Tag: Flower Garden

  • ಶಾಪ್ ಮಾಲೀಕನ ಯಡವಟ್ಟಿಗೆ ಹೂದೋಟವೇ ಸುಟ್ಟು ಕರಕಲು – ಕ್ರಿಮಿನಾಶಕ ಬಳಸಿದ ರೈತನಿಗೆ ಭಾರೀ ನಷ್ಟ

    ಶಾಪ್ ಮಾಲೀಕನ ಯಡವಟ್ಟಿಗೆ ಹೂದೋಟವೇ ಸುಟ್ಟು ಕರಕಲು – ಕ್ರಿಮಿನಾಶಕ ಬಳಸಿದ ರೈತನಿಗೆ ಭಾರೀ ನಷ್ಟ

    ಚಿಕ್ಕಬಳ್ಳಾಪುರ: ಮೊದಲೇ ಬಿಸಿಲು ನೆತ್ತಿ ಸುಡುತ್ತಿದೆ. ಜನ ಮಟಮಟ ಮಧ್ಯಾಹ್ನ ಆಚೆ ಕಾಲಿಡಂಗೇ ಇಲ್ಲ.. ಅದರ ನಡುವೆ ಸುಡುಬಿಸಿಲಿನಿಂದ ರೈತರು ಬೆಳೆದ ಬೆಳೆಗಳನ್ನ ಕಾಪಾಡುವುದು ಸವಾಲಿನ ಕೆಲಸ. ರೈತರೊಬ್ಬರು ಸಹ ಬಿಸಿಲಿನ ಮಧ್ಯೆ ಮಕ್ಕಳಂತೆ ಸಾಕಿ ಸಲುಹಿ ಶುಭ್ರ ಬಿಳಿ ಬಣ್ಣದ ಕ್ರಿಸ್ಯಾಂಥಮಮ್ ಎನ್ನುವ ವೆರೈಟಿ ಹೂ ಬೆಳೆದಿದ್ದರು. ಆದರೆ ಫೆಸ್ಟಿಸೈಡ್ ಶಾಪ್ ಮಾಲೀಕ ಮಾಡಿದ ಯಡವಟ್ಟಿಗೆ ಇಡೀ ಹೂದೋಟವೇ ಸುಟ್ಟು ಹೋಗಿದೆ. ಇದರಿಂದ ರೈತನ ಬದುಕು ಬೀದಿಗೆ ಬರುವಂತಾಗಿದೆ.

    ಚಿಕ್ಕಬಳ್ಳಾಪುರ (Chikkaballapura)  ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ರೈತ ಮಂಜುನಾಥ್ ಎಂಬುವವರು 30 ಗುಂಟೆ ಜಮೀನಿನಲ್ಲಿ ಕ್ರಿಸ್ಯಾಂಥಮಮ್ ಹೂ ಬೆಳೆದಿದ್ದರು. 3 ತಿಂಗಳ ನಂತರ ಹೂ ಸಹ ಶುಭ್ರ ಬಿಳಿ ಬಣ್ಣದಿಂದ ಕಂಗೊಳಿಸುತ್ತಿತ್ತು. ಹೂದೋಟ ನೋಡಲು ಎರಡು ಕಣ್ಣುಗಳು ಸಾಲದು ಎಂಬಂತೆ ಬಿಳಿ ಬಣ್ಣದ ಹೂಗಳೇ ತುಂಬಿ ತುಳುಕಿದ್ದವು. ಆದರೆ ಬಿಳಿ ಬಣ್ಣದ ಹೂಗಳು ಮತ್ತಷ್ಟು ಶೈನಿಂಗ್ ಬರಲಿ ಎಂದು ಮಂಜುನಾಥ್ ಫೆಸ್ಟೆಸೈಡ್ ಶಾಪ್‌ನ ಮಾಲೀಕ ನೀಡಿದ್ದ ಮದ್ದು ಸಿಂಪಡಣೆ ಮಾಡಿದ್ದರು. ಇದನ್ನೂ ಓದಿ: ಫ್ಯಾಮಿಲಿ ಜೊತೆ ಹೋಳಿ ಹಬ್ಬ ಆಚರಿಸಿದ ಕತ್ರಿನಾ ಕೈಫ್

    ಮದ್ದು ಸಿಂಪಡನೆ ಮಾಡಿದ ಮಾರನೇ ದಿವೇ ಹೂಗಳೆಲ್ಲವೂ ಬಾಡಿ ಹೋಗಿವೆ. ಅದೇ ಗ್ರಾಮದ ಸಮೀಪದ ಅಬ್ಲೂಡು ಗ್ರಾಮದ ಬಳಿ ಇರುವ ಫೆಸ್ಟೆಸೈಡ್ ಶಾಪ್‌ನಲ್ಲಿ ಮಂಜುನಾಥ್ ತಾವು ಯಾವಾಗಲೂ ಬಳಸುತ್ತಿದ್ದ ಮದ್ದನ್ನೇ ಕೊಡುವಂತೆ ಕೇಳಿದ್ದರು. ಆದರೆ ಮಾಲೀಕ ಅದು ಬೇಡ ಇದು ತಗೊಂಡು ಹೋಗಿ ಹೂ ಮತ್ತಷ್ಟು ಶೈನಿಂಗ್ ಬರುತ್ತದೆ ಎಂದು ಮತ್ತೊಂದು ಕಂಪನಿಯ ಮದ್ದು ಕೊಟ್ಟಿದ್ದರು. ಅದರಿಂದಲೇ ಹೂವು ಬಾಡಿ ಹೋಗಿ ಸುಟ್ಟು ಹೋದಂತಾಗಿದೆ ಎಂದು ಮಂಜುನಾಥ್ ದೂರಿದ್ದಾರೆ. ಇದನ್ನೂ ಓದಿ: ರನ್ಯಾಗೇ ಜೈಲೇ ಗತಿ -ಜಾಮೀನು ಅರ್ಜಿ ವಜಾ

    ಮಕ್ಕಳಿಗಿಂತ ಹೆಚ್ಚಾಗಿ ಸಾಲಸೋಲ ಮಾಡಿ 5-6 ಲಕ್ಷ ರೂ. ಖರ್ಚು ಮಾಡಿ ಬೆಳೆದ ಹೂದೋಟ ಒಂದೇ ದಿನಕ್ಕೆ ಬಾಡಿ ಹೋಗಿದೆ. ಇದರಿಂದ ಇರೋ ಬರೋ ಹೂವನ್ನ ಕಿತ್ತು ಈಗ ತಿಪ್ಪೆಗೆ ಎಸೆಯುವಂತಾಗಿದೆ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಕೊಡಗಿನ 21 ಸರ್ಕಾರಿ ಶಾಲೆಗಳಿಗೆ ಬೀಗ!

    ಕುಂಬಾರನಿಗೆ ವರುಷ ದೊಣ್ಣಗೆ ನಿಮಿಷ ಎಂಬಂತೆ ಫೆಸ್ಟಿಸೈಡ್ ಶಾಪ್ ಮಾಲೀಕ ಮಾಡಿದ ಅದೊಂದು ಯಡವಟ್ಟಿಗೆ ಇಡೀ ಹೂದೋಟವೋ ನಾಶವಾಗಿದೆ. ಹೀಗಾಗಿ ಸಾಲಸೋಲ ಮಾಡಿ ಬೆಳೆದಿದ್ದ ಬೆಳೆಯು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ ಸಾಲಕ್ಕೆ ಸಿಲುಕಿ ಬೀದಿಗೆ ಬರುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಷ್ಟ ಪರಿಹಾರ ಕೊಡಿಸುವಂತೆ ರೈತ ಮುಖಂಡ ರವಿ ಪ್ರಕಾಶ್ ಆಗ್ರಹಿಸಿದ್ದಾರೆ.

  • ಪ್ರೇಮಿಗಳ ದಿನಕ್ಕೆ ದುಬಾರಿಯಾದ ಗುಲಾಬಿ – ತೋಟದಲ್ಲೇ 1 ರೆಡ್ ರೋಸ್‌ಗೆ 25-30 ರೂ.

    ಪ್ರೇಮಿಗಳ ದಿನಕ್ಕೆ ದುಬಾರಿಯಾದ ಗುಲಾಬಿ – ತೋಟದಲ್ಲೇ 1 ರೆಡ್ ರೋಸ್‌ಗೆ 25-30 ರೂ.

    • ರೈತರಿಗೆ ಜಾಕ್‌ಪಾಟ್‌

    ಚಿಕ್ಕಬಳ್ಳಾಪುರ: ಪ್ರೇಮಿಗಳ ದಿನ, ಪ್ರೀತಿಯ ನಲ್ಲ ನಲ್ಲೆಗೆ ಕೆಂಪು ಗುಲಾಬಿ (Red Rose) ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳೋದು ಸಾಮಾನ್ಯ. ಆದ್ರೆ ಇಷ್ಟು ದಿನ 5-6 ರೂಪಾಯಿ ಇರ್ತಿದ್ದ ಕೆಂಪು ಗುಲಾಬಿಯ ಬೆಲೆ ದಿಢೀರ್ ಅಂತ 25 ರಿಂದ 30 ರೂಪಾಯಿ ಆಗಿದೆ.

    ಇದರಿಂದ ಪ್ರೇಮಿಗಳ ಜೇಬಿಗೆ ಕತ್ತರಿಯಾದರೂ ಗುಲಾಬಿ ಬೆಳೆದ ರೈತರಿಗೆ (Farmers) ಝಣ ಝಣ ಕಾಂಚಾಣ ಎನ್ನುವಂತಾಗಿದ್ದು ಚಿಕ್ಕಬಳ್ಳಾಪುರದಲ್ಲಿ ಗುಲಾಬಿ ಬೆಳೆದ ರೈತರು ಖುಷಿಯಾಗಿದ್ದಾರೆ. ಇದನ್ನೂ ಓದಿ: ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು: ಗೂಗಲ್‌ ಎಕ್ಸ್‌ನ ಸೆಬಾಸ್ಟಿಯನ್ ಭವಿಷ್ಯ

    ಹೌದು. ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ. ಈ ದಿನಕ್ಕಾಗಿ ಪ್ರೇಮಿಗಳು ಕಾತುರದಿಂದ ಕಾಯ್ತಿರ್ತಾರೆ. ಪ್ರೀತಿಯ ನಲ್ಲ ನಲ್ಲೆಗೆ ರೆಡ್ ರೋಸ್ ಕೊಟ್ಟು ಲವ್ ಪ್ರಫೋಸ್ ಮಾಡೋಕೆ ತುದಿಗಾಲಲ್ಲಿ ನಿಂತಿರ್ತಾರೆ. ಹಾಗಾಗಿ ಎಲ್ಲೆಲ್ಲೂ ಈಗ ಪ್ರೀತಿಯ ರಾಯಭಾರಿ ರೆಡ್ ರೋಸ್ ಗೆ ಭಾರೀ ಡಿಮ್ಯಾಂಡ್. ಸ್ವತಃ ಗುಲಾಬಿ ಬೆಳೆದ ರೈತರ ತೋಟಗಳಿಗೆ ಭೇಟಿ ಕೊಡ್ತಿರೋ ವರ್ತಕರು ಒಂದು ಗುಲಾಬಿಗೆ 25 ರಿಂದ 30 ರೂಪಾಯಿ ಕೊಟ್ಟು ಖರೀದಿ ಮಾಡ್ತಿದ್ದಾರೆ.

    ಇನ್ನೂ ವರ್ತಕರೇ ತೋಟದಲ್ಲಿ 25 ರಿಂದ 30 ರೂಪಾಯಿ ಕೊಡ್ತಿದ್ದು. ಮಾರುಕಟ್ಟೆಯಲ್ಲಿ ಒಂದು ರೆಡ್ ರೋಸ್ ಬೆಲೆ 50 ರೂಪಾಯಿ ಆದ್ರೂ ಅಶ್ಚರ್ಯಪಡಬೇಕಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯನವ್ರು ರಾಜ್ಯದ ದೀರ್ಘಾವಧಿ ಸಿಎಂ ಆಗಲೆಂದು ಹಾರೈಸ್ತೇನೆ – ಪರಮೇಶ್ವರ್

    ಅಂದಹಾಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆನೂರು ಗ್ರಾಮದ ರೈತ ಕೃಷ್ಣಾರೆಡ್ಡಿ ಸಹ ಎರಡೂವರೆ ಎಕೆರೆ ಫಾಲಿಹೌಸ್‌ನಲ್ಲಿ ಬಣ್ಣ ಬಣ್ಣದ ಗುಲಾಬಿಗಳನ್ನ ಬೆಳೆದಿದ್ದು ರೋಸ್‌ಗೆ ಭಾರೀ ಬೇಡಿಕೆ ಬಂದಿದೆ. ಚಿಕ್ಕಬಳ್ಳಾಪುರ ಹಾಗೂ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹೆಚ್ಚಾಗಿ ಗುಲಾಬಿ ಬೆಳೆಯಲಾಗುತ್ತಿದ್ದು ವಿದೇಶಗಳಿಗೂ ರೆಡ್ ರೋಸ್ ಕಳಿಸಲಾಗಿದೆ.