Tag: foreign trip

  • ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್

    ‘ನನಗೆ ಫಾರಿನ್ ಟ್ರಿಪ್ ಮಾಡೋಕೆ ದುಡ್ಡು ಯಾರ್ ಕೊಡ್ತಾರೆ ಗೊತ್ತಾ?’ – ನಿವಿ ಸೀಕ್ರೆಟ್ ರಿವೀಲ್

    ನಿವೇದಿತಾ ಗೌಡ (Niveditha Gowda) ಸದಾ ವಿದೇಶಿ ಪ್ರವಾಸದಲ್ಲಿರುತ್ತಾರೆ. ಅಲ್ಲಿಂದಲೇ ರೀಲ್ಸ್ ಶೇರ್ ಮಾಡುತ್ತಾರೆ. ಹೆಚ್ಚು ಆಡಂಬರದ ಬದುಕು ಸವಿಯುತ್ತಾರೆ. ಆದರೆ ಸಿನಿಮಾದಲ್ಲೂ ನಿವೇದಿತಾ ಹೆಚ್ಚು ಸಕ್ರಿಯವಾಗಿಲ್ಲ. ಬೇರೆ ಆದಾಯವೂ ಕಾಣುವುದಿಲ್ಲ. ಇಷ್ಟಾದ್ಮೇಲೂ ನಿವೇದಿತಾ ಇಷ್ಟೊಂದು ಅದ್ಧೂರಿ ಜೀವನವನ್ನ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಇದೇ ಪ್ರಶ್ನೆಗಳು ಅವರು ವಿದೇಶದಿಂದ ರೀಲ್ಸ್ ಪೋಸ್ಟ್ ಮಾಡ್ದಾಗ ಕಾಮೆಂಟ್ಸ್ನಲ್ಲಿ ಕೇಳಿಬರುತ್ತೆ. ಆ ಕುತೂಹಲಕ್ಕೀಗ ನಿವೇದಿತಾ ಗೌಡ ತೆರೆ ಎಳೆದಿದ್ದಾರೆ.

    ತಿಂಗಳಿಗೊಂದು ವಿದೇಶ ಪ್ರವಾಸ ಮಾಡಲು ನಿಮಗೆ ಹಣ ಎಲ್ಲಿಂದ ಬರುತ್ತೆ ಅನ್ನೋ ಪ್ರಶ್ನೆಗೆ ಇದೀಗ ನಿವೇದಿತಾ ಗೌಡ ಉತ್ತರ ಕೊಟ್ಟಿದ್ದಾರೆ. `ನನ್ನ ಹಣವನ್ನ ನಾನೇ ಸಂಪಾದಿಸುತ್ತೇನೆ, ನಾನು ಯಾರಿಂದಲೂ ಹಣ ತೆಗೆದುಕೊಳ್ಳೋದಿಲ್ಲ. ನನಗೆ ತೃಪ್ತಿಯಾಗುವಷ್ಟು ಹಣ ಸೋಶಿಯಲ್ ಮೀಡಿಯಾದಿಂದ ಬರುತ್ತಿದೆ. ಅದೇ ನನ್ನ ಆದಾಯದ ಮೂಲ’ ಎಂದು ಹೇಳುವ ಮೂಲಕ ತಮ್ಮ ಕಾಸ್ಟ್ಲಿ ಲೈಫ್‌ಸ್ಟೈಲ್ ಗುಟ್ಟು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಎರಡನೇ ಮದುವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ

    ಹಣ ಎಲ್ಲಿಂದ ಬರುತ್ತೆ ಅನ್ನೋದಕ್ಕೆ ನಿವೇದಿತಾ ಮಾತು
    ನನ್ನ ಹಣವನ್ನು ನಾನೇ ಸಂಪಾದಿಸುತ್ತೇನೆ. ನಾನು ಯಾರ ಹಂಗಿನಲ್ಲೂ ಬದುಕುತ್ತಿಲ್ಲ. ನಾನು ಪ್ರವಾಸಕ್ಕೆ ಹೋಗುವಾಗ ಅಪ್ಪ-ಅಮ್ಮ ಹಣ ಬೇಕಾ ಅಂತ ಕೇಳ್ತಾರೆ. ಆದರೂ ನಾನು ತೆಗೆದುಕೊಳ್ಳುವುದಿಲ್ಲ. ದೇವರ ದಯೆಯಿಂದ ಹಿಂದಿನಿಂದಲೂ ನನ್ನ ಹಣವನ್ನು ನಾನೇ ಸಂಪಾದಿಸುತ್ತಿದ್ದೇನೆ. ಇಂಡಿಪೆಂಡೆಂಟ್ ಆಗಿ ಬದುಕುತ್ತಿದ್ದೇನೆ. ನನಗೆ ಯಾರ ಮೇಲೂ ಡಿಪೆಂಡ್ ಆಗುವುದು ಇಷ್ಟವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆದಾಯ ಚೆನ್ನಾಗಿದೆ. ಬಂದ ಕೂಡಲೇ ಟ್ರಿಪ್‌ಗೆ ಹೋಗುತ್ತೇನೆ. ನಾನು ಹಣವನ್ನ ಕೂಡಿಡಲು ಇಷ್ಟಪಡುವುದಿಲ್ಲ. ವಾಸ್ತವದಲ್ಲಿ ಬದುಕುತ್ತೇನೆ. ನನಗೆ ಒಳ್ಳೆ ಬಟ್ಟೆ ಹಾಕಿಕೊಳ್ಳುವುದು, ಒಳ್ಳೊಳ್ಳೆ ಶೂ ಧರಿಸುವುದು ಹಾಗೂ ಚೆನ್ನಾಗಿ ಕಾಣಬೇಕೆನ್ನುವುದು ಇಷ್ಟ. ಪ್ರವಾಸವೂ ನನ್ನಿಷ್ಟದ ಅಭ್ಯಾಸ. ನಾನು ಹೇರ್‌ವಾಶ್‌ಗೂ ವಾರಕ್ಕೆರಡು ದಿನ ಸಲೂನ್‌ಗೆ ಹೋಗುತ್ತೇನೆ ಅನ್ನೋದು ನಿಜ. ಆದರೆ ಹಿಂದೆಯೂ, ಈಗಲೂ ನಾನು ನನ್ನ ವೈಯಕ್ತಿಕ ಖರ್ಚಿಗಾಗಿ ಯಾರ ಮೇಲೂ ಡಿಪೆಂಡ್ ಆಗಿಲ್ಲ. ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡ್ತೀನಿ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದೀನಿ. ಅಲ್ಲಿಂದಲೇ ಸಾಕಷ್ಟು ಹಣ ನನಗೆ ಬರುತ್ತೆ. ಅದರಿಂದಲೇ ನಾನು ವೈಭೋಗದ ಜೀವನ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಷ್ಟೇ ಕೆಟ್ಟ ಕಾಮೆಂಟ್ಸ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ ಗೌಡ

  • ವಿದೇಶಿ ಪ್ರವಾಸದಲ್ಲಿ ಕಾಲು ಮುರಿದುಕೊಂಡ ತ್ರಿಶಾ – ಅಭಿಮಾನಿಗಳ ಎದೆಯಲ್ಲಿ ಢವಢವ

    ವಿದೇಶಿ ಪ್ರವಾಸದಲ್ಲಿ ಕಾಲು ಮುರಿದುಕೊಂಡ ತ್ರಿಶಾ – ಅಭಿಮಾನಿಗಳ ಎದೆಯಲ್ಲಿ ಢವಢವ

    ಚೆನ್ನೈ: ವಿದೇಶ ಪ್ರವಾಸದಲ್ಲಿದ್ದ (Foreign Trip) ತಮಿಳಿನ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಕಾಲು ಮುರಿದುಕೊಂಡು ಮನೆಗೆ ವಾಪಸ್ಸಾಗಿದ್ದಾರೆ.

    ಇತ್ತೀಚೆಗಷ್ಟೇ ವಿದೇಶಕ್ಕೆ ತೆರಳಿದ್ದ ದಕ್ಷಿಣ ಭಾರತದ ಹೆಸರಾಂತ ಸಿನಿಮಾ ತಾರೆ ತ್ರಿಶಾ ಅಪಘಾತದಲ್ಲಿ (Accident) ಕಾಲು ಮುರಿದಿದ್ದು, ಸದ್ಯ ಮನೆಗೆ ಮರಳಿದ್ದಾರೆ. ಇದನ್ನೂ ಓದಿ: ಝೈದ್ ಖಾನ್ ಜೊತೆ `ಬನಾರಸ್’ ವೀಕ್ಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ

    ನಟಿ ತಮ್ಮ ಕಾಲಿನ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಅಪಘಾತವಾದ ಕಾರಣ ವೆಕೇಶನ್‌ನಿಂದ ವಾಪಸ್ ಬರಬೇಕಾಯಿತು ಎಂದಿದ್ದಾರೆ. ಫೋಟೋ ಹಂಚಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ, ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಟಿಕೆಟ್ ದರ ಇಳಿಕೆ – `ಗಂಧದಗುಡಿ’ ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ ಬಂಪರ್ ಆಫರ್

    ಎರಡು ದಶಕಗಳಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ತ್ರಿಶಾ, ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ವಯಸ್ಸು 40 ಸಮೀಪಿಸುತ್ತಿದ್ದರೂ ಯುವ ನಟಿಯರಿಗೂ ಕಮ್ಮಿಯಿಲ್ಲದ ನಟಿ, ಸ್ಟಾರ್ ಹೀರೋಯಿನ್ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಇತ್ತೀಚೆಗೆ ಅವರು ಅಭಿನಯಿಸಿರುವ `ಪೊನ್ನಿಯನ್ ಸೆಲ್ವನ್’ (Ponniyin Selvan) ಭಾಗ-1 ಚಿತ್ರವು ಭರ್ಜರಿ ಪ್ರದರ್ಶನ ಕಾಣ್ತಿದ್ದು, ಈಗಾಗಲೇ ಸುಮಾರು 500 ಕೋಟಿ ಬಾಚಿಕೊಂಡಿದೆ.

    ಮಲಯಾಳಂ ಸ್ಟಾರ್ ಮೋಹನ್ ಲಾಲ್ (Mohan Lal) ಅವರೊಂದಿಗೆ ನಟಿಸಿರುವ `ರಾಮ್’ ಮಲಯಾಳಂ (Malayalam) ಸಿನಿಮಾದ (Cinema) ಶೂಟಿಂಗ್ ಮುಗಿಸಿದ ತ್ರಿಶಾ ಯುರೋಪಿಯನ್ ದೇಶಗಳಿಗೆ ಪ್ರವಾಸ ಹೋಗಿದ್ದರು. ಈ ವೇಳೆ ಕಾಲಿಗೆ ಪೆಟ್ಟಾಗಿದ್ದು, ಮನೆಗೆ ವಾಪಸ್ಸಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುರೋಪ್ ಪ್ರವಾಸ ಕೈಗೊಂಡ ರಾಹುಲ್ – ಕಾಂಗ್ರೆಸ್ ಮಹತ್ವದ ಸಭೆಗೆ ಗೈರು

    ಯುರೋಪ್ ಪ್ರವಾಸ ಕೈಗೊಂಡ ರಾಹುಲ್ – ಕಾಂಗ್ರೆಸ್ ಮಹತ್ವದ ಸಭೆಗೆ ಗೈರು

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಖಾಸಗಿ ಭೇಟಿಗಾಗಿ ಯುರೋಪ್ ಪ್ರವಾಸ ಕೈಗೊಂಡಿದ್ದು, ರಾಷ್ಟ್ರಪತಿ ಚುನಾವಣೆ ಹಾಗೂ ಸಂಸತ್ ಮುಂಗಾರು ಅಧಿವೇಶನಕ್ಕೂ ಮುನ್ನ ಭಾನುವಾರ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ರಾಹುಲ್‌ಗಾಂಧಿ ಆಗಾಗ್ಗೆ ವಿದೇಶಿ ಪ್ರವಾಸ ಕೈಗೊಳ್ಳುವುದು ಸಹಜ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವದ ಸಭೆ ನಡೆಯುತ್ತಿರುವ ಸಂದರ್ಭದಲ್ಲಿ ಅವರು ಗೈರಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: RSS ನಿಮ್ಮ ಜೊತೆ ಇದೆ: ದಲಿತ, ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಮೋಹನ್‌ ಭಾಗವತ್‌ ಸಂವಾದ

    ಪಕ್ಷದ ಅಧ್ಯಕ್ಷರ ಆಯ್ಕೆಯ ಬಗ್ಗೆಯೇ ಕಾಂಗ್ರೆಸ್ ಗುರುವಾರ ಸಭೆ ಆಯೋಜನೆ ಮಾಡಿದೆ. ಸೋನಿಯಾ ಗಾಂಧಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದು, ಈಗ ಚೇತರಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಜುಲೈ 21ಕ್ಕೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಹೇಳಿದೆ. ಈ ಸಂದರ್ಭದಲ್ಲಿ ಪಕ್ಷದ ನಾಯಕತ್ವದ ಬದಲಾವಣೆಗೆ ಒತ್ತಡ ಹೆಚ್ಚಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಭೆ ಮುಖ್ಯವಾಗಿದೆ. ಆದರೂ ರಾಹುಲ್ ಈ ಸಭೆಗೆ ಗೈರಾಗುತ್ತಿದ್ದಾರೆ. ಅಧ್ಯಕ್ಷೀಯ ಹುದ್ದೆಯನ್ನು 2019ರ ಲೋಕಸಭಾ ಚುನಾವಣೆ ಸೋಲಿನ ಬಳಿಕ ತ್ಯಜಿಸಿದ್ದ ರಾಹುಲ್ ಗಾಂಧಿ, ಮತ್ತೆ ಈ ಹುದ್ದೆಯನ್ನು ಒಪ್ಪಿಕೊಳ್ಳುತ್ತಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

    11 ಕಾಂಗ್ರೆಸ್ ಸದಸ್ಯರ ಬಲ ಹೊಂದಿರುವ ಗೋವಾದಲ್ಲಿ ಹಿರಿಯ ನಾಯಕರು ಬಂಡಾಯ ಏಳಲು ಮುಂದಾಗಿದ್ದಾರೆ. ಇದರ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಕಾಂಗ್ರೆಸ್ ಶಾಸಕರನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಆದರೂ ಈವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಾಗಲಿ, ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಆರ್ಥಿಕವಾಗಿ ಸ್ಥಿತಿವಂತರಾಗಿದ್ರೆ ಅನುಕಂಪದ ನೌಕರಿಯಿಲ್ಲ – ಹೊಸ ಮಾರ್ಗಸೂಚಿಯಲ್ಲಿ ಏನಿದೆ?

    ಗುರುವಾರ ನಡೆಯಲಿರುವ ಕಾಂಗ್ರೆಸ್ ಸಭೆಯಲ್ಲಿ, ಅಕ್ಟೋಬರ್ 2ರಂದು ಆರಂಭಿಸಲಿರುವ `ಭಾರತ್ ಜೋಡೋ ಯಾತ್ರಾ’ ಅಥವಾ ಭಾರತವನ್ನು ಒಗ್ಗೂಡಿಸುವ ಯಾತ್ರೆಯ ಯೋಜನೆ ರೂಪಿಸುವ ಕುರಿತು ಸಹ ಚರ್ಚಿಸಲಾಗುತ್ತದೆ. ರಾಹುಲ್ ಗಾಂಧಿ ಅವರ ಗೈರು, ನಾಯಕತ್ವದ ಪ್ರಶ್ನೆ ಕುರಿತಾದ ಊಹಾಪೋಹಗಳನ್ನು ಮತ್ತಷ್ಟು ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಸರ್ಕಾರಿ ದುಡ್ಡಿನಲ್ಲಿ 10 ದಿನ ಶೆಟ್ಟರ್ ವಿದೇಶಿ ಪ್ರವಾಸ- ಅಧಿಕಾರಿಗಳ ಜೊತೆ ಪತ್ನಿಯರಿಗೂ ಟೂರ್

    ಸರ್ಕಾರಿ ದುಡ್ಡಿನಲ್ಲಿ 10 ದಿನ ಶೆಟ್ಟರ್ ವಿದೇಶಿ ಪ್ರವಾಸ- ಅಧಿಕಾರಿಗಳ ಜೊತೆ ಪತ್ನಿಯರಿಗೂ ಟೂರ್

    ಬೆಂಗಳೂರು: ಊರಿಗೆಲ್ಲಾ ಬುದ್ಧಿ ಹೇಳುವ ಬಿಜೆಪಿ ಡಬಲ್ ಗೇಮ್ ತಂತ್ರವನ್ನು ಅನುಸರಿಸುತ್ತಿದೆ. ಮಾಜಿ ಸಿಎಂ, ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು, ತಮ್ಮ ಇಲಾಖೆಯ ಅಧಿಕಾರಿಗಳ ಜೊತೆಗೆ ಸರ್ಕಾರದ ಹಣದಲ್ಲಿ ವಿದೇಶಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸಕ್ಕೆ ಸಚಿವರು ಹಾಗೂ ಅಧಿಕಾರಿಗಳು ಪತ್ನಿ ಸಮೇತ ಹೋಗುತ್ತಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ರಾಜ್ಯದಲ್ಲಿ ಉಂಟಾದ ನೆರೆಯಿಂದ ಜನರು ಸುಧಾರಿಸಿಕೊಂಡಿಲ್ಲ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜನರು ಪ್ರವಾಹದ ಹಾನಿಯಿಂದ ಚೇತರಿಸಿಕೊಂಡಿಲ್ಲ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅವರ ಪತ್ನಿ, ಅಧಿಕಾರಿಗಳು ಹಾಗೂ ಆಪ್ತರ ವಲಯದ ಜೊತೆಗೆ ವಿದೇಶಿ ಪ್ರವಾಸ ಕೈಗೊಳ್ಳುತ್ತಿದ್ದಾರೆ.

    ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಅವರ ಪತ್ನಿಯನ್ನು ಒಳಗೊಂಡಂತೆ ಒಟ್ಟು 9 ಜನರ ತಂಡಕ್ಕೆ ವಿದೇಶಿ ಪ್ರವಾಸದ ಪ್ಲ್ಯಾನ್ ಸಿದ್ಧವಾಗಿದೆ. ಒಟ್ಟು 10 ದಿನದ ಪ್ರವಾಸಕ್ಕೆ ಸರ್ಕಾರಿ ಹಣವನ್ನೆ ಬಳಸಿಕೊಳ್ಳಲಾಗುತ್ತಿದೆ. ನವೆಂಬರ್ 6ರಿಂದ 17ರ ವರೆಗೆ ಚೀನಾದಲ್ಲಿ 6 ದಿನ, 4 ದಿನ ಲಂಡನ್ ಸುತ್ತಾಡಲಿದ್ದಾರೆ. ಈಗಾಗಲೇ ಫ್ಲೈಟ್ ಬುಕ್ ಆಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಸೆಮಿನಾರ್ ನೆಪದಲ್ಲಿ ಎರಡು ದೇಶಗಳ ಪ್ರವಾಸಕ್ಕೆ ಸರ್ಕಾರದ ಹಣ ಖರ್ಚು ಮಾಡಲಾಗುತ್ತಿದೆ. ಆದರೆ ಸಚಿವರು, ಅಧಿಕಾರಿಗಳಿಗೆ ಸರ್ಕಾರಿ ಹಣವನ್ನು ಬಳಸಲಾಗುತ್ತಿದೆ. ಅವರೊಟ್ಟಿಗೆ ಬರುವ ಪತ್ನಿಯರಿಗೆ ವೈಯಕ್ತಿಯ ಹಣವನ್ನು ಭರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಯಾರೆಲ್ಲ ಹೋಗ್ತಾರೆ?
    ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಅವರ ಪತ್ನಿ ಶೀಲ್ಪಾ ಶೆಟ್ಟರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದಶಿ ಗೌರವ ಗುಪ್ತಾ, ಅವರ ಪತ್ನಿ ರೀನಾ ಗುಪ್ತಾ, ಜಗದೀಶ್ ಶೆಟ್ಟರ್ ಆಪ್ತ ಕಾರ್ಯದರ್ಶಿ ಧವಳೇಶ್ವರ್, ಎಂಎಸ್‍ಐಎಲ್ ಎಂಡಿ ಪ್ರಕಾಶ್, ಅವರ ಪತ್ನಿ, ಎಂಎಸ್‍ಐಎಲ್ ಅಧಿಕಾರಿ ಚಂದ್ರಪ್ಪ, ಹಾಗೂ ಪತ್ನಿ ವಿದೇಶ ಪ್ರವಾಸದ ಲಿಸ್ಟ್ ನಲ್ಲಿ ಇದ್ದಾರೆ.

    ಶೆಟ್ಟರ್‌ಗೆ ‘ಪಬ್ಲಿಕ್’ ಪ್ರಶ್ನೆ:
    *ಪ್ರಶ್ನೆ 1- ನೆರೆಯಿಂದ ಬೆಳಗಾವಿ ತತ್ತರಿಸಿ ಹೋಗಿದೆ. ಉಸ್ತುವಾರಿ ಸಚಿವರು ಹೇಗೆ ಹೋಗ್ತೀರಾ..?
    *ಪ್ರಶ್ನೆ 2 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಪತ್ನಿಯನ್ನು ಏಕೆ ಕರೆದುಕೊಂಡು ಹೋಗ್ತೀರಾ..?
    *ಪ್ರಶ್ನೆ 3 – ಪತ್ನಿಯ ಪ್ರವಾಸ ವೆಚ್ಚ ಸರ್ಕಾರ ಭರಿಸದಿದ್ದರೂ ಪತ್ನಿ ಜೊತೆಗೆ ಹೋಗುವುದು ಏಕೆ..?
    *ಪ್ರಶ್ನೆ 4 – ಅಧಿಕೃತ ಸರ್ಕಾರಿ ಪ್ರವಾಸದಲ್ಲಿ ಅಧಿಕಾರಿಗಳ ಪತ್ನಿಯರಿಗೆ ಏನು ಕೆಲಸ..?
    *ಪ್ರಶ್ನೆ 5 – ರಾಹುಲ್ ಗಾಂಧಿ ಇಂಡೋನೇಷ್ಯಾ ಖಾಸಗಿ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ..?
    *ಪ್ರಶ್ನೆ 6 – ಜೆಡಿಎಸ್ ಶಾಸಕರ ಮಲೇಷ್ಯಾ ಪ್ರವಾಸ ಟೀಕಿಸುವ ಬಿಜೆಪಿ ಈಗ ಏನ್ ಹೇಳುತ್ತೆ…?

  • ಮಾಲ್ಡೀವ್ಸ್, ಶ್ರೀಲಂಕಾಕ್ಕೆ ಮೋದಿ ಮೊದಲ ಪ್ರವಾಸ – ವಯನಾಡಲ್ಲಿ 2ನೇ ದಿನ ರಾಹುಲ್ ರೋಡ್‍ಶೋ

    ಮಾಲ್ಡೀವ್ಸ್, ಶ್ರೀಲಂಕಾಕ್ಕೆ ಮೋದಿ ಮೊದಲ ಪ್ರವಾಸ – ವಯನಾಡಲ್ಲಿ 2ನೇ ದಿನ ರಾಹುಲ್ ರೋಡ್‍ಶೋ

    ನವದೆಹಲಿ: ಎರಡನೇ ಬಾರಿಗೆ, ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಇಂದು ವಿದೇಶ ಪ್ರವಾಸ ಆರಂಭಿಸಲಿದ್ದು ದ್ವೀಪರಾಷ್ಟ್ರ ಮಾಲ್ಡೀವ್ಸ್‍ಗೆ ಭೇಟಿ ನೀಡುತ್ತಿದ್ದಾರೆ.

    ಮಾಲ್ಡೀವ್ಸ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ, ಅಲ್ಲಿನ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ಸೊಲಿತ್ ಜೊತೆ ಮಾತುಕತೆ ನಡೆಸುತ್ತಾರೆ. ಭಾರತದ ನೆರವಿನಿಂದ ಶುರುವಾಗಿರುವ ಕಾಮಗಾರಿಗಳ ಉದ್ಘಾಟನೆಯ ಜೊತೆಗೆ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೂ ಮೋದಿ ಹಣಕಾಸು ನೆರವು ಘೋಷಿಸುವ ಸಾಧ್ಯತೆ ಇದೆ.

    ಮಾಲ್ಡೀವ್ಸ್‍ನಿಂದ ನಾಳೆ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಭೇಟಿ ನೀಡುತ್ತಾರೆ. ಈಸ್ಟರ್ ಸಂಡೆಯಂದು ನಡೆದಿದ್ದ ಸರಣಿ ಬಾಂಬ್ ಸ್ಫೋಟದ ಬಳಿಕ ಆ ರಾಷ್ಟ್ರಕ್ಕೆ ಭೇಟಿ ನೀಡುತ್ತಿರುವ ವಿಶ್ವದ ಮೊದಲ ನಾಯಕ ಮೋದಿ. ಜಪಾನ್ ಜೊತೆಗೆ ಲಂಕಾದಲ್ಲಿ ಬಂದರು ಅಭಿವೃದ್ಧಿಗೆ ಭಾರತದ ಪಾಲುದಾರಿಕೆಗೆ ಸಹಿ ಹಾಕುವ ಸಾಧ್ಯತೆ ಇದೆ.

    ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಾಬಲ್ಯ ಕಡಿವಾಣದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ಚೊಚ್ಚಲ ವಿದೇಶ ಪ್ರವಾಸ ಮಹತ್ವ ಪಡೆದಿದೆ. ವಿದೇಶ ಪ್ರವಾಸಕ್ಕೂ ಮೊದಲು ಇಂದು ಬೆಳಗ್ಗೆ ಗುರುವಾಯೂರಲ್ಲಿರುವ ಪ್ರಸಿದ್ಧ ಶ್ರೀಕೃಷ್ಣನ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಿ, ದೇವಸ್ಥಾನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡೋದರ ಜೊತೆಗೆ ಹೆಲಿಪ್ಯಾಡ್‍ನ್ನು ಉದ್ಘಾಟಿಸಲಿದ್ದಾರೆ.

    ಇತ್ತ ಅಮೇಥಿಯಲ್ಲಿ ಸೋಲಿಸಿದರೂ ಅದ್ಭುತ ಗೆಲುವು ಕೊಟ್ಟ ಕೇರಳದಲ್ಲಿ ರಾಹುಲ್ ಇಂದು 2ನೇ ದಿನದ ಪ್ರವಾಸ ಕೈಗೊಳ್ಳಲಿದ್ದಾರೆ. ತಮ್ಮ ಹೊಸ ಕ್ಷೇತ್ರ ವಯನಾಡಲ್ಲಿ ರೋಡ್ ಶೋ ಜೊತೆಗೆ ಸನ್ಮಾನವನ್ನೂ ಸ್ವೀಕರಿಸಲಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಅಧ್ಯಕ್ಷ ಸ್ಥಾನದಿಂದ ರಾಹುಲ್ ಗಾಂಧಿ ಇಳಿಯೋದು ಸರಿಯಲ್ಲ, ಬದಲಿಗೆ ಪಕ್ಷದಲ್ಲಿ ಎದ್ದಿರುವ ಬೆಂಕಿಯನ್ನ ಆರಿಸಬೇಕು ಎಂದು ಚಿಕ್ಕಬಳ್ಳಾಪುರ ಮಾಜಿ ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.

    ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯನ್ನ ಖಾಲಿ ಇಡಲು ಸಾಧ್ಯವಿಲ್ಲ. ಅಧ್ಯಕ್ಷರು ಕಾರ್ಯಪ್ರವೃತ್ತರಾಗಿ ಯುದ್ಧೋಪಾದಿಯಲ್ಲಿ ಪಕ್ಷದಲ್ಲಿ ಶಿಸ್ತು ತರಬೇಕು. ಒಂದು ವೇಳೆ ರಾಜೀನಾಮೆ ಕೊಡಬೇಕು ಎಂದು ಅನಿಸಿದರೂ ಅದಕ್ಕಿದು ಸಮಯವಲ್ಲ. ಸೋಲಿಗೆ ಕಾರಣವಾದ ರಾಜ್ಯ ನಾಯಕರ ಮೇಲೆ ಕ್ರಮಕೈಗೊಳ್ಳಬೇಕು. ಅದು ಅವರ ಕರ್ತವ್ಯ ಅಂತ ಮೊಯ್ಲಿ ಹೇಳಿದ್ದಾರೆ.

  • ಸಿಎಂ ವಿದೇಶ ಪ್ರವಾಸ ಕೈಗೊಂಡ್ರೇ ಅದೇನು ದೊಡ್ಡ ಅಪರಾಧವಲ್ಲ: ಸಚಿವ ಶಿವಶಂಕರರೆಡ್ಡಿ

    ಸಿಎಂ ವಿದೇಶ ಪ್ರವಾಸ ಕೈಗೊಂಡ್ರೇ ಅದೇನು ದೊಡ್ಡ ಅಪರಾಧವಲ್ಲ: ಸಚಿವ ಶಿವಶಂಕರರೆಡ್ಡಿ

    ಚಿಕ್ಕಬಳ್ಳಾಪುರ: ಸಿಎಂ ಕುಮಾರಸ್ವಾಮಿ ಎರಡು ದಿನ ಪ್ರವಾಸ ಕೈಗೊಂಡರೆ ಅದೇನು ದೊಡ್ಡ ಅಪರಾಧವಲ್ಲ, ಆರೋಗ್ಯ ದೃಷ್ಟಿ ಹಾಗೂ ಬೇರೆ ಬೇರೆ ಕಾರಣಕ್ಕೆ ಹೋಗಿರಬಹುದು. ಆದರೆ ಇದಕ್ಕೆ ವಿರೋಧ ಪಕ್ಷಗಳು ಬರಗಾಲದಲ್ಲಿ ವಿದೇಶ ಪ್ರವಾಸ ಅಂತ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಹೇಳಿದ್ದಾರೆ.

    ಚಿಕ್ಕಬಳ್ಳಾಪುರ ತಾಲೂಕು ದಿಬ್ಬೂರು ಗ್ರಾಮದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ಬರ ನಿರ್ವಹಣೆ ಸಂಬಂಧ ಸರ್ಕಾರ ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತಿದೆ. ಆದರೆ ವಿಪಕ್ಷದವರು ಬರಗಾಲದಲ್ಲಿ ವಿದೇಶ ಪ್ರವಾಸ ಅಂತ ಬೇರೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದರು.

    ಸಮ್ಮಿಶ್ರ ಸರ್ಕಾರದಲ್ಲಿ ಕೆಲ ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಸಾಮಾನ್ಯ, ಪಕ್ಷದ ನಾಯಕರೇ ಆಗಲಿ, ಮಂತ್ರಿಗಳೇ ಆಗಲಿ ಕೂತು ಬಗೆ ಹರಿಸಿಕೊಳ್ಳಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಹತ್ತಿಕ್ಕಲು ನಾವು ದೇಶ-ರಾಜ್ಯದ ಹಿತದೃಷ್ಟಿಯಿಂದ ಒಂದಾಗಿ ಹೋಗಬೇಕಿದೆ. ಹೀಗಾಗಿ ಯಾರೂ ಕೂಡ ಯಾವುದೇ ಭಿನ್ನಾಭಿಪ್ರಾಯಗಳು ಬಂದಾಗ ಮಿತಿ ಮೀರಿ ಮಾತನಾಡುವುದು ಸರಿಯಲ್ಲ ಎಂದರು.

    ಇದೇ ವೇಳೆ ಚಿಕ್ಕಬಳ್ಳಾಪುರ ಶಾಸಕ ಡಾ ಕೆ. ಸುಧಾಕರ್‍ಗೆ ಪರಿಸರ ಮಾಲಿನ್ಯ ಮಂಡಳಿ ಅಧ್ಯಕ್ಷ ಸ್ಥಾನ ಕೈ ತಪ್ಪಿದೆ ಎನ್ನಲಾದ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಪಿಸಿಬಿ ಅಧ್ಯಕ್ಷ ಸ್ಥಾನಕ್ಕೆ ಅದರದ್ದೇ ಆದ ಮಾನದಂಡಗಳಿವೆ, ಈ ವಿಷಯವನ್ನು ನಾನು ಸಹ ಮಾಧ್ಯಮದಲ್ಲಿ ಗಮನಿಸಿದೆ, ಪಿಸಿಬಿ ಅಧ್ಯಕ್ಷರಾಗಲು ಅದರದ್ದೇ ಆದ ವಿದ್ಯಾಭ್ಯಾಸದ ಅರ್ಹತೆ ಇರಬೇಕು ಜೊತೆಗೆ ಪರಿಸರದ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು ಅಂತಿದೆ. ಹೀಗಾಗಿ ಪಿಸಿಬಿ ಸ್ಥಾನ ತಪ್ಪಿರಬೇಕೇ ಹೊರತು ಬೇರೆ ಯಾವ ಉದ್ದೇಶಗಳಿಂದಲ್ಲ ಎಂಬುದು ನನ್ನ ಭಾವನೆ ಅಂತ ಸ್ಪಷ್ಟಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 15 ದಿನದಲ್ಲಿ  ರಸ್ತೆಗುಂಡಿ ಮುಚ್ಚದವರಿಗೆ ಫಾರಿನ್ ಟ್ರಿಪ್ ಭಾಗ್ಯ – ದುಬೈಗೆ ಸಂಪತ್‍ರಾಜ್ ಪ್ರವಾಸ

    15 ದಿನದಲ್ಲಿ ರಸ್ತೆಗುಂಡಿ ಮುಚ್ಚದವರಿಗೆ ಫಾರಿನ್ ಟ್ರಿಪ್ ಭಾಗ್ಯ – ದುಬೈಗೆ ಸಂಪತ್‍ರಾಜ್ ಪ್ರವಾಸ

    ಬೆಂಗಳೂರು: ನಗರದಲ್ಲಿ ನೀವು ರಸ್ತೆ ಗುಂಡಿಗೆ ಬಿದ್ದು ಒದ್ದಾಡಿ. ಬಿಬಿಎಂಪಿ ಮೇಯರ್ ಸಾಹೇಬ್ರು ವಿದೇಶದಲ್ಲಿ ಸುತ್ತಾಡ್ತಾರೆ.

    ಹೌದು. ಬೆಂಗಳೂರಿನ ರಸ್ತೆಗುಂಡಿಗಳಲ್ಲಿ ಜನ ಸಾಯುತ್ತಿದ್ರು ಮೇಯರ್ ಸಂಪತ್ ರಾಜ್ ಫಾರಿನ್ ಟ್ರಿಪ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಮೇಯರ್ ಆಗಿ ಒಂದುವರೆ ತಿಂಗಳಿಗೆ ದುಬೈ ಸುತ್ತೋಕ್ಕೆ ಹೊರಟಿದ್ದಾರೆ.

    15 ದಿನಗಳಲ್ಲಿ ಗುಂಡಿ ಮುಚ್ಚೋಕೆ ಆಗದ ಮೇಯರ್‍ಗೆ ವಿದೇಶ ಪ್ರವಾಸದ ಭಾಗ್ಯ ಸಿಕ್ಕಿದೆ. ಮೊನ್ನೆ ರಾತ್ರಿಯೇ ಸ್ನೇಹಿತರೊಂದಿಗೆ ದುಬೈ ಫ್ಲೈಟ್ ಹತ್ತಿದ್ದಾರೆ.

    ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಾಕೀರ್ ಅಹ್ಮದ್‍ರಿಂದ ಬಿಬಿಎಂಪಿ ಮೇಯರ್‍ಗೆ ಪ್ರವಾಸದ ಗಿಫ್ಟ್ ಸಿಕ್ಕಿದೆ. ಜಾಕೀರ್ ಅಹ್ಮದ್ ನೂತನವಾಗಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

  • ಬರಗಾಲವಿದ್ರೂ ವಿದೇಶ ವ್ಯಾಮೋಹ- ಸರ್ಕಾರದ ದುಡ್ಡಲ್ಲಿ ಮಂತ್ರಿ ರುದ್ರಪ್ಪ ಲಮಾಣಿ ಫ್ಯಾಮಿಲಿ ಟ್ರಿಪ್

    ಬರಗಾಲವಿದ್ರೂ ವಿದೇಶ ವ್ಯಾಮೋಹ- ಸರ್ಕಾರದ ದುಡ್ಡಲ್ಲಿ ಮಂತ್ರಿ ರುದ್ರಪ್ಪ ಲಮಾಣಿ ಫ್ಯಾಮಿಲಿ ಟ್ರಿಪ್

    ಹಾವೇರಿ: ರಾಜ್ಯದಲ್ಲಿ ಬರಗಾಲ ತಂಡವವಾಡ್ತಾ ಇದ್ರೂ ಮಿನಿಸ್ಟರ್‍ಗಳು ಫಾರಿನ್ ಟೂರ್ ಚಟ ಬಿಟ್ಟಿಲ್ಲ. ಜವಳಿ ಸಮಾವೇಶದ ಸೋಗಿನಲ್ಲಿ ಜವಳಿ ಮಂತ್ರಿ ರುದ್ರಪ್ಪ ಲಮಾಣಿ ಒಂದು ವಾರ ಫಾರಿನ್ ಟೂರ್ ಹೊರಟ್ಟಿದ್ದಾರೆ.

    ರಷ್ಯಾದ ಪೀಟರ್ಸ್‍ಬರ್ಗ್‍ನಲ್ಲಿ ಜವಳಿ ಕುರಿತು ಸಮಾವೇಶ ನಡೆಯುತ್ತದೆ. ಹಾಗಾಗಿ ಇಂದು ಸಂಜೆ ಫಾರಿನ್ ಪ್ರವಾಸಕ್ಕೆ ಹೊರಟಿದ್ದೇವೆ ಎಂದು ಸಚಿವಾಲಯ ಹೇಳಿದೆ. ರುದ್ರಪ್ಪ ಲಮಾಣಿಗೆ ಕುಟುಂಬ ಸದಸ್ಯರು ಕೂಡ ಸಾಥ್ ಕೊಡುತ್ತಿದ್ದಾರೆ ಎನ್ನಲಾಗಿದೆ.

    ಜವಳಿ ಮಂತ್ರಿ ನಾನೊಬ್ಬನೇ ಹೋಗೋದು ಸರಿ ಇಲ್ಲ ಅಂತ ಸರ್ಕಾರಿ ದುಡ್ಡಿನಲ್ಲಿ ಕುಟುಂಬ ಸದಸ್ಯರಿಗೂ ಫಾರಿನ್ ದರ್ಶನ ಮಾಡಿಸೋಕೆ ಹೊರಟಿದ್ದಾರೆ. ಇದರ ಜೊತೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿಗೂ ಪ್ರವಾಸ ಭಾಗ್ಯ ಕೊಟ್ಟಿದ್ದಾರಂತೆ. ಮಿನಿಸ್ಟರ್ ಓಕೆ ಅಂದ ಕೂಡಲೇ ಆಪ್ತ ಸಹಾಯಕ ಕೃಷ್ಣನಾಯಕ್, ಡೈರಕ್ಟರ್ ರಮೇಶ್, ಕೈಮಗ್ಗ ನಿಗಮದ ಎಂ.ಡಿ. ಶ್ರೀನಿವಾಸ್‍ಮೂರ್ತಿ, ಜಂಟಿ ನಿದೇರ್ಶಕ ಪ್ರಕಾಶ್ ಎಲ್ಲರೂ ಲಗೇಜ್ ಪ್ಯಾಕ್ ಮಾಡಿಕೊಂಡು ಇಂದು ಸಂಜೆ ವಿಮಾನ ಹತ್ತೋಕೆ ಸಿದ್ದವಾಗಿದ್ದರೆ.

    ಸರ್ಕಾರಿ ದುಡ್ಡಿನಲ್ಲಿ ತಮ್ಮ ಕುಟುಂಬಸ್ಥರಿಗೂ ವಿದೇಶದ ದರ್ಶನ ಮಾಡಿಸುತ್ತಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.