Tag: friends

  • ಪಾರ್ಟಿಗೆ ಬಂದಿದ್ದ ಯುವಕನನ್ನ ಕೊಲೆ ಮಾಡಿದ ಸ್ನೇಹಿತರು

    ಪಾರ್ಟಿಗೆ ಬಂದಿದ್ದ ಯುವಕನನ್ನ ಕೊಲೆ ಮಾಡಿದ ಸ್ನೇಹಿತರು

    – ಬಿಯರ್ ಬಾಟಲ್‍ಗಳಿಂದ ಹಲ್ಲೆ

    ಬೆಂಗಳೂರು: ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮಣಿ ಕೊಲೆಯಾದ ಯುವಕ. ಆರೋಪಿಗಳಾದ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ಸೇರಿ ಮಣಿಯನ್ನು ಕೊಲೆ ಮಾಡಿದ್ದಾರೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮೃತ ಮಣಿ ಆರೋಪಿಗಳಾದ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ನಾಲ್ವರು ಸ್ನೇಹಿತರ ಮನೆಯಲ್ಲಿ ಪಾರ್ಟಿಗೆಂದು ಸೇರಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ನಾಲ್ವರ ನಡುವೆ ಗಲಾಟೆ ಶುರುವಾಗಿ. ಗಲಾಟೆ ವಿಕೋಪಕ್ಕೆ ಹೋಗಿ ಕೃಷ್ಣಮೂರ್ತಿ, ಸಂದೀಪ್ ರೆಡ್ಡಿ ಹಾಗೂ ರೇವಣ ಸಿದ್ದಯ್ಯ ಮೂವರು ಸೇರಿ ಮಣಿ ಮೇಲೆ ಬಿಯರ್ ಬಾಟಲ್‍ಗಳಿಂದ ಹಲ್ಲೆ ಮಾಡಿದ್ದಾರೆ.

    ಹಲ್ಲೆಗೊಳಗಾದ ಮಣಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಾಹಿತಿ ತಿಳಿದು ಕೆಂಗೇರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ನಂತರ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ.

  • ಬೇಟೆಗೆ ಹೋದ ಐವರು ಗೆಳೆಯರು- ಕಾಡುಪ್ರಾಣಿ ಎಂದು ಗೆಳಯನಿಗೇ ಗುಂಡು

    ಬೇಟೆಗೆ ಹೋದ ಐವರು ಗೆಳೆಯರು- ಕಾಡುಪ್ರಾಣಿ ಎಂದು ಗೆಳಯನಿಗೇ ಗುಂಡು

    ಕಾರವಾರ: ರಾತ್ರಿ ವೇಳೆ ಪ್ರಾಣಿ ಬೇಟೆಗೆಂದು ಐವರು ಗೆಳೆಯರು ಕಾಡಿಗೆ ಹೋಗಿದ್ದಾರೆ. ಈ ವೇಳೆ ಕಾಡು ಪ್ರಾಣಿ ಎಂದು ತಮ್ಮ ತಂಡದಲ್ಲಿದ್ದ ಗೆಳೆಯನಿಗೇ ಗುಂಡುಹಾರಿಸಿದ ಘಟನೆ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಘಟನೆ ನಡೆದಿದ್ದು, ಬೇಟೆಗಾಗಿ ಹೋಗಿದ್ದ ಸುಲೇಮಾನ್, ಇಸ್ಮಾಯಿಲ್, ಮುಕಮುಲ್, ಅಹ್ಮದ್ ಹಾಗೂ ಬೇಟೆಗೆ ಬಳಸಿದ ಬಂದೂಕನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಭಾನುವಾರ ರಾತ್ರಿ ಮಳಗಿ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ಐವರು ತೆರಳಿದ್ದರು. ಈ ವೇಳೆ ಪ್ರಾಣಿಗಳನ್ನು ಬೇಟೆಯಾಡಲು ಗುಂಪಿನಲ್ಲಿದ್ದವರು ಚದುರಿ ಹೋಗಿದ್ದರು. ಆಗ ಮುಸ್ತಾಕ್ ಎಂಬಾತ ತಂಡದಿಂದ ಬೇರ್ಪಟ್ಟು ಪ್ರಾಣಿಗಳನ್ನು ಹುಡುಕುತಿದ್ದ. ಈ ವೇಳೆ ಈತನೇ ಕಾಡುಪ್ರಾಣಿ ಎಂದು ಗುಂಡು ಹಾರಿಸಿದ್ದಾರೆ. ಮುಸ್ತಾಕ್‍ಗೆ ಎದೆಯ ಮೇಲ್ಭಾಗ ಗಂಭೀರ ಗಾಯವಾಗಿದ್ದು, ತಕ್ಷಣ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೃತ ಸ್ನೇಹಿತನಿಂದ ಗೋಲ್ ಹೊಡೆಸಿ ತಬ್ಬಿ ದುಃಖಪಟ್ಟ ಗೆಳೆಯರು: ವಿಡಿಯೋ ವೈರಲ್

    ಮೃತ ಸ್ನೇಹಿತನಿಂದ ಗೋಲ್ ಹೊಡೆಸಿ ತಬ್ಬಿ ದುಃಖಪಟ್ಟ ಗೆಳೆಯರು: ವಿಡಿಯೋ ವೈರಲ್

    – ಸ್ನೇಹಿತನ ಮೃತದೇಹವನ್ನು ಫುಟ್‍ಬಾಲ್ ಸ್ಟೇಡಿಯಂಗೆ ತಂದ ಸ್ನೇಹಿತರು

    ಮೆಕ್ಸಿಕೊ: ಮೃತ ಸ್ನೇಹಿತನಿಂದ ಕೊನೆಯ ಗೋಲ್ ಹೊಡೆಸಿ ಕೊನೆಯಲ್ಲಿ ಶವದ ಪೆಟ್ಟಿಗೆಯನ್ನು ಅನ್ನು ತಬ್ಬಿಕೊಂಡು ಸ್ನೇಹಿತರೆಲ್ಲ ದುಃಖ ಪಡುವ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ನಾವು ನೋಡುವ ವಿಡಿಯೋಗಳು ನಮ್ಮನ್ನು ಮೂಕವಿಸ್ಮಿತರಾನ್ನಾಗಿ ಮಾಡುತ್ತವೆ. ಈಗ ಮೆಕ್ಸಿಕೋದಲ್ಲಿ ಸಾವನ್ನಪ್ಪಿದ ಸ್ನೇಹಿತನಿಗೆ ಆತನ ಗೆಳೆಯರೆಲ್ಲರೂ ಸೇರಿ ವಿಶೇಷವಾಗಿ ಅಂತಿಮ ನಮನ ಸಲ್ಲಿಸುವ ವಿಡಿಯೋ ಎಲ್ಲರ ಕಣ್ಣಿನ ಅಂಚಿನಲ್ಲಿ ನೀರು ತರಿಸಿದೆ.

    ಈ ವಿಡಿಯೋ ಕ್ಲಿಪ್ ಅನ್ನು ಮೆಕ್ಸಿಕೊದಿಂದ ಟಿವಿ ಬಸ್ ಅವರು ಮೊದಲಿಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ಅಲೆಕ್ಸ್ ಸ್ಟೋನ್ ಅವರು ಶೇರ್ ಮಾಡಿ “ಮೆಕ್ಸಿಕೊದಲ್ಲಿ 16 ವರ್ಷದ ಬಾಲಕನನ್ನು ಕೊಲೆ ಮಾಡಲಾಗಿದೆ. ಅವರ ತಂಡದ ಸದಸ್ಯರು ಅವರನ್ನು ಫುಟ್‍ಬಾಲ್ ಆಡುವ ಸ್ಥಳಕ್ಕೆ ಕರೆದುಕೊಂಡು ಹೋದರು ಮತ್ತು ಕೊನೆಯ ಬಾರಿಗೆ ಗೋಲ್ ಹೊಡೆಯಲು ಅವಕಾಶ ಮಾಡಿಕೊಟ್ಟರು. ಈ ರೀತಿಯದನ್ನು ನಾನು ಎಂದೂ ನೋಡಿಲ್ಲ ಎಂದು ಬರೆದುಕೊಂಡಿದ್ದಾರೆ.

    ಕೆವಲ 54 ಸೆಕೆಂಡ್ ಇರುವ ಈ ವಿಡಿಯೋದಲ್ಲಿ ಮೊದಲಿಗೆ ಸ್ನೇಹಿತರೆಲ್ಲರೂ ಶವದ ಪೆಟ್ಟಿಗೆಯನ್ನು ಗೋಲ್ ನೆಟ್ ಮುಂಭಾಗ ಇಟ್ಟು, ಅದರ ಸುತ್ತ ಬಾಲ್ ಹಿಡಿದು ನಿಂತಿರುತ್ತಾರೆ. ನಂತರ ಓರ್ವ ಫುಟ್‍ಬಾಲ್ ಅನ್ನು ಮೊದಲಿಗೆ ಬೇರೊಬ್ಬನಿಗೆ ಪಾಸ್ ಮಾಡುತ್ತಾನೆ. ನಂತರ ಅವನು ಅ ಬಾಲನ್ನು ಶವದ ಪೆಟ್ಟಿಗೆ ತಳುತ್ತಾನೆ. ಪೆಟ್ಟಿಗೆ ತಾಗಿದ ಬಾಲು ನೇರವಾಗಿ ಗೋಲ್ ಒಳಗೆ ಹೋಗುತ್ತದೆ. ಆಗ ಎಲ್ಲರೂ ಚೀಯರ್ ಮಾಡುವ ರೀತಿ ಕೂಗುತ್ತಾರೆ. ಕೊನೆಯಲ್ಲಿ ಎಲ್ಲರೂ ಶವದ ಪೆಟ್ಟಿಗೆಯನ್ನು ತಬ್ಬಿಕೊಳ್ಳುತ್ತಾರೆ.

    ಅಂದಹಾಗೆ ಅಂತರಾಷ್ಟೀಯ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಮೃತನನ್ನು 16 ವರ್ಷದ ಅಲೆಕ್ಸಾಂಡರ್ ಮಾರ್ಟಿನೆಜ್ ಎಂದು ಗುರತಿಸಲಾಗಿದೆ. ಆತನನ್ನು ಯಾರೋ ಕೊಲೆ ಮಾಡಿದ್ದಾರೆ. ಆಗ ಆತನ ಶವವನ್ನು ತಾವು ದಿನ ಫುಟ್‍ಬಾಲ್ ಆಡುತ್ತಿದ್ದ ಸ್ಟೇಡಿಯಂಗೆ ತೆಗೆದುಕೊಂಡು ಬಂದ ಮಾರ್ಟಿನೆಜ್ ಸ್ನೇಹಿತರು ಕೊನೆಯದಾಗಿ ಒಂದು ಗೋಲ್ ಹೊಡೆಸಿ ಗುರುವಾರ ಅಂತ್ಯಕ್ರಿಯೆ ಮಾಡಿದ್ದಾರೆ.

    https://twitter.com/cazbabyblu/status/1271702436558721025

    ಸ್ನೇಹಿತರ ಈ ಪ್ರೀತಿಯನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದು, ಈ ವಿಡಿಯೋ ನನ್ನ ಕಣ್ಣಿನಲ್ಲಿ ನೀರು ತರಿಸಿತು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಇದು ನಮಗೆ ಕ್ರೀಡೆ ಕಲಿಸುವ ಪಾಠ, ವಿಡಿಯೋ ನೋಡಿ ನಮಗೆ ಬಹಳ ನೋವಾಯ್ತು ಎಂದಿದ್ದಾರೆ. ಈ ವಿಡಿಯೋ ನೋಡಿ ಫುಟ್‍ಬಾಲ್‍ಗಿಂತ ಇವರ ಪ್ರೀತಿ ಮತ್ತು ಸ್ನೇಹ ದೊಡ್ಡದು ಎನಿಸಿತು ಎಂದು ಹಲವಾರು ಜನ ಕಮೆಂಟ್ ಮಾಡಿದ್ದಾರೆ.

  • ಮಗನನ್ನು ಮನೆಗೆ ಬಿಟ್ಟು ಬರುತ್ತೇನೆ- ಸಾಮೂಹಿಕ ಅತ್ಯಾಚಾರ ನಡೆಸಿದ ಕ್ರೂರಿಗಳಿಗೆ ಮಹಿಳೆ ಪ್ರಮಾಣ

    ಮಗನನ್ನು ಮನೆಗೆ ಬಿಟ್ಟು ಬರುತ್ತೇನೆ- ಸಾಮೂಹಿಕ ಅತ್ಯಾಚಾರ ನಡೆಸಿದ ಕ್ರೂರಿಗಳಿಗೆ ಮಹಿಳೆ ಪ್ರಮಾಣ

    – ಪುಣ್ಯಕೋಟಿ ಕಥೆ ನೆನಪಿಸುತ್ತೆ ಘಟನೆ
    – ಸಿಗರೇಟ್ ಬೆಂಕಿಯಿಂದ ಹಿಂಸಿಸಿದ ಕ್ರೂರಿಗಳು
    – ಪತಿಯ ಸಹಾಯದಿಂದ ಆತನ ಸ್ನೇಹಿತರಿಂದಲೇ ಗ್ಯಾಂಗ್ ರೇಪ್

    ತಿರುವನಂತಪುರಂ: ಕೇರಳದ ತಿರುವನಂತಪುರಂ ಅಮಾನವೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದು, ಇತ್ತೀಚೆಗಷ್ಟೆ ಗರ್ಭಿಣಿ ಆನೆಗೆ ಪೈನಾಪಲ್ ಹಣ್ಣಿನಲ್ಲಿ ಪಟಾಕಿ ಇಟ್ಟು ತಿನ್ನಿಸಿ ಸಾಯಿಸಲಾಗಿತ್ತು. ಇದೀಗ ಪುಟ್ಟ ಮಗನೆದುರೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಸಿಗರೇಟ್ ಬೆಂಕಿಯಿಂದ ಸುಟ್ಟು, ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ವರ್ತಿಸಿರುವ ಘಟನೆ ನಡೆದಿದೆ.

    ಕೇರಳದ ತಿರುವನಂತಪುರಂನ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಕ್ರೂರವಾಗಿ ವರ್ತಿಸಿರುವ ಕುರಿತು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪತಿ ಹಾಗೂ ಮಗನೊಂದಿಗೆ ಇದ್ದಾಗ ಆತನ ಸ್ನೇಹಿತರೇ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದು, ನಂತರ ಪುಟ್ಟ ಮಗನೆದುರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ಪತಿ ಸೇರಿದಂತೆ ಐವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

    ಪ್ರಕರಣದ ಕುರಿತು ಮಹಿಳೆ ಹೇಳಿಕೆ ನೀಡಿದ್ದು, ನನ್ನನ್ನು ವಾಹನದಲ್ಲಿ ಎಳೆದು ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ನಂತರ ವಿಪರೀತವಾಗಿ ಥಳಿಸಿದರು ನಾನು ಪ್ರಜ್ಞಾಹೀನಳಾದೆ. ನಂತರ ನನ್ನ ಮಗುವಿನ ಅಳು ಶಬ್ದ ಕೇಳಿ ಪ್ರಜ್ಞೆ ಬಂದಿತು. ಆಗ ಸಿಗರೇಟ್ ಬೆಂಕಿಯಿಂದ ಸುಟ್ಟ ಗಾಯಗಳಿದ್ದವು ಎಂದು ತಿಳಿಸಿದ್ದಾರೆ.

    ನಾನು ಎಚ್ಚರಗೊಂಡಾಗ ನನ್ನ ಬಟ್ಟೆ ಇರಲಿಲ್ಲ ಕೇವಲ ಟಾಪ್ ಮಾತ್ರ ಇತ್ತು. ಮಗ ಅಳುತ್ತಿದ್ದ, ನನ್ನ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬಿಡಿ ಎಂದು ಮನವಿ ಮಾಡಿದೆ. ಅಲ್ಲದೆ ನನ್ನ ಮಗನನ್ನು ಮನೆಗೆ ಬಿಟ್ಟು ಖಂಡಿತ ಮರಳಿ ಬರುತ್ತೇನೆ ಎಂದು ಮಾತು ಕೊಟ್ಟೆ. ನಂತರ ಮಗನೊಂದಿಗೆ ಓಡಿ ಬಂದು ಮುಖ್ಯ ರಸ್ತೆ ತಲುಪಿದೆ. ಮೋಟರ್ ಸೈಕಲ್‍ನಲ್ಲಿ ಬಂದ ವ್ಯಕ್ತಿ ನಮ್ಮ ಕಾರು ತಲುಪಲು ಸಹಾಯ ಮಾಡಿದ. ನಂತರ ಮನೆ ತಲುಪಿದೆವು ಎಂದು ವಿವರಿಸಿದ್ದಾರೆ.

    ಮಹಿಳೆ ತನ್ನ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಗುರುವಾರ ತಿರುವನಂತಪುರಂ ಬಳಿಯ ಪುತ್ತುಕುರಿಚಿಯ ಬೀಚ್‍ಗೆ ತೆರಳಿದ್ದರು. ನಂತರ ಪತಿ ಮಹಿಳೆಯನ್ನು ತನ್ನ ಸ್ನೇಹಿತರಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆತನ ನಾಲ್ವರು ಸ್ನೇಹಿತರು ಮಹಿಳೆಗೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

    ಪ್ರತಿ ದಿನ ಸಂಜೆ ಈ ಕುಟುಂಬ ಬೀಚ್‍ಗೆ ತೆರಳುತ್ತಿತ್ತು. ಆದರೆ ಈ ಬಾರಿ ಮಹಿಳೆಯ ಪತಿ ಆತನ ಸ್ನೇಹಿತರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದು, ಮದ್ಯದ ವ್ಯವಸ್ಥೆಯನ್ನೂ ಮಾಡಿದ್ದಾನೆ. ಸಂತ್ರಸ್ತೆಯನ್ನು ತನ್ನ ಸ್ನೇಹಿತರ ಬಳಿ ಬಿಟ್ಟು ಮರಳಿದ್ದಾನೆ. ಅವರು ಮದ್ಯ ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.

    ರಸ್ತೆ ಬಳಿ ಸಹಾಯ ಮಾಡಿದ ವ್ಯಕ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಡಿಸ್ಚಾರ್ಜ್ ಆಗಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಂತ್ರಸ್ತೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಸಹೋದರಿ ಸೇರಿ ಆಕೆಯ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ – ಪೊಲೀಸರಿಗೆ 8ರ ಪೋರನಿಂದ ದೂರು

    ಸಹೋದರಿ ಸೇರಿ ಆಕೆಯ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ – ಪೊಲೀಸರಿಗೆ 8ರ ಪೋರನಿಂದ ದೂರು

    – ಬಾಲಕನ ಮನೆಗೆ ಬಂದು ಪ್ರಕರಣ ಬಗೆಹರಿಸಿದ ಪೊಲೀಸರು

    ತಿರುವಂತಪುರಂ: ನನ್ನ ಸಹೋದರಿ ಸೇರಿ ಆಕೆಯ ನಾಲ್ಕು ಜನ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಉಮಾರ್ ನಿಧಾರ್ ಕೋವಿಡ್ 19 ಲಾಕ್‍ಡೌನ್ ವೇಳೆ ತನ್ನ ಜೊತೆ ಆಟವಾಡಲು ಬಾರದಕ್ಕೆ ಸಹೋದರಿ ಮತ್ತು ಆಕೆಯ ನಾಲ್ಕು ಜನ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ ಎಂದು ಕಂಪ್ಲೇಟ್ ಕೊಟ್ಟಿದ್ದಾನೆ. ಇವರು ಲಾಕ್‍ಡೌನ್ ಎಂದು ನನ್ನ ಜೊತೆ ಲುಡೋ, ಶೆಟಲ್ ಕಾಕ್ ಮತ್ತು ಕಳ್ಳ ಪೊಲೀಸ್ ಆಟವಾಡಲು ಬರುತ್ತಿಲ್ಲ ಎಂದು ದೂರಿದ್ದಾನೆ.

    ಲಾಕ್‍ಡೌನ್ ಇರುವ ಕಾರಣ ಉಮಾರ್ ಜೊತೆ ಯಾರು ಆಟವಾಡಲು ಬಂದಿಲ್ಲ. ಜಗಳ ನಡೆದಾಗ ನೀನು ಹುಡುಗ ನಮ್ಮ ಜೊತೆ ಆಟವಾಡಬೇಡ ಎಂದು ಆತನ ಸಹೋದರಿ ಸಿಟ್ಟಿನಲ್ಲಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಉಮಾರ್ ಮೊದಲು ತನ್ನ ತಂದೆಯ ಬಳಿ ದೂರು ನೀಡಿದ್ದಾನೆ. ಈ ವೇಳೆ ತಂದೆ ತಮಾಷೆಗೆ ಅವರ ವಿರುದ್ಧ ಪೊಲೀಸರಲ್ಲಿ ದೂರು ನೀಡು ಎಂದಿದ್ದಾರೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಮುಗ್ಧ ಬಾಲಕ ಪೊಲೀಸರಿಗೆ ದೂರು ನೀಡಿದ್ದಾನೆ.

    ಮೇ 10ರಂದು ಯಾವುದೋ ಬೇರೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್ ಅಧಿಕಾರಿಗಳು ಉಮಾರ್ ನಿಧಾರ್ ಮನೆಯ ಹತ್ತಿರ ಬಂದಿದ್ದಾರೆ. ಈ ವೇಳೆ ಈ ಪೋರ ತನ್ನ ಕೈಯಾರೆ ಇಂಗ್ಲಿಷ್‍ನಲ್ಲಿ ದೂರನ್ನು ಬರೆದು ಪೊಲೀಸರಿಗೆ ನೀಡಿದ್ದಾನೆ. ಆಗ ಸ್ವಲ್ಪ ಬ್ಯುಸಿ ಇದ್ದ ಪೊಲೀಸರು ಲೆಟರ್ ತೆಗೆದುಕೊಂಡು ಹೋಗುತ್ತಾರೆ. ಆದರೆ ನಂತರ ಆ ಲೆಟರ್ ಓದಿ ಮತ್ತೆ ಆತನ ಮನೆಗೆ ಬಂದು ಅವನ ಸಮಸ್ಯೆ ಬಗೆಹರಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಿವಿಲ್ ಪೊಲೀಸ್ ಅಧಿಕಾರಿ ಉಮೇಶ್, ಆತ ಕಂಪ್ಲೇಟ್ ಕೊಟ್ಟಾಗ ತಡವಾಗಿದ್ದ ಕಾರಣ ನಾವು ವಾಪಸ್ ಹೋಗಿದ್ದೇವು. ಆದರೆ ನಂತರ ಬೆಳಗ್ಗೆ ವಾಪಸ್ ಬಂದು ಸಮಸ್ಯೆ ಬಗೆಹರಿಸಿದ್ದೇವೆ. ಅವರ ಸಹೋದರಿ ಮತ್ತು ಆಕೆಯ ಸ್ನೇಹಿತರನ್ನು ಕರೆದು ಮುಂದಿನ ಬಾರಿ ಆಟವಾಡಲು ಹೋದಾಗ ಉಮಾರ್ ನನ್ನು ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

    ಆಗ ಸ್ಥಳದಲ್ಲೇ ಇದ್ದ ಉಮಾರ್ ಇಲ್ಲ ನಾನು ಬಹಳ ಬಾರಿ ಅವರಿಗೆ ನನ್ನ ಆಟವಾಡಲು ಕರೆದುಕೊಂಡು ಹೋಗಿ ಎಂದು ಹೇಳಿದ್ದೇನೆ ಆದರೆ ಅವರಂತು ಕರೆದುಕೊಂಡು ಹೋಗಲ್ಲ ಎಂದಿದ್ದಾನೆ. ಆದರೆ ಪೊಲೀಸರು ಇಲ್ಲ ನಾವು ಅವರಿಗೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ. ಆಗ ಅವರ ಸಹೋದರಿ ಅವನು ಈ ರೀತಿ ದೂರು ನೀಡುತ್ತಾನೆ ಎಂದು ನಾನು ಊಹಿಸಿರಲಿಲ್ಲ. ಮುಂದಿನ ಬಾರಿ ಆಟವಾಡಲು ಖಂಡಿತ ಕರೆದುಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದ್ದಾಳೆ.

  • ಹೆಚ್ಚು ಎಣ್ಣೆ ಕುಡಿದಿದ್ದಕ್ಕೆ ಗೆಳೆಯನ್ನ ಕೊಂದವರು ಅಂದರ್

    ಹೆಚ್ಚು ಎಣ್ಣೆ ಕುಡಿದಿದ್ದಕ್ಕೆ ಗೆಳೆಯನ್ನ ಕೊಂದವರು ಅಂದರ್

    ಬೆಂಗಳೂರು: ತಮಗಿಂತ ಹೆಚ್ಚು ಮದ್ಯ ಸೇವನೆ ಮಾಡಿದ್ದ ಗೆಳೆಯನನ್ನು ಕೊಂದ ಇಬ್ಬರನ್ನು ಬಂಧಿಸುವಲ್ಲಿ ಬೆಂಗಳೂರಿನ ಆರ್.ಟಿ.ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮೇ 4ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೇ 6ರಂದು ಮದ್ಯ ಖರೀದಿಸಿ ರಾಜೇಶ್, ಸುಜಿತ್ ಮತ್ತು ಕಿಶೋರ್ ಸೇರಿಕೊಂಡು ಪಾರ್ಟಿ ಮಾಡಿದ್ದರು. ಪಾರ್ಟಿ ಮಧ್ಯೆ ಹೆಚ್ಚು ಮದ್ಯ ತಮಗೆ ಬೇಕೆಂದು ಮೂವರು ಕಿತ್ತಾಡಿಕೊಂಡಿದ್ದಾರೆ.

    ಮದ್ಯ ಖರೀದಿಗೆ ಕಿಶೋರ್ ಹೆಚ್ಚು ನೀಡಿಲ್ಲ ಎಂದು ರಾಜೇಶ್ ಮತ್ತು ಸುಜಿತ್ ಕಿಡಿಕಾರಿದ್ದಾರೆ. ಹೆಚ್ಚು ಹಣ ನೀಡದೇ ಅಧಿಕ ಮದ್ಯ ಕುಡಿದ ಎಂಬ ಕಾರಣಕ್ಕೆ ರಾಜೇಶ್ ಮತ್ತು ಸುಜಿತ್ ಸೇರಿಕೊಂಡು ಗೆಳೆಯ ಕಿಶೋರ್ ನನ್ನು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲವೆಂದು ಸ್ನೇಹಿತನನ್ನೇ ಚುಚ್ಚಿ ಕೊಂದ

    ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲವೆಂದು ಸ್ನೇಹಿತನನ್ನೇ ಚುಚ್ಚಿ ಕೊಂದ

    – ಬಾತು ಕೋಳಿ ಮಾಂಸಕ್ಕಾಗಿ ಕೊಲೆ
    – ಜಮೀನಿನಲ್ಲಿ ಪಾರ್ಟಿ ಮಾಡುತ್ತಾ ಜಗಳ

    ಚೆನ್ನೈ: ಎಣ್ಣೆ ಪಾರ್ಟಿಗೆ ಸೈಡ್ಸ್ ತರಲಿಲ್ಲ ಎಂದು ಸಿಟ್ಟಿಗೆದ್ದ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಕೊಲೆ ಮಾಡಿದ ಆರೋಪಿಯನ್ನು ವಾಸು(38) ಎಂದು ಗುರುತಿಸಲಾಗಿದ್ದು, ವಿನಯಗಂ(43) ಕೊಲೆಯಾದ ದುರ್ದೈವಿಯಾಗಿದ್ದಾನೆ. ತಮಿಳುನಾಡಿನ ಚೆಂಗಲ್ಪಟ್ಟುವಿನ ಗುಡುವಾಂಚೇರಿ ಪಟ್ಟಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದೆ. ವಾಸು ಹಾಗೂ ವಿನಯಗಂ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದು, ಹೂವು ಮಾರುವುದು, ಕ್ಯಾಬ್ ಓಡಿಸುವುದು ಹಾಗೂ ರಿಯಲ್ ಎಸ್ಟೇಟ್ ಬ್ರೋಕರ್ಸ್ ಆಗಿದ್ದರು. ಲಾಕ್‍ಡೌನ್ ಸಡಿಲಿಕೆ ಆಗಿ ಮದ್ಯ ಮಾರಾಟ ಆರಂಭವಾದ ಹಿನ್ನೆಲೆ ಇಬ್ಬರು ಜೊತೆ ಸೇರಿ ಎಣ್ಣೆ ಪಾರ್ಟಿ ಮಾಡಲು ನಿರ್ಧರಿಸಿದರು. ಆದ್ರೆ ಎಣ್ಣೆ ನಾನು ತರುತ್ತೇನೆ, ಸೈಡ್ಸ್ ಗೆ ಬಾತುಕೋಳಿ ಮಾಂಸ ತೆಗೆದುಕೊಂಡು ಬಾ ಎಂದು ವಾಸು ವಿನಯಗಂ ಬಳಿ ಹೇಳಿದ್ದನು.

    ವಾಸು ಮದ್ಯ ತಂದ ತಕ್ಷಣ ಇಬ್ಬರೂ ತೋಟವೊಂದರಲ್ಲಿ ಎಣ್ಣೆ ಪಾರ್ಟಿ ಮಾಡಲು ಹೋದರು. ಆದರೆ ಕುಡಿಯುತ್ತಿದ್ದ ವೇಳೆ ವಾಸು ಸೈಡ್ಸ್ ಎಲ್ಲಿ ಎಂದು ಕೇಳಿದನು. ಆಗ ವಿನಯಗಂ ಅಯ್ಯೊ ಬಾತುಕೋಳಿ ಮಾಂಸ ತರೋದನ್ನ ಮರೆತುಬಿಟ್ಟೆ ಎಂದಾಕ್ಷಣ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಜಗಳ ತಾರಕ್ಕಕ್ಕೇರಿ ಸಿಟ್ಟಿಗೆದ್ದ ವಾಸು ತನ್ನ ಬಳಿಯಿದ್ದ ಚಾಕುವಿನಿಂದ ವಿನಯಗಂ ಮೇಲೆ ಹಲ್ಲೆ ಮಾಡಿದ್ದಾನೆ. ಆತನಿಗೆ ಚುಚ್ಚಿ ಕೊಲೆಗೈದು ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

    ಈ ವೇಳೆ ಜಮೀನಿನ ದಾರಿಯಲ್ಲಿ ಹೋಗುತ್ತಿದ್ದವರು ಗಲಾಟೆ ಸದ್ದು ಕೇಳಿ ಸ್ಥಳಕ್ಕೆ ಹೋಗುವಷ್ಟರಲ್ಲಿ ವಾಸು ವಿನಯಗಂ ಅನ್ನು ಕೊಲೆ ಮಾಡಿ ಓಡಿ ಹೋಗಿದ್ದನು. ಹೀಗಾಗಿ ತಕ್ಷಣ ಪೊಲೀಸರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನುಮಾನದ ಮೇರೆಗೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ಗೆಳೆಯರೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ – ಪತ್ನಿಯ ಡೆತ್‍ನೋಟಿನಲ್ಲಿ ಗಂಡನ ಹೀನ ಕೃತ್ಯ ಬಯಲು

    ಗೆಳೆಯರೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ – ಪತ್ನಿಯ ಡೆತ್‍ನೋಟಿನಲ್ಲಿ ಗಂಡನ ಹೀನ ಕೃತ್ಯ ಬಯಲು

    – ಪತ್ನಿಯ ನಗ್ನ ಫೋಟೋಗಳನ್ನ ಸ್ನೇಹಿತರಿಗೆ ಕಳುಹಿಸ್ತಿದ್ದ
    – ಮನನೊಂದು ಪತ್ನಿ ನೇಣಿಗೆ ಶರಣು

    ಭೋಪಾಲ್: ವ್ಯಕ್ತಿಯೊಬ್ಬ ಪತ್ನಿಯ ನಗ್ನ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸ್ನೇಹಿತರಿಗೆ ಕಳುಹಿಸುತ್ತಿದ್ದು, ಅವರೊಂದಿಗೆ ಸೆಕ್ಸ್ ಮಾಡುವಂತೆ ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳ ಸಹಿಲಾಗದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಗ್ವಾಲಿಯರ್ ನಗರದಲ್ಲಿ ಈ ಘಟನೆ ನಡೆದಿದೆ. ಗೋಸ್ಪುರಾ ಪ್ರದೇಶದಲ್ಲಿ ನಿವಾಸಿ ಗೀತಾಗೆ ಒಂದು ವರ್ಷದ ಹಿಂದೆ ರಾಜೀವ್ (ಹೆಸರನ್ನು ಬದಲಾಯಿಸಲಾಗಿದೆ) ಎಂಬಾತನ ಜೊತೆ ಮದುವೆಯಾಗಿತ್ತು. ಆರೋಪಿ ರಾಜೀವ್ ವಿವಾಹವಾದ ಸ್ವಲ್ಪ ದಿನದವರೆಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.

    ದಿನಕಳೆದಂತೆ ಆತ ಪತ್ನಿಯ ನಗ್ನ ಫೋಟೋವನ್ನು ತನ್ನ ಫೋನಿನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದನು. ನಂತರ ಆ ಫೋಟೋಗಳನ್ನು ಆರೋಪಿ ರಾಜೀವ್ ತನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದನು. ಕೆಲವು ದಿನಗಳ ನಂತರ ಆರೋಪಿ ತನ್ನ ಸ್ನೇಹಿತರೊಂದಿಗೆ ಸೆಕ್ಸ್ ಮಾಡುವಂತೆ ಗೀತಾಳಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.

    ಕೊನೆಗೆ ಪತಿಯ ಕಿರುಕುಳವನ್ನು ಸಹಿಸಲಾಗದೆ ಗೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೂ ಮುನ್ನ ಡೆತ್‍ನೋಟಿನಲ್ಲಿ ಪತಿ ನೀಡುತ್ತಿದ್ದ ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಡೆತ್‍ನೋಟ್ ವಶಪಡಿಸಿಕೊಂಡು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

  • ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಮರ್ಡರ್- ಆರೋಪಿ ಸೋದರನ ಬರ್ಬರ ಹತ್ಯೆ

    ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಮರ್ಡರ್- ಆರೋಪಿ ಸೋದರನ ಬರ್ಬರ ಹತ್ಯೆ

    ಕೊಲೆಯಾಗಿದ್ದ ಸತೀಶ್

    ಮೈಸೂರು: ಮೂರು ದಿನಗಳ ಹಿಂದೆ ನಡೆದಿದ್ದ ಕೊಲೆಗೆ ಪ್ರತಿಕಾರವಾಗಿ ಮತ್ತೊಂದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ.

    ಕ್ಯಾತಮಾರನಹಳ್ಳಿಯ ಅಭಿಷೇಕ್ (22) ಕೊಲೆಯಾದ ದುರ್ದೈವಿ. ಮೂರು ದಿನಗಳ ಹಿಂದೆ ಎಣ್ಣೆ ಪಾರ್ಟಿಯಲ್ಲಿ ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿತ್ತು. ಈ ವೇಳೆ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದರು. ಆರೋಪಿ ಕಿರಣ್ ಸಹೋದರ ಅಭಿಷೇಕ್  ನನ್ನು ಈಗ ಕೊಲೆ ಮಾಡಿದ್ದಾರೆ.

    ಕಿರಣ್ ಮೇ 4ರಂದು ಸತೀಶ್‍ನನ್ನು ಕೊಲೆ ಮಾಡಿದ್ದ. ಹೀಗಾಗಿ ಸತೀಶ್‍ನನ್ನ ಕೊಲೆ ಮಾಡಿದ್ದಕ್ಕೆ ಆರೋಪಿ ಕಿರಣ್ ಸಹೋದರ ಅಭಿಷೇಕ್‍ನನ್ನು ಕೊಲೆ ಮಾಡಲಾಗಿದೆ. ಕೊಲೆ ಆರೋಪದ ಮೇಲೆ ಗುರುವಾರ ಕಿರಣ್ ಜೈಲು ಸೇರಿದ್ದನು. ಈ ವೇಳೆ ಅಭಿಷೇಕ್ ನನ್ನು ಫೋನ್ ಮಾಡಿ ಕರೆಸಿಕೊಂಡು ಮೃತ ಸತೀಶ್ ಸ್ನೇಹಿತರಾದ ಇರ್ಫಾನ್, ಮಹೇಶ್ ಕೊಲೆ ಮಾಡಿದ್ದಾರೆ.

    ಮಾಹಿತಿ ತಿಳಿದು ಪೊಲೀಸರು ಇರ್ಫಾನ್ ಹಾಗೂ ಮಹೇಶ್ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಏನಿದು ಪ್ರಕರಣ?
    ಸೋಮವಾರ ಮದ್ಯ ಸಿಕ್ಕ ಖುಷಿಯಲ್ಲಿ ಯುವಕರು ಪಾರ್ಟಿ ಮಾಡಿದ್ದರು. ಕ್ಯಾರಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಎಣ್ಣೆ ಪಾರ್ಟಿ ಮಾಡಿದ್ದರು. ಪಾರ್ಟಿ ವೇಳೆ ಗೆಳೆಯರ ಮಧ್ಯೆ ಪ್ರೇಮ ವಿಷಯಗಳು ಪ್ರಸ್ತಾಪವಾಗಿ ಜಗಳ ಉಂಟಾಗಿತ್ತು. ನಶೆಯಲ್ಲಿದ್ದ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದರು. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

  • ಎಣ್ಣೆ ಪಾರ್ಟಿಯಲ್ಲಿ ಲವ್ ಮ್ಯಾಟರ್- ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಂದ್ರು

    ಎಣ್ಣೆ ಪಾರ್ಟಿಯಲ್ಲಿ ಲವ್ ಮ್ಯಾಟರ್- ಚಾಕುವಿನಿಂದ ಇರಿದು ಸ್ನೇಹಿತನನ್ನೇ ಕೊಂದ್ರು

    ಮೈಸೂರು: ಎಣ್ಣೆ ಪಾರ್ಟಿಯಲ್ಲಿ ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ಕೊಲೆ ನಡೆದಿದೆ.

    ಸೋಮವಾರ ಮದ್ಯ ಸಿಕ್ಕ ಖುಷಿಯಲ್ಲಿ ಯುವಕರು ಪಾರ್ಟಿ ಮಾಡಿದ್ದರು. ಕ್ಯಾರಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ವೇಳೆ ಗೆಳೆಯರ ಮಧ್ಯೆ ಪ್ರೇಮ ವಿಷಯಗಳು ಪ್ರಸ್ತಾಪವಾಗಿ ಜಗಳ ಉಂಟಾಗಿದೆ. ನಶೆಯಲ್ಲಿದ್ದ ಮಧು ಮತ್ತು ಕಿರಣ್ ಇಬ್ಬರು ಚಾಕುವಿನಿಂದ ಇರಿದು ಸತೀಶ್ ನನ್ನು ಕೊಲೆಗೈದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಕೊಲೆಯ ಬಳಿಕ ಮಧು ಮತ್ತು ಕಿರಣ್ ಪರಾರಿಯಾಗಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.