Tag: Food fest

  • ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

    ಪುನೀತ್ ರಾಜ್ ಕುಮಾರ್ ನೆನಪಿಗೆ ಅಪ್ಪು ಹೆಸರಿನಲ್ಲಿ ಫುಡ್ ಫೆಸ್ಟ್

    ನ್ನೇನು ಕೆಲವೇ ಕೆಲವು ದಿನಗಳಲ್ಲಿ ಗಂಧದ ಗುಡಿಯಲ್ಲಿ ಪುನೀತ್ ರಾಜ್ ಕುಮಾರ್ (Puneeth Rajkumar)  ಬೆಳ್ಳಿ ತೆರೆ ಮೇಲೆ ರಾರಾಜಿಸಲಿದ್ದಾರೆ. ಕನ್ನಡನಾಡು ಮಾತ್ರ ಅಲ್ಲ, ದೇಶದ ಜನರು ಅಷ್ಟೇ ಅಲ್ಲ. ಇಡೀ ವಿಶ್ವವೇ ಪುನೀತ್ ರಾಜಕುಮಾರ್ ಕೊನೇ ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದೆ. ಆ ಚಿತ್ರವನ್ನು ಬರ ಮಾಡಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಸಜ್ಜಾಗಿದ್ದಾರೆ. ಅಭಿಮಾಗಳ ಜೊತೆ ಅಶ್ವಿನಿ ಪುನೀತ್ ರಾಜಕುಮಾರ್ ಕೂಡ ಕೈ ಜೋಡಿಸಿದ್ದಾರೆ. ಅಪ್ಪು ಕಡೇ ಚಿತ್ರವನ್ನು ಎಲ್ಲರಿಗೂ ತಲುಪಿಸುವುದು ಮಾತ್ರ ಅಲ್ಲ, ಎಲ್ಲರಿಗೂ ಹೊಸ ಸಂದೇಶವನ್ನು ಈ ಮೂಲಕ ನೀಡಲು ರೆಡಿಯಾಗಿದ್ದಾರೆ. ಇದೇ 21ರಂದು ಅದ್ದೂರಿ ಪ್ರಿ ಇವೆಂಟ್ ರಿಲೀಸ್ ಕಾರ್ಯಕ್ರಮ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ.

    ಗಂಧದಗುಡಿ (Gandhad Gudi) ಬಿಡುಗಡೆ ಮುನ್ನ ನಡೆಯುವ ಈ ಕಾರ್ಯಕ್ರಮದಲ್ಲಿ ಭಾರತದ ಸಿನಿ ದಿಗ್ಗಜರು ಹಾಜರಾಗಲಿದ್ದಾರೆ. ಎಲ್ಲ ಭಾಷೆಯ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಯಾರೆಲ್ಲ ಬರುತ್ತಾರೆ ಎನ್ನುವುದು ಪಕ್ಕಾ ಆಗಿದೆ. ಜೊತೆಗೆ ಅಪ್ಪು (Appu) ಬಳಗ ಎಲ್ಲ ಕಾರ್ಯಗಳನ್ನು ನಿಯತ್ತಾಗಿ ಮಾಡುತ್ತಿದೆ. ಇದೇ ಪ್ರಿ ಇವೆಂಟ್ ಕಾರ್ಯಕ್ರಮ ನಡೆದ ಮರುದಿನ, ಅಂದರೆ ಅಕ್ಟೋಬರ್ 22 ಹಾಗೂ 23 ರಂದು ಬೆಂಗಳೂರಿನಲ್ಲಿ ಪುನೀತ್ ಫುಡ್ ಫೆಸ್ಟ್ (Food Fest) ಅದ್ದೂರಿಯಾಗಿ ನಡೆಯಲಿದೆ. ಅಪ್ಪುಗೆ ಇಷ್ಟವಾದ ನಾನ್ ವೆಜ್ ತಿನಿಸುಗಳನ್ನು ಕೆಲವು ಹೋಟೆಲ್‌ಗಳಲ್ಲಿ ಮಾಡಲಾಗುತ್ತದೆ. ಅದರಲ್ಲಿ ಮೋದಿ ಆಸ್ಪತ್ರೆ ಬಳಿಯ ಡಾ.ರಾಜ್ ದೊನ್ನೆ ಬಿರಿಯಾನಿ ಮನೆ ಕೂಡ ಒಂದು. ಖ್ಯಾತ ನಿರೂಪಕಿ ಅನುಶ್ರೀ (Anushree) ಹೋಟೆಲ್ ಉದ್ಘಾಟಿಸಿದರು.

    ಈ ಹೋಟೆಲ್‌ನಲ್ಲಿ ಅಪ್ಪುಗೆ ಬಲು ಇಷ್ಟವಾದ ಮಟನ್ ಚಾಪ್ಸ್ ಸೇರಿದಂತೆ ಮತ್ತಿತರ ತಿನಿಸುಗಳನ್ನು ಮಾಡಲಾಗುತ್ತದೆ. ಅಪ್ಪು ಅಬಿಮಾನಿಗಳು ಇದನ್ನು ಸವಿಯಬಹುದು. ಬರೀ ಇಲ್ಲಷ್ಟೇ ಅಲ್ಲ, ಬೆಂಗಳೂರಿನ ಅನೇಕ ಹೋಟೆಲ್‌ಗಳು ಈ ಫುಡ್‌ಫೆಸ್ಟ್ನಲ್ಲಿ ಭಾಗವಹಿಸಲಿವೆ. ವೆರೈಟಿ ವೆರೈಟಿ ಅಪ್ಪುಗೆ ಇಷ್ಟವಾದ ನಾನ್‌ವೆಜ್ ಐಟಂ ಮಾಡಲಾಗುತ್ತದೆ. ಹೋಟೆಲ್‌ನಲ್ಲೂ ಇದನ್ನು ತಿನ್ನಬಹುದು. ಅಥವಾ ಆರ್ಡರ್ ಕೂಡ ಮಾಡಬಹುದು. ಇದನ್ನೂ ಓದಿ:ದೊಡ್ಮನೆಯಲ್ಲಿ ಮಕ್ಕಳ ದರ್ಬಾರ್: ಮಗುವನ್ನು ತಬ್ಬಿ ಗಳಗಳನೆ ಅತ್ತ ಮಯೂರಿ

    ಅಪ್ಪು ಅಗಲಿ ಇದೇ ಅಕ್ಟೋಬರ್ ಕೊನೆಯ ವಾರಕ್ಕೆ ಒಂದು ವರ್ಷ. ಮೊದಲ ವರ್ಷದ ಪುಣ್ಯ ತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಪ್ಪು ಕುಟುಂಬ ಮತ್ತು ಅಭಿಮಾನಿಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಅಪ್ಪು ಅವರ ಕನಸುಗಳಲ್ಲಿ ಒಂದಾಗಿದ್ದ ಗಂಧದ ಗುಡಿ ಡಾಕ್ಯುಮೆಂಟರಿ ಕೂಡ ಬಿಡುಗಡೆ ಆಗುತ್ತಿದೆ. ಅಭಿಮಾನಿಗಳು ಕೂಡ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನೆಚ್ಚಿನ ನಟನನ್ನು ನೆನೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಬ್ಲಿಕ್ ಟಿವಿ ಫುಡ್‍ಫೆಸ್ಟ್​ಗೆ ಕೊನೆ ದಿನ- ಭೋಜನ ಸವಿದು ಭಾಗವಹಿಸಿ ಬಹುಮಾನ ಗೆಲ್ಲಿ

    ಪಬ್ಲಿಕ್ ಟಿವಿ ಫುಡ್‍ಫೆಸ್ಟ್​ಗೆ ಕೊನೆ ದಿನ- ಭೋಜನ ಸವಿದು ಭಾಗವಹಿಸಿ ಬಹುಮಾನ ಗೆಲ್ಲಿ

    ಬೆಂಗಳೂರು: ಬಿಸಿ ಬಿಸಿ ಬಜ್ಜಿ ತಿನ್ನಬೇಕು ಅನ್ನೋರಿಗೆ, ಇಂದು ಸಂಡೆಯಪ್ಪಾ ನಾನ್‍ವೆಜ್ ಬೇಕೇಬೇಕು ಅನ್ನೋವರಿಗೆ ಇದೊಂದು ಅಡ್ಡಾ. ಉತ್ತರ ಕರ್ನಾಟಕ ರೊಟ್ಟಿ, ಎಣ್ಣೆಗಾಯಿ ಪಲ್ಯ ತಿನ್ನಬೇಕು ಅನ್ನೋರಿಗೆ ಮತ್ತೊಂದು ಅಡ್ಡಾಕ್ಕೆ ಹೋಗಬೇಕು. ಇವೆಲ್ಲ ಒಂದೇ ಸೂರಿನಡಿ ಸಿಗೋ ಅವಕಾಶವನ್ನ ನಿಮ್ಮ ಪಬ್ಲಿಕ್ ಟಿವಿ ನೀಡಿದೆ.

    ಹೌದು. ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ಎರಡನೇ ಆವೃತ್ತಿಯ ಆಹಾರ ಮೇಳಕ್ಕೆ ಶನಿವಾರ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ನಗರದ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಎರಡು ದಿನಗಳಿಂದ ಫುಡ್‍ಫೆಸ್ಟ್ ನಡೀತಿದೆ. ಉದ್ಘಾಟನಾ ಸಮಾರಂಭದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್. ಆರ್ ರಂಗನಾಥ್, ಪೆಪ್ಸ್ ಮ್ಯಾಟ್ರಿಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಮಾಧವನ್, ನಟ ಪ್ರಜ್ವಲ್ ದೇವರಾಜ್, ನಟಿ ನಿಶ್ವಿಕಾ ನಾಯ್ಡು ಉಪಸ್ಥಿತರಿದ್ರು.

    ಎರಡು ದಿನಗಳ ಫುಡ್‍ಫೆಸ್ಟ್ ಗೆ ಇಂದು ಕೊನೆಯ ದಿನ. ಜೊತೆಗೆ ಸಂಡೇ. ಹಾಗಾಗಿ ಫುಡ್‍ಫೆಸ್ಟ್ ಗೆ ಬನ್ನಿ. ಆಹಾರ ಮೇಳದಲ್ಲಿ ನೂರಕ್ಕೂ ಹೆಚ್ಚು ವೆಜ್ ಮಾತ್ರವಲ್ಲದೇ ನಾನ್‍ವೆಜ್ ಖಾದ್ಯಗಳ 30ಕ್ಕೂ ಹೆಚ್ಚು ಸ್ಟಾಲ್‍ಗಳನ್ನು ಹಾಕಲಾಗಿದೆ. ನಿನ್ನೆ ಪಾನಿಪುರಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು 7 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ, ಫುಲ್ ಏಂಜಾಯ್ ಮಾಡಿದ್ರು.

    ಇಂದು ಭಾನುವಾರ ಹಿನ್ನೆಲೆ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಇಂದು ಮಧ್ಯಾಹ್ನ 2 ಗಂಟೆಗೆ ಪುರುಷರಿಗಾಗಿ ಇಡ್ಲಿ ತಿನ್ನುವ ಸ್ಪರ್ಧೆ ಇದೆ. ಜೊತೆಗೆ ಅರ್ಧ ಗಂಟೆಗೊಮ್ಮೆ ಲಕ್ಕಿ ಡ್ರಾ ಮೂಲಕ ಬಹುಮಾನ ಕೂಪನ್ ನೀಡಲಾಗುತ್ತೆ. ಸಂಜೆನೇ ಫುಡ್‍ಫೆಸ್ಟ್ ಮುಗಿದೋಗತ್ತೆ ಅನ್ನೋ ಟೆನ್ಶನ್ ಬೇಡ. ಯಾಕಂದ್ರೆ ಬೆಳಗ್ಗೆ 10.30ರಿಂದ ರಾತ್ರಿ 10 ಗಂಟೆವರೆಗೂ ಆಹಾರ ಮೇಳವಿರತ್ತೆ. ಜೊತೆಗೆ ಅಹಂ ಆತ್ಮ ಸ್ಕೂಲ್ ವತಿಯಿಂದ ನೃತ್ಯ ಕಾರ್ಯಕ್ರಮವಿದೆ. ಫುಡ್‍ಫೆಸ್ಟ್ ನಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಗುತ್ತದೆ ಎಂದು ಪಬ್ಲಿಕ್ ಟಿವಿ ಸಿಓಓ ಸಿ.ಕೆ ಹರೀಶ್ ತಿಳಿಸಿದ್ದಾರೆ.

    ಭರ್ಜರಿಯಾಗಿ ನಡಿತಿರೋ ಫುಡ್ ಫೆಸ್ಟ್‍ಗೆ ಲಾಸ್ಟ್ ಡೇ ಇಂದು ಕೊನೆ ದಿನ. ಹೀಗಾಗಿ ಮಿಸ್ ಮಾಡದೇ ಪಬ್ಲಿಕ್ ಟಿವಿಯ ಆಹಾರ ಮೇಳಕ್ಕೆ ಬಂದು, ವೆರೈಟಿ ವೆರೈಟಿ ಖಾದ್ಯಗಳನ್ನ ಸವಿದು ಎಂಜಾಯ್ ಮಾಡಿ.

  • ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು, ನಾಳೆ ಫುಡ್ ಫೆಸ್ಟಿವಲ್- ನೀವೂ ಬಂದು ಭಾಗವಹಿಸಿ

    ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು, ನಾಳೆ ಫುಡ್ ಫೆಸ್ಟಿವಲ್- ನೀವೂ ಬಂದು ಭಾಗವಹಿಸಿ

    ಬೆಂಗಳೂರು: ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಒಂದೇ ಸೂರಿನಡಿ ದೊರೆಯುತ್ತವೆ. ಪಬ್ಲಿಕ್ ಟಿವಿ ಸಹಯೋಗದಲ್ಲಿ ಇಂದು ಮತ್ತು ನಾಳೆ ಮಲ್ಲೇಶ್ವರಂನಲ್ಲಿ ಫುಡ್ ಫೆಸ್ಟಿವಲ್ ಆಯೋಜಿಸಲಾಗಿದೆ.

    ನೀವು ವಿವಿಧ ಬಗೆಯ ಭಕ್ಷಭೋಜನ ಸವಿಯ ಬೇಕೆಂದುಕೊಂಡಿದ್ದೀರಾ..? ಕರ್ನಾಟಕ ಅಲ್ಲದೇ ಭಾರತದ ಬೇರೆಬೇರೆ ರಾಜ್ಯಗಳ ಆಹಾರ ಪದ್ಧತಿ ತಿಳ್ಕೋಬೇಕಾ..? ತಡ ಯಾಕೆ, ಇಂದೇ ಮಲ್ಲೇಶ್ವರಂ ಕಡೆ ಹೆಜ್ಜೆ ಹಾಕಿ. ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಈ ಫುಡ್ ಫೆಸ್ಟಿವಲ್ ಅನ್ನು ಆಯೋಜಿಸಲಾಗಿದೆ. ಬೆಳಗ್ಗೆ 10.30ರಿಂದ ರಾತ್ರಿ 9ಗಂಟೆವರೆಗೆ ನೀವು ಬಗೆಬಗೆಯ ತಿಂಡಿ ತಿನಿಸನ್ನು ಮೆಲ್ಲಬಹುದು. ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ರೀತಿಯ ಅಡುಗೆ ರುಚಿ ಫುಡ್ ಫೆಸ್ಟ್ ನಲ್ಲಿರಲಿದೆ.

    ಫುಡ್ ಫೆಸ್ಟ್ ಗೆ ಉಚಿತ ಪ್ರವೇಶವಿದ್ದು, 40 ಕ್ಕೂ ಹೆಚ್ಚು ಮಳಿಗೆಗಳನ್ನ ತೆರೆಯಲಾಗಿದೆ. ಫುಡ್ ಫೆಸ್ಟಿವಲ್‍ನಲ್ಲಿ ಏನೆಲ್ಲಾ ಸ್ಪೆಷನ್ ಇದೆ ಅನ್ನೋದನ್ನ ನೋಡೋದಾದ್ರೆ…
    * ಸುಮಾರು 40ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರ ಪ್ರದರ್ಶನ
    * ಕರ್ನಾಟಕ ಮತ್ತು ಭಾರತದ ವಿವಿಧ ಭಾಗದ ಸಾಂಪ್ರದಾಯಿಕ ಮತ್ತು ವಿಭಿನ್ನ ಆಹಾರಗಳು ಲಭ್ಯ
    * ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು
    * ಪ್ರತಿ 30 ನಿಮಿಷಗಳಿಗೊಮ್ಮೆ ನೋಂದಾಯಿಸಲ್ಪಟ್ಟ ಸಂದರ್ಶಕರಿಗೆ ಲಕ್ಕಿ ಡ್ರಾ ಮೂಲಕ ಉಡುಗೊರೆ

    ಇಷ್ಟೇ ಅಲ್ಲ, ಜತೆಗೆ ಬೆಳಗ್ಗೆ ರಂಗೋಲಿ ಸ್ಪರ್ಧೆ ಕೂಡ ಏರ್ಪಡಿಸಲಾಗಿದೆ. ಫುಡ್ ಫೆಸ್ಟ್ ಗೆ ವಿಸಿಟ್ ಮಾಡಿ, ಬಾಯಿ ಚಪ್ಪರಿಸಿ. ಇಂದು ನಾಳೆ ಮಲ್ಲೇಶ್ವರಂಗೆ ಬರೋದನ್ನು ಮಾತ್ರ ಮರೀಬೇಡಿ. ಇದನ್ನೂ ಓದಿ: ನೀವು ಆಹಾರ ಪ್ರಿಯರೇ, ಹಾಗಾದ್ರೆ ಪಬ್ಲಿಕ್ ಟಿವಿಯ ಫುಡ್ ಫೆಸ್ಟ್‌ಗೆ ಬನ್ನಿ

    https://www.youtube.com/watch?v=KMbntfnjIPk

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರು ದಸರಾದಲ್ಲಿ ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ!

    ಮೈಸೂರು ದಸರಾದಲ್ಲಿ ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ!

    ಮೈಸೂರು: ನಾಡಹಬ್ಬ ದಸರಾಗೆ ಚಾಲನೆ ಸಿಕ್ಕಾಗಿನಿಂದಲೂ ಅರಮನೆ ನಗರಿಯಲ್ಲಿ ದಿನಕ್ಕೊಂದು ಸ್ಪರ್ಧೆಗಳು ಗಮನಸೆಳೆಯುತ್ತಲೇ ಇದ್ದು, ಇಂದು ನಗರದ ಸ್ಕೌಟ್ಸ್-ಗೈಡ್ಸ್ ಮೈದಾನದಲ್ಲಿ ಆಯೋಜಿಸಿದ್ದ ಬಾಳೆಹಣ್ಣು ತಿನ್ನುವ ಸ್ಪರ್ಧೆ ಜನರಿಗೆ ಮನರಂಜನೆ ನೀಡಿತ್ತು.

    ಬಾಳೆ ಹಣ್ಣು ತಿನ್ನುವ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ಆಯೋಜಿಸಲಾಗಿತ್ತು. ಮೊದಲನೆಯದಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು, ನಂತರ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿತ್ತು. ಲಾಟರಿ ಮೂಲಕ ಪ್ರತಿ ವಿಭಾಗಗಳಲ್ಲಿ 10 ಮಂದಿ ಸ್ಪರ್ಧಿಸಿದ್ದರು. ಸ್ಪರ್ಧೆಗೆ ಪಚ್ ಬಾಳೆಯನ್ನು ಬಳಸಲಾಗಿತ್ತು.

    ಶಾಲಾ ಮಕ್ಕಳ ವಿಭಾಗದಲ್ಲಿ 1.10 ನಿಮಿಷದಲ್ಲಿ ನಾಲ್ಕು ಬಾಳೆಹಣ್ಣು ತಿನ್ನುವ ಮೂಲಕ ಪಿರಿಯಾಪಟ್ಟಣದ ಭರತ್ ಮೊದಲನೇ ಸ್ಥಾನ ಪಡೆದುಕೊಂಡರೆ, 1.15 ನಿಮಿಷಗಳ ಮೂಲಕ ಯುಕ್ತ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

    ಪುರುಷರ ವಿಭಾಗದಲ್ಲಿ, 1.30 ನಿಮಿಷದಲ್ಲಿ 5 ಬಾಳೆಹಣ್ಣು ತಿಂದ ಮಹದೇವಸ್ವಾಮಿ ಪ್ರಥಮ ಸ್ಥಾನ ಗೆದ್ದರೆ, 1.45 ನಿಮಿಷಗಳ ಮೂಲಕ ಆಲಾಮ್ ಎರಡನೇ ಸ್ಥಾನ ಪಡೆದರು. ಅಲ್ಲದೇ ಮಹಿಳೆಯರ ವಿಭಾಗದಲ್ಲಿ ಪ್ರತಿಯೊಬ್ಬರಿಗೂ 4 ಬಾಳೆಹಣ್ಣುಗಳನ್ನು ನೀಡಲಾಗಿತ್ತು. 1.2 ನಿಮಿಷದಲ್ಲಿ ನಾಲ್ಕೂ ಬಾಳೆಹಣ್ಣು ತಿನ್ನುವ ಮೂಲಕ ಅಮೃತ ಪ್ರಥಮ ಸ್ಥಾನ ಪಡೆದರೆ, 1.8 ನಿಮಿಷದಲ್ಲಿ ತಿಂದ ಶೋಭಾ ಎರಡನೇ ಸ್ಥಾನ ಗಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ: ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ಮಹಿಳಾ ಮಣಿಗಳು!

    ಮೈಸೂರು ದಸರಾ: ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ಮಹಿಳಾ ಮಣಿಗಳು!

    ಮೈಸೂರು: ನಗರದಲ್ಲಿ ಆಯೋಜಿಸಿದ್ದ ಆಹಾರ ಮೇಳದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಹಿಳಾ ಮಣಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು.

    ನಾಡಹಬ್ಬ ದಸರಾಗೆ ಚಾಲನೆ ಸಿಕ್ಕ ನಂತರ ಅರಮನೆ ನಗರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದಿನದಿಂದ ದಿನಕ್ಕೆ ವಿಶಿಷ್ಟ ಕಾರ್ಯಕ್ರಮಗಳು ನಾಡಿನ ಜನರನ್ನು ಕೈಬೀಸಿ ಕರೆಯುತ್ತಿವೆ. ಬುಧವಾರ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಶಿಷ್ಟವಾಗಿ ಮಹಿಳೆಯರಿಗಾಗಿಯೇ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಕರು ಹಮ್ಮಿಕೊಂಡಿದ್ದರು. ಈ ಸ್ಪರ್ಧೆಗೆ ಲಕ್ಕಿ ಡಿಪ್ ಮೂಲಕ 10 ಜನರನ್ನು ಆಯ್ಕೆ ಮಾಡಿ ಇಡ್ಲಿ ತಿನ್ನುವ ಸ್ಪರ್ಧೆಗೆ ಆರಿಸಲಾಗಿತ್ತು.

    ಮಹಿಳೆಯರು ಅಡುಗೆ ಮಾಡಲು ಸೈ, ತಿನ್ನುವುದಕ್ಕೆ ಸೈ ಎನ್ನುವಂತೆ ತಾ ಮುಂದು ನಾ ಮುಂದು ಎಂಬಂತೆ ಗಬಗಬನೆ ಇಡ್ಲಿಯನ್ನು ತಿಂದರು. ಆದರೆ ಪಡುವಾರಹಳ್ಳಿಯ ಲಲಿತ ಪುಟ್ಟೇಗಾಡ ಎಂಬವರು ಎಲ್ಲರಿಗಿಂತ ಮೊದಲು ಇಡ್ಲಿಯನ್ನು ತಿಂದು ಮುಗಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಮಹಿಳಾ ಮಣಿಯರು ಇಡ್ಲಿಯನ್ನು ತಿನ್ನುವ ಸ್ಪರ್ಧೆಯನ್ನು ನೋಡಲು ಜನ ಮುಗಿಬಿದ್ದಿದ್ದರು.

    ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಶಾಸ್ತ್ರೋಕ್ತವಾಗಿ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಿದ್ದರು.

    ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ದರು. ಇದಲ್ಲದೇ ಬುಧವಾರ ಬೆಳಗ್ಗೆ 11 ಗಂಟೆಗೆ ಅರಮನೆಯಲ್ಲಿ ಅದ್ಧೂರಿಯಾಗಿ ಖಾಸಗಿ ದರ್ಬಾರ್ ಸಹ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 40ಕ್ಕೂ ಹೆಚ್ಚು ಬಗೆಬಗೆಯ ಖಾದ್ಯ – ಮಡಿಕೇರಿಯಲ್ಲಿ ಸ್ಪೆಷಲ್ ಫುಡ್ ಫೆಸ್ಟ್

    40ಕ್ಕೂ ಹೆಚ್ಚು ಬಗೆಬಗೆಯ ಖಾದ್ಯ – ಮಡಿಕೇರಿಯಲ್ಲಿ ಸ್ಪೆಷಲ್ ಫುಡ್ ಫೆಸ್ಟ್

    ಮಡಿಕೇರಿ: ಕೊಡಗಿನ ಆಹಾರ ಪದ್ಧತಿ ತೀರಾ ಭಿನ್ನವಾಗಿದೆ. ಅಲ್ಲಿ ಮಳೆಗಾಲಕ್ಕಂತಲೇ ಕೆಲವೊಂದು ವಿಶೇಷ ಖಾದ್ಯಗಳನ್ನ ಸೇವಿಸಲಾಗುತ್ತದೆ. ಅಂತಹ ವಿಶೇಷ ಆಹಾರಗಳ ಹಬ್ಬವೊಂದು ಮಡಿಕೇರಿಯಲ್ಲಿ ನಡೆದಿದೆ.

    ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಮಡಿಕೇರಿಯಲ್ಲಿ ಫುಡ್ ಫೆಸ್ಟನ್ನು ಆಯೋಜಿಸಲಾಗಿತ್ತು. ಈ ಆಹಾರ ಮೇಳದಲ್ಲಿ 100ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡು 40ಕ್ಕೂ ಹೆಚ್ಚು ಬಗೆಯ ಸ್ಪೆಷಲ್ ಸ್ವಾದಿಷ್ಟ ಖಾದ್ಯಗಳನ್ನ ಉಣಬಡಿಸಿದ್ದಾರೆ. ಪಂದಿ ಕರಿ, ಕೋಳಿ ಕರಿ, ಕೊಯಿಲೆ ಮೀನ್, ಒಣಕ್ ಯರ್ಚಿ, ಅಡಿಕೆ ಪುಟ್, ಕರ್ಜಿಕಾಯಿ, ಕಾಡ್ ಮಾಂಗೆ, ಕೇಂಬು ಕರಿ, ಇವು ಕೊಡಗಿನಲ್ಲಿ ಸಿಗುವ ವಿಶೇಷ ಖಾದ್ಯಗಳ ಹೆಸರುಗಳಾಗಿವೆ.

    ಭಾಷೆ, ಸಂಸ್ಕೃತಿಯಂತೆ, ಕೊಡಗಿನ ಆಹಾರ ಪದ್ಧತಿ ಕೂಡಾ ಇತರೆಡೆಗಿಂತ ತೀರಾ ಭಿನ್ನವಾಗಿದ್ದು, ಅಲ್ಲಿ ಮಳೆಗಾಲಕ್ಕಂತಲೇ ಕೆಲವೊಂದು ವಿಶೇಷ ಖಾದ್ಯಗಳನ್ನ ಸೇವಿಸಲಾಗುತ್ತದೆ. ಅಂತಹ ವಿಶೇಷ ಆಹಾರಗಳ ಹಬ್ಬವೊಂದು ಮಡಿಕೇರಿಯಲ್ಲಿ ನಡೆದಿದೆ. ಈ ಹಬ್ಬದಲ್ಲಿ ಕೊಡವ ನಾರಿಯರು ರುಚಿ ರುಚಿಯಾದ ಕೂರ್ಗ್ ಸ್ಪೆಷಲ್ ಡಿಷ್ ಗಳನ್ನ ಮಾಡಿ ಗಮನ ಸೆಳೆದಿದ್ದಾರೆ.

    ಮಳೆಗಾಲದಲ್ಲಿ ಕೊಡಗಿನ ಆಹಾರ ಪದ್ಧತಿಯೇ ಸಂಪೂರ್ಣವಾಗಿ ಬದಲಾಗುತ್ತದೆ. ವಿಪರೀತ ಮಳೆ ಹಗೂ ಶೀತ ವಾತಾವರಣವಿರುವುದರಿಂದ ಮಳೆಗಾಲದಲ್ಲಿ ಕೊಡಗಿನ ಜನ ಹೆಚ್ಚು ಉಷ್ಣಾಂಶವುಳ್ಳ ಆಹಾರ ಪಧಾರ್ಥಗಳನ್ನೆ ಸೇವಿಸುತ್ತಾರೆ. ಬಿದಿರಿನ ಕಳಲೆ, ಏಡಿ, ಕೆಸ ಸೊಪ್ಪು, ಅಣಬೆ ಇವೆಲ್ಲಾ ಇಲ್ಲಿನ ಮಳೆಗಾಲದ ಫೆವರೀಟ್ ಆಹಾರ ವಸ್ತುಗಳು, ಇಂತಹ ಸುಮಾರು 40ಕ್ಕೂ ಹೆಚ್ಚು ಬಗೆಯ ಖಾದ್ಯಗಳು ಈ ಮೇಳದಲ್ಲಿ ತಯಾರಾಗಿದ್ದವು, ಹಿಂದಿನ ಕಾಲದ ಆಹಾರ ಪದ್ಧತಿಯನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಫುಡ್ ಫೆಸ್ಟ್ ಅನ್ನ ಆಯೋಜಿಸಲಾಗಿತ್ತು. ನೂರಾರು ಮಂದಿ ಪಾಲ್ಗೊಂಡು ಈ ಕೂರ್ಗ್ ಸ್ಪೆಷಲ್ ಫುಡ್ ರುಚಿ ಸವಿದಿದ್ದಾರೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಹೇಳಿದ್ದಾರೆ.

  • ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪಾಗುತ್ತಿದೆ ಭರಚುಕ್ಕಿ ಜಲಪಾತೋತ್ಸವ!

    ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲೆಗುಂಪಾಗುತ್ತಿದೆ ಭರಚುಕ್ಕಿ ಜಲಪಾತೋತ್ಸವ!

    ಚಾಮರಾಜನಗರ: ದಟ್ಟ ಕಾನನದ ಮಧ್ಯೆ ಬೋರ್ಗರೆಯುತ್ತಿರುವ ಜಲಪಾತ. ಆ ಜಲಪಾತಕ್ಕೆ ವಿವಿಧ ಬಣ್ಣಬಣ್ಣದ ದೀಪಾಲಂಕಾರ. ಕಣ್ಣು ಹಾಯಿಸಿದೆಲ್ಲೆಲ್ಲಾ ರಂಗೋ ರಂಗು ಚಿತ್ತಾರ. ಇದೆಲ್ಲ ಒಂದು ಕಡೆಯಾದರೆ ಜನರನ್ನು ಹುಚ್ಚೆದ್ದು ಕುಣಿಸುವಂತ ನಾನಾ ಪ್ರದರ್ಶನ ಮತ್ತೊಂದು ಕಡೆ. ಇಂತಹದ್ದೊಂದು ಸುಂದರ ಸಂಜೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕು ಭರಚುಕ್ಕಿ ಜಲಪಾತದ ಆವರಣದಲ್ಲಿ ಕಳೆದ ಮೂರು ವರ್ಷಗಳಿಂದ ಸೃಷ್ಟಿಯಾಗುತಿತ್ತು. ಆದ್ರೆ ಈಗ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ದಿಂದ ಅದ್ಧೂರಿ ಕಾರ್ಯಕ್ರಮ ಮೂಲೆಗುಂಪಾಗುವ ಹಂತದಲ್ಲಿದೆ. ಈ ತಾಣಕ್ಕೆ ಬಂದ ಪ್ರವಾಸಿಗರು ಬಂದ ದಾರಿಗೆ ಸುಂಕ ಇಲ್ಲ ಅಂತ ಹಿಂತಿರುಗಿ ಹೋಗುತ್ತಿದ್ದಾರೆ.

     

    ಹೌದು. ಸ್ವರ್ಗವನ್ನೇ ಧರೆಗಿಳಿಸಿದ್ದ ಜಲಪಾತೋತ್ಸವದಲ್ಲಿ ಸಾವಿರಾರು ಪ್ರವಾಸಿಗರು ಬಂದು ತಮ್ಮ ತನು ಮನಗಳನ್ನು ತಂಪು ಮಾಡಿಕೊಳ್ಳುತ್ತಿದ್ದರು. ಸಹಕಾರ ಸಚಿವರಾಗಿದ್ದ ಎಚ್.ಎಸ್. ಮಹದೇವ ಪ್ರಸಾದ್ ಅವರು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಯಶಸ್ವಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು.

    ಈ ಜಲಪಾತೋತ್ಸವದಿಂದ ಪ್ರವಾಸೋದ್ಯಮ ಇಲಾಖೆಗೆ ಆದಾಯ ಹರಿದು ಬರುತ್ತಿತ್ತು. ಆದರೆ ಈಗ ಜಲಪಾತದಲ್ಲಿ ನೀರು ಹರಿಯುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಲಪಾತೋತ್ಸವ ಕಾರ್ಯಕ್ರಮವನ್ನು ಮಾಡಲು ಕಿಂಚಿತ್ತು ಆಸಕ್ತಿ ತೋರಿಸುತ್ತಿಲ್ಲ.

    ಜಲಾಪಾತೋತ್ಸವದ ವೇಳೆ ಆಹಾರ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಬಾಯಲ್ಲಿ ನೀರೂರಿಸುವ ಖಾದ್ಯಗಳು ಸ್ಥಳದಲ್ಲೇ ತಯಾರಾಗುತ್ತಿದ್ದವು. ಪ್ರವಾಸಿಗರು ಅದನ್ನು ಚಪ್ಪರಿಸಿಕೊಂಡು ತಿನ್ನುತ್ತಿದ್ದರು. ಇನ್ನೂ ಸ್ಟಾರ್ ನಟರು ಹಾಗೂ ಕಲಾವಿದರನ್ನು ಆಹ್ವಾನಿಸಿ ಪ್ರತಿ ನಿತ್ಯ ರಾತ್ರಿ ಅದ್ಧೂರಿ ಕಾರ್ಯಕ್ರಮಗಳು ನಡೆಯುತಿತ್ತು.

     

    ಪ್ರವಾಸಿಗರು ಸಂಗೀತಕ್ಕೆ ಹುಚ್ಚೆದ್ದು ಕುಣಿಯುತ್ತಿದ್ದರು. ಭರಚುಕ್ಕಿ ಜಲಪಾತೋತ್ಸವ ಪ್ರವಾಸಿಗರಿಗೆ ಅಕ್ಷರಶಃ ಸ್ವರ್ಗವೇ ಆಗಿತ್ತು. ಸತತ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದ ಕಾರ್ಯಕ್ರಮವನ್ನು ಈ ವರ್ಷವೂ ಆಯೋಜಿಸಿ ಎಂದು ಪ್ರವಾಸಿಗರು ಹಾಗೂ ಜನ ಬೇಡಿಕೆ ಇಟ್ಟಿದ್ದಾರೆ.

    ಒಟ್ಟಾರೆ ಹೇಳುವುದಾದರೆ ಮೂರು ವರ್ಷಗಳ ಕಾಲ ಯಶಸ್ವಿಯಾಗಿ ನಡೆದುಕೊಂಡು ಬಂದ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಪ್ರವಾಸಿಗರಿಂದ ಬೇಡಿಕೆ ಹೆಚ್ಚಾಗಿದ್ದು, ಈ ವಿಷಯದಲ್ಲಿ ಸದ್ಯ ತಟಸ್ಥವಾಗಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಜಲಪಾತೋತ್ಸವ ಕಾರ್ಯಕ್ರಮ ನಡೆಸಲು ಮುಂದಾಗಬೇಕಿದೆ.