Tag: Flower Growers

  • ಚಿಕ್ಕಬಳ್ಳಾಪುರ ಹೂ ಬೆಳೆಗಾರರಿಗೆ ಬಂಪರ್ – ಇತಿಹಾಸದಲ್ಲೇ ಮೊದಲ ಬಾರಿಗೆ 400ರ ಗಡಿ ದಾಟಿದ ಗುಲಾಬಿ

    ಚಿಕ್ಕಬಳ್ಳಾಪುರ ಹೂ ಬೆಳೆಗಾರರಿಗೆ ಬಂಪರ್ – ಇತಿಹಾಸದಲ್ಲೇ ಮೊದಲ ಬಾರಿಗೆ 400ರ ಗಡಿ ದಾಟಿದ ಗುಲಾಬಿ

    – ಮಲ್ಲಿಗೆ, ಕನಕಾಂಬರ ಕೆಜಿಗೆ 1,000-1,200 ರೂ.

    ಚಿಕ್ಕಬಳ್ಳಾಪುರ: ಕೇವಲ 10 ದಿನಗಳ ಹಿಂದೆಯಷ್ಟೇ ಆ ಭಾಗದ ರೈತರು (Farmers) ತಾವೇ ಬೆಳೆದಿದ್ದ ಹೂಗಳನ್ನ ತಿಪ್ಪೆಗೆ ಬಿಸಾಡುತ್ತಿದ್ರು. ಕಾರಣ ಪಿತೃಪಕ್ಷ ಅಂತ, ಆಗ ಹೂಗಳನ್ನೇ ಖರೀದಿ ಮಾಡೋರೆ ಇರಲಿಲ್ಲ. ಆದರೀಗ ನವರಾತ್ರಿ ದಸರಾ ಹಬ್ಬ ಆ ರೈತರಿಗೆ ಪಾಲಿಗೆ ಬಂಪರ್ ಲಾಭ ತಂದಿದೆ. ತಿಪ್ಪೆಗೆ ಬಿಸಾಡುತ್ತಿದ್ದ ಹೂಗಳಿಗೆ ಚಿನ್ನದ ಬೆಲೆ ಬಂದಿದ್ದು, ಇತಿಹಾಸದಲ್ಲೇ ಕಂಡು ಕೇಳರಿಯದ ಬೆಲೆಗೆ ಗುಲಾಬಿ ಹೂ (Rose Flower) ಮಾರಾಟವಾಗಿದೆ. ಇದರಿಂದ ರೈತರು ಫುಲ್‌ ಖುಷ್‌ ಆಗಿದ್ದಾರೆ.

    ಹೂವು ಖರೀದಿ ಮಾಡುವವರೇ ಇಲ್ಲದೇ ರಾಶಿ-ರಾಶಿ ಹೂ ತಿಪ್ಪೆಗೆ ಬಿಸಾಡಿರೋದು ಒಂದು ಕಡೆಯಾದ್ರೆ, ಅದೇ ಹೂವಿಗೆ ಇತಿಹಾಸದಲ್ಲೇ ಕಂಡು ಕೇಳರಿಯದ ಬೆಲೆ ಬಂದಿರೋದು ಚಿಕ್ಕಬಳ್ಳಾಪುರದಲ್ಲಿ (Chikkaballapura(. ಕೇವಲ 10 ದಿನಗಳ ಹಿಂದೆ ರೈತರು ಮಾರುಕಟ್ಟೆಗೆ ಹೂ ತಂದ್ರೂ ಕೇಳೋರೆ ಇರಲಿಲ್ಲ. ಹೀಗಾಗಿ ತಂದಿದ್ದ ಹೂವನ್ನೇ ಮಾರುಕಟ್ಟೆಯಲ್ಲೇ ತಿಪ್ಪೆಗೆ ಬಿಸಾಡಿ ಹೋಗಿದ್ರು. ಇದನ್ನೂ ಓದಿ: ಇಸ್ರೇಲ್‌ ಭೀಕರ ವಾಯುದಾಳಿಗೆ 22 ಮಂದಿ ಬಲಿ – 117 ಮಂದಿಗೆ ಗಾಯ, ಹಿಜ್ಬುಲ್ಲಾ ಟಾಪ್‌ ಲೀಡರ್‌ ಸೇಫ್‌

    ಇದೀಗ ದಸರಾ ಹಬ್ಬದ ಅಂಗವಾಗಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಇದ್ರಿಂದ ಹೂಗಳ ಬೆಲೆ ಗಗನಕ್ಕೇರಿದ್ದು ಚಿಕ್ಕಬಳ್ಳಾಪುರ ಹೂವಿನ ಮಾರುಕಟ್ಟೆಯಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 1 ಕೆಜಿ ಗುಲಾಬಿ ಹೂವಿನ ಬೆಲೆ 400 ರಿಂದ 500 ರೂ. ವರೆಗೂ ಮಾರಾಟವಾಗಿದೆ. ಇನ್ನೂ ತರಹೇವಾರಿ ಸೇವಂತಿಗೆ ಹೂಗಳು ಕೆಜಿಗೆ 250 ರಿಂದ 350 ರೂಪಾಯಿಯವರೆಗೂ ಮಾರಾಟವಾಗುತ್ತಿವೆ. ಅದ್ರಲ್ಲೂ ಕೆಜಿ ಕನಕಾಂಬರ 1,000 ರೂಪಾಯಿಯಿಂದ 1,200 ರೂ. ವರೆಗೆ ಮಾರಾಟವಾಗುತ್ತಿದ್ರೆ ಮಲ್ಲಿಗೆ ಹೂ 1 ಕೆಜಿಗೆ 1,000 ರೂಪಾಯಿಯಾಗಿದೆ. ಇದ್ರಿಂದ ಹೂ ಬೆಳೆದ ರೈತರಿಗೆ ಸಂತಸವೋ ಸಂತಸ ಎಂಬಂತಾಗಿದೆ.

    ಇನ್ನೂ ಹೋಲ್ ಸೇಲ್ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಗಗನಕ್ಕೇರಿದೆ. ಇತ್ತ ಚಿಲ್ಲರೆ ಮಾರುಕಟ್ಟೆಯಲ್ಲೂ ಒನ್ ಟು ಡಬಲ್ ಆಗಿದ್ದು ರೈತರಿಗೆ ಲಾಭ ಗ್ರಾಹಕರಿಗೆ ಜೇಬಿಗೆ ಕತ್ತರಿ ಎಂಬಂತಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಗುಲಾಬಿ 800 ರೂಪಾಯಿ, ಸೇವಂತಿಗೆ 500 ರೂಪಾಯಿ, ಮಲ್ಲಿಗೆ ಕನಕಾಂಬರ ಕೇಳೋ ಹಾಗೆ ಇಲ್ಲ ಅನ್ನೋ ಅಷ್ಟು ರೇಟ್ ಅಂತ ಗ್ರಾಹಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಹೇಗಿರುತ್ತೆ?

    ಎಚ್‌ಎನ್ ವ್ಯಾಲಿ ನೀರು ಕೆರೆಗಳಿಗೆ ಬಂದಿದ್ದೇ ಚಿಕ್ಕಬಳ್ಳಾಪುರದ ರೈತರು ಯಥೇಚ್ಛವಾಗಿ ಹೂ ಬೆಳೆಯುತ್ತಿದ್ದಾರೆ. ಇದ್ರಿಂದ ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆಗೆ ದೇಶದ ನಾನಾ ರಾಜ್ಯಗಳಿಂದಲೂ ವರ್ತಕರು ಆಗಮಿಸಿ ಹೂ ಖರೀದಿಗೆ ಮುಗಿಬಿದ್ದಿದ್ದು ಹೂವಿನ ಬೆಲೆ ಆಕಾಶಕ್ಕೇರಿದೆ. ಇದನ್ನೂ ಓದಿ: ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

  • ಹೂ ಬೆಳೆಗಾರರಿಗೆ ‘ವರ’ ತಂದ ಶ್ರಾವಣ ಮಾಸದ ‘ಮಹಾಲಕ್ಷ್ಮಿ’

    ಹೂ ಬೆಳೆಗಾರರಿಗೆ ‘ವರ’ ತಂದ ಶ್ರಾವಣ ಮಾಸದ ‘ಮಹಾಲಕ್ಷ್ಮಿ’

    ಚಿಕ್ಕಬಳ್ಳಾಪುರ: ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿದ ಚಿಕ್ಕಬಳ್ಳಾಪುರದ ಹೂ ಬೆಳೆಗಾರರಿಗೆ ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳು ಸಂತಸ ತಂದಿದೆ. ಮದುವೆ-ಮುಂಜಿ, ಸಭೆ ಸಮಾರಂಭಗಳ ಸೇರಿದಂತೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಈಗ ಹೂ ಗಳಿಗೆ ಭಾರೀ ಬೇಡಿಕೆ ಜೊತೆಗೆ ಬಂಪರ್ ಬೆಲೆಯೂ ಬಂದಿದೆ.

    ಸಾಲ ಮಾಡಿದ್ದ ರೈತರಿಗೆ ಈಗ ಕೈ ತುಂಬಾ ಕಾಸು ಸಿಗುತ್ತಿದ್ದು, ಹೂ ಬೆಳೆಗಾರರು ಸಖತ್ ಖುಷಿ ಆಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬರದನಾಡಾದರೂ ಇಲ್ಲಿನ ರೈತರು ಹೂ ಹಣ್ಣು ತರಕಾರಿ ಬೆಳೆಯೋದರಲ್ಲಿ ಫೇಮಸ್. ಕಳೆದ ಎರಡು ವರ್ಷಗಳಿಂದ ಕೊರೊನಾ ಹೊಡೆತಕ್ಕೆ ಸಿಲುಕಿದ ರೈತರಿಗೆ ಕೈ ತುಂಬಾ ಕಾಸು ನೋಡೋದು ಕಷ್ಟವಾಗಿತ್ತು. ಈ ಬಾರಿ ಚಿಕ್ಕಬಳ್ಳಾಪುರ ತಾಲೂಕಿನ ಕತ್ರಿಗುಪ್ಪೆ, ಮರಳುಕುಂಟೆ ಸೇರಿದಂತೆ ಅಕ್ಕ ಪಕ್ಕದ ಹಳ್ಳಿಗಳಲ್ಲಿ ಸಾವಿರಾರು ಎಕರೆ ಗ್ಲಾಡಿಯೋಲಸ್ ಬೆಳೆದಿದ್ದಾರೆ. ಈ ಗ್ಲಾಡಿಯೋಲಸ್ ಗೆ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಈಗ ಭಾರೀ ಬೇಡಿಕೆ ಬಂದಿದೆ.

    ಈ ಗ್ಲಾಡಿಯೋಲಸ್ ಹೈದರಾಬಾದ್, ಮುಂಬೈ, ಕೋಲ್ಕತ್ತಾ ಸೇರಿದಂತೆ ದೆಹಲಿಗೂ ಸಹ ರವಾನೆ ಮಾಡಲಾಗುತ್ತಿದೆ. 5 ಹೂವಿನ ಒಂದು ಕಟ್ಟು 50 ರೂಪಾಯಿಯವರೆಗೆ ಮಾರಾಟವಾಗುತ್ತಿದೆ. ಇದರಿಂದ ಗ್ಲಾಡಿಯೋಲಸ್ ಬೆಳೆದ ರೈತರು ಕೈ ತುಂಬಾ ಕಾಸು ಎಣಿಸುವಂತಾಗಿದೆ ಅಂತ ರೈತ ಗಂಗರಾಜು ಹಾಗೂ ಮಂಜುನಾಥ್ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.

    ಕೇವಲ ಗ್ಲಾಡಿಯೋಲಸ್ ಅಷ್ಟೇ ಅಲ್ಲದೆ ಅಲಂಕಾರಕ್ಕೆ ಅತಿ ಹೆಚ್ಚಾಗಿ ಬಳಸೋ ಜರ್ಬೇರಾವನ್ನ ಸಹ ಚಿಕ್ಕಬಳ್ಳಾಪುರ ತಾಲೂಕಿನ ವಿಜಯ್ ಕುಮಾರ್ ಎಂಬವರು ಬೆಳೆದಿದ್ದು, ಈ ಜರ್ಬೇರಾಗೂ ಈಗ ಭಾರೀ ಡಿಮ್ಯಾಂಡ್ ಬಂದಿದೆ. ಫಾಲಿ ಹೌಸ್ ನಲ್ಲಿ ಬೆಳೆದಿರೋ ಬಣ್ಣ ಬಣ್ಣದ ತರಹೇವಾರಿ ಜರ್ಬೇರಾ ಒಂದು ಹೂ 20 ರೂಪಾಯಿಗೆ ಬಿಕರಿಯಾಗುತ್ತಿದ್ದು, 10 ಹೂವಿನ ಕಟ್ಟು 200 ರೂಪಾಯಿಗೆ ಸೇಲ್ ಆಗುತ್ತಿದೆ. ಕೆಲ ವ್ಯಾಪಾರಸ್ಥರೇ ತೋಟಕ್ಕೆ ಭೇಟಿ ನೀಡಿ ಕೇಳಿದಷ್ಟು ಹಣ ನೀಡಿ ಹೂ ಕಟಾವು ಮಾಡಿಕೊಳ್ಳುತ್ತಿದ್ದಾರೆ. ಸಾಲ ಸೋಲ ಮಾಡಿ ಇಷ್ಟು ದಿನ ಕಷ್ಟಪಟ್ಟಿದ್ದಕ್ಕೆ ಈಗ ಪ್ರತಿಫಲ ಸಿಕ್ತು ಅಂತ ರೈತ ವಿಜಯ್ ಕುಮಾರ್ ಸಂತಸ ಹಂಚಿಕೊಂಡರು. ಇದನ್ನೂ ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ ರಾಯರ ಮಠಕ್ಕೆ ಒಂದು ಲಾರಿ ಆಹಾರ ಪದಾರ್ಥ

    ಗ್ಲಾಡಿಯೋಲಸ್ -ಜರ್ಬೇರಾ ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರದ ರೈತರು ಗುಲಾಬಿ, ಸೇವಂತಿಗೆ, ಚೆಂಡು ಹೂವನ್ನ ಯಥೇಚ್ಛವಾಗಿ ಬೆಳೆಯುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಮಾರುಕಟ್ಟೆಯಲ್ಲಿ 1 ಕೆಜಿ ಗುಲಾಬಿ 120 ರಿಂದ 150 ರೂ.ಗೆ, ಸೇವಂತಿಗೆ 120 ರಿಂದ 160 ರೂ.ಗೂ ಹಾಗೂ ಚೆಂಡು ಹೂ ಸಹ 50-60 ರೂ.ಗಳಿಗೆ ಮಾರಾಟವಾಗ್ತಿದ್ದು ಹೂ ಬೆಳೆದ ರೈತರ ಜೇಬು ತುಂಬುವಂತಾಗಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮನಿಗೆ ತೂಗುಯ್ಯಾಲೆ ಸೇವೆ- ಬೆಳ್ಳಿಯ ತೊಟ್ಟಿಲು ಮಾಡಿಸಿದ ಟ್ರಸ್ಟ್