Tag: family

  • ಓರ್ವನಿಂದ ಐವರಿಗೆ, ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ

    ಓರ್ವನಿಂದ ಐವರಿಗೆ, ಒಂದೇ ಕುಟುಂಬದ ನಾಲ್ವರಿಗೆ ಕೊರೊನಾ

    ಕಾರವಾರ: ಒಂದೇ ಕುಟುಂಬದ ನಾಲ್ವರಿಗೆ ಸೋಂಕು ಹರಡಿದ್ದು ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ.

    ಉತ್ತರ ಕನ್ನಡದಲ್ಲಿ ರೋಗಿ ನಂಬರ್ 36ರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಂದೇ ರೋಗಿಯಿಂದ ಮೂವರಿಗೆ ಕೊರೊನಾ ಹರಡಿದೆ. ಚಿಕ್ಕಬಳ್ಳಾಪುರದ ರೋಗಿಯಿಂದ ಐವರಿಗೆ ಕೊರೊನಾ ಸೋಂಕು ಬಂದಿದೆ.

    ಉತ್ತರ ಕನ್ನಡ ಮೂಲದ ವ್ಯಕ್ತಿ ಮಾರ್ಚ್ 21 ರಂದು ದುಬೈಯಿಂದ ಮಂಗಳೂರಿಗೆ ಆಗಮಿಸಿ ಭಟ್ಕಳಕ್ಕೆ ತೆರಳಿದ್ದರು. ಇವರ ಸಂಪರ್ಕಕ್ಕೆ ಬಂದಿದ್ದರಿಂದ 54 ವರ್ಷದ ಪತ್ನಿ(ರೋಗಿ 65), 28 ವರ್ಷದ ಮಗಳು(ರೋಗಿ 28), 23 ವರ್ಷದ ಮಗಳು(ರೋಗಿ) ಕೊರೊನಾ ಪೀಡಿತರಾಗಿದ್ದು ಕುಟುಂಬದ ಎಲ್ಲ ಸದಸ್ಯರನ್ನು ಉತ್ತರ ಕನ್ನಡದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 68: 21 ವರ್ಷದ ಪುರುಷರೊಬ್ಬರು, ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಬೆಳೆಸಿ ಮಾರ್ಚ್ 17ರಂದು ಭಾರತಕ್ಕೆ ಹಿಂದಿರುಗಿರುವ ಪ್ರಯಾಣ ಹಿನ್ನೆಲೆಯಿರುತ್ತದೆ ಮತ್ತು ರೋಗಿ-25ರ(ಮಗ) ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಉತ್ತರ ಕನ್ನಡದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 69: 23 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 70: 70 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 71: 32 ವರ್ಷದ ಮಹಿಳೆ ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರೋಗಿ 72: 38 ವರ್ಷದ ಪುರುಷರೊಬ್ಬರು ಚಿಕ್ಕಬಳ್ಳಾಪುರದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ನಿಗದಿತ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿರುತ್ತದೆ.

    ರೋಗಿ 73: 18 ವರ್ಷದ ಪುರುಷರೊಬ್ಬರು ಹಿಂದುಪುರ, ಆಂಧ್ರಪ್ರದೇಶದ ನಿವಾಸಿಯಾಗಿದ್ದು, ರೋಗಿ-19ರ ಸಂಪರ್ಕ ಹೊಂದಿರುತ್ತಾರೆ. ಈ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ರೋಗಿ 74: 63 ವರ್ಷದ ಮಹಿಳೆ ಬೆಂಗಳೂರಿನ ನಿವಾಸಿಯಾಗಿದ್ದು, ಲಂಡನ್ ದೇಶಕ್ಕೆ ಪ್ರಯಾಣ ಮಾಡಿ ಮಾರ್ಚ್ 16ರಂದು ಭಾರತಕ್ಕೆ ಮರಳಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಒಂದೇ ಕುಟುಂಬದ 12 ಜನಕ್ಕೆ ಕೊರೊನಾ ಪಾಸಿಟಿವ್

    ಒಂದೇ ಕುಟುಂಬದ 12 ಜನಕ್ಕೆ ಕೊರೊನಾ ಪಾಸಿಟಿವ್

    – ಮನೆ ಮಂದಿಯೆಲ್ಲಾ ಆಸ್ಪತ್ರೆಗೆ ದಾಖಲು

    ಮುಂಬೈ: ಒಂದೇ ಕುಟುಂಬದ 12 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ನಡೆದಿದೆ.

    ಈ ಕುಟುಂಬದ ನಾಲ್ಕು ಜನಕ್ಕೆ ಮೊದಲು ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಅವರನ್ನು ಮಾರ್ಚ್ 19ರಂದು ಮೀರಾಜ್‍ನ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಿ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ನಾಲ್ವರು ಸೌದಿ ಅರೇಬಿಯಾದಲ್ಲಿರುವ ಹಜ್‍ಗೆ ಭೇಟಿ ನೀಡಿ ವಾಪಸ್ ಬಂದಿದ್ದರು ಎಂದು ತಿಳಿದು ಬಂದಿತ್ತು.

    ಮಾರ್ಚ್ 21ರಂದು ಇದೇ ಕುಟುಂಬದ ಇನ್ನೂ ಐವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಇದಾದ ನಂತರ ಗುರುವಾರ ಇದೇ ಕುಟುಂಬದ ಉಳಿದ ಮೂವರಿಗೂ ಕೊರೊನಾ ವೈರಸ್ ಇರುವುದು ಪರೀಕ್ಷೆ ನಡೆಸಿದಾಗ ದೃಢಪಟ್ಟಿದೆ. ಈ ಮೂಲಕ ಮೊದಲ ನಾಲ್ಕು ಜನ ಮತ್ತು ನಂತರ ಐದು ಜನ ನೆನ್ನೆ ಮೂರು ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಮೂಲಕ ಒಂದೇ ಕುಟುಂಬದ 12 ಜನ ಕೊರೊನಾದಿಂದ ಆಸ್ಪತ್ರೆ ಸೇರಿದ್ದಾರೆ.

    ಈ 12 ಜನರಲ್ಲಿ 11 ಜನ ಮೂಲತಃ ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರದವರಾಗಿದ್ದು, ಇದೇ ಕುಟುಂಬದ ಮತ್ತೋರ್ವ ಹೆಣ್ಣು ಮಗಳು ಮದುವೆಯಾಗಿ ಕೊಲ್ಹಾಪುರ ಜಿಲ್ಲೆಯ ಪೆಥ್ವಾಡ್ಗಾಂವ್ ಊರಲ್ಲಿ ಇದ್ದರು. ಆದರೆ ಕುಟುಂಬವರು ಹಜ್‍ಗೆ ಹೋಗಿ ಬಂದಿದ್ದಾರೆ ಎಂದು ಆಕೆಯು ಕೂಡ ತವರು ಮನೆಗೆ ಬಂದು ಹೋಗಿದ್ದಳು. ಈ ಕಾರಣದಿಂದ ಆಕೆಗೆ ಕೂಡ ವೈರಸ್ ತಗುಲಿದ್ದು, ಆಕೆಯೂ ಈಗ ಆಸ್ಪತ್ರೆ ಪಾಲಾಗಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಾಂಗ್ಲಿ ಜಿಲ್ಲೆಯ ಆರೋಗ್ಯಾಧಿಕಾರಿ ಸಂಜಯ್ ಸಲುಂಖೆ, ಈ ಕೊರೊನಾ ಪೀಡಿತ ಕುಟುಂಬದ ಜೊತೆ ಸಂಪರ್ಕದಲ್ಲಿ ಇದ್ದ ಅವರ 11 ಜನ ಸಂಬಂಧಿಕರ ಬ್ಲಡ್ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಆ ವರದಿಯ ಫಲಿತಾಂಶ ನಮಗೆ ಇಂದು ಸಂಜೆ ಸಿಗುತ್ತದೆ. ನಮ್ಮ ಇನ್ನೊಂದು ವೈದ್ಯರ ತಂಡವನ್ನು ಇಸ್ಲಾಂಪುರ ಕಳುಹಿಸಿದ್ದೇವೆ. ಅವರು ಆ ಗ್ರಾಮದಲ್ಲಿ ಈ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದ 23 ಜನರ ಬ್ಲಡ್ ಸ್ಯಾಂಪಲ್ ತರುತ್ತಿದ್ದಾರೆ. ಈ 23 ಜನರನ್ನು ಆಗಾಲೇ ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗಿದೆ ಎಂದು ತಿಳಿಸಿದ್ದಾರೆ.

    ಮೊದಲು ಈ ಕುಟುಂಬದ ನಾಲ್ಕು ಜನರಲ್ಲಿ ಕೊರೊನಾ ಪಾಸಿಟಿವ್ ಬಂದ ತಕ್ಷಣ ಅವರ ಕುಟುಂಬದ 27 ಜನರನ್ನು ಹೋಂ ಕ್ವಾರೆಂಟೈನ್‍ನಲ್ಲಿ ಇಡಲಾಗಿತ್ತು. ಈ 27 ಜನರಲ್ಲಿ 7 ಜನರ ಸ್ಯಾಂಪಲ್ ಅನ್ನು ಮಾರ್ಚ್ 23ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಅವರಲ್ಲಿ ಐವರಿಗೆ ಪಾಸಿಟಿವ್ ಬಂದರೆ ಇಬ್ಬರಿಗೆ ನೆಗೆಟಿವ್ ಬಂದಿತ್ತು. ಈಗ ಈ ಕುಟುಂಬದ 12 ಜನರನ್ನು ಮೀರಾಜ್‍ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಇಸ್ಲಾಂಪುರ ಗ್ರಾಮವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲಾಗಿದೆ ಎಂದು ಸಲುಂಖೆ ಮಾಹಿತಿ ನೀಡಿದ್ದಾರೆ.

  • ಪೊಲೀಸರಿಗೂ ಕುಟುಂಬವಿದೆ – ಬೇಸರಗೊಂಡು ವಿಡಿಯೋ ಮಾಡಿದ ಶಿವಣ್ಣ

    ಪೊಲೀಸರಿಗೂ ಕುಟುಂಬವಿದೆ – ಬೇಸರಗೊಂಡು ವಿಡಿಯೋ ಮಾಡಿದ ಶಿವಣ್ಣ

    – ನಮಗಾಗಿ ದೇಶ ದೇಶಕ್ಕಾಗಿ ನಾವು

    ಬೆಂಗಳೂರು: ಬುಧವಾರ ಬೆಂಗಳೂರಿನ ಸಂಜಯ್ ನಗರದಲ್ಲಿ ಪೊಲೀಸರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿದ್ದನ್ನು ನೋಡಿದ ನಟ ಶಿವರಾಜ್ ಕುಮಾರ್ ಅವರು ಬೇಸರಗೊಂಡು ವಿಡಿಯೋವೊಂದನ್ನು ಮಾಡಿದ್ದಾರೆ.

    ಕೊರೊನಾ ವೈರಸ್ ಪ್ರಕರಣಗಳು ದೇಶದಲ್ಲಿ ಜಾಸ್ತಿಯಾಗುತ್ತಿರುವ ಕಾರಣ ಪ್ರಧಾನಿ ಮೋದಿ ಅವರು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಈ ವೇಳೆ ರೋಡಿಗಿಳಿದವರನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಇಬ್ಬರು ಯುವಕರು ಹಲ್ಲೆ ಮಾಡಿದ್ದರು. ಈ ವಿಚಾರವನ್ನು ಟಿವಿಯಲ್ಲಿ ನೋಡಿ ಬೇಸರಗೊಂಡಿರುವ ಶಿವಣ್ಣ ವಿಡಿಯೋ ಮಾಡಿ ಈ ರೀತಿ ಮಾಡಬೇಡಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪೊಲೀಸರ ಹಲ್ಲೆಯನ್ನು ಖಂಡಿಸಿ ವಿಡಿಯೋ ಮಾಡಿರುವ ಶಿವಣ್ಣ, ಅದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ನಾನು ಟಿವಿ ನೋಡುತ್ತಿದ್ದೆ. ಈ ವೇಳೆ ಪೊಲೀಸರ ಮೇಲೆ ಕೈ ಮಾಡಿದ್ದನ್ನು ನೋಡಿದೆ. ಅದು ತುಂಬಾನೇ ತಪ್ಪು ಎಂಬುದು ನನ್ನ ಭಾವನೆ. ಪೊಲೀಸರು ನಮಗಾಗಿ ಹಾಗೂ ಈಗ ಇರು ಪರಿಸ್ಥಿತಿಗಾಗಿ ಹೀಗೆ ಮಾಡುತ್ತಿದ್ದಾರೆ. ನೀವು ಅದಕ್ಕೆ ಸಹಕರಿಸಬೇಕು. ಯಾರು ಮನೆಯಿಂದ ಹೊರಗೆ ಬಾರದೇ ಇದ್ದರೆ ಯಾರಿಗೂ ಏಟು ಬೀಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕೊರೊನಾ ವೈರಸ್ ತುಂಬಾ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ಎಲ್ಲರಿಗೂ ತೊಂದರೆಯಿದೆ. ಕೊರೊನಾ ನಮಗೂ ತಂದರೆಯೇ ಹಾಗೇ ನಿಮಗೂ ತೊಂದರೆಯೇ. ಈ ವೇಳೆ ಈ ರೀತಿ ಹಲ್ಲೆ ಮಾಡಿದರೆ ಅರೆಸ್ಟ್ ಆಗುತ್ತೀರಿ. ಅರೆಸ್ಟ್ ಆದರೆ ನಿಮ್ಮ ಕುಟುಂಬಕ್ಕೂ ತೊಂದರೆ ಅವರಿಗೂ ನೋವಾಗುತ್ತದೆ. ಪೊಲೀಸರಿಗೂ ಕುಟುಂಬವಿರುತ್ತದೆ. ಟಿವಿಯಲ್ಲಿ ಇದನ್ನು ನೋಡಿ ನನಗೆ ಬಹಳ ನೋವಾಯ್ತು. ಕರ್ನಾಟಕದವರಾಗಿ ನಾವು ರೀತಿ ಮಾಡಬಾರದು ಎಂದು ಶಿವಣ್ಣ ತಿಳಿ ಹೇಳಿದ್ದಾರೆ.

    ಒಬ್ಬ ಕರ್ನಾಟಕದ ಸೈನಿಕ ಸಿಯಾಚಿನ್‍ಯಿಂದ ಹೇಳುತ್ತಾರೆ. ನಾವು ಕಷ್ಟಪಟ್ಟು ಗಡಿಯಲ್ಲಿ ನಿಮ್ಮೆಲ್ಲರನ್ನೂ ಕಾಪಾಡುತ್ತೇವೆ. ಹೀಗಿರುವಾಗ ನಮ್ಮ ದೇಶವನ್ನು ಉಳಿಸಿಕೊಳ್ಳಲು ನಮ್ಮ ದೇಶದ ಜನತೆ ಯಾಕೆ ಸಹಕರಿಸುತ್ತಿಲ್ಲ ಎಂದು ಕೇಳಿದ್ದಾರೆ. ನಾವು ದೇಶದ ಕೆಲಸವನ್ನು ಹೇಳಿಸಿಕೊಂಡು ಮಾಡಬಾರದು. ಗಡಿಯಲ್ಲಿ ನಮಗಾಗಿ ಸೈನಿಕರು ಸಾಕಷ್ಟು ಕಷ್ಟ ಪಡುತ್ತಾರೆ. ನಾವು ಕೂಡ ಇದಕ್ಕೆ ಸಹಕಾರ ನೀಡಬೇಕು. ನಮಗಾಗಿ ದೇಶ, ದೇಶಕ್ಕಾಗಿ ನಾವು, ದೇಶಕ್ಕೆ ಈಗ ಒಂದು ತೊಂದರೆ ಬಂದಿದೆ ಎಲ್ಲರೂ ಸೇರಿ ಅದನ್ನು ಎದುರಿಸಬೇಕು ಎಂದು ಶಿವಣ್ಣ ಹೇಳಿದ್ದಾರೆ.

  • ದುಬೈನಿಂದ ಬಂದ ಗರ್ಭಿಣಿಗೆ ಕೊರೊನಾ ಸೋಂಕು ಇಲ್ಲ- ನಿಟ್ಟುಸಿರು ಬಿಟ್ಟ ಕುಟುಂಬ, ವೈದ್ಯರು

    ದುಬೈನಿಂದ ಬಂದ ಗರ್ಭಿಣಿಗೆ ಕೊರೊನಾ ಸೋಂಕು ಇಲ್ಲ- ನಿಟ್ಟುಸಿರು ಬಿಟ್ಟ ಕುಟುಂಬ, ವೈದ್ಯರು

    ಉಡುಪಿ: ದುಬೈನಿಂದ ಬಂದ ಗರ್ಭಿಣಿಗೆ ಕೊರೊನಾ ಸೋಂಕಿನ ಸೋಂಕಿನ ಲಕ್ಷಣಗಳು ಇಲ್ಲ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ಗರ್ಭಿಣಿಯ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ಉಡುಪಿ ಜಿಲ್ಲೆಯ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಮಾರ್ಚ್ 16ರಂದು ಗರ್ಭಿಣಿ ದಾಖಲಾಗಿದ್ದರು. ಆಕೆ ವಿಪರೀತ ಕಫದಿಂದ ನರಳಾಡುತ್ತಿದ್ದರು. ವಾರದ ಹಿಂದೆ ದುಬೈನಿಂದ ಬಂದಿರುವುದರಿಂದ ಗರ್ಭಿಣಿ ಮೇಲೆ ಸಂಶಯ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮಣಿಪಾಲ ಕೆಎಂಸಿಗೆ ಆಕೆಯನ್ನು ಅಡ್ಮಿಟ್ ಮಾಡಿದ್ದರು.

    ಗರ್ಭಿಣಿಯ ಗಂಟಲಿನ ದ್ರವವನ್ನು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಗೆ ಉಡುಪಿಯಿಂದ ರವಾನಿಸಲಾಗಿತ್ತು. ವೈದ್ಯಕೀಯ ವರದಿ ಉಡುಪಿ ಡಿಎಚ್‍ಒ ಕೈಸೇರಿದ್ದು, ಕೊರೊನ ಸೋಂಕಿನ ಯಾವುದೇ ಲಕ್ಷಣಗಳು ಇಲ್ಲ ಎಂದು ಉಲ್ಲೇಖವಾಗಿದೆ. ಇಡೀ ಕರ್ನಾಟಕದಲ್ಲಿ ಇದು ಗಮನ ಸೆಳೆದ ಪ್ರಕರಣವಾಗಿದ್ದು ವೈದ್ಯಕೀಯ ವರದಿ ಕೈಸೇರಿದ ಕೂಡಲೇ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಕೆಎಂಸಿಯ ವೈದ್ಯರು ಮಹಿಳೆಯ ಕಫ ಮತ್ತು ಶೀತ ನಿವಾರಣೆಗಾಗಿ ಚಿಕಿತ್ಸೆಯನ್ನು ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಮಹಿಳೆಯಲ್ಲಿ ಸೋಂಕಿನ ಲಕ್ಷಣ ಇದ್ದ ಕಾರಣ ಆಕೆಯನ್ನು 15 ದಿನ ನಿಗಾದಲ್ಲಿ ಇಡಲು ವೈದ್ಯರು ಸಲಹೆ ಕೊಟ್ಟಿದ್ದಾರೆ.

  • ಡಿನ್ನರ್ ವೇಳೆ ಕುಟುಂಬಕ್ಕೆ ಸೋಂಕಿದ ಕೊರೊನಾ – ತಾಯಿ, ಇಬ್ಬರು ಮಕ್ಕಳು ಸಾವು

    ಡಿನ್ನರ್ ವೇಳೆ ಕುಟುಂಬಕ್ಕೆ ಸೋಂಕಿದ ಕೊರೊನಾ – ತಾಯಿ, ಇಬ್ಬರು ಮಕ್ಕಳು ಸಾವು

    – ಒಂದೇ ಕುಟುಂಬದ 7 ಮಂದಿಗೆ ತಟ್ಟಿದ ಕೊರೊನಾ
    – ಕುಟುಂಬದ ಸಂಪರ್ಕದಲ್ಲಿದ್ದ 20 ಮಂದಿಗೆ ಗೃಹಬಂಧನ

    ವಾಷಿಂಗ್ಟನ್: ಸಂಬಂಧಿಕರೊಂದಿಗೆ ಡಿನ್ನರ್ ಮಾಡುವಾಗ ನ್ಯೂಜೆರ್ಸಿಯ ಕುಟುಂಬವೊಂದಕ್ಕೆ ಕೊರೊನಾ ತಗುಲಿದ್ದು, ಸೋಂಕಿನಿಂದ ಬಳಲುತ್ತಿದ್ದ ಒಂದೇ ಕುಟುಂಬದ 7 ಮಂದಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

    ಗ್ರೇಸ್ ಫಸ್ಕೋ(73), ರೀಟಾ(55) ಹಾಗೂ ಕಾರ್ಮಿನ್ ಫಸ್ಕೋ ಕೊರೊನಾದಿಂದ ಸಾವನ್ನಪ್ಪಿದ ದುರ್ದೈವಿಗಳು. ಸಂಬಂಧಿಕರ ಜೊತೆ ಡಿನ್ನರ್ ಮಾಡಿದ ಬಳಿಕ ಗ್ರೇಸ್ ಅವರ ಮನೆಮಂದಿಗೆಲ್ಲಾ ಸೋಂಕು ತಗುಲಿತ್ತು. ಒಟ್ಟು 7 ಮಂದಿಗೆ ಸೋಂಕು ತಗುಲಿತ್ತು. ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

    ದುರಾದೃಷ್ಟವಶಾತ್ ಸೋಂಕು ಹೆಚ್ಚಾಗಿ ಕೆಳೆದ 5 ದಿನಗಳ ಹಿಂದೆ ಗ್ರೇಸ್ ಅವರ ಮಗಳು ರೀಟಾ ಸಾವನ್ನಪ್ಪಿದ್ದರು. ಆ ಬಳಿಕ ಬುಧವಾರ ಕಾರ್ಮಿನ್ ಅವರು ಸೋಂಕಿಗೆ ಬಲಿಯಾಗಿದ್ದರು. ಈ ವಿಚಾರ ತಾಯಿ ಗ್ರೇಸ್‍ಗೆ ತಿಳಿದಿರಲಿಲ್ಲ. ಮಗ ತೀರಿಹೋದ ಕೆಲ ಗಂಟೆಗಳಲ್ಲೇ ತಾಯಿಯನ್ನು ಕೂಡ ಕೊರೊನಾ ಬಲಿಪಡೆದಿದೆ. ಹೀಗೆ ಒಂದೇ ಕುಟುಂಬ ಮೂವರು ಒಬ್ಬರ ಮೇಲೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.

    ಗ್ರೇಸ್ ಅವರ ಉಳಿದ 4 ಮಂದಿ ಮಕ್ಕಳಿಗೂ ಸೋಂಕು ತಗುಲಿದ್ದು, ಈ ಕುಟುಂಬದ ಸಂಪರ್ಕದಲ್ಲಿದ್ದ ಸುಮಾರು 20 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಶಂಕೆ ಇರುವ ಕಾರಣಕ್ಕೆ 20 ಮಂದಿಯನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಈ ಬಗ್ಗೆ ಫಸ್ಕೋ ಅವರ ಸಹೋದರಿ ಮಾತನಾಡಿ, ಇದು ವಿನಾಶಕಾರಿ ವಿಚಾರ ನನ್ನ ಸಹೋದರಿ, ಸಹೋದರ, ತಾಯಿಯನ್ನು ಕಳೆದುಕೊಂಡು ಬಹಳ ದುಃಖವಾಗುತ್ತಿದೆ. ನಮ್ಮ ಕುಟುಂಬಕ್ಕೆ ಸಹಾಯ ಬೇಕಿದೆ, ಸಹಾಯ ಮಾಡಿ ಎಂದು ಕೋರಿಕೊಂಡಿದ್ದಾರೆ.

    ಕುಟುಂಬದ ಇತರೆ ಸದ್ಯಸರನ್ನು ತಪಾಸಣೆ ಮಾಡಿ ಗೃಹಬಂಧನದಲ್ಲಿ ಇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಅದರಲ್ಲೂ ಸೋಂಕು ಶಂಕಿತ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಜಗತ್ತಿನಾದ್ಯಂತ 2,18,000 ಮಂದಿಗೆ ಸೋಂಕು ತಗುಲಿದ್ದು, 8 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

    ಅಮೆರಿಕದಲ್ಲಿ 50 ರಾಜ್ಯದಲ್ಲಿ ಸೋಂಕು ಹರಡಿದ್ದು, 150 ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 9,400 ಕೊರೊನಾ ದೃಢಪಟ್ಟ ಪ್ರಕರಣಗಳು ವರದಿಯಾಗಿದೆ.

  • ನನ್ನ ಮಕ್ಕಳು ಹೀಗೆ ಬದುಕಬೇಕಾಗಿರೋದು ದುಃಖದ ಸಂಗತಿ ಎಂದ ಸನ್ನಿ

    ನನ್ನ ಮಕ್ಕಳು ಹೀಗೆ ಬದುಕಬೇಕಾಗಿರೋದು ದುಃಖದ ಸಂಗತಿ ಎಂದ ಸನ್ನಿ

    ಮುಂಬೈ: ವಿಶ್ವದೆಲ್ಲೆಡೆ ಆಂತಕ ಸೃಷ್ಟಿಸಿರುವ ಕೊರೊನಾ ವೈರಸ್ ಹೆಸರು ಕೇಳಿದರೆ ಭಯಬೀಳುವ ಪರಿಸ್ಥಿತಿ ಸದ್ಯ ಎಲ್ಲೆಡೆ ನಿರ್ಮಾಣವಾಗಿದೆ. ಈ ಮದ್ಯೆ ಬಾಲಿವುಡ್ ನಟಿ, ಮಾದಕ ಚೆಲುವೆ ಸನ್ನಿ ಲಿಯೋನ್ ನನ್ನ ಮಕ್ಕಳು ಹೀಗೆ ಮಾಸ್ಕ್ ಧರಿಸಿ ಬದುಕಬೇಕಾಗಿರುವುದು ಬೇಸರದ ಸಂಗತಿ ಎಂದು ಹೇಳಿಕೊಂಡಿದ್ದಾರೆ.

    ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ಸೋಂಕಿನಿಂದ ಆತಂಕಕ್ಕೊಳಗಾದ ಸನ್ನಿ ಲಿಯೋನ್ ತಮ್ಮ ಕುಟುಂಬವನ್ನು ಸೋಂಕಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ತಮ್ಮ ಮೂವರು ಮಕ್ಕಳಿಗೂ ಮಾಸ್ಕ್ ಧರಿಸುವುದನ್ನ ಅಭ್ಯಾಸ ಮಾಡಿಸುತ್ತಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಸನ್ನಿ ಫೋಟೋವನ್ನು ಹಂಚಿಕೊಂಡು ಕೊರೊನಾ ವೈರಸ್‍ನಿಂದ ದೂರವಿರಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸೋದು ಮುಖ್ಯ ಎನ್ನೊದನ್ನ ಸಾರಿದ್ದಾರೆ.

    https://www.instagram.com/p/B9zI1xDBjeh/

    ಪೋಸ್ಟ್ ನಲ್ಲಿ ಏನಿದೆ?
    ಇದು ಹೊಸ ಯುಗ, ನನ್ನ ಮಕ್ಕಳು ಹೀಗೆ ಮಾಸ್ಕ್ ಧರಿಸಿ ಬದುಕಬೇಕಾಗಿರೋದು ದುಃಖದ ಸಂಗತಿ. ಆದ್ರೆ ಹೀಗೆ ಇರೋದು ತುಂಬಾ ಮುಖ್ಯ. ಮಕ್ಕಳಿಗೆ ಮಾಸ್ಕ್ ಧರಿಸುವುದನ್ನ ಅಭ್ಯಾಸ ಮಾಡಿಸುತ್ತಿದ್ದೇನೆ ಎಂದು ಬರೆದು, ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬ್ಬರ್ ಹಾಗೂ ಮೂವರು ಮಕ್ಕಳ ಜೊತೆ ಮಾಸ್ಕ್ ಧರಿಸಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    https://www.instagram.com/p/B75SyG5gbxM/?utm_source=ig_embed

    ಈ ಹಿಂದೆ ಕೊರೊನಾ ಭೀತಿಗೆ ಅಭಿಮಾನಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸನ್ನಿ ಹಿಂಜರಿದಿದ್ದರು. ಪತಿ ಡೇನಿಯಲ್ ವೆಬ್ಬರ್ ಜೊತೆ ಫಿಲ್ಮ್ ಶೂಟಿಂಗ್‍ನಲ್ಲಿ ಬ್ಯುಸಿಯಿದ್ದ ಸನ್ನಿ ಚಿತ್ರದ ಚಿತ್ರೀಕರಣಕ್ಕಾಗಿ ಸನ್ನಿ ವಿದೇಶಕ್ಕೆ ತೆರಳಿದ್ದರು. ಶೂಟಿಂಗ್ ಬಳಿಕ ಭಾರತಕ್ಕೆ ಹಿಂತಿರುಗಿದ್ದಾಗ ವಿಮಾನ ನಿಲ್ದಾಣದಲ್ಲಿ ಅವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು. ಆದರೆ ಸನ್ನಿ ಅಭಿಮಾನಿಗಳಿಂದ ದೂರ ಓಡಿದ್ದರು.

    ಸನ್ನಿ ಯಾವಾಗಲೂ ತಮ್ಮ ಚಿತ್ರತಂಡದ ಜೊತೆ ಎಂಜಾಯ್ ಮಾಡುತ್ತಿರುತ್ತಾರೆ. ಅಲ್ಲದೆ ಅಭಿಮಾನಿಗಳು ಸೆಲ್ಫಿ ಕೇಳಿದರೆ ಅವರನ್ನು ನಿರಾಸೆ ಮಾಡದೇ ಪೋಸ್ ನೀಡುತ್ತಾರೆ. ಆದರೆ ಕೊರೊನಾ ವೈರಸ್‍ನಿಂದಾಗಿ ಸನ್ನಿ ಅಭಿಮಾನಿಗಳಿಗೆ ಸೆಲ್ಫಿ ನೀಡಲು ಹಿಂಜರಿದಿದ್ದರು. ಅಲ್ಲದೇ ಕೊರೊನಾದಿಂದ ದೂರವಿರಿ, ಸೇಫ್ ಆಗಿರಿ ಎಂದು ಅಭಿಮಾನಿಗಳಿಗೆ ಸನ್ನಿ ಕಿವಿ ಮಾತು ಹೇಳಿದ್ದರು.

    ಒಟ್ಟು 162 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,82,605 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,226 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 7,171 ಮಂದಿ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಂಡಿದ್ದಾರೆ. ಸುಮಾರು 79,881 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ 95,546 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ 6,163 ಮಂದಿ ಸ್ಥಿತಿ ಚಿಂತಾಜನಕವಾಗಿದೆ.

    ಭಾರತಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 129 ಮಂದಿ ತುತ್ತಾಗಿದ್ದು, 13 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 114 ಮಂದಿ ಕೊರೊನಾದಿಂದ ಬಳಳುತ್ತಿದ್ದಾರೆ. ಈಗಾಗಲೇ ಕೊರೊನಾಗೆ ಕರ್ನಾಟಕದ ಕಲಬುರಗಿ, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ತಲಾ ಒಬ್ಬರಂತೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಕರ್ನಾಟದಲ್ಲಿ ಒಟ್ಟು 11 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು 39 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.

  • ಮದ್ವೆಯಾದ ಐದು ತಿಂಗ್ಳಿಗೆ ರೈಲ್ವೆ ಸಿಬ್ಬಂದಿ ನೇಣಿಗೆ ಶರಣು

    ಮದ್ವೆಯಾದ ಐದು ತಿಂಗ್ಳಿಗೆ ರೈಲ್ವೆ ಸಿಬ್ಬಂದಿ ನೇಣಿಗೆ ಶರಣು

    – ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಶಂಕೆ
    – ಮೃತದೇಹದ ಬಳಿ ಡೆತ್‍ನೋಟ್ ಪತ್ತೆಯಾಗಿಲ್ಲ

    ಹೈದರಾಬಾದ್: ಮದುವೆಯಾದ ಐದೇ ತಿಂಗಳಿಗೆ ರೈಲ್ವೆ ಸಿಬ್ಬಂದಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಆಂಧ್ರ ಪ್ರದೇಶದ ಹೈದರಾಬಾದ್‍ನಲ್ಲಿ ನಡೆದಿದೆ.

    ರಾಹುಲ್ ಯಾದವ್(26) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೋಮವಾರ ರಾಹುಲ್ ಮೃತದೇಹ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೌಟುಂಬಿಕ ಕಲಹದಿಂದ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಐದು ತಿಂಗಳ ಹಿಂದೆ ರಾಹುಲ್ ಮದುವೆಯಾಗಿದ್ದನು. ಸೋಮವಾರ ಬೆಳಗ್ಗೆ ರಾಹುಲ್ ಕೆಲಸಕ್ಕೆ ಹೋಗಬೇಕಿತ್ತು. ಆದರೆ ಆತ ಸುತ್ತಮುತ್ತ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಆತನನ್ನು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆತ ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ತಕ್ಷಣ ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಗ ವೈದ್ಯರು ರಾಹುಲ್ ಮೃತಪಟ್ಟಿದ್ದಾನೆ ಅಂತ ತಿಳಿಸಿದರು ಎಂದರು.

    ಈ ಘಟನೆ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆಗಾಗಿ ಆತನ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಕೌಟುಂಬಿಕ ಸಮಸ್ಯೆಯಿಂದ ರಾಹುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ರಾಹುಲ್ ಮೃತದೇಹದ ಬಳಿ ಪೊಲೀಸರಿಗೆ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ.

    ಈ ಬಗ್ಗೆ ನೆರೆಡ್ಮೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • ಮಕ್ಕಳಾದ ಸಂತಸಕ್ಕೆ ಹರಕೆ ತೀರಿಸಿ ವಾಪಸ್ ಬರ್ತಿದ್ದ ಮೂವರ ದುರ್ಮರಣ

    ಮಕ್ಕಳಾದ ಸಂತಸಕ್ಕೆ ಹರಕೆ ತೀರಿಸಿ ವಾಪಸ್ ಬರ್ತಿದ್ದ ಮೂವರ ದುರ್ಮರಣ

    – ಕಾರ್ ಪಲ್ಟಿಯಾಗಿ ಸಂಪೂರ್ಣ ನಜ್ಜುಗುಜ್ಜು
    – ಬಿಜೆಪಿ ಮಾಜಿ ಅಧ್ಯಕ್ಷನ ಪತ್ನಿ, ಅತ್ತೆ ಮಗು ಸಾವು

    ಗದಗ: ದೇವರ ಹರಕೆ ತೀರಿಸಿ ಮರಳಿ ಬರುವ ವೇಳೆ ಕಾರು ಪಲ್ಟಿಯಾದ ಪರಿಣಾಮ ಒಂದೆ ಕುಟುಂಬದ ಮೂವರು ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಲಕ್ಕುಂಡಿ ಬೂದಿ ಬಸವೇಶ್ವರ ದೇವಸ್ಥಾನ ಬಳಿ ನಡೆದಿದೆ.

    ಬಿಜೆಪಿ ಕೊಪ್ಪಳ ನಗರ ಘಟಕದ ಮಾಜಿ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್‍ನ ಜಿಲ್ಲಾ ಅಧ್ಯಕ್ಷ ಶಿವಕುಮಾರ್ ಹಕ್ಕಾಪಕ್ಕಿ ಅವರ ಅತ್ತೆ, ಹೆಂಡತಿ ಹಾಗೂ ಮಗು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಪ್ರಮೀಳಾ ಮಸ್ಕಿ (68), ಯಶೋಧಾ ಹಕ್ಕಾಪಕ್ಕಿ (43) ಮತ್ತು ಆರ್ಯಾ (16 ತಿಂಗಳು ಮಗು) ಮೃತ ದುರ್ದೈವಿಗಳು. ಅವಳಿ ಜವಳಿ ಮಕ್ಕಳಲ್ಲಿ ಗಂಡು ಮಗು ಆರ್ಯಾ ಸಾವನ್ನಪ್ಪಿದ್ದು, ಹೆಣ್ಣು ಮಗು ಬದುಕುಳಿದೆ. ಆ ಮಗುಗೂ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ಮದುವೆಯಾಗಿ ಬಹಳ ವರ್ಷಗಳಾದರೂ ಹಕ್ಕಾಪಕ್ಕಿ ದಂಪತಿಗೆ ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನವಲಗುಂದದ ರಾಮಲಿಂಗ ಹೋಳಿ ಕಾಮಣ್ಣನಿಗೆ ಹರಕೆ ಕಟ್ಟಿಕೊಂಡಿದ್ದರು. ಒಂದೂವರೆ ವರ್ಷದ ನಂತರ ಮಕ್ಕಳಾದ ಸಂತಸದಲ್ಲಿ ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ಸೋಮವಾರ ಹರಕೆ ತೀರಿಸಿ ಕೊಪ್ಪಳಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ ಲಕ್ಕುಂಡಿ ಬೂದಿ ಬಸವೇಶ್ವರ ದೇವಸ್ಥಾನ ಬಳಿ ವೇಗವಾಗಿ ಚಲಿಸುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

    ಅಪಘಾತದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಉಳಿದ ಇಬ್ಬರು ಪ್ರಯಾಣಿಕರನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಿವಕುಮಾರ್ ಹಕ್ಕಾಪಕ್ಕಿ ಮತ್ತು ಇನ್ನೊಂದು ಅವಳಿ ಮಗು ಅಪಾಯದಿಂದ ಪಾರಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

    ಮಾಹಿತಿ ತಿಳಿದು ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ತನ್ನ ಹುಡುಗರಿಂದ ಅಮಾಯಕರ ಕೊಲೆ – ಕುಟುಂಬದ ಜೊತೆ ಕ್ಷಮೆ ಕೇಳಿದ್ದ ರವಿ ಪೂಜಾರಿ

    ತನ್ನ ಹುಡುಗರಿಂದ ಅಮಾಯಕರ ಕೊಲೆ – ಕುಟುಂಬದ ಜೊತೆ ಕ್ಷಮೆ ಕೇಳಿದ್ದ ರವಿ ಪೂಜಾರಿ

    ಬೆಂಗಳೂರು: ಭೂಗತ ಪಾತಕಿ ಅಂದರೆ ರಕ್ತ ಪಿಪಾಸು ಎಂದು ಹೇಳುತ್ತಿದ್ದರು. ಆದರೆ ಈ ರವಿ ಪೂಜಾರಿ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚನೆ ಮಾಡಿದ್ದಾನೆ. ಅದು ಕೂಡ ಸತ್ತವರ ಕುಟುಂಬಕ್ಕೆ ಕರೆ ಮಾಡಿ ಕ್ಷಮೆಯಾಚನೆ ಮಾಡಿದ್ದಾನೆ. ಅದನ್ನೇ ಪೊಲೀಸರ ಮುಂದೆ ಹೇಳಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಬೆಂಗಳೂರಿನ ತಿಲಕ್‍ನಗರದ ಶಬನಂ ಬಿಲ್ಡರ್ಸ್ ಮಾಲೀಕನ ಬಳಿ ಹಣ ವಸೂಲಿಗೆ ಪ್ರಯತ್ನ ಮಾಡಿದ್ದ ರವಿ ಪೂಜಾರಿ ಆ ಮಾಲೀಕನನ್ನು ಕೊಲೆ ಮಾಡುವುದಕ್ಕೆ ಹುಡುಗರನ್ನು ಕಳುಹಿಸಿದ್ದನು. ಆದರೆ ಬಿಲ್ಡರ್ ಕಚೇರಿಯಲ್ಲಿ ಮಾಲೀಕ ಇಲ್ಲದೆ ಇದ್ದ ಕಾರಣ ರವಿ ಪೂಜಾರಿ ಹುಡುಗರು ಟೈಪಿಸ್ಟ್‍ಗಳಾದ ಶೈಲಜಾ ಮತ್ತು ರವಿಯನ್ನು ಕೊಲೆ ಮಾಡಿ ಬಂದಿದ್ದರು. ಇದನ್ನೂ ಓದಿ: ರವಿ ಪೂಜಾರಿ ಇಲ್ಲಿ ನಟೋರಿಯಸ್- ಅಲ್ಲಿ ಸಮಾಜ ಸೇವಕ!

    ಈ ವಿಚಾರ ತಿಳಿದ ರವಿ ಪೂಜಾರಿ ಮೃತ ವ್ಯಕ್ತಿಗಳ ಮನೆಯವರಿಗೆ ಕರೆ ಮಾಡಿ ಕ್ಷಮೆ ಕೇಳಿದ್ದಾನೆ. ವಿಚಾರಣೆ ಸಮಯದಲ್ಲಿ ಪೊಲೀಸರ ಮುಂದೆ ಹೇಳುವಾಗ,”ನಾನು ನನ್ನ ಹುಡುಗರಿಗೆ ಬಿಲ್ಡರ್ ಇಲ್ಲದಿದ್ದರೆ ಬೆದರಿಸಿ ಬನ್ನಿ ಎಂದು ಹೇಳಿದ್ದೆ. ಆದರೆ ಹುಡುಗರು ಅವರನ್ನು ಕೊಂದು ಬಂದಿದ್ದರು. ಇದನ್ನು ಕೇಳಿ ನನಗೆ ಬೇಜಾರಾಯಿತು. ಅದಕ್ಕೆ ನಾನು ಮೃತರ ಮನೆಯವರ ದೂರವಾಣಿ ಸಂಖ್ಯೆಯನ್ನು ಪಡೆದು ಕ್ಷಮಾಪಣೆ ಕೇಳಿದ್ದೀನಿ. ಈಗಲೂ ನನಗೆ ಈ ವಿಚಾರಕ್ಕೆ ಬೇಸರವಿದೆ” ಎಂದು ಹೇಳಿಕೊಂಡಿದ್ದಾನೆ.

  • ಸ್ವಜಾತಿಯವರಿಂದಲೇ ಬಹಿಷ್ಕಾರಕ್ಕೆ ಒಳಗಾದ ನಾಲ್ಕು ಕುಟುಂಬ

    ಸ್ವಜಾತಿಯವರಿಂದಲೇ ಬಹಿಷ್ಕಾರಕ್ಕೆ ಒಳಗಾದ ನಾಲ್ಕು ಕುಟುಂಬ

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ನಾಲ್ಕು ಕುಟುಂಬ ಸ್ವಜಾತಿಯವರಿಂದಲೇ ಬಹಿಷ್ಕಾರಕ್ಕೆ ಒಳಗಾಗಿದೆ.

    ತಮಗಾದ ಅನ್ಯಾಯ ಪ್ರಶ್ನೆ ಮಾಡಿದ್ದಕ್ಕೆ ಕಳೆದ 9 ವರ್ಷಗಳಿಂದ ನಾಲ್ಕು ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ. ನಿವೇಶನ ವಿಚಾರವಾಗಿ ನಾಲ್ಕು ಕುಟುಂಬಗಳನ್ನು ಸಮುದಾಯದ ಮುಖಂಡರು ಬಹಿಷ್ಕಾರಕ್ಕೆ ಒಳಪಡಿಸಿದ್ದಾರೆ.

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಎಸ್. ಹೊಸಕೋಟೆಯಲ್ಲಿ ಈ ಬಹಿಷ್ಕಾರ ನಡೆದಿದೆ. ಗ್ರಾಮದ ಉಪ್ಪಾರ ಸಮುದಾಯದ ಮುಖಂಡರು ಸ್ವಜಾತಿಯವರಿಗೆ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದ ರೇವಮ್ಮ, ಮಾದಶೆಟ್ಟಿ ಕುಟುಂಬಗಳ ಮೇಲೆ ಹಲವಾರು ನಿರ್ಬಂಧಗಳನ್ನು ಹೇರಿ ಬಹಿಷ್ಕಾರ ಹಾಕಲಾಗಿದೆ.

    ಗ್ರಾಮದಲ್ಲಿ ಯಾರು ಕೂಡ ಇವರನ್ನು ಕೆಲಸಕ್ಕೆ ಕರೆಯುವಂತಿಲ್ಲ. ಜೊತೆಗೆ ಯಾರು ಕೂಡ ಇವರನ್ನು ಮಾತನಾಡಿಸುವಂತಿಲ್ಲ. ಅಂಗಡಿಗಳಲ್ಲಿ ಪದಾರ್ಥಗಳನ್ನು ಕೊಡುವಂತಿಲ್ಲ. ಈ ಬಗ್ಗೆ ಈ ಕುಟುಂಬಗಳು ತಾಲೂಕು ಆಡಳಿತಕ್ಕೆ ದೂರು ನೀಡಿದ್ದರು.

    ಬಹಿಷ್ಕಾರದಿಂದ ಮುಕ್ತಿ ಕೊಡಿಸುವಲ್ಲಿ ನಂಜನಗೂಡು ತಾಲೂಕು ಆಡಳಿತ ವಿಫಲವಾಗಿದೆ. ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸದೇ ತಹಶೀಲ್ದಾರ್ ಬೇಜಾವ್ದಾರಿ ತೋರಿದ್ದಾರೆ. ಇದು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಗೆ ಈ ಗ್ರಾಮ ಬರುತ್ತದೆ.