Tag: Former Minister Bellubbi

  • ಉ.ಕರ್ನಾಟಕದವರು ವೋಟ್ ಹಾಕಿಲ್ಲ ಅಂತ ಸಿಎಂ ಹೇಳಿದ್ದು ತಪ್ಪು- ಮಾಜಿ ಸಚಿವ ಬೆಳ್ಳುಬ್ಬಿ

    ಉ.ಕರ್ನಾಟಕದವರು ವೋಟ್ ಹಾಕಿಲ್ಲ ಅಂತ ಸಿಎಂ ಹೇಳಿದ್ದು ತಪ್ಪು- ಮಾಜಿ ಸಚಿವ ಬೆಳ್ಳುಬ್ಬಿ

    ವಿಜಯಪುರ: ಬಜೆಟ್ ನಲ್ಲಿ ಸಿಎಂ ಅವರು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ. ಆದ್ರೆ ಜೆಡಿಎಸ್‍ಗೆ ಉತ್ತರ ಕರ್ನಾಟಕದವರು ವೋಟ್ ಹಾಕಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದು ತಪ್ಪು. ಆ ರೀತಿ ಅವರು ಹೇಳಬಾರದಿತ್ತು ಅಂತ ಸ್ವಪಕ್ಷೀಯ ನಾಯಕ, ಮಾಜಿ ಸಚಿವ ಬೆಳ್ಳುಬ್ಬಿ ಹೇಳಿದ್ದಾರೆ.

    ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದ ಅಖಂಡ ಕರ್ನಾಟಕ ಅಭಿಯಾನದ ಪ್ರತಿಭಟನೆ ನಂತರ ಮಾತನಾಡಿದ ಅವರು, ಪ್ರತ್ಯೇಕ ರಾಜ್ಯದ ವಿಷಯದಲ್ಲಿ ಸ್ವಾಮೀಜಿಗಳು ಭಾಗಿಯಾಗುವುದು ಸರಿಯಲ್ಲ. ಸ್ವಾಮೀಜಿಗಳು ತಮ್ಮ ಮಠಗಳಿಗೆ ಅನುದಾನ ಹೆಚ್ಚಿಸಲು ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಸ್ವಾಮಿಜಿಗಳು ಧರ್ಮ ರಕ್ಷಣೆ ಬಿಟ್ಟು ರಾಜಕೀಯ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದು ಹೇಳಿ ಟಾಂಗ್ ನೀಡಿದರು.

    ಇದೇ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಒಪ್ಪಿಗೆ ನೀಡಿದ್ರೆ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಲೋಕಸಭೆಗೆ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದರು.