Tag: Farmer Association

  • ಧಾರಾಕಾರ ಮಳೆಗೆ ಧರೆಗುರುಳಿತು ದ್ರಾಕ್ಷಿ ತೋಟ – ರೈತನ ಕಣ್ಣೀರು

    ಧಾರಾಕಾರ ಮಳೆಗೆ ಧರೆಗುರುಳಿತು ದ್ರಾಕ್ಷಿ ತೋಟ – ರೈತನ ಕಣ್ಣೀರು

    ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅಕಾಲಿಕ ಮಳೆಯ ಅಬ್ಬರ ಜೋರಾಗಿದ್ದು, ಚಿಕ್ಕಬಳ್ಳಾಪುರ ತಾಲೂಕು ಚಿಕ್ಕಕಾಡಿಗಾನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದ ಪರಿಣಾಮ ದ್ರಾಕ್ಷಿ ತೋಟವೊಂದು ಧರೆಗುರುಳಿದಿದೆ. ಇದರಿಂದ ದ್ರಾಕ್ಷಿ ಮಣ್ಣು ಪಾಲಾಗಿದ್ದು, ರೈತ ಕಣ್ಣೀರು ಸುರಿಸಿದ್ದಾರೆ.

    Grape Crop

    ರೈತ ವೆಂಕಟರೆಡ್ಡಿ ಅವರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಒಂದು ಎಕರೆ ದ್ರಾಕ್ಷಿ ತೋಟ ಮಾಡಿದ್ದರು. ಈ ಬಾರಿ ದ್ರಾಕ್ಷಿ ತೋಟದಲ್ಲಿ ಉತ್ತಮ ಫಸಲು ಬಂದಿತ್ತು. ನಿನ್ನೆಯಷ್ಟೇ ವ್ಯಾಪಾರಸ್ಥರಿಗೆ ಇಂದು ಬಂದು ದ್ರಾಕ್ಷಿ ಕಟಾವು ಮಾಡಿಕೊಳ್ಳಿ ಅಂತ ಹೇಳಿದ್ದರು. ಆದರೆ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಸರಿಸುಮಾರು 30ಕ್ಕೂ ಅಧಿಕ ಟನ್ ದ್ರಾಕ್ಷಿ ಈಗ ಮಣ್ಣುಪಾಲಾಗಿದ್ದು ರೈತ ವೆಂಕಟರೆಡ್ಡಿ ದಿಕ್ಕು ತೋಚದಂತಾಗಿದ್ದಾರೆ. ಇದನ್ನೂ ಓದಿ: ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ

    Grape Crop

    ಅಕಾಲಿಕ ಮಳೆಯ ಅಬ್ಬರದಿಂದ ಇಡೀ ದಾಕ್ಷಿ ತೋಟವೇ ನಾಶವಾಗಿ ಕಲ್ಲು ಕೂಚಾ, ದ್ರಾಕ್ಷಿ ಗಿಡಗಳೆಲ್ಲವೂ ಮುರಿದು ಬಿದ್ದಿವೆ. ಈ ದ್ರಾಕ್ಷಿ ತೋಟವನ್ನ ಸಂಪೂರ್ಣ ಕಟ್ ಮಾಡಿ ತೆರವು ಮಾಡಬೇಕು ಬೇರೇನು ಮಾಡಲಾಗುವುದಿಲ್ಲ. ತೆರವು ಮಾಡಲು ಸಹ ಲಕ್ಷಾಂತರ ರೂಪಾಯಿ ವ್ಯಯ ಮಾಡಬೇಕು. ಮತ್ತೆ ದ್ರಾಕ್ಷಿ ಗಿಡ ನಾಟಿ ಮಾಡಿ ಫಸಲು ಬರುವುದಕ್ಕೆ 2 ವರ್ಷ ಬೇಕು. ಈಗಲೇ ಲಕ್ಷ, ಲಕ್ಷ ಸಾಲ ಮಾಡಿ ಬೆಳೆದಿರುವ ಬೆಳೆ ಹಾಳಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    Grape Crop

    ಮಾರುಕಟ್ಟೆಯಲ್ಲಿ ಈ ಬಾರಿ ದ್ರಾಕ್ಷಿಗೆ ಡಿಮ್ಯಾಂಡ್ ಕಡಿಮೆ ಆಗಿದೆ. ಹೀಗಾಗಿ ಕೆಜಿ 20 ರಿಂದ 30 ರೂಪಾಯಿಗೆ ಬಿಕರಿಯಾಗುತ್ತಿದ್ದು ವ್ಯಾಪಾಸರಸ್ಥರು ಖರೀದಿಗೆ ಮುಂದೆ ಬರುತ್ತಿಲ್ಲ. ಇದರಿಂದ ಮೊದಲೇ ತೋಟದಲ್ಲಿ ಹಣ್ಣಾಗಿರುವ ದ್ರಾಕ್ಷಿಯನ್ನು ಬಹಳ ದಿನಗಳ ಕಾಲ ಬಿಡುವಂತಿಲ್ಲ. ಬಿಟ್ಟರೆ ತೋಟ ಗಿಡ ಡ್ಯಾಮೇಜ್ ಆಗಲಿದೆ. ಹೀಗಾಗಿ ಕೊಟ್ಟಷ್ಟು ಕೊಟ್ಟು ಹಣ್ಣು ಕಟ್ ಮಾಡಿಕೊಂಡು ಹೋಗಿ ಅಂದರೂ ಖರೀದಿಗೆ ವ್ಯಾಪಾರಸ್ಥರು ಬರುತ್ತಿಲ್ಲ. ಅಂತಹದರಲ್ಲಿ ಈಗ ಮಳೆಯ ಕಾಟ ಮಳೆಯಿಂದ ಇಡೀ ತೋಟವೇ ನಶಿಸಿ ಹೋಗಿದೆ. ದೂರದ ನೆಲಮಂಗಲಕ್ಕೆ ಹೋಗಿ ರಸಗೊಬ್ಬರ ತಂದು ಉತ್ತಮ ಫಸಲು ಬರಲಿ ಅಂತ ಕಷ್ಟಪಟ್ಟು ಬೆಳೆಸಿದ್ದೆ. ಒಂದು ದಿನ ಇದ್ದಿದ್ದೇ ದ್ರಾಕ್ಷಿ ಕಟಾವು ಮಾಡಿಕೊಂಡು ಹೋಗುತ್ತಿದ್ದರು. ಆದರೆ ಈಗ 1 ರೂಪಾಯಿ ಇಲ್ಲದ ಹಾಗೆ ಮಳೆ ಇಡೀ ತೋಟವನ್ನೇ ಹಾಳು ಮಾಡಿದೆ ಅಂತ ರೈತ ವೆಂಕಟರೆಡ್ಡಿ ಕಣ್ಣೀರು ಹಾಕಿದ್ದಾರೆ.

  • ಮಹಿಳಾ ಪೊಲೀಸ್ ಜೊತೆ ಅನುಚಿತ ವರ್ತನೆ – ರೈತ ಸಂಘದ ಉಪಾಧ್ಯಕ್ಷ ಬಂಧನ

    ಮಹಿಳಾ ಪೊಲೀಸ್ ಜೊತೆ ಅನುಚಿತ ವರ್ತನೆ – ರೈತ ಸಂಘದ ಉಪಾಧ್ಯಕ್ಷ ಬಂಧನ

    -ರೈತ ಸಂಘದ ಕಾರ್ಯಕರ್ತರಿಂದ ಅಹೋರಾತ್ರಿ ಧರಣಿ

    ಮೈಸೂರು: ಕೇಸಿನ ವಿಚಾರಣೆ ಸಂಬಂಧ ಪೊಲೀಸ್ ಠಾಣೆಗೆ ಹೋದ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್, ಮಹಿಳಾ ಪೊಲೀಸ್ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಬಂಧಿಸಲಾಗಿದೆ.

    ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಬೆಟ್ಟದಪುರ ಠಾಣೆಯಲ್ಲಿ ಈ ಘಟನೆ ನಡೆದಿದೆ. ಲೋಕೇಶ್ ರಾಜೇ ಅರಸ್ ಬಂಧನ ಖಂಡಿಸಿ ರೈತ ಸಂಘ ಕಾರ್ಯಕರ್ತರು ಅಹೋರಾತ್ರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಠಾಣೆ ಮುಂದೆ ಧರಣಿ ನಡೆಸಿದ್ದಾರೆ.

    ಕೇಸಿನ ವಿಚಾರಣೆ ಬಗ್ಗೆ ಠಾಣೆಗೆ ಹೋದಾಗ ಮಹಿಳಾ ಪೇದೆ ಹಾಗೂ ಲೋಕೇಶ್ ರಾಜೇ ಅರಸ್ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಲೋಕೇಶ್ ತಮ್ಮ ಜೊತೆ ಅನುಚಿತವಾಗಿ ನಡೆದುಕೊಂಡರು ಎಂದು ಮಹಿಳಾ ಪೇದೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಲೋಕೇಶ್ ರಾಜೇ ಅರಸ್‍ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

    ಪೊಲೀಸರ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೇರಿ ಹಲವರು ಭಾಗಿಯಾಗಿದ್ದರು. ಸ್ಥಳಕ್ಕೆ ಅಡಿಷನಲ್ ಎಸ್‍ಪಿ ಸ್ನೇಹಾ ಸೇರಿ  ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

  • ವಾಲ್ಮೀಕಿ ಸಂಘದ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

    ವಾಲ್ಮೀಕಿ ಸಂಘದ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

    ಕೋಲಾರ: ರೈತ ಸಂಘ ಹಾಗೂ ವಾಲ್ಮೀಕಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಬೆಡಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.

    40 ವರ್ಷದ ರಮೇಶ್ ಹಲ್ಲೆಗೊಳಗಾದ ವಾಲ್ಮೀಕಿ ಸಂಘದ ಮುಖಂಡ. ರಮೇಶ್, ರೈತ ಸಂಘ ಕೋಡಿಹಳ್ಳಿ ಚಂದ್ರಶೇಖರ್ ಬಣದ ಸಂಚಾಲಕ ಹಾಗೂ ತಾಲೂಕು ವಾಲ್ಮೀಕಿ ಸಂಘದ ಉಪಾಧ್ಯಕ್ಷರಾಗಿದ್ದಾರೆ. ರಮೇಶ್ ಬೈಕ್ ಅಡ್ಡಗಟ್ಟಿದ್ದ ಅದೇ ಗ್ರಾಮದವರಾದ ವೆಂಕಟೇಶ್, ರಾಮಕೃಷ್ಣಪ್ಪ, ಶ್ರೀನಿವಾಸ್ ಎಂಬವರು ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

    ಮಾರಣಾಂತಿಕ ಹಲ್ಲೆಗೊಳಗಾದ ರಮೇಶ್‍ರನ್ನು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv