Tag: family

  • ಎರಡು ಕುಟುಂಬಗಳ ಜಮೀನು ವಿವಾದದ ದ್ವೇಷಕ್ಕೆ 19 ವರ್ಷದ ವಿದ್ಯಾರ್ಥಿ ಬಲಿ!

    ಎರಡು ಕುಟುಂಬಗಳ ಜಮೀನು ವಿವಾದದ ದ್ವೇಷಕ್ಕೆ 19 ವರ್ಷದ ವಿದ್ಯಾರ್ಥಿ ಬಲಿ!

    ಶಿವಮೊಗ್ಗ: ಎರಡು ಕುಟುಂಬಗಳ ಜಮೀನು ವಿವಾದದ ದ್ವೇಷಕ್ಕೆ ಕಾಲೇಜು ವಿದ್ಯಾರ್ಥಿ ಬಲಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಅಭಿಷೇಕ್(19) ಬಲಿಯಾದ ವಿದ್ಯಾರ್ಥಿ. ಅಭಿಷೇಕ್ ಪ್ರಥಮ ಬಿಕಾಂ ಪರೀಕ್ಷೆ ಬರೆಯಲು ಹೋದಾಗ ಮತ್ತೊಂದು ಕುಟುಂಬ ಆತನಿಗೆ ಬಲವಂತವಾಗಿ ವಿಷ ಪ್ರಾಷಣ ಮಾಡಿಸಲಾಗಿದೆ ಎಂದು ದೂರಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅಭಿಷೇಕ್ ಕಾಲೇಜು ಪರೀಕ್ಷೆ ಮುಗಿಸಿಕೊಂಡು ಬರುವಾಗ ಆರೋಪಿಗಳು ಆತನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ್ದರು.

    ಕಾರಿನಲ್ಲಿಯೇ ವಿಷ ಕುಡಿಸಿ ತದ ನಂತರ ಶಿವಮೊಗ್ಗದ ವಿದ್ಯಾನಗರ ಬಳಿ ರೈಲ್ವೇ ಟ್ರಾಕ್ ಬಳಿ ಎಸೆದು ಹೋಗಿದ್ದರು. ಸ್ಥಳೀಯರ ಸಹಕಾರದಿಂದ ಆಸ್ಪತ್ರೆ ಸೇರಿದ್ದ ಅಭಿಷೇಕ್ ಸಾಯುವ ಮುನ್ನ ಕೃತ್ಯದ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅಭಿಷೇಕ್ ಸಾವನ್ನಪ್ಪಿದ್ದಾರೆ.

    ಆಯನೂರು ಗ್ರಾಮದ ಚನ್ನೇನಹಳ್ಳಿ ಗ್ರಾಮದಲ್ಲಿ ಪೊಲೀಸರು ಜಮಾಯಿಸಿದ್ದು, ಅಹಿತಕರ ಘಟನೆ ನಡೆಯದಂತೆ ಭದ್ರತೆ ವ್ಯವಸ್ಥೆ ಮಾಡಿದ್ದಾರೆ. ರಾಜಾ ನಾಯ್ಕ್ ಮತ್ತು ಮೆಗ್ಯಾ ನಾಯ್ಕ್ ಕುಟುಂಬಗಳ ನಡುವಿನ ಗೋಮಾಳ ಜಮೀನಿಗಾಗಿ ಆಗಾಗ ಜಗಳ, ಹೊಡೆದಾಟ ನಡೆಯುತ್ತಿತ್ತು.

    ರಾಜನಾಯ್ಕ ಮಗ ಅಭಿಷೇಕ್. ಕುಟುಂಬದ ಜಗಳದಲ್ಲಿ ಈತನ ಪಾತ್ರವಿಲ್ಲದಿದ್ದರೂ ಮೆಗ್ಯಾ ನಾಯ್ಕ ಪ್ರತಿಕಾರ ತೀರಿಸಿಕೊಳ್ಳಲು ಹೊಂಚುಹಾಕಿದ್ದ ಎನ್ನಲಾಗಿದೆ. ಮೆಗ್ಯಾ ನಾಯ್ಕ್ ಸಹೋದರ ಒಬ್ಯಾ ನಾಯ್ಕ್ , ಪಾಪ ನಾಯ್ಕ್, ನಿರ್ಮಲ ಬಾಯಿ ಹಾಗೂ ಗೀತಾ ಬಾಯಿ ವಿಷ ಪ್ರಾಷಣ ಮಾಡಿಸಿದ ಆರೋಪಕ್ಕೆ ತುತ್ತಾಗಿದ್ದಾರೆ.

    ಸದ್ಯ ಓಬ್ಯಾ ನಾಯ್ಕ ನನ್ನು ಕೋಟೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

  • ಹುತಾತ್ಮ ಯೋಧರ ಕುಟುಂಬವನ್ನು ಹೊರಗೆ ನಿಲ್ಲಿಸಿ 1 ಗಂಟೆ ಕಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು!

    ಹುತಾತ್ಮ ಯೋಧರ ಕುಟುಂಬವನ್ನು ಹೊರಗೆ ನಿಲ್ಲಿಸಿ 1 ಗಂಟೆ ಕಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು!

    ದಾವಣಗೆರೆ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದಿದ್ದ ಯೋಧರೊಬ್ಬರ ಕುಟುಂಬವನ್ನು ಕಾಂಗ್ರೆಸ್ ಕಾರ್ಯಕರ್ತರು ಹೊರಗೆ ನಿಲ್ಲಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಹುತಾತ್ಮ ಯೋಧ ಜಾವೀದ್ ಹಾಗೂ ಅವರ ಕುಟುಂಬಸ್ಥರು ಜಿಲ್ಲೆಯ ಹರಿಹರ ತಾಲೂಕಿನವರು. ಮಂಗಳವಾರ ಜಾವೀದ್ ಅವರ ಕುಟುಂಬವನ್ನು ಭೇಟಿ ಮಾಡಿ ರಾಹುಲ್ ಗಾಂಧಿ ಸಾಂತ್ವಾನ ಹೇಳಿದ್ದರು. ಅಷ್ಟೇ ಅಲ್ಲದೇ ಇಂದು ಭೇಟಿಯಾಗುವಂತೆ ಕೂಡ ಹೇಳಿದ್ದರು.

    ಹೀಗಾಗಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದ ಯೋಧರ ಕುಟುಂಬಸ್ಥರಿಗೆ ಪೊಲೀಸ್ ಅಧಿಕಾರಿಗಳು ಭೇಟಿಯಾಗಲು ಪಾಸ್ ಕೇಳುತ್ತಿದ್ದು, ಇಬ್ಬರು ಪುಟ್ಟ ಮಕ್ಕಳು ಜೊತೆ ಯೋಧ ಜಾವೀದ್ ಅವರ ಮಡದಿ ಹಾಗೂ ಕುಟುಂಬಸ್ಥರು ರಾಗಾ ಭೇಟಿಗೆಂದು ಒಂದು ಗಂಟೆಯಿಂದ ಕಾಯುತ್ತಿದ್ದಾರೆ.

    ರಾಹುಲ್ ಗಾಂಧಿ ಯೋಧರ ಕುಟುಂಬವನ್ನು ಇಂದು ತಮ್ಮ ಗೆಸ್ಟ್ ಹೌಸ್‍ಗೆ ಬಂದು ಭೇಟಿಯಾಗುವಂತೆ ಹೇಳಿದ್ದರು. ಅಲ್ಲಿದ್ದ ಸಿಬ್ಬಂದಿ ಯೋಧ ಜಾವೀದ್ ಅವರ ಕುಟುಂಬಕ್ಕೆ ರಾಹುಲ್ ಗಾಂಧಿ ಭೇಟಿಗೆ ಅವಕಾಶ ನೀಡಲಿಲ್ಲ. ಬೆಳಗ್ಗೆನೇ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಬಂದಿದ್ದರೂ, ಭೇಟಿಗೆ ಅವಕಾಶ ನೀಡಲಿಲ್ಲ ಎಂದು ಜಾವೀದ್ ಅವರ ಕುಟುಂಬದವರು ಕಾದುಕಾದು ವಾಪಸ್ಸಾಗಿದ್ದಾರೆ.

    ರಾಜಸ್ಥಾನದ ಪೋಖ್ರಾನ್‍ನಲ್ಲಿ ಯೋಧ ಜಾವೀದ್ ಹುತಾತ್ಮರಾಗಿದ್ದರು.

  • ಅಪ್ರಾಪ್ತೆಯನ್ನು ಮದ್ವೆ ಮಾಡಿಕೊಡಲ್ಲ ಎಂದಿದ್ದಕ್ಕೆ ಕುಟುಂಬದ ಐವರ ಬರ್ಬರ ಕೊಲೆ!

    ಅಪ್ರಾಪ್ತೆಯನ್ನು ಮದ್ವೆ ಮಾಡಿಕೊಡಲ್ಲ ಎಂದಿದ್ದಕ್ಕೆ ಕುಟುಂಬದ ಐವರ ಬರ್ಬರ ಕೊಲೆ!

    ಜಮ್‍ಶೆಡ್‍ಪುರ: ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಡುವುದಿಲ್ಲ ಎಂದಿದ್ದಕ್ಕೆ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿದ ಘಟನೆ ಮಾರ್ಚ್ 14ರಂದು ಜಾರ್ಖಂಡ್‍ನ ಪಶ್ಚಿಮ ಸಿಂಗ್‍ಭೂಮ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರಾಮ್‍ಸಿಂಗ್ ಸಿರ್ಕಾ(42), ಪಾನೂ ಕುಯಿ(40), ರಂಭಾ(17), ಕಂದೆ(12) ಹಾಗೂ ಸೋನಿಯಾ(8) ಮೃತ ದುರ್ದೈವಿಗಳು. ದೂರಿನಲ್ಲಿ 9 ಜನರ ಹೆಸರು ದಾಖಲಾಗಿದ್ದು, ಅದರಲ್ಲಿ ನಾಲ್ವರು ಪ್ರಭಾವಶಾಲಿ ಕುಟುಂಬದವರು ಎಂದು ಎಸ್‍ಐ ತೌಕೀರ್ ಅಲಾಮ್ ತಿಳಿಸಿದ್ದಾರೆ.

    ಒಂಬತ್ತು ಆರೋಪಿಗಳಲ್ಲಿ ಒಬ್ಬಾತ ರಾಮ್‍ಸಿಂಗ್‍ನ ಮಗಳನ್ನು ನನಗೆ ಮದುವೆ ಮಾಡಿಕೊಡಿ ಅಂತಾ ಕೇಳಿಕೊಂಡಿದ್ದನು. ಆದ್ರೆ ರಾಮ್‍ಸಿಂಗ್ ಮಗಳು ಇನ್ನು ಚಿಕ್ಕವಳಿದ್ದಾಳೆ ಅಂತಾ ಹೇಳಿ ಆರೋಪಿಯ ಮನವಿಯನ್ನು ತಿರಸ್ಕರಿಸಿದ್ರು. ಇದರಿಂದ ಅವಮಾನಿತನಾದ ಆರೋಪಿ ರಾಮ್ ಸಿಂಗ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿದ್ದಾನೆ.

    ಐವರನ್ನು ಕೊಲೆ ಮಾಡಿದ ನಂತರ ಅವರ ಮೃತದೇಹವನ್ನು ಆರೋಪಿ ತನ್ನ ಸಹಚರರ ಸಹಾಯದಿಂದ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದರು. ನಂತರ ರಾಮ್ ಸಿಂಗ್ ಮನೆಗೆ ಬರುವವರೆಗೂ ಕಾದು ಆತನನ್ನು ಕೂಡ ಕೊಲೆ ಮಾಡಿದ್ದಾನೆ. ನಂತರ ಆತನ ಮೃತದೇಹವನ್ನು ಕೂಡ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾರೆ ಎಂದು ಹೇಳಲಾಗಿದೆ.

    ಐವರು ಸದಸ್ಯರನ್ನು 9 ಮಂದಿ ಕೊಲೆ ಮಾಡಿದ್ದಾರೆ. 9 ಜನ ಆರೋಪಿಗಳಲ್ಲಿ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಉಳಿದ ಆರೋಪಿಗಳು ರಾಜ್ಯದಿಂದ ಪರಾರಿಯಾಗಿದ್ದಾರೆ ಎಂದು ಎಸ್‍ಐ ಹೇಳಿದ್ದಾರೆ.

    ಮಾರ್ಚ್ 24ರಂದು ಗುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತುಲಸೈ ಗ್ರಾಮದಿಂದ 3ಕಿ.ಮೀ ದೂರದಲ್ಲಿರುವ ಕಾಡಿನಲ್ಲಿ ರಾಮ್ ಸಿಂಗ್ ಸಿರ್ಕಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಇನ್ನೂ ಉಳಿದ ನಾಲ್ವರ ಮೃತದೇಹ 5 ಕಿ.ಮೀ ದೂರದಲ್ಲಿರುವ ಮತ್ತೊಂದು ಕಾಡಿನಲ್ಲಿ ದೊರೆಯಿತ್ತು ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.

  • ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ- ತೆಲಗಿ ಪತ್ನಿ, ಮಗಳ ಮೇಲೆ ಸಹೋದರರರಿಂದ ಹಲ್ಲೆ

    ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ- ತೆಲಗಿ ಪತ್ನಿ, ಮಗಳ ಮೇಲೆ ಸಹೋದರರರಿಂದ ಹಲ್ಲೆ

    ಬೆಳಗಾವಿ: ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದ ಆರೋಪಿ ಅಬ್ದುಲ್ ಕರೀಂ ಲಾಲ್ ತೆಲಗಿ ಮೃತಪಟ್ಟು ಅನೇಕ ತಿಂಗಳುಗಳು ಕಳೆದಿವೆ. ಆದರೆ ಆಸ್ತಿಗಾಗಿ ಕುಟುಂಬಸ್ಥರ ಕಿತ್ತಾಟ ಮಾತ್ರ ಇನ್ನೂ ನಿಂತಿಲ್ಲ.

    ಆಸ್ತಿಗಾಗಿ ತೆಲಗಿ ಸಹೋದರರು ಜಗಳವಾಡಿದ್ದು, ತೆಲಗಿ ಪತ್ನಿ ಶಹೀದಾ ಹಾಗೂ ಮಗಳು ಸನಾ ಮೇಲೆ ಹಲ್ಲೆ ನಡೆಸಿದ್ದಾರೆ. ಶಹೀದಾ ಈಗಾಗಲೇ ಪತಿಯ ಛಾಪಾಕಾಗದ ವ್ಯವಹಾರದಿಂದ ಬಂದ ಹಣವನ್ನು ಕೋರ್ಟ್ ಗೆ ಒಪ್ಪಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಪುಣೆ ಕೋರ್ಟ್ ಗೆ ಅರ್ಜಿವೊಂದನ್ನು ಸಹ ಸಲ್ಲಿಸಿದ್ದಾರೆ. ಇದನ್ನೂ ಓದಿ: 100 ಕೋಟಿಯ ಆಸ್ತಿಯನ್ನು ದಾನ ಮಾಡಲಿದ್ದಾರೆ ಕರೀಂಲಾಲ್ ತೆಲಗಿ ಪತ್ನಿ

    ಇದು ತೆಲಗಿ ಸಹೋದರ ಅಜೀಂ, ರಹಿಂ ಹಾಗೂ ಅವರ ಮಕ್ಕಳ ಕೆಂಗಣ್ಣಿಗೆ ಗುರಿಯಾಗಿದೆ. ಭಾನುವಾರ ಸಂಜೆ ಈ ವಿಚಾರ ಸಂಬಂಧ ಮನೆಯಲ್ಲಿ ಗಲಾಟೆ ನಡೆದಿದೆ. ಅಜೀಂ, ರಹೀಂ ಹಾಗೂ ಆತನ ಮಕ್ಕಳು ಗರ್ಭಿಣಿ ಸನಾಳ ಹೊಟ್ಟೆಗೆ ಒದ್ದು ಹಲ್ಲೆ ನಡೆಸಿದ್ದಾರೆ. ಸದ್ಯ ಅವರು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ. ಇದನ್ನೂ ಓದಿ:   ನಕಲಿ ಛಾಪಾ ಕಾಗದ ಹಗರಣದ ಕಿಂಗ್ ಪಿನ್ ತೆಲಗಿ ನಿಧನ

    ಈ ಬಗ್ಗೆ ಸನಾ ಹಾಗೂ ಶಹೀದಾ ತೆಲಗಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ಸಹಾಯ ಸ್ಮರಿಸಿದ ಕುಟುಂಬದ ಮಾತು ಕೇಳಿ ಕಣ್ಣೀರು ಹಾಕಿದ ಹೆಚ್‍ಡಿಕೆ

    ಸಹಾಯ ಸ್ಮರಿಸಿದ ಕುಟುಂಬದ ಮಾತು ಕೇಳಿ ಕಣ್ಣೀರು ಹಾಕಿದ ಹೆಚ್‍ಡಿಕೆ

    ಬೆಂಗಳೂರು: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಕಣ್ಣೀರು ಹಾಕಿದ್ದಾರೆ. ನೀವೇ ನಮ್ಮ ಕುಟುಂಬಕ್ಕೆ ದೇವರು ಅಂತ ಹೇಳಿದ ಕುಟುಂಬವೊಂದರ ಮಾತಿನಿಂದ ಭಾವುಕರಾಗಿ ಹೆಚ್‍ಡಿಕೆ ಕಣ್ಣೀರು ಹಾಕಿದ್ರು.

    ಬೆಂಗಳೂರಿನ ಟೌನ್‍ಹಾಲ್‍ನಲ್ಲಿ ಆಟೋ, ಕಾರು, ಲಾರಿ ಚಾಲಕರು ಮತ್ತು ಮಾಲೀಕರ ಸಂವಾದದ ವೇಳೆ ಈ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ಹೊಸಕೋಟೆಯ ಎಮ್ಮಂಡಹಳ್ಳಿಯ ಕಾರು ಚಾಲಕ ಸಂಪಂಗಿ ಮತ್ತು ಸಂಧ್ಯಾರಾಣಿ ದಂಪತಿಯ 11 ವರ್ಷ ಮಗಳು ಮೊನಿಕಾಗೆ ರೋಗನಿರೋಧಕ ಶಕ್ತಿ ಇರ್ಲಿಲ್ಲ. ಎಷ್ಟು ಚಿಕಿತ್ಸೆ ಕೊಡಿಸಿದ್ರೂ ಏನೂ ಪ್ರಯೋಜನ ಆಗಿರಲಿಲ್ಲ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆವು. ಆಗ ನೆರವಿಗೆ ಬಂದ ಹೆಚ್‍ಡಿ ಕುಮಾರಸ್ವಾಮಿ 30 ಲಕ್ಷ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ರು. ಅವರೇ ನಮ್ಮ ಕುಟುಂಬಕ್ಕೆ ದೇವರು ಅಂತ ಮೋನಿಕಾ ತಂದೆ ಸಂಪಂಗಿ ಹೇಳಿದ್ರು. ತಮ್ಮಿಂದ ಸಹಾಯ ಪಡೆದ ಕುಟುಂಬದ ಮಾತು ಕೇಳಿ ಕುಮಾರಸ್ವಾಮಿ ಕಣ್ಣಾಲಿಗಳು ಒದ್ದೆ ಆದವು.

    ಸಂವಾದದ ವೇಳೆ ಮಾತನಾಡಿದ ಹೆಚ್‍ಡಿಕೆ, ಚಾಲಕರಿಗೆ ಪ್ರತ್ಯೇಕ ಸಂಸ್ಥೆ ಮಾಡಲು ಪ್ಲಾನ್ ಇದೆ. ಓಲಾ, ಊಬರ್ ನಂತೆ ಸಂಸ್ಥೆ ನಿರ್ಮಿಸಲು ಹೊಸ ಪ್ಲ್ಯಾನ್ ಇದೆ. ಆದ್ರೆ ನಾನು ಏಕಾಂಗಿ, ಪಕ್ಷ ಬೇರೆ ಕಟ್ಟಬೇಕು. ನಾನು ದೇವೇಗೌಡರು ಮಾತ್ರ ಪಕ್ಷ ಕಟ್ಟಬೇಕು ಎಂದರು. ಟ್ಯಾಕ್ಸಿ ಚಾಲಕರಿಗೆ ಉತ್ತಮ ಬದುಕು ನಿರ್ಮಿಸಿಕೊಡಲು ಸಂಸ್ಥೆ ಆರಂಭಿಸಬೇಕು. ಜೆಡಿಎಸ್ ಸರ್ಕಾರ ಬರಲಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ರು.

  • ರುಂಡ-ಕಾಲುಗಳಿಲ್ಲದ ಶವ, ಕೈಯಲ್ಲಿದ್ದ 2 ಉಂಗುರಗಳ ಆಧಾರದಿಂದ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

    ರುಂಡ-ಕಾಲುಗಳಿಲ್ಲದ ಶವ, ಕೈಯಲ್ಲಿದ್ದ 2 ಉಂಗುರಗಳ ಆಧಾರದಿಂದ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

    ಮುಂಬೈ: ರುಂಡ ಹಾಗೂ ಕಾಲುಗಳಿಲ್ಲದ ಶವ ಪತ್ತೆಯಾದ ನಂತರ ತಲೆಕೆಡಿಸಿಕೊಂಡಿದ್ದ ಮಹರಾಷ್ಟ್ರ ಪೊಲೀಸರು ಮೃತದೇಹದ ಕೈಲ್ಲಿದ್ದ 2 ಉಂಗುರಗಳ ಸಹಾಯದಿಂದ ಕೊಲೆ ಪ್ರಕರಣವನ್ನ ಬೇಧಿಸಿದ್ದಾರೆ.

    ಜನವರಿ 30ರಂದು ತಿತ್ವಾಲಾ ಪೊಲೀಸರಿಗೆ ಕರೆ ಮಾಡಿದ ಸೆಕ್ಯೂರಿಟಿ ಗಾರ್ಡ್‍ವೊಬ್ಬರು ಗೋಣಿಚೀಲದಲ್ಲಿ ಶವವೊಂದು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದರು. ನಾವು ಸ್ಥಳಕ್ಕೆ ಹೋದ ನಂತರ ತಲೆ ಹಾಗೂ ಕಾಲುಗಳಿಲ್ಲದ ಮೃತದೇಹ ಗೋಣೀಚೀಲದಲ್ಲಿ ಇದ್ದಿದ್ದನ್ನು ನೋಡಿದೆವು. ದೇಹದ ಎಡಗೈನಲ್ಲಿದ್ದ ಎರಡು ಉಂಗುರಗಳು ಮಾತ್ರ ನಮಗೆ ಸಾಕ್ಷಾಧಾರವಾಗಿತ್ತು ಎಂದು ತಿತ್ವಾಲಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರದೀಪ್ ಕಸ್ಬೆ ಹೇಳಿದ್ದಾರೆ.

    ಸಾಂದರ್ಭಿಕ ಚಿತ್ರ

    ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು, ಬಳಿಕ ಆ ಪ್ರದೇಶದಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. 32 ವರ್ಷದ ರವೀಂದ್ರ ಸಿಂಘ ಎಂಬವರು 5-6 ದಿನಗಳಿಂದ ಕಾಣೆಯಾಗಿರುವುದಾಗಿ ಫೆಬ್ರವರಿ 2ರಂದು ಪೊಲೀಸರಿಗೆ ಗೊತ್ತಾಗಿತ್ತು. ನಂತರ ರವೀಂದ್ರ ಅವರ ಪತ್ನಿ ಸುಷ್ಮಾಳನ್ನ ಪೊಲೀಸರು ವಿಚಾರಣೆ ಮಾಡಿದ್ದು, ನನ್ನ ಪತಿ ಮುಲುಂದ್‍ನಲ್ಲಿ ತನ್ನ ಪೋಷಕರ ಮನೆಯಲ್ಲಿ ಇದ್ದಾರೆ ಎಂದು ಹೇಳಿದ್ದಳು. ಆದ್ರೆ ಅತ್ತ ರವೀಂದ್ರ ಪೋಷಕರು ಇದನ್ನ ನಿರಾಕರಿಸಿದ್ದರು.

     

    ನಾವು ನಂತರ ರವೀಂದ್ರ ಅವರ ಕೆಲಸದ ಮಾಲೀಕರನ್ನು ವಿಚಾರಿಸಿದೆವು. ರವೀಂದ್ರ 5 ದಿನಗಳಿಂದ ಕೆಲಸಕ್ಕೆ ಬಂದಿರಲಿಲ್ಲ ಎಂದು ಅವರು ಹೇಳಿದರು. ಫೆಬ್ರವರಿ 5, ಮಂಗಳವಾರದಂದು ಮಾಲೀಕ ರವೀಂದ್ರ ಅವರ ಫೋಟೋವನ್ನ ಪೊಲೀಸರಿಗೆ ಕಳಿಸಿದ್ದರು. ಅದರಲ್ಲಿ ರವೀಂದ್ರ ಎರಡು ಬೆಳ್ಳಿ ಉಂಗುರಗಳನ್ನ ತೊಟ್ಟಿದ್ದರು. ಅಲ್ಲಿಗೆ ಮೃತದೇಹ ರವೀಂದ್ರ ಅವರದ್ದೇ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿತ್ತು.

    ಪ್ರಕರಣದ ಹಿಂದೆ ಏನೋ ಪಿತೂರಿ ನಡೆದಿರುವುದು ದೃಢವಾಗಿತ್ತು. ಕುಟುಂಬಸ್ಥರು ಎನೋ ಮುಚ್ಚಿಡುತ್ತಿರಬಹುದು ಎಂಬ ಅನುಮಾನ ಬಂತು ಎಂದು ಕಸ್ಬೆ ತಿಳಿಸಿದ್ದಾರೆ. ಥಾಣೆ ಗ್ರಾಮೀಣ ಪೊಲೀಸ್ ನ ಕ್ರೈಂ ಬಾಂಚ್‍ನವರೂ ಕೂಡ ಈ ಪ್ರಕರಣದ ತನಿಖೆ ನಡೆಸಿದ್ದು, ಸುಷ್ಮಾಳ ಸಹೋದರ ಗೌತಮ್ ಮೋಹಿತೆಯನ್ನ ವಶಕ್ಕೆ ಪಡೆದು, ಸುಷ್ಮಾ ಗೆ ತನ್ನ ತಾಯಿ ಅನಿತಾ ಜೊತೆಗೆ ಪೊಲೀಸ್ ಠಾಣೆಗೆ ಬರುವಂತೆ ಹೇಳಿದ್ದರು.

    ನಂತರ ವಿಚಾರಣೆ ವೇಳೆ ಮೂವರೂ ರವೀಂದ್ರ ಅವರನ್ನು ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ವಾಗ್ವಾದ ನಡೆದ ನಂತರ ರವೀಂದ್ರ ಅನಿತಾಗೆ ಒದ್ದಿದ್ದ. ಅಮ್ಮನ ಮೇಲಿನ ಹಲ್ಲೆಯಿಂದ ಕೋಪಗೊಂಡ ಗೌತಮ್, ಭಾರವಾದ ಟೈಲ್ಸ್‍ಗಳನ್ನ ತೆಗೆದುಕೊಂಡು ರವೀಂದ್ರ ತಲೆಗೆ ಹೊಡೆದು ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆಂದು ಕಸ್ಬೆ ಹೇಳಿದ್ದಾರೆ.

    ಘಟನೆ ಬಳಿಕ ಆರೋಪಿಗಳು 2 ದಿನಗಳವರೆಗೆ ರವೀಂದ್ರ ದೇಹವನ್ನ ಬಾತ್‍ರೂಮಿನಲ್ಲಿ ಮುಚ್ಚಿಟ್ಟಿದ್ದರು. ಆದ್ರೆ ದುರ್ವಾಸನೆ ಬರಲು ಆರಂಭಿಸಿದಾಗ ಅದನ್ನ ತೆಗೆದು ಮೂರು ಭಾಗಗಳಾಗಿ ಕತ್ತರಿಸಿ ಮೂರು ಪ್ರತ್ಯೇಕ ಗೋಣಿಚೀಲಗಳಲ್ಲಿ ತುಂಬಿದ್ದರು ಎಂದು ಕಸ್ಬೆ ಹೇಳಿದ್ದಾರೆ.

    ಆರೋಪಿಗಳನ್ನ ಬುಧವಾರದಂದು ಪೊಲೀಸರು ಬಂಧಿಸಿದ್ದಾರೆ.

  • ದೀಪಕ್ ರಾವ್ ಮನೆಗೆ ಅನಂತ್ ಕುಮಾರ್ ಹೆಗ್ಡೆ ಭೇಟಿ-ಸಹೋದರನಿಗೆ ಉದ್ಯೋಗ ಭರವಸೆ

    ದೀಪಕ್ ರಾವ್ ಮನೆಗೆ ಅನಂತ್ ಕುಮಾರ್ ಹೆಗ್ಡೆ ಭೇಟಿ-ಸಹೋದರನಿಗೆ ಉದ್ಯೋಗ ಭರವಸೆ

    ಮಂಗಳೂರು: ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ದೀಪಕ್ ರಾವ್ ಮನೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹಗ್ಡೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

    ಸುರತ್ಕಲ್ ಸಮೀಪದ ಕಾಪಟಿಪಾಳ್ಯದಲ್ಲಿ ಹಾಡಹಗಲೇ ದುಷ್ಕರ್ಮಿಗಳ ಮಾರಣಾಂತಿಕ ದಾಳಿಯಿಂದ ಮೃತ ಪಟ್ಟಿದ್ದ ದೀಪಕ್ ರಾವ್ ಅವರ ಮನೆಗೆ ಭೇಟಿ ನೀಟಿದ ಅನಂತ್ ಕುಮಾರ್ ಹೆಗ್ಡೆ, ಅನಿರೀಕ್ಷಿತವಾಗಿ ದೀಪಕ್ ರಾವ್ ಅವರ ಹತ್ಯೆ ಆಗಿದೆ. ಅವರ ಕುಟಂಬಕ್ಕೆ ಸಾಂತ್ವನ ಹೇಳಲು ಇಲ್ಲಿಗೆ ಭೇಟಿ ನೀಡಿದ್ದು. ಅವರ ಕುಟುಂಬದ ಜೊತೆ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.

    ಇದೇ ವೇಳೆ ದೀಪಕ್ ಸಹೋದರ ಸತೀಶ್ ಅವರಿಗೆ ಕುದುರೆಮುಖ ಕಂಪೆನಿಯಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಿದರು.ಅಲ್ಲದೇ ಸಚಿವರು ದೀಪಕ್ ರಾವ್ ಅವರ ಕುಟುಂಬಕ್ಕೆ ವೈಯುಕ್ತಿಕ 25 ಸಾವಿರ ರೂ. ನೆರವು ನೀಡಿದರು.

    ಜ.3ರಂದು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಯದ್ವಾತದ್ವಾ ದೀಪಕ್ ರಾವ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಕೂಡಲೇ ಮಾಹಿತಿ ಪಡೆದ ಪೊಲೀಸರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದರು. ಸದ್ಯ ಅವರನ್ನು ಅಜ್ಞಾತ ಸ್ಥಳದಲ್ಲಿರಿಸಿ ವಿಚಾರಣೆ ಮುಂದುವರೆಸಿದ್ದಾರೆ. ಅಲ್ಲದೇ ಬಂಧಿತರಿಂದ ಪಡೆದ ಮಾಹಿತಿ ಆಧಾರಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಸೋಮವಾರ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ನಿರಂತರ 5 ವರ್ಷದಿಂದ ಮುಸ್ಲಿಂ ವ್ಯಕ್ತಿಯಿಂದ ಅಯ್ಯಪ್ಪ ಸ್ವಾಮಿ ಮಾಲೆ ಧಾರಣೆ

    ನಿರಂತರ 5 ವರ್ಷದಿಂದ ಮುಸ್ಲಿಂ ವ್ಯಕ್ತಿಯಿಂದ ಅಯ್ಯಪ್ಪ ಸ್ವಾಮಿ ಮಾಲೆ ಧಾರಣೆ

    ವಿಜಯಪುರ: ಸಾಮಾನ್ಯವಾಗಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರನ್ನು ನೋಡಿರುತ್ತೇವೆ. ಆದರೆ ವಿಜಯಪುರದಲ್ಲಿ ಒರ್ವ ಮುಸ್ಲಿಂ ವ್ಯಕ್ತಿ ಅಯ್ಯಪ್ಪ ಸ್ವಾಮಿಗೆ ಮಾಲೆ ಧರಿಸಿದ್ದಾರೆ. ವಿಜಯಪುರದ ಅಲಿಯಾಬಾದ್ ನಿವಾಸಿಯಾದ ಅನ್ವರ್ ಎಂಬವರು ಸೋಮವಾರ ಅಯ್ಯಪ್ಪ ಸ್ವಾಮಿಯ ಮಾಲೆ ಧಾರಣೆ ಮಾಡಿದ್ದಾರೆ.

    ನಿರಂತರ 5 ವರ್ಷಗಳಿಂದ ಅನ್ವರ್ ಮಾಲೆ ಧಾರಣೆ ಮಾಡುತ್ತ ಬರುತ್ತಿದ್ದು, ಇದರಿಂದ ನಾನು ಮತ್ತು ನನ್ನ ಕುಟುಂಬ ಖುಷಿಯಾಗಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಅನೇಕ ಕಷ್ಟಗಳು ಮಾಲೆ ಧಾರಣೆಯ ನಂತರ ಪರಿಹಾರ ಆಗಿವೆ ಎಂದು ಅನ್ವರ್ ತಿಳಿಸಿದ್ದಾರೆ.

     

    ಇನ್ನು ಇದಕ್ಕೆ ಅವರ ಮನೆಯವರು ಸಾಥ್ ನೀಡಿದ್ದು, ಅನ್ವರ್ ಮೂರು ದಿನಗಳ ಕಾಲ ಮಾಲ ಧಾರಣೆ ಮಾಡಿ ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಹಿಂದಿರುಗುತ್ತಾರೆ.

  • 7 ಮಕ್ಕಳಲ್ಲಿ ಐವರನ್ನು ಕಳೆದುಕೊಂಡ ದಂಪತಿ- ಬದುಕಿರುವ ಇಬ್ಬರೂ ಮಕ್ಕಳಿಗೆ ಬೇಕಿದೆ ಚಿಕಿತ್ಸೆ

    7 ಮಕ್ಕಳಲ್ಲಿ ಐವರನ್ನು ಕಳೆದುಕೊಂಡ ದಂಪತಿ- ಬದುಕಿರುವ ಇಬ್ಬರೂ ಮಕ್ಕಳಿಗೆ ಬೇಕಿದೆ ಚಿಕಿತ್ಸೆ

    ಯಾದಗಿರಿ: ಕಡು ಬಡತನದಲ್ಲಿ ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ವಾಸವಾಗಿರುವ ಸಂಗಮ್ಮ ಮತ್ತು ಸಾಯಿಬಣ್ಣ ದಂಪತಿಗೆ 7 ಮಕ್ಕಳು. ಏಳೂ ಮಕ್ಕಳು ಹುಟ್ಟುತ್ತಲೇ ವಿಕಲಾಂಗತೆ ಮತ್ತು ಬುದ್ಧಿಮಾಂದ್ಯತೆ. ಈಗಾಗಲೇ ವಿಧಿಯಾಟಕ್ಕೆ ಐದು ಮಕ್ಕಳು ಸಾವನ್ನಪ್ಪಿವೆ.

    ಗುನ್ನಮ್ಮ(12) & ಪರಶುರಾಮ್(10) ಇವರಿಬ್ಬರೂ ಮನೆಯಲ್ಲಿ ಜೀವಂತ ಶವದಂತೆ ಬದುಕುತ್ತಿದ್ದಾರೆ. ಮಾತನಾಡಲೂ ಕೂಡ ಬಾರದ ಈ ಮಕ್ಕಳ ಎಲ್ಲಾ ನಿತ್ಯ ಕರ್ಮಗಳು ಹಾಸಿಗೆಯಲ್ಲೇ. ಹಸಿವು, ದಾಹ ಈ ಯಾವುದರ ಪರಿವು ಇಲ್ಲದ ಈ ಮಕ್ಕಳಿಗೆ ತಾಯಿಯೇ ಸರ್ವಸ್ವ. ಹೆತ್ತ ಕಂದಮ್ಮಗಳ ಸ್ಥಿತಿ ಕಂಡು ಈ ತಾಯಿ ಮಮ್ಮಲ ಮರಗುತ್ತಿದ್ದಾರೆ.

    ಸಾಯಿಬಣ್ಣಾ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಎರಡು ಮಕ್ಕಳಾದ ಗುನ್ನಮ್ಮ, ಪರಶುರಾಮ್ ಪಾಲನೆ ಪೋಷಣೆಯಲ್ಲಿ ಹೆಂಡತಿಯ ಕಷ್ಟ ನೋಡಲಾರದೆ ಪತ್ನಿ ಜೊತೆ ಮಕ್ಕಳ ಪಾಲನೆ ಮಾಡುತ್ತಿದ್ದಾರೆ. ತುಂಬಾ ಬಡತನವಿದ್ರೂ, ಸಾಲ ಸೂಲವನ್ನು ಮಾಡಿ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಸರಿಪಡಿಸಬೇಕು ಅಂತಾ ಓಡಾಡಿದ್ರು ಪ್ರಯೋಜನವಾಗಿಲ್ಲ. ಬುದ್ಧಿಮಾಂದ್ಯತೆಯಿಂದ ಇರುವ ಮಕ್ಕಳಿಗೆ ಕೆಲವೊಮ್ಮ ಪಿಡ್ಸ್ ಕಾಯಿಲೆ ಕೂಡ ಬರುತ್ತದೆ. ಸದ್ಯ ಸಾಯಿಬಣ್ಣರಿಗೆ ಸ್ವಂತ ಸೂರಿಲ್ಲದ ಕಾರಣ ರಕ್ತ ಸಂಬಂಧಿಗಳ ಮನೆಯಲ್ಲಿ ಆಸರೆ ಪಡೆಯುತ್ತಿದ್ದಾರೆ. ಇದೀಗ ಜೀವನದ ಬಂಡಿ ಸಾಗಿಸಲು ಸಹಾಯ ಮಾಡಿ ಅಂತಾ ಪಬ್ಲಿಕ್ ಟಿವಿಯತ್ತ ಮುಖ ಮಾಡಿದ್ದಾರೆ.

    7 ಮಕ್ಕಳು ಬುದ್ಧಿಮಾಂದ್ಯತೆಯಿಂದ ಹುಟ್ಟಿದ್ರು ಧೃತಿಗೆಡದೆ ಉಳಿದ 2 ಮಕ್ಕಳನ್ನು ಕಷ್ಟಪಟ್ಟು ಪೋಷಣೆ ಮಾಡುತ್ತಿರುವುದು ನಿಜಕ್ಕೂ ಗ್ರೇಟ್. ಕಿತ್ತು ತಿನ್ನುವ ಬಡತನದಲ್ಲಿ ನರಕ ಯಾತನೆ ಅನುಭವಿಸುತ್ತಿರುವ ಈ ಕುಟುಂಬಕ್ಕೆ ಸ್ವಾಭಿಮಾನದಿಂದ ಬದುಕಲು ಸರ್ಕಾರದಿಂದ ಅಗತ್ಯ ನೆರವು ಕೊಡಿಸಬೇಕಾಗಿದೆ.

    https://www.youtube.com/watch?v=udD-dKG-4yE

  • ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!

    ತಿಂಗಳಿಗೆ 30 ಸಾವಿರ ದುಡಿದು 3 ಹೆಂಡ್ತಿಯರನ್ನು ಸಾಕುತ್ತಿರುವ ಭಿಕ್ಷುಕ!

    ರಾಂಚಿ: ತಿಂಗಳಿಗೆ 30 ಸಾವಿರ ರೂ ಸಂಪಾದಿಸಿ 3 ಹೆಂಡತಿಯರನ್ನು ಸಾಕುತ್ತಿರುವ ಭಿಕ್ಷುಕವೊಬ್ಬ ಜಾರ್ಖಂಡ್ ನ ರಾಂಚಿಯಲ್ಲಿ ಪತ್ತೆಯಾಗಿದ್ದಾನೆ.

    ಜಾರ್ಖಂಡ್‍ನ ರಾಂಚಿಯನ್ನು ತನ್ನ ‘ರಾಜಧಾನಿ’ ಮಾಡಿಕೊಂಡಿರುವ ಚೋಟು ಬೈರಕ್ (40) ಎಂಬ ಹೆಸರಿನ ಈ ‘ಕುಬೇರ ಭಿಕ್ಷುಕ’ನದು ವೈಭವೋಪೇತ ಬದುಕು. ಹೆಸರಿಗೆ ಮಾತ್ರ ಈತ ಚೋಟು ಆದರೆ ಸಂಪಾದನೆಯಲ್ಲಿ ಮಾತ್ರ ಮೋಟು ಆಗಿದ್ದಾನೆ.

    ಜಾರ್ಖಂಡ್‍ನ ಚಕ್ರಧರ್‍ಪುರ್ ರೈಲ್ವೆ ನಿಲ್ದಾಣವೇ ಈತನ ಭಿಕ್ಷಾಟನೆಯ ಅಡ್ಡವಾಗಿದ್ದು, ಜೊತೆಗೆ ಮೂವರು ಪತ್ನಿಯರನ್ನು ರಾಣಿಯರಂತೆ ಸಾಕುತ್ತಿದ್ದಾನೆ. ಕಡು ಬಡ ಕುಟುಂಬದಲ್ಲಿ ಜನಿಸಿದ್ದ ಈತನಿಗೆ ಹುಟ್ಟಿನಿಂದಲೇ ಸೊಂಟದಲ್ಲಿ ಬಲವಿರಲಿಲ್ಲ. ಆದ್ದರಿಂದ ಚಿಕ್ಕಂದಿನಿಂದಲೇ ಭಿಕ್ಷೆ ಬೇಡುವ ಕಾಯಕಕ್ಕಿಳಿದಿದ್ದಾನೆ. ಆರಂಭದಲ್ಲಿ ತಿಂಗಳಿಗೆ 1 ಸಾವಿರ ರೂ. ಸಂಪಾದಿಸುತ್ತಿದ್ದ ಚೋಟು, ಈಗ ವರ್ಷಕ್ಕೆ ಕನಿಷ್ಠ 4 ಲಕ್ಷ ರೂ. ಆದಾಯಗಳಿಸುವ ಮಟ್ಟಕ್ಕೆ ಬೆಳೆದಿದ್ದಾನೆ.

    ಭಿಕ್ಷಾಟನೆಯಿಂದ ಬಂದ ಹಣದಲ್ಲಿ ಇದೀಗ ಪಾತ್ರೆ ಅಂಗಡಿಯೊಂದನ್ನು ಬೇರೆ ತೆರೆದಿದ್ದಾನೆ. ಇನ್ನೊಂದು ವಿಶೇಷ ಸಂಗತಿ ಏನಪ್ಪಾ ಅಂದರೆ ಭಿಕ್ಷಾಟನೆ ಮತ್ತು ಪಾತ್ರೆ ಅಂಗಡಿ ‘ಬಿಸಿನೆಸ್’ ಜೊತೆ ಚೋಟು ಮಹಾಶಯ ವೆಸ್ಟಿಗ್ ಎಂಬ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಕೂಡ ಮಾಡುತ್ತಾನೆ. ಕಂಪನಿ ಈತನಿಗೆ ಐಡಿ ಕಾರ್ಡ್ ಕೂಡ ನೀಡಿದೆಯಂತೆ.

    ಚೋಟುಗೆ ಮೂವರು ಹೆಂಡತಿಯರಿದ್ದು, ಮೂವರಿಗೂ ಇಷ್ಟು ಹಣ ಎಂದು ಅವರಿಗೆ ನೀಡುತ್ತಾನೆ. ಮೊದಲ ಹೆಂಡತಿ ಪಾತ್ರೆ ಅಂಗಡಿಯಲ್ಲಿ ನೋಡಿಕೊಂಡರೆ, ಇನ್ನಿಬ್ಬರು ಹೆಂಡತಿಯರು ಚಿಕ್ಕಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುತ್ತಾರೆ.