Tag: former cm jagadish shettar

  • ರೆಡ್ಡಿ ಬಂಧನದ ಹಿಂದೆ ಸರ್ಕಾರದ ಕೈವಾಡದ ಶಂಕೆ : ಜಗದೀಶ್ ಶೆಟ್ಟರ್

    ರೆಡ್ಡಿ ಬಂಧನದ ಹಿಂದೆ ಸರ್ಕಾರದ ಕೈವಾಡದ ಶಂಕೆ : ಜಗದೀಶ್ ಶೆಟ್ಟರ್

    ಗದಗ: ಅಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂರೆ ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ಪ್ರಕರಣವನ್ನು ಗಮನಿಸಿದರೆ ಈ ಹಿಂದೆ ರಾಜ್ಯದ ಸರ್ಕಾರದ ಕೈವಾಡವಿದೆ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ನಗರದಲ್ಲಿ ಮಾತನಾಡಿ ಮೈತ್ರಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಜಗದೀಶ್ ಶೆಟ್ಟರ್ ಅವರು, 600-700 ಕೋಟಿ ರೂ. ಲೂಟಿ ಮಾಡಿದವರ ಬಗ್ಗೆ ಗಂಭೀರತೆ ಇಲ್ಲ. ಆದರೆ ಎಲ್ಲೋ ಕಮಿಷನ್ ಡೀಲಿಂಗ್ ಆಗಿದೆ ಅನ್ನುವ ಕಾರಣಕ್ಕೆ ಜನಾರ್ದನ ರೆಡ್ಡಿ ಬಂಧನ ಆಗಿದೆ. ಬಹುಶಃ ಎಲ್ಲೋ ರಾಜಕೀಯ ಪ್ರಭಾವ ಬೀರಿದ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿ ಪರೋಕ್ಷವಾಗಿ ಜನಾರ್ದನ ರೆಡ್ಡಿ ಪರವಾಗಿ ಬ್ಯಾಟಿಂಗ್ ಮಾಡಿದರು.

    ಇದೇ ವೇಳೆ ಕಾನೂನು ರೀತಿ ತನಿಖೆ ನಡೆಯಲಿ. ರಾಜಕೀಯ ಹಿನ್ನೆಲೆಯಲ್ಲಿ ಇಟ್ಟುಕೊಂಡು ಯಾವುದೇ ಸರ್ಕಾರ ಈ ರೀತಿ ಮಾಡಬಾರದು. ಡಿಕೆಶಿ ವಿರುದ್ಧ ಇಡಿ ತನಿಖೆ ನಡೆದಾಗ ಇದೇ ಕಾಂಗ್ರೆಸ್ ನಾಯಕರು ರಾಜಕೀಯ ಕಾರಣ ಅಂದರು. ಅದೇ ರೀತಿ ರೆಡ್ಡಿ ವಿರುದ್ಧ ರಾಜಕೀಯ ಕಾರಣಕ್ಕೆ ನಡೆದಿದೇಯಾ ಎನ್ನುವ ಮಾತು ಇದೆ. ರಾಜಕೀಯ ಪಕ್ಷ ಎಂಬುವುದನ್ನು ನೋಡದೆ ಕಾನೂನು ವ್ಯಾಪ್ತಿಯಲ್ಲಿ ಯಾವುದೇ ಪ್ರಕರಣವನ್ನು ನೋಡಬೇಕು ಎಂದರು.

    ಇದೇ ವೇಳೆ ಕೆಎಸ್ ಈಶ್ವರಪ್ಪ ವಿರುದ್ಧ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಜಗದೀಶ್ ಶೆಟ್ಟರ್ ಅವರು, ಹಿಂದುಳಿದ ನಾಯಕ ಇನ್ನೊಬ್ಬ ಹಿಂದುಳಿದ ನಾಯಕನ ಬಗ್ಗೆ ಈ ರೀತಿ ಕೀಳು ಮಾತು ಆಡುವುದು ಸರಿಯಲ್ಲ. ಮೆದುಳಿಲ್ಲ, ದಡ್ಡ ಇದ್ದಾನೆ ಎಂಬ ಪದ ಮಾಜಿ ಸಿಎಂಗೆ ಶೋಭೆ ತರಲ್ಲ. ಸಿದ್ದರಾಮಯ್ಯ ಇಡೀ ಜಗತ್ತಿನಲ್ಲಿ ನೀವೋಬ್ಬರೇ ಜಾಣರು ಎಂದು ತಿಳಿದುಕೊಂಡಿದ್ದೀರಾ? ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕೀಳು ಅಭಿರುಚಿ ತೋರಿಸುತ್ತದೆ. ಆದರೆ ಇಂತಹ ಹೇಳಿಕೆಗಳಿಂದ ಈಶ್ವರಪ್ಪ ಅವರ ಗೌರವಕ್ಕೆ ಧಕ್ಕೆ ಆಗುವುದಿಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸಿಎಂ ಜೊತೆ ಖೇಣಿ ನೈಸ್ ಡೀಲಿಂಗ್ ಮಾಡಿದ್ದಾರೆ- ಜಗದೀಶ್ ಶೆಟ್ಟರ್

    ಸಿಎಂ ಜೊತೆ ಖೇಣಿ ನೈಸ್ ಡೀಲಿಂಗ್ ಮಾಡಿದ್ದಾರೆ- ಜಗದೀಶ್ ಶೆಟ್ಟರ್

    ಉಡುಪಿ: ಖೇಣಿ ಜೊತೆ ಸಿದ್ದರಾಮಯ್ಯ `ನೈಸ್ ಡೀಲಿಂಗ್’ ಆಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.

    ಜಿಲ್ಲೆಯ ಕಾಪುವಿನಲ್ಲಿ ನಡೆದ ಜನ ಸುರಕ್ಷಾ ಸಮಾವೇಶದಲ್ಲಿ ಶೆಟ್ಟರ್ ಮಾತನಾಡಿದ ಅವರು, ಬೆಳಗ್ಗಿನಿಂದ ಸಾಯಂಕಾಲದವರೆಗೆ ಖೇಣಿ ಬಗ್ಗೆ ಟೀಕೆ ಮಾಡಿದ್ರು. ವಿರೋಧ ಪಕ್ಷ ನಾಯಕರಾಗಿದ್ದಾಗ ಅತೀಹೆಚ್ಚು ಟೀಕೆ ಮಾಡಿದ್ದು ಇದೇ ಸಿದ್ದರಾಮಯ್ಯ. ಈಗ ಅಶೋಕ್ ಖೇಣಿನ ಕಾಂಗ್ರೆಸ್ ಪಾರ್ಟಿಗೆ ತಗೋತಾರೆ ಅಂದ್ರು.

    ಸೋಮವಾರ ಸಿದ್ದರಾಮಯ್ಯ ಜೊತೆ ನೈಸ್ ಡೀಲಿಂಗ್ ಆಗಿರೋದೇ ಅದಕ್ಕೆ ಕಾರಣ. ಪರಮೇಶ್ವರ್ ಅವರು ಖೇಣಿನ ಮಾತ್ರ ತಗೊಂಡಿದ್ದೇವೆ. ನೈಸ್ ಕಂಪೆನಿನ ತಗೊಂಡಿಲ್ಲ ಅಂತಾರೆ. ಹಾಗಾದ್ರೆ ಖೇಣಿ ನೈಸ್ ಕಂಪೆನಿಗೆ ರಾಜೀನಾಮೆ ಕೊಟ್ಟಿದ್ದಾರಾ ಎಂದು ಶೆಟ್ಟರ್ ಪ್ರಶ್ನಿಸಿದರು.

    ಪ್ರಧಾನಿ ನರೇಂದ್ರ ಮೋದಿಗೆ ಟೀಕೆ ಮಾಡದೇ ಇದ್ರೆ ಸಿದ್ದರಾಮಯ್ಯಗೆ ರಾತ್ರಿ ನಿದ್ರೆ ಬರಲ್ಲ. ಮೋದಿ ಟೀಕೆ ಮಾಡಿದಷ್ಟೂ ಕಾಂಗ್ರೆಸ್ ಗೆ ಹಾನಿಯಾಗುತ್ತೆ. ರಾಹುಲ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಗಂಟು ಮೂಟೆ ಕಟ್ಟುತ್ತೆ. ರಾಹುಲ್ ಬಂದಲ್ಲಿ ಕಾಂಗ್ರೆಸ್ ಖತಂ. ರಾಹುಲ್ ಉಡುಪಿಗೂ ಬರ್ತಾರಂತೆ. ಕೃಷ್ಣಮಠಕ್ಕೂ ಹೋಗ್ತಾರಂತೆ. ಈಗ ಇವರಿಗೆ ಹಿಂದೂಗಳ ನೆನಪಾಗ್ತಿದೆಯಾ? ರಾಹುಲ್ ಉಡುಪಿಗೆ ಬಂದಾಗ ಸಿದ್ದರಾಮಯ್ಯ ಕೃಷ್ಣಗುಡಿಗೆ ಬರ್ತಾರಾ? ಸಿಎಂ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಈವರೆಗೆ ಕೃಷ್ಣಮಠಕ್ಕೆ ಹೋಗಿಲ್ಲ ಉತ್ತರ ಕೊಡಿ ಎಂದು ಜಗದೀಶ್ ಶೆಟ್ಟರ್ ಒತ್ತಾಯಿಸಿದ್ರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೆಟ್ಟ ನಡವಳಿಕೆಯ, ಅಹಂಕಾರಿ, ದುರಹಂಕಾರಿ ಮುಖ್ಯಮಂತ್ರಿ ಇದ್ರೆ ಅದು ಸಿದ್ದರಾಮಯ್ಯ. ಇದರಲ್ಲೆಲ್ಲಾ ಸಿಎಂ ನಂ 1. ಹೀಗಾಗಿ ರಾಜ್ಯಾದ್ಯಂತ ನಂ.1 ಬೋರ್ಡ್ ಹಾಕಿಸಿದ್ದಾರೆ ಎಂದರು.

    ಕಾಂಗ್ರೆಸ್ ಗೆ ಈಗ ಗುಡಿ ಗುಂಡಾರ ನೆನಪಾಗಿದೆ. ಹಿಂದೂಗಳಿಗೆ ರಕ್ಷಣೆ ನೀಡೋದು ಸಿದ್ದರಾಮಯ್ಯರಿಗೆ ಸಾಧ್ಯವಾಗಿಲ್ಲ. ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಐದಾರು ಬಾರಿ ಬಂದವರು ಕೃಷ್ಣಮಠಕ್ಕೆ ಬಂದಿಲ್ಲ. ರಾಹುಲ್ ಬಂದರೆ ಬರ್ತಾರಾ ಅಂತ ಪ್ರಶ್ನಿಸಿದ್ರು.