Tag: family

  • ಹುತಾತ್ಮ ಯೋಧ ಗುರು ಪತ್ನಿಗೆ ಉದ್ಯೋಗ: ಸಿಎಂ ಎಚ್‍ಡಿಕೆ ಭರವಸೆ

    ಹುತಾತ್ಮ ಯೋಧ ಗುರು ಪತ್ನಿಗೆ ಉದ್ಯೋಗ: ಸಿಎಂ ಎಚ್‍ಡಿಕೆ ಭರವಸೆ

    ಹಾಸನ: ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ವೀರಯೋಧ ಗುರು ಅವರ ಕುಟುಂಬಕ್ಕೆ ಸಾಂತ್ವಾನ ತಿಳಿಸಿ, ಗುರು ಅವರ ಪತ್ನಿಗೆ ಉದ್ಯೋಗ ನೀಡಲಾಗುವುದು ಎಂದು ಸಿಎಂ ಕುಮಾರಸ್ವಾಮಿಯವರು ಭರವಸೆ ನೀಡಿದ್ದಾರೆ.

    ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೀರೂರಿನಲ್ಲಿ ಮಾತನಾಡಿದ ಅವರು, ಪುಲ್ವಾಮದಲ್ಲಿ ಉಗ್ರರ ದಾಳಿ ಆಗಬಾರದಿತ್ತು, ಇದು ಅತ್ಯಂತ ದುರಂತ ಮತ್ತು ಭಯಾನಕ ಕೃತ್ಯ. ಇಂದು ಪಾಕಿಸ್ತಾನದ ವಿರುದ್ಧ ನಾವೆಲ್ಲರೂ ಧ್ವನಿ ಎತ್ತಬೇಕು. ಒಟ್ಟಾಗಿ ಹೋರಾಡಬೇಕು. ದಾಳಿಯಲ್ಲಿ ಮೃತಪಟ್ಟ ಯೋಧರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ವೀರ ಮರಣ ಹೊಂದಿರುವ ಯೋಧ ಗುರು ಅವರ ಪತ್ನಿಗೆ ಸರ್ಕಾರದಿಂದ ಉದ್ಯೋಗ ನೀಡಲಾಗುತ್ತದೆ. ಈಗಾಗಲೇ ಈ ಕುರಿತು ನಮ್ಮ ಜಿಲ್ಲಾ ಮಂತ್ರಿಗಳ ಹತ್ತಿರ ಚರ್ಚೆ ನಡೆಸಿದ್ದೇನೆ. ಗುರು ಅವರ ಪತ್ನಿ ಅವರ ವಿದ್ಯಾಭ್ಯಾಸದ ಕುರಿತು ಮಾಹಿತಿ ಪಡೆಯಲು ಮಂತ್ರಿಗಳಿಗೆ ಸೂಚಿಸಿದ್ದೇನೆ. ಅವರ ವಿದ್ಯಾರ್ಹತೆ ಮೇಲೆ ಉದ್ಯೋಗವನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

    ಪದೇ ಪದೇ ಬಿಜೆಪಿಯವರು ಕ್ಲರ್ಕ್ ಎಂಬ ಮಾತು ಹೇಳ್ತಿದ್ದಾರೆ. ನಾನು ಕಾಂಗ್ರೆಸ್ಸಿನ ಕ್ಲರ್ಕ್ ಅಲ್ಲ, ರಾಜ್ಯದ ಜನರ ಕ್ಲರ್ಕ್. ಜನರ ಸಮಸ್ಯೆ ಬಗೆಹರಿಸಲು ಕ್ಲರ್ಕ್ ಆಗಿದ್ದೇನೆ ಎಂದು ಅಮಿತ್ ಶಾ ಅವರ ಹೇಳಿಕೆಗೆ ಸಿಎಂ ತಿರುಗೇಟು ನೀಡಿದರು.

    ಪ್ರೀತಂ ಗೌಡ ಮನೆಯ ಮೇಲೆ ನಡೆದ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಈ ಘಟನೆಯಲ್ಲಿ ಶಾಮೀಲಾದವರ ಮೇಲೆ ತಕ್ಷಣ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಬಿಜೆಪಿಯವರಿಗೆ ನೈತಿಕತೆ ಇಲ್ಲ. ಯಡಿಯೂರಪ್ಪರ ಆಡಿಯೋ ಕೇಳಿದರೆ ಎಲ್ಲರಿಗೂ ಗೊತ್ತಾಗುತ್ತದೆ ಅದು ಯಾರದ್ದು ಅಂತ. ಸ್ಪೀಕರ್‍ಗೆ ಹಣ ಕೊಟ್ಟಿದ್ದೀವಿ ಅಂತಾರೆ ಕಪ್ಪುಹಣ ಬಿಜೆಪಿಗೆ ಎಲ್ಲಿಂದ ಬಂತು? ಯಡಿಯೂರಪ್ಪರ ಆಡಿಯೋ ವಿಚಾರದ ಬಗ್ಗೆ ಅಮಿತ್ ಶಾ ಚರ್ಚಿಸಬೇಕಾಗಿತ್ತು. ಬಿಜೆಪಿಗೆ ಜನರ ಸಮಸ್ಯೆ ಬಗ್ಗೆ ಕಮಿಟ್‍ಮೆಂಟ್ ಇಲ್ಲ ಟೀಕಿಸಿದ್ದಾರೆ.

    ಬಿಜೆಪಿಯವರಿಗೆ ನನ್ನನ್ನು ಕೆಳಗಿಳಿಸಬೇಕು ಎಂಬ ಯೋಚನೆ ಇದೆ. ಆ ದೇವರು ನನಗೆ ಎಷ್ಟು ದಿನ ಅಧಿಕಾರದಲ್ಲಿ ಇರಬೇಕು ಅಂತಾ ಬರೆದಿದ್ದಾನೆ ನೋಡೋಣ. ಅಷ್ಟು ದಿನ ನಾನು ಸಿಎಂ ಆಗಿರುತ್ತೇನೆ. ಸರ್ಕಾರ ಸುಭದ್ರವಾಗಿದೆ ಅಸ್ಥಿರವಾಗಲ್ಲ. ನಾನು ಒಳ್ಳೆಯ ಸರ್ಕಾರ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹುತಾತ್ಮ ಯೋಧನ ಕುಟುಂಬಕ್ಕೆ ಫೋನಿನಲ್ಲಿ ಸಾಂತ್ವಾನ ಹೇಳಿದ ಸಚಿವ ಡಿಸಿ ತಮ್ಮಣ್ಣ

    ಹುತಾತ್ಮ ಯೋಧನ ಕುಟುಂಬಕ್ಕೆ ಫೋನಿನಲ್ಲಿ ಸಾಂತ್ವಾನ ಹೇಳಿದ ಸಚಿವ ಡಿಸಿ ತಮ್ಮಣ್ಣ

    ಮಂಡ್ಯ: ಉಗ್ರನ ಆತ್ಮಾಹುತಿ ದಾಳಿಗೆ ಮಂಡ್ಯದ ಗಂಡು 33 ವರ್ಷದ ಗುರು ಬಲಿಯಾಗಿದ್ದಾರೆ. ಈ ಹೀನ ಕೃತ್ಯವನ್ನು ರಾಜ್ಯ ಹಾಗೂ ಇಡೀ ದೇಶವೇ ಖಂಡಿಸುತ್ತಿದ್ದು, ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಆದ್ರೆ ರಾಜ್ಯದ ಸಾರಿಗೆ ಸಚಿವರು ಮಾತ್ರ ಫೋನಿನಲ್ಲಿ ಮೃತ ಯೋಧ ಗುರು ತಂದೆಯ ಜೊತೆ ಮಾತನಾಡುವ ಮೂಲಕ ಸಾಂತ್ವಾನ ಹೇಳಿದ್ದಾರೆ.

    ಹೌದು. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಡಿಸಿ ತಮ್ಮಣ್ಣ ಅವರು ಮಗನ ಕಳೆದುಕೊಂಡು ದುಃಖದಲ್ಲಿರುವ ಹುತಾತ್ಮ ಯೋಧ ಗುರು ತಂದೆಯ ಜೊತೆ ಫೋನಿನಲ್ಲಿ ಮಾತನಾಡಿದ್ದಾರೆ. ಈ ವೇಳೆ ಹೊನ್ನಯ್ಯ ಅವರು,”ನನ್ನ ಮಗ ಹೊರಟು ಹೋದ್ನಲ್ಲ ಸಾರ್” ಎಂದು ಮಗನನ್ನು ನೆನಪು ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಸಚಿವರ ಈ ನಡೆಗೆ ಸ್ಥಳೀಯರು ಕಿಡಿಕಾರಿದ್ದಾರೆ. ಇದನ್ನೂ ಓದಿ:  ನಮ್ಮವರನ್ನು ಹೇಗೆ ಬ್ಲಾಸ್ಟ್ ಮಾಡಿದ್ರೋ ಹಾಗೆಯೇ ಅವ್ರನ್ನು ಕೊಂದು ಬಿಡಿ ಪ್ಲೀಸ್ – ಗುರು ಪತ್ನಿ ಮನವಿ

    ನಿನ್ನೆಯಿಂದ ಮದ್ದೂರು ತಾಲೂಕಿನ ಗುರು ನಿವಾಸಲ್ಲಿ ನೀರವ ಮೌನ ಆವರಿಸಿದೆ. ಅಲ್ಲದೆ ಪತ್ನಿ, ಹೆತ್ತವರು, ಗೆಳೆಯರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದ್ರೆ ಸ್ಥಳಕ್ಕೆ ಯಾವ ರಾಜಕೀಯ ನಾಯಕರು ಬಂದಿಲ್ಲ. ಹೀಗಾಗಿ ರಾಜ್ಯ ರಾಜಕೀಯ ನಾಯಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಇಂದು ದೂರವಾಣಿಯಲ್ಲಿ ಯೋಧ ಕುಟುಂಬಸ್ಥರೂಂದಿಗೆ ಪೋನ್‍ನಲ್ಲಿ ಮಾತನಾಡಿ ಸಾಂತ್ವಾನ ಹೇಳಿದ್ದಾರೆ.

    ಕೃತ್ಯ ನಡೆದಿದ್ದು ಹೇಗೆ?
    ಗುರುವಾರ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 47 ಮಂದಿ ಸೈನಿಕರು ವೀರಮರಣವನ್ನು ಅಪ್ಪಿದ್ದಾರೆ. ಇದನ್ನೂ ಓದಿ: ಹುತಾತ್ಮ ಯೋಧನ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರದಿಂದ 1 ಕೋಟಿ ರೂ. ಪರಿಹಾರ ಘೋಷಣೆ

    ಸ್ಫೋಟದ ತೀವ್ರತೆ ಎಷ್ಟು ಇತ್ತು ಎಂದರೆ ಸೈನಿಕರ ದೇಹದ ಭಾಗಗಳು ಹೈವೇಯ 100 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಸ್ಫೋಟಕಗೊಂಡ ಬಳಿಕ ಉಳಿದ ಬಸ್ಸುಗಳು ನಿಂತ ಮೇಲೆ ಅವುಗಳ ಮೇಲೂ ಉಗ್ರರು ದಾಳಿ ನಡೆಸಿದ್ದಾರೆ. ಆತ್ಮಾಹುತಿ ದಾಳಿಕೋರ ಬಸ್ಸಿಗೆ ಕಾರನ್ನು ಡಿಕ್ಕಿ ಹೊಡೆದ ಬಳಿಕ ಉಳಿದ ಬಸ್ಸು ನಿಂತ ಕೂಡಲೇ ಉಗ್ರರು ಗುಂಡಿನ ದಾಳಿ ಮಾಡಿದ್ದಾರೆ. ಹೀಗಾಗಿ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಉಗ್ರರ ಈ ದಾಳಿಗೆ ಸಾಕ್ಷ್ಯ ಎಂಬಂತೆ ಬಸ್ಸಿನ ಹಿಂಭಾಗದಲ್ಲಿ ಬುಲೆಟ್ ಗುರುತು ಬಿದ್ದಿದೆ. ವಿಪರೀತ ಮಂಜು ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಶ್ರೀನಗರ ಹೆದ್ದಾರಿ ಕಳೆದ ಎರಡು ದಿನಗಳಿಂದ ಮುಚ್ಚಲ್ಪಟ್ಟಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶ್ರೀಮಂತರ ಸೋಗಿನಲ್ಲಿ ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಇಬ್ಬರ ಹೆಂಡಿರ ಮುದ್ದಿನ ಗಂಡ ಅರೆಸ್ಟ್!

    ಶ್ರೀಮಂತರ ಸೋಗಿನಲ್ಲಿ ಚಿನ್ನಾಭರಣ ಕಳ್ಳತನ ಮಾಡ್ತಿದ್ದ ಇಬ್ಬರ ಹೆಂಡಿರ ಮುದ್ದಿನ ಗಂಡ ಅರೆಸ್ಟ್!

    – ಐಷಾರಾಮಿ ಜೀವನಕ್ಕೆ ಕಳ್ಳತನವನ್ನೇ ವೃತ್ತಿ

    ಚಿಕ್ಕಬಳ್ಳಾಪುರ: ಜಾತ್ರೆ, ಸಭೆ ಸಮಾರಂಭಗಳಿಗೆ ಐಷಾರಾಮಿ ಸೋಗಿನಲ್ಲಿ ಬಂದು ಭರ್ಜರಿಯಾಗಿ ಚಿನ್ನಾಭರಣ ಎಗರಿಸುತ್ತಿದ್ದ ಖತರ್ನಾಕ್ ಕುಟುಂಬ ಸದಸ್ಯರನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದು, ಕೃತ್ಯದ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ಇಬ್ಬರ ಹೆಂಡಿರ ಮುದ್ದಿನ ಗಂಡನ್ನು ಪೊಲೀಸರು ಬಂಧಿಸಿದ್ದಾರೆ.

    ಶ್ರೀಕಾಂತ್ ಬಂಧಿತ ಆರೋಪಿಯಾಗಿದ್ದು, ಈತನೊಂದಿಗೆ ಪತ್ನಿಯರಾದ ಲಕ್ಷ್ಮೀ, ಗಾಯತ್ರಿ ಹಾಗೂ ಸಹೋದರಿ ಶಿವಮ್ಮ ಹಾಗೂ ಭೋಜ ಎಂಬವರನ್ನು ಕೂಡ ಬಂಧಿಸಲಾಗಿದೆ. ಬಂಧಿತರಿಂದ 12 ಲಕ್ಷ ರೂ. ಮೌಲ್ಯದ 410 ಗ್ರಾಂ ಚಿನ್ನಾಭರಣ, 50 ಸಾವಿರ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಸಿಕ್ಕಿ ಬಿದ್ದಿದ್ದು ಹೇಗೆ: ಕಳೆದ ಡಿಸೆಂಬರ್ 23 ರಂದು ಚಿಕ್ಕಬಳ್ಳಾಪುರ ತಾಲೂಕು ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಸೂಲಾಲಪ್ಪನದಿನ್ನೆಯ ಶ್ರೀ ವೀರಾಂಜನೇಯಸ್ವಾಮಿ ದೇವರ ಕಡಲೆಕಾಯಿ ಪರಿಷೆ ನಡೆಯುತ್ತಿತ್ತು. ಈ ವೇಳೆ ಇನ್ನೋವಾ ಕಾರಿನಲ್ಲಿ ಬಂದ ಕಳ್ಳ ಕುಟುಂಬ ಬರೋಬ್ಬರಿ 350 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದರು. ಈ ಬಗ್ಗೆ ಚಿನ್ನ ಕಳೆದುಕೊಂಡ ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಚಿಕ್ಕಬಳ್ಳಾಪುರದ ನಂದಿ ಮತ್ತು ಚಿತ್ರಾವತಿ ಜಾತ್ರೆಯಲ್ಲಿ ನಡೆದ ಕಳ್ಳತನದ ಪ್ರಕರಣಗಳ ನಡುವೆ ಸಮ್ಯಾತೆ ಕಾಣಿಸಿತ್ತು. ಅಲ್ಲದೇ ಈ ಬಗ್ಗೆ ಅನುಮಾನ ಹೆಚ್ಚಾಗಿ ವಿಚಾರಣೆಯನ್ನು ತೀವ್ರಗೊಳಿಸಿದ ವೇಳೆ ಕಾರಿನಲ್ಲಿ ಸಾರ್ವಜನಿಕ ಸಭೆ, ಸಮಾರಂಭಗಳಿಗೆ ಬಂದು ಕಳ್ಳತನ ಮಾಡುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಎಳೆ ಆಧರಿಸಿ ತನಿಖೆ ಮುಂದುವರಿಸಿದ ಸಮಯದಲ್ಲಿ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.

    ಕಳ್ಳತನವೇ ವೃತ್ತಿ ಮಾಡಿಕೊಂಡಿದ್ರು: ಈ ಹಿಂದೆ ಬಡತನದಿಂದ ಸಮಸ್ಯೆಗಳನ್ನು ಎದುರಿಸಿದ್ದ ಈ ಕುಟುಂಬ ಸದಸದ್ಯರು ಇತ್ತೀಚೆಗೆ ಏಕಾಏಕಿ ಐಷಾರಾಮಿ ಜೀವನ ನಡೆಸಲು ಮುಂದಾಗಿದ್ದರು. ತಮ್ಮ ಈ ಐಷಾರಾಮಿ ಜೀವನಕ್ಕೆ ಕುಟುಂಬದ ಎಲ್ಲಾ ಸದಸ್ಯರು ಕೂಡ ಸರಗಳ್ಳತನ ಮಾಡುವುದನ್ನು ವೃತ್ತಿಯಾಗಿ ತೆಗೆದುಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ. ಸದ್ಯ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ 410 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಾನ್ ರವಿ ಪೂಜಾರಿ ಬಂಧನದಿಂದ ನಿಟ್ಟಿಸಿರು ಬಿಟ್ಟ ಮಲ್ಪೆಯ ಕುಟುಂಬ

    ಡಾನ್ ರವಿ ಪೂಜಾರಿ ಬಂಧನದಿಂದ ನಿಟ್ಟಿಸಿರು ಬಿಟ್ಟ ಮಲ್ಪೆಯ ಕುಟುಂಬ

    -ದೀಪಕ್ ಜೈನ್
    ಉಡುಪಿ: ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿಸಲಾಗಿದೆ. ಈ ಮೂಲಕ ಕಳೆದ 15 ವರ್ಷಗಳಿಂದ ರಾಜಕೀಯ- ಸಿನೆಮಾ- ಉದ್ಯಮಿಗಳ ನೆಮ್ಮದಿ ಕೆಡಿಸಿದ್ದ ಪೂಜಾರಿಯ ಉಪಟಳಕ್ಕೆ ಬ್ರೇಕ್ ಬಿದ್ದಿದೆ. ರವಿ ಪೂಜಾರಿ ಬಂಧನ ಯಾರಿಗೆ ಖುಷಿ ಯಾರಿಗೆ ಬೇಸರವಾಗಿದೆಯೋ ಗೊತ್ತಿಲ್ಲ ಮಲ್ಪೆಯ ಈ ಕುಟುಂಬ ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

    ಆಫ್ರಿಕಾ.. ಆಸ್ಟ್ರೇಲಿಯಾ.. ದುಬೈನಲ್ಲಿ ಕುಳಿತು ಭಾರತದ ಮೂಲೆ ಮೂಲೆಯ ಶ್ರೀಮಂತರನ್ನು ಕಾಡುತ್ತಿದ್ದ ರವಿ ಪೂಜಾರಿ ಅಂದರ್ ಆಗಿದ್ದಾನೆ. ಆಫ್ರಿಕಾದ ಸೆನೆಗಲ್ ನಲ್ಲಿ ರವಿ ಪೂಜಾರಿಯ ಅರೆಸ್ಟ್ ಆಗಿದೆ. ಶೂಟೌಟ್, ಕೊಲೆ ಬೆದರಿಕೆ, ಹಫ್ತಾ ವಸೂಲಿಯಲ್ಲಿ ನೂರು ಪ್ರಕರಣಗಳು ರವಿ ಪೂಜಾರಿ ಮೇಲಿದೆ. ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ರವಿ ಪೂಜಾರಿ ಕರಾವಳಿ ಜಿಲ್ಲೆ ಉಡುಪಿಯ ಮಲ್ಪೆಯವನು.

    ಮಲ್ಪೆಯ ವಡಭಾಂಡೇಶ್ವರ ವಾರ್ಡ್ ನಲ್ಲಿರುವ ನೇರ್ಗಿಯ ನಿವಾಸಿ. ತಂದೆ ಕಟ್ಟಿಸಿದ ಮನೆ ಈಗಲೂ ಇದೆ. 11 ವರ್ಷದ ಹಿಂದೆ ರವಿ ಪೂಜಾರಿ ತಂದೆ ಸೂರ್ಯ ಪೂಜಾರಿ ತಾವಿದ್ದ ಮನೆಯನ್ನು ಮಾರಾಟ ಮಾಡಿದ್ದಾರೆ. ವಾಸುದೇವ ಎಂಬ ಮೀನುಗಾರಿಕಾ ವೃತ್ತಿ ಮಾಡುವವರಿಗೆ 25 ಲಕ್ಷ ರೂಪಾಯಿಗೆ ಮಾರಾಟ ಮಾಡಿ ಮುಂಬೈ ಸೇರಿಕೊಂಡಿದ್ದರು. ಅದಾಗಿ ಮನೆ ಖರೀದಿಸಿದ ಮಾಲಕರಿಗೆ ನಿರಂತರ ವಿಚಾರಣೆ ಆರಂಭವಾಗಿದೆ. ರವಿ ಪೂಜಾರಿ ಕುಟುಂಬಕ್ಕೂ ನಿಮಗೂ ಹೇಗೆ ಲಿಂಕ್ , ವ್ಯವಹಾರವಿದೆಯೇ..? ಈಗಲೂ ಸಂಪರ್ಕವಿದೆಯೇ..? ಹೀಗೆ ಕಳೆದ 10 ವರ್ಷಗಳಿಂದ ಮುಂಬೈ- ಮಂಗಳೂರು ಸಿಸಿಬಿ ನಿರಂತರ ವಿಚಾರಣೆ ಎಂಬ ಹಿಂಸೆ ಕೊಟ್ಟಿದ್ದಾರೆ. ಇದೀಗ ರವಿ ಪೂಜಾರಿ ಬಂಧನವಾಗಿದೆ ಎಂಬ ಸುದ್ದಿಕೇಳಿ ವಾಸುದೇವ ಸುಗುಣ ದಂಪತಿ ನೆಮ್ಮದಿಯ ನಗು ಬೀರಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮನೆ ಮಾಲಕಿ ಸುಗುಣ, ಮನೆ ಖರೀದಿಸುವಾಗ ರವಿ ಪೂಜಾರಿ ಮನೆ ಅಂತ ನಮಗೆ ಗೊತ್ತಿರಲಿಲ್ಲ. 10 ವರ್ಷದಿಂದ ನಿರಂತರ ನಮಗೆ ಬರೀ ಟೆನ್ಶನ್. ಪೊಲೀಸರು ಆಗಾಗ ಬಂದು ರವಿಪೂಜಾರಿ ಬಗ್ಗೆ ವಿಚಾರಣೆ ಮಾಡುತ್ತಿದ್ದರು. ಮುಂಬೈ ಪೊಲೀಸರಂತು ಆಗಾಗ ಬಂದು ಪ್ರಶ್ನೆ ಮಾಡುತ್ತಿದ್ದರು. ಶೂ ಹಾಕಿಕೊಂಡು ಮನೆಯೊಳಗೆ ಬರ್ತಾಯಿದ್ರು. ನಮ್ಮ ಮನೆಗೆ ನಾವು ಚಪ್ಪಲಿ ಹಾಕಲ್ಲ. ಇವರ್ಯಾರು ಶೂ ಹಾಕಿಕೊಂಡು ಬರಲು ಅಂತ ಕೋಪ ಬರ್ತಾಯಿತ್ತು. ಕನ್ನಡ, ತುಳು ಬಾರದ ಪೊಲೀಸರು ನಮ್ಮತ್ರ ಎಂತ ಪ್ರಶ್ನೆ ಕೇಳೂದು ಅರ್ಥವಾಗುತ್ತಾ ಇರಲಿಲ್ಲ. ಈಗ ಆ ವ್ಯಕ್ತಿಯ ಬಂಧನವಾಗಿದೆ ಅಂತ ನೆಮ್ಮದಿಯಾಗಿದೆ. ಇನ್ನಾದ್ರೂ ಚಿಂತೆಯಿಲ್ಲದೆ ಭಯವಿಲ್ಲದೆ ಜೀವನ ನಡೆಸಬಹುದು ಎಂದು ಹೇಳಿದರು.

    ಮನೆ ಖರೀದಿಸಿದ ವಾಸುದೇವ ಮಾತನಾಡಿ, ನಮಗೆ ಭಯ ಇಲ್ಲ. 25 ಲಕ್ಷ ಕೊಟ್ಟು 20 ಸೆಂಟ್ಸ್ ಜಾಗದಲ್ಲಿ ಮನೆ ಸಮೇತ ಖರೀದಿ ಮಾಡಿದ್ದೇವೆ. 10 ವರ್ಷದ ಹಿಂದೆ ಅಗ್ರಿಮೆಂಟ್ ಆಗಿದೆ. ನಾವು ರವಿಪೂಜಾರಿಯನ್ನು ನೋಡ್ಲೇ ಇಲ್ಲ. ನಮಗೂ ಅವರಿಗೂ ಯಾವುದೇ ಲಿಂಕ್ ಇಲ್ಲ. ನಾವು ಸಮುದ್ರದಲ್ಲಿ ಕಸುಬು ಮಾಡುವವರು ನಮಗ್ಯಾಕೆ ಭಯ ಅಂತ ಹೇಳಿದರು.

    ರವಿ ಪೂಜಾರಿ ಉಡುಪಿಯ ಮಲ್ಪೆ ಮೂಲದವರಾದ್ರೂ ಪೂಜಾರಿ ಬಗ್ಗೆ ಸ್ಥಳೀಯರಿಗೆ ಗೊತ್ತಿರೋದು ಕಡಿಮೆ. ಐದಾರು ತಿಂಗಳ ಹಿಂದೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಧಮ್ಕಿ ಹಾಕಿ ಹಫ್ತಾಕ್ಕೆ ಬೇಡಿಕೆಯಿಟ್ಟಿದ್ದ. ದೊಡ್ಡ ಸುದ್ದಿಯಾಗಿ ಹಾಲಾಡಿ ಒಬ್ಬ ಸಜ್ಜನ ಅಂತ ತೀರ್ಮಾನಕ್ಕೆ ಬಂದು ಕ್ಷಮೆ ಕೇಳಿದ್ದ. ರವಿ ಪೂಜಾರಿ ಮೇಲೆ ಉಡುಪಿ ಜಿಲ್ಲೆಯಲ್ಲಿ 10 ಪ್ರಕರಣಗಳು ದಾಖಲಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.

    ರವಿ ಪೂಜಾರಿ ಬಂಧನಕ್ಕೂ ಮೊದಲು ಆತನ ಸಹಚರರನ್ನು ಬಂಧಿಸಿ ತೀವ್ರವಾಗಿ ವಿಚಾರಣೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ಬಂಧನವಾಗಿದೆ. ರವಿ ಪೂಜಾರಿ ಹೆಸರು ಹೇಳಿಕೊಂಡು ಸಾಕಷ್ಟು ಯುವಕರ ಗುಂಪುಗಳು ಕರಾವಳಿಯಲ್ಲಿ ಕಾರ್ಯಾಚರಿಸುತ್ತಿತ್ತು. ರವಿಪೂಜಾರಿ ಬಂಧನದ ಮೂಲಕ ಅದಕ್ಕೆಲ್ಲಾ ಫುಲ್ ಸ್ಟಾಪ್ ಬೀಳಲಿದೆ ಅಂತ ಪೊಲೀಸರು ಹೇಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 12 ದಿನದ ಮಗು ಸೇರಿ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು

    12 ದಿನದ ಮಗು ಸೇರಿ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು

    ಭೋಪಾಲ್: 12 ದಿನದ ಮಗು ಸೇರಿ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಪ್ರದೇಶದ ರಾಯಿಸೆನ್ ಜಿಲ್ಲೆಯಲ್ಲಿ ನಡೆದಿದೆ.

    ಸಂಜುವಿನ ಪತ್ನಿ, ಆತನ 12 ದಿನದ ಮಗಳು, 11 ವರ್ಷದ ಬಾಮೈದ ಹಾಗೂ ಅತ್ತೆ ಮೃತ ವ್ಯಕ್ತಿಗಳು ಎಂದು ತಿಳಿದು ಬಂದಿದೆ. ನಾಲ್ವರ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಮನೆಯ ಮಾಲೀಕ ಸಂಜು ಬುರಿಯಾ(25) ಗಂಭೀರ ಸ್ಥಿತಿಯಲ್ಲಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಚಿಮಣಿಯ ಹೊಗೆಯಿಂದಾಗಿ ಅಮ್ಲಜನಕ ಕೊರತೆಯಾಗಿ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಮೃತದೇಹಗಳಲ್ಲಿ ಯಾವುದೇ ವಿಷದ ಅಂಶ ಪತ್ತೆಯಾಗಿಲ್ಲ. ಅಲ್ಲದೇ ಅವರ ಮನೆಯಲ್ಲಿ ಯಾವುದೇ ಡೆತ್‍ನೋಟ್ ಇರಲಿಲ್ಲ. ಹೀಗಾಗಿ ನಾಲ್ವರ ಸಾವಿಗೆ ಕಾರಣ ಏನು ಎನ್ನುವ ಖಚಿತ ಉತ್ತರ ಇನ್ನೂ ಸಿಕ್ಕಿಲ್ಲ.

    ಸಂಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನ ಕುಟುಂಬದ ಎಲ್ಲ ಸದಸ್ಯರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ ಎಂದು ರಾಯಿಸನ್ ಎಎಸ್‍ಪಿ ಎಪಿ ಸಿಂಗ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದಕ್ಕೆ ಸಂತೋಷವು ಇದೆ, ಖೇದವೂ ಆಗ್ತಿದೆ: ಚಂದ್ರಶೇಖರ್ ಕಂಬಾರ

    ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದಕ್ಕೆ ಸಂತೋಷವು ಇದೆ, ಖೇದವೂ ಆಗ್ತಿದೆ: ಚಂದ್ರಶೇಖರ್ ಕಂಬಾರ

    ಹುಬ್ಬಳ್ಳಿ: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಧಾರವಾಡಕ್ಕೆ ಬರುತ್ತಿರುವದಕ್ಕೆ ಸಂತೋಷವೂ ಅನಿಸುತ್ತೆ, ಇನ್ನೊಂದೆಡೆ ಖೇದವೂ ಆಗುತ್ತಿದೆ ಎಂದು ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಹೇಳಿದ್ದಾರೆ.

    ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 84 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನಮ್ಮೂರಿಗೆ ನಾನು ಬರುತ್ತಿರೋದು ಸಂತೋಷ ಆಗುತ್ತಿದೆ. ಆದ್ರೆ ಎಂ.ಎಂ.ಕಲಬುರ್ಗಿ ಹಾಗೂ ಗಿರಡ್ಡಿಯಂತ ಸ್ನೇಹಿತರನ್ನ ಕಳೆದುಕೊಂಡಿದ್ದೇನೆ. ಈ ಬಗ್ಗೆ ನನಗೆ ತುಂಬಾ ಖೇದ ಇದೆ. ಕಲಬುರ್ಗಿ ಹಾಗೂ ಗಿರಡ್ಡಿಯವರು ನನಗೆ ಬಹಳ ಆತ್ಮೀಯ ಸ್ನೇಹಿತರು. ಅವರು ಇಂದು ನಮ್ಮ ಮಧ್ಯೆ ಇಲ್ಲ ಎಂಬುವುದೇ ಬೇಸರದ ಸಂಗತಿ ಎಂದು ಹೇಳಿದರು.

    ಈ ಬಾರಿ ಸಮ್ಮೇಳನದಲ್ಲಿ ಸಂಸ್ಕೃತಿ, ಭಾಷೆ, ಗಡಿಗಳ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಬೇಕು. ಅಲ್ಲದೆ ಈ ಭಾಗದ ಸಮಸ್ಯೆಯಾದ ಮಹದಾಯಿಯ ಬಗ್ಗೆಯೂ ಚರ್ಚೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪತ್ನಿ ಸತ್ಯಬಾಮಾ, ಮಗಳು ಜಯಶ್ರೀ ಕಂಬಾರ ಹಾಗೂ ಮೊಮ್ಮಗಳು ಪ್ರೀತಿ ಅವರೊಂದಿಗೆ ಡಾ. ಚಂದ್ರಶೇಖರ ಕಂಬಾರ ಅವರು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದಾರೆ.

    ಕುಟುಂಬ ಸಮೇತರಾಗಿ ಆಗಮಿಸಿದ ಡಾ. ಚಂದ್ರಶೇಖರ ಕಂಬಾರ ಅವರನ್ನು ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಲಿಂಗರಾಜ್ ಅಂಗಡಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ನಂತರ ಎಲ್ಲರು ಜೊತೆಗೂಡಿ ಧಾರವಾಡದತ್ತ ಪಯಣ ಬೆಳೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 6 ಜನ ಕುಟುಂಬಸ್ಥರನ್ನ ಗುಂಡಿಟ್ಟು ಕೊಂದು, ತಾನೂ ಆತ್ಮಹತ್ಯೆ ಮಾಡ್ಕೊಂಡ

    6 ಜನ ಕುಟುಂಬಸ್ಥರನ್ನ ಗುಂಡಿಟ್ಟು ಕೊಂದು, ತಾನೂ ಆತ್ಮಹತ್ಯೆ ಮಾಡ್ಕೊಂಡ

    ಬ್ಯಾಂಕಾಕ್: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ವ್ಯಕ್ತಿಯೋರ್ವ ಕುಡಿದ ನಶೆಯಲ್ಲಿ ತನ್ನ ಇಬ್ಬರು ಮಕ್ಕಳು ಸೇರಿ ಒಟ್ಟು 6 ಮಂದಿಗೆ ಗುಂಡಿಕ್ಕಿ ಕೊಂದು, ಕೊನೆಗೆ ತಾನು ಗುಂಡು ಹೊಡೆದುಕೊಂಡು ಮೃತಪಟ್ಟ ಅಮಾನವೀಯ ಘಟನೆ ಥೈಲ್ಯಾಂಡ್‍ನ ದಕ್ಷಿಣ ಪ್ರಾಂತ್ಯದ ಚುವ್ಫೋನ್‍ನಲ್ಲಿ ಮಂಗಳವಾರ ನಡೆದಿದೆ.

    ಸುಚೀಪ್ ಸಾನ್ರ್ಸುಂಗ್ ಎಂಬ ವ್ಯಕ್ತಿ ಕುಡಿದ ನಶೆಯಲ್ಲಿ ತನ್ನ ಕುಟುಂಬದವರನ್ನೇ ಗುಂಡಿಕ್ಕಿ ಕೊಂದಿದ್ದಾನೆ. ಹೊಸ ವರ್ಷದ ಸಂಭ್ರಮವನ್ನು ಆಚರಿಸಲು ಸುಚೀಪ್ ತನ್ನ ಮಕ್ಕಳು ಹಾಗೂ ಪತ್ನಿಯ ಜೊತೆಗೆ ಆಕೆಯ ತವರು ಮನೆಗೆ ತೆರಳಿದ್ದನು. ಈ ವೇಳೆ ಪತ್ನಿ ಮನೆಯವರು ತನ್ನನ್ನು ಸರಿಯಾಗಿ ಬರಮಾಡಿಕೊಳ್ಳಲಿಲ್ಲ ಎಂದು ಸುಚೀಪ್ ಕೋಪಗೊಂಡಿದ್ದನು. ಇದನ್ನೂ ಓದಿ: 15 ಸೆಕೆಂಡ್‍ನಲ್ಲಿ ಹೋಯ್ತು ಮೂವರ ಪ್ರಾಣ-ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಅದೇ ಕೋಪಕ್ಕೆ ಕಂಠ ಪೂರ್ತಿ ಕುಡಿದಿದ್ದ ಸುಚೀಪ್ ನಶೆಯಲ್ಲಿ ತನ್ನ 9 ವರ್ಷದ ಮಗ ಹಾಗೂ 6 ವರ್ಷದ ಮಗಳಿಗೆ ಗುಂಡಿಕ್ಕಿ ಕೊಂದಿದ್ದಾನೆ. ಆಗ ತಡೆಯಲು ಬಂದ ಪತ್ನಿಯ ಇಬ್ಬರು ಸಹೋದರರು ಹಾಗೂ ಇಬ್ಬರು ಮಹಿಳೆಯರಿಗೂ ಗುಂಡು ಹೊಡೆದು ಸಾಯಿಸಿದ್ದಾನೆ. ತದನಂತರ ತಾನು ಕೂಡ ಅದೇ ಗನ್‍ನಿಂದ ಗುಂಡು ಹಾರಿಸಿಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮನೆಯಲ್ಲಿ ಪಾರ್ಟಿ ಮುಗಿಸಿದ ಬಳಿಕ ಈ ಘಟನೆ ಸಂಭವಿಸಿದ್ದು, ಸುಮಾರು 10 ನಿಮಿಷದಲ್ಲಿ ಸಂಭ್ರಮದಲ್ಲಿದ್ದ ಮನೆ ಸಾವಿನ ಮನೆ ಆಯಿತು.

    ಥೈಲ್ಯಾಂಡ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗನ್ ಬಳಸುತ್ತಾರೆ. ಆದರಿಂದ ಈ ಭಾಗದಲ್ಲಿಯೇ ಗುಂಡು ಹೊಡೆದು ಮೃತಪಟ್ಟ ಪ್ರಕರಣಗಳು ಹೆಚ್ಚಾಗಿ ದಾಖಲಾಗೋದು. ಇಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಗನ್ ಎತ್ತುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡು ಲಾರಿ ಮಧ್ಯೆ ಸಿಲುಕಿ ಕಾರು ಅಪ್ಪಚ್ಚಿ- ಒಂದೇ ಕುಟುಂಬದ 10 ಮಂದಿ ದುರ್ಮರಣ

    ಎರಡು ಲಾರಿ ಮಧ್ಯೆ ಸಿಲುಕಿ ಕಾರು ಅಪ್ಪಚ್ಚಿ- ಒಂದೇ ಕುಟುಂಬದ 10 ಮಂದಿ ದುರ್ಮರಣ

    ಗಾಂಧಿನಗರ: 2 ಲಾರಿ ಮತ್ತು ಎಸ್‍ಯುವಿ ಕಾರು ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 10 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಗುಜರಾತ್‍ನ ಕಚ್ ಜಿಲ್ಲೆಯ ಭಚೌ ಹೆದ್ದಾರಿಯಲ್ಲಿ ಭಾನುವಾರದಂದು ನಡೆದಿದೆ.

    ಭಾನುವಾರ ಸಂಜೆ ಉಪ್ಪನ್ನು ಸಾಗಿಸುತ್ತಿದ್ದ ಲಾರಿಯೊಂದು ಹೆದ್ದಾರಿಯಲ್ಲಿದ್ದ ಡಿವೈಡರ್​ಗೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಎಸ್‍ಯುವಿ ಕಾರಿಗೆ ಡಿಕ್ಕಿ ಹೊಡೆಡಿದೆ. ಇದೇ ವೇಳೆ ಕಾರಿನ ಹಿಂದೆ ಇನ್ನೊಂದು ಲಾರಿ ಬಂದ ಪರಿಣಾಮ ಎರಡು ಲಾರಿಗಳ ನಡುವೆ ಕಾರು ಸಿಲುಕಿ ನಜ್ಜುಗುಜ್ಜಾಗಿದೆ.

    ಕಾರಿನಲ್ಲಿ ಒಟ್ಟು 11 ಮಂದಿ ಪ್ರಯಾಣಿಸುತ್ತಿದ್ದು, 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಹಾಗೂ ಓರ್ವನ ಸ್ಥಿತಿ ಗಂಭೀರವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಮೃತ ಪಟ್ಟವರೆಲ್ಲ ತಮ್ಮ ಹುಟ್ಟೂರು ಭಚ್‍ಗೆ ಹೊಸ ವರ್ಷ ಆಚರಿಸಲು ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ.

    ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಗುಜರಾತ್‍ನ ಸಿಎಂ ವಿಜಯ್ ರೂಪಾಣಿ ಮೃತರ ಕುಟುಂಬಕ್ಕೆ ಪರಿಹಾರವನ್ನು ನೀಡಲಾಗುವುದು, ಯಾವುದೇ ಸಹಾಯ ಬೇಕಾದರೂ ಸರ್ಕಾರ ಮಾಡಲು ಸಿದ್ಧವಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಇಂದು ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯತಿಥಿ- 9 ವರ್ಷ ಕಳೆದ್ರೂ ನಿರ್ಮಾಣವಾಗಿಲ್ಲ ಸ್ಮಾರಕ

    ಇಂದು ಸಾಹಸಸಿಂಹ ವಿಷ್ಣುವರ್ಧನ್ ಪುಣ್ಯತಿಥಿ- 9 ವರ್ಷ ಕಳೆದ್ರೂ ನಿರ್ಮಾಣವಾಗಿಲ್ಲ ಸ್ಮಾರಕ

    – ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

    ಬೆಂಗಳೂರು: ಇಂದು ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್‍ರ 9ನೇ ಪುಣ್ಯತಿಥಿ. ಬೆಳಗ್ಗೆ ವಿಷ್ಣು ಕುಟುಂಬ ಅಭಿಮಾನ್ ಸ್ಟುಡಿಯೋಗೆ ಆಗಮಿಸಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ.

    ವಿಷ್ಣು ಪುಣ್ಯತಿಥಿ ಅಂಗವಾಗಿ ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾದೆ. ಕೇವಲ ಅಭಿಮಾನ್ ಸ್ಟುಡಿಯೋ ಮಾತ್ರವಲ್ಲ. ಆಟೋ ರಿಕ್ಷಾಗಳಲ್ಲೂ ಸಾಹಸ ಸಿಂಹನ ಭಾವಚಿತ್ರ ಹಾಕಿ, ಪೂಜೆ ಸಲ್ಲಿಸಲಾಗುತ್ತಿದೆ.

    ವಿಷ್ಣುವರ್ಧನ್ ಅವರು ದೈಹಿಕವಾಗಿ ನಮ್ಮ ನಡುವೆ ಇಲ್ಲವಾದರೂ ಕೋಟ್ಯಾನುಕೋಟಿ ಜನರ ಹೃದಯ ಸಿಂಹಾಸನದಲ್ಲಿ ಅಚ್ಚಳಿಯದೇ ಕುಳಿತಿದ್ದಾರೆ. ಪ್ರತಿದಿನ ಪ್ರತಿ ಕ್ಷಣನೂ ವಿಷ್ಣುನಾ ಆರಾಧಿಸೋ ಭಕ್ತವಲಯ ಪ್ರತಿವರ್ಷ ದಾದಾ ಪುಣ್ಯಭೂಮಿಗೆ ಬಂದು ನಮಿಸುತ್ತಾರೆ. ಈ ವರ್ಷವೂ ರಾಜ್ಯದ ಮೂಲೆಮೂಲೆಯಿಂದ ಭಕ್ತರು ವಿಷ್ಣು ಪುಣ್ಯತಿಥಿಗೆ ಕೆಂಗೇರಿಯ ಅಭಿಮಾನ್ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: ಅಂಬಿಗೊಂದು ನ್ಯಾಯ, ವಿಷ್ಣುವಿಗೊಂದು ನ್ಯಾಯವೇ – ಮತ್ತೆ ಸಿಡಿದ ಅನಿರುದ್ಧ್

    ಒಂಬತ್ತು ವರ್ಷ ಕಳೆದರೂ ಕರ್ಣನ ಪುಣ್ಯ ಭೂಮಿ ನಿರ್ಮಾಣಗೊಂಡಿಲ್ಲ ಅನ್ನೋ ಕೊರಗು ಇದ್ದೇ ಇದೆ. ಇತ್ತೀಚೆಗಷ್ಟೇ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ರು. ದಾದಾ ಪುಣ್ಯ ಭೂಮಿ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು. ಇಲ್ಲವಾದಲ್ಲಿ ಸಿಂಹಗಳನ್ನ ಬಡಿದೆಬ್ಬಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ರು. ಆ ಡೆಡ್‍ಲೈನ್ ಇಂದಿಗೆ ಮುಗಿಯಲಿದೆ. ಇದನ್ನೂ ಓದಿ: ವಿಷ್ಣುವರ್ಧನ್ ಅಳಿಯ ಅನಿರುದ್ಧ್ ವಿರುದ್ಧ ಸಿಎಂ ಕೆಂಡಾಮಂಡಲ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೆಜಿಎಫ್‍ಗಾಗಿ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿದ್ರು ನಟಿ..!

    ಕೆಜಿಎಫ್‍ಗಾಗಿ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿದ್ರು ನಟಿ..!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾವನ್ನು ಈಗಾಗಲೇ ನಟ-ನಟಿಯರು, ನಿರ್ದೇಶಕರು ಸೇರಿದಂತೆ ಸಿನಿಮಾರಂಗದವರು ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈಗ ಸ್ಯಾಂಡಲ್‍ವುಡ್ ನ ನಟಿಯೊಬ್ಬರು ಅಭಿಮಾನಿಯಾಗಿ ಇಡೀ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಿದ್ದಾರೆ.

    ನಟಿ ಅಮೂಲ್ಯ ಜಗದೀಶ್ ಅವರು ತಮ್ಮ ಕುಟುಂಬಕ್ಕಾಗಿ 25 ಟಿಕಿಟ್ ಬುಕ್ ಮಾಡಿ ‘ಕೆಜಿಎಫ್’ ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಅಮೂಲ್ಯ ಅವರೇ ಟ್ವೀಟ್ ಮಾಡಿ ಹೇಳಿಕೊಂಡಿದ್ದಾರೆ.

    ಟ್ವೀಟ್ ನಲ್ಲೇನಿದೆ..?
    ನಟಿ ಅಮೂಲ್ಯ, “ಮೊದಲ ಬಾರಿಗೆ ಕನ್ನಡ ಅಭಿಮಾನಿಯಾಗಿ ನನ್ನ ಇಡೀ ಕುಟುಂಬಕ್ಕೆ 25 ಟಿಕೆಟ್ ಬುಕ್ ಮಾಡಿ ಕೆಜಿಎಫ್ ಸಿನಿಮಾ ನೋಡಿದೆ. ಕನ್ನಡ ಇಂಡಸ್ಟ್ರಿಯನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಇಡೀ ‘ಕೆಜಿಎಫ್’ ಚಿತ್ರತಂಡಕ್ಕೆ hats off .. ‘ಕೆಜಿಎಫ್’ ಸಿನಿಮಾ ನಮಗೆ ಹೆಮ್ಮೆ ತಂದಿದೆ. ಕೆಜಿಎಫ್ ನ ಚಾಪ್ಟರ್ 2ಗಾಗಿ ಕಾಯುತ್ತಿರುವೆ” ಎಂದು ಬರೆದು ಅವರು ಬುಕ್ ಮಾಡಿದ್ದ ಟಿಕೆಟ್ ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.

    ಈಗಾಗಲೇ ‘ಕೆಜಿಎಫ್’ ಸಿನಿಮಾ ಭಾರತದಾದ್ಯಂತ ಹವಾ ಕ್ರಿಯೆಟ್ ಮಾಡಿದೆ. ಕೆಜಿಎಫ್ ಸಿನಿಮಾ ಪಂಚಭಾಷೆಯಲ್ಲಿ 2000ಕ್ಕೂ ಅಧಿಕ ಚಿತ್ರಮಂದಿರಲ್ಲಿ ಬಿಡುಗಡೆಗೊಂಡು ಅಪಾರ ಮೆಚ್ಚುಗೆಯನ್ನು ಗಳಿಸುತ್ತಿದೆ. ಬಿಡುಗಡೆಯಾದ ಐದು ದಿನದಲ್ಲಿಯೇ 100 ಕೋಟಿ ರೂ. ಗಳಿಸಿದ್ದು, ಈ ಮೂಲಕ ನೂರು ಕೋಟಿ ಕ್ಲಬ್ ಪಟ್ಟಿಗೆ ಸೇರಿದ ಮೊದಲ ಕನ್ನಡ ಸಿನಿಮಾವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv