Tag: Fielding

  • ಆರ್‌ಸಿಬಿ ಫೀಲ್ಡಿಂಗ್‍ನಲ್ಲಿ ತಪ್ಪು ಮಾಡೋದನ್ನು ಬಿಡಬೇಕು: ಎಬಿಡಿ

    ಆರ್‌ಸಿಬಿ ಫೀಲ್ಡಿಂಗ್‍ನಲ್ಲಿ ತಪ್ಪು ಮಾಡೋದನ್ನು ಬಿಡಬೇಕು: ಎಬಿಡಿ

    – ಬೆಂಗಳೂರಿನ ಆಟಗಾರರ ಬಗ್ಗೆ ನನಗೆ ಹೆಮ್ಮೆ ಇದೆ

    ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ಷೇತ್ರರಕ್ಷಣೆಯಲ್ಲಿ ತಪ್ಪು ಮಾಡುವುದನ್ನು ಬಿಡಬೇಕು ಎಂದು ತಂಡದ ಅನುಭವಿ ಆಟಗಾರ ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

    ಸೋಮವಾರ ಐಪಿಎಲ್ ಅಭಿಮಾನಿಗಳಿಗೆ ಹಬ್ಬದ ವಾತವಾರಣ ಸೃಷ್ಟಿಯಾಗಿತ್ತು. ಟೂರ್ನಿಯ ಎರಡು ಬಲಿಷ್ಠ ತಂಡಗಳಾದ  ಆರ್‌ಸಿಬಿ  ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದು, ರನ್ ಹೊಳೆಯನ್ನೇ ಹರಿಸಿದ್ದವು. ಈ ರೋಚಕ ಪಂದ್ಯ ಕೊನೆಯಲ್ಲಿ ಸೂಪರ್ ಓವರ್ ತಲುಪಿದ್ದು, ಈ ಸೂಪರ್ ಓವರಿನಲ್ಲಿ ಆರ್‌ಸಿಬಿ ತಂಡ ಗೆದ್ದು ಅಭಿಮಾನಿಗಳನ್ನು ರಂಜಿಸಿತ್ತು.

    ಈ ಪಂದ್ಯದ ನಂತರ ಮಾತನಾಡಿದ ಆರ್‌ಸಿಬಿ ಸ್ಫೋಟಕ ಆಟಗಾರ ಎಬಿಡಿ ವಿಲಿಯರ್ಸ್, ಇದು ಒಂದು ಅದ್ಭುತ ಪಂದ್ಯ. ನಾವು ಕೂಡ ಮುಂಬೈ ವಿರುದ್ಧ ಪ್ರಬಲವಾಗಿ ಆಡಿದ್ದೇವೆ. ಎರಡನೇ ಇನ್ನಿಂಗ್ಸ್‍ನಲ್ಲಿ ನಾವು ಮುಂಬೈಗೆ ಸ್ವಲ್ಪ ಸುಲಭ ಮಾಡಿಕೊಟ್ಟೆವು. ಫೀಲ್ಡಿಂಗ್‍ನಲ್ಲಿ ಬಹಳ ತಪ್ಪುಗಳನ್ನು ಮಾಡಿದ್ದೇವೆ. ಇದನ್ನು ನಾವು ಇನ್ನು ಮುಂದಿನ ಪಂದ್ಯಗಳಲ್ಲಿ ನಿಲ್ಲಿಸಬೇಕು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

    ನಮ್ಮ ತಂಡಕ್ಕೆ ಇದು ಟೂರ್ನಿಯ ಮೂರನೇ ಪಂದ್ಯ. ನಮಗೆ ಇನ್ನೂ ಸಮಯವಿದೆ. ನಾವು ನಮ್ಮ ಸ್ಕಿಲ್ ಮತ್ತು ಫೀಲ್ಡಿಂಗ್ ಮೇಲೆ ಗಮನಹರಿಸುತ್ತೇವೆ. ಕಳೆದ ಪಂದ್ಯದಲ್ಲಿ ನಮ್ಮ ತಂಡದ ಆಟಗಾರರು ಅದ್ಭುತವಾಗಿ ಆಡಿದ್ದಾರೆ. ಅವರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಎಬಿಡಿ ಮಾತನಾಡಿರುವ ಈ ವಿಡಿಯೋವನ್ನು ಆರ್‌ಸಿಬಿ ತಂಡ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

    ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಎಬಿಡಿ ಬ್ಯಾಟಿಂಗ್ ಜೊತೆ ಕೀಪಿಂಗ್ ಜವಬ್ದಾರಿಯನ್ನು ಹೊತ್ತುಕೊಂಡಿದ್ದರು. ಕಳೆದ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಎಬಿಡಿ ಕೇವಲ 24 ಎಸೆತದಲ್ಲಿ 55 ರನ್ ಸಿಡಿಸಿ ಮಿಂಚಿದ್ದರು. ಈ ಇನ್ನಿಂಗ್ಸ್‍ನಲ್ಲಿ ಎಬಿಡಿ 4 ಫೋರ್ ಮತ್ತು 4 ಸಿಕ್ಸರ್ ಭಾರಿಸಿದ್ದರು. ಜೊತೆಗೆ ಆರ್‌ಸಿಬಿ ಪರ ಸೂಪರ್ ಓವರಿನಲ್ಲಿ ಬ್ಯಾಟಿಂಗ್ ಮಾಡಿದ ಎಬಿಡಿ ಒಂದು ಬೌಂಡರಿ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

  • ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ – ಮೆಚ್ಚುಗೆಗೆ ಪಾತ್ರವಾದ ಸ್ಟಾರ್‌ ಸ್ಫೋರ್ಟ್ಸ್‌

    ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ – ಮೆಚ್ಚುಗೆಗೆ ಪಾತ್ರವಾದ ಸ್ಟಾರ್‌ ಸ್ಫೋರ್ಟ್ಸ್‌

    ಶಾರ್ಜಾ: ಭಾನುವಾರ ಪಂಜಾಬ್‌ ಆಟಗಾರ ನಿಕೋಲಸ್‌ ಪೂರನ್‌ ಅವರು ಬೌಂಡರಿ ಗೆರೆ ಬಳಿ ಹಾರಿ ಫೀಲ್ಡಿಂಗ್‌ ಮಾಡಿದ್ದು ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ರೀತಿ ಸ್ಟಾರ್‌ ಸ್ಫೋರ್ಟ್ಸ್‌ ಕನ್ನಡ ವಾಹಿನಿ ಮಾಡಿದ ಟ್ವೀಟ್‌ ಕರ್ನಾಟಕದ ಜನತೆಗೆ ಭಾರೀ ಇಷ್ಟವಾಗಿದೆ.

    ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪೂರನ್‌ ಅವರ ಫೀಲ್ಡಿಂಗ್‌ ಮಾಡುತ್ತಿರುವ ಫೋಟೋವನ್ನು ಹಾಕಿ ನನ್ನ ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಸೇವ್‌ ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಅನ್ನು ರೀ ಟ್ವೀಟ್‌ ಮಾಡಿದ ಸ್ಟಾರ್‌ ವಾಹಿನಿ , ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ (ಶೇ ಎಂಥ ಫೀಲ್ಡಿಂಗ್‌ ಮಾರಾಯರೇ) ಎಂದು ಬರೆದು ಟ್ವೀಟ್‌ ಮಾಡಿತ್ತು.

    ಈ ಟ್ವೀಟ್‌ ಅನ್ನು 3 ಸಾವಿರಕ್ಕೂ ಹೆಚ್ಚು ಜನ ಲೈಕ್‌ ಮಾಡಿ, 300ಕ್ಕೂ ಹೆಚ್ಚು ಜನ ರೀ ಟ್ವೀಟ್‌ ಮಾಡಿದ್ದಾರೆ. ಹರೀಶ್‌ ಗೌಡ ಎಂಬವರು ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ, ಶೇ.. ಎಂಚಿನ ಮ್ಯಾಚ್ ಮಾರ್ರೆ, ಶೇ.. ಎಂಚಿನ ಬ್ಯಾಟಿಂಗ್ ಮಾರ್ರೆ, ಶೇ.. ಎಂಚಿನ ಟ್ರಾನ್ಸಲೇಷನ್ ಮಾರ್ರೆ ಎಂದು ಕಮೆಂಟ್‌ ಮಾಡಿದ್ದಾರೆ.

    ಅನಿಲ್‌ ಕುಮಾರ್‌ ಎಂಬವರು ಹೀಗೆಯೇ ಕನ್ನಡ, ತುಳು, ಕೊಡವ ಹಾಗೂ ನಾಡಿನ ಎಲ್ಲ ನುಡಿ ಬಳಸಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಸತ್ಯ ಎಂಪಿ ಎಂಬವರು ಬಾರಿ ಪೊರ್ಲುದ ಗೊಬ್ಬು ಎಂದು ಕಮೆಂಟ್‌ ಮಾಡಿದ್ದಾರೆ.

    ಎಂ ಅಶ್ವಿನ್‌ ಎಸೆದ 8ನೇ ಓವರಿನ 4ನೇ ಎಸೆತವನ್ನು ಸಂಜು ಸ್ಯಾಮ್ಸನ್‌ ಸಿಕ್ಸರ್‌ಗೆ ಅಟ್ಟಲು ಬಲವಾಗಿ ಎಡಗಡೆಗೆ ಬೀಸಿದ್ದರು. ಈ ವೇಳೆ ಬೌಂಡರಿ ಲೈನ್‌ ಬಳಿ ಇದ್ದ ವಿಂಡೀಸ್‌ ಆಟಗಾರ ಪೂರನ್‌ ಗಾಳಿಯಲ್ಲಿ ಹಾರಿ ಬಾಲನ್ನು ತಡೆದು ಕ್ಷಣ ಮಾತ್ರದಲ್ಲಿ ಹಿಂದಕ್ಕೆ ಎಸೆದಿದ್ದರು.

    https://twitter.com/hareeshaputtur/status/1310275441098280960

    ಈ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಟಿವಿ ರಿಪ್ಲೇಯಲ್ಲಿ ನೋಡಿದಾಗ ಪೂರನ್‌ ಫೀಲ್ಡಿಂಗ್‌ ಯಶಸ್ವಿಯಾಗಿರುವುದು ಸೆರೆಯಾಗಿತ್ತು. ಬಾಲ್‌ ಕೈಗೆ ಸಿಕ್ಕಿದ ಕೂಡಲೇ ಅದನ್ನು ಹಿಂದಕ್ಕೆ ಹಾಕಿದ ಪ್ರಯತ್ನ ಕಂಡು ಪೂರನ್‌ ಅವರನ್ನು ಅಭಿಮಾನಿಗಳು ಸೂಪರ್‌ ಮ್ಯಾನ್‌ಗೆ ಹೋಲಿಸಿ ಅಭಿನಂದಿಸಿದ್ದಾರೆ. ಇದನ್ನೂ ಓದಿ: ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

    ಒಂದು ವೇಳೆ ಈ ಪ್ರಯತ್ನ ನಡೆಯದಿದ್ದರೆ ಬಾಲ್‌ ಬೌಂಡರಿ ಗೆರೆ ದಾಟುತ್ತಿತ್ತು. ಈ ಪ್ರಯತ್ನದಿಂದ ಪೂರನ್‌ 4 ರನ್‌ ಸೇವ್‌ ಮಾಡಿ 2 ರನ್‌ ಮಾತ್ರ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಪೂರನ್‌ 8 ಎಸೆತದಲ್ಲಿ 3 ಸಿಕ್ಸರ್‌ ಚಚ್ಚಿ ಔಟಾಗದೇ 25 ರನ್‌ ಹೊಡೆದಿದ್ದರು.

  • ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

    ಅಂದು ಅಪಘಾತದಿಂದ ಕಾಲಿಗೆ ಪೆಟ್ಟು, ಇಂದು ಬೆಂಕಿ ಫೀಲ್ಡಿಂಗ್‌ – ಇದು ಪೂರನ್‌ ಸಾಧನೆಯ ಕಥೆ

    ಶಾರ್ಜಾ: ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡದ ಆಟಗಾರ ನಿಕೋಲಸ್‌ ಪೂರನ್‌ ಅದ್ಭುತ ಫೀಲ್ಡಿಂಗ್‌ ಮಾಡಿ ಕ್ರಿಕೆಟಿಗರ ಮನ ಗೆದ್ದಿದ್ದಾರೆ.

    ‌ಸ್ಪಿನ್ನರ್ ಮುರುಗನ್ ಅಶ್ವಿನ್‌ ಎಸೆದ 8ನೇ ಓವರಿನ 4ನೇ ಎಸೆತವನ್ನು ಸಂಜು ಸ್ಯಾಮ್ಸನ್‌ ಸಿಕ್ಸರ್‌ಗೆ ಅಟ್ಟಲು ಬಲವಾಗಿ ಎಡಗಡೆಗೆ ಬೀಸಿದ್ದರು. ಈ ವೇಳೆ ಬೌಂಡರಿ ಲೈನ್‌ ಬಳಿ ಇದ್ದ ವಿಂಡೀಸ್‌ ಆಟಗಾರ ಪೂರನ್‌ ಗಾಳಿಯಲ್ಲಿ ಹಾರಿ ಬಾಲನ್ನು ತಡೆದು ಕ್ಷಣ ಮಾತ್ರದಲ್ಲಿ ಹಿಂದಕ್ಕೆ ಎಸೆದಿದ್ದರು.

    ಈ ಪ್ರಯತ್ನ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಟಿವಿ ರಿಪ್ಲೇಯಲ್ಲಿ ನೋಡಿದಾಗ ಪೂರನ್‌ ಫೀಲ್ಡಿಂಗ್‌ ಯಶಸ್ವಿಯಾಗಿರುವುದು ಸೆರೆಯಾಗಿತ್ತು. ಬಾಲ್‌ ಕೈಗೆ ಸಿಕ್ಕಿದ ಕೂಡಲೇ ಅದನ್ನು ಹಿಂದಕ್ಕೆ ಹಾಕಿದ ಪ್ರಯತ್ನ ಕಂಡು ಪೂರನ್‌ ಅವರನ್ನು ಅಭಿಮಾನಿಗಳು ಸೂಪರ್‌ ಮ್ಯಾನ್‌ಗೆ ಹೋಲಿಸಿ ಅಭಿನಂದಿಸಿದ್ದಾರೆ.

    ಒಂದು ವೇಳೆ ಈ ಪ್ರಯತ್ನ ನಡೆಯದಿದ್ದರೆ ಬಾಲ್‌ ಬೌಂಡರಿ ಗೆರೆ ದಾಟುತ್ತಿತ್ತು. ಈ ಪ್ರಯತ್ನದಿಂದ ಪೂರನ್‌ 4 ರನ್‌ ಸೇವ್‌ ಮಾಡಿ 2 ರನ್‌ ಮಾತ್ರ ಬಿಟ್ಟುಕೊಟ್ಟಿದ್ದರು.

    ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರು ನನ್ನ ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಸೇವ್ ಎಂದು ಟ್ವೀಟ್‌ ಮಾಡಿದ್ದಾರೆ. ನೆಟ್ಟಿಗರು ಈ ರೀತಿ ರನ್‌ ಸೇವ್‌ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿ ಮೆಚ್ಚುಗೆ ಸೂಚಿಸಿದ್ದಾರೆ.

    https://twitter.com/Bunny_I_/status/1310265554066747392

    2015ರಲ್ಲಿ ಪೂರನ್‌ ಅವರಿಗೆ ಅಪಘಾತವಾಗಿತ್ತು. ಈ ವೇಳೆ ಕಾಲಿಗೆ ಬಲವಾದ ಏಟು ಬಿದ್ದಿತ್ತು. ಹಲವು ಮಂದಿ ಮುಂದೆ ಪೂರನ್‌ ಕ್ರಿಕೆಟ್‌ ಆಡುವುದು ಅನುಮಾನ ಕಷ್ಟವಾಗಬಹುದು ಎಂದು ಎಂದು ಹೇಳಿದ್ದರು. ಆದರೆ ಪೂರನ್‌ ಎಲ್ಲ ಲೆಕ್ಕಚಾರವನ್ನು ಉಲ್ಟಾ ಮಾಡಿ ನಾನೊಬ್ಬ ಉತ್ತಮ ಆಟಗಾರ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

    ಈ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದ ಪೂರನ್‌ 8 ಎಸೆತದಲ್ಲಿ 3 ಸಿಕ್ಸರ್‌ ಚಚ್ಚಿ ಔಟಾಗದೇ 25 ರನ್‌ ಹೊಡೆದಿದ್ದರು.