Tag: forest

  • ಅರಣ್ಯದಲ್ಲಿ ಆನೆಗಳ ಜೊತೆ ಚಾಲೆಂಜಿಂಗ್ ಸ್ಟಾರ್ ರಿಲ್ಯಾಕ್ಸ್ ಮೂಡ್!

    ಅರಣ್ಯದಲ್ಲಿ ಆನೆಗಳ ಜೊತೆ ಚಾಲೆಂಜಿಂಗ್ ಸ್ಟಾರ್ ರಿಲ್ಯಾಕ್ಸ್ ಮೂಡ್!

    ಬೆಂಗಳೂರು: ಅರಣ್ಯ ಇಲಾಖೆಯ ಪ್ರಚಾರ ರಾಯಭಾರಿ ಆಗಿರುವ ನಟ ದರ್ಶನ್ ಫುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ಕಾಲ ಕಳೆಯುತ್ತಿದ್ದಾರೆ.

    ಮೈಸೂರಿನ ಕಬಿನಿ ಹಿನ್ನೀರಿನ ಅರಣ್ಯದಲ್ಲಿ ಆನೆ ಜೊತೆ ಹಾಗೂ ಕಾಡಿನ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇಂದು ಬೆಳಗ್ಗೆ ಸಫಾರಿಗೆ ಹೋದ ದರ್ಶನ್, ಕೈಯಲ್ಲಿ ಕ್ಯಾಮೆರಾ ಹಿಡಿದು ಪ್ರಕೃತಿ ಸೌಂದರ್ಯ ಹಾಗೂ ತಮಗೆ ಎದುರಾಗುವ ಕಾಡು ಪ್ರಾಣಿಗಳ ಫೋಟೋ ಕ್ಲಿಕ್ಕಿಸಿದರು.

    ಸದ್ಯ ಚಿತ್ರೀಕರಣದಿಂದ ದರ್ಶನ್ ಬ್ರೇಕ್ ತೆಗೆದುಕೊಂಡಿದ್ದಾರೆ. ದರ್ಶನ್ ಬಿಡುವಿನ ಸಮಯದಲ್ಲಿ ಮೈಸೂರಿನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದು, ಕಳೆದ ಎರಡು ದಿನಗಳಿಂದ ಮೈಸೂರಿನಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಪ್ರಾಣಿ ಪಕ್ಷಿಗಳನ್ನು ತುಂಬಾನೇ ಇಷ್ಟಪಡುವ ಅವರು, ಮೈಸೂರಿನ ತನ್ನ ಫಾರ್ಮ್ ಹೌಸ್‍ನಲ್ಲಿ ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ. ಪ್ರಾಣಿ ಹಾಗೂ ಪರಿಸರ ಮೇಲಿರುವ ಪ್ರೀತಿಯನ್ನು ಕಂಡು ದರ್ಶನ್ ಅವರನ್ನು ಮೈಸೂರು ಮೃಗಾಲಯದ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.

    ದರ್ಶನ್ ತಮ್ಮದೇ ಫಾರ್ಮ್‍ನಲ್ಲಿ ಹಲವಾರು ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಅಲ್ಲದೇ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಹುಲಿ ಮತ್ತು ಆನೆ ಪ್ರಾಣಿಗಳನ್ನು ದತ್ತು ಪಡೆದು ಆ ಪ್ರಾಣಿಗಳ ಪಾಲನೆಗೆ ಸಹಾಯ ಮಾಡುತ್ತಿದ್ದಾರೆ.

    https://twitter.com/DarshanTrends/status/1011628239977000960

     

  • ಕಾಫಿ ತೋಟಕ್ಕೆ ನುಗ್ಗಿ ಕಾಡು ಕುರಿಯನ್ನು ನುಂಗಿದ ಹೆಬ್ಬಾವು!

    ಕಾಫಿ ತೋಟಕ್ಕೆ ನುಗ್ಗಿ ಕಾಡು ಕುರಿಯನ್ನು ನುಂಗಿದ ಹೆಬ್ಬಾವು!

    ಚಿಕ್ಕಮಗಳೂರು: ಕಾಫಿ ತೋಟಕ್ಕೆ ನುಗ್ಗಿದ ಹೆಬ್ಬಾವು ಕಾಡು ಕುರಿಯೊಂದನ್ನು ನುಂಗಿಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ನಡೆದಿದೆ.

    ಮೂಡಿಗೆರೆ ತಾಲೂಕಿನ ಸಮೀಪದ ಕಾಫಿ ತೋಟವೊಂದರಲ್ಲಿ ಕಾಡುಕುರಿಯೊಂದನ್ನು ಅರ್ಧ ನುಂಗಿದ ಹೆಬ್ಬಾವು ಮುಂದೆ ತೆವಳಲಾಗದೇ, ಕಾಡಿಗೆ ಹೊಂದಿಕೊಂಡಿರುವ ತೋಟದ ಪಕ್ಕದಲ್ಲಿ ಬಿದ್ದುಕೊಂಡಿತ್ತು.

    ತೋಟಗಳಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಕಾರ್ಮಿಕರು ಹೆಬ್ಬಾವನ್ನ ಕಂಡು ಕೂಗಾಡಿದ್ದಾರೆ. ಹಾವನ್ನ ಕಂಡ ತೋಟದ ಮಾಲೀಕ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.

    ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಹಾಗೂ ಸ್ನೇಕ್ ಆರೀಫ್ ಮಲೆನಾಡಲ್ಲಿ ಅಪರೂಪವಾಗಿ ಕಾಣಿಸಿಕೊಳ್ಳುವ ಹೆಬ್ಬಾವನ್ನ ರಕ್ಷಿಸಿದ್ದಾರೆ. ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಪ್ರದೇಶದಲ್ಲಿ ಬಿಟ್ಟಿದ್ದಾರೆ. ಆದರೆ ಹೆಬ್ಬಾವಿನ ಬಾಯಿಗೆ ಅರ್ಧಂಬರ್ಧ ತುತ್ತಾಗಿದ್ದ ಕಾಡು ಕುರಿ ಹಾವಿನ ಬಾಯಿಂದ ಹೊರಬರುವಷ್ಟರಲ್ಲೇ ಅಸುನೀಗಿದೆ.

  • ಮರಿಯಾನೆ ರಕ್ಷಣೆಗಾಗಿ ಬಸ್ಸನ್ನೇ ಅಟ್ಟಿಸಿಕೊಂಡು ಬಂದ ತಾಯಿ ಆನೆ – ವಿಡಿಯೋ ನೋಡಿ

    ಮರಿಯಾನೆ ರಕ್ಷಣೆಗಾಗಿ ಬಸ್ಸನ್ನೇ ಅಟ್ಟಿಸಿಕೊಂಡು ಬಂದ ತಾಯಿ ಆನೆ – ವಿಡಿಯೋ ನೋಡಿ

    ಚಾಮರಾಜನಗರ: ಕಾಡಿನ ನಡುವಿನ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ತನ್ನ ಮರಿ ರಕ್ಷಣೆಗಾಗಿ ತಾಯಿ ಆನೆ ದಾಳಿ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಮೂಲೆಹೊಳೆ ಸಮೀಪ ಚಿಕ್ಕಮಗಳೂರಿನಿಂದ ಕಲ್ಲಿಕೋಟೆಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮೇಲೆ ತಾಯಿ ಆನೆ ದಾಳಿ ಮಾಡಿದೆ. ಬಸ್ ಚಲಿಸುವ ವೇಳೆ ಮರಿ ಹಾಗೂ ತಾಯಿ ಆನೆ ರಸ್ತೆ ಪಕ್ಕದಲ್ಲಿ ನಿಂತಿವೆ. ಈ ವೇಳೆ ಮರಿ ಆನೆಗೆ ಅಪಾಯವಾಗಬಹುದೆಂದು ಬಸ್ಸನ್ನು ತಾಯಿ ಆನೆ ಅಟ್ಟಿಸಿಕೊಂಡು ಹೋಗಿದೆ.

    ಆನೆ ಬಸ್ಸಿನತ್ತ ದಾವಿಸುತ್ತಿದ್ದ ಅಪಾಯವನ್ನು ಕಂಡ ಚಾಲಕ ವೇಗವಾಗಿ ಬಸ್ಸನ್ನು ಹಿಂದೆ ಚಾಲನೆ ಮಾಡಿದ್ದಾನೆ. ಅದರು ಸಮಾಧಾನಗೊಳ್ಳದ ಆನೆ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಬಳಿಕ ಹಿಂದಿರುಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಬಸ್ಸಿಗೆ ಅಡ್ಡವಾಗಿದ್ದ ಆನೆಗಳ ಗುಂಪು ಬಳಿಕ ಕಾಡಿನತ್ತ ತೆರಳಿದೆ. ಆನೆ ದಾಳಿ ನಡೆಸಿದ ವೇಳೆ ಬಸ್ ಚಾಲಕ ಸೇರಿದಂತೆ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಆನೆಯ ದಾಳಿ ನಡೆಸಿರುವ ವಿಡಿಯೋವನ್ನು ಬಸ್ಸಿನಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ವೇಳೆ ಪ್ರಯಾಣಿಕರು ಚೀರಾಟ ನಡೆಸಿದ್ದರಿಂದ ಆನೆ ಹಿಂದಿರುಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಳಿನೆಲೆ ಬಳಿಯ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಶನಿವಾರವಷ್ಟೇ ಧರ್ಮಸ್ಥಳದಿಂದ ಕುಕ್ಕೆಗೆ ತೆರಳಿದ್ದ ಯಾತ್ರಿಕರ ಓಮ್ನಿ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿ ಜಖಂ ಗೊಳಿಸಿತ್ತು. ಘಟನೆಯ ವೇಳೆ ಆರು ಮಂದಿ ಕಾರಿನಲ್ಲಿ ತೆರಳುತ್ತಿದ್ದು, ಇವರಲ್ಲಿ ಕಾರಿನ ಮುಂಭಾಗದಲ್ಲಿ ಕುಳಿತ್ತಿದ್ದ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಕಾರಿನ ಮೇಲೆ ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಬಸ್ಸೊಂದು ಹಾರ್ನ್ ಮಾಡುತ್ತಾ ಬಂದ ಕಾರಣ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿತ್ತು.

    https://www.youtube.com/watch?v=fnHvfRLYFbk

  • ಸೊಂಡಿಲಿನಿಂದ ಬಡಿದು ಕಾರನ್ನು ಜಖಂಗೊಳಿಸಿದ ಕಾಡಾನೆ- ಓರ್ವ ಗಂಭೀರ

    ಸೊಂಡಿಲಿನಿಂದ ಬಡಿದು ಕಾರನ್ನು ಜಖಂಗೊಳಿಸಿದ ಕಾಡಾನೆ- ಓರ್ವ ಗಂಭೀರ

    ಮಂಗಳೂರು: ಕಾಡಾನೆಯೊಂದು ಹಠಾತ್ ದಾಳಿ ನಡೆಸಿದ ಪರಿಣಾಮ ಕಾರು ಜಖಂಗೊಂಡು, ಕಾರಿನಲ್ಲಿದ್ದ ಓರ್ವ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಿಳಿನೆಲೆಯಲ್ಲಿ ನಡೆದಿದೆ.

    ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಯಾತ್ರಾರ್ಥಿಗಳು ಮಾರುತಿ ಓಮ್ನಿ ಕಾರಿನಲ್ಲಿ ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದರು. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಹೋಗುತ್ತಿದ್ದ ವೇಳೆ ಬಿಳಿನೆಲೆಯ ಸಿಪಿಸಿಆರ್ ಐ ಸಮೀಪ ಕಾಡಾನೆ ರಸ್ತೆ ಹಾದು ಹೋಗುತ್ತಿತ್ತು. ಇದನ್ನು ಕಂಡ ಚಾಲಕ ಕಾರನ್ನು ನಿಲ್ಲಿಸಿದ್ದಾರೆ.

    ಈ ಸಂದರ್ಭದಲ್ಲಿ ಕಾಡಾನೆ ಹಿಂತಿರುಗಿ ಬಂದಿದ್ದು, ಸೊಂಡಿಲಿನಿಂದ ಕಾರಿನ ಮುಂಭಾಗಕ್ಕೆ ಬಡಿದು ಹಾನಿಯುಂಟು ಮಾಡಿದೆ. ಇದೇ ವೇಳೆ ಬಸ್ಸೊಂದು ಹಾರ್ನ್ ಮಾಡುತ್ತಾ ಬಂದ ಕಾರಣ ಕಾಡಾನೆ ಕಾರನ್ನು ಬಿಟ್ಟು ಓಡಿ ಹೋಗಿದೆ. ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದೆ. ಈ ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದು, ಇನ್ನುಳಿದವರು ಅಪಾಯದಿಂದ ಪಾರಾಗಿದ್ದಾರೆ.

    https://www.youtube.com/watch?v=SdoaZVpXFIc

  • ವಿಡಿಯೋ: ಮುಂಗಾರಿನ ಅಭಿಷೇಕಕ್ಕೆ ಮೈದುಂಬಿ ಹರೀತಿದೆ ಚೆಲಾವರ ಫಾಲ್ಸ್

    ವಿಡಿಯೋ: ಮುಂಗಾರಿನ ಅಭಿಷೇಕಕ್ಕೆ ಮೈದುಂಬಿ ಹರೀತಿದೆ ಚೆಲಾವರ ಫಾಲ್ಸ್

    ಮಡಿಕೇರಿ: ಕೊಡಗು.. ಹೇಳಿಕೇಳಿ ರಾಜ್ಯದ ಪ್ರಕೃತಿ ಪ್ರವಾಸೋದ್ಯಮದ ಹಾಟ್ ಸ್ಪಾಟ್ ಆಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಾಣೋ ಹಚ್ಚ ಹಸಿರು, ಮುಗಿಲಿಗೆ ಮುತ್ತಿಡುವಂತೆ ಕಾಣೋ ಗಿರಿಶಿಖರಗಳು, ಹೋದಲ್ಲೆಲ್ಲಾ ಸದ್ದುಮಾಡೋ ಜಲರಾಶಿಗಳು ಕಣ್ಮನಸೂರೆಗೊಳ್ಳುತ್ತವೆ.

    ಮುಂಗಾರು ಮಳೆ ಆರಂಭವಾದ್ರೆ ಸಾಕು, ಮುಗಿಲ ಮರೆಯಿಂದ ಧುಮ್ಮಿಕ್ಕೋ ಜಲಪಾತಗಳು ನಿಸರ್ಗದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಇಂತಹ ಸುಂದರ ಜಲಪಾತಗಳ ಸಾಲಿಗೆ ಸೇರುವ ಚೆಲವಾರ ಫಾಲ್ಸ್ ನ ವಯ್ಯಾರ ಪ್ರಕೃತಿ ಪ್ರಿಯರನ್ನು ಸೆಳೆಯುತ್ತಿದ್ದು, ಮುಂಗಾರಿನ ಅಭಿಷೇಕ್ಕೆ ಮೈದುಂಬಿ ಹರಿಯುತ್ತಾ ಕಣ್ಣು ಕುಕ್ಕುತ್ತಿದೆ.

    ಕೊಡಗಿನ ಸುಂದರ ಜಲಪಾತಗಳಲ್ಲೊಂದಾದ ಚೆಲವಾರ ಫಾಲ್ಸ್ ಮಳೆಗಾಲದಲ್ಲಿ ಬೋರ್ಗರೆಯುತ್ತಾ ಮುಗಿಲೆತ್ತರದಿಂದ ಧುಮ್ಮಿಕ್ಕೋ ಜಲಪಾತದ ಸೌಂದರ್ಯ ಸವಿಯೋದು ಕಣ್ಣಿಗೆ ಹಬ್ಬವಾಗಿದೆ. ಇನ್ನು ಮುಂಗಾರು ಮಳೆ ಆರಂಭವಾಗುತ್ತಿದ್ದಂತೆಯೇ ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡು ನಲಿಯುವ ಈ ಜಲರಾಣಿ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ವಿಸ್ತಾರವಾದ ಗುಡ್ಡದ ಮೇಲಿಂದ ಹಾಲು ಚೆಲ್ಲಿದಂತೆ ಧರೆಗಿಳಿಯೋ ಜಲರಾಶಿ ನೋಡೋದೆ ಅಂದ. ರಾಜ್ಯದ ವಿವಿಧೆಡೆಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ಜಲಪಾತದ ಸೊಬಗು ನೋಡಿ ಮೈ ಮರೆಯುತ್ತಾರೆ. ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಂಡು ಎಂಜಾಯ್ ಮಾಡುತ್ತಾರೆ.

    ವಿರಾಜಪೇಟೆ ತಾಲೂಕಿನ ಕಕ್ಕಬ್ಬೆ ಸಮೀಪದ ಬೆಟ್ಟಗುಡ್ಡಗಳ ನಡುವಿನಿಂದ ಧುಮ್ಮಿಕ್ಕುವ ಈ ಜಲಪಾತ ಕೊಡಗಿನ ಪ್ರಮುಖ ಜಲಪಾತಗಳಲ್ಲೊಂದು. ಹಚ್ಚಹಸಿರ ನಡುವಿನಿಂದ ಕಾರ್ಗಲ್ಲನ್ನು ಸೀಳಿಕೊಂಡು ಧುಮುಕುವ ಜಲಪಾತ, ಕಷ್ಟಪಟ್ಟು ಬರೋ ಪ್ರವಾಸಿಗರಿಗೆ ಲಾಸ್ ಮಾಡೋದಿಲ್ಲ. ಫಾಲ್ಸ್ ಬಗ್ಗೆ ಮಾಹಿತಿಯಿಲ್ಲದೆ ಕೆಲ ಪ್ರವಾಸಿಗರು ಅಪಾಯದ ಸ್ಥಳದಲ್ಲಿ ನೀರಿಗಿಳಿದು ಪ್ರಾಣವನ್ನೂ ಕಳೆದುಕೊಂಡಿದ್ದಾರೆ.

    ಮಳೆಯ ನಡುವೆಯೂ ಇಲ್ಲಿಗೆ ಬರುವ ಪ್ರವಾಸಿಗರು ಕಷ್ಟದ ಹಾದಿಯಲ್ಲಿ ಸಾಗಿ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಾರೆ. ನಿತ್ಯವೂ ನೂರಾರು ಜನರನ್ನು ತನ್ನತ್ತ ಸೆಳೆಯೋ ಫಾಲ್ಸ್ ಗೆ ತೆರಳೋಕೆ ಇರೋದು ಖಾಸಗಿ ದಾರಿ. ಹಾಗಾಗಿ ಇಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಜಲಪಾತದ ನೀರಲ್ಲಿ ಇಳಿದರೆ ಅಪಾಯವಿದ್ದು, ಅಲ್ಲಿ ಎಚ್ಚರಿಕೆ ಫಲಕಗಳನ್ನೂ ಅಳವಡಿಸಬೇಕು. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನೋದು ಜನರ ಒತ್ತಾಯವಾಗಿದೆ. ಸೌಂದರ್ಯದ ನಡುವೆ ಅಪಾಯವನ್ನೂ ಮಡಿನಲ್ಲಿಟ್ಟುಕೊಂಡಿರುವ ಜಲಪಾತಕ್ಕೆ ಸೂಕ್ತ ಕಾಯಕಲ್ಪ ಮಾಡಿದರೆ ಮತ್ತಷ್ಟು ಜನರನ್ನ ಸೆಳೆಯಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಪಶ್ಚಿಮ ಘಟ್ಟದ ತಪ್ಪಲಿನ ಪುಟ್ಟ ಜಿಲ್ಲೆ ಕೊಡಗು ತನ್ನ ಪ್ರಕೃತಿ ಸೌಂದರ್ಯದಿಂದ ಇಡೀ ಜಗತ್ತನ್ನೆ ತನ್ನತ್ತ ಸೆಳೆಯುತ್ತಿದೆ. ಇಂತಹ ನಿಸರ್ಗದ ತಪ್ಪಲಿನ ಪ್ರವಾಸಿತಾಣಗಳು ಮುಂಗಾರು ಮಳೆಯ ಸಿಂಚನಕ್ಕೆ ಹೊಸರೂಪ ತಳೆದು ಕಣ್ಮನ ಸೆಳೆಯುತ್ತವೆ. ಇಷ್ಟಿದ್ದರೂ ಪ್ರವಾಸೋದ್ಯಮ ಇಲಾಖೆ ಮಾತ್ರ ಸೂಕ್ತ ವ್ಯವಸ್ಥೆ ಕೊಡದೆ ನಿರ್ಲಕ್ಷ ವಹಿಸುತ್ತಿದೆ.

  • ಜಮೀನಿನಲ್ಲಿ ಪತ್ತೆಯಾದ ಭಾರೀ ಗಾತ್ರದ ಹೆಬ್ಬಾವಿನ ರಕ್ಷಣೆ!

    ಜಮೀನಿನಲ್ಲಿ ಪತ್ತೆಯಾದ ಭಾರೀ ಗಾತ್ರದ ಹೆಬ್ಬಾವಿನ ರಕ್ಷಣೆ!

    ಚಾಮರಾಜನಗರ: ಜಮೀನೊಂದರಲ್ಲಿ ಪತ್ತೆಯಾದ ಭಾರೀ ಗಾತ್ರದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಪ್ರವೀಣ್ ಎಂಬವರ ಜಮೀನಿನಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಸಂತೇಮರಳ್ಳಿಯ ಸ್ನೇಕ್ ಮಹೇಶ್ ಹಾಗೂ ಅರಣ್ಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ.

    ಬಳಿಕ ಹೆಬ್ಬಾವನ್ನು ಅರಣ್ಯಾಧಿಕಾರಿಗಳ ಜೊತೆ ಬಿಳಿಗಿರಿರಂಗನಬೆಟ್ಟದ ಕಾಡಿಗೆ ಬಿಟ್ಟಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳು ಕಂಡುಬರುವುದು ಸಾಮಾನ್ಯವಾಗಿದೆ. ಆದರೆ ನಶಿಸಿ ಹೋಗುತ್ತಿರುವ ಭಾರೀ ಗಾತ್ರದ ಹೆಬ್ಬಾವುಗಳು ಕಾಣ ಸಿಗುವುದು ಬಲು ಅಪರೂಪ. ಇಂತಹ ಪ್ರಾಣಿಗಳನ್ನು ರಕ್ಷಿಸಿ ಉಳಿಸುವುದು ಅನಿವಾರ್ಯವಾಗಿದೆ.

  • ಚಿರತೆ ದಾಳಿಯಿಂದ ಬಾಲಕ ಸಾವು: ರೊಚ್ಚಿಗೆದ್ದ ಗ್ರಾಮಸ್ಥರಿಂದ ಕಾಡಿಗೆ ಬೆಂಕಿ!

    ಚಿರತೆ ದಾಳಿಯಿಂದ ಬಾಲಕ ಸಾವು: ರೊಚ್ಚಿಗೆದ್ದ ಗ್ರಾಮಸ್ಥರಿಂದ ಕಾಡಿಗೆ ಬೆಂಕಿ!

    ಸಾಂದರ್ಭಿಕ ಚಿತ್ರ

    ಡೆಹ್ರಾಡೂನ್: ಚಿರತೆ ಬಾಲಕನನ್ನು ಎಳೆದುಕೊಂಡು ಹೋಗಿದ್ದಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಕಾಡಿಗೆ ಬೆಂಕಿ ಇಟ್ಟ ಘಟನೆ ಉತ್ತರಾಖಂಡ್‍ನ ಬಗೇಶ್ವರ ಜಿಲ್ಲೆಯ ಹರಿನಗರ ಗ್ರಾಮದಲ್ಲಿ ನಡೆದಿದೆ.

    ಸೋಮವಾರ ಸಂಜೆ ಗ್ರಾಮದ ಮೇಲೆ ದಾಳಿ ನಡೆಸಿದ ಚಿರತೆ ಬಾಲಕನನ್ನು ಎಳೆದು ಕೊಂಡು ಹೋಗಿತ್ತು. ಚಿರತೆ ಎಳೆದುಕೊಂಡು ಹೋಗಿದ್ದಕ್ಕೆ ಗ್ರಾಮಸ್ಥರು ರೊಚ್ಚಿಗೆದ್ದು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ. ಮಂಗಳವಾರ ಬೆಳಗ್ಗೆ ಅರಣ್ಯ ಪ್ರದೇಶದ ಸಮೀಪ ಕಚ್ಚಿ ತಿಂದಿರುವ ಬಾಲಕನ ಮೃತದೇಹ ಪತ್ತೆಯಾಗಿತ್ತು.

    ದೀಪಕ್(7) ದಾಳಿಗೊಳಗಾಗಿ ಮೃತಪಟ್ಟ ಬಾಲಕ. ಹರಿನಗರ ಗ್ರಾಮದ ದೀವಾನ್ ರಾಮ್‍ರ ಮಗನಾಗಿದ್ದು, ಸೋಮವಾರ ಸಂಜೆ ಮನೆಯ ಬಳಿ ಚಿರತೆಯೊಂದು ದಾಳಿ ನಡೆಸಿತ್ತು. ಈ ವೇಳೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ತಾಯಿಯು ಮಗುವಿನ ಚೀರಾಟ ಕೇಳಿ ಹೊರಬಂದು ನೋಡಿದಾಗ ಚಿರತೆ ಮಗುವನ್ನು ಕಾಡಿನ ಕಡೆಗೆ ಎಳೆದೊಯ್ದಿದೆ. ಕೂಡಲೇ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ರೊಚ್ಚಿಗೆದ್ದು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ.

    ಬಾಲಕನ ಶವ ಸಿಕ್ಕ ಹಿನ್ನೆಲೆ ಗ್ರಾಮಸ್ಥರು ಒಟ್ಟುಗೂಡಿ  ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಚಿರತೆಯನ್ನು ಕೊಲ್ಲಬೇಕೆಂದು ಪಟ್ಟುಹಿಡಿದಿದ್ದಾರೆ ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ ಆರ್ ಕೆ ಸಿಂಗ್ ತಿಳಿಸಿದ್ದಾರೆ.

    ಈ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಒಟ್ಟು 8-9 ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದ್ದು, ಚಿರತೆಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗುತ್ತದೆ. ದೀಪಕ್ ಕುಟುಂಬಕ್ಕೆ ರೂ.3ಲಕ್ಷ ಪರಿಹಾರ ನೀಡುವ ಭರವಸೆಯನ್ನು ನೀಡಿದ್ದಾರೆ.

    ಚಿರತೆ ದಾಳಿಯು ಇದೇ ಮೊದಲಲ್ಲ ಕಳೆದ ಮಾರ್ಚ್ ತಿಂಗಳಲ್ಲಿ ಇದೇ ಚಿರತೆ ದಾಳಿ ಮಾಡಿ 4 ವರ್ಷದ ಮಗುವನ್ನು ಕೊಂದಿತ್ತು. ಒಟ್ಟು 2 ಮಕ್ಕಳನ್ನು ಕೊಂದು ಹಾಕಿದ ಚಿರತೆಯನ್ನು ನರಹಂತಕ ಚಿರತೆಯೆಂದು ಘೋಷಣೆ ಮಾಡುವಂತೆ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ ಅನುಮತಿ ಕೇಳಿದ್ದೇವೆ ಎಂದು ಹೇಳಿದರು.

    ಚಿರತೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಅರಣ್ಯ ಸಂರಕ್ಷಣಾ ಅಧಿಕಾರಿಯಾದ ಡಿವಿಎಸ್ ಖಾಟಿಯವರು ಕೂಡಲೇ ಚಿರತೆಯನ್ನು ಕೊಲ್ಲುವಂತೆ ಆದೇಶ ನೀಡಿದ್ದಾರೆ. ಅಲ್ಮೋರದಿಂದ ಶೂಟರ್ಸ್ ತಂಡವು ಆದಷ್ಟು ಬೇಗ ಬಗೇಶ್ವರ್ ತಲುಪಿ ಹಂತಕ ಚಿರತೆಯನ್ನು ಗುಂಡಿಟ್ಟು ಕೊಲ್ಲುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

  • ಹಳಿಯಾಳಕ್ಕೆ ಆಗಮಿಸಿ ನಗರ ಸುತ್ತಾಡಿತು ಒಂಟಿಸಲಗ!

    ಹಳಿಯಾಳಕ್ಕೆ ಆಗಮಿಸಿ ನಗರ ಸುತ್ತಾಡಿತು ಒಂಟಿಸಲಗ!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿದ ಒಂಟಿ ಸಲಗವೊಂದು ನಗರದೆಲ್ಲೆಡೆ ಓಡಾಡಿ ಜನರಲ್ಲಿ ಭಯಗೊಳಿಸಿತ್ತು.

    ಶುಕ್ರವಾರ ಮುಂಜಾನೆ ಕಾಡಿನಿಂದ ನಾಡಿಗೆ ಬಂದ ಈ ಒಂಟಿ ಸಲಗ ನಗರದೆಲ್ಲೆಡೆ ಸುತ್ತಾಡಿದ್ದರೂ ಜನರಿಗೆ ಯಾವುದೇ ತೊಂದರೆ ನೀಡಲಿಲ್ಲ. ಸುದ್ದಿ ತಿಳಿದಕೂಡಲೇ ಹಳಿಯಾಳದ ಡಿಸಿಎಫ್ ರಮೇಶ್ ನೇತೃತ್ವದ ತಂಡ ಆನೆಯನ್ನು ಮೂರು ತಾಸುಗಳಿಗೂ ಅಧಿಕ ಸಮಯ ಕಾರ್ಯಾಚರಣೆ ನಡೆಸಿ ಮರಳಿ ಕಾಡಿಗೆ ಹೋಗುವಂತೆ ನೋಡಿಕೊಂಡಿದ್ದಾರೆ.

    ಈಗಾಗಲೇ ಹಳಿಯಾಳದಿಂದ ದಾಂಡೇಲಿ ಕಾಡಿಗೆ ಆನೆ ನಿರ್ಗಮಿಸಿದ್ದು ನಗರದ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

  • ಬಲೆ ಹಾಕಿದ್ದು ಮೀನಿಗಾಗಿ, ಸೆರೆ ಸಿಕ್ಕಿದ್ದು 10 ಕೆಜಿ ತೂಕದ ಹೆಬ್ಬಾವು

    ಬಲೆ ಹಾಕಿದ್ದು ಮೀನಿಗಾಗಿ, ಸೆರೆ ಸಿಕ್ಕಿದ್ದು 10 ಕೆಜಿ ತೂಕದ ಹೆಬ್ಬಾವು

    ಶಿವಮೊಗ್ಗ: ಮೀನಿಗಾಗಿ ಬಲೆ ಹಾಕಿದ್ದು, ಆದರೆ ಮೀನಿನ ಬದಲಾಗಿ ಬಲೆಗೆ ಹೆಬ್ಬಾವು ಬಿದ್ದಿರುವ ಘಟನೆ ಜಿಲ್ಲೆಯ ಆಲ್ಕೊಳ ಬಡಾವಣೆಯ ಕೆರೆಯಲ್ಲಿ ನಡೆದಿದೆ.

    ಬಡಾವಣೆಯ ಕೆರೆಯಲ್ಲಿ ಮೀನಿಗಾಗಿ ಬಲೆ ಹಾಕಲಾಗಿತ್ತು. ಆದರೆ ಸುಮಾರು ಆರು ಅಡಿ ಉದ್ದದ ಹೆಬ್ಬಾವೊಂದು ಮೀನಿಗಾಗಿ ಹಾಕಲಾಗಿದ್ದ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ಬಲೆಯಲ್ಲಿ ಮೀನುಗಳ ಜೊತೆಯಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

    ಸುಮಾರು 6 ಅಡಿ ಉದ್ದದ ಸುಮಾರು 10 ಕೆಜಿ ತೂಗುವ ಈ ಹೆಬ್ಬಾವು ಸ್ಥಳೀಯರಲ್ಲಿ ಭಯ ಮೂಡಿಸಿತ್ತು. ನಂತರ ಸ್ಥಳೀಯರು ಶಿವಮೊಗ್ಗದ ಉರಗ ಪ್ರೇಮಿ ಸ್ನೇಕ್ ಕಿರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕಿರಣ್ ಸ್ಥಳಕ್ಕೆ ಬಂದು ಹೆಬ್ಬಾವನ್ನು ರಕ್ಷಿಸಿದ್ದಾರೆ. ಅಲ್ಲದೇ ಸಿಕ್ಕಿರುವ ಹೆಬ್ಬಾವನ್ನು ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದು, ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

  • ಕಾರ್ ಎಂಜಿನ್ ನಿಂದ ಹೊರ ಬಂದ 12 ಅಡಿ ಉದ್ದದ ಹೆಬ್ಬಾವು – ವಿಡಿಯೋ ವೈರಲ್

    ಕಾರ್ ಎಂಜಿನ್ ನಿಂದ ಹೊರ ಬಂದ 12 ಅಡಿ ಉದ್ದದ ಹೆಬ್ಬಾವು – ವಿಡಿಯೋ ವೈರಲ್

    ಬ್ಯಾಂಕಾಕ್: ಕಾರ್ ಎಂಜಿನ್ ನಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.

    ಕಾರಿನ ಚಾಲಕ ಟೀ ನಟ್ವಿಜಿತ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ಕಾರು ನಿಂತು ಹೋಗಿದೆ. ಆಗ ಕಾರಿಗೆ ಏನು ಸಮಸ್ಯೆಯಾಗಿರಬಹುದು ಎಂದು ಯೋಚಿಸುತ್ತಿದ್ದರು. ಆಗ ಕಾರಿನ ಬಾನೆಟ್ ನಲ್ಲಿ ಬೃಹತ್ ಆಕಾರದ ಹೆಬ್ಬಾವಿನ ಬಾಲ ಕಂಡು ಬಂದಿದ್ದು, ಅದನ್ನು ಜನ ನೋಡಿದ್ದಾರೆ.

    ನಟ್ವಿಜಿತ್ ತನ್ನ ಕಾರಿನ ಮುಂಭಾಗದ ಬಾನೆಟ್ ತೆರೆದು ನೋಡಿದಾಗ ಅದರಲ್ಲಿ ಹೆಬ್ಬಾವು ಮಲಗಿದ್ದನ್ನು ನೋಡಿದ್ದಾರೆ. ನಂತರ ಕೂಡಲೇ ಸ್ಥಳೀಯ ಪ್ರಾಣಿ ನಿರ್ವಹಣಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಪ್ರಾಣಿ ನಿರ್ವಹಣಾಧಿಕಾರಿ ಸ್ಥಳಕ್ಕೆ ಬಂದು ಬಾನೆಟ್ ತೆಗೆದು ನೋಡಿದಾಗ 30 ಕೆಜಿ ತೂಕದ ಹೆಬ್ಬಾವು ಪತ್ತೆಯಾಗಿದೆ. ಬಳಿಕ ಪ್ರಾಣಿ ನಿರ್ವಹಣಾಕಾರರು ಅದನ್ನು ಒಂದು ಹ್ಯಾಂಡ್ಲಿಂಗ್ ಸ್ಟಿಕ್ ಹಾಕಿ ಎಂಜಿನ್  ನಿಂದ ಹೊರಗೆ ತೆಗೆದಿದ್ದಾರೆ ಈ ಎಲ್ಲಾ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

    ಎಂಜಿನ್ ನಲ್ಲಿ ಅವಿತು ಮಲಗಿದ್ದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಬಳಿಕ ಅದನ್ನು ಒಂದು ಚೀಲದಲ್ಲಿ ತುಂಬಿ ಕಾಡಿಗೆ ಬಿಡಲಾಗಿದೆ ಎಂದು ಪ್ರಾಣಿ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.

    ನಮ್ಮ ಮನೆಯಲ್ಲಿ ಇತ್ತೀಚಿಗೆ ಸಾಕಷ್ಟು ಕೋಳಿಗಳು ಒಂದೊಂದರಂತೆ ಕಾಣೆಯಾಗುತ್ತಿತ್ತು. ಬಹುಶಃ ಈ ಹಾವು ತಿಂದಿರಬಹುದು ಎಂದು ಕಾರ್ ಮಾಲೀಕರು ಆರೋಪಿಸಿದ್ದಾರೆ. ಆದರೆ ನಾನು ಹೆಬ್ಬಾವು ಇಲ್ಲಿರುತ್ತದೆ ಎಂದು ಭಾವಿಸಿರಲಿಲ್ಲ ಎಂದು ಮಾಲೀಕ ಟೀ ಹೇಳಿದ್ದಾರೆ.

    ಭಾರೀ ಮಳೆಯಾದಾಗ ಮತ್ತು ಹವಾಮಾನವು ತಂಪಾಗಿರುವಾಗ ಹಾವುಗಳು ಬೆಚ್ಚಗಿನ ಸ್ಥಳಗಳನ್ನು ಹುಡುಕುತ್ತವೆ. ಅದೇ ರೀತಿ ಕಾರ್ ಎಂಜಿನ್ ನಲ್ಲಿ ಬಂದು ಮಲಗಿದೆ. ಆದರೆ ಜನರು ಕಾರನ್ನು ಚಲಾಯಿಸುವ ಮೊದಲು ಪರೀಕ್ಷಿಸಬೇಕು ಎಂದು ಪ್ರಾಣಿ ನಿರ್ವಹಣಾಧಿಕಾರಿ ಹೇಳಿದ್ದಾರೆ.