Tag: football

  • ಕ್ರಿಶ್ಚಿಯಾನೊ ರೊನಾಲ್ಡೊ ಹೊಸ ಕ್ಲಬ್ ಸೇರ್ಪಡೆ: ಟ್ರೆಂಡ್ ಆಯ್ತು ನಂ-7

    ಕ್ರಿಶ್ಚಿಯಾನೊ ರೊನಾಲ್ಡೊ ಹೊಸ ಕ್ಲಬ್ ಸೇರ್ಪಡೆ: ಟ್ರೆಂಡ್ ಆಯ್ತು ನಂ-7

    ಟ್ಯುರಿನ್: ಪೋರ್ಚುಗಲ್ ಫುಟ್‍ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ಇಟಲಿಯ ಜುವೆಂಟಸ್ ಕ್ಲಬ್ ತ್ಯಜಿಸಿ, ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಸೇರ್ಪಡೆಗೊಂಡಿದ್ದಾರೆ. ಈ ನಡುವೆ ಅವರ ಜೆರ್ಸಿ ನಂಬರ್ 7 ಕ್ರಿಕೆಟ್ ಲೋಕದಲ್ಲೂ ಟ್ರೆಂಡ್ ಸೃಷ್ಟಿಸಿದೆ.

    ಕ್ರಿಶ್ಚಿಯಾನೊ ರೊನಾಲ್ಡೊ ಜುವೆಂಟಸ್ ಕ್ಲಬ್ 2018ರಿಂದ ಜುವೆಂಟಸ್ ಕ್ಲಬ್ ಪರ ಆಡುತ್ತಿದ್ದರು. ಇದೀಗ ಆ ಕ್ಲಬ್‍ಗೆ ಗುಡ್ ಬೈ ಹೇಳಿ ತನ್ನ ಹಳೆಯ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಕೂಡಿಕೊಂಡಿದ್ದಾರೆ. ಈ ಹಿಂದೆ ರೊನಾಲ್ಡೊ 2003ರಿಂದ 2009ರ ವರೆಗೆ ಇದೇ ಕ್ಲಬ್ ಪರ ಆಡಿದ್ದರು. ಇದೀಗ ಮತ್ತೆ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ರೊನಾಲ್ಡೊ ಆಗಮನವಾಗಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

    ರೊನಾಲ್ಡೊ ಅತ್ತ ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಸೇರ್ಪಡೆಗೊಳ್ಳುವುದು ಖಚಿವಾಗುತ್ತಿದ್ದಂತೆ ಇತ್ತ ಕ್ರಿಕೆಟ್ ಲೋಕದಲ್ಲಿ ನಂ-7 ಸುದ್ದಿ ಮಾಡಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಹೇಂದ್ರ ಸಿಂಗ್ ಧೋನಿಯವರ ಫೋಟೋ ಹಾಕಿಕೊಂಡು ನಮ್ಮ ಜೆರ್ಸಿ ನಂಬರ್ 7 ಇನ್ನೂ ಮುಂದೆ ಮ್ಯಾಂಚೆಸ್ಟರ್ ಯುನೈಟೆಡ್‍ನಲ್ಲಿ ಎಂದು ಬರೆದುಕೊಂಡಿದೆ.

    ಫುಟ್‍ಬಾಲ್‍ನಲ್ಲಿ 7ನಂಬರ್ ಜೆರ್ಸಿಯಲ್ಲಿ ರೊನಾಲ್ಡೊ ಕಾಣಿಸಿಕೊಂಡರೆ, ಕ್ರಿಕೆಟ್ ಲೋಕದಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ 7 ನಂಬರ್ ಜೆರ್ಸಿಯಲ್ಲಿ ಮಿಂಚಿದ್ದಾರೆ. ಇದೀಗ ಎರಡು ಬೇರೆ ಬೇರೆ ಕ್ರೀಡೆಯ ದಿಗ್ಗಜ ಆಟಗಾರ ಜೆರ್ಸಿ ನಂಬರ್ ಟ್ರೆಂಡ್ ಸೃಷ್ಟಿಸಿದೆ. ಇದನ್ನೂ ಓದಿ: ವೈರಲ್ ಆಯ್ತು ಚಿನ್ನದ ಹುಡುಗನ ಮೂರು ವರ್ಷದ ಹಳೆಯ ವೀಡಿಯೋ

  • ಮೆಸ್ಸಿ ಬಳಸಿದ್ದ ಒಂದು ಟಿಶ್ಯೂ ಪೇಪರ್ ಬೆಲೆ ಎಷ್ಟು ಕೋಟಿ ಗೊತ್ತಾ?

    ಮೆಸ್ಸಿ ಬಳಸಿದ್ದ ಒಂದು ಟಿಶ್ಯೂ ಪೇಪರ್ ಬೆಲೆ ಎಷ್ಟು ಕೋಟಿ ಗೊತ್ತಾ?

    ಪ್ಯಾರಿಸ್: ಕೆಲದಿನಗಳ ಹಿಂದೆ ಬಾರ್ಸಿಲೋನಾ ತೊರೆದು ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ಖ್ಯಾತ ಫುಟ್‍ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಸೇರಿದ್ದಾರೆ. ಈ ಮುನ್ನ ಬಾರ್ಸಿಲೋನಾ ತಂಡದೊಂದಿಗಿನ ತನ್ನ 21 ವರ್ಷಗಳ ಒಡನಾಟಕ್ಕೆ ಅಂತ್ಯ ಆಡಿದ ಸುದ್ದಿಗೋಷ್ಠಿಯಲ್ಲಿ ಮೆಸ್ಸಿ ಕಣ್ಣೀರು ಹಾಕಿದ್ದರು. ಈ ವೇಳೆ ಕಣ್ಣೀರು ಒರೆಸಿಕೊಳ್ಳಲು ಬಳಸಿದ ಟಿಶ್ಯೂ ಪೇಪರ್ 7.43 ಕೋಟಿ(1 ಮಿಲಿಯನ್)ಕೋಟಿ ರೂಪಾಯಿಗೆ ಹರಾಜು ಹಾಕಲಾಗಿದೆ.

    ಮೆಸ್ಸಿ ಬಾರ್ಸಿಲೋನಾ ತಂಡಕ್ಕೆ ವಿದಾಯ ಹೇಳುವ ಸಂದರ್ಭ ತನ್ನ 21 ವರ್ಷಗಳ ಒಡನಾಟವನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಈ ವೇಳೆ ಅವರೊಂದಿಗಿದ್ದ ಅವರ ಪತ್ನಿ ಆಂಟೋನೆಲಾ ರೊಕುಜೊ ಅವರು ಟಿಶ್ಯೂ ಪೇಪರ್‍ ನ್ನು ನೀಡಿದ್ದರು. ಆ ಟಿಶ್ಯೂನಲ್ಲಿ ಮೆಸ್ಸಿ ಕಣ್ಣೀರು ಒರೆಸಿಕೊಂಡು ಅಲ್ಲೇ ಕೆಳಕ್ಕೆ ಹಾಕಿದ್ದರು. ಸುದ್ದಿಗೋಷ್ಠಿ ಬಳಿಕ ಆ ಟಿಶ್ಯೂ ಪೇಪರ್‍ ನ್ನು ವ್ಯಕ್ತಿಯೊಬ್ಬರು ಎತ್ತಿಕೊಂಡು ಇದೀಗ ಇ-ಕಾಮರ್ಸ್ ವೆಬ್‍ಸೈಟ್ ಒಂದರಲ್ಲಿ ಸುಮಾರು 7.43 ಕೋಟಿಗೆ ಹರಾಜಿಗಿಟ್ಟಿದ್ದಾರೆ. ಇದನ್ನೂ ಓದಿ: ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಹರಾಜಿಗಿಟ್ಟ ವ್ಯಕ್ತಿ, ಈ ಟಿಶ್ಯೂನಲ್ಲಿ ಮೆಸ್ಸಿ ಅವರ ಜೆನೆಟಿಕ್ ಡಿಎನ್‍ಎ ಇದೆ. ಮೆಸ್ಸಿ ಅವರ ಕ್ಲೋನ್ ಸಿದ್ಧಪಡಿಸಲು ಇದು ಉಪಯೋಗವಾಗಬಹುದೆಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಟಿಶ್ಯೂವನ್ನು ಯಾರು ಖರೀದಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ. ಇದನ್ನೂ ಓದಿ: ಟಿ20 ವರ್ಲ್ಡ್ ಕಪ್ – ಅಕ್ಟೋಬರ್ 24ರಂದು ಭಾರತ Vs ಪಾಕಿಸ್ತಾನ

  • ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ

    ವಿಮಾನದಿಂದ ಬಿದ್ದವರ ಗುರುತು ಪತ್ತೆ- ಮೂವರಲ್ಲಿ ಒಬ್ಬ ಯುವ ಫುಟ್‍ಬಾಲ್ ಆಟಗಾರ

    ಕಾಬೂಲ್: ಅಘ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಿದ್ದಂತೆ ಜನ ಭಯಗೊಂಡು ದೇಶ ತೊರೆಯಲು ಸಿಕ್ಕ ಸಿಕ್ಕ ವಿಮಾನ ಹತ್ತಲು ಪ್ರಾರಂಭಿಸಿದ್ದರು. ಈ ವೇಳೆ ಅಮೆರಿಕಾಗೆ ತೆರಳಲುತ್ತಿದ್ದ ವಿಮಾನ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ವಿಮಾನದ ಮೇಲಿಂದ ಮೂವರು ಬಿದ್ದಿದ್ದರು. ಇದೀಗ ಅವರ ಗುರುತು ಪತ್ತೆಯಾಗಿದ್ದು, ಮೂವರಲ್ಲಿ ಓರ್ವ ಅಘ್ಘಾನ್‍ನ ಯುವ ಫುಟ್‍ಬಾಲ್ ಆಟಗಾರ ಎಂದು ವರದಿಯಾಗಿದೆ.

    ಆಗಸ್ಟ್ 16ರಂದು ಅಘ್ಘಾನಿಸ್ತಾನದ ಜನರು ವಿಮಾನ ನಿಲ್ದಾಣಗಳತ್ತ ಆಗಮಿಸಿ ವಿಮಾನಗಳನ್ನೇರಿ ದೇಶ ತೊರೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ವಿಮಾನದಿಂದ ಮೂವರು ಕೆಳಗೆ ಬಿದ್ದಿರುವ ಬಗ್ಗೆ ವರದಿಯಾಗಿತ್ತು. ಆ ಮೂವರಲ್ಲಿ ಒಬ್ಬರು ಶಫೀವುಲ್ಲಾ ಮತ್ತೊಬ್ಬರು ಫಿದಾ ಮೊಹಮ್ಮದ್ ಎಂದು ಗುರುತು ಪತ್ತೆಯಾಗಿತ್ತು. ಬಳಿಕ ಇದೀಗ ಇನ್ನೊಬ್ಬರ ಗುರುತು ಕೂಡ ಪತ್ತೆಯಾಗಿದ್ದು ಅವರನ್ನು ಅಘ್ಘಾನಿಸ್ತಾನದ ಯುವ ಫುಟ್‍ಬಾಲ್ ಆಟಗಾರ ಝಾಕಿ ಅನ್ವಾರಿ ಎಂದು ಗುರುತಿಸಲಾಗಿದೆ.

    ಈ ಬಗ್ಗೆ ಅಘ್ಘಾನಿಸ್ತಾನದ ರಾಷ್ಟ್ರೀಯ ಫುಟ್‍ಬಾಲ್ ತಂಡ ಯುವ ಆಟಗಾರರಾದ ಝಾಕಿ ಅನ್ವಾರಿ ಅವರ ಸಾವಿನ ಬಗ್ಗೆ ದೃಢಪಡಿಸಿ ಸಂತಾಪ ಸೂಚಿಸಿದೆ. ಇದನ್ನೂ ಓದಿ: “ಜೋರಾದ ಸದ್ದು ಕೇಳಿಸ್ತು.. ನೋಡಿದ್ರೆ ಮನೆ ಮೇಲೆ ಇಬ್ರು ಬಿದ್ದಿದ್ರು”

    ಅಮೆರಿಕಾದ ಪ್ಲೇನ್ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ಮೇಲಿಂದ ಇಬ್ಬರು ಬೀಳುವ ಭಯಾನಕ ದೃಶ್ಯ ಮೊಬೈಲ್ ಗಳಲ್ಲಿ ಸೆರೆಯಾಗಿತ್ತು. ಅಂದು ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆಯಾಗಿದೆ.

    ವಲಿ ಸಾಲೆಕ್ ಎಂಬವರ ಮನೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಎರಡು ಗಂಟೆ ನಂತ್ರ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ಮೇಲಿನಿಂದ ಏನೋ ಬಿದ್ದಂತೆ ಆಯ್ತು. ನಾವು ಟೈರ್ ಸ್ಫೋಟಗೊಂಡು ಮನೆಯ ಮೇಲೆ ಬಂದಿದೆಯಾ ಅಂತ ನೋಡಲು ಹೋದೆ. ನನ್ನೊಂದಿಗೆ ಮಗಳು ಮತ್ತು ಪತ್ನಿ ಸಹ ಬಂದರು. ಮೇಲೆ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿದ್ದವು. ಈ ಭೀಕರ ದೃಶ್ಯ ಕಂಡ ಪತ್ನಿ ಮತ್ತು ಮಗಳು ಮೂರ್ಛೆ ಹೋದರು ಎಂದು ವಲಿ ಹೇಳ್ತಾರೆ.  ಇದನ್ನೂ ಓದಿ: ಅಘ್ಘಾನ್ ಕ್ರಿಕೆಟ್ ಮಂಡಳಿ ವಶಕ್ಕೆ ತಾಲಿಬಾನ್ ಕಸರತ್ತು

    ಸ್ಥಳೀಯರ ಸಹಾಯದಿಂದ ಎರಡೂ ಶವಗಳನ್ನು ಸಮೀಪದ ಮಸೀದಿ ಬಳಿ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ಇಬ್ಬರ ಜೇಬುಗಳನ್ನ ಪರಿಶೀಲಿಸಿದಾಗ ಅವರ ಗುರುತು ಪತ್ತೆಯಾಯ್ತು. ಒಬ್ಬರು ಶಫೀವುಲ್ಲಾ, ಮತ್ತೊಬ್ಬರು ಫಿದಾ ಮೊಹಮ್ಮದ್. ಶಫೀವುಲ್ಲಾ ದಾಖಲೆ ಆತ ವೈದ್ಯ ಅಂತ ಗೊತ್ತಾಯ್ತು. ಇಬ್ಬರ 30 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

  • ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾದ ಪ್ರಿಯಾಂಕಾಗೆ ನೆರವಿನ ಹಸ್ತ

    ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾದ ಪ್ರಿಯಾಂಕಾಗೆ ನೆರವಿನ ಹಸ್ತ

    – ಶಾಸಕ, ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ

    ಬೆಳಗಾವಿ: ಉಕ್ರೇನ್‍ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿರಿಯರ ಫುಟ್ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುವ ಭಾರತೀಯ ತಂಡದಲ್ಲಿ ಕರ್ನಾಟಕದ ಐವರು ಸ್ಥಾನ ಪಡೆದಿದ್ದಾರೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಮೂವರು ಬಾಲಕಿಯರಿದ್ದಾರೆ. ಕ್ರೀಡಾಕೂಟಕ್ಕೆ ಆಯ್ಕೆಯಾದರೂ ಹಣಕಾಸಿನ ತೊಂದರೆ ಅನುಭವಿಸುತ್ತಿದ್ದ ಬೆಳಗಾವಿಯ ಕ್ರೀಡಾಪಟುವಿಗೆ ಸ್ಥಳೀಯ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳು ಸಹಾಯ ಹಸ್ತ ಚಾಚಿ ಶುಭ ಹಾರೈಸಿದ್ದಾರೆ.

    ಉಕ್ರೇನ್‍ನಲ್ಲಿ ಅಂತಾರಾಷ್ಟ್ರೀಯ ಕಿರಿಯರ ಪುಟ್ಬಾಲ್ ಚಾಂಪಿಯನ್ ಶಿಪ್ ಪಂದ್ಯ ಆಯೋಜಿಸಲಾಗಿದೆ. ಇವರಲ್ಲಿ ಬೆಳಗಾವಿಯ ಪ್ರಿಯಾಂಕಾ ಕಂಗ್ರಾಳಕರ್, ಅದಿಥಿ ಜಾಧವ್, ಅಂಜಲಿ ಹಿಂಡಲಗೇಕರ್ ಇದ್ದಾರೆ. ಬೆಳಗಾವಿ ಜಿಲ್ಲೆಯ ಮೂವರು ಬಾಲಕಿಯರಿರುವುದು ಕುಂದಾನಗರಿಯ ಗೌರವ ಹೆಚ್ಚಿಸಿದೆ. ಆದರೆ ಕಡುಬಡ ಕುಟುಂಬದ ಪ್ರಿಯಾಂಕಾ ಕಂಗ್ರಾಳಕರ್ ಆರ್ಥಿಕ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಳು. ಸುದ್ದಿ ತಿಳಿದ ಮಾಜಿ ನಗರ ಸೇವಕಿ, ಸಾಮಾಜಿಕ ಕಾರ್ಯಕರ್ತೆ ಸರಳಾ ಹೇರೇಕರ್ ಪ್ರಿಯಾಂಕಾ ನೆರವಿಗೆ ನಿಂತರು.

    ಬಳಿಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಿಯಾಂಕಾಗೆ ನೆರವು ಕೊಡಿಸುವಲ್ಲಿ ಯಶಸ್ವಿಯಾದರು. ಈಗ ಸಂತಸದಲ್ಲಿ ಪ್ರಿಯಾಂಕಾ ಭಾರತೀಯ ತಂಡ ಸೇರಿಸಿಕೊಳ್ಳುವ ತವಕದಲ್ಲಿದ್ದಾಳೆ. ಪ್ರಿಯಾಂಕಾಗೆ ಆರ್ಥಿಕ ನೆರವು ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪಾಲಿಕೆ ಆಯುಕ್ತ ಜಗದೀಶ್, ಡಿಸಿಪಿ ಡಾ.ವಿಕ್ರಮ ಆಮ್ಟೆ ಅವರ ಮಾನವೀಯ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಯಡಿಯೂರಪ್ಪರನ್ನು ನೆನೆದು ಭಾವುಕರಾದ ರೇಣುಕಾಚಾರ್ಯ

    ಈ ವೇಳೆ ನೆರವು ಪಡೆದ ಪ್ರಿಯಾಂಕಾ ಕಂಗ್ರಾಳಕರ್ ಮಾಧ್ಯಮಗಳೊಂದಿಗೆ ಮಾತನಾಡಿ, ಕರ್ನಾಟಕದಿಂದ ನಾವು 5 ಜನ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದೇವೆ. 23 ವರ್ಷದೊಳಗಿನ ಮಿನಿ ಪುಟ್ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದೇವೆ. ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ಕೃತಜ್ಞತೆಗಳು ಎಂದರು.

    ಸಾಮಾಜಿಕ ಕಾರ್ಯಕರ್ತೆ ಸರಳಾ ಹೇರೇಕರ್ ಮಾತನಾಡಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದ ಕ್ರೀಡಾಪ್ರತಿಭೆ ಪ್ರಿಯಾಂಕಾ ನೆರವಿಗೆ ಬಂದವರನ್ನು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಶಾಸಕ ಸತೀಶ್ ಜಾರಕಿಹೊಳಿ, ಡಿಸಿಪಿ ಡಾ.ವಿಕ್ರಮ ಆಮ್ಟೆ, ಪಾಲಿಕೆ ಆಯುಕ್ತ ಜಗದೀಶ್ ಕೆ.ಎಚ್ ಸೇರಿ ಹಲವು ಅಧಿಕಾರಿಗಳು ಹಲವು ಬಗೆಯಲ್ಲಿ ನೆರವು ನೀಡಿದ್ದಾರೆ. ಅವರೆಲ್ಲರಿಗೂ ಬೆಳಗಾವಿ ಜನತೆಯ ಪರವಾಗಿ ಕೃತಜ್ಞತೆಗಳು. ದೇಶದ ತಂಡದಲ್ಲಿ ಸ್ಥಾನ ಪಡೆದಿರುವ ಪ್ರಿಯಾಂಕಾ ಸೇರಿ ಎಲ್ಲ ಕ್ರೀಡಾಪಟುಗಳು ದೇಶ ಹೆಮ್ಮೆ ಪಡುವಂತಹ ಸಾಧನೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಬಸವನಗೌಡ ಪಾಟೀಲ್, ಶುಭಂ ಪಾಟೀಲ್ ಮತ್ತಿತರರು ಇದ್ದರು.

  • ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ

    ಕೋಕ್ ಬಾಟಲ್ ಕೆಳಗಿಟ್ಟ ರೊನಾಲ್ಡೊ- ಕಂಪನಿಗೆ 29 ಸಾವಿರ ಕೋಟಿ ನಷ್ಟ

    ಬುಡಾಪೆಸ್ಟ್: ಪೋರ್ಚುಗಲ್ ಫುಟ್‍ಬಾಲ್ ಟೀಂ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಟೇಬಲ್ ಮೇಲಿರಿಸಿದ್ದ ಕೊಕಾ ಕೋಲಾ ಬಾಟಲ್ ಗಳನ್ನು ಕೆಳಗೆ ಇರಿಸಿದ ಪರಿಣಾಮ ಕಂಪನಿ 29.34 ಸಾವಿರ ಕೋಟಿ ರೂ. ನಷ್ಟ ಅನುಭವಿಸಿದೆ.

    ಶೇರ್ ಮಾರುಕಟ್ಟೆಯಲ್ಲಿ ಕೊಕಾ ಕೋಲಾ ಕಂಪನಿಯ ಶೇರುಗಳ ಮುಖಬೆಲೆ 56.10 ಡಾಲರ್ ನಿಂದ 55.22 ಡಾಲರ್ ಗೆ ಇಳಿಕೆಯಾಗಿದೆ. ಅಂದ್ರೆ ಶೇ.1.6ರಷ್ಟು ಬೆಲೆ ಇಳಿದಿದೆ. ಸುದ್ದಿಗೋಷ್ಠಿ ವೇಳೆ ಟೇಬಲ್ ಮೇಲೆ ಕೊಕಾ ಬಾಟೆಲ್ ಗಳನ್ನು ಇರಿಸಲಾಗಿತ್ತು. ವೇದಿಕೆಯತ್ತ ಬರುತ್ತಲೇ ತಮ್ಮ ಮುಂದಿದ್ದ ಕೊಕಾ ಕೋಲಾ ಬಾಟೆಲ್ ಗಳನ್ನು ಕೆಳಗಿರಿಸಿ, ನೀರು ಕುಡಿಯಿರಿ ಎಂದು ಆ ಬಾಟೆಲ್ ಮುಂದಿಟ್ಟುಕೊಂಡರು.

    ಕೊಕಾ ಕೋಲಾ ಪ್ರಾಯೋಜಕತ್ವ: ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ ಪ್ರಕಾರ ಕೊಕಾ ಕೋಲಾ ಮಾರ್ಕೆಟ್ ವ್ಯಾಲ್ಯೂ 242 ಕೋಟಿ ಅರಬ್ ಡಾಲರ್ ನಿಂದ 238 ಅರಬ್ ಡಾಲರ್ ಕೋಟಿಗೆ ತಲುಪಿದೆ. 11 ದೇಶಗಳಲ್ಲಿ ನಡೆಯುತ್ತಿರುವ ಯುಇಎಫ್‍ಎ ಯುರೋ ಕಪ್ ಗೆ ಕೊಕಾ ಕೋಲಾ ಪ್ರಾಯೋಜಕತ್ವ ಪಡೆದುಕೊಂಡಿದೆ.

    ಫಿಟ್ನೆಸ್ ಡಯಟ್: 36 ವರ್ಷದ ರೊನಾಲ್ಡೊ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನ ಅಳವಡಿಸಿಕೊಂಡಿದ್ದಾರೆ. ಫಿಟ್ನೆಸ್ ಗಾಗಿ ಯಾವುದೇ ರೀತಿಯ ಕೋಲ್ಡ್ ಡ್ರಿಂಕ್ ಮತ್ತು ಏರೆಟೆಡ್ ಡ್ರಿಂಕ್ ಗಳಿಂದ ದೂರ ಇರುತ್ತಾರೆ. ಭಾರತ ಕ್ರಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ವಿಷಯದಲ್ಲಿ ರೊನಾಲ್ಡೋ ಅವರನ್ನ ಫಾಲೋ ಮಾಡುತ್ತಾರೆ. ಕೊಹ್ಲಿ ಅಂತೆ ಹಲವು ಕ್ರೀಡಾಪಟುಗಳು ಫಿಟ್ನೆಸ್ ಗಾಗಿ ರೊನಾಲ್ಡೊ ಅವರನ್ನು ಅನುಸರಿಸುತ್ತಾರೆ.

    ಈ ಪೋರ್ಚುಗಲ್ ತಂಡವನ್ನು ಗ್ರೂಫ್ ಎಫ್ ನಲ್ಲಿರಿಸಲಾಗಿದೆ. ಪೋರ್ಚುಗಲ್ ಜೊತೆ ಜರ್ಮನಿ, ಫ್ರಾನ್ಸ್ ಮತ್ತು ಹಂಗರಿ ಸಹ ಇದೇ ಗ್ರೂಫ್ ನಲ್ಲಿವೆ. ಫ್ರಾನ್ಸ್ ಫಿಫಾ ವರ್ಲ್ಡ್  ಕಪ್ ಚಾಂಪಿಯನ್ ಆಗಿದೆ. ಜರ್ಮನಿ ಮೂರು ಬಾರಿ ಯುರೋ ಚಾಂಪಿಯನ್ ಆಗಿದೆ. 2016ರ ಯುರೋ ಕಪ್ ಫೈನಲ್ ನಲ್ಲಿ ಪೋರ್ಚುಗಲ್ ಎದರು ಫ್ರಾನ್ಸ್ ಸೋಲೊಪ್ಪಿಕೊಂಡಿತ್ತು.

  • ಭಾರತ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಕೋವಿಡ್‍ಗೆ ಬಲಿ

    ಭಾರತ ಫುಟ್ಬಾಲ್ ತಂಡದ ಮಾಜಿ ಕ್ಯಾಪ್ಟನ್ ಕೋವಿಡ್‍ಗೆ ಬಲಿ

    ಉಡುಪಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಉಡುಪಿ ಮೂಲದ ಮಹೇಶ್ ಶೇಖರ ಪದ್ದು ಬಂಗೇರ ಕೋವಿಡ್‍ಗೆ ಬಲಿಯಾಗಿದ್ದಾರೆ.

    ಎಂಬತ್ತರ ದಶಕದಲ್ಲಿ ದೇಶದ ಫುಟ್ಬಾಲ್ ತಂಡವನ್ನು ಮುನ್ನಡೆಸಿದ್ದ ಉಡುಪಿ ಮೂಲದ ಶೇಖರ್ ಪದ್ದು ಬಂಗೇರ ಅವರಿಗೆ 74 ವರ್ಷ ವಯಸ್ಸಾಗಿತ್ತು. ಚಿಕ್ಕಂದಿನಲ್ಲೇ ಉಡುಪಿಯಿಂದ ಮುಂಬೈಗೆ ತೆರಳಿ ಅವರು ಜೀವನ ರೂಪಿಸಿಕೊಂಡಿದ್ದರು. ಭಾರತ ತಂಡದ ಗೋಲ್ ಕೀಪರ್ ಹಾಗೂ ಕ್ಯಾಪ್ಟನ್ ಕೂಡ ಆಗಿದ್ದ ಶೇಖರ್, ಮೂಲತಃ ಉಡುಪಿಯ ಬಡಾನಿಡಿಯೂರಿನವರು. ಶೇಖರ್ ಬಹುಕಾಲ ಮುಂಬೈಯಲ್ಲೇ ವಾಸವಾಗಿದ್ದರು. ಹಲವು ಪ್ರತಿಷ್ಠಿತ ಕ್ಲಬ್-ಸಂಸ್ಥೆಗಳಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿದ್ದು, ಈಗಲೂ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: ಸಿನಿಮಾ ಮಾತ್ರವಲ್ಲ, ಫುಟ್ಬಾಲ್ ಫೀಲ್ಡ್‌ನಲ್ಲೂ ಸನ್ನಿ ಕಮಾಲ್

    ಮುಂಬೈನಲ್ಲಿ ಇದ್ದಾಗಲೇ ಶೇಖರ್ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಕೆಲ ತಿಂಗಳ ಹಿಂದೆ ಮುಂಬೈನಿಂದ ಉಡುಪಿಗೆ ಆಗಮಿಸಿದ್ದರು. ಬಳಿಕ ಇಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಶೇಖರ್ ಮೃತಪಟ್ಟಿದ್ದಾರೆ. ಉಡುಪಿಯ ನಗರದ ಮದರ್ ಆಫ್ ಸಾರೋಸ್ ಚರ್ಚ್ ನಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ವಿಧಿವತ್ತಾಗಿ ಅಂತಿಮ ಸಂಸ್ಕಾರ ಪ್ರಕ್ರಿಯೆ ನಡೆಯಿತು.

  • ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಡೀಲ್‌ ಲೀಕ್‌ – 4,900 ಕೋಟಿಗೆ ಸಹಿ ಹಾಕಿದ್ದ ಮೆಸ್ಸಿ

    ಮ್ಯಾಡ್ರಿಡ್‌: ಅರ್ಜೆಂಟೀನಾದ ಖ್ಯಾತ ಫುಟ್‌ಬಾಲ್‌ ಆಟಗಾರ ಲಿಯೋನಲ್‌ ಮೆಸ್ಸಿ ಕ್ರೀಡಾ ಇತಿಹಾಸದಲ್ಲಿ ಅತಿ ದೊಡ್ಡ ಒಪ್ಪಂದ ಮಾಡಿಕೊಂಡ ವಿಚಾರ ಈಗ ಬಯಲಾಗಿದೆ.

    ಸ್ಪೇನ್‌ ದೇಶದ ಖ್ಯಾತ ಫುಟ್‌ಬಾಲ್‌ ತಂಡ ಬಾರ್ಸಿಲೋನಾ ಪರವಾಗಿ ಮೆಸ್ಸಿ ಆಡುತ್ತಿದ್ದಾರೆ. ಈ ತಂಡದ ಪರ ಆಡಲು 33 ವರ್ಷದ ಮೆಸ್ಸಿ 55,52,37,619 ಯುರೋ(ಅಂದಾಜು 4,900 ಕೋಟಿ ರೂ.) ಒಪ್ಪಂದ ಮಾಡಿಕೊಂಡ ವಿಚಾರ ಈಗ ಬೆಳಕಿಗೆ ಬಂದಿದೆ.

    ಸ್ಪೇನ್‌ನಲ್ಲಿರುವ ದಿನ ಪತ್ರಿಕೆ ʼಎಲ್‌ ಮುಂಡೋʼ ತನ್ನ ಮುಖಪುಟದಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು ವಿಶ್ವಾದ್ಯಂತ ಟ್ರೆಂಡಿಂಗ್‌ ಟಾಪಿಕ್‌ ಆಗಿದೆ. ಮೆಸ್ಸಿ 2017-2021ರ ನಾಲ್ಕು ಆವೃತ್ತಿಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ವಿವಿಧ ಖಚಿತ ಮೂಲಗಳಿಂದ ಕಲೆ ಹಾಕಿ ಈ ವರದಿಯನ್ನು ಪ್ರಕಟಿಸಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

    ಈ ಒಪ್ಪಂದ ಪತ್ರ 30 ಪುಟಗಳಿದ್ದು, 2017ರಲ್ಲಿ ಮೆಸ್ಸಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತನ್ನ ಗಳಿಕೆಯಲ್ಲಿನ ಅರ್ಧದಷ್ಟು ಹಣವನ್ನು ಮೆಸ್ಸಿ ತೆರಿಗೆ ರೂಪದಲ್ಲಿ ಸ್ಪೇನ್‌ನಲ್ಲಿ ಪಾವತಿಸಬೇಕಾಗುತ್ತದೆ. ಈ ಪೈಕಿ138 ದಶಲಕ್ಷ ಯುರೋ ಪ್ರತಿ ಸೀಸನ್‌ಗೆ ಸಿಕ್ಕಿದರೆ, ಒಪ್ಪಂದ ಸ್ವೀಕರಿಸಿದ್ದಕ್ಕೆ 11,52,25,000 ಯುರೋ ನವೀಕರಣ ಶುಲ್ಕ, 9 7,79,29,955 ಲಾಯಲ್ಟಿ ಬೋನಸ್ ಸಿಕ್ಕಿದೆ.

    ಈ ಒಪ್ಪಂದ ಮುಗಿಯಲು ಇನ್ನು 5 ತಿಂಗಳು ಬಾಕಿ ಇದ್ದು ಮೆಸ್ಸಿ ಈಗಾಗಲೇ 51,15,40,545 ಯುರೋ(ಅಂದಾಜು 45,26,58,86,151 ಕೋಟಿ ರೂ.) ಗಳಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ. ಕೋವಿಡ್‌ 19ನಿಂದ ಬಾರ್ಸಿಲೋನಾ ಕ್ಲಬ್‌ ಭಾರೀ ನಷ್ಟಕ್ಕೆ ತುತ್ತಾಗಿದೆ. ಕ್ಲಬ್‌ ದಶಲಕ್ಷ ಯುರೋ ನಷ್ಟದಲ್ಲಿದ್ದು, ಆಟಗಾರರ ಸಂಬಳ ಪಾವತಿಸಲು ಹೆಣಗಾಡುತ್ತಿದೆ.

  • ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ರೇಪ್ ಮಾಡಿದ ಫುಟ್‍ಬಾಲ್ ಮಾಜಿ ಆಟಗಾರ!

    ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ರೇಪ್ ಮಾಡಿದ ಫುಟ್‍ಬಾಲ್ ಮಾಜಿ ಆಟಗಾರ!

    – ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

    ಲಂಡನ್: ಫುಟ್‍ಬಾಲ್ ಮಾಜಿ ಆಟಗಾರನೊಬ್ಬ 14 ವರ್ಷದ ಬಾಲಕಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ನಂತರ ಅತ್ಯಾಚಾರ ಎಸಗಿದ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ.

    ಕಾಮುಕನನ್ನು ಟೈರೆಲ್ ರಾಬಿನ್ಸನ್(23) ಎಂದು ಗುರುತಿಸಲಾಗಿದ್ದು, ಈತ ಬ್ರಿಟನ್ ಫುಟ್‍ಬಾಲ್ ಮಾಜಿ ಆಟಗಾರ. ಸದ್ಯ ಈತನಿಗೆ ಬ್ರಿಟನ್ ನ್ಯಾಯಾಲಯ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ.

    2018ರ ಆಗಸ್ಟ್ 13ರಂದು ಟೈರೆಲ್ 14 ವರ್ಷದ ಬಾಲಕಿಗೆ ವೊಡ್ಕಾ ಕುಡಿಸಿದ್ದನು. ನಂತರ ಮದ್ಯದ ಅಮಲಿನಲ್ಲಿ ತೇಲಾಡುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದನು. ಅಲ್ಲದೆ ಬಾಲಕಿಯ ನಗ್ನ ಫೋಟೋಗಳನ್ನು ತೆಗೆದು, ಸ್ನಾಪ್ ಚಾಟ್ ಆ್ಯಪ್ ಮೂಲಕ ಗೆಳೆಯರೊಂದಿಗೆ ಶೇರ್ ಮಾಡಿದ್ದನು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಟೈರೆಲ್ ನನ್ನು ಬಂಧಿಸಿದ್ದರು.

    ಬಂಧಿಸಿ ತನಿಖೆಯ ನಡೆಸಿದ ವೇಳೆ ಟೈರೆಲ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು. ಅಲ್ಲದೆ ಕಳೆದ ವರ್ಷ ಜನವರಿಯಲ್ಲಿ ನ್ಯಾಯಾಲಯಕ್ಕೆ ತಪ್ಪೊಪ್ಪಿಗೆ ಪತ್ರ ಸಲ್ಲಿಸಿದ್ದನು. ಪತ್ರದಲ್ಲಿ ಬಾಲಕಿಯ ನಗ್ನ ಫೋಟೋಗಳನ್ನು ತಾನೇ ಶೆರ್ ಮಾಡಿರುವುದಾಗಿ ಪತ್ರದಲ್ಲಿ ತಿಳಿಸಿದ್ದನು. ಪ್ರಕರಣ ಸಂಬಂಧ ಮಂಗಳವಾರ ಅಂತಿಮ ವಿಚಾರಣೆ ನಡೆಸಿರುವ ಬ್ರಿಟನ್ ನ್ಯಾಯಾಲಯ ಆತನಿಗೆ ಮೂರೂವರೆ ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

  • ತಾಯಿಯ ಸಂಕಲ್ಪ- ಒಂದು ಕಾಲಿಲ್ಲದಿದ್ದರೂ ಫುಟ್‍ಬಾಲ್ ಆಡುತ್ತಾನೆ ಪೋರ

    ತಾಯಿಯ ಸಂಕಲ್ಪ- ಒಂದು ಕಾಲಿಲ್ಲದಿದ್ದರೂ ಫುಟ್‍ಬಾಲ್ ಆಡುತ್ತಾನೆ ಪೋರ

    ಇಂಫಾಲ್: ಸಮರ್ಪಣಾ ಭಾವ, ದೃಢ ನಿರ್ಧಾರ ಹಾಗೂ ಕಠಿಣ ಪರಿಶ್ರಮವಿದ್ದರೆ ಏನು ಬೇಕಾದರೂ ಸಾಧಿಸಬಹುದು. ದೈಹಿಕ ಅಂಗವೈಕಲ್ಯ ಸಹ ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಈ ಬಾಲಕ ಉದಾಹರಣೆಯಾಗಿದ್ದು, ಒಂದು ಕಾಲು ಇಲ್ಲದಿದ್ದರೂ, ಇತರ ಬಾಲಕರಷ್ಟೇ ಚೆನ್ನಾಗಿ ಫುಟ್‍ಬಾಲ್ ಆಡುತ್ತಾನೆ.

    ಮಣಿಪುರದ ಕುನಾಲ್ ಶ್ರೇಷ್ಠ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದಾನೆ. ಆದರೆ ದೈಹಿಕ ಅಂಗವೈಕಲ್ಯತೆ ಅವನ ನೆಚ್ಚಿನ ಆಟವಾಡಲು ಅಡ್ಡಿಯಾಗಿಲ್ಲ. ಹೀಗಾಗಿ ಇತರ ಮಕ್ಕಳಂತೆ ಅಷ್ಟೇ ಚೆನ್ನಾಗಿ ಫುಟ್‍ಬಾಲ್ ಆಡುತ್ತಾನೆ. ಊರುಗೋಲು ಹಿಡಿದುಕೊಂಡೇ ಸೊಗಸಾಗಿ ಫುಟ್‍ಬಾಲ್ ಆಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ದೈಹಿಕ ಚಟುವಟಿಕೆಗಳು ಮಾತ್ರವಲ್ಲ ಕುನಾಲ್ ನಿತ್ಯ ಒಂದು ದಿನವೂ ತಪ್ಪಿಸದೇ ಶಾಲೆಗೂ ಹೋಗುತ್ತಾನೆ. ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಶಾಲೆ ಇಲ್ಲದಿರುವುದರಿಂದ ತನ್ನ ತಾಯಿಗೆ ಪಾಪ್ಸಿಕಲ್ಸ್ ಹಾಗೂ ಪಾನಿಪೂರಿ ತಯಾರಿಸಲು ಸಹಾಯ ಮಾಡುತ್ತಾನೆ. ಅವರ ತಾಯಿ ಇವುಗಳನ್ನು ಮಾರಾಟ ಮಾಡುತ್ತಾರೆ. ಇಷ್ಟು ಮಾತ್ರವಲ್ಲ ಈ ಪೋರ ಸೈಕಲ್ ಸಹ ಓಡಿಸುತ್ತಾನೆ.

    ಈ ಕುರಿತು ತನ್ನ ಅನಿಸಿಕೆ ಹಂಚಿಕೊಂಡಿದ್ದು, ಫುಟ್‍ಬಾಲ್ ಆಡುವುದೆಂದರೆ ನನಗೆ ತುಂಬಾ ಇಷ್ಟ. ಆರಂಭದಲ್ಲಿ ಬ್ಯಾಲೆನ್ಸ್ ಮಾಡುವುದು ಕಷ್ಟವಾಗುತ್ತಿತ್ತು, ಆಗ ತುಂಬಾ ಹೆದರುತ್ತಿದ್ದೆ. ನಂತರ ಆತ್ಮವಿಶ್ವಾಸ ತಂದುಕೊಂಡೆ. ನನ್ನ ಸ್ನೇಹಿತರು ನನಗೆ ತುಂಬಾ ಬೆಂಬಲ ನೀಡಿದರು. ಶೀಘ್ರವೇ ಗೋಲ್ ಹೊಡೆಯುವ ನಂಬಿಕೆ ನನಗಿದೆ ಎಂದು ಕುನಾಲ್ ತಿಳಿಸಿದ್ದಾನೆ.

    ನಿನ್ನ ಸ್ನೇಹಿತರಿಗಿಂತ ಭಿನ್ನವಾಗಿರುವುದಕ್ಕೆ ನಾನು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ತಾಯಿ ಪ್ರತಿಜ್ಞೆ ಮಾಡಿದ ಬಳಿಕ ಕುನಾಲ್ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದಾನೆ. ನನ್ನ ಮಗ ತನ್ನ ಗೌರವವನ್ನು ಎಂದಿಗೂ ಕಡಿಮೆ ಮಾಡಿಕೊಳ್ಳಬಾರದು, ಇದನ್ನು ನಾನು ಸಹಿಸುವುದಿಲ್ಲ ಎಂದು ತಾಯಿ ಹೇಳಿದ್ದಾರೆ.

    ನನ್ನ ಮಗ ಜನನವಾದಾಗಲೇ ಒಂದು ಕಾಲು ಇರಲಿಲ್ಲ. ಆದರೆ ಅವನ ಗೆಳೆಯರಿಗಿಂತ ಭಿನ್ನವಾಗಿರಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ನಾನು ಪ್ರತಿಜ್ಞೆ ಮಾಡಿದ್ದೇನೆ. ಅವನು ಈ ವರೆಗೆ ಯಾವುದರಲ್ಲೂ ಕಡಿಮೆ ಇಲ್ಲ. ತನ್ನ ಗೌರವಕ್ಕೆ ಧಕ್ಕೆ ತಂದುಕೊಂಡಿಲ್ಲ. ಸ್ವತಃ ಅವನೇ ಸೈಕಲ್ ಓಡಿಸುವುದನ್ನು ಕಲಿತಿದಿದ್ದಾನೆ ಎಂದು ತಾಯಿ ವಿವರಿಸಿದ್ದಾರೆ.

    ನನ್ನ ಮಗನ ಜನನವು ಭಾವನಾತ್ಮಕ ರೋಲರ್ ಕೋಸ್ಟರ್ ರೈಡ್. ನಾನು ತಾಯಿಯಾಗಿದ್ದಕ್ಕೆ ಉತ್ಸುಕಳಾಗಿದ್ದೆ. ಆದರೆ ಮಗುವಿಗೆ ಕಾಲಿಲ್ಲ ಎಂದಾಗ ಒಂದು ಕ್ಷಣ ಗಾಬರಿಯಾದೆ. ವಿಶೇಷ ಜನರು ವಿಶೇಷ ಮಕ್ಕಳೊಂದಿಗೆ ಆಶೀರ್ವದಿಸಲ್ಪಡುತ್ತಾರೆ. ಆದರೆ ನಾನು ಅವನ ಗೆಳೆಯರಿಗಿಂತ ಭಿನ್ನವಾಗಿರಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ ಎಂದು ತಾಯಿ ಭಾವುಕರಾಗಿದ್ದಾರೆ.

    ನೋಬಾಪ್ಸ್ ಗಳನ್ನು ಒದೆಯುವ ಮೂಲಕ 9 ವರ್ಷದ ಕುನಾಲ್ ಫುಟ್‍ಬಾಲ್ ಆಟದ ಮೇಲಿನ ಪ್ರೀತಿಯನ್ನು ಹೆಚ್ಚಿಸಿಕೊಂಡಿದ್ದಾನೆ. ನೋಬಾಪ್ಸ್ ನ್ನು ಚೀನಾದ ಗ್ರೇಪ್‍ಫ್ರೂಟ್ ಎಂದೂ ಕರೆಯುತ್ತಾರೆ. ಅಲ್ಲದೆ ಕುನಾಲ್ ತನ್ನ ಹತ್ತಿರದ ಕಾಂಗ್ಲಾಟೊಂಗ್ಬಿಯ ಫುಟ್ ಬಾಲ್ ಆಟಗಾರ, ಬೆಂಗಳೂರು ಫುಟ್‍ಬಾಲ್ ಕ್ಲಬ್‍ನ ಅಜಯ್ ಛೆತ್ರಿ ಅವರ ಫ್ಯಾನ್ ಆಗಿದ್ದಾನೆ.

  • ಬಿಜೆಪಿ ಸೇರಿದ 24 ಗಂಟೆಯಲ್ಲೇ ಮಾಜಿ ಫುಟ್ಬಾಲ್ ಆಟಗಾರ ರಾಜಕೀಯಕ್ಕೆ ಗುಡ್‍ಬೈ

    ಬಿಜೆಪಿ ಸೇರಿದ 24 ಗಂಟೆಯಲ್ಲೇ ಮಾಜಿ ಫುಟ್ಬಾಲ್ ಆಟಗಾರ ರಾಜಕೀಯಕ್ಕೆ ಗುಡ್‍ಬೈ

    ಕೋಲ್ಕತ್ತಾ: ಬಿಜೆಪಿ ಸೇರಿದ ಭಾರತದ ಮಾಜಿ ಫುಟ್ಬಾಲ್ ಆಟಗಾರ ಮೆಹ್ತಾಬ್ ಹುಸೇನ್ 24 ಗಂಟೆ ಕಳೆಯುವ ವೇಳೆಗೆ ರಾಜಕೀಯದಿಂದ ದೂರವಾಗಿದ್ದಾರೆ.

    ಪಶ್ಚಿಮ ಬಂಗಾಳದ ಮೆಹ್ತಾಬ್ ಹುಸೇನ್ ಫುಟ್ಬಾಲ್‍ನಲ್ಲಿ ಮಿಡ್ ಫೀಲ್ಡ್ ಜನರಲ್ ಆಗಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇತ್ತ ಗುರುವಾರಷ್ಟೇ ಬಿಜೆಪಿ ರಾಜಕೀಯ ಪ್ರವೇಶ ಮಾಡಿದ್ದ ಅವರು 24 ಗಂಟೆ ಕಳೆಯುವ ವೇಳೆಗೆ ರಾಜಕೀಯದಿಂದ ದೂರವಾಗಿದ್ದಾರೆ. ರಾಜಕೀಯಕ್ಕೆ ಸೇರಿದ ನನ್ನ ನಿರ್ಧಾರದ ಕುರಿತು ಕುಟುಂಬಸ್ಥರು ಮತ್ತು ಸ್ನೇಹಿತರು ಆತಂಕ ವ್ಯಕ್ತಪಡಿಸಿದ್ದರು. ಆದ್ದರಿಂದ ನನ್ನ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಹುಸೇನ್ ಹೇಳಿದ್ದಾರೆ.

    ಪಶ್ಚಿಮ ಬಂಗಾಳ ಫುಟ್ಬಾಲ್ ಮಾಜಿ ನಾಯಕರಾಗಿರುವ ಹುಸೇನ್, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ 24 ಗಂಟೆ ಕಳೆಯುವ ಮುನ್ನವೇ ನನಗೆ ಇಂದಿನಿಂದ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಭಾರತ ಪರ 30 ಪಂದ್ಯಗಳನ್ನು ಆಡಿರುವ ಹುಸೇನ್ ಪ್ರಜೆಗಳಿಗೆ ಸೇವೆ ಮಾಡಲು ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ತಮ್ಮ ಪ್ರಯತ್ನಕ್ಕೆ ಜನರು ಬೆಂಬಲ ನೀಡಬೇಕು ಎಂದು ಕೋರಿದ್ದರು. ಆದರೆ ಜನರು ನನ್ನನ್ನು ರಾಜಕೀಯ ನಾಯಕನಾಗಿ ನೋಡಲು ಇಷ್ಟಪಡಲಿಲ್ಲ ಎಂದು ಹುಸೇನ್ ಹೇಳಿದ್ದಾರೆ.

    2018-19ರಲ್ಲಿ ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸಿದ್ದ ಹುಸೇನ್, ಪತ್ನಿ ಹಾಗೂ ಮಕ್ಕಳಿಗೂ ಅವರು ರಾಜಕೀಯ ಸೇರ್ಪಡೆಯಾಗುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಆದರೆ ಹುಸೇನ್ ರಾಜಕೀಯದಿಂದ ದೂರವಾಗಲು ತೃಣಮೂಲ ಕಾಂಗ್ರೆಸ್ ಪಕ್ಷದ ಬೆದರಿಕೆಗಳೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಬೆದರಿಕೆಗಳು ಈ ಹಿಂದೆಯೂ ಹಲವು ಬಾರಿ ನೋಡಿದ್ದೇವೆ. ಆದರೆ ಇಂತಹ ವರ್ತನೆಯಿಂದ ಜನರ ಬೆಂಬಲ ಪಡೆಯಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯದರ್ಶಿ ಸಯಂತನ್ ಬಸು ಆರೋಪಿಸಿದ್ದಾರೆ.