Tag: Fertilizer Shortage

  • ಸುಧಾಕರ್‌ಗೆ ಇಂಜೆಕ್ಷನ್ ಕೊಡೋದು ಗೊತ್ತು, ದುಡ್ಡು ಹೊಡೆಯೋದು‌ ಗೊತ್ತು: ಚಲುವರಾಯಸ್ವಾಮಿ ವ್ಯಂಗ್ಯ

    ಸುಧಾಕರ್‌ಗೆ ಇಂಜೆಕ್ಷನ್ ಕೊಡೋದು ಗೊತ್ತು, ದುಡ್ಡು ಹೊಡೆಯೋದು‌ ಗೊತ್ತು: ಚಲುವರಾಯಸ್ವಾಮಿ ವ್ಯಂಗ್ಯ

    – ಅಶೋಕ್‌ಗೆ ಹಿಂದಿಲ್ಲ, ಮುಂದಿಲ್ಲ

    ಬೆಂಗಳೂರು: ಸಂಸದ ಡಾ.ಕೆ ಸುಧಾಕರ್‌ಗೆ (Dr. K.Sudhakar) ಇಂಜೆಕ್ಷನ್ ಕೊಡೋದು ಗೊತ್ತು, ದುಡ್ಡು ಹೊಡೆಯೋದು‌ ಗೊತ್ತು. ಕೋವಿಡ್ ವೇಳೆ ಎಷ್ಟು ನಿಭಾಯಿಸಿದ್ದರು ಅಂತ ಗೊತ್ತಲ್ವಾ? ಎಂದು ಕೃಷಿ ಸಚಿವ ಚಲುವರಾಯಸ್ವಾಮಿ (N.Chaluvaraya Swamy) ವ್ಯಂಗ್ಯವಾಡಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಕಾಳಸಂತೆಯಲ್ಲಿ ಗೊಬ್ಬರ (Fertilizer Shortage) ಮಾರಾಟ ಮಾಡಲಾಗುತ್ತಿದೆ ಎಂಬ ಸುಧಾಕರ್‌ ಅವರ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಅವರು ಡಾಕ್ಟರ್ ಓದಿದ್ದಾರೋ ಇಲ್ವೋ ಗೊತ್ತಿಲ್ಲ, ಕೇಂದ್ರದಲ್ಲಿ ಸಂಸದರಾಗಿದ್ದಾರೆ. ರಸಗೊಬ್ಬರದ ವಿಚಾರವಾಗಿ ಬುಧವಾರ ಎಲ್ಲಾ ಡಿಟೇಲ್ಸ್ ಕೊಟ್ಟಿದ್ದೇನೆ. ಸಣ್ಣ ಹಿಡುವಳಿದಾರರು ಇರ್ತಾರೆ, ದೊಡ್ಡ ಹಿಡುವಳಿದಾರರು ಇರ್ತಾರೆ. ನಮಗೆ ಕೇಂದ್ರ ಸರ್ಕಾರ 1.36 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಕೊಟ್ಟಿಲ್ಲ, 2.28 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಬರಬೇಕಿತ್ತು. ಇದಕ್ಕಾಗಿ ಕೃಷಿ ಸಚಿವರಿಗೆ ಮನವಿ‌ ಮಾಡಿದ್ದೇವೆ. ನಡ್ಡಾ ಅವರ ಭೇಟಿಗೂ ಅವಕಾಶ ಕೇಳಿದ್ದೇವೆ. ಇನ್ನೂ ಶ್ರೀಲಂಕಾವನ್ನು ಕಂಟ್ರೋಲ್ ಮಾಡೋರು ಯಾರು? ಎಲ್ಲವೂ ಕೇಂದ್ರ ಸರ್ಕಾರವೇ ತಾನೇ? ರಾಜಕೀಯವಾಗಿ ತೀಟೆ ಮಾಡೋರನ್ನ ಹೇಗೆ ಏನಂತ ಹೇಳೋದು? ಎಂದ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟ ವ್ಯವಸ್ಥೆ ಸರಿಪಡಿಸಲು ಕರ್ನಾಟಕ ಸಿಎಸ್‌ಗೆ ಸೂಚಿಸಿ – ಕೇಂದ್ರಕ್ಕೆ ಡಾ.ಕೆ.ಸುಧಾಕರ್ ಆಗ್ರಹ

    ಅಶೋಕ್ (R.Ashok) ಸುಮ್ಮನೆ ಮಾತನಾಡ್ತಾರೆ, ಅವರಿಗೆ ಹಿಂದಿಲ್ಲ ಮುಂದಿಲ್ಲ. ರೈತರ ಬಗ್ಗೆ ಅವರಿಗೆ ಗೊತ್ತೇ ಇಲ್ಲ. ರೇಟ್ ಫಿಕ್ಸ್ ಮಾಡೋರು ಕೇಂದ್ರದವರು, ಪೂರೈಕೆ ಮಾಡುವವರು ಅವರು. ನಮ್ಮದು ಬರಿ ಹಂಚಿಕೆ ಮಾತ್ರ ಎಂದಿದ್ದಾರೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿರೋ ರಾಜ್ಯಗಳಲ್ಲೂ ರಸಗೊಬ್ಬರ ಕೊರತೆ – ಕೇಂದ್ರದ ವಿರುದ್ಧ ಸಿಎಂ ಕಿಡಿ

  • ಬಿಜೆಪಿ ಆಡಳಿತದಲ್ಲಿರೋ ರಾಜ್ಯಗಳಲ್ಲೂ ರಸಗೊಬ್ಬರ ಕೊರತೆ – ಕೇಂದ್ರದ ವಿರುದ್ಧ ಸಿಎಂ ಕಿಡಿ

    ಬಿಜೆಪಿ ಆಡಳಿತದಲ್ಲಿರೋ ರಾಜ್ಯಗಳಲ್ಲೂ ರಸಗೊಬ್ಬರ ಕೊರತೆ – ಕೇಂದ್ರದ ವಿರುದ್ಧ ಸಿಎಂ ಕಿಡಿ

    – ಬಿಜೆಪಿ ನಾಯಕರು ರಸಗೊಬ್ಬರಕ್ಕಾಗಿ ಕೇಂದ್ರಕ್ಕೆ ಒತ್ತಾಯಿಸಲಿ

    ಬೆಂಗಳೂರು: ಕರ್ನಾಟಕದಲ್ಲಿ ಮಾತ್ರ ಅಲ್ಲ ಬಿಜೆಪಿ (BJP) ಆಡಳಿತದಲ್ಲಿರುವ ಹರಿಯಾಣ ಹಾಗೂ ಮಧ್ಯ ಪ್ರದೇಶದಲ್ಲೂ ರಸಗೊಬ್ಬರ ಕೊರತೆ (Fertilizer Shortage) ಉಂಟಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ.

    ರಾಜ್ಯದಲ್ಲಿ ರಸಗೊಬ್ಬರ ಕೊರತೆ ವಿಚಾರವಾಗಿ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ, ರಾಜ್ಯದ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಪೂರೈಕೆ ಮಾಡಿಲ್ಲ. ಈ ಬಗ್ಗೆ ಪತ್ರ ಬರೆದು ಮನವಿಯನ್ನು ಸಹ ಮಾಡಲಾಗಿದೆ. ಕೇಂದ್ರದಿಂದ 6.82 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಬರಬೇಕಿತ್ತು, ಆದರೆ ನಮಗೆ ಪೂರೈಕೆಯಾಗಿರುವುದು 5.27 ಲಕ್ಷ ಮೆಟ್ರಿಕ್ ಟನ್. ರಸಗೊಬ್ಬರ ಉತ್ಪಾದನೆ, ಸರಬರಾಜು ಮಾಡುವವರು ನಾವಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ರಸಗೊಬ್ಬರ ಪೂರೈಕೆಗೆ ರಾಜ್ಯದಿಂದ 6 ಬಾರಿ ಮನವಿ – ದಿಢೀರ್ ಕೊರತೆಗೆ ಕಾರಣವೇನು?

    ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ರಸಗೊಬ್ಬರ ಕೇಳಿದ ರೈತರನ್ನು ಗುಂಡಿಕ್ಕಿ ಕೊಂದಿದ್ದರು. ನಾವು ಅವರಂತಲ್ಲ, ಬಿಜೆಪಿ ನಾಯಕರು ರಾಜಕೀಯ ಟೀಕೆ ಮಾಡಿ ಕಾಲಹರಣ ಮಾಡುವ ಬದಲು ಕೇಂದ್ರ ಸರ್ಕಾರದ ಬಳಿ ಮಾತನಾಡಿ ತಕ್ಷಣ ರಸಗೊಬ್ಬರ ಪೂರೈಕೆ ಮಾಡಿಸಲಿ ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ರಸಗೊಬ್ಬರದ ಅಭಾವವಿಲ್ಲ: ಪ್ರಹ್ಲಾದ್‌ ಜೋಶಿ