂತರ ಮಾಡಿದ್ದಾರೆ. ಘಟನೆ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕರಿತಂತೆ ಮಾತನಾಡಿರುವ ಯುವತಿಯ ತಂದೆ ಈಶ್ವರ್, ನನ್ನ ಮಗಳು ಆರೋಗ್ಯವಾಗಿದ್ದಳು. ನಿತ್ಯ ವಾಕ್ ಕೂಡ ಮಾಡುತ್ತಿದ್ದಳು. ಎರಡು ದಿನ ಕೊಡಗಿನ ಪ್ರವಾಸಿ ಸ್ಥಳಗಳಲ್ಲಿ ಚೆನ್ನಾಗಿಯೇ ಓಡಾಡಿ ನೋಡಿದ್ದಾಳೆ. ಆದರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಮೃತಪಟ್ಟಿರುವುದು ಅನುಮಾನ ಮೂಡಿಸಿದೆ. ಈ ಕುರಿತು ಸರಿಯಾದ ತನಿಖೆ ಮಾಡಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಹೋಂಸ್ಟೇ ಮಾಲೀಕ ಮುಕ್ತರ್ ಗ್ಯಾಸ್ ಗೀಜರ್ ಗೆ ಕನೆಕ್ಷನ್ ಕೊಟ್ಟಿಲ್ಲ. ಹೇಗೆ ಮೃತಪಟ್ಟಿದ್ದಾರೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

  • ಬಡ್ಡಿ ಹಣ ವಸೂಲಿಗೆ ಬಂದು ತೆಗೆದುಕೊಂಡು ಹೋದ ಬೈಕ್ ತರಲು ಹೋಗಿ ಕೊಲೆಯಾದ್ರು!

    ಬಡ್ಡಿ ಹಣ ವಸೂಲಿಗೆ ಬಂದು ತೆಗೆದುಕೊಂಡು ಹೋದ ಬೈಕ್ ತರಲು ಹೋಗಿ ಕೊಲೆಯಾದ್ರು!

    ಆನೇಕಲ್: ಅವರಿಬ್ಬರು ಸ್ನೇಹಿತರು, ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದ ಒಬ್ಬಾತ, ಇನ್ನೊಬ್ಬ ಸ್ನೇಹಿತ ತರಕಾರಿ ವ್ಯಾಪಾರ ಮಾಡುತ್ತಿದ್ದ. ಗುರುವಾರ ಮಧ್ಯಾಹ್ನ ಇಬ್ಬರೂ ಮನೆಯಿಂದ ಹೊರಟಿದ್ದರು. ಆದರೆ ಮನೆಯಿಂದ ಹೋದವರು ಸ್ನೇಹಿತರು ನಿರ್ಜನ ಪ್ರದೇಶದಲ್ಲಿ ಹೆಣವಾಗಿ ಹೋಗಿದ್ದಾರೆ. ಜೂಜಾಟ, ಬಡ್ಡಿ ವ್ಯಾಪಾರವೇ ಇವರಿಬ್ಬರ ಪ್ರಾಣ ಹೋಗೋದಕ್ಕೆ ಕಾರಣವಾಯ್ತಾ.? ಅಥವಾ ಇನ್ನೂ ಬೇರೆ ಕಾರಣ ಇದೆಯಾ ಅಂತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬಳ್ಳೂರು ರಸ್ತೆಯ ನಿರ್ಜನ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳ ಕೊಲೆ ನಡೆದು ಹೋಗಿದೆ. ಟಿವಿಎಸ್ ರಸ್ತೆ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಅತ್ತಿಬೆಲೆ ನಿವಾಸಿ ಫೈನಾನ್ಸಿಯರ್ ಆಗಿರುವ ದೀಪಕ್(45) ಹಾಗೂ ತರಕಾರಿ ವ್ಯಾಪಾರಿ ಮಾಯಸಂದ್ರದ ಭಾಸ್ಕರ್ (28) ಅವರ ಕೊಲೆಯಾಗಿದೆ.

    ದೀಪಕ್ ಸಣ್ಣ ಮಟ್ಟದ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ತಮಿಳುನಾಡು ಮೂಲದ ದೊರೆ ಎಂಬವನಿಗೆ 20 ಸಾವಿರ ಸಾಲ ನೀಡಿದ್ದ. ಸಾಲ ಹಿಂದಿರುಗಿಸದ ಕಾರಣ ಭಾಸ್ಕರ್ ಜೊತೆ ದೊರೆ ಊರಿಗೆ ತೆರಳಿ ಅವಾಜ್ ಹಾಕಿ, ಅವನ ಹೀರೋ ಎಕ್ಸ್ಟ್ರೀಮ್ ತೆಗೆದುಕೊಂಡು ಬಂದಿದ್ದ. ನಂತರ ದುಡ್ಡು ಕೊಡೋದಾಗಿ ಹೇಳಿದ ದೊರೆ, ತನ್ನ ಬೈಕ್ ವಾಪಸ್ ಪಡೆಯಲು ಬಂದಾಗ ದೊಡ್ಡ ಜಗಳ ನಡೆದಿದೆ ಎನ್ನಲಾಗಿದೆ.

    ಇತ್ತ ಮೊದಲೇ ನಿರ್ಧಾರ ಮಾಡಿಕೊಂಡು ಬಂದಿದ್ದ ದೊರೆ ಹಾಗೂ ಅರುಣ್ ಕಡೆಯ ಆರೇಳು ಮಂದಿ, ರಾಡ್ ದೊಣ್ಣೆಗಳಿಂದ ದೀಪಕ್ ನನ್ನು ಥಳಿಸಿದ್ದಾರೆ. ಇದಕ್ಕೆ ಅಡ್ಡ ಬಂದ ಭಾಸ್ಕರ್ ನನ್ನೂ ಹೊಡೆದಿದ್ದಾರೆ ಅಂತ ಹೇಳಲಾಗ್ತಿದೆ. ಕೇವಲ 20 ಸಾವಿರ ಹಣಕ್ಕೆ ಕೊಲೆ ನಡೆದಿರಬಹುದಾ ಅಥವಾ ಬೇರೆ ಏನಾದರೂ ಕಾರಣಗಳಿವೆಯಾ ಎಂದು ಬೇರೆ ಬೇರೆ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಟೀಲ್‍ಗೆ ಸೀರೆ ಉಡಿಸಿದ್ರೆ ಆತ ಹೆಂಗಸು ಅಲ್ಲ, ಗಂಡಸು ಅಲ್ಲ: ಬೇಳೂರು ಗೋಪಾಲಕೃಷ್ಣ

    ತನ್ನ ಗಂಡ ದೀಪಕ್ ಯಾರ ಜೊತೆಯೂ ಜಗಳ ಮಾಡ್ತಾ ಇರಲಿಲ್ಲ. ಫೈನಾನ್ಸ್ ವ್ಯವಹಾರ ಮಾಡಿಕೊಂಡಿದ್ದರು ಅಂತ ದೀಪಕ್ ಪತ್ನಿ ಸ್ನೇಹ ಕಣ್ಣೀರಿಟ್ಟಿದ್ದಾರೆ. ಇತ್ತ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಭಾಸ್ಕರ್, ಇತ್ತೀಚೆಗೆ ಜೂಜಾಡುವ ಚಟ ಮೈಗೂಡಿಸಿಕೊಂಡಿದ್ದ, ಮೊನ್ನೆಯಷ್ಟೇ ತಮಿಳುನಾಡು ಪೊಲಿಸರಿಂದ ಅರೆಸ್ಟ್ ಆಗಿ ಬೇಲ್ ಮೇಲೆ ಹೊರ ಬಂದಿದ್ದ. ಆನೇಕಲ್ ಹೊಸೂರು ಭಾಗದಲ್ಲಿ ನಡೆಯುವ ಇಸ್ಪೀಟು ಅಡ್ಡೆಗಳಲ್ಲಿ ಸಕ್ರಿಯವಾಗಿ ಜೂಜಾಡುತ್ತಿದ್ದ ಭಾಸ್ಕರ್ ಗೆ ದೀಪಕ್ ಆಗಾಗ ಹಣದ ಸಹಾಯ ಮಾಡುತ್ತಿದ್ದ. ಹೀಗಾಗಿಯೇ ಭಾಸ್ಕರ್, ದೀಪಕ್ ಜೊತೆಯೂ ಅವನ ಬಡ್ಡಿ ವ್ಯವಹಾರದಲ್ಲಿ ಸಹಾಯ ಮಾಡ್ತಿದ್ದ.

    ಒಟ್ಟಿನಲ್ಲಿ ಇದೀಗ ಜೂಜಾಟಕ್ಕೆ ಬೇಕಾದ ಹಣದ ಆಸೆಗೆ ಮಾರು ಹೋಗಿ ಹೆಣವಾಗಿರುವ ಭಾಸ್ಕರ್, ದೀಪಕ್ ನ ಜಗಳದಲ್ಲಿ ತಾನೂ ಪ್ರಾಣಕಳೆದುಕೊಂಡಿದ್ದಾನೆ.

  • ಗೆಳೆಯನನ್ನು ಕಾಪಾಡಲು ಹೋಗಿ ಸ್ನೇಹಿತರಿಬ್ಬರು ಪ್ರಾಣ ಬಿಟ್ಟರು

    ಗೆಳೆಯನನ್ನು ಕಾಪಾಡಲು ಹೋಗಿ ಸ್ನೇಹಿತರಿಬ್ಬರು ಪ್ರಾಣ ಬಿಟ್ಟರು

    ಕೊಪ್ಪಳ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾಗಿರುವ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಸಾಣಾಪುರ ಗ್ರಾಮದ ಕೆರೆಯಲ್ಲಿ ನಡೆದಿದೆ.

    ರಾಜೇಶ್ ಕುಮಾರ್(26) ಮತ್ತು ಮಧುಕಿರಣ್ (25) ಮೃತರು. ಇವರು ಹೈದ್ರಾಬಾದ್ ಮೂಲದವರಾಗಿದ್ದು, ಗಂಗಾವತಿಯ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಂತರ ಮೃತ ದೇಹ ಪತ್ತೆಯಾಗಿವೆ. ಪ್ರವಾಸಕ್ಕೆ ಬಂದಿರುವ  ನಾಲ್ವರು ಯುವಕರು ಸಾಣಾಪುರ ಕೆರೆ ದಡದ ಮೇಲೆ ಸ್ನಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ನಾಲ್ವರ ಪೈಕಿ ಕೇವಲ ಒಬ್ಬರಿಗೆ ಮಾತ್ರ ಈಜು ಬರುತ್ತಿತ್ತು. ಅಲೋಕ್ ಕುಮಾರ್ ಮಾತ್ರ ಕೆರೆಯಲ್ಲಿ ಈಜಲು ಹೋಗಿದ್ದ ಇನ್ನೂಳಿದ ಮೂವರು ಕೆರೆ ದಡದ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದರು. ಇನ್ನೂ ಅಲೋಕ್ ಕುಮಾರ್ ಸ್ವೀಮೀಂಗ್ ಮುಗಿಸಿಕೊಂಡು ಮೇಲೆ ಬಂದಿದಾನೆ. ಈ ವೇಳೆ ಇನ್ನೂ ಬಂಡೆಯ ಮೇಲೆ ಕುಳಿತು ಸ್ನಾನ ಮಾಡುತ್ತಿದ್ದ ಮೂವರಲ್ಲಿ ನರಸಿಂಹ ಎಂಬಾತ ಕಾಲು ಜಾರಿ ಕೆರಯಲ್ಲಿ ಬಿದ್ದಿದ್ದಾನೆ. ನರಸಿಂಹ ಕೆರೆಯಲ್ಲಿ ಬಿಳುತ್ತಿದ್ದಂತೆ ಆತನನ್ನು ಕಾಪಡಲು ಈಜು ಬಾರದ ರಾಜೇಶ್ ಮತ್ತು ಮಧು ಕಿರಣ ಕೆರೆಗೆ ಹಾರಿದ್ದಾರೆ. ಇದನ್ನು ನೋಡಿದ ಅಲೋಕ್ ಮೂವರನ್ನು ಕಾಪಾಡಲು ಆತನು ಕೆರೆಗೆ ಹಾರಿದ್ದಾನೆ ಆದರೆ ವಿಧಿಯಾಟ ಕಾಲು ಜಾರಿ ಬಿದ್ದ ನರಸಿಂಗ್ ನನ್ನು ಮಾತ್ರ ಅಲೋಕ್ ಕಾಪಾಡಲು ಸಾಧ್ಯವಾಯಿತು ನರಸಿಂಗ್‍ನನ್ನು ದಡೆಕ್ಕೆ ತಂದು ಬಿಡುವಷ್ಟರಲ್ಲಿ ತನ್ನ ಇನ್ನಿಬರು ಸ್ನೇಹಿತರು ನೀರುಪಾಲಾಗಿದ್ದರು. ಇನ್ನೂ ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:  ಯಡಿಯೂರಪ್ಪ ಅವರನ್ನು ಯಾವ ಸಮುದ್ರಕ್ಕೆ ಎಸೆದಿದ್ದೀರಿ: ಬಿಜೆಪಿಗೆ ಡಿಕೆಶಿ ಪ್ರಶ್ನೆ

  • ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ

    ಅಪ್ರಾಪ್ತೆ ಮೇಲೆ 8 ತಿಂಗಳಿಂದ ಸಾಮೂಹಿಕ ಅತ್ಯಾಚಾರ – 26 ಆರೋಪಿಗಳ ಬಂಧನ

    ಮುಂಬೈ: ಡೊಂಬಿವಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಥಾಣೆ ಪೊಲೀಸರು ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಿದ್ದು, ಇಲ್ಲಿಯವರೆಗೂ 26 ಆರೋಪಿಗಳನ್ನು ಬಂಧಿಸಿದ್ದಾರೆ ಮತ್ತು ಮೂವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

    15 ವರ್ಷದ ಬಾಲಕಿ ಮೇಲೆ ಕಳೆದ 8 ತಿಂಗಳಿನಿಂದ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಕಾಮುಕರು ಹಲವು ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಬಾಲಕಿ ದೂರಿನ ಅನ್ವಯ ಪೊಲೀಸರು ಕಲ್ಯಾಣದ ಡೊಂಬಿವಲಿಯಲ್ಲಿರುವ ಮನ್ಪದ ಪೊಲೀಸರು ಬುಧವಾರ ರಾತ್ರಿ 33 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 376(ಎನ್)(ಪುನರಾವರ್ತಿತ ಅತ್ಯಾಚಾರ), 376(ಡಿ)(ಸಾಮೂಹಿಕ ಅತ್ಯಾಚಾರ) 376(3)(ಹದಿನಾರು ವರ್ಷದೊಳಗಿನ ಮಹಿಳೆಯ ಮೇಲೆ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ(ಪೊಕ್ಸೊ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಭಾರತದ ಲಸಿಕಾಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಕಮಲಾ ಹ್ಯಾರಿಸ್

    ಈ ಕುರಿತಂತೆ ಹೆಚ್ಚುವರಿ ಪೊಲೀಸ್ ಆಯುಕ್ತರಾದ ದತ್ತಾತ್ರಯ್ ಕರಾಳೆ ಅವರು, ಈ ವರ್ಷದ ಜನವರಿ 29 ರಿಂದ ಸೆಪ್ಟೆಂಬರ್ 22ರ ನಡುವೆ ಈ ಘಟನೆ ನಡೆದಿದೆ. ಬಾಲಕಿಯ ಪ್ರಿಯಕರ ಆಕೆಯ ಮೇಲೆ ಅತ್ಯಾಚಾರ ಎಸಗಿದ ವೀಡಿಯೋವನ್ನು ರೆಕಾರ್ಡ್ ಮಾಡಿ ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ. ನಂತರ ಆತನ ಸ್ನೇಹಿತರು ಮತ್ತು ಪರಿಚಯಸ್ಥರು ಜಿಲ್ಲೆಯ ಡೊಂಬಿವಿಲಿ, ಬದ್ಲಾಪುರ, ಮುರ್ಬಾದ್ ಮತ್ತು ರಬಾನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕನಿಷ್ಟ ನಾಲ್ಕರಿಂದ ಐದು ಬಾರಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಎಸಿಪಿ ಸೋನಾಲಿ ಧೋಲೆ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು(ಎಸ್‍ಐಟಿ) ರಚಿಸಲಾಗಿದೆ. ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

    ಬಾಲಕಿ 33 ವ್ಯಕ್ತಿಗಳ ಹೆಸರನ್ನು ತಿಳಿಸಿದ್ದಾಳೆ. ಈ ಪೈಕಿ 26 ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಇಬ್ಬರು ಅಪ್ರಾಪ್ತ ವಯಸ್ಕರನ್ನು ಬಂಧಿಸಲಾಗಿದೆ. ಬಾಲಕಿಯ ಸ್ಥಿತಿ ಸ್ಥಿರವಾಗಿದೆ. ಸದ್ಯ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

  • 17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

    17 ವರ್ಷದ ದಾಂಪತ್ಯ ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ ಮಹಿಳೆ

    ವಾಷಿಂಗ್ಟನ್: 45 ವರ್ಷದ ಮಹಿಳೆಯೊಬ್ಬರು ತಮ್ಮ 17 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿ ಡೈವೋರ್ಸ್ ಪಾರ್ಟಿ ಮಾಡಿದ್ದಾರೆ.

    ಸೋನಿಯಾ ಗುಪ್ತಾ(45)ರವರು ಸತತ ಮೂರು ವರ್ಷಗಳ ಸುದೀರ್ಘ ಹೋರಾಟದ ನಂತರ ಪತಿಯಿಂದ ವಿಚ್ಛೇದನ ಪಡೆದು ತಮ್ಮ ಯುಕೆ ನಿವಾಸದಲ್ಲಿ ಔತಣ ಕೂಟವನ್ನು ಆಯೋಜಿಸಿ ಕುಟುಂಬ ಮತ್ತು ಸ್ನೇಹಿತರನ್ನು ಆಹ್ವಾನಿಸಿದ್ದರು. ಕಲರ್‌ಫುಲ್ ಥೀಮ್‍ನೊಂದಿಗೆ ಪಾರ್ಟಿಯನ್ನು ಆಯೋಜಿಸಿ, ವಿಚ್ಛೇದನಾ ಪಡೆದ ಖುಷಿಯಲ್ಲಿ ಮಹಿಳೆ ಬ್ರೈಟ್ ಡ್ರೆಸ್‍ನನ್ನು ಧರಿಸಿದ್ದರು ಮತ್ತು ಅವರ ಸ್ನೇಹಿತರಿಗೂ ಅವರಂತೆಯೇ ಆಕರ್ಷಕವಾದ ಉಡುಪನ್ನು ಧರಿಸುವಂತೆ ಪ್ರೋತ್ಸಾಹಿಸಿದ್ದಾರೆ. ವಿವಾಹ ದಾಂಪತ್ಯದಿಂದ ಬಿಡುಗಡೆ ಹೊಂದಿದಕ್ಕೆ ಪಾರ್ಟಿ ಮಾಡುವ ಇಚ್ಛೆಯನ್ನು ಮಹಿಳೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಖಾಸಗಿ ಅಂಬುಲೆನ್ಸ್‌ಗಳದ್ದೇ ಕಾರ್‌ಬಾರ್ – ಬ್ರಿಮ್ಸ್ ಆಸ್ಪತ್ರೆ ಎದುರೇ ಖಾಸಗಿ ಸುಲಿಗೆ

    ಈ ವಿಚಾರವಾಗಿ ಮಹಿಳೆ ನಾನು ಥೀಮ್ ಡ್ರೆಸ್‍ನನ್ನು ಕಲರ್ ಫುಲ್, ಬ್ರೈಟ್ ಹಾಗೂ ಯುನಿಕ್ ಆಗಿ ಕಾಣಲು ಆರಿಸಿಕೊಂಡೆ. ಏಕೆಂದರೆ ನಾನು ತುಂಬಾ ಕಲರ್ ಫುಲ್ ವ್ಯಕ್ತಿ. ನನಗೆ ಥೀಮ್ ಒಂದು ರೀತಿ ಮ್ಯಾಜಿಕ್‍ನಂತೆ. ನಾನು ಬಯಸಿದಂತೆ ವಿಚ್ಛೇದನ ಪಾರ್ಟಿ ಒಂದು ರೀತಿ ಮೋಜಿನ ಸಂಗತಿಯಾಗಿದ್ದು, ಪಾರ್ಟಿಯಲ್ಲಿ ಪ್ರತಿಯೊಬ್ಬರು ಎಂಜಾಯ್ ಮಾಡಿದರು. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

    2003ರಲ್ಲಿ ಸೋನಿಯಾ ಭಾರತದಲ್ಲಿ ವಿವಾಹವಾಗಿ ಯುಕೆಗೆ ತೆರಳಿದ್ದರು. ಆದರೆ ಎಷ್ಟೇ ಪ್ರಯತ್ನಿಸಿದರೂ ದಾಂಪತ್ಯ ಜೀವನದಲ್ಲಿ ಸುಖ ಕಾಣಲು ಸಾಧ್ಯವಾಗಲಿಲ್ಲ ಎಂದು ಮನವರಿಕೆ ಮಾಡಿಕೊಂಡೆ ಮತ್ತು ನನಗೂ, ನನ್ನ ಪತಿಗೂ ಹೊಂದಾಣಿಕೆಯಾಗುವುದಿಲ್ಲ ಎಂದು ಅರಿತುಕೊಂಡೆ. ನಾನು ನಾನಾಗಿರಬೇಕು ಎಂದು ಬಯಸಿದೆ. ಮದುವೆಗೂ ಮುನ್ನ ನಾನು ಬಹಳ ಸಕ್ರಿಯ ಮತ್ತು ಔಟ್ ಗೋಯಿಂಗ್ ವ್ಯಕ್ತಿಯಾಗಿದ್ದೆ. ಆದರೆ ಮದುವೆಯ ನಂತರ ಇದೆಲ್ಲ ನರಕದಂತೆ ಆಯಿತು. ಈ ವಿಚಾರವಾಗಿ ನಾನು ಕುಟುಂಬದೊಂದಿಗೆ ಹೇಳಿದಾಗ ನನ್ನ ಜೊತೆಗೆ ಜಗಳ ಆಡಿದರು ಮತ್ತು ಯಾರು ನನಗೆ ಬೆಂಬಲ ನೀಡಲಿಲ್ಲ. ಆದರೆ ಈ ವಿಚಾರದಲ್ಲಿ ನನ್ನ ಎರಡು ಶಕ್ತಿಗಳಂತೆ ಮಿಖಲ್ ಮತ್ತು ಶೇ ಇಬ್ಬರು ಸ್ನೇಹಿತರು ಬೆಂಬಲ ನೀಡಿದರು. ವಿಚ್ಛೇದನ ಬಳಿಕ ನಾನು ಏಷ್ಯನ್ ಸಿಂಗಲ್ ಪೇರೆಂಟ್ ಆಗಿ ನೆರವು ಪಡೆದಿದ್ದೇನೆ ಎಂದು ಹೇಳಿದ್ದಾರೆ.

  • ನಡುರಸ್ತೆಯಲ್ಲಿ ಹರಿಯಿತು ನೆತ್ತರು – ಸ್ನೇಹಿತರಿಂದಲೇ ಯುವಕನ ಲೈವ್ ಮರ್ಡರ್

    ನಡುರಸ್ತೆಯಲ್ಲಿ ಹರಿಯಿತು ನೆತ್ತರು – ಸ್ನೇಹಿತರಿಂದಲೇ ಯುವಕನ ಲೈವ್ ಮರ್ಡರ್

    ನೆಲಮಂಗಲ(ಬೆಂಗಳೂರು): ನೆಲಮಂಗಲ ನಗರದಲ್ಲಿ ನಡುರಸ್ತೆಯಲ್ಲಿಯೇ ಯುವಕರ ಗುಂಪೊಂದು ಯುವಕನ ಮೇಲೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಡೆದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ನಗರದ ಸುಭಾಷ್ ನಗರದ ಟಿಬಿ ಬಸ್ ಸ್ಟಾಪ್ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ರೇವಂತ್ ಅಲಿಯಾಸ್ ಸೃಷ್ಟಿ ಎಂಬಾತನಿಗೆ ಪಲ್ಸರ್ ಬೈಕಿನಲ್ಲಿ ಬಂದ ಯುವಕರ ಗುಂಪು ಚಾಕುವಿನಿಂದ ಚುಚ್ಚಿ ಪರಾರಿಯಾಗಿದೆ.

    ಯುವಕನಿಗೆ ನಡು ರಸ್ತೆಯಲ್ಲಿ ಚಾಕು ಹಿಡಿದು ಅಟ್ಟಹಾಸ ಮೆರೆದ ವೀಡಿಯೋ ಮೊಬೈಲ್ ನಲ್ಲಿ ರೆಕಾರ್ಡ್ ಆಗಿದ್ದು, ಲೈವ್ ಮರ್ಡರ್ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳೀಯರು ಯವಕನನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲು ಮುಂದಾದರೂ ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

    ಘಟನೆ ನಡೆದ ಸ್ಥಳದ ರಸ್ತೆಯ ತುಂಬೆಲ್ಲಾ ರಕ್ತ ಹರಿದಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ. ನೆಲಮಂಗಲ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ. ಇತ್ತೀಚೆಗೆ ನೆಲಮಂಗಲದಲ್ಲಿ ಮತ್ತೆ ನೆತ್ತರಿನ ಪ್ರಕರಣಗಳು ಮರುಕಳಿಸುತ್ತಿದ್ದು, ಪೊಲೀಸ್ ಇಲಾಖೆ ಇನ್ನಷ್ಟು ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ. ಪಡ್ಡೆಯುವಕರಿಗೆ ಕಡಿವಾಣಹಾಕಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಇದನ್ನೂ ಓದಿ: ಬಾಲಕಿ ಮೇಲೆ ಲೈಂಗಿಕ ಕಿರುಕುಳ ಪ್ರಕರಣ – ಠಾಣೆ ಬಳಿ ಓಡೋಡಿ ಬಂದಿದ್ದ ಶಾಸಕ ಬೈರತಿ ಸುರೇಶ್

  • ಸ್ನೇಹಿತನ ತಾಯಿ ಬಿಟ್ಟು ಬರಲು ಹೋಗಿ ಮಸಣ ಸೇರಿದರು

    ಸ್ನೇಹಿತನ ತಾಯಿ ಬಿಟ್ಟು ಬರಲು ಹೋಗಿ ಮಸಣ ಸೇರಿದರು

    – ಡಿವೈಡರ್ ಗೆ ಕಾರು ಡಿಕ್ಕಿ, ಇಬ್ಬರು ಧಾರುಣ ಸಾವು

    ಚಿಕ್ಕೋಡಿ/ಬೆಳಗಾವಿ: ರಸ್ತೆ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ನಡೆದಿದೆ.

    ವಿನಾಯಕ ಚಿದಾನಂದ ಕಾವೇರಿ (22) ಮುತ್ತು ಮಾಳಿ (22) ಮೃತ ಯುವಕರು. ಈರಯ್ಯ ಹಿರೇಮಠ (22) ಸ್ಥಿತಿ ಗಂಭೀರವಾಗಿದ್ದು, ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿಗಳಾಗಿದ್ದು, ಈರಯ್ಯ ಅವರ ತಾಯಿಯನ್ನು ಧಾರವಾಡಕ್ಕೆ ಬಿಟ್ಟು ಬರುವಾಗ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಫಸಲಿಗೆ ಬಂದಿದ್ದ 700 ಅಡಿಕೆ ಮರ ಕಡಿದು ಹಾಕಿದ ದುಷ್ಕರ್ಮಿಗಳು

    ಧಾರವಾಡದಿಂದ ಅಥಣಿಗೆ ಆಗಮಿಸುವಾಗ ರಸ್ತೆ ಮಧ್ಯದಲ್ಲಿ ಅಪಘಾತ ಸಂಭವಿಸಿದೆ. ಭಾನುವಾರ ನಸುಕಿನ ವೇಳೆ ಗುರ್ಲಾಪೂರ ಬಳಿ ಕಾರ್ ಅಪಘಾತ ಸಂಭವಿಸಿದ್ದು, ಹಾರೋಗೇರಿ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾರೋಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ದೇವಸ್ಥಾನಕ್ಕೆ ಹೋದ 8 ಸ್ನೇಹಿತರ ಪೈಕಿ ಮೂವರು ಜಲ ಸಮಾಧಿ

    ದೇವಸ್ಥಾನಕ್ಕೆ ಹೋದ 8 ಸ್ನೇಹಿತರ ಪೈಕಿ ಮೂವರು ಜಲ ಸಮಾಧಿ

    ಮಂಡ್ಯ: ದೇವಸ್ಥಾನಕ್ಕೆ ಹರಕೆ ತೀರಿಸಲು ಹೊರಟ ಎಂಟು ಮಂದಿ ಸ್ನೇಹಿತರ ತಂಡವೊಂದು ಪೂಜೆಯ ಬಳಿಕ ಊಟ ಮಾಡಿ ಕಾಲುವೆಗೆ ಈಜಲು ಹೋಗಿ ಸಂಭವಿಸಿದ ಅವಘಡದಲ್ಲಿ ಮೂವರು ಸ್ನೇಹಿತರು ನೀರು ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

    ಮಂಡ್ಯದ ಕೆಆರ್‍ ಪೇಟೆ ತಾಲೂಕಿನ ಹೇಮಗಿರಿ ಬಳಿಯಿರುವ ಚಂದಗೋಳಮ್ಮ ದೇವಸ್ಥಾನದ ಎದುರಿರುವ ಮಂದಗೆರೆ ಬಲದಂಡಾ ನಾಲೆಯಲ್ಲಿ ಘಟನೆ ನಡೆದಿದ್ದು, ಮೈಸೂರಿನ ಬೆಲವತ್ತಮಂಟಿ ನಗರದ ಆಟೋ ಡ್ರೈವರ್ ರವಿ(27), ಗಾರೆ ಕೆಲಸಗಾರರಾದ ಕುಂಬಾರಕೊಪ್ಪಲು ನಗರದ ಯೋಗಶ್(24), ಲೋಕನಾಯಕನಗರದ ಮಂಜು(24) ನೀರು ಪಾಲಾದ ದುರ್ದೈವಿಗಳು. ಇದನ್ನೂ ಓದಿ: ನಿನ್ನ ಬಳಿ ದುಡ್ಡಿಲ್ಲ ಎಂದು ಮಜಾ ಭಾರತದ ಕಲಾವಿದನಿಗೆ ಕೈ ಕೊಟ್ಟ ಪತ್ನಿ

    ಮೈಸೂರಿನಿಂದ ಎಂಟು ಯುವಕರ ತಂಡ ಚಂದಗೋಳಮ್ಮ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ ಕೋಳಿ ಹರಕೆ ಮಾಡಿ ಊಟ ತಯಾರಿಸಿ ಸವಿದಿದ್ದಾರೆ. ಬಳಿಕ ರವಿ ಎಂಬವರು ಪಕ್ಕದಲ್ಲಿದ್ದ ನಾಲೆಯಲ್ಲಿ ಈಜಲು ಮುಂದಾಗಿದ್ದಾರೆ. ಕೆಲಕಾಲ ಈಜಿದ್ದಾರೆ, ಸ್ವಲ್ಪ ಸಮಯದ ನಂತರ ಸುಸ್ತಾಗಿ ನೀರಿನಲ್ಲಿ ಮುಳುಗುತ್ತಿದ್ದ ರವಿಯನ್ನು ಕಾಪಾಡಲು ಯೋಗೇಶ್ ಎಂಬವರು ನೀರಿಗೆ ಇಳಿದಿದ್ದಾರೆ. ಆದರೆ ಯೋಗೇಶ್ ರವಿಯನ್ನು ಕಾಪಡಲು ಸಾಧ್ಯವಾಗದೇ ಮುಳುಗುವ ಸ್ಥಿತಿಗೆ ತಲುಪಿದ್ದಾರೆ. ಈ ಇಬ್ಬರನ್ನು ಕಾಪಾಡಲು ಮಂಜು ಕಾಲುವೆಗೆ ಇಳಿದಿದ್ದಾರೆ. ಮೂವರು ನೀರಿನಲ್ಲಿ ಮುಳುಗುತ್ತಿದನ್ನು ಗಮನಿಸಿ ಮತ್ತೋರ್ವ ಸೀನು ಎಂಬವರು ನೀರಿಗಿಳಿಯಲು ಪ್ರಯತ್ನಿಸಿದಾಗ ಇತರರು ಹಿಡಿದುಕೊಂಡಿದ್ದಾರೆ ಹಾಗಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ.

    ಮೂವರು ನೀರಿನಲ್ಲಿ ಮುಳುಗುತ್ತಿದ್ದವರನ್ನು ಗಮನಿಸಿ ಸ್ಥಳೀಯರು ರಕ್ಷಣೆ ಮಾಡಲು ಮುಂದಾದರು ಕೂಡ ಪಾರು ಮಾಡಲು ಸಾಧ್ಯವಾಗಿಲ್ಲ. ಬಳಿಕ ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಅಧಿಕಾರಿ ಶಿವಣ್ಣ ಅವರ ನೇತೃತ್ವದ ತಂಡ ಶೋಧಕಾರ್ಯ ನಡೆಸಿದ್ದಾರೆ. ನಿನ್ನೆ ಸಂಜೆ ನೀರಿನ ಹರಿವು ಜೋರಾಗಿದ್ದರಿಂದ ಮೃತ ದೇಹಗಳು ಪತ್ತೆ ಆಗಿರಲಿಲ್ಲ, ಬಳಿಕ ರಾತ್ರಿಯಾದ್ದರಿಂದಾಗಿ ಶೋಧಕಾರ್ಯವನ್ನು ಮೊಟಕುಗೊಳಿಸಲಾಗಿತ್ತು. ಇಂದು ಬೆಳಗ್ಗೆ ಪತ್ತೆಗೆ ನಡೆದ ಶೋಧ ಕಾರ್ಯದ ವೇಳೆ ಮೂವರ ಮೃತ ದೇಹಗಳು ಪತ್ತೆಯಾಗಿದೆ. ಇದನ್ನೂ ಓದಿ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ

    ಘಟನೆಯ ಬಳಿಕ ಹೆದರಿ ಮೂವರು ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನಿಬ್ಬರು ಕೆಆರ್‍ ಪೇಟೆ ಗ್ರಾಮಾಂತರ ಪೊಲೀಸರ ವಶದಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸ್ ನಿರೀಕ್ಷಕ ನಿರಂಜನ್, ಉಪ ನಿರೀಕ್ಷಕ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ರಾತ್ರಿ ಫುಲ್ ಪಾರ್ಟಿ- ಎಣ್ಣೆ ಮತ್ತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ರಾತ್ರಿ ಫುಲ್ ಪಾರ್ಟಿ- ಎಣ್ಣೆ ಮತ್ತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಸ್ನೇಹಿತರಿಬ್ಬರು ರಾತ್ರಿ ಫುಲ್ ಪಾರ್ಟಿ ಮಾಡಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪ್ರಶಾಂತ್ ತನ್ನ ಸ್ನೇಹಿತ ನಿತೇಶ್ ನನ್ನು ಕೊಲೆ ಮಾಡಿದ್ದಾನೆ. ರಾತ್ರಿ ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡಿದ್ದು, ಪಾರ್ಟಿ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೆಳೆ ನಿತೇಶ್ ಸ್ನೇಹಿತ ಪ್ರಶಾಂತ್ ಗೆ ಕಾಲಿನಿಂದ ಒದ್ದಿದ್ದ. ಕಾಲಿನಿಂದ ಒದ್ದ ಬಳಿಕ ಇಬ್ಬರು ಒಟ್ಟಿಗೆ ಮಲಗಿದ್ದರು. ಮಲಗಿ ಸ್ವಲ್ಪ ಸಮಯದ ನಂತರ ಕೋಪಗೊಂಡು ಮತ್ತೆ ಎಚ್ಚರಗೊಂಡಿದ್ದ ಪ್ರಶಾಂತ್, ನನಗೇ ಒದೆಯುತ್ತೀಯಾ ಎಂದು ಹಾಲೊ ಬ್ರಕ್ಸ್ ಎತ್ತಿ ನಿತೇಶ್ ತಲೆಮೇಲೆ ಹಾಕಿದ್ದಾನೆ. ಪರಿಣಾಮ ನಿತೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಮುಕ ವೃದ್ಧನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ

    ಸ್ಥಳಕ್ಕೆ ಡಿಜೆಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಾರಿಯಾಗುತ್ತಿದ್ದ ಪ್ರಶಾಂತ್ ನನ್ನು ಡಿಜೆಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

  • ಇಬ್ಬರು ರೌಡಿಶೀಟರ್‌ಗಳ ಮಧ್ಯೆ ವಿಲನ್ ಆದಳು ಯುವತಿ- ಪ್ರಕರಣ ಕೊಲೆಯಲ್ಲಿ ಅಂತ್ಯ

    ಇಬ್ಬರು ರೌಡಿಶೀಟರ್‌ಗಳ ಮಧ್ಯೆ ವಿಲನ್ ಆದಳು ಯುವತಿ- ಪ್ರಕರಣ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಇಬ್ಬರು ರೌಡಿಶೀಟರ್ ಗಳು ಹತ್ತಾರು ವರ್ಷಗಳಿಂದ ಪ್ರಾಣ ಸ್ನೇಹಿತರಾಗಿದ್ದರು. ಆದರೆ ಈ ನಡುವೆ ಯುವತಿಯ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ಗಲಾಟೆ ಮಾಡಿಕೊಂಡಿದ್ದು, ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿದೆ.

    ಡಿಜೆ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಫೈರೋಜ್‍ನ ಕುಟುಂಬಸ್ಥರೆಲ್ಲ ಸೇರಿ ಮಜರ್‍ನನ್ನು ಹತ್ಯೆ ಮಾಡಿದ್ದಾರೆ. ಈ ಮೂಲಕ ಇಬ್ಬರ ಸ್ನೇಹದ ನಡುವೆ ಯುವತಿ ವಿಲನ್ ಆಗಿದ್ದಾಳೆ. ಇದೀಗ ರೌಡಿಶೀಟರ್ ಫೈರೋಜ್ ಸೇರಿದಂತೆ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಡಿಜೆ ಹಳ್ಳಿಯ ರೌಡಿಶೀಟರ್ ಮಜರ್ ಮತ್ತು ಅದೇ ಏರಿಯಾದ ಫೈರೋಜ್ ಹತ್ತಾರು ವರ್ಷಗಳಿಂದ ಅಣ್ಣ ತಮ್ಮಂದಿರಂತೆ ಒಟ್ಟಿಗೆ ಓಡಾಡಿ ಊಟ ಮಾಡಿದೋರು. ಅಷ್ಟೇ ರೌಡಿಸಂ ಕೂಡ ಮಾಡಿ, ಇಬ್ಬರ ಮೇಲೂ ರೌಡಿಶೀಟ್ ಕೂಡ ಓಪನ್ ಆಗಿವೆ. ಇದರ ನಡುವೆ ರೌಡಿಶೀಟರ್ ಫೈರೋಜ್ ಮನೆಯ ಯುವತಿಯೊಬ್ಬರ ಸಂಬಂಧ, ರೌಡಿಶೀಟರ್ ಮಜರ್ ಮತ್ತು ಫೈರೋಜ್ ನಡುವೆ ವೈಮನಸ್ಸು ಉಂಟಾಗಿದೆ. ನಂತರ ಕೆಲ ದಿನಗಳಿಂದ ಇಬ್ಬರೂ ದೂರವಾಗಿದ್ದರು.

    ಇತ್ತೀಚೆಗೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಸಹ ಶುರುವಾಗಿತ್ತು. ಗಲಾಟೆ ಮುಂದುವರಿದು, ನಿನ್ನೆ ರಾತ್ರಿ ಒಂದು ಹಂತದವರೆಗೆ ವಾಗ್ವಾದಗಳು ನಡೆದು ಇಬ್ಬರೂ ಸುಮ್ಮನಾಗಿದ್ದರು. ಆದರೆ ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಮಜರ್ ಮತ್ತೆ ಫೈರೋಜ್ ಮನೆ ಬಳಿ ಸಂಧಾನಕ್ಕೆ ಹೋಗಿದ್ದ. ಈ ವೇಳೆ ಮತ್ತೆ ಮಜರ್ ಮತ್ತು ಫೈರೋಜ್ ಕುಟುಂಬದ ಜೊತೆಗೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಫೈರೋಜ್ ಅವರ ಕುಟುಂಬದವರು ಸೇರಿಕೊಂಡು ಮಜರ್ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ.

    ಸಾವನ್ನಪ್ಪಿರುವುದು ಖಚಿತವಾಗುತ್ತಿದ್ದಂತೆ, ಮೃತದೇಹವನ್ನು ಮನೆ ಮುಂದಿನ ರಸ್ತೆಯಲ್ಲಿ ಬಿಸಾಕಿ ಬಾಗಿಲು ಹಾಕಿಕೊಂಡಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಡಿಜೆ ಹಳ್ಳಿ ಪೊಲೀಸರು, ರೌಡಿಶೀಟರ್ ಫೈರೋಜ್ ಸೇರಿದಂತೆ ಎಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.