Tag: fmcg

  • ಟೆಲಿಕಾಂ ಆಯ್ತು ಇನ್ನು FMCG – ಮುಕೇಶ್‌ ಅಂಬಾನಿಯಿಂದ ಈಗ ಮೆಟ್ರೋ ಕ್ಯಾಶ್‌ & ಕ್ಯಾರಿ ಶಾಪಿಂಗ್‌

    ಟೆಲಿಕಾಂ ಆಯ್ತು ಇನ್ನು FMCG – ಮುಕೇಶ್‌ ಅಂಬಾನಿಯಿಂದ ಈಗ ಮೆಟ್ರೋ ಕ್ಯಾಶ್‌ & ಕ್ಯಾರಿ ಶಾಪಿಂಗ್‌

    ಮುಂಬೈ: ಜರ್ಮನಿ ಮೂಲದ ಮೆಟ್ರೋ ಎಜೆ ಸಮೂಹದ ಕ್ಯಾಶ್ & ಕ್ಯಾರಿ(METRO Cash & Carry) ಸಂಸ್ಥೆಯ ಭಾರತದ ವಹಿವಾಟನ್ನು 2,850 ಕೋಟಿ ರೂ.ಗೆ ಮುಖೇಶ್ ಅಂಬಾನಿ(Mukesh Ambani) ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್(Reliance Industries) ಖರೀದಿಸಿದೆ.

    ಖರೀದಿ ಒಪ್ಪಂದದ ಕುರಿತಾಗಿ ಉಭಯ ಸಂಸ್ಥೆಗಳ ನಡುವೆ ಕಳೆದ ಕೆಲವು ತಿಂಗಳಿಂದ ಮಾತುಕತೆ ನಡೆಯುತ್ತಿತ್ತು. ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಂಗಸಂಸ್ಥೆ ರಿಲಯನ್ಸ್‌ ರಿಟೇಲ್ಸ್‌ ವೆಂಚರ್ಸ್‌ ಲಿಮಿಟಿಡ್‌(RRVL) ಮೂಲಕ ಖರೀದಿ ಪ್ರಕ್ರಿಯೆ ನಡೆದಿದ್ದು ಮಾರ್ಚ್‌ 2023ರ ಒಳಗಡೆ ಪೂರ್ಣಗೊಳ್ಳಲಿದೆ.

    ಮೆಟ್ರೋ ಕ್ಯಾಶ್ & ಕ್ಯಾರಿ ಖರೀದಿಯಿಂದ ರಿಲಯನ್ಸ್ ರಿಟೇಲ್ ಕಂಪನಿಗೆ ತನ್ನ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ನೆರವಾಗಲಿದೆ. 2021-22 ಹಣಕಾಸು ವರ್ಷದಲ್ಲಿ ಮೆಟ್ರೋ ಇಂಡಿಯಾ ಉತ್ಪನ್ನಗಳ ಮಾರಾಟದಿಂದ 7,700 ಕೋಟಿ ರೂ. ವ್ಯವಹಾರ ನಡೆಸಿತ್ತು.

    ಮೆಟ್ರೋ ಒಟ್ಟು 34 ರಾಷ್ಟ್ರಗಳಲ್ಲಿ ವಹಿವಾಟು ಹೊಂದಿದ್ದು, 2003ರಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿತ್ತು. ಕಿರಣಿ ಅಂಗಡಿಗಳು, ಹೋಟೆಲ್‌ಗಳು, ರೆಸ್ಟೋರೆಂಟ್ ಗಳು ಹಾಗೂ ಕೇಟರರ್ಸ್, ಖಾಸಗಿ ಕಂಪನಿಗಳು ಹಾಗೂ ಕೆಲವು ಸಂಸ್ಥೆಗಳು ಮೆಟ್ರೋ ಕ್ಯಾಶ್ ಹಾಗೂ ಕ್ಯಾರಿಯ ಗ್ರಾಹಕರಾಗಿದ್ದಾರೆ. ಇದನ್ನೂ ಓದಿ: ಮುಕೇಶ್‌ ಅಂಬಾನಿಯಿಂದ ಬಿಗ್‌ ಬಜಾರ್‌ ಶಾಪಿಂಗ್‌ – ರಿಲಯನ್ಸ್‌ ಪ್ಲ್ಯಾನ್‌ ಏನು?

    ಬೆಂಗಳೂರಿನಲ್ಲಿ 6, ಹೈದರಾಬಾದ್ ನಲ್ಲಿ 4, ಮುಂಬೈ ಮತ್ತು ದೆಹಲಿಯಲ್ಲಿ ತಲಾ 2 ಮಳಿಗೆಗಳನ್ನು ಹೊಂದಿದೆ. ಕೋಲ್ಕತ್ತಾ, ಜೈಪುರ, ಜಲಂದರ್‌, ಅಮೃತಸರ, ಅಹಮದಾಬಾದ್, ಸೂರತ್, ಇಂದೋರ್, ಲಕ್ನೋ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು, ಹುಬ್ಬಳ್ಳಿಯಲ್ಲಿ ತಲಾ ಒಂದು ಕೇಂದ್ರ ಹೊಂದಿದೆ.

    ಐಟಿಸಿ, ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ಪತಂಜಲಿ ಮತ್ತು ಅದಾನಿ ವಿಲ್ಮಾರ್‌ಗೆ ಪ್ರತಿಸ್ಪರ್ಧಿಯಾಗಿ ರಿಲಯನ್ಸ್‌ ಡಿ.15 ರಂದು ‘ಇಂಡಿಪೆಂಡೆನ್ಸ್’ ಬ್ರಾಂಡ್ ಅನ್ನು ಬಿಡುಗಡೆ ಮಾಡುವುದರ ಮೂಲಕ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಸರಕು(FMCG) ಮಾರುಕಟ್ಟೆಯನ್ನು ಪ್ರವೇಶಿಸಿದೆ.

    ಎಫ್‌ಎಂಸಿಜಿ ಮಾರುಕಟ್ಟೆ ಪ್ರವೇಶ ಹಿನ್ನೆಲೆಯಲ್ಲಿ ಈ ಹಿಂದೆಯೇ ರಿಲಯನ್ಸ್‌ ಗಾರ್ಡನ್‌ ನಾಮ್‌ಕೀನ್ಸ್‌, ಲಾಹೋರಿ ಜೀರಾ ಮತ್ತಿತರ ಬ್ರ್ಯಾಂಡ್‌ಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಕರ್ನಾಟಕದ ಪುತ್ತೂರು ಮೂಲದ ಬಿಂದೂ ಬೆವರೇಜಸ್‌ ಖರೀದಿಸಲು ಪ್ರಯತ್ನಿಸಿತ್ತು.

    ಭಾರತೀಯ ಚಿಲ್ಲರೆ ವ್ಯಾಪಾರವು 60 ಲಕ್ಷ ಕೋಟಿ ರೂ. ಮಾರುಕಟ್ಟೆಯಾಗಿದ್ದು, ಅದರಲ್ಲಿ ಆಹಾರ ಮತ್ತು ದಿನಸಿ 60 ಪ್ರತಿಶತವನ್ನು ಹೊಂದಿದೆ. ಸಂಘಟಿತ ಚಿಲ್ಲರೆ ವ್ಯಾಪಾರವು ಸಂಪೂರ್ಣ ಚಿಲ್ಲರೆ ವಿಭಾಗದಲ್ಲಿ 12 ಪ್ರತಿಶತ ಎಂದು ನಿರೀಕ್ಷಿಸಲಾಗಿದೆ. ಸಂಘಟಿತ ಆಹಾರ ಮತ್ತು ದಿನಸಿ ವ್ಯಾಪಾರದಲ್ಲಿ ರಿಲಯನ್ಸ್ ಈಗಾಗಲೇ ಶೇ.20 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

    ರಿಲಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಈ ಆಗಸ್ಟ್‌ನಲ್ಲಿ ನೇಮಕ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಮುಂದಿನ 18 ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್‌ ನಿರ್ಮಾಣ: ಮುರುಗೇಶ್ ನಿರಾಣಿ

    ಮುಂದಿನ 18 ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್‌ ನಿರ್ಮಾಣ: ಮುರುಗೇಶ್ ನಿರಾಣಿ

    ಹುಬ್ಬಳ್ಳಿ: ಮುಂದಿನ 18 ತಿಂಗಳಲ್ಲಿ ರಾಜ್ಯದಲ್ಲಿ ಐದು ಏರ್‌ಪೋರ್ಟ್‌ ನಿರ್ಮಾಣ ಮಾಡಲು ನಮ್ಮ ಸರ್ಕಾರ ಮುಂದಾಗಿದ್ದು, ದಾವಣಗೆರೆ, ಬಾಗಲಕೋಟೆ, ಬಾದಾಮಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರಿನಲ್ಲಿ ಏರ್‌ಪೋರ್ಟ್‌ ನಿರ್ಮಾಣ ಆರಂಭಗೊಳ್ಳಲಿದೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಜಾಗತಿಕ ಸಮಾವೇಶ ಪ್ರಾರಂಭವಾಗಲಿದೆ. ಕಳೆದ ಒಂದು ವರ್ಷದಿಂದ ತಯಾರಿ ಆರಂಭವಾಗಿದೆ. ನವೆಂಬರ್‌ನಲ್ಲಿ ಜಾಗತಿಕ ಸಮಾವೇಶ ನಡೆಯಲಿದೆ. ಕರ್ನಾಟಕಕ್ಕೆ ಅತೀ ಹೆಚ್ಚು ಬಂಡವಾಳ ಬಂದಿದೆ ಇದು ಹೆಮ್ಮೆಯ ವಿಷಯ. ನಾವು ಅನೇಕ ಕಡೆ ಕರ್ನಾಟಕದ ಕೈಗಾರಿಕಾ ನೀತಿ ತಿಳಿಸಿದ್ದೇವೆ. 5 ಲಕ್ಷ ಜನರಿಗೆ ಉದ್ಯೋಗ ಸಿಗುವ ಪ್ರಯತ್ನ ನಾವು ಮಾಡಿದ್ದೇವೆ. ಕರ್ನಾಟಕಕ್ಕೆ ಐದು ಲಕ್ಷ ಕೋಟಿ ರೂ. ಬರಲಿದೆ. ಕೈಗಾರಿಕೆಗಾಗಿ 50 ಸಾವಿರ ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸುತ್ತ ಮುತ್ತ 20 ಸಾವಿರ ಎಕರೆ, ಉಳಿದ ಭಾಗದಲ್ಲಿ ಕೈಗಾರಿಕೆಗಾಗಿ ಭೂಮಿ ವಶಪಡಿಸಿಕೊಳ್ಳಲಾಗಿದೆ. ಸ್ಥಗಿತಗೊಂಡಿರುವ ಕಾರ್ಖಾನೆಗಳನ್ನು ಮತ್ತೆ ಪ್ರಾರಂಭ ಮಾಡಲು ಮುಂದಾಗಿದ್ದೇವೆ. ಆದ್ರೆ ಬೆಂಗಳೂರಲ್ಲಿ ಹೊಸ ಕಾರ್ಖಾನೆ ನಿರ್ಮಾಣಕ್ಕೆ ನಾವು ಸಬ್ಸಿಡಿ ಕೊಡ್ತಿಲ್ಲ. ಬಿಯಾಂಡ್ ಬೆಂಗಳೂರು ಬರುವ ಕಾರ್ಖಾನೆಗಳಿಗೆ ನಾವು ಸೌಲಭ್ಯ ಕೊಡ್ತಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹು-ಧಾ ಮಹಾನಗರ ಪಾಲಿಕೆ ಸದಸ್ಯ, ಮೇಯರ್ ಗೌನ್ ಗುದ್ದಾಟ – ‘ಕೈ’ ಸದಸ್ಯರಿಗೆ ಹಿನ್ನಡೆ

    ಹುಬ್ಬಳ್ಳಿಯಲ್ಲಿ ಫಾಸ್ಟ್‌ ಮೂವಿಂಗ್‌ ಕನ್ಸ್ಯೂಮರ್‌ ಗೂಡ್ಸ್‌ (FMCG) ಕಾರ್ಖಾನೆಗೆ ವಿಶೇಷ ರಿಯಾಯಿತಿ ಕೊಟ್ಟಿದ್ದೇವೆ. ಇದರ ಕ್ರೆಡಿಟ್‌ ಹೋಗಬೇಕಿರೋದು ಜಗದೀಶ್ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿಗೆ. ಧಾರವಾಡದ ಮುಮ್ಮಿಗಟ್ಟಿ ಬಳಿ FMCG ನಿರ್ಮಾಣ. ಇದು ದೇಶದಲ್ಲಿ ಮೊದಲ FMCG. ದಿನನಿತ್ಯದ ಬಳಕೆ ವಸ್ತುಗಳ ನಿರ್ಮಾಣ ಮಾಡುವ ಕಾರ್ಖಾನೆ. ಸರ್ಕಾರದಿಂದ ಶೇಕಡಾ 20 ರಷ್ಟು ರಿಯಾಯಿತಿ ಕೊಡಲಾಗಿದೆ. ಕೋವಿಡ್ ಆದ ಮೇಲೆ ಜಾಗತಿಕ ಸಮಾವೇಶ ನಡಿತಿರೋದು ಕರ್ನಾಟಕದಲ್ಲಿ ಮಾತ್ರ. ಜಾಗತಿಕ ಸಮಾವೇಶದಿಂದ ನಮ್ಮ ರಾಜ್ಯಕ್ಕೆ ಒಳ್ಳೆಯದಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: 67ನೇ ಕನ್ನಡ ರಾಜ್ಯೋತ್ಸವ – ಸುವರ್ಣ ಸೌಧದಲ್ಲಿ ಕೋಟಿ ಕಂಠ ಗಾಯನ

    Live Tv
    [brid partner=56869869 player=32851 video=960834 autoplay=true]

  • ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚು ಮಾರಾಟವಾಯ್ತು ಬ್ರೆಡ್ ಜಾಮ್

    ಲಾಕ್‍ಡೌನ್ ಅವಧಿಯಲ್ಲಿ ಹೆಚ್ಚು ಮಾರಾಟವಾಯ್ತು ಬ್ರೆಡ್ ಜಾಮ್

    ನವದೆಹಲಿ: ಸಾಂಕ್ರಮಿಕ ರೋಗ ಕೊರೊನಾ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಏಪ್ರಿಲ್ ಮತ್ತು ಮೇನಲ್ಲಿ ದೇಶವನ್ನು ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಲಾಕ್‍ಡೌನ್ ವೇಳೆ ಮನೆಯಲ್ಲಿದ್ದ ಜನರು ಬ್ರೆಡ್, ಚೀಸ್, ಜಾಮ್ ಮತ್ತು ಕಾಫಿ ಹೆಚ್ಚು ಖರೀದಿಸಿದ್ರೆ, ಫ್ರೂಟಿ ಕೇಕ್ ಕಡಿಮೆ ಮಾರಾಟವಾಗಿದೆ. ಆಹಾರ ಸಾಮಾಗ್ರಿಗಳ ಜೊತೆ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಗೃಹ ಕೀಟನಾಶಕಗಳು ಸಹ ಹೆಚ್ಚು ಬಿಕರಿಯಾಗಿದೆ.

    ಎರಡು ತಿಂಗಳು ಲಾಕ್‍ಡೌನ್ ಅವಧಿಯಲ್ಲಿ ಮಾರುಕಟ್ಟೆ ಅನಿರೀಕ್ಷಿತರ ಬದಲಾವಣೆಗಳಿಗೆ ಸಾಕ್ಷಿಯಾಯ್ತು. ಅಗತ್ಯ ವಸ್ತುಗಳು ಬೇಡಿಕೆ ಪ್ರಮಾಣ ದಿಢೀರ್ ಹೆಚ್ಚಳವಾಗಿತ್ತು. ಕೆಲ ಕಂಪನಿಗಳ ಕಾರ್ಯ ನಿರ್ವಾಹಕ ಅಧಿಕಾರಿಗಳು ಲಾಕ್‍ಡೌನ್ ವೇಳೆ ಮಾರುಕಟ್ಟೆಯ ಬದಲಾವಣೆಯ ಬಗ್ಗೆ ಹೇಳಿದ್ದಾರೆ.

    * ಬೆಂಗಳೂರಿನ ಬ್ರಿಟೆನಿಯಾ ಕಂಪನಿ ಎರಡು ತಿಂಗಳಲ್ಲಿ ಫ್ರೂಟಿ ಕೇಕ್ ಗಳಿಗಿಂತ ಬ್ರೆಡ್, ಚೀಸ್ ಮತ್ತು ರಸ್ಕ್ ಮಾರಾಟ ಮಾಡಿದೆ. ಈ ಉತ್ಪನ್ನಗಳಿಂದ ಕಂಪನಿಗೆ ಹೆಚ್ಚು ಆದಾಯ ಲಭಿಸಿದೆ. ಸಾಮಾನ್ಯವಾಗಿ ಶಾಲೆಗೆ ಮಕ್ಕಳ ಟಿಫನ್ ಬಾಕ್ಸ್ ಗಳಲ್ಲಿ ಕೇಕ್ ಒಂದು ತಿಂಡಿಯಾಗಿರುತ್ತಿತ್ತು. ಶಾಲೆಗಳು ಬಂದ್ ಆಗಿದ್ದರಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಕೇಕ್ ಬೇಡಿಕೆ ಇಳಿದಿತ್ತು.

    * ದೇಶದ ಅತಿ ದೊಡ್ಡ ಎಫ್‍ಎಂಸಿಜಿ ಕಂಪನಿ ಹಿಂದೂಸ್ಥಾನ ಯುನಿಲೊವರ್ (ಹೆಚ್‍ಯುಎಲ್) ನ ಕಿಸಾನ್ ಜಾಮ್ ಏಪ್ರಿಲ್-ಜೂನ್ ಅವಧಿಯಲ್ಲಿ ಅಧಿಕ ಮಾರಾಟವಾದ ಉತ್ಪನ್ನವಾಗಿದೆ. ಲೈಫ್ ಬಾಯ್ ಸ್ಯಾನಿಟೈಸರ್ ಮತ್ತು ಇತರೆ ಹ್ಯಾಂಡ್ ವಾಶ್ ಗಳನ್ನು ಜನರು ಹೆಚ್ಚು ಖರೀದಿ ಮಾಡಿದ್ದಾರೆ.

    * ಮುಂಬೈನ ಮೂಲದ ಗೋದ್ರೆಜ್ ಕನ್ಸೂಮರ್ ಪ್ರೊಡೆಕ್ಟ್ ಲಿಮಿಟೆಡ್ ಮನೆಗಳಲ್ಲಿ ಬಳಸಲಾಗುವ ಕೀಟನಾಶಕಗಳ ಹೆಚ್ಚು ಮಾರಾಟದಿಂದ ಅಧಿಕ ಆದಾಯವನ್ನು ಗಳಿಸಿವೆ. ಉತ್ತರ ಭಾರತದ ನಗರಗಳಲ್ಲಿ ಹೆಚ್ಚು ಸೊಳ್ಳೆಗಳು ಕಂಡು ಬರೋದರಿಂದ ಜನರು ಮಲೇರಿಯಾ, ಡೆಂಗ್ಯೂ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಾರೆ. ಕೊರೊನಾ ಆತಂಕದಿಂದಾಗಿ ಜನರು ಸೊಳ್ಳೆ ಬತ್ತಿ ಸೇರಿದಂತೆ ಹೆಚ್ಚು ಕೀಟ ನಾಶಕಗಳನ್ನು ಖರೀದಿಸಿದ್ದಾರೆ.

    * ಕೋಲ್ಕಾತ್ತಾ ಮೂಲದ ಐಟಿಸಿ ಲಿಮಿಟೆಡ್ ಏಪ್ರಿಲ್ ಮಧ್ಯದಿಂದ ಗ್ರಾಹಕರು ಆಹಾರ ಸಾಮಾಗ್ರಿಗಳ ಜೊತೆಯಲ್ಲಿ ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡಿದ್ದಾರೆ. ಹಾಗಾಗಿ ಹೈಜಿನಿಕ್ ವಸ್ತುಗಳನ್ನು ಸಹ ಹೆಚ್ಚು ಮಾರಾಟ ಮಾಡಿದೆ.

    * ಗುರುಗ್ರಾಮದ ಮೂಲದ ನೆಸ್ಲೆ ಲಾಕ್‍ಡೌನ್ ವೇಳೆ ನೂಡಲ್ಸ್ ಮತ್ತು ಕಾಫಿಯನ್ನು ಹೆಚ್ಚು ಮಾರಾಟ ಮಾಡಿದೆ.

    ಲಾಕ್‍ಡೌನ್ ವೇಳೆ ಮಾರುಕಟ್ಟೆಯ ಬಗ್ಗೆ ಮಾಹಿತಿ ನೀಡಿರುವ ಬ್ರಿಟೆನಿಯಾ ಕಂಪನಿಯ ಎಂಡಿ ವರುಣ್ ಬೆರ್ರಿ, ಬಿಸ್ಕಟ್ ಗಳಿಗಿಂತ ಹೆಚ್ಚು ಬ್ರೆಡ್ ಮತ್ತು ರಸ್ಕ್ ಮಾರಾಟದ ವೇಗ ಹೆಚ್ಚಾಗಿತ್ತು. ಇದರ ಜೊತೆಗೆ ಡೈರಿ ಉತ್ಪನ್ನ ಚೀಸ್ ತನ್ನ ಮಾರುಕಟ್ಟೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿತ್ತು. ಲಾಕ್‍ಡೌನ್ ವೇಳೆ ಜನರು ಮನೆಯಲ್ಲಿರೋದರಿಂದ ಬ್ರೆಡ್ ಊಟದ ಸ್ಥಾನವನ್ನು ಪಡೆದುಕೊಂಡಿತ್ತು. ಮನೆಯಲ್ಲಿ ಸೇವಿಸುವ ಆಹಾರಗಳಲ್ಲಿ ಬ್ರೆಡ್ ಒಂದಾಗಿತ್ತು. ಇದರ ಜೊತೆಗೆ ಬಿಸ್ಕಟ್ ಗಳಿಗಿಂತ ಹೆಚ್ಚು ರಸ್ಕ್ ಬೇಡಿಕೆ ಹೊಂದಿತ್ತು ಎಂದು ಹೇಳಿದ್ದಾರೆ.

    ಎರಡು ತಿಂಗಳ ಮಾರುಕಟ್ಟೆಯನ್ನು ವಿಶ್ಲೇಷನೆ ಮಾಡಿರುವ ಹೆಚ್‍ಯುಎಲ್ ಮುಖ್ಯಸ್ಥ, ಎಂಡಿ ಸಂಜೀವ್ ಮೆಹ್ತಾ, ಲಾಕ್‍ಡೌನ್ ವೇಳೆ ಜಾಮ್ ಮತ್ತು ಕ್ಯಾಚಪ್ ಅತಿ ಹೆಚ್ಚು ಮಾರಾಟವಾಗಿದ್ದು ಮಾರುಕಟ್ಟೆಯ ಸಹಜ ಪ್ರಕ್ರಿಯೆಯಾಗಿದೆ. ಕೊರೊನಾ ಲಾಕ್‍ಡೌನ್ ನಿಂದಾಗಿ ಜನರು ಮತ್ತು ಮಕ್ಕಳು ಮನೆಯಲ್ಲಿದ್ದರಿಂದ ಜಾಮ್ ಮತ್ತು ಕ್ಯಾಚಪ್ ಮಾರುಕಟ್ಟೆಯಲ್ಲಿ ಸಹಜವಾಗಿ ಹೆಚ್ಚು ವೇಗವನ್ನು ಪಡೆದುಕೊಂಡಿದ್ದವು ಎಂದು ಹೇಳುತ್ತಾರೆ.

    ಹೆಚ್‍ಯುಎಲ್ ನಿವ್ವಳ ಲಾಭದ ಶೇ.7 ಲಾಭಾಂಶ ಏಪ್ರಿಲ್-ಜೂನ್ ನಲ್ಲಿ (ರೂ.1,881 ಕೋಟಿ) ಏರಿಕೆಯಾಗಿದೆ. ಇವುಗಳ ಜೊತೆಯಲ್ಲಿ ಹೈಜಿನ್ ಮತ್ತು ಪೌಷ್ಠಿಕಾಂಶ ಆಹಾರಗಳ ಬೇಡಿಕೆ ಸಹ ಏರಿಕೆಯಾಗಿತ್ತು.

    ನೆಸ್ಲೆ ಇಂಡಿಯಾ ಮಿಲ್ಕ್ ಆ್ಯಂಡ್ ನ್ಯೂಟ್ರಿಷಿಯನ್ ಪ್ರೊಡೆಕ್ಟ್ ಗಳಾದ ಪಿಕಪ್, ಮ್ಯಾಗಿ ಸಹ ಶೇ.25 ರಷ್ಟು ಏರಿಕೆ ಕಂಡಿವೆ. ಈ ಉತ್ಪನ್ನಗಳ ಜೊತೆ ನೆಸ್ಲೆ ಕಾಫಿ ಸಹ ಮಾರುಕಟ್ಟೆಯು ಸಹ ಹೆಚ್ಚಾಗಿದೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ನೆಸ್ಲೆ ಎಂಡಿ ಸುರೇಶ್ ನಾರಾಯಣ್, ಗ್ರಾಮೀಣ ಭಾಗಗಳು ಸೇರಿದಂತೆ ಟೈರ್ 2, 3, 4 ನಗರಗಳಲ್ಲಿ ನಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ, ಎಫ್‍ಎಂಸಿಜಿಯ ಒಟ್ಟು ವ್ಯವಹಾರಳಲ್ಲಿ ನಮ್ಮ ಉತ್ಪನ್ನಗಳದ್ದು ಶೇ.25 ರಿಂದ ಶೇ.30 ರಷ್ಟು ಪಾಲಿದೆ. ಕೊರೊನಾಗೆ ವ್ಯಾಕ್ಸಿನ್ ಸಿಗೋವರೆಗೂ ಮಾತ್ರ ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರಲಿದೆ ಎಂದು ಹೇಳುತ್ತಾರೆ.

    ಕೊರೊನಾ ಆತಂಕದಲ್ಲಿ ಜನರು ಮನೆಯಲ್ಲಿರೋದರಿಂದ ಐಸ್ ಕ್ರೀಂ ಉತ್ಪನ್ನಗಳ ಮೇಲೆ ಭಾರೀ ಹೊಡೆತ ಬಿದ್ದಿದೆ. ಹಾಗಾಗಿ ಮನೆಯಲ್ಲಿ ಬಳಸುವ ಆಹಾರ ಉತ್ಪನ್ನಗಳ ಮೇಲಿನ ಬೇಡಿಕೆ ಹೆಚ್ಚಾಗಿದೆ. ಲಾಕ್‍ಡೌನ್ ಪರಿಣಾಮ ಹೋಟೆಲ್ ಮತ್ತು ರೆಸ್ಟೊರೆಂಟ್ ಉದ್ಯಮಗಳು ನಷ್ಟದ ಸ್ಥಿತಿಯಲ್ಲಿವೆ. ಐಸ್‍ಕ್ರೀಂ ಸೇರಿದಂತೆ ತಂಪಾದ ಪಾನೀಯಗಳಿಗೆ ಬೇಸಿಗೆಯಲ್ಲಿ ಹೆಚ್ಚು ವ್ಯಾಪಾರವನ್ನು ಹೊಂದಿರುತ್ತವೆ, ಆದ್ರೆ ಕೊರೊನಾ ಆತಂಕದಿಂದ ಈ ಬಾರಿಯ ಬೇಸಿಗೆಯಲ್ಲಿ ತಂಪು ಪಾನೀಯಗಳ ವ್ಯಾಪಾರದ ಮೇಲೆ ಹೊಡೆತ ಬಿದ್ದಿದೆ.

  • ಜಿಎಸ್‍ಟಿಯಲ್ಲಿ ದಿನಬಳಕೆಯ ವಸ್ತುಗಳಿಗೆ ಎಷ್ಟು ತೆರಿಗೆ? ಇಲ್ಲಿದೆ ಪೂರ್ಣಮಾಹಿತಿ

    ಜಿಎಸ್‍ಟಿಯಲ್ಲಿ ದಿನಬಳಕೆಯ ವಸ್ತುಗಳಿಗೆ ಎಷ್ಟು ತೆರಿಗೆ? ಇಲ್ಲಿದೆ ಪೂರ್ಣಮಾಹಿತಿ

    ಶ್ರೀನಗರ: ಏಕರೂಪದ ತೆರಿಗೆ ಜಿಎಸ್‍ಟಿಯನ್ನು ಜುಲೈ 1ರಿಂದಲೇ ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರ ಗುರುವಾರ ಬಹುತೇಕ ಸರಕುಗಳ ತೆರಿಗೆ ದರವನ್ನು ನಿಗದಿಪಡಿಸಿದೆ.

    ಶ್ರೀನಗರದಲ್ಲಿ ಕೇಂದ್ರ ಹಣಕಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ 1,211 ವಸ್ತುಗಳ ಪೈಕಿ 1205ಕ್ಕೆ ತೆರಿಗೆ ದರವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಜನ ಸಮಾನ್ಯರ ದಿನ ಬಳಕೆಯ ವಸ್ತುಗಳಿಗೆ ಜಿಎಸ್‍ಟಿಯನ್ನು ಎಷ್ಟು ತೆರಿಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.

    ತೆರಿಗೆ ಇಲ್ಲ ವಸ್ತುಗಳು:


    ತಾಜಾ ಮಾಂಸ, ಮೀನು ಕೋಳಿ, ಮೊಟ್ಟೆ, ಹಾಲು, ಮೊಸರು, ನೈಸರ್ಗಿಕ ಜೇನುತುಪ್ಪ, ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಹಿಟ್ಟು, ಬ್ರೆಡ್, ಪ್ರಸಾದ, ಉಪ್ಪು, ಬಿಂದಿ ಮುಂತಾದ ವಸ್ತುಗಳನ್ನು ತೆರಿಗೆಗೆ ವಿಧಿಸಲಾಗುವುದಿಲ್ಲ. ಸಿಂಧೂರ, ಅಂಚೆಚೀಟಿಗಳು, ನ್ಯಾಯಾಂಗ ಪೇಪರ್ ಗಳು, ಮುದ್ರಿತ ಪುಸ್ತಕಗಳು, ಪತ್ರಿಕೆಗಳು, ಬಳೆಗಳು, ಕೈಮಗ್ಗ ಇತ್ಯಾದಿ.

    5% ತೆರಿಗೆ:


    ಮೀನು ಫಿಲೆಟ್, ಕ್ರೀಮ್, ಕೆನೆ ತೆಗೆದ ಹಾಲಿನ ಪುಡಿ, ಬ್ರಾಂಡ್ ಪನೀರ್, ಫ್ರೀಜ್ ತರಕಾರಿಗಳು, ಕಾಫಿ, ಚಹಾ, ಮಸಾಲೆಗಳು, ಪಿಜ್ಜಾ ಬ್ರೆಡ್, ರಸ್ಕ್, ಸೀಮೆ ಎಣ್ಣೆ, ಕಲ್ಲಿದ್ದಲು, ಔಷಧಿ, ಸ್ಟೆಂಟ್, ಲೈಫ್ ಬೋಟ್ ಇತ್ಯಾದಿ.

    12% ತೆರಿಗೆ:


    ಘನೀಕೃತ ಮಾಂಸ ಉತ್ಪನ್ನಗಳು, ಬೆಣ್ಣೆ, ಚೀಸ್, ತುಪ್ಪ, ಪ್ಯಾಕ್ ಮಾಡಲಾಗಿರುವ ಒಣಗಿದ ಹಣ್ಣುಗಳು, ಪ್ರಾಣಿಗಳ ಕೊಬ್ಬು, ಹಣ್ಣಿನ ರಸಗಳು, ಆಯುರ್ವೇದಿಕ್ ಔಷಧಿ, ಹಲ್ಲಿನ ಪುಡಿ, ಅಗರಬತ್ತಿ, ಬಣ್ಣದ ಪುಸ್ತಕಗಳು, ಚಿತ್ರ ಪುಸ್ತಕಗಳು, ಛತ್ರಿ, ಹೊಲಿಗೆ ಯಂತ್ರ ಮತ್ತು ಸೆಲ್‍ಫೋನ್ ಗಳು ಇತ್ಯಾದಿ

    18% ತೆರಿಗೆ:


    ಸಂಸ್ಕರಿತ ಫ್ಲೇವರ್ ಸಕ್ಕರೆ, ಪಾಸ್ಟಾ, ಕಾರ್ನ್ ಫ್ಲೇಕ್ಸ್, ಪ್ಯಾಸ್ಟ್ರಿ ಮತ್ತು ಕೇಕ್ ಗಳು, ಸಂರಕ್ಷಿತ ತರಕಾರಿಗಳು, ಜಾಮ್ ಗಳು, ಸಾಸ್ ಗಳು, ಸೂಪ್ ಗಳು, ಐಸ್ ಕ್ರೀಮ್, ಮಿನರಲ್ ನೀರು, ಅಂಗಾಂಶಗಳು, ಎನ್ವಿಲಪ್, ಟಿಪ್ಪಣಿ ಪುಸ್ತಕಗಳು, ಉಕ್ಕು ಉತ್ಪನ್ನಗಳು, ಕ್ಯಾಮೆರಾ, ಸ್ಪೀಕರ್ ಗಳು, ಮಾನಿಟರ್ ಇತ್ಯಾದಿ.

    28% ತೆರಿಗೆ:


    ಚ್ಯೂಯಿಂಗ್ ಗಮ್, ಮೊಲಾಸಿಸ್, ಕೋಕಾ ಇಲ್ಲದ ಚಾಕ್ಲೇಟ್, ಪಾನ್ ಮಸಾಲಾ, ಡಿಯೋಡ್ರೆಂಟ್, ಆಫ್ಟರ್ ಶೇವ್, ಶೇವಿಂಗ್ ಕ್ರೀಮ್ ಗಳು, ಕೂದಲ ಶಾಂಪೂ, ಡೈ, ಸನ್ ಸ್ಕ್ರೀನ್, ವಾಲ್ ಪೇಪರ್, ಸೆರಾಮಿಕ್ ಟೈಲ್ಸ್, ವಾಟರ್ ಹೀಟರ್, ಡಿಶ್ ವಾಷರ್, ತೂಕದ ಯಂತ್ರ, ವಾಷಿಂಗ್ ಮೆಷಿನ್, ಎಟಿಎಂ, ವಿತರಣಾ ಯಂತ್ರಗಳು, ವ್ಯಾಕ್ಯೂಮ್ ಕ್ಲೀನರ್, ಷೇವರ್ಸ್, ಕೂದಲ ಕ್ಲಿಪ್ ಗಳು, ಆಟೋಮೊಬೈಲ್ಸ್, ಮೋಟರ್ ಸೈಕಲ್ ಗಳು, ವೈಯಕ್ತಿಕ ಬಳಕೆಯ ವಿಮಾನ, ಯಾಚ್ ಸವಾರಿ ಇತ್ಯಾದಿ.