Tag: forest

  • ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ರಾಜಗಾಂಭೀರ್ಯವಾಗಿ ರಸ್ತೆಯಲ್ಲೆಲ್ಲಾ ಓಡಾಡುತ್ತಿದೆ ಕಾಡೆಮ್ಮೆ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಸರೀಕಟ್ಟೆ ಗ್ರಾಮಕ್ಕೆ ಕಾಡೆಮ್ಮೆಯೊಂದು ರಾಜಗಾಂಭೀರ್ಯವಾಗಿ ಓಡಾಡುತ್ತಿದೆ.

    ಕಳೆದೊಂದು ತಿಂಗಳಿಂದ ಈ ಕಾಡೆಮ್ಮೆ ಆಗಾಗ್ಗೆ ಗ್ರಾಮಕ್ಕೆ ಬಂದು ಹೋಗುತ್ತಿದೆ. ಕಾಡೆಮ್ಮೆ ಬಂದು ಹೋಗೋದನ್ನು ಜನ ನಿಂತು ನೋಡುತ್ತಿದ್ದಾರೆ. ಕಾಡೆಮ್ಮೆ ಅತೀ ಸೂಕ್ಷ್ಮವಾದ ಪ್ರಾಣಿ. ಜನರನ್ನ ಕಂಡರೆ ಹೆದರಿ ಓಡಿ ಹೋಗುತ್ತದೆ. ಆದರೆ ಈ ಕಾಡೆಮ್ಮೆ ಆಗಲ್ಲ. ಗ್ರಾಮಕ್ಕೆ ಬಂದು ಒಂದು ರೌಂಡ್ ಹಾಕಿ ಹೋಗುತ್ತದೆ.

    ಕಳೆದೊಂದು ತಿಂಗಳಿಂದ ಆಗಾಗ ಗ್ರಾಮದ ಮುಖ್ಯ ರಸ್ತೆಗೆ ಬರುತ್ತಿರುವ ಈ ಕಾಡೆಮ್ಮೆ ಇಂದಿಗೂ ಯಾರಿಗೂ ಏನು ಮಾಡಿಲ್ಲ. ಸುಮ್ಮನೆ ಬಂದು ಹೋಗುತ್ತಿದೆ. ಬಸರೀಕಟ್ಟೆ ಕಾಡಂಚಿನ ಗ್ರಾಮವಾಗಿರುವುದರಿಂದ ಸುಮಾರು 20 ರಿಂದ 25 ಕಾಡೆಮ್ಮೆಗಳು ಬಂದಿವೆ. ಆದರೆ ಊರೊಳಗೆ ಬರುವುದು ಇದೊಂದೆ. ಉಳಿದವು ಕಾಡಂಚಿನಲ್ಲೇ ಇರುತ್ತವೆ. ಗ್ರಾಮಕ್ಕೆ ಈ ಕಾಡೆಮ್ಮೆ ಬಂದು ಏನು ತಿನ್ನೋದೂ ಇಲ್ಲ. ಅಕ್ಕ-ಪಕ್ಕ ನೋಡೋದು ಇಲ್ಲ. ರಾಜಗಾಂಭೀರ್ಯವಾಗಿ ನಡೆಯಂತೆ ಸುಮ್ಮನೆ ಹೋಗುತ್ತೆ. ಈ ವಿಚಿತ್ರ ಕಾಡೆಮ್ಮಯನ್ನ ಕಂಡ ಬಸರೀಕಟ್ಟೆ ಜನ ಆಶ್ಚರ್ಯಕ್ಕೀಡಾಗಿದ್ದಾರೆ.

    https://www.youtube.com/watch?v=ggLOcvSx75g

  • ಸಾಕು ಪ್ರಾಣಿಗಳನ್ನು ತಿನ್ನುತ್ತಿದ್ದ ಚಿರತೆ ಸೆರೆ- ನೋಡಲು ಮುಗಿಬಿದ್ದ ಸ್ಥಳೀಯರು

    ಸಾಕು ಪ್ರಾಣಿಗಳನ್ನು ತಿನ್ನುತ್ತಿದ್ದ ಚಿರತೆ ಸೆರೆ- ನೋಡಲು ಮುಗಿಬಿದ್ದ ಸ್ಥಳೀಯರು

    ರಾಮನಗರ: ಕಾಡಿನಿಂದ ನಾಡಿಗೆ ಪದೇ ಪದೇ ಬಂದು ಸಾಕು ಪ್ರಾಣಿಗಳನ್ನ ಕೊಲ್ಲುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಸೆರೆ ಸಿಕ್ಕ ಘಟನೆ ರಾಮನಗರ ತಾಲೂಕಿನ ನಿಂಗೇಗೌಡನದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಸುಮಾರು ಐದು ವರ್ಷದ ಗಂಡು ಚಿರತೆ ಸೆರೆಯಾಗಿದೆ. ಚಿರತೆ ಪದೇ ಪದೇ ನಿಂಗೇಗೌಡನದೊಡ್ಡಿ ಗ್ರಾಮಕ್ಕೆ ಬಂದು ಕುರಿ-ಮೇಕೆಗಳನ್ನು ಕೊಂದು ಹಾಕುತ್ತಿತ್ತು. ಕಳೆದ ವಾರದ ಹಿಂದೆ ಒಂದು ಎಮ್ಮೆಕರು, ಎರಡು ಮೇಕೆಗಳನ್ನು ಕೊಂದು ಹಾಕಿತ್ತು.

    ಈ ಹಿನ್ನೆಲೆಯಲ್ಲಿ ಚಿರತೆ ಹಾವಳಿ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಗ್ರಾಮಸ್ಥರು ನೀಡಿದ ದೂರಿನ ಮೇಲೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಆಹಾರ ಅರಸಿ ಬಂದ ಚಿರತೆ ಸೆರೆಯಾಗಿದೆ. ಸೆರೆ ಸಿಕ್ಕ ಚಿರತೆಯನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದರು. ಬಳಿಕ ರಾಮನಗರ ಅರಣ್ಯ ಅಧಿಕಾರಿಗಳು ಚಿರತೆಯನ್ನ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ. ಸದ್ಯಕ್ಕೆ ಚಿರತೆಯನ್ನು ಸೆರೆ ಹಿಡಿದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

  • ಮಲೆನಾಡನ್ನೇ ನಾಚಿಸುತ್ತಿದೆ ಕೋಟೆನಾಡಿನ ಜೋಗಿಮಟ್ಟಿ ಗಿರಿಧಾಮ

    ಮಲೆನಾಡನ್ನೇ ನಾಚಿಸುತ್ತಿದೆ ಕೋಟೆನಾಡಿನ ಜೋಗಿಮಟ್ಟಿ ಗಿರಿಧಾಮ

    ಚಿತ್ರದುರ್ಗ: ಕೋಟೆನಾಡು ಅಂದಾಕ್ಷಣ ಕೋಟೆ ಕೊತ್ತಲುಗಳು ಮಾತ್ರ ಕಣ್ಮುಂದೆ ಬರುತ್ತವೆ. ಆದರೆ ಮಲೆನಾಡನ್ನೇ ನಾಚಿಸುವ ನಿಸರ್ಗಧಾಮವೊಂದು ಕೋಟೆನಾಡು ಚಿತ್ರದುರ್ಗದಲ್ಲಿದೆ.

    ಐತಿಹಾಸಿಕ ಹಿನ್ನೆಲೆಯ ಪ್ರವಾಸಿ ತಾಣವೆನಿಸಿರೋ ಕೋಟೆನಾಡು ಚಿತ್ರದುರ್ಗ ಕೇವಲ ಬಂಡೆಗಳಿಂದ ಕೂಡಿರುವ ಬಯಲು ಸೀಮೆಯೆಂದು ಭಾವಿಸಿದ್ದಾರೆ. ಆದರೆ ಚಿತ್ರದುರ್ಗ ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಜೋಗಿಮಟ್ಟಿ ಗಿರಿಧಾಮ ಅವರ ಭಾವನೆಯನ್ನ ಅಲ್ಲೆಗೆಳೆಯುವಂತಿದೆ. ಸುಮಾರು 10ಸಾವಿರ ಹೆಕ್ಟೇರ್ ಪ್ರದೇಶದಷ್ಟು ವಿಶಾಲವಾಗಿರುವ ಈ ಕಾಯ್ದಿಟ್ಟ ಅರಣ್ಯ ಏಷ್ಯಾದಲ್ಲೇ ಅತಿಹೆಚ್ಚು ಗಾಳಿ ಬೀಸುವ ಪ್ರದೇಶಗಳ ಪೈಕಿ ಒಂದಾಗಿದೆ. ಇಂತಹ ಅಪರೂಪದ ಗಿರಿಧಾಮ ಮಳೆಗಾಲ ಹಾಗೂ ಚಳಿಗಾಲದಲ್ಲಂತೂ ಮಂಜಿನ ಮಡಿಕೇರಿ, ಸೊಬಗಿನ ಮಲೆನಾಡನ್ನೇ ನಾಚಿಸುವಂತೆ ರೂಪುಗೊಳ್ಳುತ್ತದೆ.

    ಕಳೆದ ಒಂದು ವಾರದಿಂದ ಜಿನುಗುತ್ತಿರುವ ಮಳೆಯ ಎಫೆಕ್ಟ್ ನಿಂದಾಗಿ ಜೋಗಿಮಟ್ಟಿ ಮತ್ತಷ್ಟು ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ಮೋಡದ ಅಲೆಗಳು ಜೋಗಿಮಟ್ಟಿಯ ಗಿರಿಧಾಮಗಳಿಗೆ ಮುತ್ತಿಟ್ಟು ನಲಿಯುತ್ತಿವೆ. ಜೋಗಿಮಟ್ಟಿ ಮೇಲ್ಭಾಗದಲ್ಲಿರುವ ವೀವ್ ಪಾಯಿಂಟ್ ಹಾಗೂ ಅತಿಥಿಗೃಹದ ಬಳಿಯ ಪ್ರಾಕೃತಿಕ ಸೊಬಗಂತೂ ಮೈಮರೆಸುತ್ತದೆ. ಹೀಗಾಗಿ ಕಳೆದ ವಾರದಿಂದ ಜೋಗಿಮಟ್ಟಿಗೆ ತೆರಳಿ ಸೌಂದರ್ಯದ ಸವಿ ಸವಿಯುವವರ ಸಂಖ್ಯೆ ಹೆಚ್ಚಾಗಿದೆ.

    ಜೋಗಿಮಟ್ಟಿಯ ನಿಸರ್ಗದಲ್ಲಿ ಪರಿಸರ ಪ್ರಿಯರು ಸೆಲ್ಫಿ ತೆಗೆದುಕೊಳ್ಳುವುದು, ಗ್ರೂಪ್ ಫೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಸಾಮಾನ್ಯ ಆಗಿವೆ. ಕೊರೆಯುವ ಚಳಿ, ಬಿರುಗಾಳಿ ಮತ್ತು ಕೈಗೆ ಸಿಗುವ ಮೋಡಗಳ ನಡುವೆ ತೇಲುವ ಜನ ಸಖತ್ ಏಂಜಾಯ್ ಮಾಡುತ್ತಿದ್ದಾರೆ.

    ಈ ಕಾಯ್ದಿಟ್ಟ ಅರಣ್ಯ ಪ್ರದೇಶ ಇತ್ತೀಚೆಗೆ ವನ್ಯಜೀವಗಳ ಧಾಮವಾಗಿಯೂ ಘೋಷಿಸಲ್ಪಟ್ಟಿದೆ. ಯಾಕಂದರೆ ಇಲ್ಲಿ ಕರಡಿ, ಜಿಂಕೆ, ಚಿರತೆಯಂಥ ಪ್ರಾಣಿಗಳಿವೆ. ನವಿಲು ಮತ್ತಿತರೆ ಪಕ್ಷಿಗಳಂತೂ ಲೆಕ್ಕವಿಲ್ಲದಷ್ಟಿವೆ. ಹೀಗಾಗಿ ನಿತ್ಯ ನೂರಾರು ಜನ ಈ ನಿಸರ್ಗ ಸೌಂದರ್ಯ ಸವಿಯಲು ಜೋಗಿಮಟ್ಟಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ಈ ಜೋಗಿಮಟ್ಟಿಗೆ ಇನ್ನಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿ ಅರಣ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಅನ್ನೋದು ವಕೀಲ ವಿರುಪಾಕ್ಷಿಯವರು ಅಭಿಪ್ರಾಯ ವ್ಯ್ತಪಡಿಸಿದ್ದಾರೆ.

    ಕೋಟೆನಾಡು ಚಿತ್ರದುರ್ಗದ ಜೋಗಿಮಟ್ಟಿ ಮಲೆನಾಡನ್ನೇ ನಾಚಿಸುವಂತೆ ಹಸಿರು ಸೀರೆಯನ್ನು ತೊಟ್ಟು ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದು, ಬರದನಾಡಿನ ಬಯಲು ಸೀಮೆಯಲ್ಲಿರುವ ಈ ಜೋಗಿಮಟ್ಟಿ ಹಸಿರುಸಿರಿಯಾಗಿ ಕಂಗೊಳಿಸುತ್ತಿರೋದು ದುರ್ಗದ ಜನರನ್ನು ಬೆರಗುಗೊಳಿಸಿದೆ.

  • ಚಿಕ್ಕಮಗಳೂರಲ್ಲಿ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ

    ಚಿಕ್ಕಮಗಳೂರಲ್ಲಿ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ

    ಚಿಕ್ಕಮಗಳೂರು: ಮೈಮೇಲೆ ಗಾಯವಾಗಿದ್ದ ಕಾಳಿಂಗ ಸರ್ಪಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯಕ್ಕೆ ಬಿಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವನಗಲ್ಲು ಗ್ರಾಮದ ರಿಚರ್ಡ್ ಲೋಬೋ ಅವರ ತೋಟದಲ್ಲಿ ಸುಮಾರು 15 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಂಡು ಬಂದಿದೆ. ಆದರೆ ಅದರ ಮೈಮೇಲೆ ಗಾಯವಾಗಿದ್ದರಿಂದ ತೆವಳಲಾಗದೆ ನಾಲ್ಕು ದಿನದಿಂದ ಒಂದೇ ಜಾಗದಲ್ಲಿ ನಿತ್ರಾಣಗೊಂಡು ಬಿದ್ದಿದೆ.

    ಸರ್ಪವನ್ನ ನೋಡಿದ ತೋಟದ ಮಾಲೀಕರು ಹಾಗೂ ಕೂಲಿ ಕಾರ್ಮಿಕರು ಗಾಬರಿಯಾಗಿದ್ದರು. ಬಳಿಕ ಉರಗ ತಜ್ಞ ನರೇಶ್ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ನೇಕ್ ನರೇಶ್, ಕಾಳಿಂಗನನ್ನ ಸೆರೆ ಹಿಡಿದು ಸ್ಥಳೀಯ ಪಶು ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

    ಕಾಳಿಂಗ ಸ್ವಲ್ಪ ಸುಧಾರಿಸಿದ ನಂತರ ಅದನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಬೃಹತ್ ಕಾಳಿಂಗನನ್ನ ಸೆರೆ ಹಿಡಿದ ಮೇಲೆ ತೋಟದ ಮಾಲೀಕ ಹಾಗೂ ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

  • ತೆರೆದ ಟ್ಯಾಂಕ್ ಗೆ ಬಿದ್ದ 12 ಅಡಿ ಉದ್ದದ ಹೆಬ್ಬಾವು!

    ತೆರೆದ ಟ್ಯಾಂಕ್ ಗೆ ಬಿದ್ದ 12 ಅಡಿ ಉದ್ದದ ಹೆಬ್ಬಾವು!

    ಕಾರವಾರ: ಭಾರೀ ಮಳೆಯ ಪರಿಣಾಮ ಅರಣ್ಯದಿಂದ ಹರಿದ ನೀರಿನೊಂದಿಗೆ 12 ಅಡಿ ಉದ್ದದ ಹೆಬ್ಬಾವೊಂದು ತೆರೆದ ನೀರಿನ ಟ್ಯಾಂಕ್ ನಲ್ಲಿ ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

    ನಗದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪೂರ್ಣಿಮಾ ಹೋಟೆಲಿನ ಹಿಂಭಾಗದಲ್ಲಿದ್ದ ಗುಡ್ಡದಲ್ಲಿ ಮಳೆಯ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಿದೆ. ಇದರೊಂದಿಗೆ ಹೆಬ್ಬಾವು ತೇಲಿಬಂದು ಇಲ್ಲಿನ ತೆರೆದ ನೀರಿನ ಟ್ಯಾಂಕ್ ಗೆ ಬಿದ್ದಿದೆ.

    ಇದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿಗಳು ಉರಗ ತಜ್ಞ ಪವನ್ ರವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪವನ್ ಸುಮಾರು ಹತ್ತು ಅಡಿಗಳಷ್ಟು ಆಳವಿದ್ದ ಟ್ಯಾಂಕ್ ನಿಂದ ಹೆಬ್ಬಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಮಳೆಗಾಲ ಹೆಚ್ಚಾದಾಗ ಆಹಾರ ಹುಡುಕಿ ಕಾಡಿನಿಂದ ಹೆಬ್ಬಾವುಗಳು ವಲಸೆ ಬರುವುದು ಸಾಮಾನ್ಯವಾಗಿದೆ. ಆದರೆ ಕೆಲವೊಮ್ಮೆ ಮಳೆ ನೀರಿಗೆ ಕೊಚ್ಚಿ ಮಾನವ ನಿರ್ಮಿತ ಬಾವಿಗಳು ಹಾಗೂ ಈ ರೀತಿಯ ತೆರೆದ ಟ್ಯಾಂಕ್ ಗಳಲ್ಲಿ ಬಿದ್ದು ಎಷ್ಟೋ ಹಾವುಗಳು ಆಹಾರವಿಲ್ಲದೆ ಸಾವನ್ನಪ್ಪುತ್ತವೆ ಎಂದು ಉರಗ ತಜ್ಞ ಪವನ್ ಹೇಳಿದ್ದಾರೆ.

  • ಕಾಡಿನಿಂದ ನಾಡಿಗೆ ಬಂದ 10 ಅಡಿ ಉದ್ದದ ಕಾಳಿಂಗ ಸರ್ಪ!

    ಕಾಡಿನಿಂದ ನಾಡಿಗೆ ಬಂದ 10 ಅಡಿ ಉದ್ದದ ಕಾಳಿಂಗ ಸರ್ಪ!

    ಮಂಗಳೂರು: ಕಾಡಿನಿಂದ ನಾಡಿಗೆ ಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಮರಳಿ ಕಾಡಿಗಟ್ಟಿದ ಪ್ರಸಂಗ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ನಡೆದಿದೆ.

    ಮಳೆಗಾಲದಲ್ಲಿ ಆಹಾರ ಹುಡುಕುತ್ತಾ ಕಾಳಿಂಗ ಸರ್ಪಗಳು ಜನವಸತಿ ಪ್ರದೇಶಕ್ಕೆ ಬರುತ್ತವೆ. ಭಾರೀ ವಿಷಯುಕ್ತ ಆಗಿರುವ ಈ ಹಾವುಗಳನ್ನು ಕಂಡ ಕೂಡಲೇ ಜನ ಹೆದರುತ್ತಾರೆ. ಆದರೆ ಮಿತ್ತಬಾಗಿಲು ಗ್ರಾಮದ ಪುನ್ಕೆದಡಿ ಎಂಬಲ್ಲಿ ಕಾಳಿಂಗವನ್ನು ಕಂಡ ಕೂಡಲೇ ಸ್ಥಳೀಯರು ಲಾಯ್ಲದ ಹಾವು ಹಿಡಿಯುವ ಸ್ನೇಕ್ ಅಶೋಕ್ ಅವರನ್ನು ಕರೆಸಿದ್ದಾರೆ.

    ವಿಷ ಉಗುಳುತ್ತಿದ್ದ ಕಾಳಿಂಗನನ್ನು ಚಾಣಾಕ್ಷ ರೀತಿಯಲ್ಲಿ ಹಿಡಿದು ಅರಣ್ಯಕ್ಕೆ ಒಯ್ಯುವ ಕೆಲಸ ಮಾಡಿದ್ದಾರೆ. ಸ್ನೇಕ್ ಅಶೋಕ್ ಈ ಹಿಂದೆ 20ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಹೀಗಾಗಿ ಇಲ್ಲಿ ಕಂಡು ಬಂದ ಹತ್ತು ಅಡಿ ಉದ್ದದ ಕಾಳಿಂಗನ ಹಿಡಿಯುವುದು ಕಷ್ಟವಾಗಲಿಲ್ಲ. ಕಾಳಿಂಗ ಘಟ ಸರ್ಪಗಳ ಪೈಕಿ ಇದು ಅತ್ಯಂತ ಅಪಾಯಕಾರಿ ಹಾವಾಗಿದೆ.

  • ಹಲವು ದಿನಗಳಿಂದ ಕಾಟ ಕೊಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ ಕೊನೆಗೂ ಸೆರೆ!

    ಹಲವು ದಿನಗಳಿಂದ ಕಾಟ ಕೊಡುತ್ತಿದ್ದ 15 ಅಡಿ ಉದ್ದದ ಕಾಳಿಂಗ ಸರ್ಪ ಕೊನೆಗೂ ಸೆರೆ!

    ಉಡುಪಿ: ಹಲವು ದಿನಗಳಿಂದ ಕಾಟ ಕೊಡುತ್ತಿದ್ದ ಕಾಳಿಂಗನನ್ನು ಕೊನೆಗೂ ಸೆರೆಹಿಡಿಯಲಾಗಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ ತಾಲೂಕಾಗಿರುವ ಕಾರ್ಕಳದಲ್ಲಿ ಭಾರೀ ಗಾತ್ರದ ಕಾಳಿಂಗ ಸರ್ಪ ಗ್ರಾಮಸ್ಥರ ನಿದ್ದೆಗೆಡಿಸಿತ್ತು.

    ಈ ಅಪರೂಪದ ಕಾಳಿಂಗಸರ್ಪ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದಲ್ಲಿ ಹಲವು ದಿನಗಳಿಂದ ಅಡ್ಡಾಡುತ್ತಿತ್ತು. ಆಹಾರ ಅರಸಿಕೊಂಡು ಜನವಸತಿ ಪ್ರದೇಶಕ್ಕೆ ಬಂದ ಭಾರೀ ಗಾತ್ರದ ಈ ಕಾಳಿಂಗ ಸರ್ಪವನ್ನು ಕೊನೆಗೂ ಸಂರಕ್ಷಿಸಲಾಗಿದೆ.

    ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಪದೇ ಪದೇ ಸರ್ಪ ಕಾಣಿಸಿಕೊಳ್ಳುತ್ತಿದ್ದು, ಆತಂಕಗೊಂಡ ಜನರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಕೋಳಿ ಗೂಡಿಗೆ ಬರುತ್ತಿದ್ದ ಕಾಳಿಂಗ ಸರ್ಪವನ್ನು ಉರಗ ತಜ್ಞ ಅನಿಲ್ ಪ್ರಭು ಅವರ ಸಹಾಯ ಪಡೆದು ಸೆರೆ ಹಿಡಿಯಲಾಗಿದೆ.

    ಸುಮಾರು 12 ಅಡಿ ಉದ್ದ 15 ಕೆ.ಜಿ ತೂಗುವ ಈ ಹಾವನ್ನು ಕುದುರೆಮುಖ ಅಭಯಾರಣ್ಯಕ್ಕೆ ಮತ್ತೆ ಬಿಡಲಾಗಿದೆ. ವಿಷಕಾರಿಯಾದ ಈ ಹಾವು ಮಳೆಗಾಲದಲ್ಲಿ ಹೆಚ್ಚಾಗಿ ಆಹಾರ ಅರಸಿಕೊಂಡು ನಾಡಿನ ಕಡೆ ಬರುತ್ತದೆ. ಈ ಕಾಳಿಂಗ ಸರ್ಪ ಕೂಡಾ ಆಹಾರವಿಲ್ಲದೆ ಸೊರಗಿದಂತೆ ಕಾಣಿಸುತ್ತಿದೆ ಎಂದು ಉರಗ ತಜ್ಞ ಪ್ರಭು ಹೇಳಿದ್ದಾರೆ.

    ಈ ಗಾತ್ರದ ಕಾಳಿಂಗ ಸರ್ಪವು ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಅಪರೂಪದ ಸರೀಸೃಪವಾಗಿದೆ. ಕಾಳಿಂಗ ಸರ್ಪದ ರಕ್ಷಣೆಯೊಂದಿಗೆ ಕಡ್ತಲ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

  • ಪೆರ್ಪಣ ನೋಡಿ ಚಿರತೆ ಎಂದು ಬೆಚ್ಚಿಬಿದ್ದ ಗ್ರಾಮಸ್ಥರು!

    ಪೆರ್ಪಣ ನೋಡಿ ಚಿರತೆ ಎಂದು ಬೆಚ್ಚಿಬಿದ್ದ ಗ್ರಾಮಸ್ಥರು!

    ಮಡಿಕೇರಿ: ಚಿರತೆ ಮರಿಯನ್ನೇ ಹೋಲುವ ಅಪರೂಪದ ವನ್ಯಜೀವಿ ಪೆರ್ಪಣ ಅಥವಾ ಲಿಪರ್ಡ್ ಕ್ಯಾಟ್ ಅನ್ನು ಕಂಡು ಚಿರತೆ ಎಂದು ಭಾವಿಸಿ ಗ್ರಾಮಸ್ಥರು ಬೆಚ್ಚಿ ಬಿದ್ದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಚೆರಿಯಪರಂಬು ಗ್ರಾಮದ ಪರವಂಡ ಶಂಶು ಮನೆಯ ಹಿತ್ತಲ ತೋಟದಲ್ಲಿ 2 ಲಿಪರ್ಡ್ ಕ್ಯಾಟ್ ಮರಿಗಳು ಪತ್ತೆಯಾಗಿವೆ. ಚಿರತೆ ಮರಿಯಂತೆಯೇ ಇರುವ ಲಿಪರ್ಡ್ ಕ್ಯಾಟ್ ಚಿರತೆಯೇ ಎಂದು ಭಾವಿಸಿದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಅಲ್ಲದೇ ಅವುಗಳ ವಿಡಿಯೋ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದರು.

    ವಿಡಿಯೋ ಪರಿಶೀಲಿಸಿದ ಅರಣ್ಯ ಇಲಾಖೆ ಅವು ಲಿಪರ್ಡ್ ಕ್ಯಾಟ್ ಗಳು ಎಂದು ದೃಢಪಡಿಸಿದ್ದರು. ಬಳಿಕ ಗ್ರಾಮಸ್ಥರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಇಂದು ಕೂಡ ಲಿಪರ್ಡ್ ಕ್ಯಾಟ್ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲಾ ಸೇರಿ ಆ 2 ಲಿಪರ್ಡ್ ಕ್ಯಾಟ್ ಗಳನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಅವುಗಳನ್ನು ಸಮೀಪದ ರಕ್ಷಿತಾರಣ್ಯಕ್ಕೆ ಬಿಟ್ಟಿದೆ.

  • ದಣಿದಿದ್ದ ನಾಗರಹಾವಿಗೆ ನೀರುಣಿಸಿದ ಉರಗ ತಜ್ಞ

    ದಣಿದಿದ್ದ ನಾಗರಹಾವಿಗೆ ನೀರುಣಿಸಿದ ಉರಗ ತಜ್ಞ

    ಬೆಂಗಳೂರು: ಬಿಸಿಲಿನ ಬೇಗೆಗೆ ನೀರಿಲ್ಲದೆ ಬಾಯಾರಿಕೆಯಿಂದ ದಣಿದಿದ್ದ ನಾಗರಹಾವಿಗೆ ನೀರುಣಿಸಿರುವ ಅಪರೂಪದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಹಾರೋಕ್ಯಾತನಹಳ್ಳಿ ಬಳಿ ನಡೆದಿದೆ.

    ವಿಪರೀತ ಬಿಸಿಲಿನಿಂದಾಗಿ ದಣಿದು ಮಲಗಿದ್ದಲ್ಲೇ ಮಲಗಿದ್ದ ನಾಗರಹಾವಿಗೆ ಎಷ್ಟೇ ಶಬ್ಧ ಮಾಡಿದರೂ ಹಾಗೆಯೇ ಮಲಗಿತ್ತು. ಇದನ್ನು ಸ್ಥಳೀಯರು ಗಮನಿಸಿದ್ದು, ಬಳಿಕ ಉರಗ ರಕ್ಷಕ ಲೋಕೇಶ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ಲೋಕೇಶ್ ಸ್ಥಳಕ್ಕೆ ಆಗಮಿಸಿ ಬಾಟಲ್ ಮೂಲಕ ನಾಗರಹಾವಿಗೆ ನೀರನ್ನು ಕುಡಿಸಿದ್ದಾರೆ. ಬಳಿಕ ಚೇತರಿಸಿಕೊಂಡ ನಾಗಪ್ಪ ಅತ್ತಿಂದಿತ್ತ ಓಡಾಡಿದ್ದಾನೆ. ಕೂಡಲೇ ಉರಗ ರಕ್ಷಕ ಲೋಕೇಶ್ ನಾಗರಹಾವನ್ನ ಹಿಡಿದು, ಅರಣ್ಯಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈ ಎಲ್ಲಾ ದೃಶ್ಯಗಳನ್ನ ಕಂಡ ಜನತೆ ಮೂಕವಿಸ್ಮಿತರಾದರು.

  • ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು

    ಬೆಂಗ್ಳೂರಲ್ಲಿ ಪತ್ತೆ ಆಯ್ತು ಮರಿ ಬಿಳಿ ನಾಗರಹಾವು

    ಬೆಂಗಳೂರು: ನಗರದ ಮತ್ತಿಕೆರೆಯಲ್ಲಿ ಅಪರೂಪದ ಬಿಳಿ ನಾಗರಹಾವಿನ ಮರಿ ಪತ್ತೆಯಾಗಿದೆ. ಬೆಂಗಳೂರಿನ ಮಟ್ಟಿಗೆ ಇದು ಮೊದಲ ಬಿಳಿ ನಾಗರ ಅಂತ ಹೇಳಲಾಗುತ್ತಿದೆ.

    ಹಾವು ಮತ್ತಿಕೆರೆ ಮನೆಯೊಂದರ ಕಾಂಪೌಂಡ್ ಪಕ್ಕದಲ್ಲಿ ಕಾಣಿಸಿಕೊಂಡಿತ್ತು. ಸಂಪೂರ್ಣ ದೇಹ ಬೆಳ್ಳಗಿರುವ ನಾಗರ ಹಾವಿನ ಕಣ್ಣು ಕೆಂಪಾಗಿದೆ. ಹಿಂದೆ ಪಿಂಕ್ ಕಲರ್ ನ ನಾಗರ ನಾಮ ಕಾಣಿಸುತ್ತದೆ. ಬಿಬಿಎಂಪಿ ವನ್ಯಜೀವಿ ಘಟಕದ ಸ್ವಯಂ ಸೇವಕ ರಾಜೇಶ್ ಈ ಬಿಳಿ ನಾಗರಹಾವಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ.

    ರಕ್ಷಣೆ ಮಾಡಿದ ಬಳಿಕ ಹಾವಿನ ಮರಿಯನ್ನ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಬೆಂಗಳೂರಲ್ಲಿ ಇಂತಹ ಅಪರೂಪದ ಹಾವು ಪತ್ತೆಯಾಗುತ್ತಿದೆ ಅಂದರೆ ನಮ್ಮ ಪರಿಸರ ಇಂತಹ ಜೀವಿಗಳಿಗೆ ಅನುಕೂಲಕರವಾಗಿದೆ. ಹಾಗಾಗಿ ಬೆಂಗಳೂರಿನಲ್ಲಿ ಪರಿಸರ ಉಳಿದರೆ ಇಂತಹ ಇನ್ನಷ್ಟು ಅದ್ಭುತಗಳನ್ನ ನಾವು ನೋಡಬಹುದು ಅನ್ನೋದು ರಾಜೇಶ್ ಅವರ ಅಭಿಪ್ರಾಯವಾಗಿದೆ.