Tag: finance

  • ಫೈನಾನ್ಸ್ ಕಲೆಕ್ಷನ್ ಯುವಕನ ಅಡ್ಡಗಟ್ಟಿ 2.5 ಲಕ್ಷ ರೂ. ದರೋಡೆ – ಮೂವರ ಬಂಧನ

    ಫೈನಾನ್ಸ್ ಕಲೆಕ್ಷನ್ ಯುವಕನ ಅಡ್ಡಗಟ್ಟಿ 2.5 ಲಕ್ಷ ರೂ. ದರೋಡೆ – ಮೂವರ ಬಂಧನ

    ಮಂಗಳೂರು: ಫೈನಾನ್ಸ್ ಕಲೆಕ್ಷನ್ ಮಾಡುವ ಯುವಕನನ್ನು ಅಡ್ಡಗಟ್ಟಿದ್ದ ಮೂವರ ದರೋಡೆಗಾರರ ಗುಂಪು 2.5 ಲಕ್ಷ ರೂ. ದರೋಡೆ ಮಾಡಿದ್ದ ಘಟನೆ ಮಂಗಳೂರಿನ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಅಬ್ದುಲ್ ಅಜೀಜ್ (19), ಮಹಮ್ಮದ್ ಮುಸ್ತಫ (23), ಆಶ್ಲೇಷ್ ಕೋಟ್ಯಾನ್ (20) ಬಂಧಿತ ಆರೋಪಿಗಳಾಗಿದ್ದು, ಜುಲೈ 14 ರಂದು ಬಿ.ಸಿ.ರೋಡಿನಿಂದ ಪೊಳಲಿಗೆ ತೆರಳುತ್ತಿದ್ದಾಗ ದರೋಡೆ ನಡೆದಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

    ಪ್ರಕರಣದ ಕುರಿತು ತನಿಖೆ ಆರಂಭಿಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಸೆಂಥಿಲ್ ಕುಮಾರ್ ದರೋಡೆಗೆ ಒಳಗಾದ ಯುವಕನಾಗಿದ್ದು, ತಾಲೂಕಿನ ಪೊಳಲಿ ಬಳಿಯ ಮಳಲಿಯಲ್ಲಿ ಅಂದು ಯುವಕನಿಗೆ ಚೂರಿ ತೋರಿಸಿದ್ದ ಆರೋಪಿಗಳು ಸುಮಾರು 2.5 ಲಕ್ಷ ರೂ. ನಗದು ದೋಚಿದ್ದರು. ಆರೋಪಿಗಳ ಕುರಿತು ಖಚಿತ ಮಾಹಿತಿ ಲಭಿಸಿದ ಪರಿಣಾಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಈ ವೇಳೆ ಬಂಧಿತರಿಂದ 21,800 ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಚೂರಿ, ಬೈಕ್, ಮೂರು ಮೊಬೈಲ್ ವಶಕ್ಕೆ ಪಡೆದಿದ್ದಾರೆ.

  • ಕೆಲಸ ಮಾಡಿದ್ದಕ್ಕೆ ಮತದಾರ ಮತ ಹಾಕಿದ್ದಾನೆ – ಸೀತಾರಾಮನ್

    ಕೆಲಸ ಮಾಡಿದ್ದಕ್ಕೆ ಮತದಾರ ಮತ ಹಾಕಿದ್ದಾನೆ – ಸೀತಾರಾಮನ್

    ನವದೆಹಲಿ: ತಮ್ಮ ಚೊಚ್ಚಲ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ನಮ್ಮ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ಕಾರಣರಾದ ಎಲ್ಲ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

    ದೇಶದಲ್ಲಿ ಮೊದಲ ಬಾರಿಗೆ ಶೇ.67.9 ಮತದಾನ ನಡೆದಿದೆ. ಯುವಜನತೆ, ಹೊಸ ಮತದಾರರು, ಮಹಿಳೆಯರು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.

    2014-19ರ ಅವಧಿಯಲ್ಲಿ ರಾಜ್ಯ ಕೇಂದ್ರಗಳ ಸಂಬಂಧ ಸುಧಾರಣೆಯಾಗಿದೆ. ಜಿಎಸ್‍ಟಿಯನ್ನು ಜಾರಿಗೆ ತಂದಿದ್ದೇವೆ. Reform, Perform, Transform ಮಂತ್ರಗಳನ್ನು ಮುಂದಿಟ್ಟು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ಹಣಕಾಸು ಸಚಿವರು ಇಲ್ಲಿಯವರೆಗೆ ಬಜೆಟ್ ಪ್ರತಿಯನ್ನು ಸೂಟ್‍ಕೇಸ್‍ನಲ್ಲಿ ಹೊತ್ತುಕೊಂಡು ಸಂಸತ್ ಪ್ರವೇಶಿಸುತ್ತಿದ್ದರು. ಆದರೆ ನಿರ್ಮಲಾ ಸೀತಾರಾಮನ್ ಅವರು ಈ ಸಂಪ್ರದಾಯಕ್ಕೆ ಬ್ರೇಕ್ ಹಾಕಿ ಕೆಂಪು ಬಣ್ಣದ ಬಟ್ಟೆಯ ಒಳಗಡೆ ಬಜೆಟ್ ಪ್ರತಿಗಳನ್ನು ಇರಿಸಿಕೊಂಡು ಸಂಸತ್ ಪ್ರವೇಶಿಸಿದ್ದಾರೆ.

    ಹಣಕಾಸು ಸಚಿವಾಯಕ್ಕೆ ಆಗಮಿಸಿದ ಸಚಿವೆ ಬಜೆಟ್ ದಾಖಲೆಗಳನ್ನು ಬ್ರೀಫ್‍ಕೇಸ್ ಬದಲು ಬ್ಯಾಗ್ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವುದು ವಿಶೇಷವಾಗಿತ್ತು. ಈ ವೇಳೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಹಣಕಾಸು ಸಚಿವಾಲಯದ ಇತರೇ ಅಧಿಕಾರಿಗಳು ಸಚಿವೆಗೆ ಸಾಥ್ ನೀಡಿದರು.

    ಕೆಂಪುಬಟ್ಟೆಯಲ್ಲಿ ಬಜೆಟ್ ಗೆ ಸಂಬಂಧಪಟ್ಟ ದಾಖಲೆಗಳನ್ನು ಇಟ್ಟು ಆ ಬಟ್ಟೆಯನ್ನು ನಾಲ್ಕು ಮಡಿಕೆ ಮಾಡಿ ರಿಬ್ಬನ್‍ನಿಂದ ಕಟ್ಟಲಾಗಿದೆ. ಅದರ ಮೇಲೆ ರಾಷ್ಟ್ರಲಾಂಛನವಾದ ನಾಲ್ಕು ಮುಖದ ಸಿಂಹದ ಚಿತ್ರವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣಿಯನ್ ಅವರು, ಬಟ್ಟೆಯಲ್ಲಿ ಕಟ್ಟುವುದು ನಮ್ಮ ದೇಶದ ಸಂಪ್ರದಾಯ. ಪಾಶ್ಚಾತ್ಯ ಸಂಸ್ಕೃತಿಯಿಂದ ಹೊರಬರಲು ಈ ಬಾರಿ ಬ್ರೀಫ್‍ಕೇಸ್ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

  • ಆರ್‌ಬಿಐ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ರಾಜೀನಾಮೆ

    ಆರ್‌ಬಿಐ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ರಾಜೀನಾಮೆ

    ನವದೆಹಲಿ: ಕೇಂದ್ರದಲ್ಲಿರುವ ಮೋದಿ ಸರ್ಕಾರಕ್ಕೆ ಶಾಕ್ ಎನ್ನುವಂತೆ ದಿಢೀರ್ ಬೆಳವಣಿಗೆಯೊಂದರಲ್ಲಿ ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    ನನ್ನ ವೈಯಕ್ತಿಕ ಕಾರಣಗಳಿಂದಾಗಿ ಈ ಹುದ್ದೆಯಿಂದ ಈ ಕೂಡಲೇ ಕೆಳಗೆ ಇಳಿಯುತ್ತಿದ್ದೇನೆ. ಆರ್‌ಬಿಐ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನನ್ನ ಜೊತೆ ಸಹಕರಿಸಿದ ಎಲ್ಲ ಉದ್ಯೋಗಿಗಳಿಗೆ ಕೃತಜ್ಞತೆಗಳು. ಎಲ್ಲರಿಗೂ ಒಳ್ಳೆದಾಗಲಿ ಎಂದು ಉರ್ಜಿತ್ ಪಟೇಲ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ಆರೋಗ್ಯದ ಸಮಸ್ಯೆಯಿಂದ ಈ ವರ್ಷದ ನವೆಂಬರ್ ಮಧ್ಯ ಭಾಗದಲ್ಲಿ ಉರ್ಜಿತ್ ಪಟೇಲ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆದರೆ ನಂತರ ನಡೆದ ಸಭೆಯಿಂದಾಗಿ ಉರ್ಜಿತ್ ಪಟೇಲ್ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ ಎನ್ನಲಾಗಿತ್ತು. ಆದರೆ ಸೋಮವಾರ ಉರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾರೆ.

    ಹಿಂದಿನ ಗವರ್ನರ್ ರಘುರಾಂ ರಾಜನ್ ಅವರ ಅಧಿಕಾರಾವಧಿ 2016ರ ಸೆಪ್ಟೆಂಬರ್ 4ರಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಂದೇ ಉರ್ಜಿತ್ ಪಟೇಲ್ ಅವರು ನೂತನ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. 24ನೇ ಗವರ್ನರ್ ಆಗಿದ್ದ ಪಟೇಲ್ ಅವರು ಅಮೆರಿಕದ ಯಾಲೆ ವಿವಿಯಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ಬಿಎ ಪದವಿ ಓದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತನ ಮೇಲೆ ಸುಳ್ಯ ಪೊಲೀಸ್ ಇನ್ಸ್​ಪೆಕ್ಟರ್ ಹಲ್ಲೆ!

    ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತನ ಮೇಲೆ ಸುಳ್ಯ ಪೊಲೀಸ್ ಇನ್ಸ್​ಪೆಕ್ಟರ್ ಹಲ್ಲೆ!

    ಮಂಗಳೂರು: ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತರೊಬ್ಬರ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪೊಲೀಸ್ ಇನ್ಸ್​ಪೆಕ್ಟರ್ ಹಲ್ಲೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

    ದಕ್ಷಿಣ ಕನ್ನಡ-ಕೊಡಗು ಜಿಲ್ಲೆಯ ಗಡಿಭಾಗ ಸಂಪಾಜೆ ಸಮೀಪದ ಬಾಲೆಂಬಿ ನಿವಾಸಿ ರೈತ ರವೀಂದ್ರ ಅವರು ಸುಳ್ಯ ಪೊಲೀಸ್ ಇನ್ಸ್​ಪೆಕ್ಟರ್ ಆಗಿರುವ ಮಂಜುನಾಥ್ ನನ್ನ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

    ಸ್ಥಳೀಯ ಅನಧಿಕೃತ ಫೈನಾನ್ಸ್‍ನಿಂದ ರವೀಂದ್ರ ಅವರು ಬಡ್ಡಿಗೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಫೈನಾನ್ಸ್ ನೀಡಿದ್ದ ಖಾಲಿ ಚೆಕ್ ಬೌನ್ಸ್ ಆಗಿ, ಸಾಲ ಮರುಪಾವತಿ ಮಾಡಲಾಗದೇ ಚಕ್ರ ಬಡ್ಡಿಯ ಸುಳಿಗೆ ಬಿದ್ದ ರವೀಂದ್ರ ವಿರುದ್ಧ ಫೈನಾನ್ಸ್ ಮಾಲೀಕ ಡಿ.ಬಿ ಕೇಶವ ಸುಳ್ಯ ಕೋರ್ಟ್ ನಲ್ಲಿ ದೂರು ನೀಡಿದ್ದರು.

    ಈ ಬಗ್ಗೆ ಜಿಲ್ಲಾ ನ್ಯಾಯಾಲಯದಿಂದ ರವೀಂದ್ರ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ರವೀಂದ್ರ ಬೆಂಗಳೂರಿನ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ, ಸ್ಟೇ ಆರ್ಡರ್ ಪಡೆದಿದ್ದರು. ಇದೇ ವೇಳೆ ವಾರೆಂಟ್ ಹಿಡಿದು ಸುಳ್ಯ ಪೊಲೀಸರು ರವೀಂದ್ರ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

    ಸ್ಟೇ ಆರ್ಡರ್ ಸಹಿತ ಡಿಸೆಂಬರ್ 4 ರಂದು ಮುಂಜಾನೆ ಬೆಂಗಳೂರಿನಿಂದ ಸುಳ್ಯಕ್ಕೆ ಆಗಮಿಸುತ್ತಿದ್ದಾಗಲೇ ಸುಳ್ಯ ಇನ್ಸ್​ಪೆಕ್ಟರ್ ಮಂಜುನಾಥ್, ರವೀಂದ್ರ ಅವರನ್ನು ಠಾಣೆಗೆ ಎಳೆದೊಯ್ದಿದ್ದಾರೆ. ಬಳಿಕ ಠಾಣೆಯಲ್ಲಿ ಕೂಡಿ ಹಾಕಿ, ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ ನಲ್ಲಿ ಥಳಿಸಿದ್ದಾರೆಂದು ಆರೋಪಿಸಲಾಗಿದೆ.

    ಕೋರ್ಟ್ ಆದೇಶ ಇದ್ದರೂ ಕ್ಯಾರೇ ಮಾಡದೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ರೈತ ರವೀಂದ್ರ ಅವರು ಈಗ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಿದ್ದಾರೆ. ಹೊಟ್ಟೆಯಲ್ಲಿ ಗೆಡ್ಡೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದ ರವೀಂದ್ರ, ಪೊಲೀಸರ ದೌರ್ಜನ್ಯದಿಂದಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಾನು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬೆಂಬಲಿಗ. ನನ್ನನ್ನು ಯಾರು ಏನೂ ಮಾಡಲಾಗದು ಎಂದು ಇನ್ಸ್​ಪೆಕ್ಟರ್ ಬೆದರಿಸಿದ್ದಾರೆ ಎಂದು ರವಿಂದ್ರ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನೋಟು ನಿಷೇಧದಿಂದ ಆನ್‍ಲೈನ್ ವ್ಯವಹಾರ ಎಷ್ಟು ಏರಿಕೆಯಾಗಿದೆ? ಹಿಂದೆ ಎಷ್ಟಿತ್ತು?

    ನೋಟು ನಿಷೇಧದಿಂದ ಆನ್‍ಲೈನ್ ವ್ಯವಹಾರ ಎಷ್ಟು ಏರಿಕೆಯಾಗಿದೆ? ಹಿಂದೆ ಎಷ್ಟಿತ್ತು?

    ನವದೆಹಲಿ: ನೋಟು ನಿಷೇಧದಿಂದಾಗಿ ಭಾರತದ ಅರ್ಥ ವ್ಯವಸ್ಥೆ ಹಳಿಗೆ ಬಂದಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರಕ್ಕೆ 2 ವರ್ಷ ಕಳೆದಿದೆ. ಜನರಲ್ಲಿದ್ದ ಹಣವನ್ನು ಜಪ್ತಿ ಮಾಡಲು ನೋಟು ನಿಷೇಧ ಮಾಡಿಲ್ಲ. ಅಕ್ರಮವಾಗಿ ಸಂಗ್ರಹಿಸಿದ್ದ ಹಣವನ್ನು ತೆರಿಗೆ ವ್ಯಾಪ್ತಿಗೆ ತರಲು ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಜೇಟ್ಲಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಎನ್‍ಡಿಎ ಸರ್ಕಾರ ಮೇ 2014ರಲ್ಲಿ ಅಧಿಕಾರಕ್ಕೆ ಬಂದಾಗ ದೇಶದಲ್ಲಿ ಆದಾಯ ತೆರಿಗೆ ಪಾವತಿದಾರರ ಸಂಖ್ಯೆ 3.8 ಕೋಟಿ ಇತ್ತು. 4 ವರ್ಷದಲ್ಲಿ ಈ ಸಂಖ್ಯೆ 6.86 ಕೋಟಿಗೆ ಏರಿಕೆಯಾಗಿದ್ದು, ನಮ್ಮ ಸರ್ಕಾರದ ಅವಧಿ ಮುಗಿಯುವ ಮುನ್ನ ಈ ಸಂಖ್ಯೆ ದುಪ್ಪಟ್ಟು ಆಗಬೇಕು ಎಂದು ಜೇಟ್ಲಿ ಹೇಳಿದ್ದಾರೆ.

    ಈ ಸಂಬಂಧ ಫೇಸ್‍ಬುಕ್ ನಲ್ಲಿ ದೀರ್ಘ ಪೋಸ್ಟ್ ಪ್ರಕಟಿಸಿರುವ ಜೇಟ್ಲಿ ನೋಟು ನಿಷೇಧದಿಂದ ದೇಶದ ಮೇಲೆ ಆದ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ನೋಟು ನಿಷೇಧಗೊಂಡ ಬಳಿಕ ಜನರ ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಅನುಕೂಲವಾಗಲು ಕೇಂದ್ರ ಸರ್ಕಾರ `ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್(ಯುಪಿಐ)ಅನ್ನು 2016ರಲ್ಲಿ ಜಾರಿಗೆ ತಂದಿತ್ತು. ಇದರ ಪರಿಣಾಮ 2016ರ ಅಕ್ಟೋಬರ್ ನಲ್ಲಿ 50 ಕೋಟಿ ರೂ.ನಷ್ಟು ಆನ್‍ಲೈನ್ ವಹಿವಾಟು ನಡೆದಿತ್ತು. ಇದಲ್ಲದೇ 2016 ಅಕ್ಟೋಬರ್ ನಿಂದ ಸೆಪ್ಟೆಂಬರ್ 2018ರ ವರೆಗೆ ಭಾರತದಲ್ಲಿ 59,800 ಕೋಟಿ ರೂ. ಆನ್‍ಲೈನ್ ವ್ಯವಹಾರ ನಡೆದಿದೆ.

    ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಮಾಡಿದ್ದ ಭೀಮ್ ಯುಪಿಐ ಆ್ಯಪನ್ನು ಭಾರತದ 1.25 ಕೋಟಿ ಗ್ರಾಹಕರು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಭೀಮ್ ಆ್ಯಪಿನ ಆನ್‍ಲೈನ್ ವಹಿವಾಟು 2016ರ ಅಕ್ಟೋಬರ್ ನಲ್ಲಿ 20 ಲಕ್ಷ ರೂ. ಇದ್ದರೆ, ಇದೇ ಸೆಪ್ಟೆಂಬರ್ 2018ರಲ್ಲಿ 7,060 ಕೋಟಿ ರೂ. ವಹಿವಾಟು ಏರಿಕೆಯಾಗಿದೆ. 2017ರ ಜೂನ್ ತಿಂಗಳಲ್ಲಿ ದೇಶಾದ್ಯಂತ ಭೀಮ್ ಆ್ಯಪ್ ಮೂಲಕ ಶೇ.48ರಷ್ಟು ವಹಿವಾಟು ನಡೆದಿದೆ.

    ಹೆಚ್ಚಿದ ರುಪೇ ವ್ಯವಹಾರ:
    ರುಪೇ ಕಾರ್ಡ್ ಅನ್ನು ಪಾಯಿಂಟ್ ಆಫ್ ಸೇಲ್(ಪಿಓಎಸ್) ಮತ್ತು ಆನ್ ಲೈನ್ ವ್ಯವಹಾರಕ್ಕೆ ಬಳಸುತ್ತಿದ್ದಾರೆ. ನೋಟು ನಿಷೇಧಕ್ಕೂ ಮೊದಲು ಪಿಓಎಸ್‍ನಲ್ಲಿ 800 ಕೋಟಿ ರೂ. ವ್ಯವಹಾರ ನಡೆದಿದ್ದರೆ 2018 ಸೆಪ್ಟೆಂಬರ್ ವರೆಗೆ 5,730 ಕೋಟಿ ರೂ.ಗೆ ಏರಿಕೆಯಾಗಿದೆ. ಇ ಕಾಮರ್ಸ್ ನಲ್ಲಿ 300 ಕೋಟಿ ರೂ. ವ್ಯವಹಾರ ನಡೆಯುತ್ತಿದ್ದರೆ ಈಗ 2,700 ಕೋಟಿ ರೂ.ಗೆ ಏರಿಕೆಯಾಗಿದೆ.

    ವಿದೇಶಿ ಕಾರ್ಡ್ ಗಳಾದ ವೀಸಾ ಹಾಗೂ ಮಾಸ್ಟರ್ ಕಾರ್ಡ್ ಸಂಸ್ಥೆಗಳು ಭಾರತದಲ್ಲಿ ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳುತ್ತಿವೆ. ದೇಶದಲ್ಲಿ ಶೇ.65ರಷ್ಟು ಆನ್‍ಲೈನ್ ವ್ಯವಹಾರಗಳು ಯುಪಿಐ ಹಾಗೂ ರುಪೇ ಕಾರ್ಡ್ ಮೂಲಕವೇ ನಡೆಯುತ್ತಿದೆ. ಇದನ್ನೂ ಓದಿ: ಮೋದಿ ವಿರುದ್ಧ ಅಮೆರಿಕಕ್ಕೆ ದೂರು ಕೊಟ್ಟ ಮಾಸ್ಟರ್ ಕಾರ್ಡ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಉಡುಪಿಯಲ್ಲಿ ಹಾಡಹಗಲೇ ಉದ್ಯಮಿಯ ಬರ್ಬರ ಹತ್ಯೆ

    ಉಡುಪಿಯಲ್ಲಿ ಹಾಡಹಗಲೇ ಉದ್ಯಮಿಯ ಬರ್ಬರ ಹತ್ಯೆ

    ಉಡುಪಿ: ಹಾಡಹಗಲೇ ಉದ್ಯಮಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಪೆರಂಪಳ್ಳಿ ಸಮೀಪದ ಪಬ್‍ನಲ್ಲಿ ನಡೆದಿದೆ.

    ಗುರುಪ್ರಸಾದ್ ಭಟ್(46) ಕೊಲೆಯಾದ ಉದ್ಯಮಿಯಾಗಿದ್ದಾರೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಕಾರಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಪಬ್ ನಲ್ಲಿದ್ದ ಗುರುಪ್ರಸಾದ್ ರೊಂದಿಗೆ ಗಲಾಟೆ ನಡೆಸಿದ್ದಾರೆ. ಈ ವೇಳೆ ಏಕಾಏಕಿ ಅವರ ಮೇಲೆ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಗೊಂಡ ಗುರುಪ್ರಸಾದ್ ರವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.

    ಮೃತ ಗುರುಪ್ರಸಾದ್ ನಗರದಲ್ಲಿ ಹಲವು ದಿನಗಳಿಂದ ಪಬ್ ಹಾಗೂ ಮರದ ಕೆತ್ತನೆ ಉದ್ಯಮ ನಡೆಸುತ್ತಿದ್ದರು. ಉದ್ಯಮದ ಪೈಪೋಟಿ ಹಾಗೂ ಹಣಕಾಸಿನ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಂಪುಟ ರಚನೆಯಲ್ಲಿ ದೇವೇಗೌಡರ ಹಸ್ತಕ್ಷೇಪವಿಲ್ಲ: ಎಚ್‍ಡಿಕೆ

    ಸಂಪುಟ ರಚನೆಯಲ್ಲಿ ದೇವೇಗೌಡರ ಹಸ್ತಕ್ಷೇಪವಿಲ್ಲ: ಎಚ್‍ಡಿಕೆ

    ಬೆಂಗಳೂರು: ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ತಲೆದೋರಿದ್ದ ಗೊಂದಲಕ್ಕೆ ತೆರೆಬಿದ್ದಿದ್ದು, ಸಚಿವ ಸಂಪುಟ ರಚೆನೆಯಲ್ಲಿ ಇಂಧನ ಇಲಾಖೆಯನ್ನು ಒತ್ತಾಯ ಪೂರ್ವಕವಾಗಿ ಜೆಡಿಎಸ್ ತೆಗೆದುಕೊಳ್ಳುವಲ್ಲಿ ದೇವೇಗೌಡರ ಯಾವುದೇ ಹಸ್ತಕ್ಷೇಪವಿಲ್ಲವೆಂದು ಸಿಎಂ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

    ರೇವಣ್ಣ ಹಾಗೂ ಡಿಕೆಶಿ ನಡುವಿನ ಇಂಧನ ಖಾತೆ ಜಟಾಪಟಿಯು ಸತ್ಯಕ್ಕೆ ದೂರವಾದ ಮಾತು ಇದರಲ್ಲಿ ದೇವೇಗೌಡರ ಯಾವುದೇ ಮಾಸ್ಟರ್ ಪ್ಲ್ಯಾನ್ ಇಲ್ಲ. ಆದರೆ ಇಬ್ಬರಿಗೂ ಇಂಧನ ಇಲಾಖೆ ಆಸಕ್ತಿ ಇದ್ದಿದ್ದು ನಿಜ ಎಂದರು.

    ವೇಣುಗೋಪಾಲ್ ಖಾತೆ ಹಂಚಿಕೆ ಪಟ್ಟಿ ತೆಗೆದುಕೊಂಡು ದೇವೇಗೌಡರ ಜತೆ ಮಾತುಕತೆ ನಡೆಸಿದ್ದಾರೆ. ಸಂಪುಟ ರಚನೆ ವಿಚಾರದಲ್ಲಿ ದೇವೇಗೌಡರು ಮೂಗು ತೂರಿಸಿದ್ದಾರೆ ರೇವಣ್ಣಗಾಗಿ ಮಧ್ಯಪ್ರವೇಶ ಮಾಡಿದ್ದಾರೆ ಅನ್ನೋದು ಸುಳ್ಳು ಎಂದು ಹೇಳಿದರು.

    ಕಾಂಗ್ರೆಸ್‍ನ ಕೇಂದ್ರ ನಾಯಕರಿಗೂ ಈ ವಿಚಾರ ಗೊತ್ತಿದೆ. ಹಣಕಾಸು ಇಲಾಖೆ ಕೇಳಿದ್ದು ನಿಜ ಆದರೆ ಬೇರೆ ಖಾತೆ ವಿಚಾರದಲ್ಲಿ ಜಟಾಪಟಿ ಇಲ್ಲ, ಜೆಡಿಎಸ್ ಒತ್ತಾಯದಿಂದ ಯಾವುದೇ ಖಾತೆ ಪಡೆದಿಲ್ಲವೆಂದು ಸ್ಪಷ್ಟನೆ ನೀಡಿದರು.

    ಕೇಂದ್ರ ಸರ್ಕಾರ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ವಿಚಾರ ಅಧಿಸೂಚನೆ ಹೊರಡಿಸಲು ಸಮಯಾವಕಾಶ ಕೇಳಿತ್ತು. ನಿನ್ನೆ ಅಧಿಸೂಚನೆ ಹೊರಡಿಸಿದ್ದು, ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ಮಾಡಿ ಬಳಿಕ ರಾಜ್ಯದ ನಿಲುವು ತಿಳಿಸುತ್ತೇವೆ ಎಂದು ಹೇಳಿದರು.

    ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಹೊಸ ಬಜೆಟ್ ಮಂಡನೆಯಾಗಬೇಕು ಇದಕ್ಕೆ ಪೂರಕವಾಗಿ ಮೂರ್ನಾಲ್ಕು ದಿನಗಳಲ್ಲಿ ಬಜೆಟ್ ನ ಸಿದ್ಧತಾ ಸಭೆ ನಡೆಸಿ ಪ್ರಣಾಳಿಕೆಯಲ್ಲಿ ಹೇಳಿದ್ದನ್ನು ಹಾಗೂ ಹಿಂದಿನ ಸರ್ಕಾರಗಳ ಯೋಜನೆಗಳನ್ನು ಒಳಗೊಂಡಂತೆ ಬಜೆಟ್ ಸಿದ್ಧಪಡಿಸಲು ಜಂಟಿ ಅಧಿವೇಶನ ಕರೆಯಲಾಗುವುದೆಂದು ತಿಳಿಸಿದರು.ಇದನ್ನೂ ಓದಿ:ಒಂದು ಕಾಲ್, ಒಂದು ಡೋಸ್, ಒಂದು ಒಪ್ಪಂದ- ಚೆಕ್ ಕೊಟ್ಟು ಗೆದ್ದ ಎಚ್‍ಡಿಡಿ

  • ಬಜೆಟ್ ಹೈಲೈಟ್ಸ್: ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು ಸಿಗುತ್ತೆ 500 ರೂ.

    ಬಜೆಟ್ ಹೈಲೈಟ್ಸ್: ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು ಸಿಗುತ್ತೆ 500 ರೂ.

    ನವದೆಹಲಿ: ಕ್ಷಯ ರೋಗಿಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು 500 ರೂ. ಸಹಾಯ ಧನ ನೀಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಎಲ್ಲಾ ಟಿಬಿ ರೋಗಿಗಳ ಪೌಷ್ಠಿಕ ಆಹಾರ ನೀಡಲು 600 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ಜೇಟ್ಲಿ ಬಜೆಟ್ ಭಾಷಣದಲ್ಲಿ ತಿಳಿಸಿದರು.

    ಬಜೆಟ್ ಹೈಲೈಟ್ಸ್
    – ಎಸ್‍ಸಿ ಗಳಿಗಾಗಿ- 279 ಕಾರ್ಯಕ್ರಮಗಳು, 52,719 ಕೋಟಿ ರೂ. ಮೀಸಲು
    – ಎಸ್‍ಟಿ ಗಳಿಗಾಗಿ – 305 ಕಾರ್ಯಕ್ರಮಗಳು, 32,508 ಕೋಟಿ ರೂ. ಮೀಸಲು
    – ಭಾರತದ ಆರ್ಥಿಕತೆ ಶೀಘ್ರದಲ್ಲೇ 5ನೇ ಅತೀ ದೊಡ್ಡದಾಗುವ ಆರ್ಥಿಕತೆಯಾಗುವ ದೇಶವಾಗಲಿದೆ.

    – ರೈತರ ಆದಾಯ ಹೆಚ್ಚಿಸುವುದರ ಬಗ್ಗೆ ಆದ್ಯತೆ, ಕೃಷಿ ಮಾರುಕಟ್ಟೆ ಅಭೀವೃದ್ಧಿಗೆ 2 ಸಾವಿರ ಕೋಟಿ ರೂ.
    – 473 ಎಪಿಎಮ್‍ಸಿ ಗಳು ಇ-ಎನ್‍ಎಎಮ್ (ರಾಷ್ಟ್ರೀಯ ಕೃಷಿ ಮಾರುಕಟ್ಟೆ ಪೋರ್ಟಲ್) ಜೊತೆ ಸಂಪರ್ಕಿಸಲಾಗುತ್ತದೆ. ಉಳಿದವನ್ನ ಮಾರ್ಚ್ 18ರೊಳಗೆ ಸಂಪಕಿಸಲಾಗುತ್ತದೆ.

    – ಆಹಾರ ಸಂಸ್ಕರಣಾ ವಲಯಕ್ಕೆ 1400 ಕೋಟಿ ರೂ. ದುಪ್ಪಟ್ಟು ಹಣ ಮೀಸಲು
    – ಆಪರೇಷನ್ ಗ್ರೀನ್‍ಗಾಗಿ 500 ಕೋಟಿ ರೂ.
    – ಕಿಸಾನ್ ಕ್ರೆಡಿಟ್ ಕಾರ್ಡ್‍ಗಳು ಮೀನುಗಾರಿಕೆ ಹಾಗೂ ಪಶುಸಂಗೋಪನೆ ರೈತರಿಗೂ ವಿಸ್ತರಣೆ

    – ಬಿದಿರು ವಲಯಕ್ಕೆ 1290 ಕೋಟಿ ರೂ.
    – ಮೀನುಗಾರಕಾ ನಿಧಿ ಹಾಗೂ ಪಶುಸಂಗೋಪನೆ ನಿಧಿಗಾಗಿ 10 ಸಾವಿರ ಕೋಟಿ ರೂ.
    – ರಾಷ್ಟ್ರ ರಾಜಧಾನಿಯಾದ ದೆಹಲಿಯ ಪ್ರದೇಶದ ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಯೋಜನೆ

    -ಉಜ್ವಲಾ ಯೋಜನೆಯ ಮೂಲಕ 8 ಕೋಟಿ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ
    – ಕೈಗೆಟುಕುವ ಬೆಲೆಯಲ್ಲಿ ವಸತಿ ನಿಧಿ ಸ್ಥಾಪನೆ ನ್ಯಾಷನಲ್ ಲೈವ್ಲಿಹುಡ್ ಮಿಷನ್‍ಗಾಗಿ 5750 ಕೋಟಿ ರೂ.
    – ಕೃಷಿ ಚಟುವಟಿಕೆಗಾಗಿ ಸಾಲ 10 ಲಕ್ಷ ಕೋಟಿಯಿಂದ 11 ಲಕ್ಷ ಕೋಟಿಗೆ ಹೆಚ್ಚಳ

    – ಬುಡಕಟ್ಟು ಮಕ್ಕಳಿಗಾಗಿ ಏಕಲವ್ಯ ಶಾಲೆಗಳ ಸ್ಥಾಪನೆ, ವಡೋದರಾದಲ್ಲಿ ರೈಲ್ವೆ ವಿಶ್ವವಿದ್ಯಾಲಯಕ್ಕಾಗಿ ಪ್ರಸ್ತಾವನೆ
    – ಆರೋಗ್ಯ ಕೇಂದ್ರಗಳಿಗೆ 1200 ಕೋಟಿ ರೂ.
    – 10 ಕೋಟಿ ಬಡ ಕುಟುಂಬಗಳಿಗಾಗಿ ಆರೋಗ್ಯ ಸುರಕ್ಷಾ ಯೋಜನೆ
    – ಬಡ ಹಾಗೂ ದುರ್ಬಲ ಕುಟುಂಬಗಳಿಗಾಗಿ ಒಂದು ವರ್ಷಕ್ಕೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವಿಮೆ

    – ನೀರಾವರಿ ಯೋಜನೆಗೆ ರೂ. 2600 ಕೋಟಿ ರೂ.
    – 2022ರ ವೇಳೆಗೆ ಪ್ರತೀ ಬಡ ವ್ಯಕ್ತಿಯೂ ಪ್ರಧಾನ ಮಂತ್ರಿ ಅವಾಜ್ ಯೋಜನೆಯಡಿ ಮನೆ ಹೊಂದಬೇಕು. ಈಗಾಗಲೇ 1 ಕೋಟಿ ಮನೆಗಳು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, 37 ಲಕ್ಷ ಮನೆಗಳು ನಗರ ಪ್ರದೇಶದಲ್ಲಿ ನಿರ್ಮಾಣವಾಗಿವೆ.

    – ಮುಂದಿನ ಹಣಕಾಸು ಯೋಜನೆಯಲ್ಲಿ ಸುಮಾರು 2 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಾಣದ ಗುರಿ
    – ಉಚಿತ ವಿದ್ಯುತ್ ಸಂಪರ್ಕಕ್ಕಾಗಿ 16,000 ಕೋಟಿ ರೂ. ಮೀಸಲು

  • ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕತೆ ಸುಧಾರಿಸಿದೆ

    ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕತೆ ಸುಧಾರಿಸಿದೆ

    ನವದೆಹಲಿ: 2014ರ ನಂತರ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಆರ್ಥಿಕತೆ ಸುಧಾರಿಸಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಬಜೆಟ್ ಹೈಲೈಟ್ಸ್
    – ವಿಶ್ವಸಂಸ್ಥೆ ಯ ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಜಿಗಿದು ಭಾರತ 100ನೇ ಸ್ಥಾನವನ್ನು ಪಡೆದಿದೆ.
    – 2018-19 ರ ಎರಡನೇ ತ್ರೈಮಾಸಿಕದಲ್ಲಿ ಭಾರತ 7.2 -7.5% ಜಿಡಿಪಿ ಪ್ರಗತಿ ಸಾಧಿಸುವ ನಿರೀಕ್ಷೆಯಿದೆ.
    – ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅನುದಾನ ನೀಡುತ್ತೇವೆ.
    – ನೋಟು ನಿಷೇಧ, ಜಿಎಸ್‍ಟಿ, ಎಫ್‍ಡಿಐ ಇತ್ಯಾದಿಗಳಿಂದ ದೇಶದ ಆರ್ಥಿಕತೆ ಅಭಿವೃದ್ಧಿಯಾಗುತ್ತಿದೆ.
    – ಕೃಷಿ ಉತ್ಪನ್ನಗಳ ಮೇಲೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವುದು ಮಾತ್ರ ಸಾಕಾಗುವುದಿಲ್ಲ. ರೈತರಿಗೆ ಹೆಚ್ಚಿನ ಲಾಭ ಹಾಗೂ ಉತ್ಪಾದಕ ಉದ್ಯೋಗ ದೊರಕಿಸುವುದು ನಮ್ಮ ಉದ್ದೇಶ.
    – ಈ ವರ್ಷದ ಬಜೆಟ್ ಮುಖ್ಯವಾಗಿ ಕೃಷಿ ಮೇಲೆ ಕೇಂದ್ರೀಕೃತವಾಗಿರಲಿದೆ.
    – ಜಗತ್ತಿನಲ್ಲಿ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಭಾರತವೂ ಒಂದಾಗಿದೆ

  • ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಕಂಪನಿಯಿಂದ ನೂರಾರು ಜನರಿಗೆ ಮೋಸ

    ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಕಂಪನಿಯಿಂದ ನೂರಾರು ಜನರಿಗೆ ಮೋಸ

    ಕೋಲಾರ: ಕಡಿಮೆ ದರದಲ್ಲಿ ಬಡ್ಡಿಗೆ ಸಾಲ ನೀಡೋದಾಗಿ ನಂಬಿಸಿ ತಮಿಳುನಾಡು ಮೂಲದ ಕಂಪನಿಯೊಂದು ನೂರಾರು ಜನರಿಗೆ ಮೋಸ ಮಾಡಿರುವ ಘಟನೆ ಕೋಲಾರ ತಾಲೂಕು ಕಿತ್ತಂಡೂರು ಗ್ರಾಮದಲ್ಲಿ ನಡೆದಿದೆ.

    ತಮಿಳುನಾಡು ತಂಜಾವೂರಿನ ಕ್ರೈಸ್ಟ್ ಇಂಟರ್ ನ್ಯಾಷನಲ್ ಟೂರಿಸಂ ಅಂಡ್ ಫೈನಾನ್ಸ್ ಗ್ರೂಪ್ ಆಫ್ ಕಂಪನಿ ಕಳೆದ ಮೂರು ತಿಂಗಳಿನಿಂದ ರೈತರಿಂದ 50 ಲಕ್ಷ ಹಣ ವಸೂಲಿ ಮಾಡಿ ಪರಾರಿಯಾಗಿದ್ದರು. ತಲೆಮರೆಸಿಕೊಂಡಿದ್ದ ಕಂಪನಿ ಮಾಲೀಕ ಸೆಂದಿಲ್ ಜಾಮೀನಿಗಾಗಿ ಕೋರ್ಟ್‍ಗೆ ಬಂದಿದ್ದು, ಈ ವೇಳೆ ಮೋಸ ಹೋಗಿದ್ದ ನೂರಾರು ಜನರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ತಮ್ಮ ಹಣ ತಮಗೆ ವಾಪಸ್ ನೀಡುವಂತೆ ಆಗ್ರಹಿಸಿದ್ರು.

    ಈ ಬಗ್ಗೆ ಫೈನಾನ್ಸ್ ಕಂಪನಿ ಮಾಲೀಕ ಸೆಂದಿಲ್ ಮಾತನಾಡಿ ನನ್ನ ಸಿಬ್ಬಂದಿ ಮೋಸ ಮಾಡಿದ್ದಾರೆ. ನನಗೆ ಜಾಮೀನು ಸಿಕ್ಕಿದೆ. ಒಂದು ತಿಂಗಳು ಕಾಲಾವಕಾಶ ಕೇಳಿದ್ದು ಜನರ ಹಣ ವಾಪಸ್ ಕೊಡುತ್ತೇನೆ ಎಂದು ಹೇಳಿದ್ದಾನೆ.

    ಸದ್ಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬ್ಲೇಡ್ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.