Tag: fake doctor

  • ಹಣ್ಣು ಮಾರುತ್ತಿದ್ದವನಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ- ನಕಲಿ ವೈದ್ಯ ಅರೆಸ್ಟ್

    ಹಣ್ಣು ಮಾರುತ್ತಿದ್ದವನಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ- ನಕಲಿ ವೈದ್ಯ ಅರೆಸ್ಟ್

    ಮುಂಬೈ: ಹಣ್ಣು ವ್ಯಾಪಾರಿಯೊಬ್ಬ ತಾನು ವೈದ್ಯನೆಂದು ಪೋಸ್ ನೀಡಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು, ಈ ಕುರಿತು ಮಾಹಿತಿ ತಿಳಿದ ತಕ್ಷಣ ಪೊಲೀಸರು ನಕಲಿ ವೈದ್ಯನನ್ನು ಬಂಧಿಸಿದ್ದಾರೆ.

    ಮಹಾರಾಷ್ಟ್ರದ ನಾಗ್ಪುರದ ಕಾಮತಿ ಪ್ರದೇಶದಲ್ಲಿ ಘಟನೆ ನಡೆದಿದ್ದು, ವೈದ್ಯನಂತೆ ಪೋಸ್ ನೀಡಿದ ಚಂದನ್ ನರೇಶ್ ಚೌಧರಿ, ಕೊರೊನಾ ರೋಗಿಗಳಿಗೆ ಚಕಿತ್ಸೆ ನೀಡಿದ್ದಾನೆ. ಆರಂಭದಲ್ಲಿ ಈತ ಹಣ್ಣು ಹಾಗೂ ಐಸ್ ಕ್ರೀಮ್ ವ್ಯಾಪಾರಿಯಾಗಿದ್ದ. ಬಳಿಕ ಎಲೆಕ್ಟಿಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಮಾತ್ರವಲ್ಲದೆ ಓಂ ನಾರಾಯಣ ಮಲ್ಟಿಪರ್ಪಸ್ ಸೊಸೈಟಿ ಹೆಸರಿನ ಚಾರಿಟೇಬಲ್ ಔಷಧಾಲಯವನ್ನು ಸಹ ಚೌಧರಿ ನಡೆಸುತ್ತಿದ್ದಾನೆ. ಕಳೆದ 5 ವರ್ಷಗಳಿಂದ ಈತ ಈ ಔಷಧಾಲಯ ನಡೆಸುತ್ತಿದ್ದು, ರೋಗಿಗಳಿಗೆ ಆಯುರ್ವೇದ, ನ್ಯಾಚುರೋಪತಿ ಚಿಕಿತ್ಸೆ ನೀಡುತ್ತಿದ್ದ ಎನ್ನಲಾಗಿದೆ.

    ಕೊರೊನಾ ಕಠಿಣ ಪರಿಸ್ಥಿತಿಯನ್ನು ಬಳಸಿಕೊಂಡ ಚೌಧರಿ, ನಾಗ್ಪುರದ ತನ್ನ ಔಷಧಾಲಯದಲ್ಲೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದಾನೆ. ಈತನಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬರು ಜಿಲ್ಲಾ ಪೊಲಿಸರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.

    ಮಾಹಿತಿ ಪಡೆಯುತ್ತಿದ್ದಂತೆ ಪೊಲೀಸರು ಚೌಧರಿಯ ಔಷಧಾಲಯದ ಮೇಲೆ ದಾಳಿ ನಡೆಸಿದ್ದು, ನಕಲಿ ವೈದ್ಯನನ್ನು ಬಂಧಿಸಿದ್ದಾರೆ. ಆಕ್ಸಿಜನ್ ಸಿಲಿಂಡರ್, ಸಿರಿಂಜ್ ಹಾಗೂ ಇತರೆ ವೈದ್ಯಕೀಯ ಸಲಕರಣೆಗಳನ್ನು ಪೊಲೀಸರು ದಾಳಿ ವೇಳೆ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಪ್ರಾಕ್ಟೀಷನರ್ಸ್ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಕೊರೊನಾ ವಾರಿಯರ್ ರೀತಿ ಹೋಗಿ ಮಹಿಳೆಯ ಸರಕ್ಕೆ ಕೈ ಹಾಕಿದ ಕಳ್ಳ

    ಕೊರೊನಾ ವಾರಿಯರ್ ರೀತಿ ಹೋಗಿ ಮಹಿಳೆಯ ಸರಕ್ಕೆ ಕೈ ಹಾಕಿದ ಕಳ್ಳ

    – ನೀರು ಕೊಡಿ ಎಂದು ಕೊರಳಿಗೆ ಕೈ ಹಾಕಿದವನಿಗೆ ಗೂಸ

    ಬೆಂಗಳೂರು: ಕೊರೊನಾ ವಾರಿಯರ್ ರೀತಿ ನಕಲಿ ವೈದ್ಯನ ವೇಷ ಧರಿಸಿ ಮಹಿಳೆಯರ ಚಿನ್ನದ ಸರಗಳ್ಳತನ ಮಾಡುತ್ತಿದ್ದವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಸಿಕ್ಕಬಿದ್ದ ಕಳ್ಳನನ್ನು ಮೂರ್ತಿ ಎಂದು ಗುರತಿಸಲಾಗಿದೆ. ಈತ ವೈದ್ಯನ ರೀತಿ ಡ್ರೆಸ್ ಹಾಕಿಕೊಂಡು ಮಹಿಳೆಯರೇ ಇರುವ ಮನೆಗ ಹೋಗಿ, ಕೊರೊನಾ ಹೆಲ್ತ್ ಸರ್ವೇ ಎಂದು ಸುಳ್ಳು ಹೇಳುತ್ತಿದ್ದ. ನಂತರ ಅವರು ನಂಬಿದ್ದಾರೆ ಎಂದು ಗೊತ್ತಾದಾಗ ಮಹಿಳೆಯರಿಗೆ ನೀರು ತರಲು ಹೇಳಿ ಹಿಂದೆಯಿಂದ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದ.

    ಇಂದು ವೈದ್ಯನ ಡ್ರೆಸ್ ತೊಟ್ಟು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸುಹಾಸಿನಿ ಮನೆಗೆ ಬಂದ ಮೂರ್ತಿ ನಾನು ಹೆಲ್ತ್ ವರ್ಕರ್, ನಿಮ್ಮ ಮನೆ ಮಾಹಿತಿ ನೀಡಿ ಎಂದು ಹೇಳಿದ್ದಾನೆ. ಇವನ ಕಪಟ ನಾಟಕವನ್ನು ನಂಬಿದ ಮಹಿಳೆ ಸರಿ ಎಂದು ಹೇಳಿದ್ದಾರೆ. ಆಗ ತಕ್ಷಣ ಆಕೆಯ ಬಳಿ ನೀರು ಕುಡಿಯಬೇಕು ನೀರು ಕೊಡಿ ಎಂದು ಕೇಳಿದ್ದಾನೆ. ಆಗ ಮಹಿಳೆ ನೀರು ತರಲು ಹೋದಾಗ ಹಿಂದೆಯಿಂದ ಮನೆಯೊಳಗೆ ಹೋಗಿ ಸರವನ್ನು ಕಿತ್ತುಕೊಂಡು ಓಡಿದ್ದಾನೆ.

    ಆಗ ತಕ್ಷಣ ಮಹಿಳೆ ಕಿರುಚಿಕೊಂಡಿದ್ದಾಳೆ. ಆತ ಸ್ಥಳೀಯರು ಎಚ್ಚೆತ್ತು ಮೂರ್ತಿಯನ್ನು ಹಿಡಿದುಕೊಂಡು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಮೂರ್ತಿಯ ಈ ಎಲ್ಲ ನಾಟಕ ಮಹಿಳೆಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆತನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದು, ಮೂರ್ತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಕಲಿ ಮಾತ್ರೆ ಹಂಚಿಕೆ- ಜಿ.ಪಂ ಮಾಜಿ ಅಧ್ಯಕ್ಷ, ನಕಲಿ ವೈದ್ಯನ ವಿರುದ್ಧ ಎಫ್‍ಐಆರ್

    ನಕಲಿ ಮಾತ್ರೆ ಹಂಚಿಕೆ- ಜಿ.ಪಂ ಮಾಜಿ ಅಧ್ಯಕ್ಷ, ನಕಲಿ ವೈದ್ಯನ ವಿರುದ್ಧ ಎಫ್‍ಐಆರ್

    ಯಾದಗಿರಿ: ಕೊರೊನಾ ವೈರಸ್ ಮಾತ್ರೆಗಳೆಂದು ನಕಲಿ ಮಾತ್ರೆ ಹಂಚಿಕೆ ಮಾಡಿದ ನಕಲಿ ವೈದ್ಯ ಮತ್ತು ಈತನಿಗೆ ಸಹಕರಿಸಿದ ಜಿಲ್ಲಾ ಪಚಾಯತ್ ಮಾಜಿ ಅಧ್ಯಕ್ಷನ ಮತ್ತು ಕಾಂಗ್ರೆಸ್ ಮುಖಂಡ ಬಸವರೆಡ್ಡಿ ಅನ್ನಪೂರ್ ಮೇಲೆ ಮೇಲೆ ಎಫ್‍ಐಆರ್ ದಾಖಲಾಗಿದೆ.

    ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಗುಂಜುನುರೂನಲ್ಲಿ ಶರಣಗೌಡ ಮಾಲಿಪಾಟೀಲ್ ಎಂಬ ವ್ಯಕ್ತಿ ತಾನು ಸರ್ಕಾರಿ ವೈದ್ಯನೆಂದು ಮತ್ತು ಸರ್ಕಾರ ಈ ಮಾತ್ರೆ ಕೊಡಲು ಹೇಳಿದೆ ಎಂದು ಕೊರೊನಾ ವೈರಸ್ ನಕಲಿ ಮಾತ್ರೆ ಹಂಚಿದ್ದಾನೆ. ಈತನಿಗೆ ಜಿ.ಪಂ ಮಾಜಿ ಅಧ್ಯಕ್ಷನ ಮತ್ತು ಕಾಂಗ್ರೆಸ್ ಮುಖಂಡ ಬಸವರೆಡ್ಡಿ ಅನ್ನಪೂರ್ ಸಾಥ್ ನೀಡಿದ್ದಾನೆ.

    ತನ್ನ ಮತ್ತು ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಪೋಟೋ ಇರುವ ಪ್ಯಾಕ್‍ನಲ್ಲಿ ಹೋಮಿಯೋಪತಿ ಮಾತ್ರೆಯಿಟ್ಟು ಜನರಿಗೆ ಉಚಿತವಾಗಿ ಹಂಚಿಕೆ ಮಾಡಿದ್ದಾನೆ. ಆದರೆ ಈ ರೀತಿ ಮಾತ್ರೆ ಹಂಚಿಕೆ ಮಾಡುವಂತೆ ಜಿಲ್ಲಾಡಳಿತ ಯಾರಿಗೂ ಹೇಳಿಲ್ಲ. ಹೀಗಾಗಿ ಇದು ಕಾನೂನು ಬಾಹಿರವಾಗಿದ್ದು, ಈ ಇಬ್ಬರ ಮೇಲೆ ಐಪಿಸಿ ಸೆಕ್ಷನ್ 276, 336(ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯನ್ನುಂಟು ಮಾಡುವ ಕೃತ್ಯದಲ್ಲಿ ಪಾಲ್ಗೊಳ್ಳುವುದು), 419(ಅನುಕರಣೆ ಮೂಲಕ ವಂಚನೆಗಾಗಿ ಶಿಕ್ಷೆ) ಮತ್ತು ಕಲಂ-42 ದಿ ಫಾರ್ಮಸಿ ಆ್ಯಕ್ಟ್ ಮೇಲೆ ಪ್ರಕರಣ ದಾಖಲಾಗಿದೆ.

    ಈ ಸಂಬಂಧ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಐದನೇ ತರಗತಿ ಓದಿ ಆಸ್ಪತ್ರೆ ಚಲಾಯಿಸ್ತಿದ್ದ ವೈದ್ಯನ ಬಂಧನ

    ಐದನೇ ತರಗತಿ ಓದಿ ಆಸ್ಪತ್ರೆ ಚಲಾಯಿಸ್ತಿದ್ದ ವೈದ್ಯನ ಬಂಧನ

    ಬಾಗಲಕೋಟೆ: ಐದನೇ ತರಗತಿ ಓದಿದ್ದ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂದು ಹೇಳಿಕೊಂಡು ಜನರಿಗೆ ಮೋಸ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ನಡೆದಿದೆ.

    ರಾಘವೇಂದ್ರ ಜಗನ್ನಾಥ ಕಾಟವಾ ಎಂಬವನು ನಕಲಿ ವೈದ್ಯನಾಗಿದ್ದು, ನಗರದ ಕಿಲ್ಲಾ ಓಣಿಯಲ್ಲಿ ಆಸ್ಪತ್ರೆಯನ್ನು ನಡೆಸುತ್ತಿದ್ದನು. ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಆಗಮಿಸಿದ ರಾಜ್ಯ ಅಬಕಾರಿ ವಿಚಕ್ಷಣಾದಳದ ಎಸ್.ಪಿ ಮೋತಿಲಾಲ್ ನೇತೃತ್ವದಲ್ಲಿ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದಾರೆ.

    ದಾಳಿ ವೇಳೆ ಟ್ರೆಮಾಡೊಲ್ ಹೈಡ್ರೊಕ್ಲೊರೈಡ್, ಬಿಜೊಲಮ್ ಮೌಥ್ ಡಿಸಾಲ್ವಿಂಗ್ ಮಾತ್ರೆ ಸೇರಿ 52 ಬಗೆಯ ಮಾತ್ರೆಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ನಕಲಿ ವೈದ್ಯ ರೋಗಿಗಳಿಗೆ ಹೈಡೋಸ್ ಮಾತ್ರೆಗಳನ್ನು ನೀಡುತ್ತಿದ್ದ ಅಂಶ ಬೆಳಕಿಗೆ ಬಂದಿದೆ.

    ಸದ್ಯ ಪೊಲೀಸರು ಎನ್‍ಡಿಪಿಎಸ್ ಆ್ಯಕ್ಟ್ 1985 ಕಾಯ್ದೆ ಅಡಿ ನಕಲಿ ವೈದ್ಯನನ್ನು ಬಂಧಿಸಿದ್ದಾರೆ. ಸಿಆರ್‍ಪಿಸಿ 154 ಕಲಂ ಅಡಿಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

  • ನೌಕಾಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್, ವೈದ್ಯನೆಂದು ರೋಗಿಗಳಿಗೆ ವಂಚನೆ ಆರೋಪ

    ನೌಕಾಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್, ವೈದ್ಯನೆಂದು ರೋಗಿಗಳಿಗೆ ವಂಚನೆ ಆರೋಪ

    – ಗ್ರಾಮಸ್ಥರ ವಿಶ್ವಾಸ ಗಳಿಸಿ ವಂಚನೆ

    ಮಡಿಕೇರಿ: ತಾನು ಭಾರತೀಯ ನೌಕಾ ಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್, ವೈದ್ಯ ಎಂದು ಕಳೆದ 2 ವರ್ಷಗಳಿಂದ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಾ, ಅವರ ಜೀವದೊಂದಿಗೆ ನಕಲಿ ವೈದ್ಯನೋರ್ವ ಆಟವಾಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

    ಹೌದು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಕ್ಕಬ್ಬೆಯಲ್ಲಿ ನಕಲಿ ವೈದ್ಯ ಕೃಷ್ಣ ರೋಗಿಗಳಿಗೆ ಮೋಸ ಮಾಡುತ್ತಿದ್ದಾನೆ. ಈ ಬಗ್ಗೆ ಕೃಷ್ಣನನ್ನೇ ಪ್ರಶ್ನಿಸಿದರೆ, ಭಾರತೀಯ ನೌಕಾ ಪಡೆಯ ನಿವೃತ್ತ ಮೆಡಿಕಲ್ ಅಸಿಸ್ಟೆಂಟ್. ಅಲ್ಲಿಯೂ ನಾನೇ ಎಲ್ಲಾ ಕೆಲಸ ಮಾಡುತ್ತಿದ್ದೆ. ಅಷ್ಟಕ್ಕೂ ನಾನು ಕುವೆಂಪು ಯುನಿವರ್ಸಿಟಿಯಲ್ಲಿ ಸೈಕೋಥೆರಪಿ ವಿಷಯದಲ್ಲಿ ಎಂಎಸ್ ಮಾಡಿದ್ದೇನೆ. ಅದರ ಆಧಾರದಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತಾನೆ ಈ ನಕಲಿ ವೈದ್ಯ. ಕೃಷ್ಣ ಕ್ಲಿನಿಕ್ ನಡೆಸಲು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಅನುಮತಿ ತೆಗೆದುಕೊಂಡಿಲ್ಲ. ಬದಲಿಗೆ ಪಂಚಾಯ್ತಿಯಿಂದ ಅನುಮತಿ ಪಡೆದು ಕ್ಲಿನಿಕ್ ನಡೆಸುತ್ತಿದ್ದಾನೆ ಎನ್ನಲಾಗಿದೆ.

    ವಿಪರ್ಯಾಸವೆಂದರೆ ಮಡಿಕೇರಿಯಿಂದ ಕೇವಲ 30 ಕಿಲೋಮೀಟರ್ ದೂರದಲ್ಲೇ ಈ ವೈದ್ಯ ಎರಡು ವರ್ಷಗಳಿಂದ ಹೀಗೆ ಚಿಕಿತ್ಸೆ ಕೊಡುತ್ತಿದ್ದರೂ ಈ ವಿಷಯ ನಮ್ಮ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ ಎನ್ನಲಾಗುತ್ತಿದೆ. ಇನ್ನೂ ಆಶ್ಚರ್ಯಕರ ಸಂಗತಿ ಎಂದರೆ ಈ ನಕಲಿ ವೈದ್ಯ ಊರಿನವರ ಬಾರೀ ವಿಶ್ವಾಸ ಗಳಿಸಿದ್ದಾನೆ. ನಕಲಿ ವೈದ್ಯನ ಬಗ್ಗೆ ವರದಿ ಮಾಡಲು ಬಂದ ಮಾಧ್ಯಮದವರನ್ನು ಊರಿನ ಜನರು ಸುತ್ತುವರಿದು, ಇವರು ಇಲ್ಲಿನ ಸುತ್ತಮುತ್ತಲ ನಾಲ್ಕಾರು ಹಳ್ಳಿಗಳಿಗೆ ಇರುವ ಒಬ್ಬರೇ ವೈದ್ಯರು. ಹಗಲು ರಾತ್ರಿ ಎನ್ನದೆ ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಾಸವಾಯ್ತು ಎಂದರೆ ಮನೆಗೆ ಬಂದು ಚಿಕಿತ್ಸೆ ಕೊಡ್ತಾರೆ. ಹಾಗಿರುವಾಗ ಇವರ ಕ್ಲಿನಿಕ್ ಬಾಗಿಲು ಮುಚ್ಚಿಸೋಕೆ ಬಂದಿದ್ದೀರಾ? ಅದಕ್ಕೆ ನಾವು ಅವಕಾಶ ಕೊಡೋದಿಲ್ಲ. ಒಂದು ವೇಳೆ ಅವರಿಗೆ ಅನುಮತಿ ಇಲ್ಲಾ ಅಂದರೆ ಅಧಿಕಾರಿಗಳು ಅನುಮತಿ ಕೊಡ್ಲಿ ಅಷ್ಟೇ ಅಂತ ನಕಲಿ ವೈದ್ಯನ ಪರ ನಿಂತಿದ್ದಾರೆ.

    ಕೆಲವರು ಯಾವುದೇ ದಾಖಲೆ ಇಲ್ಲದೆ, ವೈದ್ಯ ವೃತ್ತಿ ಮಾಡುತ್ತಿದ್ದಾನೆ. ಯಾರಿಗಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ಕೂಡಲೇ ಅಧಿಕಾರಿಗಳು ಪರಿಶೀಲನೆ ಮಾಡಿ ಅಂತ ಒತ್ತಾಯಿಸಿದರು. ಭಾರತೀಯ ನೌಕಾ ಸೇನೆಯ ಮೆಡಿಕಲ್ ಅಸಿಸ್ಟೆಂಟ್ ಆಗಿದ್ದ ಎನ್ನೋದನ್ನೇ ಬಳಸಿಕೊಂಡು ವೈದ್ಯ ವೃತ್ತಿ ಮಾಡುತ್ತಾ. ಜನರ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ಈ ವೈದ್ಯರ ಅಸಲಿಯತ್ತು ಏನು ಎನ್ನೋದನ್ನ ಆರೋಗ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಬೇಕಿದೆ.

  • ನೀವು ಏನು ತಪ್ಪು ಮಾಡ್ತಿದ್ದೀರಿ ಎಂದು ಗೊತ್ತಾಗ್ಬೇಕು – ತನ್ನ ಮುಂದೆಯೇ ಸೆಕ್ಸ್ ಮಾಡುವಂತೆ ದಂಪತಿಗೆ ಒತ್ತಾಯ

    ನೀವು ಏನು ತಪ್ಪು ಮಾಡ್ತಿದ್ದೀರಿ ಎಂದು ಗೊತ್ತಾಗ್ಬೇಕು – ತನ್ನ ಮುಂದೆಯೇ ಸೆಕ್ಸ್ ಮಾಡುವಂತೆ ದಂಪತಿಗೆ ಒತ್ತಾಯ

    ಮುಂಬೈ: ಮಹಾರಾಷ್ಟ್ರದ ಥಾಣೆಯಲ್ಲಿ ಮಕ್ಕಳಾಗುವಂತೆ ಮಾಡುತ್ತೇನೆ ಎಂದು ವಿವಾಹಿತ ದಂಪತಿಗೆ ತನ್ನ ಮುಂದೆಯೇ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸಿದ ನಕಲಿ ವೈದ್ಯನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.

    ನಪುಂಸಕತೆಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯ ಯೋಗೇಶ್ ಕುಪೇಕರ್ ಸಂತಾನ ಪ್ರಾಪ್ತಿಗೆ ಬಂದ ದಂಪತಿಗೆ ಇಂತಹ ಕೆಟ್ಟ ಸಲಹೆ ನೀಡಿದ್ದ. ಈತನ ವಿರುದ್ಧ ಪ್ರಕರಣ ದಾಖಲಾಗಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪಿ.ಪಿ ಜಾಧವ್, ಅಪರಾಧಿ ಯೋಗೇಶ್ ಕುಪೇಕರ್ ಗೆ 10 ವರ್ಷ ಜೈಲು ಶಿಕ್ಷೆ ಮತ್ತು 30 ಸಾವಿರ ರೂ. ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

    ಏನಿದು ಪ್ರಕರಣ?
    ವಿವಾಹಿತ ದಂಪತಿಗೆ ಮಕ್ಕಳಗಾದ ಹಿನ್ನೆಲೆಯಲ್ಲಿ 2014ರಲ್ಲಿ ಯೋಗೇಶ್ ಬಳಿ ಚಿಕಿತ್ಸೆಗಾಗಿ ಹೋಗಿದ್ದಾರೆ. ಆತನಿಂದ ಎರಡು ವರ್ಷ ಕಾಲ ಚಿಕಿತ್ಸೆ ಪಡೆದುಕೊಂಡರೂ ಅವರಿಗೆ ಮಕ್ಕಳಾಗಿರಲಿಲ್ಲ. ಬಳಿಕ ಯೋಗೇಶ್ ದಂಪತಿ ತಮಗೆ ಮಕ್ಕಳಾಗಲು ಏನು ಮಾಡಲೂ ಸಿದ್ಧರಾಗಿದ್ದಾರೆ ಎನ್ನುವುದನ್ನು ತಿಳಿದುಕೊಂಡಿದ್ದ.

    2016ರಲ್ಲಿ ಯೋಗೇಶ್ ದಂಪತಿಗೆ ತನ್ನ ಮುಂದೆಯೇ ಲೈಂಗಿಕ ಕ್ರೀಯೆ ನಡೆಸುವಂತೆ ಒತ್ತಡ ಹೇರಿದ್ದಾನೆ. ನೀವು ಏನು ತಪ್ಪು ಮಾಡುತ್ತಿದ್ದೀರಿ ಎಂಬುದು ನನಗೆ ಗೊತ್ತಾಗಬೇಕು. ಆಗ ಮಾತ್ರ ನಾನು ಸೂಕ್ತ ಸಲಹೆ ನೀಡಲು ಸಾಧ್ಯವೆಂದು ಎಂದು ಹೇಳಿ ತನ್ನ ಸಲಹೆ ಆತ ಸಮರ್ಥನೆ ಬೇರೆ ಕೊಟ್ಟಿದ್ದ. ಅಷ್ಟೇ ಅಲ್ಲದೇ ಯೋಗೇಶ್ ದಂಪತಿಯಿಂದ ಚಿಕಿತ್ಸೆ ರೂಪದಲ್ಲಿ ಸುಮಾರು 10 ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದ.

    ವೈದ್ಯನ ಈ ಸಲಹೆಯಿಂದ ಪತ್ನಿ ಮಾನಸಿಕ ಖಿನ್ನತೆಗೆ ಒಳಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ 2016 ರಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದರು. ಐಪಿಸಿ ಸೆಕ್ಷನ್ ಲೈಂಗಿಕ ಕಿರುಕುಳ ಮತ್ತು ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಕಾಯ್ದೆ(2013) ಅಡಿ ಪ್ರಕರಣ ದಾಖಲಾಗಿತ್ತು.

    ಇದೊಂದು ವಿಶೇಷ ಪ್ರಕರಣವಾಗಿದ್ದು, ದಂಪತಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಎನ್ನುವುದನ್ನೇ ದುರ್ಬಳಕ್ಕೆ ಮಾಡಿಕೊಂಡು ಕೃತ್ಯಕ್ಕೆ ಪ್ರಚೋದನೆ ನೀಡಿದ್ದು ಅಪರಾಧ. ಒಬ್ಬಳು ಮಗಳು ಇದ್ದು, ಪತ್ನಿ ಶಿಕ್ಷಕಿಯಾಗಿದ್ದರೂ ಅಪರಾಧಿ ಈ ರೀತಿಯ ಅಪಾಯಕಾರಿ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಹೀಗಾಗಿ ಈತ ಶಿಕ್ಷೆಗೆ ಅರ್ಹ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಓರಿಜಿನಲ್ ಡಾಕ್ಟರ್ ಮನೆಯಲ್ಲಿ, ನಕಲಿ ಡಾಕ್ಟರ್ ಐಸಿಯುನಲ್ಲಿ ಕೊಡ್ತಾನೆ ಚಿಕಿತ್ಸೆ

    ಓರಿಜಿನಲ್ ಡಾಕ್ಟರ್ ಮನೆಯಲ್ಲಿ, ನಕಲಿ ಡಾಕ್ಟರ್ ಐಸಿಯುನಲ್ಲಿ ಕೊಡ್ತಾನೆ ಚಿಕಿತ್ಸೆ

    ಚಿತ್ರದುರ್ಗ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಕಲಿ ಡಾಕ್ಟರ್ ಐಸಿಯುನಲ್ಲಿ ಕೆಲಸ ಮಾಡುತ್ತಿದ್ದರೇ, ಓರಿಜಿನಲ್ ಡಾಕ್ಟರ್ ಮನೆಯಲ್ಲಿ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

    ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳಿಗೆ ಒಂದೇ ದೊಡ್ಡ ಆಸ್ಪತ್ರೆ. ಜಿಲ್ಲಾಸ್ಪತ್ರೆಯಲ್ಲಿ 32 ಮಂದಿ ಸರ್ಕಾರಿ ವೈದ್ಯರಿದ್ದಾರೆ. ಎಲ್ಲ ವೈದ್ಯರಿಗೂ ಕೈ ತುಂಬ ಸಂಬಳ ನೀಡಲಾಗುತ್ತದೆ. ಆದ್ರೆ ದಿನೇಶ್ ಎಂಬ ನಕಲಿ ವೈದ್ಯ ಕಳೆದ ಆರು ತಿಂಗಳನಿಂದ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ರಾತ್ರಿ ಪಾಳಯದಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನ ನೀಡುತ್ತಿದ್ದಾನೆ. ಕೇವಲ ಹೆಲ್ತ್ ಇನ್ಸ್ ಪೆಕ್ಟರ್ ತರಬೇತಿಯನ್ನ ಪಡೆದಿರುವ ದಿನೇಶ್ ಮಾತ್ರ ತಾನೇ ವೈದ್ಯ ಎಂಬಂತೆ ಚಿಕಿತ್ಸೆ ಕೊಡುತ್ತಾನೆ.

    ರಾತ್ರಿ ಪಾಳಯದಲ್ಲಿ ಕೆಲಸ ಮಾಡಬೇಕಾದ ವೈದ್ಯರು ಮಾತ್ರ ಮನೆಯಲ್ಲಿ ಹಾಯಾಗಿ ನಿದ್ರೆಗೆ ಜಾರುತ್ತಾರೆ. ಅಸಲಿ ವೈದ್ಯರ ಬದಲಾಗಿ ದಿನೇಶ್ ಆ ಪಾಳಿಯಲ್ಲಿ ಐಸಿಯುನಲ್ಲಿ ಡಾಕ್ಟರ್ ಆಗಿ ಆರು ತಿಂಗಳಿನಿಂದಲೂ ಅದೆಷ್ಟೋ ಅಮಾಯಕ ಜೀವಗಳ ಜೊತೆಗೆ ಚೆಲ್ಲಾಟವಾಡಿದ್ದಾನೆ.

    ರಾತ್ರಿ ವೇಳೆ ತುರ್ತು ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಬರುತ್ತಿದ್ದ ರೋಗಿಗಳನ್ನ ದಾವಣಗೆರೆ ಮತ್ತು ಬೆಂಗಳೂರಿಗೆ ರೆಫರ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಸರ್ಕಾರಿ ಡಾಕ್ಟರ್ ನೈಟ್ ಡ್ಯೂಟಿಗೆ ಬಾರದೇ ನಕಲಿ ಡಾಕ್ಟರ್ ಇರೋದು. ಈ ಅಕ್ರಮ ಜನರಿಗೆ ಗೊತ್ತಾಗುತ್ತಿದ್ದಂತೆ ನಕಲಿ ಡಾಕ್ಟರ್ ದಿನೇಶ್, ಸಾಮಾಜಿಕ ಹೋರಾಟಗಾರ ಷಫೀವುಲ್ಲಾ ಎಂಬವರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ರೋಗಿಗಳ ಜೀವದ ಜೊತೆಗೆ ಚೆಲ್ಲಾಟವಾಡಿರೋ ನಕಲಿ ಡಾಕ್ಟರ್ ಮತ್ತು ಅಕ್ರಮಕ್ಕೆ ಸಾಥ್ ಕೊಟ್ಟವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಷಫೀವುಲ್ಲಾ ಆಗ್ರಹಿಸಿದ್ದಾರೆ.

    ಈ ಅಕ್ರಮಕ್ಕೆ ಜಿಲ್ಲಾ ಸರ್ಜನ್ ಡಾಕ್ಟರ್ ಜಯಪ್ರಕಾಶ್ ಮತ್ತು ಆರ್‍ಎಂಒ ಡಾಕ್ಟರ್ ಆನಂದಪ್ರಕಾಶ್ ಸಾಥ್ ಕೊಟ್ಟಿದ್ದಾರೆ ಅನ್ನೋ ಆರೋಪವಿದ್ದು, ಈ ಅಕ್ರಮವನ್ನ ಮುಚ್ಚಿಹಾಕಲು ಆರ್‍ಟಿಐ ಅಡಿ ಸಿಸಿಟಿವಿ ಫೂಟೇಜ್ ಕೇಳಿ ಅಲ್ಲಿರುವ ದೃಶ್ಯ ಕಾಣದಂತೆ ಬ್ಲರ್ ಮಾಡಿಸಿದ್ದಾರೆ. ಈ ವಿಚಾರವಾಗಿ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

    ಸಾಮಾಜಿಕ ಹೋರಾಟಗಾರ ಷಫೀವುಲ್ಲಾ ಮತ್ತು ನಕಲಿ ವೈದ್ಯನ ಫೋನ್ ಸಂಭಾಷಣೆ ಹೀಗಿದೆ.

    ಸಾಮಾಜಿಕ ಹೋರಾಟಗಾರ: ಯಾಕಪ್ಪ ಮಾಡೋಕೆ ಹೋದೆ ನೀನು..?
    ನಕಲಿ ಡಾಕ್ಟರ್: ಏನೋ ತಪ್ಪಾಗಿದೆ ಸರ್
    ಹೋರಾಟಗಾರ: ತಪ್ಪಲ್ಲ. ಒಂದು ತಿಂಗಳಲ್ಲ, ಎಷ್ಟು ದಿನಗಳಿಂದ ಮಾಡ್ತಿದ್ಯಾ..? ಕರೆಕ್ಟಾಗಿ ಹೇಳಪ್ಪ. ಸರಿನಾ ನೀ ಮಾಡೋದು…? ಏನ್ ಮಾಡ್ಬೇಕಂತಿದಿರಾ ಮತ್ತೆ…? ಎಷ್ಟು ಜನ ಪೇಷೆಂಟ್‍ಗಳು ಹಾಳಾಗೋಗಿದಾರೆ. ಅದೇನೇನಾಗಿದೆ ಆರೇಳು ತಿಂಗಳುಗಳಿಂದ ಹೇಳು. ನಿಂದು ಕಂಪ್ಲೀಟ್ ಆಗಿದ್ಯಾ, ಇಲ್ಲಪ್ಪ ಹೇಳು.
    ನಕಲಿ ಡಾಕ್ಟರ್: ಸಾರ್…
    ಹೋರಾಟಗಾರ: ಎಷ್ಟು ಜನ ಡಾಕ್ಟರ್..? ಎಷ್ಟು ದುಡ್ಡು ಕೊಟ್ಟಿರಬಹುದು…? ಏನು 500 ಅಥವಾ 1000 ನಾ ಕೊಟ್ಟಿರಬಹುದಾ ನಿನಗೆ…?
    ನಕಲಿ ಡಾಕ್ಟರ್: ಇಲ್ಲ ಅಣ್ಣ, ಏನು ಇಸ್ಕೊಂಡಿಲ್ಲ..
    ಹೋರಾಟಗಾರ: ಅದನ್ನೂ ಕೊಟ್ಟಿಲ್ವಾ…?
    ನಕಲಿ ಡಾಕ್ಟರ್: ಇಲ್ಲಣ್ಣ..ವ್ಯಾಲೆಂಟ್ರಿಯಾಗಿಯೇ ಮಾಡಿದ್ದೀನಿ..
    ಹೋರಾಟಗಾರ: ಅಯ್ಯೋ ಕರ್ಮವೇ..
    ನಕಲಿ ಡಾಕ್ಟರ್: ಒಂದು ರೂಪಾಯಿ ಇಸ್ಕೊಂಡಿಲ್ಲಣ್ಣ

    ಹೋರಾಟಗಾರ: ಮತ್ತೆ ಹಿಂಗಾಗಿ ಬಿಟ್ರೆ ಏನ್ ಕಥೇನಪ್ಪ. ಈಗ ಅವರೆಲ್ಲ ನಿನ್ನ ತಳ್ಳಿದಾರೆ ಮುಂದಕ್ಕೆ. ಸಿಗಾಕ್ಕೊಂಡ್ರೆ ದಿನೇಶ ಸಿಗಾಕ್ಕೊತ್ತಾನೆ ಬಿಡು ಅನ್ನೋ ಮನೋಭಾವ ಆರೇಳು ಜನ ಡಾಕ್ಟರ್‍ಗಳಿಗಿದೆ. ಹೌದಾ…? ಸತ್ಯಾನಾ..?
    ನಕಲಿ ಡಾಕ್ಟರ್: ಗೊತ್ತಿಲ್ಲಣ್ಣ…ಅದಕ್ಕೆ ನಿಮ್ ಹತ್ತಿರ ಬಂದಿದಿನಿ
    ಹೋರಾಟಗಾರ: ಅವರೆಲ್ಲಾ ಸೇಫ್ ಸೈಡ್ ಆಗಿ ನಿನ್ನ ತಳ್ಳಿದಾರೆ ಗೊತ್ತಾ..?
    ನಕಲಿ ಡಾಕ್ಟರ್: ಗೊತ್ತಿಲ್ಲಣ್ಣ… ಒಂದು ರೂಪಾಯಿ ಯಾರತ್ರಾನೂ ಇಸ್ಕೊಂಡಿಲ್ಲಣ್ಣ..
    ಹೋರಾಟಗಾರ: ನಾ ಹಾಗೆ ತಿಳ್ಕೊಂಡೆ. ಏನೋ 500-1000 ಕೊಟ್ಟಿರಬೇಕು. ಏನೋ ಪಾಪ ಡೈಲಿ ಕೆಲಸ ಮಾಡಿದಾನೆ ಹುಡುಗ. ಈಗ ಕೂಲಿ ಕೆಲಸ ಮಾಡೋರು ಇನ್ಯಾವ ಮಟ್ಟಕ್ಕೆ ಇರ್ತಾತರಪ್ಪ. ಅದಕ್ಕೆ ತಾನೆ ಹೋಗೋದು. ಪಾಪ ಇವನು ಅಮಾಯಕ. ಅವರನ್ನೆಲ್ಲ ಮನೆಗೆ ಮಲಗಿಕೊಳ್ಳೋಕೆ ಬಿಟ್ಟು, ಅವರ ಬಗ್ಗೆ ಬಾರಿ ಅನುಮಾನವಿದೆ.

    ನಕಲಿ ಡಾಕ್ಟರ್: ಇಲ್ಲ ಸರ್ ನಾ ಯಾರತ್ರಾನೂ..
    ಹೋರಾಟಗಾರ: ನಾ ಹಾಗೆ ತಿಳ್ಕೊಂಡಿದ್ದೆ. ಸರ್ ಖಂಡಿತ. ಸರ್.. (ಮೂರನೇ ವ್ಯಕ್ತಿ ಜೊತೆ ಮಾತು. ನೀವ್ಯಾರು ಗೊತ್ತಾಗಲಿಲ್ಲ..)
    ಮೂರನೇ ವ್ಯಕ್ತಿ: ನಾ ಲ್ಯಾಬ್ ಟೆಕ್ನಿಷೀಯನ್ ಸರ್..
    ಹೋರಾಟಗಾರ: ಲ್ಯಾಬ್ ಟೆಕ್ನೇಷಿಯನ್ ಏನು.. ಎಲ್ಲಾ ನಿಮ್ ಡಿಪಾರ್ಟ್ಮೆಂಟ್… ಹಹಹ
    ನಕಲಿ ಡಾಕ್ಟರ್: ಒಂದು ರೂಪಾಯಿ ಯಾರತ್ರ ಇಸ್ಕೊಂಡಿಲ್ಲ. ಪೇಷೇಂಟ್ ಹತ್ತಿರ ಆಗಲಿ…
    ಹೋರಾಟಗಾರ: ನಾ ಯಾವತ್ತಾದ್ರೂ ನಿಮ್ ಆಸ್ಪತ್ರೆಗೆ ಬಂದಿದಿನಾ..ನಾ ಹಾಗೆ ಅನ್ಕೊಂಡಿದ್ದೆ.. ಅಲ್ಲ ಪೇಷೆಂಟ್ ನಿನಗೆ ಕೊಡಲ್ಲ. ನೀ ಡಾಕ್ಟರ್ ಅಲ್ಲ, ಪೇಷೆಂಟ್ ಹೇಗೆ ಕೊಡ್ತಾರೆ ನಿನಗೆ..
    ನಕಲಿ ಡಾಕ್ಟರ್: ಇಲ್ಲ ಅಣ್ಣ ಒಂದು ರೂ..
    ಹೋರಾಟಗಾರ: ನಾ ಏನ್ ತಿಳ್ಕೊಂಡಿದ್ದೆ. ಮನೇಲಿ ಮಲ್ಕೋತಾರಲ್ಲ ಡ್ಯೂಟಿ ಡಾಕ್ಟರ್..

    ನಕಲಿ ಡಾಕ್ಟರ್: ಇಲ್ಲಣ್ಣ ಮನೇಲಿ ಮಲಗಲ್ಲಣ್ಣ
    ಹೋರಾಟಗಾರ: ಒಟ್ನಲ್ಲಿ ಅಧಿಕೃತ ಡಾಕ್ಟರ್ ನೀನೆ ಅಲ್ಲಪ್ಪ. ಅಲ್ಲಿ ಅ..
    ನಕಲಿ ಡಾಕ್ಟರ್: ಇಲ್ಲ ಅಣ್ಣ..ರೂಪಾಯಿ…
    ಹೋರಾಟಗಾರ: ಅಲ್ಲ.. ದುಡ್ಡಿಸ್ಕೊಂಡಿಲ್ಲ ಅಂದ್ರೆ ಬೇಡ. ಸುಮ್ನೆ ಯಾಕೆ ನೀ ಅಲ್ಲಿ ಡ್ಯೂಟಿ ಮಾಡಿದೆ…?
    ನಕಲಿ ಡಾಕ್ಟರ್: ಏನೋ ತಪ್ಪು ಮಾಡಿದ್ದೀನಿ ಅಣ್ಣ.. ಸುಮ್ನೆ ವ್ಯಾಲೆಂಟ್ರಿ ಸರ್ವೀಸ್ ಕೊಡೋಣ ಅಂತ ಮಾಡಿದೆ ಅಣ್ಣ…

    ಹೋರಾಟಗಾರ: ಡಾಕ್ಟರ್ ಕೋಟ್ ಎಲ್ಲಾ ಹಾಕ್ಕೊಂಡು ಕೂತಿದ್ದೀಯಾ..?
    ನಕಲಿ ಡಾಕ್ಟರ್: ಕೋಟ್ ಹಾಕಿಲ್ಲಣ್ಣ
    ಹೋರಾಟಗಾರ: ಡಾಕ್ಟರ್ ಕೋಟ್ ಹಾಕಿದ್ಯಾ..? ಸೆಟ್ ಹಾಕ್ಕೊಂಡಿಯ..?
    ನಕಲಿ ಡಾಕ್ಟರ್: ಅಣ್ಣ ಸೆಟ್ ಹಾಕ್ಕೊಂಡಿರಬಹುದು… ಕೋಟ್ ಹಾಕಿಲ್ಲಣ್ಣ..
    ಹೋರಾಟಗಾರ: ಏನಪ್ಪ ನೀನು, ನಾ ಸುಮ್ ಸುಮ್ನೆ ಹೇಳ್ತಿನಾ ನಿನಗೆ. ನನಗೆ ನಿಂದೇನು ಗೊತ್ತಿಲ್ಲ. ನಾ ಸುಮ್ನೆ ಹೇಳ್ತೀನಾ.. ನೀ ಡಾಕ್ಟರ್ ಸೀಟ್‍ನಲ್ಲಿ ಕುಂತಿಲ್ವಾ..?

    ನಕಲಿ ಡಾಕ್ಟರ್: ಹು ಅಣ್ಣ… ಕೂತಿದಿನಿ
    ಹೋರಾಟಗಾರ: ಹು. ನೀ ಡಾಕ್ಟರ್ ಮಾಡಿದಂಗೆ ಮಾಡಿದ್ಯಪ್ಪ..
    ನಕಲಿ ಡಾಕ್ಟರ್: ಇಲ್ಲ ಅಣ್ಣ
    ಹೋರಾಟಗಾರ: ನನಗೆ ಈಗ ಗೊತ್ತಾಗ್ತಿದೆ. ನಾ ಬೇರೆ ತರ ಅನ್ಕೊಂಡಿದ್ದೆ. ನಿನಗೆ ಗೊತ್ತಿಲ್ಲ. ನೀನು ಏನು ಓದಿದಿಯ. ಚಳ್ಳಕೆರೆಲಿ ಓದಿದ್ದು. ನಿನ್ ಬಗ್ಗೆ ನಿಂದೆಲ್ಲಾ ಮಾಹಿತಿ ತಗೊಂಡಿದಿವಿ. ಒಳಗಿಂದು ನಿನಗೇನು ಮಾಹಿತಿ ಇಲ್ಲ. ಮೂರು ಜನ ಟಿವಿಯವರು ನಾನು ಸೇರಿ ನಿನ್ ರಿಪೋರ್ಟ್ ಕಲೆಕ್ಟ್ ಮಾಡರೋದು. ಬೆಂಕಿ ಅದು.ನೀ ಈಗ ಕೊನೆಗೆ ಬಂದಿದಿಯ.

    ಲ್ಯಾಬ್ ಟೆಕ್ನೇಷಿಯನ್: ಇಲ್ಲ ಸಾಹೇಬ್ರು ಬೆಳಿಗ್ಗೆ ಹೇಳಿದ್ರಣ್ಣ.. ಅದಕ್ಕೆ
    ಹೋರಾಟಗಾರ: ಅಲ್ಲ.. ಈಗ ಎಂಡ್‍ಗೆ ಬಂದಿದಿರಿ. ನಾ ಮಾಹಿತಿ ಕೇಳಿ ಇಪ್ಪತ್ತು ದಿನಗಳಾಯ್ತು. ಅವರು ಉದ್ದೇಶ ಪೂರ್ವಕವಾಗಿ ನನಗೆ ಮಾಹಿತಿ ನೀಡಲ್ಲ ಅಂತ ಗೊತ್ತಾಯ್ತು. ಇರಲಿ… ಯಾರೋ ಬಾಳೆಹಣ್ಣು ತಿನ್ನೋದು ಯಾರ್ನೋ ಬಲಿ ಕೊಡೋದು. ಗೊತ್ತಿತ್ತು ನನಗೆ. ಪಾಪ.. ಹು. ಹೇಳಪ್ಪ. ಮತ್ತೆ ಏನ್ ಮಾಡೋಣ.
    ನಕಲಿ ಡಾಕ್ಟರ್: ಏನಾದರೂ ಮಾಡಣ್ಣ..ನ್ಯೂಸ್..
    ಹೋರಾಟಗಾರ: ನನ್ನ ಕೈ ಮೀರೋಗಿದೆ..ನಿಜವಾಗಿಯೋ ಮೀರೋಗಿದೆ. ಟಿವಿಯವ್ರ ಕೈನಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಡ್ಡಿಯಲ್ಲಿ ನಿಲ್ಲಿಸಿ ಫೋಟೋ ನೋಡಿ ರೋಗ ಹೇಳ್ತಾನೆ – ಸುತ್ತಿಗೆಯಲ್ಲೇ ಬಡಿದು ಟ್ರೀಟ್‍ಮೆಂಟ್ ಕೊಡ್ತಾನೆ

    ಚಡ್ಡಿಯಲ್ಲಿ ನಿಲ್ಲಿಸಿ ಫೋಟೋ ನೋಡಿ ರೋಗ ಹೇಳ್ತಾನೆ – ಸುತ್ತಿಗೆಯಲ್ಲೇ ಬಡಿದು ಟ್ರೀಟ್‍ಮೆಂಟ್ ಕೊಡ್ತಾನೆ

    -ಪವಿತ್ರ ಕಡ್ತಲ

    ಬೆಂಗಳೂರು: ಪಿಸಿಷಿಯನ್, ಸರ್ಜನ್, ಡೆಂಟಲ್ ಡಾಕ್ಟರ್ ಅಂತೆಲ್ಲ ಕೇಳಿರುತ್ತೇವೆ. ಆದರೆ ಸುತ್ತಿಗೆ ಡಾಕ್ಟ್ರು ಗೊತ್ತಾ? ಐಟಿ ಬಿಟಿ ಸಿಟಿನಲ್ಲಿ ಸುತ್ತಿಗೆ ಹಿಡ್ಕೊಂಡು ಬೆನ್ನು ನೋವು ವಾಸಿ ಮಾಡ್ತೀನಿ ಅಂತಾ ಯಾಮರಿಸುತ್ತಿದ್ದ ನಕಲಿ ಡಾಕ್ಟರ್ ಪಬ್ಲಿಕ್ ಟಿವಿ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿದ್ದಾನೆ.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸುತ್ತಿಗೆ ಡಾಕ್ಟರ್ ಒಬ್ಬನಿದ್ದಾನೆ. ತಲೆಯಿಂದ ಬೆನ್ನು, ಭುಜ, ಕಾಲಿಗೆ ಪಟಾ ಪಟಾ ಅಂತಾ ಸುತ್ತಿಗೆಯಲ್ಲಿ ಹೊಡೆಯುತ್ತಾನೆ. ಒಂದು ಸಲ ನನ್ನ ಕೈ ಸುತ್ತಿಗೆ ಏಟು ತಿನ್ನಿ ನಿಮ್ಮ ಬೆನ್ನು ನೋವು ಮಂಗ ಮಾಯ ಅಂತಾ ಹೇಳಿ ಚೆನ್ನಾಗಿ ದುಡ್ಡು ಬೇರೆ ಮಾಡ್ಕೊಂಡಿದ್ದಾನೆ. ಈ ಡಾಕ್ಟರ್ ಹೆಸರು ರವೀಂದ್ರ. ನಾರಾಯಣ ಯಾಗ ಶಾಲೆ ಅಂತಾ ಬೋರ್ಡ್ ಹಾಕಿಕೊಂಡು ಜನರಿಗೆ ಸುತ್ತಿಗೆಯಲ್ಲಿ ಚಿಕಿತ್ಸೆ ಕೊಡುತ್ತಾನೆ.

    ಬೆನ್ನು ನೋವಿಲ್ಲದ ಗಟ್ಟಿಮುಟ್ಟಾದ ನಮ್ಮ ಪ್ರತಿನಿಧಿನಾ ತೋರಿಸಿ ಇವ್ರಿಗೆ ಬೆನ್ನು ನೋವು, ಭುಜ ನೋವು ಅಂತಾ ಹೇಳಿದ್ದೇ ತಡ, ಫುಲ್ ಪ್ರೊಪೆಷನಲ್ ಡಾಕ್ಟ್ರ ತರ ಹೇಗ್ ಬಂತು ನೋವು ಅಂತಾ ಪ್ರಶ್ನಿಸಿ, ಗಂಟೆಗಟ್ಲೆ ಬೆನ್ನುನೋವು ಯಾಕೆ ಬರುತ್ತೆ ಅಂತಾ ಭಾಷಣ ಮಾಡಲಾರಂಭಿಸಿದ್ದಾನೆ.

    ರವೀಂದ್ರ : ನಿಮ್ಗೆ ಆಕ್ಸಿಡೆಂಟ್ ಅಗಿತ್ ಅಲ್ವಾ ?
    ಪ್ರತಿನಿಧಿ : ಆಕ್ಸಿಡೆಂಟ್ ಆಗಿಲ್ಲ, ಅಂಗಾಲು ಪೇನ್ ಇತ್ತು.
    ರವೀಂದ್ರ : ಎಷ್ಟ್ ಟೈಂ ಆಯ್ತು? ಪೇನ್ ಬಂದು
    ಪ್ರತಿನಿಧಿ : ಒನ್ ಇಯರ್ ಆಯ್ತು. ಆದ್ರೆ ಅದೇನ್ ಇಲ್ಲ ಬೆನ್ನು ನೋವು ಅಷ್ಟೇ
    ರವೀಂದ್ರ : ಬಿದ್ದಿದ್ರಾ ಯಾವಾತ್ತಾದ್ರೂ, ಸಿಟ್ಟಿಂಗ್ ವರ್ಕ್ ಮಾಡ್ತೀರಾ?
    ಪ್ರತಿನಿಧಿ : ಇಲ್ಲ.. ಗಾಡಿಲಿ ಓಡಾಡ್ತೀನಿ
    ರವೀಂದ್ರ : ಬೆನ್ನುನೋವಲ್ಲಿ ಎರಡು ವಿಧ, ಈಗ ಹೆಚ್ಚು ಕಂಪ್ಯೂಟರ್ ಸಿಂಡ್ರೋಮ್ ಅಂತೆಲ್ಲ ಬರ್ತಿದೆ.
    ಪ್ರತಿನಿಧಿ: ನಿಮ್ಮಲ್ಲಿ ಹ್ಯಾಮರ ಥೆರಪಿನಾ ಅಥವಾ ಬೇರೆ ಇರುತ್ತಾ..?
    ರವೀಂದ್ರ: ನಮ್ಮಲ್ಲಿ ಎಲ್ಲಾ ಥೆರಪಿನೂ ಇದೆ. ಪಂಚಕರ್ಮ ಥೆರಪಿ ಎಲ್ಲ ಇದೆ. ಅವರಿಗೆ ಏನಾಗಿದೆ ಅಂತಾ ನೋಡಿ, ಹ್ಯಾಮರ ಥೆರಪಿ ಮಾಡ್ತೀನಿ. ಪ್ರೊಸಿಜರ್ ಮಾಡ್ತೀನಿ,

    ರವಿಂದ್ರ: ಅಂಗಿ ತೆಗೀಬೇಕು, ಪ್ಯಾಂಟ್ ತೆಗೆಯಬೇಕು, ಅಂಡರ್‍ವೇರ್‍ನಲ್ಲಿ ನಿಂತ್ಕೋಬೇಕು
    ಪ್ರತಿನಿಧಿ : ವಾಚ್ ತೆಗೆಯಬೇಕಾ ?
    ರವೀಂದ್ರ : ಅಲ್ಲಾ ನಿಮ್ಮ ಫೋಟೋ ತೆಗೆಯಬೇಕು ಅದ್ಕೆ ! ಹಾ ನಿಮ್ಮ ಫೋನ್ ಕೊಡಿ, ಅದ್ರಲ್ಲೆ ತೆಗೆಯುತ್ತೇನೆ, ನಂಗೆ ಬೇಡ ನಿಮ್ ಫೋಟೋ
    (ಮೊಬೈಲ್ ತೆಗೆದುಕೊಂಡು ಫೋಟೋ ಕ್ಲಿಕ್ ಮಾಡಿದ ಬಳಿಕ )
    ರವೀಂದ್ರ : ಹಾ ಹಿಂಗೆ ನಿಂತ್ಕೊಳ್ಳಿ, ನನ್ ಕಡೆ ನೋಡಬೇಡಿ, ಟರ್ನ್ ಮಾಡಿ , ಬ್ಯಾಕ್ ತಿರುಗಿ, ಸರಿಯಾಗಿ ನಿಂತ್ಕೊಳ್ಳಿ , ಕೈಕಾಲು ಸರಿಯಾಗಿ ಹಿಡ್ಕೊಳ್ಳಿ. ಸ್ಟ್ರೈಟ್ ! ಅಯ್ಯೋ ಏನಪ್ಪ ಶಿವಾ ಸರಿಯಾಗಿ ನಿಂತ್ಕ !
    ರವೀಂದ್ರ : ಹಾ ಫೋಟೋ ನೋಡಿ ಹೇಳ್ತೆನೆ. ಕ್ಯಾಲಿಸಿಯಂ ಪ್ರಾಬ್ಲಂ, ಬೋನ್ ಡೆನ್ಸಿಟಿ ಪ್ರಾಬ್ಲಂ ಇದೆ
    ಪ್ರತಿನಿಧಿ – ಅರೇ ಫೋಟೋ ನೋಡಿ ಗೊತ್ತಾಗುತ್ತಾ !
    ರವೀಂದ್ರ : ಹಾ ಮತ್ತೆ, ಬನ್ನಿ ಬನ್ನಿ ನಿಮ್ಗೂ ಡಾಕ್ಟ್ರ್ ಹೇಳಿ ಕೊಡ್ತೀನಿ , ಸೈನ್ಸ್ ಹೇಳ್ ಕೊಡ್ತೀನಿ ಬನ್ನಿ. ನನ್ ತರ ಯಾವ ಡಾಕ್ಟ್ರು ಟ್ರೀಟ್‍ಮೆಂಟ್ ಕೊಡಲ್ಲ.
    ರವೀಂದ್ರ : ನಿಮ್ಮ ಸ್ಟ್ರೈಟ್ ಶೊಲ್ಡರ್ ನೋಡಿ ಒಂದು ಸ್ವಲ್ಪ ಬ್ಯಾಕ್ ಇದೆ. ಇನ್ನೊಂದು ಸ್ವಲ್ಪ ಮುಂದಿದೆ. ಸರ್ವಿಕಲ್ ಪ್ರಾಬ್ಲಂ ಇದೆ ನಿಮ್ಗೆ. ಕಣ್ಣು ನೋಡಿ. ಇಪ್ಪತ್ತಾನಾಲ್ಕು ಗಂಟೆ ಯೋಚನೆ ಮಾಡ್ತಾರೆ. ಇವ್ರು ದುಃಖಿತರಾಗಿರ್ತಾರೆ. ಹೀ ಈಸ್ ನಾಟ್ ಹ್ಯಾಪಿ ಮ್ಯಾನ್, ಸಿವಿಯರ್ ಆಸಿಡಿಡಿ ಪ್ರಾಬ್ಲಂ ಇದೆ. ನಾನ್ ಫುಡ್ ಹೇಳ್ತೀನಿ ಅದ್ ತಗೊಳ್ಳಿ. . ಲಂಗ್ಸ್ ಸರಿಯಿಲ್ಲ ನಿಮ್ಮದು, ಉಸಿರಾಟನೂ ಸರಿಯಿಲ್ಲ . ಮೋಷನ್ ಪ್ರಾಬ್ಲಂ ಇದೆ ಸರಿಯಾಗಿ ಹೋಗಲ್ಲ ನಿಮ್ಗೆ. ಪ್ರೊಸಿಜರ್ ಹೇಳ್ತೀನಿ, ನೀವು ಕರೆಕ್ಟ್ ಆಗಿ ಪಾಲಿಸಿದ್ರೆ ನಿಮ್ಮನ್ನು ಯಾರ್ ಹಿಡಿಯೋಕೆ ಆಗಲ್ಲ.

    ರವೀಂದ್ರ – ಈ ಪ್ರೊಸಿಜರ್‍ನಲ್ಲಿ ಏನು ನೋವಾಗಲ್ಲ , ನಾನು ನೋವು ಮಾಡಲ್ಲ ಬಾರ್ನ್ ಬೇಬಿ(ನವಜಾತ ಶಿಶು)ಗೂ ಟ್ರೀಟ್‍ಮೆಂಟ್ ಕೊಡುತ್ತೇವೆ
    ಪ್ರತಿನಿಧಿ – ಅರೇ.. ಬಾರ್ನ್ ಬೇಬಿಗೆ ಯಾಕೆ..?
    ರವೀಂದ್ರ – ಅದು ಹೊಟ್ಟೆಯೊಳಗೆ ತೆಗೆಯುವಾಗ ಪ್ರಾಬ್ಲಂ ಆಗಿರುತ್ತೆ.
    ಪ್ರತಿನಿಧಿ – ಒಹೋ,
    ರವೀಂದ್ರ- ಆಮೇಲೆ ಇದು ಏನೂ ಸಮಸ್ಯೆ ಆಗಲ್ಲ, ನೋಡಿ ಬರೇ ಸೌಂಡ್ ಅಷ್ಟೇ ಲೈಟ್ ವೇಟ್, ಇದು ನಾಡಿಮರ್ಧನ ಅಂತಾ ಅಂತಾ ಬಹಳ ಇತಿಹಾಸ ಇದೆ ಇದಕ್ಕೆ,. ಟಕ್ ಸೌಂಡ್ ಟ್ರೀಟ್‍ಮೆಂಟ್ ಅಂತಾ.
    ಪ್ರತಿನಿಧಿ: ಅಲ್ಲಾ ತುಂಬಾ ಜನ ಬರ್ತಾರಾ ?
    ರವೀಂದ್ರ : ಎಲ್ಲಾ ಟಾಪ್ ಮೋಸ್ಟ್ ಬರೋದು, ಬೆಂಗಳೂರುನಲ್ಲಿರೋರು ಕಮೀಷನರ್
    ಪ್ರತಿನಿಧಿ : ಯಾರು ಪೊಲೀಸ್ ಕಮೀಷನರ್
    ರವೀಂದ್ರ : ಎನಿ ಕಮೀಷನರ್, ಎಲ್ಲಾ ಡಾಕ್ಯುಮೆಂಟ್ ಇದೆ, ತೋರಿಸ್ತೀನಿ, ಫಿಲ್ಮ್‍ಂ ಆಕ್ಟರ್, ದೊಡ್ಡ ದೊಡ್ಡ ಬ್ಯುಸಿನೆಸ್, ದೇವೇಗೌಡರ ಫ್ಯಾಮಿಲಿ ನನ್ನ ಕ್ಲೈಂಟ್ಸ್. ಅವ್ರರನ್ನು ಮುಟ್ಟಿದ್ರೆ ಒಂದುವರೆ ಸಾವಿರ ತಗೊಳದೆ ಇರಲ್ಲ.
    ಪ್ರತಿನಿಧಿ: ಅಲ್ಲೆ ಹೋಗ್ತೀರಾ?
    ರವೀಂದ್ರ : ಅವರ ಹತ್ರ ಹೋದ್ರೆ ಎರಡೂವರೆ ಸಾವಿರ, ಅವ್ರು ಇಲ್ಲಿಗೆ ಬಂದ್ರೆ ಒಂದು ಸಾವಿರ , ಒಂದ್ ಸಿಟ್ಟಿಂಗ್ ಗೆ ಸ್ಪೆಷಲ್ ಕೆಟಗರಿ ಗೆ ಮೂರು ಸಾವಿರ ತಗೋತಿನಿ. ಇದೆಲ್ಲ ಸೈಡ್ ಎಫೆಕ್ಟ್ ಇಲ್ಲ, ಮೂಳೆಗೀಳೆ ಕಿಡ್ನಿ ಪ್ರಾಬ್ಲಂ ಆಗಲ್ಲ. ರವಿಶಂಕರ್ ಗುರೂಜಿ, ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಟ್ರೀಟ್ ಮೆಂಟ್ ಕೊಟ್ಟಿದ್ದೀನಿ.

    ಫೋಟೋಸ್ಕೋಪಿ ತೆಗೆಯಬೇಕು ಅಂತಾ ಪಕ್ಕ ದನದ ದೊಡ್ಡಿ ತರಹ ಇರೋ ರೂಮ್ ಗೆ ಕರೆದುಕೊಂಡ ಹೋದ. ಅಲ್ಲಲ್ಲಿ ಸೊಳ್ಳೆ ಬತ್ತಿ, ಅವಧ ಮುಗಿದ ಹಳೆ ಡಬ್ಬದಲ್ಲಿ ತೈಲ, ವಾಷ್ ಬೇಸಿನ್ ಅಂತೂ, ಪಕ್ಕದಲ್ಲಿ ಗ್ಯಾಸ್ ಸಿಲಿಂಡರ್ ಬೇರೆ. ಮೂಲೆಯಲ್ಲಿ ದೊಡ್ಡ ಸುತ್ತಿಗೆ ಸೈಲೆಂಟ್ ಆಗಿ ಕೂತಿತ್ತು. ಇವನ ಡಾಕ್ಟ್ರ್ ರೂಂಗೆ ಹೋದರೆ ಬರಬಾರದ ಕಾಯಿಲೆ ಬರುವ ಹಾಗಿತ್ತು ಆಸ್ಪತ್ರೆಯ ಆವರಣ. ಹಾ ಬಟ್ಟೆ ಬಿಚ್ಚಿ ಅಂಡರ್‍ವೇರ್‍ನಲ್ಲಿ ನಿಂತುಕ್ಕೊಳ್ಳಿ ಅಂತಾ ಹೇಳಿ ನಮ್ ಪ್ರತಿನಿಧಿ ಫೋನ್ ತೆಗೆದುಕೊಂಡು ಕ್ಯಾಮೆರಾ ಆನ್ ಮಾಡಿ ಕ್ಲಿಕ್..ಕ್ಲಿಕ್ ಅಂತಾ ಫೋಟೋ ತೆಗೆದುಕೊಂಡನು.

    ಇವನ ಸುತ್ತಿಗೆ ಏಟಿಗೆ ಭಯ ಬಿದ್ದು ದುಡ್ಡು ಕೊಟ್ಟು ಪ್ರಾಣ ಉಳಿಸಿಕೊಂಡು ನಮ್ಮ ಪ್ರತಿನಿಧಿ ಹೊರ ಬಂದರು .ಆದರೆ ಇವನು ಬೇರೆಯವರಿಗೆ ಕೊಡುವ ಏಟನ್ನು ರಹಸ್ಯ ಕ್ಯಾಮರದಲ್ಲಿ ಸೆರೆ ಹಿಡಿಯಲಾಯಿತು. ಕಾರ್‍ಪೇಂಟರ್ ತರ ಇವನು ಸುತ್ತಿಗೆನಲ್ಲಿ ಹಿಡಿದು ಹೀಗೆ ಬಾರಿಸಿದ್ರೆ ಬೆನ್ನುಮೂಳೆ ಹೇಗಾಗಬಾರದು. ಆದರೂ ಅಮಾಯಕ ಜನರು ರವೀಂದ್ರ ಬಳಿ ಚಿಕಿತ್ಸೆ ಬರುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=mB1ePkn59qA

  • ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

    ಆರೋಗ್ಯ ತಪಾಸಣೆ ಆಯೋಜಿಸಿದ್ದ ನಕಲಿ ಡಾಕ್ಟರ್ ಆರೋಗ್ಯಾಧಿಕಾರಿ ಬರುತ್ತಿದ್ದಂತೆ ಪರಾರಿ!

    ಕಾರವಾರ: ಕಡಿಮೆ ವೆಚ್ಚದಲ್ಲಿ ಆರೋಗ್ಯ ತಪಾಸಣೆ ಮಾಡುತ್ತೇವೆ ಎಂದು ಶಿರಸಿ ಸಮೀಪದ ಕಾನಗೋಡಿನಲ್ಲಿ ಶಿಬಿರ ಆಯೋಜಿಸಿ ಮೋಸ ಮಾಡುತ್ತಿದ್ದ ನಕಲಿ ವೈದ್ಯನೊಬ್ಬ ಜಿಲ್ಲಾ ಆರೋಗ್ಯಾಧಿಕಾರಿ ಸ್ಥಳಕ್ಕೆ ಬರುತ್ತಿದ್ದಂತೆ ಪರಾರಿಯಾಗಿದ್ದಾನೆ.

    ಹುಬ್ಬಳ್ಳಿ ಮೂಲದ ಮುಕೇಶ್ ತಿವಾರಿ ಎನ್ನುವ ನಕಲಿ ವೈದ್ಯ ಜನರನ್ನು ವಂಚಿಸಿ ದುಡ್ಡು ದೋಚುತಿದ್ದ. ಮುಕೇಶ್ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಕಾನಗೋಡಿನಲ್ಲಿ ಆರೋಗ್ಯ ಶಿಬಿರ ನಡೆಸಿ, ಸ್ಥಳೀಯರಿಂದ ದುಡ್ಡು ದೋಚುತ್ತಿದ್ದ. ಖಚಿತ ಮಾಹಿತಿ ಪಡೆದು ಶಿಬಿರದ ಜಾಗಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ್ ಬರುತ್ತಿದ್ದಂತೆ ಸತೀಶ್ ಸ್ಥಳದಿಂದ ಓಡಿ ಹೋಗಿದ್ದಾನೆ.

    ಮುಕೇಶ್ ಈ ಹಿಂದೆಯೂ ಶಿರಸಿಯ ಬಿಸಲಕೊಪ್ಪದಲ್ಲಿ ‘ಹ್ಯೂಮನ್ ಕೇರ್ ವಿಷನ್’ ಎಂಬ ಹೆಸರಿನಲ್ಲಿ ಶಿಬಿರ ಆಯೋಜಿಸಿದ್ದನು. 36 ವಿವಿಧ ಆರೋಗ್ಯ ತಪಾಸಣೆಗಳನ್ನು ಶಿಬಿರದಲ್ಲಿ ಮಾಡಲಾಗುತ್ತದೆ. 10 ಸಾವಿರ ರೂ. ತಪಾಸಣೆಯನ್ನು ಕೇವಲ ಒಂದು ಸಾವಿರ ರೂ. ನಲ್ಲಿ ಮಾಡಲಾಗುತ್ತದೆ ಹಾಗೂ 100 ರೂ.ಗೆ ದೇಹ ತಪಾಸಣೆ ಮಾಡಲಾಗುತ್ತದೆ ಎಂದು ವಂಚಿಸಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಶಿಬಿರ ಆಯೋಜಿಸಿ, ಅದನ್ನು ಸ್ಥಳೀಯ ಮುಖಂಡರಿಂದ ಉದ್ಘಾಟನೆ ಮಾಡಿಸಿ, ಯಾರಿಗೂ ಅನುಮಾನ ಬಾರದಂತೆ ನಟಿಸುತ್ತಿದ್ದ. ಕಾನಗೋಡಿನಲ್ಲಿ “ವೀ ಫಾರ್ ಯು” ಎಂಬ ಸಂಸ್ಥೆಯ ಹೆಸರಿನಲ್ಲಿ ಮುಕೇಶ್ ಶಿಬಿರ ಪ್ರಾರಂಭಿಸಿದ್ದ. ಆತನ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಸ್ಥಳೀಯರು ಕಾರವಾರ ಜಿಲ್ಲಾ ಆರೋಗ್ಯ ಕೇಂದ್ರಕ್ಕೆ ಮಾಹಿತಿ ನೀಡಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ್ ಸ್ಥಳಕ್ಕೆ ಬರುತ್ತಿದ್ದಾರೆ ಎಂದು ಅರಿತ ಮುಕೇಶ್ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಕೆಲವು ಮಾತ್ರ ಸಿಬ್ಬಂದಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಿಕಿತ್ಸೆಗಾಗಿ ಶಿಬಿರಕ್ಕೆ ಬಂದಿದ್ದ ಸಾರ್ವಜನಿಕರು ಇದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಇವ್ನು ಮನೆಯಲ್ಲಿ ಟೇಬಲ್ ಬಡಿದ್ರೆ, ಹಾವು ಕಚ್ಚಿದವ್ರು ಎಲ್ಲಿದ್ರೂ ಗುಣಮುಖರಾಗ್ತಾರಂತೆ- ವಿಜಯಪುರದಲ್ಲೊಬ್ಬ ಡೋಂಗಿ ವೈದ್ಯ

    ಇವ್ನು ಮನೆಯಲ್ಲಿ ಟೇಬಲ್ ಬಡಿದ್ರೆ, ಹಾವು ಕಚ್ಚಿದವ್ರು ಎಲ್ಲಿದ್ರೂ ಗುಣಮುಖರಾಗ್ತಾರಂತೆ- ವಿಜಯಪುರದಲ್ಲೊಬ್ಬ ಡೋಂಗಿ ವೈದ್ಯ

    ವಿಜಯಪುರ: ನಾನು ಮನೆಯಲ್ಲೇ ಕುಳಿತು ಟೇಬಲ್ ಬಡಿದರೆ ಸಾಕು, ಹಾವು ಕಚ್ಚಿದವರು ದೇಶದ ಯಾವುದೇ ಮೂಲೆಯಲ್ಲಿದ್ರೂ ಥಟ್ಟನೆ ಗುಣಮುಖರಾಗ್ತಾರೆ ಎಂದು ಹೇಳುವ ಡೋಂಗಿ ವೈದ್ಯನೊಬ್ಬ ಸಿಕ್ಕಿ ಬಿದ್ದಿದ್ದಾನೆ.

    ಲಾಲ್‍ಸಾಬ್ ಎಂಬಾತನೇ ಮುಗ್ಧ ಜನರನ್ನು ಮೋಸ ಮಾಡುತ್ತಿರುವ ನಕಲಿ ವೈದ್ಯ. ಲಾಲ್‍ಸಾಬ್ ಜಿಲ್ಲೆಯ ಇಟ್ಟಂಗಿಹಾಳದಲ್ಲಿ ನಿವಾಸಿಯಾಗಿದ್ದಾನೆ. ಕ್ಷಣಾರ್ಧದಲ್ಲಿ ಪಾರ್ಶ್ವವಾಯು ಗುಣಮುಖ ಮಾಡ್ತೀನಿ, ಸಕ್ಕರೆ ಕಾಯಿಲೆ ಸೇರಿದಂತೆ ಹಲವು ರೋಗಗಳನ್ನು ಸರಿಪಡಿಸ್ತೀನಿ ಅಂತ ಕುದಿಸಿದ ನೀರಿನಲ್ಲಿ ಒಂದಿಷ್ಟು ಪುಡಿ ಹಾಕಿ 21 ದಿನ ತೆಗೆದುಕೊಳ್ಳಿ ಅಂತ ಹೇಳಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾನೆ.

    ಅದು ಹೇಗೆ ನೀವು ಹುಷಾರು ಮಾಡ್ತೀರಿ ಅಂತಾ ಕೇಳಿದ್ರೆ, ಗುರುಗಳ ಆಶೀರ್ವಾದದಿಂದ ನನಗೆ ಈ ಶಕ್ತಿ ಲಭಿಸಿದೆ ಎಂದು ಬೊಗಳೆ ಬಿಡುತ್ತಾನೆ. ಇದೇ ರೀತಿ ಬಾಗಲಕೋಟೆಯ ವಿಮಲಾಬಾಯಿ ಎಂಬವರು ಇವನ ಹತ್ತಿರ ಚಿಕಿತ್ಸೆ ಪಡೆದು ಗುಣಮುಖರಾಗದೇ 15 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ನಾಟಿ ವೈದ್ಯ ಹೆಸರಿನಲ್ಲಿ ಪ್ರತಿನಿತ್ಯ ಜನರನ್ನು ವಂಚಿಸಿ ಹಣ ಪೀಕೋದೇ ಇವನ ಕಸುಬಾಗಿದೆ.