Tag: Fire and Emergency Services officials

  • ಮೊಬೈಲ್ ಟವರ್‌ನಲ್ಲಿ ಸಿಲುಕಿದ್ದ ಕಾಗೆ ರಕ್ಷಿಸಿ ಮಾನವಿಯತೆ ಮೆರೆದ ಅಗ್ನಿಶಾಮಕದಳ ಸಿಬ್ಬಂದಿ

    ಮೊಬೈಲ್ ಟವರ್‌ನಲ್ಲಿ ಸಿಲುಕಿದ್ದ ಕಾಗೆ ರಕ್ಷಿಸಿ ಮಾನವಿಯತೆ ಮೆರೆದ ಅಗ್ನಿಶಾಮಕದಳ ಸಿಬ್ಬಂದಿ

    ಗದಗ: ಅಗ್ನಿಶಾಮಕದಳ ಸಿಬ್ಬಂದಿ ಇತ್ತೀಚಿಗೆ ಪಕ್ಷಿಗಳ ರಕ್ಷಣೆಗೂ ಮುಂದಾಗಿದ್ದು, ಮೊಬೈಲ್ ಟವರ್‌ನಲ್ಲಿ ಸಿಲುಕಿಕೊಂಡು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿದ್ದ ಕಾಗೆಯೊಂದನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

    ನಗರದ ಸಬ್ ರಿಜಿಸ್ಟರ್ ಕಛೇರಿ ಬಳಿ ಈ ಘಟನೆ ನಡೆದಿದೆ. ಕಾಗೆಯನ್ನು ರಕ್ಷಣೆ ಮಾಡಿ ಹಾರಿಸಿರುವುದು ಕೆಲವರಿಗೆ ಹಾಸ್ಯಾಸ್ಪದ ಅನಿಸಿಬಹುದು. ಆದರೆ ಅದು ಒಂದು ಜೀವಿ ಅಲ್ಲವೆ ಎನ್ನುವ ಮನೋಭಾವದಿಂದ ಸಿಬ್ಬಂದಿ ಕಾಗೆಯನ್ನು ರಕ್ಷಣೆ ಮಾಡಿದ್ದಾರೆ. ಮೊಬೈಲ್ ಟವರ್ ಏರಿ ಕುಳಿತ್ತಿದ್ದ ಕಾಗೆಯೊಂದು ಮೂರು-ನಾಲ್ಕು ಗಂಟೆಯಿಂದ ಟವರ್‍ನಲ್ಲಿ ಸಿಲುಕಿ ಒದ್ದಾಡುತಿತ್ತು. ಇದನ್ನು ಕೆಲ ಸ್ಥಳೀಯರು ಗಮನಿಸಿ, ಅಗ್ನಿಶಾಮಕದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ, ಮೊಬೈಲ್ ಟವರ್ ಏರಿ ಕಾಗೆ ಓಡಿಸುವ ಮೂಲಕ ಅದರ ರಕ್ಷಣೆಗೆ ಮುಂದಾದರು.

    ಮಲ್ಲಿಕಾರ್ಜುನ, ಎಸ್.ವಿ ತಳವಾರ, ಅಶೋಕ ಹಾಗೂ ಮುತ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಲಾಖೆ ಕಾರ್ಯಕ್ಕೆ ಕೆಲವು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನು ಕೆಲವರು ಪರಸ್ಥಿತಿ ಎಲ್ಲಿಗೆ ಬಂತಪ್ಪಾ ಅಂತ ವ್ಯಂಗ್ಯವಾಡಿದ್ದಾರೆ. ಆದರೆ, ಬಹುತೇಕರು ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾರ್ವಜನಿಕರು ಕರೆ ಮಾಡಿದಾಗಲೂ ಸಹ ಕಾಗೆ ಸಿಕ್ಕಿ ಹಾಕಿಕೊಂಡಿದೆ ಎಂದು ಹೇಳಿದ ನಂತರ ನಿರ್ಲಕ್ಷ್ಯ ವಹಿಸಿಲ್ಲ. ಬದಲಿಗೆ ಕರೆಯನ್ನು ಗಂಭೀರವಾಗಿ ಪರಿಗಣಿಸಿ, ಅದೂ ಒಂದು ಜೀವಿ ಎಂದು ಅರಿತು ಕಾಗೆಯನ್ನು ರಕ್ಷಿಸಿದ್ದಾರೆ. ಹಲವರು ಕಾಗೆ, ಪ್ರಾಣಿಗಳಿರಲಿ ಮನುಷ್ಯರು ಕಷ್ಟದಲ್ಲಿ ಸಿಲುಕಿರುವಾಗಲೇ ನಿರ್ಲಕ್ಷಿಸುತ್ತಾರೆ. ಅಂತಹ ಸಂದರ್ಭದಲ್ಲಿ ಕಾಗೆಯನ್ನು ಕಾಪಾಡುವ ಮೂಲಕ ಗದಗ ಅಗ್ನಿಶಾಮಕ ಸಿಬ್ಬಂದಿ ಮಾದರಿಯಾಗಿದ್ದಾರೆ.