Tag: forest

  • ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ರಾಯ್‍ಪುರ: ಮಾವೋವಾದಿಗಳು ಅಪಹರಿಸಿದ ಪತಿಯನ್ನು ಹುಡುಕುತ್ತಾ ಪತ್ನಿ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಅರಣ್ಯಕ್ಕೆ ಹೋಗಿರುವ ಭಾವನಾತ್ಮಕ ಘಟನೆ ರಾಯ್‍ಪುರದಲ್ಲಿ ನಡೆದಿದೆ.

    ಛತ್ತೀಸ್‍ಗಢದಲ್ಲಿ ತನ್ನ ಎಂಜಿನಿಯರ್ ಪತಿ ಅಶೋಕ್ ಅವರನ್ನು ಮಾವೋವಾದಿಗಳು ಅಪಹರಿಸಿದ ಕೆಲವು ದಿನಗಳ ನಂತರ, ಪತ್ನಿ ಸೋನಾಲಿ ಪವಾರ್, ಅವರನ್ನು ಬಿಡುಗಡೆ ಮಾಡುವಂತೆ ಭಾವನಾತ್ಮಕ ಮನವಿ ಮಾಡಿಕೊಂಡಿದ್ದರು. ಆದರೆ ಕೊನೆಗೂ ಅವರನ್ನು ಕಿಡಿಗೇಡಿಗಳು ಬಿಡುಗಡೆ ಮಾಡಿಲ್ಲ. ಪರಿಣಾಮ ತನ್ನ ಅಪ್ರಾಪ್ತ ಮಗಳೊಂದಿಗೆ ಸೋನಾಲಿ ಅವರು ಮಾವೋವಾದಿಗಳ ದಟ್ಟವಾದ ಅಬುಜ್ಮದ್ ಅರಣ್ಯಕ್ಕೆ ಪ್ರಯಾಣಿಸಿದ್ದಾರೆ.

    ಮಂಗಳವಾರ ಸಂಜೆ ಎಂಜಿನಿಯರ್ ಅಶೋಕ್ ಪವಾರ್ ಮತ್ತು ಕೆಲಸಗಾರ ಆನಂದ್ ಯಾದವ್ ಅವರನ್ನು ಮಾವೋವಾದಿಗಳು ಅವರಿಗೆ ಯಾವುದೇ ರೀತಿಯ ಹಾನಿಯಾಗದಂತೆ ಬಿಡುಗಡೆ ಮಾಡಿದ್ದಾರೆ. ಆದರೆ ಸೋನಾಲಿ ಪವಾರ್ ಇನ್ನೂ ಕಾಡಿನೊಳಗಿದ್ದು, ಅವರು ಸ್ಥಳೀಯ ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ಕ್ಲಾಸ್‍ಗೆ ಅನುಮತಿ ನೀಡಿ ಎಂದು ವಿದ್ಯಾರ್ಥಿನಿಯರು ಪಟ್ಟು!

    ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‍ಪಿ) ಪಂಕಜ್ ಶುಕ್ಲಾ ಈ ಕುರಿತು ಪ್ರತಿಕ್ರಿಯಿಸಿದ್ದು, ಅಶೋಕ್ ಪವಾರ್ ಮತ್ತು ಯಾದವ್ ಅವರನ್ನು ಪ್ರಸ್ತುತ ಬಿಜಾಪುರದ ಕುಟ್ರುದಲ್ಲಿ ಇರಿಸಲಾಗಿದೆ. ಪತಿಯನ್ನು ಭೇಟಿಯಾಗಲು ಸೋನಾಲಿ ಶೀಘ್ರದಲ್ಲೇ ಕುಟ್ರು ತಲುಪಲಿದ್ದಾರೆ ಎಂದು ಹೇಳಿದ್ದಾರೆ.

    ವೀಡಿಯೋದಲ್ಲಿ ಏನಿತ್ತು?
    ನನ್ನ ಹೆಣ್ಣು ಮಕ್ಕಳಿಗಾಗಿ ಪತಿಯನ್ನು ಬಿಡುಗಡೆ ಮಾಡುವಂತೆ ಮಾವೋವಾದಿಗಳಿಗೆ ಭಾವನಾತ್ಮಕ ವೀಡಿಯೊವನ್ನು ಮಾಡಿ ಸೋನಾಲಿ ಅವರು ಕಳುಹಿಸಿದ್ದರು. ವೀಡಿಯೋ ಕಳುಹಿಸಿದ ನಂತರವೂ ಅಶೋಕ್ ಅವರನ್ನು ಬಿಡುಗಡೆ ಮಾಡದ ಪರಿಣಾಮ, ಸೋನಾಲಿ ಪವಾರ್ ಅವರನ್ನು ಹುಡುಕಲು ಛತ್ತೀಸ್‍ಗಢದ ಬಿಜಾಪುರ ಮತ್ತು ನಾರಾಯಣಪುರ ಜಿಲ್ಲೆಗಳ ಅಬುಜ್ಮದ್ ಅರಣ್ಯವನ್ನು ಪ್ರವೇಶಿಸಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

    ಪ್ರಸ್ತುತ ಸೋನಾಲಿ ಅವರು ಪತ್ರಕರ್ತರ ಮತ್ತು ಪೊಲೀಸರ ಸಹಾಯದಿಂದ ಕೆಲವು ಸ್ಥಳೀಯರನ್ನು ಸಂಪರ್ಕಿಸಿದ್ದಾರೆ. ಅಲ್ಲದೆ ಸೋನಾಲಿ ಪವಾರ್ ತನ್ನ ಎರಡೂವರೆ ವರ್ಷದ ಕಿರಿಯ ಮಗಳನ್ನು ತನ್ನೊಂದಿಗೆ ಕಾಡಿಗೆ ಕರೆದೊಯ್ದಿದ್ದಾಳೆ. ಐದು ವರ್ಷದ ಹಿರಿಯ ಮಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

  • ರಾಜ್ಯದಲ್ಲಿಯೇ ಮೊದಲ ಬಾರಿಗೆ ಕರಿ ನವಿಲುಗಳು ಪತ್ತೆ

    ರಾಜ್ಯದಲ್ಲಿಯೇ ಮೊದಲ ಬಾರಿಗೆ ಕರಿ ನವಿಲುಗಳು ಪತ್ತೆ

    ಬೀದರ್: ರಾಜ್ಯದಲ್ಲಿಯೇ ಮೊದಲ ಬಾರಿಗೆ ಗಡಿ ಜಿಲ್ಲೆ ಬೀದರ್‍ನಲ್ಲಿ ಕರಿ ನವಿಲುಗಳು ಪತ್ತೆಯಾಗಿದ್ದು, ಅರಣ್ಯ ಪ್ರದೇಶದಲ್ಲಿ ಹಾರಾಡುತ್ತಿರುವ ಎರಡು ಅಪರೂಪದ ಕರಿ ನವಿಲುಗಳ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    black Peacock

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಟ್ನಾಳ ಹಾಗೂ ಚೊಂಡಿ ಗಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕರಿ ನವಿಲುಗಳು ಪತ್ತೆಯಾಗಿವೆ. ಅಧ್ಯಯನ ಪ್ರಕಾರ ದೇಶದಲ್ಲಿ ಕೇವಲ 600 ಕರಿ ನವಿಲು ಪಕ್ಷಿಗಳು ಮಾತ್ರ ಇದ್ದು, ಇವು ಗುಜರಾತ್, ರಾಜಸ್ಥಾನ ಹಾಗೂ ಮಹಾರಾಷ್ಟ್ರದಲ್ಲಿ ಮಾತ್ರ ಕಾಣಸಿಗುತ್ತವೆ. ಇದನ್ನೂ ಓದಿ: ರಾಷ್ಟ್ರರಾಜಕಾರಣಕ್ಕೆ ಸಿದ್ದರಾಮಯ್ಯ ಹೋಗ್ತಾರಾ?- ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ

    black peacock

    ಸದ್ಯ ಈ ಕರಿ ನವಿಲುಗಳು ಅಳಿವಿನ ಹಂಚಿನಲ್ಲಿದ್ದು ಗಡಿ ಜಿಲ್ಲೆ ಬೀದರ್ ನ ಅರಣ್ಯ ಪ್ರದೇಶ ಕಾಣಿಸಿಕೊಂಡಿದ್ದು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ನಿರ್ದೇಶಕ ಡಾ. ಬಿವಾಶ್ ಪಾಂಡವ್ ರವರ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇದನ್ನೂ ಓದಿ: ನಿಮ್ಮ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಮಾಡಿ ಹುರಿಗಡಲೆ ಪೇಡಾ

  • ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 55ರ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 55ರ ಮಹಿಳೆ ಮೇಲೆ ಗ್ಯಾಂಗ್ ರೇಪ್

    ಲಕ್ನೊ: 55 ವರ್ಷದ ಮಹಿಳೆಯನ್ನು ಅರಣ್ಯ ಪ್ರದೇಶಕ್ಕೆ ಎಳೆದೊಯ್ದು 4 ಜನ ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.

    ಈ ಕುರಿತಂತೆ ಮಾತನಾಡಿದ ಡಿಸಿಪಿ ವೃಂದಾ ಶುಕ್ಲಾ ಅವರು, ಬೆಳಗ್ಗೆ 10 ಗಂಟೆ ಸುಮಾರಿಗೆ ಮಹಿಳೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಹಿಳೆ ಆರೋಪಿಯೊಬ್ಬನ ಗುರುತನ್ನು ಪತ್ತೆ ಹಚ್ಚಿದ್ದು, ಆತ ತಮ್ಮ ಗ್ರಾಮದವನೇ ಆಗಿದ್ದಾನೆ ಮತ್ತು ಅದೇ ಜಮೀನಿನಲ್ಲಿ ಜಾನುವಾರುಗಳಿಗೆ ಹುಲ್ಲು ಮೇಯಿಸುತ್ತಿದ್ದ ಎಂದು ತಿಳಿಸಿದ್ದಾರೆ. ಇದೀಗ ಉಳಿದ ಮೂವರು ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಮಹಿಳೆ ನೀಡಿರುವ ದೂರಿನ ಪ್ರಕಾರ, ಆಕೆಯನ್ನು ಸಮೀಪದ ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಆರೋಪಿ ಮತ್ತು ಆತನ ಸಹಚರರು ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾರೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಮಹಿಳೆ ಕೂಡಲೇ ತನ್ನ ಮನೆಗೆ ಆಗಮಿಸಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಬಳಿಕ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ಮದುವೆಯ ನೆಪದಲ್ಲಿ ಶಿಕ್ಷಕನಿಂದ ಪದೇ, ಪದೇ ಅತ್ಯಾಚಾರ

    ಇದೀಗ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಳಿಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಮತ್ತು ಆಕೆಯ ಸ್ಥಿತಿ ಸ್ಥಿರವಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‍ಗಳಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜೊತೆಗೆ ಆರೋಪಿಗಳನ್ನು ಪತ್ತೆ ಹಚ್ಚಲು ತಂಡವೊಂದನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

     

  • ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ  ಪೋಸ್ ​​ ಕೊಟ್ಟ ಹುಲಿರಾಯ

    ಮುತ್ತೋಡಿ ಅರಣ್ಯದಲ್ಲಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ​​ ಕೊಟ್ಟ ಹುಲಿರಾಯ

    ಚಿಕ್ಕಮಗಳೂರು: ಮುತ್ತೋಡಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿರಾಯನ ದರ್ಶನವಾಗಿದೆ. ಹುಲಿರಾಯ ಕ್ಯಾಮರಾಕ್ಕೆ ಪೋಸ್ ನೀಡಿದ್ದು ಪ್ರವಾಸಿಗರು ಫುಲ್ ದಿಲ್ ಖುಷ್ ಆಗಿದ್ದಾರೆ.

    ತಾಲೂಕಿನ ಮುತ್ತೋಡಿ ಅರಣ್ಯ ವಲಯಕ್ಕೆ ಆಗಾಗ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಬಂದವರೆಲ್ಲರೂ ಕೂಡ ಕಾಡಿನಲ್ಲಿ ಬೆಳಗ್ಗೆ, ಸಂಜೆ ಸಫಾರಿಗೆ ತೆರಳುತ್ತಾರೆ. ಆದರೆ, ಬಂದವರಿಗೆಲ್ಲಾ ಹುಲಿರಾಯನ ದರ್ಶನವಾಗುವುದಿಲ್ಲ. ಆದರೆ, ನಿನ್ನೆ ಸಂಜೆ ಸಫಾರಿಗೆ ಹೊರಟ ಪ್ರವಾಸಿಗರಿಗೆ ನೀರು ಕುಡಿದು ಹಳ್ಳ ದಾಟುತ್ತಿದ್ದ ಹುಲಿರಾಯನ ದರ್ಶನವಾಗಿದೆ. ಹಳ್ಳವನ್ನು ದಾಟುತ್ತಿದ್ದ ವ್ಯಾಘ್ರ ಪ್ರವಾಸಿಗರು ನನ್ನನ್ನೇ ನೋಡುತ್ತಿದ್ದಾರೆ ಎಂದು ಭಾವಿಸಿ ಪ್ರವಾಸಿಗರ ಕ್ಯಾಮೆರಾಕ್ಕೆ ಪೋಸ್ ಕೊಟ್ಟು ಹೋಗಿದೆ. ಇದನ್ನೂ ಓದಿ: ರಸ್ತೆ ಪಕ್ಕದಲ್ಲೇ ಹೊತ್ತಿ ಉರಿದ ಕಾರು – ತಪ್ಪಿದ ಭಾರೀ ಅನಾಹುತ

    ಕಾಡಲ್ಲಿ ಹುಲಿಯನ್ನು ಕಣ್ಣಾರೆ ಕಂಡ ಪ್ರವಾಸಿಗರು ಸಂತೋಷದಿಂದ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಪ್ರತಿದಿನ ಬೆಳಗ್ಗೆ-ಸಂಜೆ ಸಫಾರಿಗೆ ಕರೆದುಕೊಂಡು ಹೋಗುತ್ತಾರೆ. ಈ ವೇಳೆ, ಆನೆಗಳ ಹಿಂಡು, ಕಾಡುಕೋಣ, ನವಿಲು, ಉಡ, ಜಿಂಕೆ, ಸಾರಗ ಸೇರಿದಂತೆ ಸಾಕಷ್ಟು ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಬೀಳುತ್ತವೆ. ಆದರೆ, ಚಿರತೆ ಹಾಗೂ ಹುಲಿ ಬೀಳುವುದು ತುಂಬಾ ವಿರಳ. ಕೆಲವೊಮ್ಮೆ ಪ್ರವಾಸಿಗರಿಗೆ ಹುಲಿಗಳ ಹೆಜ್ಜೆ ಗುರುತುಗಳು ಸಿಗುತ್ತವೆ. ಆದರೆ, ನಿನ್ನೆ ಹೋದ ಪ್ರವಾಸಿಗರಿಗೆ ಕ್ಯಾಮರಾ ಕಣ್ಣಿಗೆ ಮನುಷ್ಯರಂತೆ ಪೋಸ್ ನೀಡುವ ಹುಲಿಯೇ ಸಿಕ್ಕಿದೆ. ಅಂದಾಜು 25 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ಮುತ್ತೋಡಿ ಅರಣ್ಯ ವಲಯವನ್ನೂ ಆಡಳಿತದ ಅನುಕೂಲಕ್ಕಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಇದನ್ನೂ ಓದಿ: ಅರೆನೂರು ಗ್ರಾಮಕ್ಕೆ ಸೇತುವೆ ಇಲ್ಲದೇ ಜನ ಪರದಾಟ- ಪ್ರಾಣ ಕೈಲಿಡಿದೇ ಓಡಾಟ!

  • ಕಾಫಿ ತೋಟದಲ್ಲಿ ಕಡವೆ ಬೇಟೆ – ಆರೋಪಿಗಳು ಪರಾರಿ

    ಕಾಫಿ ತೋಟದಲ್ಲಿ ಕಡವೆ ಬೇಟೆ – ಆರೋಪಿಗಳು ಪರಾರಿ

    ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಡವೆ ಬೇಟೆಯಾಡಿ ಪಿಕಪ್ ವಾಹನಕ್ಕೆ ತಂಬುತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ಮಾಡುವ ಮಾಹಿತಿ ಸಿಕ್ಕಿ ಆರೋಪಿಗಳು ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಹೊಸೂರು ಸಮೀಪದ ನಡೆದಿದೆ.

    ಈ ಸಂಬಂಧ ಪ್ರಶಾಂತ್, ದಿನೇಶ್, ಪೂರ್ಣೇಶ್, ಸುಗಂದ್ ಹಾಗೂ ಸುರೇಶ್ ಸೇರಿದಂತೆ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತಾಲೂಕಿನ ನುಗ್ಗಿ ಗ್ರಾಪ ಪಂಚಾಯತ್ ವ್ಯಾಪ್ತಿಯ ಹೊಸೂರು ಎಂಬ ಗ್ರಾಮದ ಕಾಫಿ ತೋಟವೊಂದರಲ್ಲಿ ಆರೋಪಿಗಳು ಅಕ್ರಮವಾಗಿ ಕಡವೆ ಬೇಟೆಯಾಡಿದ್ದರು. ಇದರ ಖಚಿತ ಮಾಹಿತಿ ಮೇರೆಗೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ, ಈ ವೇಳೆ ಅರಣ್ಯ ಅಧಿಕಾರಿಗಳು ಬರುವ ಮಾಹಿತಿ ಸಿಕ್ಕ ಹಿನ್ನೆಲೆ ಬೇಟೆಗಾರರು ಕಡವೆಯನ್ನು ಅಲ್ಲೇ ಬಿಟ್ಟು ನಾಪತ್ತೆಯಾಗಿದ್ದಾರೆ. ಇದನ್ನೂ ಓದಿ: ಶಾಲೆಗೆ ತೆರಳಲು ಬಸ್ ಇಲ್ಲದೆ ವಿದ್ಯಾರ್ಥಿಗಳ ಪರದಾಟ

    ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. ಬಳಿಕ ಅರಣ್ಯ ಅಧಿಕಾರಿಗಳು ಕಾದು ಕುಳಿತಿದ್ದರು. ಸ್ವಲ್ಪ ಹೊತ್ತಿನ ನಂತರ ಆರೋಪಿಗಳು ಮಾಂಸವನ್ನು ಪಿಕಪ್ ವಾಹನಕ್ಕೆ ತುಂಬುತ್ತಿದ್ದಾಗ ದಾಳಿ ಮಾಡಿದ್ದಾರೆ. ಈ ವೇಳೆ ಪಿಕಪ್ ವಾಹನವನ್ನು ಅಲ್ಲೇ ಬಿಟ್ಟು ಆರೋಪಿಗಳು ನಾಪತ್ತೆಯಾಗಿದ್ದಾರೆ. ಅಧಿಕಾರಿಗಳು ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಈಗಾಗಲೇ 6 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅಧಿಕಾರಿಗಳು ಆರೋಪಿಗಳ ಮನೆ ಮೇಲೂ ದಾಳಿ ಮಾಡಿದ್ದಾರೆ. ಆದರೆ, ಆರೋಪಿಗಳು ಪತ್ತೆಯಾಗಿಲ್ಲ. ಈ ಕಾರ್ಯಾಚರಣೆಯಲ್ಲಿ ಕೊಪ್ಪ ಡಿ.ಎಫ್.ಓ ನೀಲೇಶ್ ಶಿಂಧೆ ಮಾರ್ಗದರ್ಶನದಲ್ಲಿ ಆರ್.ಎಫ್.ಓ ಪ್ರವೀಣ್, ರಘು, ಪ್ರಕಾಶ್, ಕಿರಣ್, ದಿವಾಕರ್ ಪಾಲ್ಗೊಂಡಿದ್ದರು. ಇದನ್ನೂ ಓದಿ: ನಿನ್ನ ವಾಹನದಿಂದ ಬೆಳೆ ಉಳಿಸು- ಗಣಪತಿಗೆ ಜೀವಂತ ಇಲಿ ನೀಡಿ ಬೇಡಿಕೊಂಡ ರೈತ

  • ಮೂಲಭೂತ ಸೌಲಭ್ಯಗಳಿಲ್ಲ, ಕಾಡಂಚಿನ ಗ್ರಾಮಗಳ ಜನರ ಪರದಾಟ- ಶಾಲೆಗೆ ಹೋಗಲಾಗದೆ ಬಾಲಕನ ಕಣ್ಣೀರು

    ಮೂಲಭೂತ ಸೌಲಭ್ಯಗಳಿಲ್ಲ, ಕಾಡಂಚಿನ ಗ್ರಾಮಗಳ ಜನರ ಪರದಾಟ- ಶಾಲೆಗೆ ಹೋಗಲಾಗದೆ ಬಾಲಕನ ಕಣ್ಣೀರು

    ಕೋಲಾರ: ವಾಹನ ಸೌಲಭ್ಯವಿಲ್ಲದೆ ಆನೆಗಳು ಸೇರಿದಂತೆ ಕಾಡು ಪ್ರಾಣಿಗಳ ದಾಳಿಯ ಭಯದಲ್ಲೇ ಕಾಡಿನಲ್ಲಿ ಈ ಬಾಲಕ ಶಾಲೆಯ ಬಗ್ಗೆ ಚಿಂತಿಸುತ್ತಿರುವ ಚಿತ್ರಣ ಎಂತಹವರಿಗೂ ನಡುಕ ಹುಟ್ಟಿಸುತ್ತದೆ.

    ಜಿಲ್ಲೆಯ ಬಂಗಾರಪೇಟೆ ತಾಲೂಕು ಮಲ್ಲೇಶನಪಾಳ್ಯ ಹಾಗೂ ತಳೂರು ಗ್ರಾಮದಳಲ್ಲಿ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಈ ಬಾಲಕ ಆನೆಗಳ ಭಯದ ಮಧ್ಯೆ ವಾಹನ ಸೌಲಭ್ಯಗಳಿಲ್ಲದ ಕಾಡಿನಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದು ಶಾಲೆ ನೆನೆದು ಕಣ್ಣೀರು ಇಡುತ್ತಿದ್ದಾನೆ. ಈ ಬಾಲಕನಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಅತ್ತ ಕಾಡಂಚಿನಲ್ಲಿ ಕಾಡಾನೆಗಳ ಕಾಟ ಇರುವುದರಿಂದ ಭಯಗೊಂಡಿರುವ ಈ ಬಾಲಕ ದಿಕ್ಕು ಕಾಣದೆ ಕಣ್ಣೀರಾಕುತ್ತಿದ್ದಾನೆ.

    ಈ ಗಡಿ ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಯಾವುದೇ ಸಾರಿಗೆ ಸಂಪರ್ಕವಿಲ್ಲ, ಮಕ್ಕಳು ಶಾಲೆಗೆ ಹೋಗಬೇಕೆಂದರೆ 2 ಕಿಲೋಮೀಟರ್ ನಡೆದುಕೊಂಡು ಹೋಗಬೇಕು. ಏನಾದರೂ ಬೇಕೆಂದರೂ ಗ್ರಾಮಸ್ಥರು ನಡೆದೇ ಹೋಗಬೇಕು. ಇಂತಹ ಸ್ಥಿತಿಯಲ್ಲಿರುವ ಈ ಗ್ರಾಮಕ್ಕೆ ಈಗ ಕಾಡಾನೆಗಳ ಹಾವಳಿ ಬೇರೆ ಹೆಚ್ಚಾಗಿದ್ದು, ಗಡಿ ಗ್ರಾಮಗಳ ಜನರು ಜೀವ ಭಯದಲ್ಲಿ ಹಗಲು ರಾತ್ರಿ ಬದುಕುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳನ್ನು, ಜನಪ್ರತಿನಿಧಿಗಳನ್ನು ಯಾರನ್ನು ಕೇಳಿದರೂ ನಮ್ಮ ಕೂಗು ಅವರಿಗೆ ಕೇಳಿಸಿಲ್ಲ ಅನ್ನೋದು ಈ ಬಾಲಕನ ಕಣ್ಣೀರು.

    ಬಂಗಾರಪೇಟೆ ತಾಲೂಕು ಮಲ್ಲೇಶನಪಾಳ್ಯ, ತಳೂರು, ಭತ್ಲಹಳ್ಳಿ, ಕದಿರಿನತ್ತ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈಗಲೂ ಸರಿಯಾದ ರಸ್ತೆ ಇಲ್ಲ. ಸಾರಿಗೆ ವ್ಯವಸ್ಥೆ ಇಲ್ಲ. ಇದರಿಂದ ಗ್ರಾಮದ ಜನರು ಕಾಡಿನಲ್ಲಿ ಒಂದು ರೀತಿಯ ಕಾಡು ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಆರೋಗ್ಯ ಸಮಸ್ಯೆಯಾದರೆ ಇಪ್ಪತ್ತು ಕಿ.ಮೀ ಹೋಗಬೇಕು, ಮನೆಗೆ ದಿನಸಿ ಬೇಕಂದ್ರೆ ನಾಲ್ಕೈದು ಕಿ.ಮೀ ಹೋಗಬೇಕು.

    ಮಕ್ಕಳು ಶಾಲೆಗೆ ಹೋಗಬೇಕೆಂದರೆ ಎರಡು ಕಿ.ಮೀ ನಡೆದು ಹೋಗಬೇಕು ಇಂತಹ ಪರಿಸ್ಥಿತಿಯಲ್ಲಿರುವ ಗ್ರಾಮದ ಜನರು ಹತ್ತಾರು ವರ್ಷಗಳಿಂದ ಕಂಡ ಕಂಡವರ ಮುಂದೆ ಕೈಮುಗಿದು ನಿಂತರೂ ಇವರ ಸಮಸ್ಯೆಗಳು ಬಗೆಹರಿದಿಲ್ಲ. ಅಷ್ಟೇ ಅಲ್ಲದೆ ಇವರು ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನುಗಳಿಗೂ ಅರಣ್ಯ ಇಲಾಖೆಯವರು ಇದು ಅರಣ್ಯ ಭೂಮಿ ಎಂದು ಕ್ಯಾತೆ ತೆಗೆಯುತ್ತಿದ್ದಾರೆ. ಹೀಗಾಗಿ ಸೌಲಭ್ಯಗಳ ವಂಚಿತ ಈ ಜನರು ತಮ್ಮ ಬದುಕನ್ನು ನೆನೆದು ನಿತ್ಯವೂ ಕಣ್ಣೀರು ಹಾಕುವ ಸ್ಥಿತಿ ಬಂದಿದೆ.

    ಓದುವ ಆಸೆಯಿದ್ದರೂ, ಬದುಕುವ ಛಲವಿದ್ದರೂ, ಸೌಲಭ್ಯಗಳಿಲ್ಲದ ಈ ಜಾಗದಲ್ಲಿ ತಮ್ಮ ನೂರಾರು ಆಸೆ ಆಕಾಂಕ್ಷೆಗಳನ್ನು ಸಮಾಧಿ ಮಾಡಿ ಜೀವನ ನಡೆಸುತ್ತಿರುವ ಈ ಜನರಿಗೆ ಯಾವುದೇ ಸರ್ಕಾರಗಳು, ಯಾರೇ ಅಧಿಕಾರಿಗಳು ಬಂದರೂ ಸೌಲಭ್ಯ ನೀಡಲಾಗುತ್ತಿಲ್ಲ.

  • ವಿಶ್ವ ಹುಲಿ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಮಕ್ಕಳು

    ವಿಶ್ವ ಹುಲಿ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ ಮಕ್ಕಳು

    ಬೆಂಗಳೂರು: ಇಂದು ವಿಶ್ವಾದ್ಯಂತ ಹುಲಿ ದಿನಾಚರಣೆಯನ್ನು ಆಚರಿಸಲಾಗಿತ್ತು. ಅದೇ ರೀತಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಹ ವಿಶ್ವ ಹುಲಿ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಅರಿವಿನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

    ಬನ್ನೇರುಘಟ್ಟದಲ್ಲಿ ಹುಲಿ ದಿನಾಚರಣೆ ವೈವಿಧ್ಯಮಯವಾಗಿ ಆಚರಣೆ ಮಾಡಲಾಯಿತು. ಲಯನ್ಸ್ ಕ್ಲಬ್ ಹಾಗೂ ಎಸ್‍ಒಎಸ್ ಚಿಲ್ಡ್ರನ್ಸ್ ವಿಲೇಜಸ್ ಇಂಡಿಯಾದ 55ಕ್ಕೂ ಹೆಚ್ಚು ಮಕ್ಕಳಿಗೆ ಹುಲಿ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಪಡಿಸಲಾಗಿತ್ತು. ಮಕ್ಕಳು ಹುಲಿ ಮುಖವಾಡ ಧರಿಸಿ ಉದ್ಯಾನದಲ್ಲಿ ಜಾಥಾ ಮಾಡುವ ಮೂಲಕ ಸಂಭ್ರಮಿಸಿದರು. ಹಾಗೆ ಪಾರ್ಕಿಗೆ ಬಂದಿದ್ದ ಸಾರ್ವಜನಿಕರು ಸಹ ಭಾಗವಹಿಸಿ ಹುಲಿಗಳು ಹಾಗೂ ಅವುಗಳ ವಾಸಸ್ಥಾನ ಎಂಬ ವಿಷಯವನ್ನು ಆಧರಿಸಿ ನಡೆಸಿದ ಕಾರ್ಯಕ್ರಮದಲ್ಲಿ ಅನೇಕ ಬಗೆಯ ಮಾಹಿತಿಯನ್ನು ಪಡೆದುಕೊಂಡರು.  ಇದನ್ನೂ ಓದಿ: ಬನ್ನೇರುಘಟ್ಟದಲ್ಲಿದೆ ಆರು ತಿಂಗಳ ‘ಹಿಮಾದಾಸ್’ ಹುಲಿಮರಿ

    ಹುಲಿಗಳ ಚಲನ, ವಲನಗಳ ಬಗ್ಗೆ ಸಾರ್ವಜನಿಕರಿಗೆ ಅರಣ್ಯ ಅಧಿಕಾರಿಗಳು ಶಿಬಿರದಲ್ಲಿ ಮಾಹಿತಿಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಓರ್ವ ವಿದ್ಯಾರ್ಥಿ ನಾವು ಹುಲಿ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿದುಕೊಂಡಿದ್ದೇವೆ ಜೊತೆಗೆ ಹುಲಿ ಚಲನವಲನ ಬಗ್ಗೆ ಮತ್ತು ಎಷ್ಟು ಆಹಾರ ಸೇವಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾಗಿ ನಮಗೆ ಮಾಹಿತಿ ಕೊಟ್ಟಿದ್ದಾರೆ. ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅರ್ಚನಾ ಎಂಬವರು ಹಿಮ ಎಂಬ ಹುಲಿಯನ್ನು ಒಂದು ವರ್ಷಕ್ಕೆ ದತ್ತು ಪಡೆದಿದ್ದಾರೆ.

  • ಪ್ರಕೃತಿ ಉಳಿವಿಗಾಗಿ ಗಿಡ ನೆಡಿ : ವಿಜ್ಞಾನಿ ಡಾ.ಚಂದ್ರಶೇಖರ್

    ಪ್ರಕೃತಿ ಉಳಿವಿಗಾಗಿ ಗಿಡ ನೆಡಿ : ವಿಜ್ಞಾನಿ ಡಾ.ಚಂದ್ರಶೇಖರ್

    ವಿಜಯಪುರ: ಪ್ರಕೃತಿ ಉಳಿವಿಗಾಗಿ ಶೇ.1ರಷ್ಟು ಜನ ಮಾತ್ರ ಪ್ರಯತ್ನಗಳನ್ನು ನಡೆಸಿದ್ದು, ಶೇ.99 ಜನರು ಪ್ರಕೃತಿಯ ವಿನಾಶದ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಪ್ರಕೃತಿ ರಕ್ಷಿಸಲು ಪ್ರಯತ್ನಿಸುತ್ತಿರುವ ಶೇ.1ರ ಜನ ಸಂಖ್ಯೆಯನ್ನು ಪ್ರತಿಶತ 10ಕ್ಕೆ ಏರಿಸಿದರೆ ಜಗತ್ತಿನಲ್ಲಿ ಸಾಕಷ್ಟು ಆರೋಗ್ಯಕರ ಬದಲಾವಣೆಗಳಾಗಿ ವಿಕೋಪಗಳು ತಪ್ಪುತ್ತವೆ. ಪ್ರಕೃತಿ ಉಳಿವಿಗಾಗಿ ಗಿಡ ನೆಡಿ ಎಂದು ಕೃಷಿ, ಅರಣ್ಯ ವಿಜ್ಞಾನಿ ಡಾ. ಚಂದ್ರಶೇಖರ್ ಬಿರಾದಾರ್ ಅಭಿಪ್ರಾಯಪಟ್ಟಿದ್ದಾರೆ.

    ಮುದ್ದೇಬಿಹಾಳ ಢವಳಗಿ ಮೂಲದ ಡಾ.ಚಂದ್ರಶೇಖರ್ ಬಿರಾದಾರ್ ಸದ್ಯ ಈಜಿಪ್ಟ್‍ನಲ್ಲಿ ನೆಲೆಸಿದ್ದು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೃಷಿ, ಅರಣ್ಯ ಮತ್ತು ಹವಾಮಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯ್ನಾಡಿನ ಪ್ರವಾಸದ ಹಿನ್ನೆಲೆಯಲ್ಲಿ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ನಿವಾಸದಲ್ಲಿ ಇಂದು ಪರಿಸರ ಆಸಕ್ತರ ಉಪಹಾರ ಕೂಟ ಏರ್ಪಡಿಸಿದ ಸಂದರ್ಭದಲ್ಲಿ ಮಾತನಾಡಿದ ಡಾ.ಚಂದ್ರಶೇಖರ್ ಬಿರಾದಾರ್ ಅವರು, ಪ್ರಕೃತಿ ನಾಶಮಾಡುತ್ತಿರುವುದರಿಂದ ಮಣ್ಣು, ನೀರು, ಹವಾಮಾನಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿ, ವಿಷಮಯ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಮೊದಲು ನಾವು ತಿನ್ನುವ ಆಹಾರವೇ ವಿಷವಾಗಿದೆ. ಇದನ್ನು ಬದಲಾಯಿಸಬೇಕು. ಯುವಕರಿಂದ ಮಾತ್ರ ಈ ಬದಲಾವಣೆ ಸಾಧ್ಯ. ನಾನು ಜಗತ್ತಿನ 50 ರಾಷ್ಟ್ರಗಳಲ್ಲಿ ಈ ಬದಲಾವಣೆ ಪ್ರಯೋಗವನ್ನು ಮಾಡಿದ್ದೇನೆ. ಯಶಸ್ವಿಯೂ ಆಗಿದ್ದೇನೆ. ನನ್ನ ತಾಯ್ನಾಡಿನ ನನ್ನ ಹೆಮ್ಮೆಯ ವಿಜಯಪುರ ಜಿಲ್ಲೆಯಲ್ಲಿ ಈ ಬದಲಾವಣೆ ತರುವ ಕಾರ್ಯವನ್ನು ಎಂ.ಬಿ.ಪಾಟೀಲ್ ರವರು ಕೋಟಿ ವೃಕ್ಷ ಅಭಿಯಾನದ ಮೂಲಕ ಯಶಸ್ವಿಯಾಗಿ ಮಾಡುತ್ತಿದ್ದು, ಭೂತನಾಳದ ಕಲ್ಲನ್ನು ಕೊರೆದು ಸಸಿ ನೆಟ್ಟು ಬೆಳೆಸಿದ್ದು ಸಣ್ಣ ಸಾಧನೆಯಲ್ಲ. ಅದು ಮಹಾನ್ ಕ್ರಾಂತಿಕಾರಿ ಕೆಲಸ ಎಂದು ನಾನು ಭಾವಿಸುತ್ತೇನೆ ಎಂದರು.

    ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ, ಯುನೆಸ್ಕೋ ಜೀವವಿಜ್ಞಾನ ಪೀಠದ ಮುಖ್ಯಸ್ಥ ಡಾ.ಕುಶಾಲ್ ದಾಸ್ ಮಾತನಾಡಿ, ಪ್ರಕೃತಿಯ ರಕ್ಷಣೆಯ ಸಂಶೋಧನೆಗಳಲ್ಲಿ ಅಮೇರಿಕ, ಯೂರೋಪಿಯನ್ ರಾಷ್ಟ್ರಗಳು ಮುಂದಿದ್ದರೂ, ಆ ರಕ್ಷಣೆಯ ಕಾರ್ಯದಲ್ಲಿ ಅವರು ಮುಂದಾಗಿರುವುದು ಕಡಿಮೆ. ಏಷ್ಯಾದ, ಆಫ್ರಿಕಾದ ಕಾಡಿನ ಜನರೇ ಈ ಪ್ರಕೃತಿಯ ರಕ್ಷಕರು. ಏಕೆಂದರೆ ಅವರ ಹೃದಯದಲ್ಲಿಯೇ ಪ್ರಕೃತಿ ತುಂಬಿಕೊಂಡಿರುತ್ತದೆ. ಜಾಗತಿಕ ತಾಪಮಾನ ಸೇರಿದಂತೆ ಜಗತ್ತಿನ ಹಲವು ಗಂಭೀರ ಪ್ರಾಕೃತಿಕ ಸಮಸ್ಯೆಗಳಿಗೆ ಅಮೇರಿಕಾ ಅಧ್ಯಕ್ಷರೇ ಯೂಟರ್ನ್ ತೆಗೆದುಕೊಂಡಿರುವುದು ಅವರ ದ್ವಂಧ್ವ ನೀತಿಯನ್ನು ತೋರುತ್ತದೆ ಎಂದರು. ಇದನ್ನೂ ಓದಿ: ಮೋದಿ ಚಪ್ಪಾಳೆ, ತಟ್ಟೆ ಹೊಡೆಯೋದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಿಲ್ಲ: ಡಿಕೆಶಿ

    ಮಾಜಿ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಜಗತ್ತಿನ ಹಲವು ರಾಷ್ಟ್ರಗಳ ಪ್ರಯೋಗಕ್ಕೂ ಭಾರತಕ್ಕೂ ತೀವ್ರ ವ್ಯತ್ಯಾಸವಿದೆ. 130 ಕೋಟಿ ಜನಸಂಖ್ಯೆಯ ಇಲ್ಲಿನ ಪರಿಸ್ಥಿತಿಗಳಲ್ಲಿ ನಾವು ಪರಿಸರ ಅಳಿವು-ಉಳಿವು ಕುರಿತು ಮಾತನಾಡುವುದೇ ದುಸ್ಥರವಾಗಿದೆ. ಅಧಿಕಾರ ನಡೆಸುವ ನಾಯಕರು, ಇಲಾಖೆ ಮುಖ್ಯಸ್ಥರು ಹೇಗೆ ಕ್ರೀಯಾಶೀಲರಾಗಿ ಕಾರ್ಯ ಮಾಡುತ್ತಾರೆಯೋ ಹಾಗೆಯೇ ಆ ಇಲಾಖೆ, ಅಧಿಕಾರಿಗಳು ಅದನ್ನು ಅನುಸರಿಸುತ್ತಾರೆ. ಆದರೆ ಇಲ್ಲಿನ ಸ್ಥಿತಿಗತಿಗಳು ಸರಿ ಇಲ್ಲ ಎಂದು ನಾವು ಭಾವಿಸದೇ ಆಶಾವಾದದಿಂದ ಪ್ರಯತ್ನಕ್ಕೆ ಮುಂದಾಗಬೇಕು. ಆಗ ಯಶಸ್ಸು ಖಂಡಿತ ಸಾಧ್ಯ. ಕೋಟಿವೃಕ್ಷ ಅಭಿಯಾನವೇ ಇದಕ್ಕೆ ಉತ್ತಮ ಉದಾಹರಣೆ. 5 ವರ್ಷಗಳ ಹಿಂದೆ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆದ ಸಸಿಗಳನ್ನು ತೆಗೆದುಕೊಂಡು ಹೋಗುವವರು ಇರಲಿಲ್ಲ. ಇತ್ತೀಚಿಗೆ ಸಸಿಗಳನ್ನು ಹಂಚಲು ಆರಂಭಿಸಿದ 2-3 ದಿನಗಳಲ್ಲಿ ಹತ್ತಾರು ಲಕ್ಷ ಸಸಿಗಳು ಖಾಲಿಯಾಗುತ್ತಿವೆ. ಇದರಿಂದ ಜಿಲ್ಲೆಯ ಪರಿಸರದಲ್ಲಿ ಉತ್ತಮ ಬದಲಾವಣೆ ಬಂದಿದೆ ಎಂದರು.

    ವಿಜ್ಞಾನಿ ಚಂದ್ರಶೇಖರ ಅವರು ಜಿಲ್ಲೆಯ, ರಾಜ್ಯದ ಪರಿಸರ ಪೂರಕವಾಗಿ ನೀಡಿರುವ ಸಲಹೆಗಳನ್ನು ಕ್ರೋಢಿಕರಿಸಿ, ಆದ್ಯತೆಯ ಮೆರೆಗೆ ಅವುಗಳನ್ನು ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರ ಗಮನ ಸೆಳೆಯಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.

    ಅರಣ್ಯ ಇಲಾಖೆ ಅಧಿಕಾರಿಗಳಾದ ಪಿ.ಕೆ.ಪೈ, ಎನ್.ಕೆ.ಬಾಗಯತ್, ಮಹೇಶ್ ಪಾಟೀಲ್, ಪ್ರಭುಲಿಂಗ, ಎನ್.ಡಿ.ಪಾಟೀಲ್ ಡೋಮನಾಳ, ಶರದ ರೂಡಗಿ, ಡಾ.ಮಹಾಂತೇಶ್ ಬಿರಾದಾರ್, ಡಾ.ಮುರುಗೇಶ್ ಪಟ್ಟಣಶೆಟ್ಟಿ, ಬಸವರಾಜ್ ಬಿರಾದಾರ್, ಪರುಗೌಡ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

  • ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡು ನಿರ್ಮಿಸಲು ಹೊರಟಿರುವುದು ದುರದೃಷ್ಟಕರ: ದುಂಡಪ್ಪಾ ಕೋಮಾರ

    ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡು ನಿರ್ಮಿಸಲು ಹೊರಟಿರುವುದು ದುರದೃಷ್ಟಕರ: ದುಂಡಪ್ಪಾ ಕೋಮಾರ

    ಬೆಳಗಾವಿ: ಪರಿಸರ ನಾಶ ಮಾಡುವ ಮೂಲಕ ಇಂದಿನ ದಿನಗಳಲ್ಲಿ ಶುದ್ಧ ಆಕ್ಸಿಜನ್ ಇಲ್ಲದೆ ಜನರು ಪರದಾಡುವಂತಾಗಿದೆ. ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಮಾನವ ಹೊರಟಿರುವುದು ದುರದೃಷ್ಟಕರ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಹಶೀಲ್ದಾರ್ ದುಂಡಪ್ಪಾ ಕೋಮಾರ ಕಳವಳ ವ್ಯಕ್ತಪಡಿಸಿದರು.

    ಅಥಣಿ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕು ಘಟಕ ಮತ್ತು ರಾಜ್ಯ ಗ್ರಾಮ ಸಹಾಯಕರ ತಾಲೂಕು ಘಟಕದ ಸಹಯೋಗದೊಂದಿಗೆ ವನ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನೆಗೊಂದು ಗಿಡ ನೆಡುವ ಮೂಲಕ ಪರಿಸರ ಬೆಳೆಸೋಣ, ಶುದ್ಧ ಜೀವ ವಾಯು ಪಡೆಯೋಣ, ದೇಶದಲ್ಲಿ ಹಸಿರು ಕಾಡು ಅಳಿಸಿ ಕಾಂಕ್ರೀಟ್ ಕಾಡನ್ನು ನಿರ್ಮಿಸಲು ಮಾನವ ಹೊರಟಿರುವುದು ದುರದೃಷ್ಟಕರವಾಗಿದ್ದು, ಕಾಡನ್ನು ನಾಶ ಮಾಡುವುದನ್ನು ಜನರು ನಿಲ್ಲಿಸಬೇಕು ಎಂದರು.

    ಕಾಡು ಉಳಿದರೆ ನಾಡು ಉಳಿದಿತು. ಒಂದು ಒಳ್ಳೆಯ ದೇಶ ಕಟ್ಟಬೇಕಾದರೆ ಸಮೃದ್ಧ ಪರಿಸರ ಕಾಡು ಅವಶ್ಯಕವಾಗಿದೆ. ದೇಶವನ್ನು ಉಳಿಸಬೇಕಾದರೆ ಕಾಡನ್ನು ಬೆಳೆಸುವುದು ಉತ್ತಮ ಪರಿಸರವನ್ನು ನಾವು ಸಂರಕ್ಷಿಸಿದರೆ ಅದು ನಮ್ಮನ್ನು ಸಂರಕ್ಷಿಸುತ್ತದೆ ಆದ್ದರಿಂದ ಮನುಷ್ಯ ಜೀವಿ ಈಗಲೇ ಎಚ್ಚೆತ್ತುಕೊಂಡು ಪರಿಸರವನ್ನು ಉಳಿಸಲು ಮುಂದಾಗುವಂತೆ ಜನರಲ್ಲಿ ವಿನಂತಿಸಿದರು. ಇದನ್ನೂ ಓದಿ: ಬಾವಿ ಕಳೆದಿದೆ – ದೂರು ದಾಖಲಿಸಿದ ರೈತ

    ಉಪ ತಹಶೀಲ್ದಾರ್ ಮಹಾದೇವ ಬಿರಾದಾರ್ ಪಾಟೀಲ್ ಮಾತನಾಡಿ, ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇದನ್ನು ಪ್ರತಿ ನಾಗರಿಕನು ಪಾಲಿಸುವಂತಾಗಬೇಕು ಸಾವಿರ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಂದಾಯ ಇಲಾಖೆ ದಿನಾಚರಣೆ ಪ್ರಯುಕ್ತ, ಗ್ರಾಮ ಲೆಕ್ಕಾಧಿಕಾರಿ ಗ್ರಾಮ ಸಹಾಯಕರು ಸೇರಿದಂತೆ ತಾಲೂಕು ಆಡಳಿತದ ಪ್ರತಿಯೊಬ್ಬ ನೌಕರಸ್ಥರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪರಿಸರ ಸಂರಕ್ಷಣೆಗೆ ಬದ್ಧರಾಗಿದ್ದಾರೆ. ಪರಿಸರದಿಂದ ಹಸಿರು ಪರಿಸರದಿಂದಲೇ ಉಸಿರು ಆಗಿದೆ ಹಾಗಾಗಿ ನಾವು ನಾಡನ್ನು ಉಳಿಸುವಂತೆ ಕಾಡನ್ನು ಉಳಿಸಬೇಕಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಶಿರಸ್ಥೆದಾರರಾದ ಸಿ.ಎಸ್ ಕಬಾಡೆ ಢವಳೇಶ್ವರ, ಅರಣ್ಯ ಇಲಾಖೆಯ ಮಂಜುನಾಥ್ ಪಾಟೀಲ್, ಗ್ರಾಮ ಲೆಕ್ಕಾಧಿಕಾರಿ ಎಮ್.ಎಮ್ ಮಿರ್ಜಿ ಉಪಸ್ಥಿತರಿದ್ದರು.

  • ಆನ್‍ಲೈನ್ ಕ್ಲಾಸ್, ನೆಟ್ವರ್ಕ್‍ಗಾಗಿ ಗುಡ್ಡ ಹತ್ತುತ್ತಿದ ಮಲೆನಾಡ ಮಕ್ಕಳು

    ಆನ್‍ಲೈನ್ ಕ್ಲಾಸ್, ನೆಟ್ವರ್ಕ್‍ಗಾಗಿ ಗುಡ್ಡ ಹತ್ತುತ್ತಿದ ಮಲೆನಾಡ ಮಕ್ಕಳು

    ಚಿಕ್ಕಮಗಳೂರು: ಆನ್‍ಲೈನ್ ಶಿಕ್ಷಣಕ್ಕಾಗಿ ಮಕ್ಕಳು ಕೈಯಲ್ಲಿ ಮೊಬೈಲ್ ಹಿಡಿದು ಬೆಟ್ಟ-ಗುಡ್ಡ ಏರಿ, ಕಾಡುಮೇಡು ಅಲೆಯುತ್ತಾ ಶಿಕ್ಷಣದಿಂದ ವಂಚಿತರಾಗುತ್ತಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕೋರೆ ಗ್ರಾಮದಲ್ಲಿ ನಡೆದಿದೆ.

    ಪುಟ್ಟ-ಪುಟ್ಟ ಮಕ್ಕಳ ಈ ಪರಿಸ್ಥಿತಿ ಕೇವಲ ಇದೊಂದೇ ಗ್ರಾಮದಲ್ಲಿಲ್ಲ. ಜಿಲ್ಲೆಯ ಐದು ಮಲೆನಾಡ ತಾಲೂಕಿನ ಹತ್ತಾರು ಗ್ರಾಮದಲ್ಲಿ ಇದೇ ಸಮಸ್ಯೆ ಇದ್ದು, ಮಕ್ಕಳು ನೆಟ್ವರ್ಕ್ ಸಿಗದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಮಕ್ಕಳ ಜೊತೆ ಪೋಷಕರು ಅಲ್ಲೇ ಹೋಗಿ ಮಕ್ಕಳನ್ನ ನೋಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

    ಕಳಸ ಪಟ್ಟಣದ ಈ ಕೋರೆ ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿದ್ದಾರೆ. ಮಕ್ಕಳ ಭವಿಷ್ಯ ಉಜ್ವಲವಾಗಿರಲೆಂದು ಕಷ್ಟವೋ-ಸುಖವೋ ಹೆತ್ತವರು ಮಕ್ಕಳನ್ನ ಖಾಸಗಿ ಶಾಲೆಗೂ ಸೇರಿಸಿದ್ದಾರೆ. 24 ಪೆÇೀಷಕರು ಮಕ್ಕಳಿಗೆ ಮೊಬೈಲ್ ಕೊಡಿಸಿದ್ದಾರೆ. ಮಕ್ಕಳು ಮೊಬೈಲ್‍ಗೆ ನೆಟ್ವರ್ಕ್ ಸಿಗದೆ ಕಾಡುಮೇಡು ಅಲೆಯುತ್ತಿದ್ದಾರೆ. ಶಾಲೆಯವರು ಆನ್‍ಲೈನ್ ಕ್ಲಾಸ್ ಮಾಡುತ್ತಾರೆ. ಆದರೆ, ಮಕ್ಕಳಿಗೆ ನೆಟ್ವರ್ಕ್ ಸಿಗುತ್ತಿಲ್ಲ. ಕೋರಿಯಿಂದ 12 ಕಿ.ಮೀ. ದೂರದ ಆನೆಗುಂಡಿ ಗ್ರಾಮಕ್ಕೆ ಬರಬೇಕು. ಆದರೆ, ಅಲ್ಲೂ ಸರಿಯಾಗಿ ನೆಟ್ವರ್ಕ್ ಸಿಗಲ್ಲ. ಸಿಕ್ಕರೆ ಸಿಕ್ಕಿತು. ಇಲ್ಲವಾದರೆ ಇಲ್ಲ. ಮಕ್ಕಳು ಕೋರೆ ಗ್ರಾಮದ ಕಲ್ಲು ಕ್ವಾರಿ ಬಳಿ ಬಂದು ನೆಟ್ವರ್ಕ್‍ಗಾಗಿ ಹುಡುಕಾಡುತ್ತಿದ್ದಾರೆ.  ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್‍ಡೌನ್ ಇನ್ನಷ್ಟು ಸಡಿಲ

    ಸ್ವಲ್ಪ ಹೆಚ್ಚು ಕಮ್ಮಿಯಾದರೂ ಕೆಳಕ್ಕೆ ಬೀಳೋ ಸಾಧ್ಯತೆಯೂ ಇದೆ. ಮೊದಲು ಇಲ್ಲಿ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಫ್ರೀಕ್ವೆನ್ಸಿ ಚೆನ್ನಾಗಿತ್ತು. ಆಗ ನೆಟ್ವರ್ಕ್ ಕೂಡ ಚೆನ್ನಾಗಿ ಸಿಗುತ್ತಿತ್ತು. ಆದರೆ ಈಗ, ಫ್ರೀಕ್ವೆನ್ಸಿಯೂ ಇಲ್ಲ. ನೆಟ್ವರ್ಕೂ ಇಲ್ಲ. ಕರೆಂಟೂ ಇರಲ್ಲ. ಮಕ್ಕಳು ಹಳ್ಳಿಯಲ್ಲಿ ಓದೋದು ಅಸಾಧ್ಯವಾಗಿದೆ. ಕೋರೆ ಗ್ರಾಮ ಇಡಕಣಿ ಪಂಚಾಯಿತಿಗೆ ಸೇರುತ್ತೆ. ಅಲ್ಲಿಗೆ ಬರೋಕೆ ಬಸ್ಸು ಇಲ್ಲ. ಹಾಗಾಗಿ, ಮಕ್ಕಳು ನೆಟ್ವರ್ಕ್ ಹುಡುಕಿಕೊಂಡು ಕಾಡುಮೇಡು ಅಲೆದು ಓದುವಂತಾಗಿದೆ. ಇಲ್ಲಿನ ಜನ ಹೆಚ್ಚಾಗಿ ಅವಲಂಬಿಸಿರೋದು ಬಿ.ಎಸ್.ಎನ್.ಎಲ್. ನೆಟ್ವರ್ಕ್. ಆದ್ರೀಗ, ಬಿ.ಎಸ್.ಎನ್.ಎಲ್. ಹೆಸರಿಗಷ್ಟೆ ಇರೋದು. ಇರುವುದರಲ್ಲಿ ಏರ್‍ಟೆಲ್, ಜಿಯೋ ಪರವಾಗಿಲ್ಲ. ಆದರೆ, ಇಲ್ಲಿ ಆ ನೆಟ್ವರ್ಕ್ ಕೂಡ ಸರಿಯಾಗಿ ಸಿಗುತ್ತಿಲ್ಲ. ಮಳೆ-ಗಾಳಿ ಬಂತೆಂದರೆ ಮತ್ತಷ್ಟು ಸಮಸ್ಯೆ. ಹಾಗಾಗಿ, ಮಕ್ಕಳು ಆನ್‍ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ನೆಟ್ವರ್ಕ್‍ಗಾಗಿ ಕಾಡುಮೇಡು ಅಲೆಯುತ್ತಿದ್ದಾರೆ. ಮಕ್ಕಳ ಜೊತೆ ಹೆತ್ತವರು ಕೂಡ ಕಾಡು-ಮೇಡು ಅಲೆದು ನೆಟ್ವರ್ಕ್ ಸಿಗುವ ಕಡೆ ಮಕ್ಕಳ ಜೊತೆ ಕಾಲಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.