Tag: File

  • ಸಿಎಂ ಕಚೇರಿಯಿಂದ ಕಾಣೆಯಾಯ್ತಾ ಬಿಬಿಎಂಪಿ ಫೈಲ್? – ಸಾವಿರಾರು ಕೋಟಿ ರೂ. ವ್ಯವಹಾರದ ಕಡತ ನಾಪತ್ತೆ

    ಸಿಎಂ ಕಚೇರಿಯಿಂದ ಕಾಣೆಯಾಯ್ತಾ ಬಿಬಿಎಂಪಿ ಫೈಲ್? – ಸಾವಿರಾರು ಕೋಟಿ ರೂ. ವ್ಯವಹಾರದ ಕಡತ ನಾಪತ್ತೆ

    ಬೆಂಗಳೂರು: ಬಿಬಿಎಂಪಿಗೆ (BBMP) ಸಂಬಂಧಿಸಿದ ಮಹತ್ವದ ಕಡತವೊಂದು (File)  ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕಚೇರಿಯಿಂದ ನಾಪತ್ತೆಯಾಗಿರೋ ಶಂಕೆ ವ್ಯಕ್ತವಾಗಿದ್ದು, ಭಾರೀ ಸಂಚಲನಕ್ಕೆ ಕಾರಣವಾಗಿದೆ.

    ಮುಖ್ಯಮಂತ್ರಿಗಳ ಮಾಹಿತಿಗೆಂದು ಕಳೆದ ವರ್ಷ ಬೆಂಗಳೂರು ನಗರಾಭಿವೃದ್ಧಿ ಕಚೇರಿಯಿಂದ ಸಿಎಂ ಕಚೇರಿಗೆ ಕಳುಹಿಸಲಾಗಿದ್ದ ಬೆಂಗಳೂರಿನ ಜಾಹೀರಾತು ನಿಯಮ-2019ರ ಕಡತ ಮತ್ತೆ ನಗರಾಭಿವೃದ್ಧಿ ಕಚೇರಿಗೆ ವಾಪಸ್ ಹೋಗಿಲ್ಲ. ಈ ಸಂಬಂಧ ಸಿಎಂ ಪ್ರಧಾನ ಕಾರ್ಯದರ್ಶಿಗೆ ಇದೇ ನ.22ರಂದು ಪತ್ರ ಬರೆದಿರುವ ಬೆಂಗಳೂರು ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, 2021ರ ಡಿಸೆಂಬರ್ 7ರಂದು ಸಿಎಂ ಕಚೇರಿಗೆ ಕಳಿಸಲಾಗಿದ್ದ ಬಿಬಿಎಂಪಿ ಜಾಹೀರಾತು ನಿಯಮ-2019 ಫೈಲ್ ಇನ್ನೂ ವಾಪಸ್ ಬಂದಿಲ್ಲ. ಕೂಡ್ಲೇ ಕಳುಹಿಸಿಕೊಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಒಂದೇ ದಿನದಲ್ಲಿ ಮಹಿಳಾ ಆಯೋಗದ ದೂರುಗಳ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ

    ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಮಾಹಿತಿ ಒದಗಿಸಬೇಕಿರುವುದರಿಂದ ಸದರಿ ಕಡತವನ್ನು ನಗರಾಭಿವೃದ್ಧಿಗೆ ಹಿಂತಿರುಗಿಸಿ ಎಂದು ಕೋರಿದ್ದಾರೆ. ಆದ್ರೆ, ಇದಕ್ಕೆ ಈವರೆಗೂ ಸಿಎಂ ಕಚೇರಿ ಯಾವುದೇ ಉತ್ತರ ನೀಡಿಲ್ಲ. ಇದರಿಂದ ನಗರಾಭಿವೃದ್ಧಿ ಇಲಾಖೆ ಕಂಗಾಲಾಗಿದೆ. ಜೊತೆಗೆ ಸಿಎಂ ಕಚೇರಿಯಿಂದ ಈ ಕಡತ ನಾಪತ್ತೆಯಾಗಿದ್ಯಾ? ಯಾರಾದ್ರೂ ಎಗರಿಸಿಕೊಂಡು ಹೋಗಿದ್ದಾರಾ ಎಂಬ ಅನುಮಾನ ಮೂಡಿದೆ. ಅಂದ ಹಾಗೆ, ಬೆಂಗಳೂರಿನ ಎಲ್ಲೆಲ್ಲಿ ಜಾಹೀರಾತು ಹಾಕಬೇಕು? ಎಲ್ಲೆಲ್ಲಿ ಹಾಕಬಾರದು? ಎಷ್ಟು ದರ ವಿಧಿಸಬೇಕು ಎಂಬುದನ್ನು ನಿರ್ಧರಿಸುವ ಮಹತ್ವದ ಕಡತ ಇದಾಗಿದೆ. ಇದ್ರಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ಅಡಗಿದೆ. ಈ ಫೈಲ್ ಇದೀಗ ನಾಪತ್ತೆಯಾಗಿದೆ. ಇದನ್ನೂ ಓದಿ: ಮಹಿಳೆಯರು ಏನೂ ಧರಿಸದಿದ್ರೂ ಚೆನ್ನಾಗಿ ಕಾಣಿಸುತ್ತಾರೆ: ಬಾಬಾ ರಾಮ್‌ದೇವ್

    Live Tv
    [brid partner=56869869 player=32851 video=960834 autoplay=true]

  • ಕಡತ ವಿಲೇವಾರಿ ಮತ್ತಷ್ಟು ಸ್ಟ್ರಿಕ್ಟ್ – ಬೊಮ್ಮಾಯಿ ಹೊಸ ರೂಲ್ಸ್ ಏನು? ಏಕೆ?

    ಕಡತ ವಿಲೇವಾರಿ ಮತ್ತಷ್ಟು ಸ್ಟ್ರಿಕ್ಟ್ – ಬೊಮ್ಮಾಯಿ ಹೊಸ ರೂಲ್ಸ್ ಏನು? ಏಕೆ?

    ಬೆಂಗಳೂರು: ಬಸವರಾಜ ಬೊಮ್ಮಾಯಿ ಸಿಎಂ ಪದವಿಗೇರಿ ಒಂದು ತಿಂಗಳಾಗಿದೆ. ಒಂದೇ ತಿಂಗಳಲ್ಲಿ ಆಡಳಿತವನ್ನು ಚುರುಕುಗೊಳಿಸಿ ಬಿಗಿ ಮಾಡುವ ಪ್ರಯತ್ನ ಆರಂಭವಾಗಿದೆ. ಹಂತ ಹಂತವಾಗಿ ಆಡಳಿತದಲ್ಲಿ ದಕ್ಷತೆ ತರಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ.

    ಅಧಿಕಾರಿ ವರ್ಗವನ್ನು ಸರಿದಾರಿಗೆ ತರುವುದು, ಸರ್ಕಾರಿ ಆದೇಶಗಳಿಗೆ ಅಧಿಕೃತ ಟಚ್ ಕೊಡುವುದು ಸಿಎಂ ಮೊದಲ ಉದ್ದೇಶವಾಗಿದ್ದು, ಅಧಿಕಾರಿಗಳ ಕಾರ್ಯನಿರ್ವಹಣೆಯಲ್ಲಿದ್ದ ಲೂಪ್ ಹೋಲ್ಸ್ ಗಳಿಗೆ ಬ್ರೇಕ್ ಹಾಕಿದ್ದಾರೆ.

    ಅಧಿಕಾರಿಗಳಿಗೆ ಆಯಾಯಾ ಇಲಾಖಾ ಹೊಣೆಗಾರಿಕೆಗಳನ್ನು ಸಿಎಂ ಫಿಕ್ಸ್ ಮಾಡಿದ್ದಾರೆ. ಕಡತಗಳ ವಿಲೇವಾರಿ ವಿಚಾರದಲ್ಲಿ ಸಣ್ಣ ಲೋಪ ಆಗಬಾರದು, ಯಾವುದೇ ಕಾರಣಕ್ಕೂ ಕಡತಗಳು ದುರ್ಬಳಕೆ ಆಗಬಾರದು ಎಂದು ಸೂಚಿಸಿದ್ದಾರೆ. ಪ್ರತೀ ಹಂತದ ಅಧಿಕಾರಿಯೂ ತನ್ನ ವ್ಯಾಪ್ತಿಯಲ್ಲಿ ಕಡತ ಬಗ್ಗೆ ಸಂಪೂರ್ಣ ಜ್ಞಾನವನ್ನು ಹೊಂದಿರಬೇಕೆಂದು ತಾಕೀತು ಮಾಡಿದ್ದಾರೆ.

    ಪ್ರತಿಯೊಂದು ಆಡಳಿತಾತ್ಮಕ ನಿರ್ಧಾರಗಳು ತಮ್ಮ ಕಣ್ತಪ್ಪಿ ಹೋಗಬಾರದು. ನಿರ್ಧಾರಗಳೂ ಆದೇಶ ಪ್ರತಿ ಮೂಲಕವೇ ಅಧಿಕೃತವಾಗಿರಬೇಕೆಂಬ ಕಾರಣಕ್ಕೆ ಸರ್ಕಾರಿ ಆದೇಶ ಕಾಪಿಗಳ ಕುರಿತಂತೆ ಹಿಂದಿನ ಸಂಪ್ರದಾಯಕ್ಕೆ ಸಿಎಂ ತಿಲಾಂಜಲಿ ಇಟ್ಟಿದ್ದಾರೆ. ಇದನ್ನೂ ಓದಿ : ನಾನು ಜೈಲಲ್ಲಿ ಇದ್ದೆ, ಒಂದು ಬೀಡಿಗೆ ಎಷ್ಟು ದುಡ್ಡು ಕೊಡ್ಬೇಕು ಗೊತ್ತು : ಆರಗ ಜ್ಞಾನೇಂದ್ರ 

    ಆದೇಶ ಪ್ರತಿಗಳಲ್ಲಿ ಬರೇ ಸಹಿಯಷ್ಟೇ ಇಲ್ಲದೇ ಮುಖ್ಯಮಂತ್ರಿಗಳ ಮೊಹರನ್ನು ಸಹ ಬಳಸಲಾಗುತ್ತಿದೆ. ಈ ಮೂಲಕ ಸಹಿಯೊಂದಿಗೆ ಸೀಲ್ ಅನ್ನು ಆದೇಶ ಪ್ರತಿಗಳಲ್ಲಿ ಸಿಎಂ ಬಳಕೆಗೆ ತಂದಿದ್ದಾರೆ. ಮಹತ್ವದ ಆದೇಶ ಕಾಪಿಗಳಿಗೆ ತಮ್ಮ ಸೀಲ್ ಅನ್ನು ಸಿಎಂ ಕಡ್ಡಾಯ ಮಾಡಿದ್ದಾರೆ. ಯಾವುದೇ ಲೋಪ, ದುರ್ಬಳಕೆ, ಅಜಾರೂಕತೆ ಆಗದಂತೆ ಸಿಎಂ ನಿಗಾವಹಿಸಿದ್ದು, ಏನೇ ನಿರ್ಧಾರ ಇದ್ದರೂ ಖುದ್ದು ತಾವೇ ಗಮನಿಸಿ, ಪರಿಶೀಲಿಸಿ ಅನುಮತಿ ನೀಡುತ್ತಿದ್ದಾರೆ. ಇದನ್ನೂ ಓದಿ : ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

    ಆಡಳಿತದಲ್ಲಿ ಹೊಸ ಸುಧಾರಣೆ ಜಾರಿಗೆ ಮುಂದಾಗಿದ್ದಕ್ಕೆ ಬಿಜೆಪಿ ಹೈಕಮಾಂಡ್ ಮಟ್ಟದಲ್ಲೂ ಸಿಎಂ ಬೊಮ್ಮಾಯಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

  • ಸರ್ವೇ ವೇಳೆ ಆಶಾ ಕಾರ್ಯಕರ್ತೆಯರ ದಾಖಲೆ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿ

    ಸರ್ವೇ ವೇಳೆ ಆಶಾ ಕಾರ್ಯಕರ್ತೆಯರ ದಾಖಲೆ ಕಸಿದುಕೊಂಡು ಕರ್ತವ್ಯಕ್ಕೆ ಅಡ್ಡಿ

    ಹುಬ್ಬಳ್ಳಿ: ಕೊರೊನಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಸರ್ವೇ ಕಾರ್ಯ ಮಾಡುತ್ತಿದ್ದ ಆಶಾ ಕಾರ್ಯಕರ್ತೆಯರ ಕೈಯಲ್ಲಿದ್ದ ಕಡತಗಳನ್ನು ಕಸಿದುಕೊಂಡು ದುಷ್ಕರ್ಮಿಗಳು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಹುಬ್ಬಳ್ಳಿಯ ಗೌಳಿ ಗಲ್ಲಿಯಲ್ಲಿ ನಡೆದಿದೆ.

    ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಜಿಲ್ಲಾಡಳಿತದ ಆದೇಶದ ಮೇರೆಗೆ ಹಾಗೂ ಆರೋಗ್ಯ ಇಲಾಖೆಯ ನಿರ್ದೇಶನದ ಮೇರೆಗೆ ಸರ್ವೇ ಮಾಡಲು ಆಗಮಿಸಿದ ಆಶಾ ಕಾರ್ಯಕರ್ತೆಯರಿಗೆ ದುಷ್ಕರ್ಮಿಗಳು ಕೆಲಸ ಮಾಡಲು ಅಡ್ಡಿಪಡೆಸಿದ್ದಾರೆ. ಗೌಳಿ ಗಲ್ಲಿಯ ಕೆಲವು ಪುಡಾರಿಗಳು ಆಶಾ ಕಾರ್ಯಕರ್ತೆಯರ ಬಳಿಯಿದ್ದ ದಾಖಲೆಗಳನ್ನು ಕಸಿದುಕೊಂಡು ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರಾದ ನಾಗವೇಣಿ ಪಾನಗಲ್, ಲತಾ ಶ್ರೀರಾಮ ಮೇಲೆ ದೌರ್ಜನ್ಯ ನಡೆಸಲಾಗಿದೆ.

    ಸರ್ವೇ ಮಾಡುತ್ತಿದ್ದ ವೇಳೆ ಕಡತಗಳನ್ನು ಕಸಿದುಕೊಂಡು ನಮ್ಮ ಜಮಾತ್‍ನಲ್ಲಿ ಯಾವುದೇ ಮಾಹಿತಿಯಿಲ್ಲ ಎಂದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಸ್ಥಳಕ್ಕೆ ಶಹರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಆಗಮಿಸಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

  • ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ

    ಪ್ಲೀಸ್ ನನ್ನ ಹತ್ರ ಬರ್ಬೇಡಿ ಫೈಲ್ ನೋಡಲ್ಲ, ನೀವು ಅವರ ಹತ್ರನೇ ಹೋಗಿ ಪ್ಲೀಸ್- ಜಿ.ಟಿ ದೇವೇಗೌಡ

    ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು ಇದೀಗ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತನ್ನ ಬಳಿ ಬರಬೇಡಿ ಅಂತ ವಾಪಸ್ ಕಳುಹಿಸಿದ ಪ್ರಸಂಗವೊಂದು ನಡೆದಿದೆ.

    ಪ್ಲೀಸ್ ನನ್ನ ಹತ್ರ ಬರಬೇಡಿ, ನಾನು ಫೈಲ್ ನೋಡಲ್ಲ. ನೀವು ಅವರ ಹತ್ರನೇ ಹೋಗಿ ಪ್ಲೀಸ್, ಅವರಿಗೆ ಹೇಳಿ. ಹೀಗೆ ಐಎಎಸ್ ಅಧಿಕಾರಿಗಳಿಗೆ ಪ್ಲೀಸ್ ಎಂದು ಹೇಳಿ ಇಲಾಖೆಯ ಫೈಲ್‍ಗಳನ್ನು ಸಚಿವ ಜಿ.ಟಿ ದೇವೇಗೌಡ ವಾಪಸ್ ಕಳುಹಿಸುತ್ತಿದ್ದಾರೆ.

    ಐಎಎಸ್ ಅಧಿಕಾರಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಜಿಟಿ ದೇವೇಗೌಡ ಅವರ ಬಳಿ ಹೋದ್ರೆ `ಅಯ್ಯೋ ನನ್ನ ಹತ್ರ ಏಕೆ ಬರ್ತಿರಾ? ಬರಬೇಡ್ರಾಪ್ಪ ನೀವು! ಎಂದು ಹೇಳಿ ಉನ್ನತ ಶಿಕ್ಷಣ ಇಲಾಖೆಯ ಕಡತಗಳನ್ನ ವಾಪಸ್ ಕಳಿಸುತ್ತಿದ್ದಾರೆ.

    ನನಗೂ, ಈ ಖಾತೆಗೂ ಯಾವುದೇ ಸಂಬಂಧವೇ ಇಲ್ಲ, ನನಗೆ ಗೊತ್ತಿಲ್ಲ. ನೀವು ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರ ಹತ್ರನೇ ಹೋಗಿ, ಅವರಿಗೆ ಫೈಲ್ ತೋರಿಸಿ. ಸಿಎಂ ಕುಮಾರಣ್ಣ ಅವರೇ ಫೈಲ್‍ಗಳನ್ನ ಕ್ಲೀಯರ್ ಮಾಡ್ತಾರೆ, ನಾನು ಮಾಡಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಜಿಟಿಡಿ ತಿಳಿಸಿದ್ದಾರೆ.

    ಸಚಿವ ಜಿಟಿಡಿ ಹೇಳಿಕೆಯಿಂದ ಇಲಾಖೆ ಅಧಿಕಾರಿಗಳು ಕಂಗಾಲಾಗಿದ್ದಾರೆ. ಅಧಿಕೃತವಾಗಿ ಇಲಾಖೆ ಸಚಿವ ಜಿ.ಟಿ.ದೇವೇಗೌಡರ ಬಳಿಯೇ ಇದೆ. ಶೈಕ್ಷಣಿಕ ವರ್ಷ ಆರಂಭವಾಗಿರೋದ್ರಿಂದ ಹಲವು ಕಡತಗಳು ಬಾಕಿ ಇವೆ. ಹಾಗಾದ್ರೆ ಆ ಫೈಲ್‍ಗಳನ್ನ ಕ್ಲೀಯರ್ ಮಾಡೋರು ಯಾರು? ಹೇಗೆ?. ಇವತ್ತಾದ್ರೂ ಜಿಟಿಡಿ ಅವರಿಗೆ ಹೊಸ ಖಾತೆ ಸಿಗುತ್ತಾ? ಉನ್ನತ ಶಿಕ್ಷಣ ಸಿಎಂಗೆ ಬರುತ್ತಾ? ಎಂಬುದು ಕಾದು ನೋಡಬೇಕಿದೆ.