ಚಿತ್ರದುರ್ಗ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದ ಪರಿಣಾಮ ಚಳ್ಳಕೆರೆ (Challakere) ತಾಲೂಕಿನ ವಿವಿಧೆಡೆ ಜಮೀನುಗಳು (Farms) ಜಲಾವೃತಗೊಂಡಿವೆ.
ಭಾರೀ ಮಳೆಗೆ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯ ರೈತ ಮಧು ಎಂಬವರ ಜಮೀನು ಜಲಾವೃತಗೊಂಡಿದೆ. ಅಡಿಕೆ, ತೆಂಗು, ಮೆಕ್ಕೆಜೋಳ, ತರಕಾರಿ ಬೆಳೆಗಳು ಜಲಾವೃತಗೊಂಡಿದ್ದು, ನಾಲ್ಕು ಎಕರೆಗೂ ಹೆಚ್ಚು ಜಮೀನು ಜಲಮಯವಾಗಿದೆ. ಇದನ್ನೂ ಓದಿ: ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆದ್ದಿದ್ದು ಮತ ಖರೀದಿಯಿಂದ: ಸಿ.ಎಂ.ಇಬ್ರಾಹಿಂ ಆರೋಪ
ಇನ್ನು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರೈತ ದಯಾನಂದ ಎಂಬವರಿಗೆ ಸೇರಿದ ಐದು ಎಕರೆ ಮೆಕ್ಕೆಜೋಳ ಜಮೀನು ಕೂಡ ಜಲಾವೃತವಾಗಿದೆ. ಕೈಗೆ ಬಂದಿದ್ದ ಬೆಳೆ ಮಳೆರಾಯನ ಅವಕೃಪೆಯಿಂದ ಹಾನಿಯಾಗಿದೆ. ಅತಿವೃಷ್ಟಿಯಿಂದ ಚಳ್ಳಕೆರೆ ಭಾಗದ ರೈತರಿಗೆ ಸಂಕಷ್ಟ ಎದುರಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ರಣ ಮಳೆಗೆ ಕುಸಿದ ಗೋಡೆ – ಇಬ್ಬರು ಮಕ್ಕಳು ಸೇರಿ 7 ಮಂದಿ ದಾರುಣ ಸಾವು
ನವದೆಹಲಿ: ಕೊರೊನಾ ವೈರಸ್ನಿಂದಾಗಿ ಜಗತ್ತಿನಾದ್ಯಂತ ಒಲಿಂಪಿಕ್ಸ್, ಕ್ರಿಕೆಟ್ ಸೇರಿದಂತೆ ಅನೇಕ ಟೂರ್ನಿ ಹಾಗೂ ಕ್ರೀಡಾಕೂಡಗಳು ಮುಂದೂಡಲ್ಪಟ್ಟಿವೆ ಅಥವಾ ರದ್ದುಗೊಂಡಿವೆ. ಹೀಗಾಗಿ ಆಟಗಾರರು, ಕ್ರೀಡಾಪಟುಗಳು ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಆದರೆ ಕೆಲ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಗೋಧಿ ಕೊಯ್ಲು ಹಾಗೂ ರಾಶಿ ಮಾಡುವುದರಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಲಾಕ್ಡೌನ್ನಿಂದಾಗಿ ಕೃಷಿ ಕಾರ್ಮಿರ ಕೊರೊತೆ ಉಂಟಾಗಿ ರೈತರು ಹೆಚ್ಚಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ. ಬಾಕ್ಸರ್ ಅಮಿತ್ ಪಂಗಲ್, ಮನೋಜ್ ಕುಮಾರ್, ಮಹಿಳಾ ಹಾಕಿ ತಂಡದ ಆಟಗಾರ್ತಿ ಪೂನಂ ಮಲಿಕ್ ಅವರು ತಮ್ಮನ್ನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ರಿಯೊ ಪ್ಯಾರಾಲಿಂಪಿಕ್ ಕ್ರೀಡಾಕೂಟದ ಜಾವೆಲಿನ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ರಿಂಕು ಹುಡಾ, “9 ಎಕರೆ ಗೋಧಿಯನ್ನು ಯಂತ್ರದ ಸಹಾಯದಿಂದ ಕೊಯ್ಲು ಮಾಡಿದ್ದೇನೆ. ಇನ್ನೂ ಅರ್ಧ ಎಕರೆ ಉಳಿದಿದೆ. ಮಳೆಗೂ ಮುನ್ನವೇ ಗೋಧಿ ರಾಶಿ ಮಾಡಲಾಗುವುದು” ಎಂದು ಹೇಳಿದ್ದಾರೆ.
ಕಳೆದ ವರ್ಷ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟ ಮೊದಲ ಬಾಕ್ಸರ್ ಅಮಿತ್ ಪಂಗಲ್ ಅವರು ಸದ್ಯ ಹರ್ಯಾಣದ ರೋಹ್ಟಕ್ನ ತಮ್ಮ ಮಾನ್ಯ ಗ್ರಾಮದಲ್ಲಿದ್ದಾರೆ. ಅಲ್ಲಿ ಅವರು ಕುಟುಂಬಕ್ಕೆ ಕೃಷಿಯಲ್ಲಿ ಸಹಾಯ ಮಾಡುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಮಿತ್ ಪಂಗಲ್, “ಯಾವಾಗಲೂ ನನ್ನ ಕುಟುಂಬಕ್ಕೆ ಕೃಷಿಯಲ್ಲಿ ಸಹಾಯ ಮಾಡುತ್ತೇನೆ. ಆದರೆ ಬಾಕ್ಸಿಂಗ್ ಕಾರಣದಿಂದಾಗಿ ಗೋಧಿ ಕೊಯ್ಲು ಮಾಡುವ ಸಮಯದಲ್ಲಿ ಹಳ್ಳಿಯಿಂದ ಹೊರಗುಳಿದಿದ್ದೆ. ಲಾಕ್ಡೌನ್ನಿಂದಾಗಿ ನಾನು ನಮ್ಮೂರಲ್ಲಿದ್ದೇನೆ. ಈಗ ಕುಟುಂಬದೊಂದಿಗೆ ಗೋಧಿ ಕೊಯ್ಲು ಮತ್ತು ಪ್ಯಾಕ್ ಮಾಡಲು ನನಗೆ ಅವಕಾಶ ಸಿಕ್ಕಿದೆ. ರೈತ ಮಗನಾಗಿ ಈ ಕೆಲಸ ಮಾಡಲು ನನಗೆ ತೃಪ್ತಿ ಸಿಕ್ಕಿದೆ” ಎಂದು ಬರೆದುಕೊಂಡಿದ್ದಾರೆ.
200 ಅಂತಾರಾಷ್ಟ್ರೀಯ ಹಾಕಿ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿರುವ ಹಿಸಾರ್ ಹಾಕಿ ಆಟಗಾರ್ತಿ ಪೂನಂ ಮಲಿಕ್ ಅವರು ಕೂಡ ಲಾಕ್ಡೌನ್ನಿಂದಾಗಿ ಹರ್ಯಾಣದ ತಮ್ಮ ಗ್ರಾಮ ಉಮ್ರಾದಲ್ಲಿದ್ದಾರೆ. ಕೊರೊನಾ ಭೀತಿಯಿಂದಾಗಿ ಹಾಕಿ ತರಬೇತಿ ಶಿಬಿರಗಳನ್ನು ಸಹ ಮುಂದೂಡಲಾಗಿದೆ. ಲಾಕ್ಡೌನ್ನಿಂದಾಗಿ ಕಾರ್ಮಿಕರು ಗೋಧಿ ಕೊಯ್ಲು ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪೂನಂ ಕುಟುಂಬ ಸದಸ್ಯರೊಂದಿಗೆ ತಮ್ಮ ಜಮೀನಿಗೆ ಹೋಗಿ ಗೋಧಿಯನ್ನು ಕೊಯ್ಲು ಮಾಡಿದ್ದಾರೆ. ವಿಶೇಷವೆಂದರೆ ಅವರು ಮೊದಲ ಬಾರಿಗೆ ಗೋಧಿ ಕೊಯ್ಲು ಮಾಡಿದ್ದಾರೆ.
हम मेहनत का जगवालो से जब अपना हिसाब मांगेगे! एक खेत नहीं,एक बाग नहीं हम पूरी दुनिया मांगेगे! ये पर्वत पर्वत ही रहे, यहां सागर सागर मोती है! ये सारा माल हमारा है हम पूरा खजाना मांगेगे! किसान का हक छीनने का कोई काम न करे। जय जवान जय किसान@narendramodi@cmohry@DeependerSHoodapic.twitter.com/PNENycVxrg
ನಾಲ್ಕು ದಿನ ಗೋಧಿ ಕೊಯ್ಲು ಮಾಡಲು ತನ್ನ ಕುಟುಂಬ ಸದಸ್ಯರೊಂದಿಗೆ ಹೋಗಿದ್ದಾಗಿ ಪೂನಂ ಮಲಿಕ್ ಹೇಳಿದ್ದಾರೆ. ಅವರು ಮತ್ತು ಕುಟುಂಬದ ಇತರ ನಾಲ್ಕು ಸದಸ್ಯರೊಂದಿಗೆ ನಾಲ್ಕು ದಿನಗಳಲ್ಲಿ ಒಂದು ಎಕರೆ ಗೋಧಿ ಕೊಯ್ಲು ಮಾಡುವ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಅವರು ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಗೋಧಿ ಕೊಯ್ಲು ಮಾಡಲು ಹೊಲಕ್ಕೆ ಹೋಗುತ್ತಿದ್ದರು.
आप देश के अन्नदाता हो आपका स्वास्थ्य भी देश के लिए उतना ही जरूरी है जितना जवानों का, पुलिस का और डॉक्टर भाईयों का है। आप अनाज उपजाते हो तो पूरे देश का पेट भरता है। इसीलिए मेरे अन्नदाताओं से मेरी हाथ जोड़कर गुजारिश है कि अपना पूरा ध्यान रखना है कटाई के टाइम पै। जय हिंद ।@mlkhattarpic.twitter.com/WnBYWMrVB5
ಒಲಿಂಪಿಕ್ಸ್ನಲ್ಲಿ ಎರಡು ಬಾರಿ ಬಾಕ್ಸಿಂಗ್ ತಂಡವನ್ನು ಪ್ರತಿನಿಧಿಸಿರುವ ಮನೋಜ್ ಕುಮಾರ್ ಕೂಡ ಗೋಧಿ ಕೊಯ್ಲು ಮಾಡಿದ್ದಾರೆ. ಅವರು ಬಾಲ್ಯದಲ್ಲಿ ಹಿರಿಯರು ಗೋಧಿ ಕೊಯ್ಲು ಮಾಡುವುದನ್ನು ನೋಡಿದ್ದರು. ಅನೇಕ ಬಾರಿ ಸುಮ್ಮನೆ ಗೋಧಿ ಕೊಯ್ಲು ಮಾಡಲು ಅವರೊಂದಿಗೆ ಹೋಗುತ್ತಿದ್ದರು. ಆದರೆ ಲಾಕ್ಡೌನ್ನಿಂದಾಗಿ ಕಾರ್ಮಿಕರು ಸಿಗದೆ ಇರುವುದಿಂದ ಮನೋಜ್ ಕುಮಾರ್ ಜಮೀನಿಗೆ ಹೋಗಿ ಗೋಧಿ ಕೊಯ್ಲು ಮಾಡಿದ್ದಾರೆ.
ಬೆಂಗಳೂರು: ಅಕ್ರಮವಾಗಿ ಕ್ಯಾಟ್ ಫಿಶ್ ಸಾಕಣೆ ಮಾಡುತ್ತಿದ್ದ ರೌಡಿಗಳನ್ನು ತಪಾಸಣೆ ಮಾಡಲು ಹೋದ ಪೊಲೀಸರಿಗೆ ರೌಡಿಗಳು ಆವಾಜ್ ಹಾಕಿದ್ದರು. ಇದೀಗ ಆ ರೌಡಿಗಳಿಗೆ ಬೆಂಗಳೂರು ಗ್ರಾಮಾಂತರ ಎಸ್.ಪಿ ರವಿ.ಡಿ.ಚನ್ನಣ್ಣನವರ್ ಖಡಕ್ ವಾರ್ನಿಂಗ್ ನೀಡಿರುವ ಘಟನೆ ನಂದಗುಡಿಯಲ್ಲಿ ನಡೆದಿದೆ.
ನಂದಗುಡಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಜನಸಂಪರ್ಕ ಸಭೆ ನಡೆಸಿದ್ದು, ಈ ಸಭೆಯಲ್ಲಿ ಭಾಗವಹಿಸಿದ್ದ ಅಕ್ರಮ ಕ್ಯಾಟ್ ಫಿಶ್ ಸಾಕಣೆದಾರನಿಗೆ ರವಿ ಚನ್ನಣ್ಣನವರ್ ಕ್ಲಾಸ್ ತೆಗೆದುಕೊಂಡರು. ಇದೇ ವೇಳೆ ಕ್ಯಾಟ್ ಫಿಶ್ ಸಾಕಾಣೆದಾರ, ನಮಗೆ ಬೇರೆ ಬ್ಯುಸಿನೆಸ್ ಇಲ್ಲ. ಹೀಗಾಗಿ ಕ್ಯಾಟ್ ಫಿಶ್ ಸಾಕುತ್ತಿದ್ದೇವೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಕ್ಯಾಟ್ ಫಿಶ್ ಹೊಂಡಗಳ ಮೇಲೆ ಅಧಿಕಾರಿಗಳ ದಾಳಿ – ಈ ಮೀನುಗಳು ಅಪಾಯಕಾರಿ ಯಾಕೆ?
ತಕ್ಷಣ ಗರಂ ಆದ ಚನ್ನಣ್ಣನವರ್, ಬೇರೆ ಕೆಲಸ ಇಲ್ಲ ಎಂದು ದರೋಡೆ ಮಾಡೋಕಾಗುತ್ತಾ, ಕೆಲಸ ಇಲ್ಲ ಅಂತಾ ಗಾಂಜಾ ಬೆಳೆಯೋಕೆ ಆಗುತ್ತಾ, ಇಸ್ಪೀಟ್ ಆಡೋಕಾಗುತ್ತಾ. ನಿಮಗೆ ಒದೆ ಬಿದ್ದಿಲ್ಲ ಅನ್ಸುತ್ತೆ ಎಂದು ಕ್ಲಾಸ್ ತೆಗೆದುಕೊಂಡರು.
ನಾನು 10 ಗಂಟೆ ರಾತ್ರಿಯಲ್ಲಿ ಬಂದಿದ್ದೀನಿ. ಆದರೂ 18 ವರ್ಷದ ಹುಡುಗ ಡ್ಯಾಗರ್ ಹಿಡಿದುಕೊಂಡು ಓಡಾಡ್ತಾನೆ. ನಮ್ಮ ವ್ಯಾಪ್ತಿಯಲ್ಲಿ 1900 ಹಳ್ಳಿ ಇದೆ. ಆ ಊರಲ್ಲಿ ಮಾತ್ರ ಯಾಕೆ ಕ್ಯಾಟ್ ಫಿಶ್ ಸಾಕುತ್ತಾರೆ. ಯಾಕೆಂದರೆ ಅಲ್ಲಿ ಕೆಟ್ಟವರ ಸಂಖ್ಯೆ ಜಾಸ್ತಿ ಇದೆ. ಒಂದು ಕೆಲಸ ಮಾಡು ನಿನಗೆ ಫುಲ್ ಫ್ರೀಡಂ ಕೊಡುತ್ತೀನಿ ಅಲ್ಲಿ ಯಾರ್ಯಾರು ಕೆಟ್ಟ ಕೆಲಸ ಮಾಡುತ್ತಾರೆ ಅವರ ಲಿಸ್ಟ್ ಮಾಡು ಎಂದು ಕ್ಯಾಟ್ಫಿಶ್ ಮಾಲೀಕರಿಗೆ ವಾರ್ನಿಂಗ್ ನೀಡಿದರು.