Tag: Finance Minister Nirmala Sitharaman

  • ಮೂವರು ಕೇಂದ್ರ ಸಚಿವರೊಂದಿಗೆ ಎಂ.ಬಿ ಪಾಟೀಲ್ ಭೇಟಿ – ರಾಜ್ಯದ ಬೇಡಿಕೆಗಳ ಕುರಿತು ಚರ್ಚೆ

    ಮೂವರು ಕೇಂದ್ರ ಸಚಿವರೊಂದಿಗೆ ಎಂ.ಬಿ ಪಾಟೀಲ್ ಭೇಟಿ – ರಾಜ್ಯದ ಬೇಡಿಕೆಗಳ ಕುರಿತು ಚರ್ಚೆ

    – ರಾಜನಾಥ್ ಸಿಂಗ್, ಹೆಚ್‌ಡಿಕೆ, ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ

    ನವದೆಹಲಿ: ರಾಜ್ಯದ ಕೈಗಾರಿಕೆ, ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ಕೇಂದ್ರ ಸರ್ಕಾರದ ಸಹಕಾರ ಕೋರಿ ಮತ್ತು ಅಗತ್ಯ ಬಂಡವಾಳ ಹೂಡಿಕೆ ನಿರೀಕ್ಷಿಸಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಮೂವರು ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ.

    ಮಂಗಳವಾರ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ವಿಸ್ತೃತ ಮಾತುಕತೆ ನಡೆಸಿದರು.ಇದನ್ನೂ ಓದಿ: ಹಿರಿಯ ಅಧಿಕಾರಿ ವಿರುದ್ಧ IAF ಫ್ಲೈಯಿಂಗ್‌ ಸ್ಕ್ವಾಡ್‌ ಮಹಿಳಾಧಿಕಾರಿಯಿಂದ ಅತ್ಯಾಚಾರ ಆರೋಪ – ಕೇಸ್‌ ದಾಖಲು

    2025ರ ಫೆ.12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಎಂ.ಬಿ ಪಾಟೀಲ ಅವರು ದೆಹಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ಮೊದಲ ದಿನ ಎಡೆಬಿಡದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.

    ಮೊದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ ಅವರು, ರಕ್ಷಣಾ ಸಾಧನಗಳ ಉತ್ಪಾದನೆ ಮತ್ತು ಅವುಗಳ ರಫ್ತಿನ ಮೇಲೆ ಇರುವ ನಿರ್ಬಂಧದ ತೆರವು, ಡಿಫೆನ್ಸ್ ಕಾರಿಡಾರ್ ಸ್ಥಾಪನೆಯ ಜರೂರು, ರಾಜ್ಯದಲ್ಲಿರುವ ಬಿಎಚ್‌ಇಎಲ್ ಮತ್ತು ಬಿಇಎಂಎಲ್ ತರಹದ ಕೇಂದ್ರೋದ್ಯಮಗಳಲ್ಲಿ ಹೂಡಿಕೆ ಹೆಚ್ಚಳಕ್ಕೆ ಉತ್ತೇಜನ ನೀಡಬೇಕು ಮತ್ತು ಕಾರವಾರದ ನೌಕಾ ವೈಮಾನಿಕ ನಿಲ್ದಾಣದ ರನ್-ವೇಯನ್ನು ಈಗಿರುವ 2 ಕಿ.ಮೀ.ನಿಂದ 2.7 ಕಿ.ಮೀ.ವರೆಗೆ ವಿಸ್ತರಿಸಲು ಬೇಕಾಗಿರುವ ನೆರವಿನ ಬಗ್ಗೆ ಚರ್ಚಿಸಿದರು.

    ಬಳಿಕ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಜೊತೆ ಮಾತನಾಡಿ, ಕರ್ನಾಟಕದ ಕೈಗಾರಿಕಾ ವಲಯದ ಬೆಳವಣಿಗೆಗೆ ಅಗತ್ಯವಿರುವ ನಿರ್ಣಾಯಕ ನೆರವಿನ ಕುರಿತು ವಿಚಾರ ವಿನಿಮಯ ನಡೆಸಿದರು. ಇ.ವಿ. ವಲಯದಲ್ಲಿ ನವೋದ್ಯಮಗಳಿಗೆ 10 ಸಾವಿರ ಕೋಟಿ ರೂ. ಪೂರೈಸಲು ಎದುರಾಗಿರುವ ಸವಾಲು, ಫೇಮ್-3 ಯೋಜನೆಯ ಜಾರಿಯಲ್ಲಿ ಆಗುತ್ತಿರುವ ವಿಳಂಬ, ರಕ್ಷಣಾ ತಂತ್ರಜ್ಞಾನ ಹಬ್‌ಗಳ ಸ್ಥಾಪನೆಯ ಜರೂರು, ಬೆಂಗಳೂರು ಗ್ರಾಮಾಂತರದಲ್ಲಿ ಇಎಂಸಿ ಕ್ಲಸ್ಟರ್ ಸ್ಥಾಪನೆಗೆ ಬಾಕಿ ಇರುವ ಅನುಮೋದನೆಯ ಕುರಿತು ಮಾತನಾಡಿದರು.

    ಹಾರೋಹಳ್ಳಿ, ಕುಡುತಿನಿ ಮತ್ತು ದೇವಕತ್ತಿಕೊಪ್ಪದಲ್ಲಿ ಕೈಗಾರಿಕಾ ಯೋಜನೆಗಳಿಗೆ ಬಾಕಿ ಇರುವ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿ, ಸೆಮಿಕಂಡಕ್ಟರ್ ಕಂಪನಿ ಸ್ಥಾಪನೆಯ ತುರ್ತು ಮತ್ತು ಕೇಂದ್ರವು ಇತ್ತೀಚೆಗೆ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಯೋಜನೆಯಡಿ ರೂಪಿಸಿರುವ 12 ಸ್ಮಾರ್ಟ್ ಸಿಟಿ ಯೋಜನೆಯಿಂದ ಕರ್ನಾಟಕವನ್ನು ಹೊರಗಿಟ್ಟಿರುವುದರ ಬಗ್ಗೆ ಮಾತುಕತೆ ನಡೆಸಿದರು.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿ, ಬೇಗನೆ ಹಾಳಾಗುವಂತಹ ಪದಾರ್ಥಗಳನ್ನು ವಿಮಾನದ ಮೂಲಕ ಹೊರದೇಶಗಳಿಗೆ ಕಳುಹಿಸುತ್ತಿರುವ ಸಣ್ಣ ಪ್ರಮಾಣದ ರಫ್ತುದಾರರ ಮೇಲೆ ಹೇರಿರುವ ಜಿಎಸ್‌ಟಿ ತೆರಿಗೆಯನ್ನು ರದ್ದುಪಡಿಸಬೇಕು ಮತ್ತು ಎಲೆಕ್ಟ್ರಾನಿಕ್ ವಸ್ತುಗಳ ಆಮದಿನ ಮೇಲೆ ಈಗ ಇರುವ ಭಾರೀ ಆಮದು ತೆರಿಗೆ ಮತ್ತು ಸುಂಕವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಪುನರ್‌ ವಿಮರ್ಶೆ ನಡೆಸಬೇಕು – ಎಂ.ಸಿ.ಸುಧಾಕರ್

    ಸಿಂಗಪೂರ್ ಹೈಕಮೀಷನರ್ ಭೇಟಿ
    ಇದಕ್ಕೂ ಮುನ್ನ ಎಂ.ಬಿ ಪಾಟೀಲ, ಸಿಂಗಪುರ್ ಹೈಕಮಿಷನರ್ ಸೈಮನ್ ವಾಂಗ್ ಅವರನ್ನು ಭೇಟಿಯಾಗಿ, ಫೆಬ್ರವರಿಯಲ್ಲಿ ನಡೆಯಲಿರುವ ಹಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು.

    ಈ ಸಂದರ್ಭದಲ್ಲಿ ಅವರು, ಇತ್ತೀಚೆಗೆ ಭಾರತ ಮತ್ತು ಸಿಂಗಪೂರ್ ಸೆಮಿಕಂಡಕ್ಟರ್, ಡಿಜಿಟಲ್ ಸಹಕಾರ, ಆರೋಗ್ಯ ಸೇವೆ, ವೈದ್ಯಕೀಯ ಸಂಶೋಧನೆ, ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರಕ್ಕೆ ಮಾಡಿಕೊಂಡಿರುವ ಒಡಂಬಡಿಕೆ ಕುರಿತು ಚರ್ಚಿಸಿದರು.

    ಇದಕ್ಕೆ ಸ್ಪಂದಿಸಿದ ಹೈಕಮಿಷನರ್, ನೆಟ್-ಜೀರೋ ಕೈಗಾರಿಕಾ ಪಾರ್ಕುಗಳನ್ನು ಸ್ಥಾಪಿಸಲು ತಮಗಿರುವ ಆಸಕ್ತಿಯನ್ನು ಮತ್ತು ಜೊತೆಗೆ ಡೇಟಾ ಕೇಂದ್ರಗಳು, ಎಂಆರ್ ಓ, ವೈದ್ಯಕೀಯ ಉಪಕರಣಗಳು ಮತ್ತು ಔಷಧ ಕಂಪನಿಗಳಲ್ಲಿ ಹೂಡಿಕೆ ಮಾಡಲು ತಮ್ಮ ದೇಶದ ಕಂಪನಿಗಳಿರುವ ಒಲವನ್ನು ಹಂಚಿಕೊಂಡರು.

  • ಗುಡ್‍ನ್ಯೂಸ್ – ಜವಳಿ ಮೇಲಿನ ಜಿಎಸ್‍ಟಿ ಏರಿಕೆ ಇಲ್ಲ

    ಗುಡ್‍ನ್ಯೂಸ್ – ಜವಳಿ ಮೇಲಿನ ಜಿಎಸ್‍ಟಿ ಏರಿಕೆ ಇಲ್ಲ

    ನವದೆಹಲಿ: ಜವಳಿ ಮೇಲಿನ ಜಿಎಸ್‍ಟಿಯನ್ನು ಶೇ.5 ರಿಂದ ಶೇ.12ಕ್ಕೆ ಹೆಚ್ಚಿಸದೇ ಇರಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕೌನ್ಸಿಲ್ ನಿರ್ಧರಿಸಿದೆ.

    ಇಂದು ತುರ್ತು ಸಭೆ ನಡೆಸಿದ ಜಿಎಸ್‍ಟಿ ಮಂಡಳಿ ಮುಂದಿನ ಕೌನ್ಸಿಲ್ ಸಭೆಯಲ್ಲಿ ಈ ವಿಷಯವನ್ನು ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಹೇಳಿದೆ. ಈ ನಿರ್ಧಾರದಿಂದಾಗಿ ಜವಳಿ ಮೇಲಿನ ಜಿಎಸ್‍ಟಿ ದರ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ.

    ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಜವಳಿ ವಿಚಾರಕ್ಕಾಗಿ ತುರ್ತು ಸಭೆಯನ್ನು ನಡೆಸಲಾಗಿತ್ತು. ಈ ಸಭೆಯಲ್ಲಿ ದರ ನಿಗದಿ ಸಂಬಂಧ ಕರ್ನಾಟಕ ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಪರಿಶೀಲಿಸಿ ವರದಿ ನೀಡಿದ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ ಜ.15ರವರೆಗೆ 144 ಸೆಕ್ಷನ್ ಜಾರಿ – ಸಂಜೆ 5 ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ

    ಸಭೆಯಲ್ಲಿ ಜವಳಿ ಜಿಎಸ್‍ಟಿಯ ವಿಚಾರವಾಗಿ ಮಾತ್ರವೇ ಚರ್ಚೆ ನಡೆಸಲಾಗಿದ್ದು, ಪಾದರಕ್ಷೆಯ ದರಗಳ ಮೇಲಿನ ಹೆಚ್ಚಳದ ಬಗ್ಗೆ ಚರ್ಚಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಐದು ಜಿಲ್ಲೆಗಳ ಡಿಸಿಗಳಿಗೆ ಬೆವರಿಳಿಸಿದ ಸಿಎಂ ಬೊಮ್ಮಾಯಿ

    ಸಪ್ಟೆಂಬರ್ 17ರಂದು ಲಕ್ನೋದಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆದಿತ್ತು. ಈ ವೇಳೆ ಜವಳಿ ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‍ಟಿಯನ್ನು ಶೇ.5 ರಿಂದ ಶೇ.12 ಕ್ಕೆ ಹೆಚ್ಚಿಸುವ ಹಾಗೂ 2022ರ ಜನವರಿ 1 ರಂದು ಜಾರಿಗೊಳಿಸಲು ನಿರ್ಧರಿಸಲಾಗಿತ್ತು.

  • ರಕ್ಷಣಾ ವಲಯಕ್ಕೆ ಮೇಕ್ ಇನ್ ಇಂಡಿಯಾ ಬಲ- 6 ಏರ್ ಪೋರ್ಟ್‍ಗಳ ಹರಾಜು

    ರಕ್ಷಣಾ ವಲಯಕ್ಕೆ ಮೇಕ್ ಇನ್ ಇಂಡಿಯಾ ಬಲ- 6 ಏರ್ ಪೋರ್ಟ್‍ಗಳ ಹರಾಜು

    -50 ಗಣಿಗಳ ಹರಾಜಿಗೆ ಕೇಂದ್ರ ನಿರ್ಧಾರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಘೋಷಣೆಯ 20 ಲಕ್ಷ ಕೋಟಿಯ ಪ್ಯಾಕೇಜ್ ನ ನಾಲ್ಕನೇ ಹಂತದ ಪ್ರಕಟನೆಯನ್ನ ಕೇಂದ್ರ ಹಣಕಾಸುವ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸುದ್ದಿಗೋಷ್ಟಿಯಲ್ಲಿ ಮಂಡಿಸಿದರು.

    ಪಿಎಂ ಮೋದಿ ಸುಧಾರಣೆಯ ಕುರಿತು ಒಳ್ಳೆಯ ರೆಕಾರ್ಡ್ ಹೊಂದಿದ್ದಾರೆ. ನೇರ ವರ್ಗಾವಣೆಯ ಅವಶ್ಯಕತೆ ಹೆಚ್ಚಿದ್ದು, ಈ ಕುರಿತು ಹಲವು ನಿಯಮಗಳನ್ನು ಸರಳೀಕರಣಕೊರಿಸುವ ಬಗ್ಗೆ ಕೇಂದ್ರ ಸಚಿವರು ಆರಂಭದಲ್ಲಿಯೇ ಮಾತನಾಡಿದರು. ಕೈಗಾರಿಕಾ ಮೂಲಭೂತ ಸುಧಾರಣೆಗೆ ಕ್ರಮ, ಉದ್ಯೋಗ ಸೃಷ್ಟಿ, ಉದ್ಯಮಗಳ ಮೇಲೆ ನಿಯಮಗಳ ಸರಳೀಕರಣ, ಭಾರತ ಮತ್ತು ಆರ್ಥಿಕತೆಯ ಮರು ನಿರ್ಮಾಣ ಕುರಿತ ಮಹತ್ವದ ಘೋಷಣೆಗಳನ್ನು ಘೋಷಿಸಿದರು. ಇಂದು 8 ವಲಯಗಳಾದ ಕಲ್ಲಿದ್ದಲು, ರಕ್ಷಣಾ ವ್ಯವಸ್ಥೆ, ಖನಿಜ ಸಂಪತ್ತು, ಏರ್‍ಪೋರ್ಟ್, ಏರ್ ಸ್ಪೇಸ್, ಎಂಆರ್‍ಓ (ಮೇಂಟೇನ್ಸ್ ರಿಪೇರ್ ಓವರ್ ಆಲ್), ವಿದ್ಯುತ್ ಉತ್ಪಾದನಾ ಮತ್ತು ವಿತರಣಾ ಘಟಕಗಳು ಹಾಗೂ ಬಾಹ್ಯಾಕಾಶಕ್ಕೆ ಅನುದಾನ ಘೋಷಿಸಲಾಯ್ತು.

    ಸುದ್ದಿಗೋಷ್ಠಿಯ ಪ್ರಮುಖಾಂಶಗಳು:
    1. ಕಲ್ಲಿದ್ದಲು
    * ಕಲ್ಲಿದ್ದಲು ಕ್ಷೇತ್ರದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದ್ದು, ಸರ್ಕಾರದ ಏಕಸ್ವಾಮ್ಯ ಅಂತ್ಯ. ಅವಶ್ಯಕತೆ ಇರೋ ಕಲ್ಲಿದ್ದಲ್ಲನ್ನ ಮಾತ್ರ ಆಮದು ಮಾಡಿಕೊಳ್ಳುವುದು. ಆಮದು ಕಡಿಮೆ ಮಾಡಿಕೊಳ್ಳುವ ರೀತಿಯಲಿ ಕೆಲಸ ಮಾಡೋದು. ನಮ್ಮಲ್ಲಿಯೇ ಹೆಚ್ಚು ಹೆಚ್ಚು ಕಲ್ಲಿದ್ದಲು ಉತ್ಪಾದನೆ ಮಾಡೋದರಿಂದ ಉದ್ಯೋಗ ನಿರ್ಮಾಣವಾಗಲಿದೆ.
    * ಸರಳ ನಿಯಮಗಳ ಅನ್ವಯ 50 ಕಲ್ಲಿದ್ದಲು ಉತ್ಪದಾನ ಕ್ಷೇತ್ರಗಳ ಹರಾಜು ಪ್ರಕ್ರಿಯೆ.
    * ಕೋಲ್ ಇಂಡಿಯಾ ಲಿಮಿಟೆಡ್ ಗಣಿಯನ್ನು ಖಾಸಗೀಕರಣ ಮಾಡಲು ಸರ್ಕಾರದ ಸಮ್ಮತಿ. ಕಲ್ಲಿದ್ದಲು ಅಭಿವೃದ್ಧಿಗಾಗಿ 50 ಸಾವಿರ ಕೋಟಿ ರೂ. ಅನುದಾನ.
    * 2023-24 ವೇಳೆಗೆ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಯ ಗುರಿ

    2. ಖನಿಜ ಸಂಪತ್ತು:
    * 500 ಮೈನಿಂಗ್ ಬ್ಲಾಕ್ ಗಳ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು. ಗಣಿಗಾರಿಕೆಯ ಗುತ್ತಿಗೆಯನ್ನು ವರ್ಗಾಯಿಸಲಾಗುವುದು.
    * ಖನಿಜ ಸಂಪತ್ತು ವಲಯದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ.
    * ಆತ್ಮನಿರ್ಭರಭಾರತ ಅಭಿಯಾನದಡಿಲ್ಲಿ ವಿಶ್ವ ಮಾರುಕಟ್ಟೆಯ ಜೊತೆ ಸ್ಪರ್ಧೆಗೆ ಭಾರತ ಸಿದ್ಧವಾಗಬೇಕಿದೆ. ಮಿನರಲ್ ಇಂಡೆಕ್ಸ್ ಆರಂಭಿಸೋದರ ಜೊತೆ ಟ್ಯಾಕ್ಸ್ ಸರಳೀಕರಣದ ವ್ಯವಸ್ಥೆ.

    3. ರಕ್ಷಣಾ ವಲಯ:
    * ರಕ್ಷಣಾ ವಲಯಕ್ಕೆ ಬೇಕಾಗುವ ಉತ್ಪನ್ನಗಳನ್ನು ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಉತ್ಪಾದಿಸಲಾಗುವುದು. ಸೇನೆಗೆ ಅವಶ್ಯಕವಾಗಿರು ಆಧುನಿಕ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿಯೇ ಉತ್ಪಾದಿಸಲಾಗುವುದು.
    * ಆರ್ಡಿನಸ್ ಫ್ಯಾಕ್ಟರಿ ಸಾಂಸ್ಥೀಕರಣ ಮಾಡಲಾಗುವುದು. ಇದು ಖಾಸಗೀಕರಣಕ್ಕೆ ಒಳಪಡಲ್ಲ. ಆರ್ಡಿನಸ್ ಫ್ಯಾಕ್ಟರಿಯನ್ನು ಷೇರು ಮಾರುಕಟ್ಟೆಯಲ್ಲಿ ಗಣನೆಗೆ ತೆಗೆದುಕೊಳ್ಳಲಾಗುವುದು.
    * ಸ್ವಯಂಚಾಲಿತ ಶಸ್ತ್ರಾಸ್ತ್ರಗಳ ಉತ್ಪಾದಾನದಲ್ಲಿ ಎಫ್‍ಡಿಐ ಹೂಡಿಕೆಯನ್ನು ಶೇ 49ರಿಂದ ಶೇ.74ಕ್ಕೆ ಏರಿಕೆ.

    4 ನಾಗರಿಕ ವಿಮಾನಯಾನ ಕ್ಷೇತ್ರ-ಏರ್ ಸ್ಪೇಸ್ 5.ಎಂಆರ್‍ಓ
    * ನಾಗರಿಕ ವಿಮಾನಯಾನ ಕ್ಷೇತ್ರದ ಸುಧಾರಣೆ ಹಿನ್ನೆಲೆಯಲ್ಲಿ ಆರು ವಿಮಾನ ನಿಲ್ದಾಣಗಳನ್ನು ಹರಾಜು ಹಾಕಲಾಗುವುದು. ಈಗಾಗಲೇ 12 ಏರ್ ಪೋರ್ಟ್ ಹರಾಜು ಹಾಕಲಾಗಿದೆ. ಈ ಪ್ರಕ್ರಿಯೆ ಏರ್‍ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನೇತೃತ್ವದಲ್ಲಿ ನಡೆಯುಲಿದೆ.
    * ಹರಾಜು ಮೂಲಕ ಒಟ್ಟು 13 ಸಾವಿರ ಕೋಟಿ ಆದಾಯದ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ.
    * ಖಾಸಗೀಕರಣ ಮತ್ತು ಹರಾಜು ಪ್ರಕ್ರಿಯೆಯಿಂದ ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚ ತಗ್ಗಲಿದೆ.
    * ಸಮಯ ಉಳಿತಾಯಕ್ಕಾಗಿ ವಾಯು ಮಾರ್ಗದಲ್ಲಿ ಸರಳೀಕರಣಕ್ಕಾಗಿ ಚಿಂತನೆ. ಸಮಯ ಉಳಿತಾಯದಿಂದ ವಿಮಾನ ಕ್ಷೇತ್ರದಲ್ಲಿ 1 ಸಾವಿರ ಕೋಟಿ ರೂ.ಯ ಲಾಭವಾಗಲಿದೆ. ವಾಯುಮಾರ್ಗದ ಸರಳೀಕರಣದಿಂದ ಇಂಧನ ಮತ್ತು ಪರಿಸರ ಮಾಲಿನ್ಯ ಸಹ ತಗ್ಗಲಿದೆ.

    6. ವಿದ್ಯುತ್ ಪ್ರಸರಣ:
    * ಕೇಂದ್ರಾಡಳಿತ ಪ್ರದೇಶದಲ್ಲಿರುವ ಎಸ್ಕಾಂಗಳ ಸುಧಾರಣೆಗಾಗಿ ಖಾಸಗೀಕರಣ
    * ವಿದ್ಯುತ್ ಉತ್ಪಾದನಾ ಕಂಪನಿಗಳಿ ನಿಗದಿತ ಸಮಯದಲ್ಲಿ ಪಾವತಿ. ಗ್ರಾಹಕರ ರಕ್ಷಣೆಗಾಗಿ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಅಳವಡಿಕೆ.
    * ದೇಶದ ವಿದ್ಯುತ್ ಪ್ರಸರಣಗಳಲ್ಲಿ ಬದಲಾವಣೆ

    7. ಆಸ್ಪತ್ರೆಗಳ ಅಭಿವೃದ್ಧಿ:
    * ಸಾಮಾಜಿಕ ಅಭಿವೃದ್ಧಿಯಲ್ಲಿ 8100 ಕೋಟಿ ರೂ. ಹೂಡಿಕೆ.
    * ಆಸ್ಪತ್ರೆಗಳಿಗೆ ಸಾಮಾಜಿಕ ಭದ್ರತೆ

    8. ಬಾಹ್ಯಾಕಾಶ:
    * ಬಾಹ್ಯಾಕಾಶ ಸುಧಾರಣೆಗಾಗಿ ಕ್ರಮ
    * ಭವಿಷ್ಯದ ಬಾಹ್ಯಾಕಾಶ ಅಧ್ಯಯನದಲ್ಲಿ ಖಾಸಗಿಯವರಿಗೆ ಪಾಲು
    * ಉಪಗ್ರಹ ಉಡಾವಣೆಯಲ್ಲಿ ಖಾಸಗಿ ಕಂಪನಿಯವರಿಗೆ ಅವಕಾಶ
    * ಖಾಸಗಿ ಕಂಪನಿಗಳು ಇಸ್ರೋ ಸೌಲಭ್ಯ ಪಡೆಯಬಹುದು.