Tag: forest

  • ಕಲ್ಲು ಗಣಿಗಾರಿಕೆಗೆ ಬೆಚ್ಚಿಬಿದ್ದು ನಾಡಿಗೆ ದಾಂಗುಡಿಯಿಟ್ಟ ರಾಷ್ಟ್ರಪಕ್ಷಿಗಳು

    ಕಲ್ಲು ಗಣಿಗಾರಿಕೆಗೆ ಬೆಚ್ಚಿಬಿದ್ದು ನಾಡಿಗೆ ದಾಂಗುಡಿಯಿಟ್ಟ ರಾಷ್ಟ್ರಪಕ್ಷಿಗಳು

    – ಸೂಕ್ತ ರಕ್ಷಣೆಗೆ ಕೋಲಾರ ಜನರ ಪಟ್ಟು

    ಕೋಲಾರ: ನಮ್ಮ ರಾಷ್ಟ್ರಪಕ್ಷಿಯನ್ನ ಚಿತ್ರಗಳಲ್ಲಷ್ಟೆ ಕಾಣಬೇಕೆನ್ನುವಷ್ಟರ ಮಟ್ಟಿಗೆ ಅವುಗಳ ಸಂತತಿ ಕಡಿಮೆಯಾಗಿದೆ. ಆದ್ರೆ ಬಯಲು ಸೀಮೆಯಲ್ಲಿ ನೀರಿಲ್ಲದೆ ಬೆಳೆಗಳು ಒಣಗಿದ್ರೂ ರೈತರು ಪಕ್ಷಿಗಳನ್ನು ಉಳಿಸುತ್ತಿದ್ದಾರೆ. ಹಿಂಡು ಹಿಂಡಾಗಿ ಹಲವು ವರ್ಷಗಳಿಂದ ನೆಲೆ ನಿಂತಿರುವ ಪ್ರೀತಿಯ ಪಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅನ್ನೋ ಒತ್ತಾಯ ಕೇಳಿಬರುತ್ತಿದೆ.

    ಕೋಲಾರ, ಬಂಗಾರಪೇಟೆ, ಮಾಲೂರು ತಾಲೂಕಿನ ಹಲವು ಗ್ರಾಮಗಳಲ್ಲಿ ರಾಷ್ಟ್ರೀಯ ಪಕ್ಷಿಗಳು ಹಿಂಡು ಹಿಂಡಾಗಿ ಹುಳ-ಹುಪ್ಪಟೆಗಳನ್ನ ತಿನ್ನುತ್ತಾ, ಕಾಳು-ಕಡ್ಡಿಯನ್ನ ಆರಿಸುತ್ತಾ, ಓಡಾಡುತ್ತಾ ಹಲವು ವರ್ಷಗಳಿಂದ ನೂರಾರು ನವಿಲುಗಳು ಇಲ್ಲಿ ನೆಲೆ ನಿಂತಿವೆ. ಇದಕ್ಕೂ ಮೊದಲು ಈ ನವಿಲುಗಳು ಟೇಕಲ್ ಸುತ್ತ ಮುತ್ತಲ ಬೆಟ್ಟಗಳಲ್ಲಿ ವಾಸವಾಗಿದ್ದವು.

    ಆದ್ರೆ ಇತ್ತೀಚೆಗೆ ಬೆಟ್ಟಗಳಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಾಗಿರುವುದರಿಂದ ಹೊಲ, ಗದ್ದೆ, ಪೊದೆಗಳಲ್ಲಿ ತಮ್ಮ ಬದುಕು ಸವೆಸುತ್ತಿವೆ. ಸದ್ಯ ಅವುಗಳಿಗೆ ಆಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇವುಗಳಿಗೆ ಅರಣ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಬೇಕು ಅನ್ನೋದು ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ ಅಂತ ಪೊಲೀಸ್ ಇಲಾಖೆ ಉದ್ಯೋಗಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

    ದನ-ಕರುಗಳ ಜೊತೆಯಲ್ಲೇ ಕಾಲ ಕಳೆಯುವ ನವಿಲುಗಳು ಗ್ರಾಮದ ಜನರಿಗಂತೂ ತಮ್ಮ ಮನೆಯ ಪಕ್ಷಿ ಎನ್ನುವಂತಾಗಿದೆ. ಇವು ಎಲ್ಲಿ ಯಾರ ಹೊಲದಲ್ಲಿ ಹೋದ್ರು, ಯಾರೂ ಅವುಗಳಿಗೆ ತೊಂದರೆ ಮಾಡೋದಿಲ್ಲ. ಅವುಗಳ ರಕ್ಷಣೆಗೆ ಸದಾಕಾಲ ಸಿದ್ಧರಾಗಿರುತ್ತಾರೆ. ಹಾಗೊಮ್ಮ ಹೀಗೊಮ್ಮೆ ನವಿಲುಗಳನ್ನು ಬೇಟೆಯಾಡಲು ಬರುವ ಬೇಟೆಗಾರರಿಗೆ ಗ್ರಾಮಸ್ಥರು ಕಟ್ಟಿಹಾಕಿ ಗೂಸಾ ನೀಡಿ ಎಚ್ಚರಿಕೆ ಕೂಡ ನೀಡಿದ್ದಾರೆ. ಮಾತ್ರವಲ್ಲ ಇವನ್ನ ಬೇಟೆಯಾಡಲು ಬಂದವರನ್ನ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆಗಳು ಕೂಡಾ ಇವೆ. ಹಾಗಾಗಿ ಇಲ್ಲಿ ನವಿಲುಗಳ ಬೇಟೆಗೆಂದು ಬರುವ ಬೇಟೆಗಾರರಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸರಿಗಿಂತ ಗ್ರಾಮಸ್ಥರ ಭಯವೇ ಹೆಚ್ಚಾಗಿದೆ. ಬರ ಎದುರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಕೂಡ ಕಾಡು ಪ್ರಾಣಿಗಳಿಗಾಗಿ ನೀರಿನ ವ್ಯವಸ್ಥೆ ಹಾಗೂ ಆಹಾರದ ಪರ್ಯಾಯ ವ್ಯವಸ್ಥೆಗಳನ್ನ ಮಾಡುತ್ತಿದೆ ಅಂತ ಅರಣ್ಯಾಧಿಕಾರಿ ಚಕ್ರಪಾಣಿ ಹೇಳಿದ್ದಾರೆ.

    ಒಟ್ಟಿನಲ್ಲಿ ರಾಷ್ಟ್ರಪಕ್ಷಿ ನವಿಲಿಗೆ ರಕ್ಷಣೆ ಇಲ್ಲದಂತಾಗಿ, ಅನಾಥವಾಗಿ ತುತ್ತು ಅನ್ನ-ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವನತಿ ಅಂಚಿನಲ್ಲಿರುವ ನವಿಲುಗಳ ಸಂತತಿ ಉಳಿಸುವ ಜೊತೆಗೆ ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಹಾಗೂ ಸರ್ಕಾರ ಕ್ರಮ ತೆಗೆದುಕೊಂಡು ನವಿಲುಗಳು ಗರಿಬಿಚ್ಚಿ ಕುಣಿಯುವಂತೆ ಮಾಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಲಿ ಹಿಡಿಯಲು ಕಾರ್ಯಾಚರಣೆಗೆ ಬಂದಿದ್ದ ಆನೆ ಕಾಡಿನೊಳಗೆ ನಾಪತ್ತೆ

    ಹುಲಿ ಹಿಡಿಯಲು ಕಾರ್ಯಾಚರಣೆಗೆ ಬಂದಿದ್ದ ಆನೆ ಕಾಡಿನೊಳಗೆ ನಾಪತ್ತೆ

    ಮೈಸೂರು: ಹುಲಿ ಹಿಡಿಯಲು ಕಾಯಾಚರಣೆಗೆ ಬಂದಿದ್ದ ಆನೆಯೆ ಕಾಡಿನೊಳಗೆ ನಾಪತ್ತೆಯಾಗಿದೆ.

    ಜಿಲ್ಲೆಯ ಹೆಚ್.ಡಿ.ಕೋಟೆ ಬಳಿಯ ಅಂತರಸಂತೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಆನೆ ನಾಪತ್ತೆಯಾಗಿದೆ. ಅಂತರಸಂತೆ ಬಳಿ ಕಾಣಿಸಿಕೊಂಡಿದ್ದ ಹುಲಿ, ಗ್ರಾಮದ ಹಸುಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

    ಅರಣ್ಯ ಇಲಾಖೆಯು ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿದ್ದರು. ಕಾರ್ಯಾಚರಣೆಗಾಗಿ ದಸರಾ ಆನೆ ಅರ್ಜುನ ಜೊತೆ ನಾಲ್ಕು ಆನೆಗಳು ಬಂದಿದ್ದವು. ಈ ನಾಲ್ಕು ಆನೆಗಳಲ್ಲಿ ಅಶೋಕ ಎಂಬ ಆನೆ ಕಾರ್ಯಾಚರಣೆ ವೇಳೆ ಪಟಾಕಿ ಶಬ್ದಕ್ಕೆ ಬೆದರಿ ಮಾವುತನನ್ನು ಕೆಳಗೆ ಬೀಳಿಸಿ ಕಾಡಿನೊಳಗೆ ನಾಪತ್ತೆಯಾಗಿದೆ.

    ಸಣ್ಣಪುಟ್ಟ ಗಾಯಗಳಿಂದ ಮಾವುತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈಗ ಅರಣ್ಯ ಇಲಾಖೆಯೂ ಹುಲಿ ಕಾರ್ಯಾಚರಣೆ ನಿಲ್ಲಿಸಿ ಕಾಡಿನೊಳಗೆ ತಪ್ಪಿಸಿ ಕೊಂಡಿರುವ ಅಶೋಕ ಆನೆ ಹುಡುಕುವ ಕಾರ್ಯಚರಣೆ ಪ್ರಾರಂಭಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಡಿನಲ್ಲಿ ಸೈನಿಕರನ್ನು ದಾರಿ ತಪ್ಪಿಸಲು ನಕ್ಸಲರ ಪ್ಲಾನ್!

    ಕಾಡಿನಲ್ಲಿ ಸೈನಿಕರನ್ನು ದಾರಿ ತಪ್ಪಿಸಲು ನಕ್ಸಲರ ಪ್ಲಾನ್!

    ರಾಯಪುರ: ಛತ್ತಿಸ್‍ಗಢದ ಕಾಡಿನಲ್ಲಿ ಸೈನಿಕರ ದಾಳಿಗೆ ತತ್ತರಿಸಿ ಹೋಗಿರುವ ನಕ್ಸಲಿಯರು ಈಗ ನಕಲಿ ಬಂದೂಕು ಹಾಗೂ ಗೊಂಬೆ ಬಳಸಿ ಭದ್ರತಾ ಪಡೆಯ ದಾರಿಯನ್ನು ತಪ್ಪಿಸಲು ಮುಂದಾಗಿದ್ದಾರೆ.

    ಛತ್ತಿಸ್‍ಗಢದ ಸುತ್ತಮುತ್ತ ನಕ್ಸಲಿಯರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಇಲ್ಲಿನ ಸುಕ್ಮಾ ಜಿಲ್ಲೆಯನ್ನು ನಕ್ಸಲ್ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಈಗ ಈ ಪ್ರದೇಶದ ಜನರಲ್ಲಿ ಭಯ ಹುಟ್ಟುಸಿ, ಭದ್ರತಾ ಸಿಬ್ಬಂದಿಯ ದಾರಿ ತಪ್ಪಿಸಲು ನಕ್ಸಲಿಯರು ಹೊಸ ಪ್ಲಾನ್ ಮಾಡಿದ್ದಾರೆ.

    ಕಾಡಿನಲ್ಲಿ ಮರಗಳ ಹಿಂದೆ ಮನುಷ್ಯರು ನಿಂತಿರುವ ಹಾಗೆ ಬೆದರು ಗೊಂಬೆಗಳನ್ನು ನಿಲ್ಲಿಸಿ ಅದರ ಕೈಯಲ್ಲಿ ನಕಲಿ ಬಂದೂಕನ್ನು ಇಟ್ಟು ಮರಗಳಿಗೆ ಕಟ್ಟಿದ್ದಾರೆ. ಈ ದಾರಿಯಲ್ಲಿ ಜನರು ಓಡಾಡುವವಾಗ ಗೊಂಬೆಗಳನ್ನು ಕಂಡು ಮರದ ಹಿಂದೆ ನಕ್ಸಲಿಯರೇ ನಿಂತಿದ್ದಾರೆ ಎಂದು ಭಯಪಡುತ್ತಿದ್ದಾರೆ.

    ಈ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಕಾಡಿನಲ್ಲಿ ಇರುವುದು ನಕ್ಸಲಿಯರಲ್ಲ, ಬದಲಿಗೆ ಜನರನ್ನು ಹೆದರಿಸಲು ನಕ್ಸಲಿಯರು ಮಾಡಿರುವ ಹೊಸ ಪ್ಲಾನ್ ಎನ್ನುವುದು ಬೆಳಕಿಗೆ ಬಂದಿದೆ.

    ಈ ಪ್ರದೇಶದಲ್ಲಿ ಒಟ್ಟು ಮೂರು ನಕಲಿ ಬಂದೂಕು ಹಿಡಿದು ನಿಂತ ಬೆದರು ಗೊಂಬೆಗಳನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಜನರಲ್ಲಿ ನಕ್ಸಲಿಯರ ಮೇಲೆ ಇರುವ ಭಯವನ್ನು ಹೆಚ್ಚಿಸಲು ಹಾಗೂ ಭದ್ರತಾ ಪಡೆಯ ದಾರಿ ತಪ್ಪಿಸಲು ನಕ್ಸಲಿಯರು ಈ ರೀತಿ ತಂತ್ರ ಮಾಡಿದ್ದಾರೆ ಎಂದು ಭದ್ರತಾ ಪಡೆಯ ಅಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಮ್ಮನ ಬಿಟ್ಟು ಹೊರಡೋಕೆ ಕಂದಮ್ಮನ ಸಿಟ್ಟು- ಜನರನ್ನ ಅಟ್ಟಾಡಿಸಿದ ಮರಿಯಾನೆ

    ಅಮ್ಮನ ಬಿಟ್ಟು ಹೊರಡೋಕೆ ಕಂದಮ್ಮನ ಸಿಟ್ಟು- ಜನರನ್ನ ಅಟ್ಟಾಡಿಸಿದ ಮರಿಯಾನೆ

    ಹಾಸನ: ನಾಲ್ಕೈದು ದಿನಗಳ ಕಾಲ ಕೆಸರಿನ ಸಿಲುಕಿ ಮೂಕ ವೇದನೆ ಅನುಭವಿಸಿದ್ದ ಹೆಣ್ಣಾನೆಯೊಂದು ಅರಣ್ಯ ಇಲಾಖೆಯ ಕಾರ್ಯಾಚರಣೆಯಿಂದಾಗಿ ಸಾವಿನ ದವಡೆಯಿಂದ ಪಾರಾಗಿ ಬಂದ್ರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಗೂ ಸಾವಿನ ಮನೆ ಸೇರಿದೆ. ಅಮ್ಮನಿಗಾಗಿ ಅದರ ಸುತ್ತಲೂ ಪರಿಪರಿಯಾಗಿ ಹಲುಬಿದ, ಬಿಟ್ಟೋಗ್ಬೇಡಮ್ಮ ಎಂದು ಘೀಳಿಟ್ಟು ನರಳಾಡಿದ ಮರಿಯಾನೆ ಈಗ ತಬ್ಬಲಿಯಾಗಿದೆ. ಮರಿಯಾನೆ ತನ್ನದೇ ಭಾಷೆಯಲ್ಲಿ ಅಮ್ಮಾ, ಅಮ್ಮಾ ಅಂತ ಒಂದೇ ಸಮನೆ ಗೋಳಾಡುತ್ತಿರುವ ದೃಶ್ಯ ಮನ ಕಲಕುವಂತಿದೆ.

    ಸಕಲೇಶಪುರ ತಾಲೂಕು ಕಡದರಹಳ್ಳಿ ಬಳಿಯ ಕಾಫಿ ತೋಟದ ಗುಂಡಿಯಲ್ಲಿ ಹೂತು, ಪ್ರಯಾಸದಿಂದ ಹೊರ ಬಂದಿದ್ದ 25 ವರ್ಷದ ಹೆಣ್ಣಾನೆಯ ಬದುಕುವ ಆಸೆ ಶಾಶ್ವತವಾಗಿ ಅದೇ ಮಣ್ಣು ಸೇರಿದೆ. ವಾರದ ಹಿಂದೆ ನೀರಿನ ದಾಹ ನೀಗಿಸಿಕೊಳ್ಳಲು ಕಾಲು ಮುರಿತದ ನೋವಿನ ನಡುವೆಯೂ ಕರುಳ ಕುಡಿಯೊಂದಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆಯುತ್ತಿದ್ದ ಹೆಣ್ಣಾನೆ, ಗುಂಡಿಯಲ್ಲಿ ಕಂಡ ನೀರು ಕುಡಿಯಲು ಹೋಗಿ ಅಲ್ಲೇ ಹೂತುಕೊಂಡಿತ್ತು. ಬರೋಬ್ಬರಿ ನಾಲ್ಕೈದು ದಿನಗಳ ಸತತ ಕಾರ್ಯಾಚರಣೆ ನಂತರ ತುಂಬಾ ಪ್ರಯಾಸ ಪಟ್ಟು ಅರಣ್ಯ ಇಲಾಖೆಯವರು 2 ಪಳಗಿದ ಆನೆ ಮತ್ತು ಜೆಸಿಬಿ ಸಹಾಯದಿಂದ ಬಹುತೇಕ ಮುಳುಗಿದ್ದ ಆನೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

    ಪೆಟ್ಟಿನ ಮೇಲೆ ಮತ್ತೊಂದು ಪೆಟ್ಟು ಎಂಬಂತೆ ಆನೆ ಕಾಲು ಮುರಿದ ಭಾಗ ಬಹುತೇಕ ಊದುಕೊಂಡಿದ್ದರಿಂದ ಕೆಸರು ಗುಂಡಿಯಿಂದ ಮೇಲೆತ್ತಿದರೂ ನಿಲ್ಲಲಾಗದ ಸಂಕಷ್ಟ ಸ್ಥಿತಿ ಆನೆಯದಾಗಿತ್ತು. ರಕ್ಷಣೆ ಮಾಡಿದ ಆನೆಗೆ ಕಳೆದ 2 ದಿನಗಳಿಂದ ಚಿಕಿತ್ಸೆ ನೀಡಲಾಯಿತಾದ್ರೂ, ಗ್ಯಾಂಗ್ರಿನ್ ನಿಂದಾಗಿ ಗುರುವಾರ ಬೆಳಗ್ಗೆ ಹೆಣ್ಣಾನೆ ಮೃತಪಟ್ಟಿದೆ. ನೋವಿನಿಂದ ನರಳುತ್ತಿದ್ದ ಆನೆ ನೋವಿನಲ್ಲೇ ಕೊನೆಯುಸಿರೆಳೆದಿದೆ. ಸ್ಥಳದಲ್ಲೇ ಮೃತಪಟ್ಟ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಕಳೇಬರವನ್ನು ಅಲ್ಲೇ ದಹನ ಮಾಡಲಾಯಿತು. ಮರಿಯಾನೆಯನ್ನು ಶಿವಮೊಗ್ಗದ ಸಕ್ರೇಬೈಲು ಆನೆ ಶಿಬಿರಕ್ಕೆ ಬಿಡಲು ನಿರ್ಧರಿಸಲಾಗಿದೆ.

    ಕೆಸರಿಂದ ಮೇಲೆ ಬಂದ ನಂತರ ಅಬ್ಬಾ! ಹೆತ್ತಮ್ಮ ನನ್ನ ಬಿಟ್ಟು ಹೋಗಲಿಲ್ಲ ಎಂಬ ಮರಿಯಾನೆಯ ಕನಸು ನುಚ್ಚು ನೂರಾಗಿದೆ. ತಾಯಿ ಇನ್ನಿಲ್ಲ ಅನ್ನೋ ನೋವಿನ ಸಂಕಟದಿಂದ ಮರಿಯಾನೆ ಮೌನಕ್ಕೆ ಶರಣಾಗಿದೆ. ಆದರೂ ಹೇಗಾದರೂ ನನ್ನಮ್ಮ ಬದುಕಿ ಬಂದಾಳು ಎನ್ನುವ ಕೊನೆ ಆಸೆಯಿಂದ ಅಮ್ಮನ ಹೊರತಾಗಿ ಬೇರೇನೂ ಗೊತ್ತಿಲ್ಲದ ಮರಿಯಾನೆ ಘೀಳಿಡುತ್ತಿದ್ದ ದೃಶ್ಯ ನೆರೆದಿದ್ದ ಮನುಷ್ಯರ ಮನಸ್ಸು ಭಾರವಾಗುವಂತೆ ಮಾಡಿತು.

    ತಬ್ಬಲಿ ಮರಿ ಎಷ್ಟೇ ಆಲಾಪಿಸಿದರೂ, ಇನ್ನೆಂದೂ ಮಗನ ಆಕ್ರಂದನವನ್ನು ತಾಯಿ ಕೇಳಿಸಿಕೊಳ್ಳದು. ಆದರೆ ಹೆಣ್ಣಾನೆ ಸಾವಿಗೆ ಅರಣ್ಯ ಇಲಾಖೆ ಹಾಗೂ ಸರ್ಕಾದ ದಿವ್ಯ ನಿರ್ಲಕ್ಷ್ಯವೇ ಕಾರಣ ಎನ್ನುವುದು ಸ್ಥಳೀಯರ ಆರೋಪವಾಗಿದೆ. ಆನೆ ಅಪಾಯದಲ್ಲಿರುವ ಸುದ್ದಿ ತಿಳಿದ ಕೂಡಲೇ ಅರಣ್ಯಾಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದರೆ ನರಳುತ್ತಿದ್ದ ಆನೆಯನ್ನು ಬದುಕಿಸಬಹುದಿತ್ತು. ಆದರೆ ಈ ವಿಷಯದಲ್ಲಿ ಸಂಬಂಧಪಟ್ಟವರ ವಿಳಂಬದಿಂದಾಗಿ ಆನೆ ಅಸು ನೀಗಿದೆ. ಬದುಕುಳಿದಿರುವ ಮರಿಯಾನೆಯನ್ನು ನಮಗೆ ದತ್ತುಕೊಟ್ಟು ಬಿಡಿ. ಇಲ್ಲವೇ ಆಲೂರು ತಾಲೂಕು ನಾಗಾವರ ಬಳಿಯ ನೂತನ ಆನೆ ಶಿಬಿರದಲ್ಲಿ ಆರೈಕೆ ಮಾಡಿ ಎಂದು ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕಮಗ್ಳೂರಿನಲ್ಲಿ ಮಗುವಿನಂತೆ ವರ್ತಿಸುತ್ತಿದೆ ಕಾಡಾನೆ

    ಚಿಕ್ಕಮಗ್ಳೂರಿನಲ್ಲಿ ಮಗುವಿನಂತೆ ವರ್ತಿಸುತ್ತಿದೆ ಕಾಡಾನೆ

    ಚಿಕ್ಕಮಗಳೂರು: ಕಳೆದೊಂದು ವಾರದಿಂದ ರಾಜ್ಯಾದ್ಯಂತ ಅಲ್ಲಲ್ಲೇ ಕಾಡಾನೆಗಳ ಹಿಂಡು ನಿರಂತರ ದಾಳಿ ಮಾಡ್ತಿವೆ. ಆದರೆ ಕಾಫಿನಾಡಿನಲ್ಲಿರುವ ಇಂತಹ ಗಜರಾಜ ಇದ್ದರೆ ಅಧಿಕಾರಿಗಳಿಗೆ ತಲೆನೋವಿಲ್ಲ, ಸ್ಥಳಿಯರಿಗೆ ಆತಂಕವಿಲ್ಲ, ಬೆಳೆಗಳು ಹಾಳಾಗೋದಿಲ್ಲ. ನೋಡೋಕೆ ದೈತ್ಯಾಕಾರದ ಈ ಕಾಡಾನೆ ಮಗುವಿನಂತೆ ವರ್ತಿಸುತ್ತಿದ್ದು ಅಧಿಕಾರಿಗಳ ದೃಷ್ಠಿಯಲ್ಲಿ ಗುಡ್ ಎಲಿಫೆಂಟ್ ಆಗಿದೆ.

    ಚಿಕ್ಕಮಗಳೂರಿನ ಮುತ್ತೋಡಿ ದಟ್ಟಾರಣ್ಯದಲ್ಲಿ ವಾಸ ಮಾಡುತ್ತಿರುವ ಈ ಕಾಡಾಣೆ ತಾನಾಯ್ತ, ತನ್ನ ಆಹಾರವಾಯ್ತೆಂದು ಬದುಕುತ್ತಿದೆ. ಈ ಆನೆಯ ಪಕ್ಕದಲ್ಲೇ ಜನ ಹಾಗೂ ವಾಹನಗಳು ಓಡಾಡಿದರು ಇದು ಏನೂ ಮಾಡುವುದಿಲ್ಲವಂತೆ.

    ಮುತ್ತೋಡಿಯ ಅರಣ್ಯದ ಮಧ್ಯ ಭಾಗದಲ್ಲಿರೋ ಕಳ್ಳ ಭೇಟಿ ನಿಗ್ರಹ ದಳದ ವಸತಿ ಹಾಗೂ 1924ರಲ್ಲಿ ಬ್ರಿಟಿಷರು ನಿರ್ಮಿಸಿದ ಅತಿಥಿ ಗೃಹದ ಪಕ್ಕದಲ್ಲೇ ನಿಂತು ಗಂಟೆಗಟ್ಟಲೇ ಪೋಸ್ ನೀಡಿ ಶಾಂತಿಯಿಂದ ವರ್ತಿಸುತ್ತಿರೋದು ಆಶ್ಚರ್ಯ ತಂದಿದೆ.

    ಕಾಡಾನೆಗಳು ಅಪಾಯಕಾರಿ ಎಂಬ ಮಾತಿಗೆ ವಿರುದ್ಧವಾಗಿರುವ ಈ ಗಜರಾಜ ಮಗುವಿನಂತೆ ಬಂದು ಹೊಟ್ಟೆ ತುಂಬಿದ ಮೇಲೆ ಸೈಲೆಂಟಾಗಿ ವಾಪಸ್ಸಾಗುತ್ತಿದ್ದು, ಅಧಿಕಾರಿಗಳಲ್ಲೇ ಆಶ್ಚರ್ಯ ತಂದಿದೆ.

    https://www.youtube.com/watch?v=7BLPaWBAVlE&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 35 ವರ್ಷಗಳಿಂದ ಪರಿಸರ ಉಳಿಸುತ್ತಿರುವ ಪಬ್ಲಿಕ್ ಹೀರೋ ಜಯವಂತ್ ಬಾಂಬೂಲೆ

    35 ವರ್ಷಗಳಿಂದ ಪರಿಸರ ಉಳಿಸುತ್ತಿರುವ ಪಬ್ಲಿಕ್ ಹೀರೋ ಜಯವಂತ್ ಬಾಂಬೂಲೆ

    ಧಾರವಾಡ: ಹಸಿರೇ ಉಸಿರು ಹೀಗಂತ ಹೇಳೋರೇ ಜಾಸ್ತಿ. ಆದರೆ ಆ ಹಸಿರನ್ನ ಉಸಿರಂತೆ ಕಾಪಾಡುವವರ ಸಂಖ್ಯೆ ವಿರಳ. ಆದರೆ 35 ವರ್ಷಗಳಿಂದ ಪರಿಸರ ಜಾಗೃತಿ ಮೂಡಿಸುತ್ತಿರುವ ಜಯವಂತ್ ಬಾಂಬೂಲೆ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ.

    ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ನಿವಾಸಿ ಜಯವಂತ್ ಬಾಂಬೂಲೆ. ಇವರು ಕಳೆದ 35 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ‘ಅರಣ್ಯ ಪ್ರೇರಕ’ ರಾಗಿ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ 250 ರೂಪಾಯಿ ಸಂಬಳ ಇದ್ದಾಗ ಈ ಕೆಲಸಕ್ಕೆ ಸೇರಿಕೊಂಡಿರುವ ಇವರಿಗೆ ಈಗ 9 ಸಾವಿರ ಸಂಬಳ. ಈ ಸಂಬಳ ಜೀವನಕ್ಕೆ ಸಾಕಾಗುವುದಿಲ್ಲ. ಆದರೂ ಕೆಲಸ ತೃಪ್ತಿ ಕೊಡುತ್ತಿದೆ ಅಂತ ಕೆಲಸ ಮುಂದುವರಿಸಿದ್ದಾರೆ. ಯಾಕೆಂದರೆ ಪರಿಸರ ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಅರಣ್ಯ ಇಲಾಖೆ ನೀಡುವ ಸಸಿಗಳನ್ನ ರೈತರಿಗೆ ನೀಡಿ, ಅವರಿಗೆ ಅರಣ್ಯ ಬೆಳೆಸಿದರೆ ಆಗುವ ಉಪಯೋಗದ ಬಗ್ಗೆ ತಿಳುವಳಿಕೆ ನೀಡುತ್ತಾ ಬಂದಿದ್ದೇನೆ. ಇಲ್ಲಿವರೆಗೆ ಸುಮಾರು ಲಕ್ಷ ರೈತರಿಗೆ ಈ ಬಗ್ಗೆ ಜಾಗೃತಿಯನ್ನ ಮೂಡಿಸಿದ್ದೇನೆ. ಇದಲ್ಲದೇ ತಾಲೂಕಿನ ಪ್ರತಿಯೊಂದು ಶಾಲೆಗೆ ಹೋಗಿ ಮಕ್ಕಳಿಗೆ ಕೂಡಾ ಈ ಬಗ್ಗೆ ತಿಳಿಸುತ್ತಿದ್ದೇನೆ. ಅದರ ಜೊತೆಗೆ ಮಕ್ಕಳಿಗೆ ಪರಿಸರ ಹಾಗೂ ಅರಣ್ಯದ ಬಗ್ಗೆ ರಸಪ್ರಶ್ನೆಗಳನ್ನ ಇಟ್ಟು, ಉತ್ತರ ಹೇಳುವ ಮಕ್ಕಳಿಗೆ ಪೆನ್ನು ಅಂಕಲಿಪಿಗಳನ್ನ ನೀಡಲಾಗುತ್ತದೆ ಎಂದು ಜಯವಂತ್ ಬಾಂಬೂಲೆ ಹೇಳಿದ್ದಾರೆ.

    ಮೊದಲು ಈ ಕೆಲಸವನ್ನ ಅವರು ನಡೆದುಕೊಂಡೇ ಹೋಗಿ ಮಾಡುತ್ತಿದ್ದರು. ಸದ್ಯ ಜಯವಂತ್ ಅವರ ಸಹೋದರ ಕೊಡಿಸಿದ ಸ್ಕೂಟಿಯಲ್ಲಿ ಹೋಗಿ ಮಕ್ಕಳಿಗೆ ಹಾಗೂ ರೈತರಿಗೆ ತಿಳಿಸುತ್ತಿದ್ದಾರೆ. ತನ್ನ ಸ್ಕೂಟಿಯ ಮೇಲೆಲ್ಲ ಪರಿಸರ ಜಾಗೃತಿಯ ಘೋಷ ವಾಕ್ಯಗಳನ್ನ ಬರೆಸಿದ್ದಾರೆ. ಒಂದು ಕಡೆ ಕಾಡು ಬೆಳೆಸಿ ನಾಡು ಉಳಿಸಿ ಎಂದು ಬರೆದಿದ್ದರೆ, ಇನ್ನೊಂದು ಕಡೆ, ಅರಣ್ಯ ರಕ್ಷಣೆಯೇ ನಮ್ಮೆಲ್ಲರ ಹೊಣೆ ಎಂದು ಬರೆಸಿದ್ದಾರೆ.

    ಇವತ್ತಿನ ದಿನಮಾನಗಳಲ್ಲಿ ತನ್ನ ಮನೆ ಕೆಲಸ ಬಿಟ್ಟು ಈ ರೀತಿ ಜಾಗೃತಿ ಮೂಡಿಸುವವರು ಅತೀ ವಿರಳ. ಇವರ ಈ ಕಾರ್ಯ ಇದೇ ರೀತಿ ಮುಂದುವರೆಯಲಿ ಎಂಬುದೇ ಎಲ್ಲರ ಆಶಯವಾಗಿದೆ.

    https://www.youtube.com/watch?v=mPI5MfUNVkE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಾಗರಹಾವನ್ನು ಅಟ್ಟಿಸಿಕೊಂಡು ಬಂದ 13 ಅಡಿ ಉದ್ದದ ಕಾಳಿಂಗ- 1 ವಾರ ಅಡಿಕೆ ಮರದೊಳಗೆ ವಾಸ

    ನಾಗರಹಾವನ್ನು ಅಟ್ಟಿಸಿಕೊಂಡು ಬಂದ 13 ಅಡಿ ಉದ್ದದ ಕಾಳಿಂಗ- 1 ವಾರ ಅಡಿಕೆ ಮರದೊಳಗೆ ವಾಸ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಸೋಮ್ಲಾಪುರದ ಗ್ರಾಮದಲ್ಲಿ ನಾಗರಹಾವನ್ನು ಅಟ್ಟಿಸಿಕೊಂಡು ಬಂದು ಅದು ಕೈತಪ್ಪಿದರಿಂದ 13 ಅಡಿ ಉದ್ದದ ಕಾಳಿಂಗ ಸರ್ಪ ಕಳೆದೊಂದು ವಾರದಿಂದ ಅಡಿಕೆ ಮರದ ಲಾಟಿನಲ್ಲೇ ವಾಸವಾಗಿದೆ.

    ಚೈತ್ರಕುಮಾರ್ ಅವರ ಮನೆ ಮುಂದೆ ಅಡಿಕೆ ಮರಗಳನ್ನು ಕಡಿದು ಲಾಟು ಹಾಕಿದ್ದಾರೆ. ಕಳೆದೊಂದು ವಾರದ ಹಿಂದೆ ಕಾಳಿಂಗ ಸರ್ಪವೊಂದು ನಾಗರಹಾವನ್ನು ಅಟ್ಟಿಸಿಕೊಂಡು ಬಂದಿತ್ತು. ಈ ವೇಳೆ ನಾಗರಹಾವು ಅಡಿಕೆ ಮರಗಳ ಮಧ್ಯೆ ಸೇರಿತ್ತು. ಆಗ ಅಡಿಕೆ ಮರಗಳೊಳಗೆ ಹೋದ ಕಾಳಿಂಗ ಒಂದು ವಾರದಿಂದ ಅಲ್ಲೇ ವಾಸವಿದೆ.

    ಇದನ್ನು ನೋಡಿದ ಮನೆಯವರು ಹಾಗೂ ಸ್ಥಳೀಯರು ನಾಗರಹಾವು ಹಾಗೂ ಕಾಳಿಂಗ ಎರಡೂ ಒಂದೇ ಜಾಗದಲ್ಲಿ ಬಹಳ ದಿನ ಇರೋದಿಲ್ಲ, ಹೋಗಿವೆ ಎಂದು ಸುಮ್ಮನಾಗಿದರು. ಆದರೆ ಸೋಮವಾರ ಹೊರಬಂದ ಕಾಳಿಂಗನನ್ನು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

    ಗ್ರಾಮಸ್ಥರು ಕೂಡಲೇ ಸ್ನೇಕ್ ಹರೀಂದ್ರಾರನ್ನು ಕರೆಸಿ ಕಾಳಿಂಗನನ್ನು ಸೆರೆಹಿಡಿದಿದ್ದಾರೆ. ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಗಂಟೆಯ ಕಾರ್ಯಚರಣೆ ನಡೆಸಿ ಸೆರೆ ಹಿಡಿದ ಕಾಳಿಂಗನನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಪರೂಪದ ಪ್ರಾಣಿ ನೀಲ್ ಗಾಯ್ ಹುಲಿ ದಾಳಿಗೆ ಬಲಿ

    ಅಪರೂಪದ ಪ್ರಾಣಿ ನೀಲ್ ಗಾಯ್ ಹುಲಿ ದಾಳಿಗೆ ಬಲಿ

    ಚಿಕ್ಕಮಗಳೂರು: ಕರ್ನಾಟಕದಲ್ಲಿ ಅಪರೂಪಕ್ಕೆ ಗೋಚರವಾಗಿದ್ದ ನೀಲ್ ಗಾಯ್ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ನಡೆದಿದೆ.

    ಇತ್ತೀಚೆಗಷ್ಟೇ ಮುತ್ತೋಡಿ ಅರಣ್ಯದಲ್ಲಿ ನೀಲ್ ಗಾಯ್ ಕಾಣಿಸಿಕೊಂಡಿತ್ತು. ಇದೀಗ ಹುಲಿ ದಾಳಿಗೆ ಬಲಿಯಾಗಿದೆ ಎಂದು ಹೇಳಲಾಗುತ್ತಿದೆ. 20 ವರ್ಷದ ಬಳಿಕ ಕಳೆದ ವರ್ಷ ಮುತ್ತೋಡಿಯಲ್ಲಿ ಕಾಣಿಸಿಕೊಂಡಿತ್ತು.

    ಈ ಪ್ರಾಣಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಕಾಣಸಿಗುತ್ತಿದ್ದು, ಕಡವೆ ಜಾತಿಗೆ ಸೇರಿದ ಅತಿ ಭಯಪಡುವ ಪ್ರಾಣಿಯಾಗಿದೆ. ಸದ್ಯ ಸಾವನ್ನಪ್ಪಿದ ನೀಲ್ ಗಾಯ್ ಇದ್ದ ಪ್ರದೇಶಕ್ಕೆ ಅರಣ್ಯಾಧಿಕಾರಿಗಳು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಬ್ಲೂ ಬುಲ್ ಅಂತಲೂ ಕರೆಯುತ್ತಾರೆ.

    ಕಳೆದ ಮಾರ್ಚ್ ತಿಂಗಳಿನಲ್ಲಿ ಪ್ರವಾಸಿಗರು ಮುತ್ತೋಡಿ ಅರಣ್ಯದಲ್ಲಿ ಸಫಾರಿಗೆ ಹೋಗಿದ್ದ ವೇಳೆ ಈ ಅಪರೂಪದ ಬ್ಲೂ ಬುಲ್ ಪ್ರಾಣಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಭದ್ರಾ ಮುತ್ತೋಡಿ ಅರಣ್ಯದಲ್ಲಿ ಈ ಹಿಂದೆ ಯಾವತ್ತೂ ಬ್ಲೂ ಬುಲ್ ಪ್ರಾಣಿ ಕಂಡಿರಲಿಲ್ಲ. ಈ ಪ್ರಾಣಿ ಇರುವ ಬಗ್ಗೆ ಯಾರ ಗಮನಕ್ಕೂ ಬಂದಿರಲಿಲ್ಲ. ಕೇವಲ ಹುಲ್ಲುಗಾವಲಲ್ಲಿ ವಾಸಿಸುವ ಪ್ರಾಣಿ ಇದಾಗಿದ್ದು, ಯಾರೋ ತಂದು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.

    1950 ರಲ್ಲಿ ಬಂಡೀಪುರ ಅರಣ್ಯದಲ್ಲಿ ಕಾಣಿಸಿಕೊಂಡಿತ್ತು. ಈ ಪ್ರಾಣಿ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಮಾತ್ರ ಹೆಚ್ಚಾಗಿವೆ ಕಂಡುಬರುತ್ತದೆ. ಇದನ್ನ ನೀಲ್ ಗಾಯ್ ಎಂತಲೂ ಕರೆಯುತ್ತಾರೆ. ಹುಲಿ ಹಾಗೂ ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳ ಕಣ್ಣಿಗೆ ಬಿದ್ದರೆ ಇದನ್ನ ಸುಲಭವಾಗಿ ಬೇಟೆ ಆಡುತ್ತವೆ. ಈ ಪ್ರಾಣಿ ಕಾಡಿನೊಳಗೆ ಬಹಳ ದಿನ ಬದುಕುವುದು ಕಷ್ಟ. ಆದ್ದರಿಂದ ಕೂಡಲೇ ಇದನ್ನ ಪತ್ತೆ ಮಾಡಿ ರಕ್ಷಣೆ ಮಾಡಿ ಎಂದು ಅರಣ್ಯ ಸಿಬ್ಬಂದಿಗೆ ಭದ್ರಾ ಹುಲಿ ಯೋಜನೆ ನಿರ್ದೇಶಕ ಕಾಂತರಾಜ್ ಸೂಚನೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • 3 ದಿನ ಪಶ್ಚಿಮ ಘಟ್ಟದಲ್ಲಿ ಎಚ್‍ಡಿಕೆ ವಿಶ್ರಾಂತಿ

    3 ದಿನ ಪಶ್ಚಿಮ ಘಟ್ಟದಲ್ಲಿ ಎಚ್‍ಡಿಕೆ ವಿಶ್ರಾಂತಿ

    ಬೆಂಗಳೂರು: ರಾಜಕೀಯ ಜಂಜಾಟದಿಂದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೊಂಚ ಬಿಡುವು ಪಡೆದುಕೊಂಡಿದ್ದು, ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ.

    ಅರಣ್ಯ ಪ್ರದೇಶಕ್ಕೆ ತೆರಳಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಿಎಂ ಅವರು 3 ದಿನ ವಿಶ್ರಾಂತಿಗೆ ತೆರಳಿದ್ದಾರೆ. ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ವಿಶ್ರಾಂತಿ ಗೃಹವೊಂದರಲ್ಲಿ 3 ದಿನ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯವರು ತಮ್ಮ ಪತ್ನಿ ಹಾಗೂ ಪುತ್ರ ನಿಖಿಲ್ ಜೊತೆ ಅಲ್ಲಿಗೆ ತೆರಳಿದ್ದಾರೆ. ವಿಶ್ರಾಂತಿ ಪಡೆದ ಬಳಿಕ ಅಂದರೆ ನವೆಂಬರ್ 11 ರ ಸಂಜೆ ರಾಜಧಾನಿಗೆ ವಾಪಸ್ಸಾಗಲಿದ್ದಾರೆ.

    ಅಕ್ಟೋಬರ್ ತಿಂಗಳಲ್ಲಿ ಎರೋಟಿಕ್ ವಾಲ್ವ್ ಅಳವಡಿಕೆ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಾಗಿ, ಡಿಸ್ಚಾರ್ಜ್ ಆಗಿದ್ದರು. ಎಚ್‍ಡಿ ಕುಮಾರಸ್ವಾಮಿ ಹೃದಯ ಶಸ್ತ್ರ ಚಿಕಿತ್ಸೆ ಸಂಬಂಧ ಸೆಪ್ಟೆಂಬರ್ 23 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಡಾ. ಸತ್ಯಕೀ ಹಾಗೂ ಡಾ.ಮಂಜುನಾಥ್ ಅವರ ನೇತೃತ್ವದಲ್ಲಿ ಆಪರೇಷನ್ ನಡೆದಿತ್ತು ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಎಚ್‍ಡಿಕೆ ಗುಣಮುಖರಾಗಲೆಂದು ದೇವರ ಮೊರೆ ಹೋಗಿದ್ದ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು ದೇವಾಲಯ, ಚರ್ಚ್ ಹಾಗೂ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಗಾಯದ ನೋವಿನಲ್ಲಿ ಕರ್ತವ್ಯ ಮೆರೆದ ನಟ ದರ್ಶನ್

    ಗಾಯದ ನೋವಿನಲ್ಲಿ ಕರ್ತವ್ಯ ಮೆರೆದ ನಟ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ದರ್ಶನ್ ಅವರಿಗೆ ಕಾರ್ ಅಪಘಾತ ಸಂಭವಿಸಿದ್ದು ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಗಾಯದ ನೋವಿನಲ್ಲೂ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ.

    ದರ್ಶನ್ ಅವರು ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ. ಆದ ಕಾರಣ ಅವರು ಆಗಾಗ ಅರಣ್ಯಗಳಿಗೆ ಹೋಗಿ ಪ್ರಾಣಿ, ಪಕ್ಷಿ ಮತ್ತು ಪ್ರಕೃತಿಯನ್ನು ವೀಕ್ಷಣೆ ಮಾಡಬೇಕು. ಇದು ಅವರ ಕರ್ತವ್ಯ ಕೂಡ ಆಗಿದೆ. ಆದರೆ ಇತ್ತೀಚೆಗೆ ದರ್ಶನ್ ಅವರಿಗೆ ಕಾರ್ ಅಪಘಾತವಾಗಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದರು. ಆದ್ದರಿಂದ ಅವರು ಅರಣ್ಯವನ್ನು ವೀಕ್ಷಣೆ ಮಾಡಲು ಸಾಧ್ಯವಾಗಲಿಕ್ಕಿಲ್ಲ ಎಂದು ಹೇಳಲಾಗುತ್ತಿತ್ತು.

    ಆದರೆ ನಟ ದರ್ಶನ್ ತಮ್ಮ ಗಾಯದ ನೋವಿನಲ್ಲೂ ಕಾಡಿಗೆ ಹೋಗಿ ವೀಕ್ಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ಕ್ಯಾಮೆರಾ ಹಿಡಿದು ಪ್ರಕೃತಿಯ ಸೊಬಗನ್ನು ಸೆರೆ ಹಿಡಿದಿದ್ದಾರೆ. ಸಂತಸದಿಂದ ಅರಣ್ಯದಲ್ಲಿ ಸುತ್ತಾಡಿದ್ದಾರೆ. ಅರಣ್ಯದಲ್ಲಿ ಸುತ್ತಾಡುತ್ತಿದ್ದ ಫೋಟೋಗಳನ್ನು ಅವರ ಅಭಿಮಾನಿಗಳು ತೆಗೆದು ಟ್ಟಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ದರ್ಶನ್ ಅವರ ಫೋಟೋಗಳನ್ನು ನೋಡಿ ಅಭಿಮಾನಿಗಳು ಗಾಯದ ನಡುವೆಯೂ ಡಿ ಬಾಸ್ ಅರಣ್ಯ ರಾಯಭಾರಿಯಾಗಿ ವೀಕ್ಷಣೆ ಮಾಡಲು ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ದರ್ಶನ್ ಅವರಿಗೆ ಕಾಡು ಹಾಗೂ ವನ್ಯಜೀವಿಗಳ ಬಗ್ಗೆ ಸಾಕಷ್ಟು ಪ್ರೀತಿ ತೋರಿಸುತ್ತಾರೆ. ಹಾಗಾಗಿ ಅವರನ್ನು ಕರ್ನಾಟಕದಲ್ಲಿ ಅರಣ್ಯ ಇಲಾಖೆಯ ರಾಯಭಾರಿಯಾಗಿ ಆಯ್ಕೆ ಮಾಡಿದ್ದರು. ಅರಣ್ಯ ಇಲಾಖೆಯ ರಾಯಭಾರಿಯಾದ ಕಾರಣ ದರ್ಶನ್ ಅವರು ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಸಂದೇಶ ಸಾರುವ ಕೆಲಸವನ್ನು ಮಾಡಬೇಕು. ಜೊತೆಗೆ ಅರಣ್ಯಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಬೇಕಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/DarshanFc171/status/1058577636111335425