Tag: fake case

  • ಗ್ಯಾಂಗ್‍ರೇಪ್ ಮಾಡಿ ಕಾರಿನಿಂದ ತಳ್ಳಿದ್ರು – ದೂರು ನೀಡಿದ್ದ ಯುವತಿಯೇ ಅರೆಸ್ಟ್

    ಗ್ಯಾಂಗ್‍ರೇಪ್ ಮಾಡಿ ಕಾರಿನಿಂದ ತಳ್ಳಿದ್ರು – ದೂರು ನೀಡಿದ್ದ ಯುವತಿಯೇ ಅರೆಸ್ಟ್

    ಲಕ್ನೋ: ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ಹೊರಗಡೆ ಎಸೆದ ಮೂವರ ವಿರುದ್ಧ ಸುಳ್ಳು ದೂರು ನೀಡಿದ್ದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಉತ್ತರ ಪ್ರದೇಶದ ಫಿರೋಜಾಬಾದ್‍ನಲ್ಲಿ ಈ ಪ್ರಕರಣ ನಡೆದಿದ್ದು, ಆಗ್ರಾ ನಿವಾಸಿಯಾಗಿರುವ 20 ವರ್ಷದ ಯುವತಿ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.

    ಪ್ರಿಯಕರನ ಒತ್ತಾಯಕ್ಕೆ ಮಣಿದು ಯುವತಿ ಮೂವರು ಯುವಕರಾದ ಗೀತಂ, ಜ್ಞಾನೇಂದ್ರ ಹಾಗೂ ರಾಜನ ವಿರುದ್ಧ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ನಕಲಿ ದೂರು ದಾಖಲಿಸಿದ್ದಳು.

    ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್‍ಎಸ್‍ಪಿ ಸಚೀಂದ್ರ ಪಾಟೇಲ್ ಅವರು, ಯುವತಿ ನೀಡಿದ ದೂರನ್ನು ದಾಖಲಿಸಿಕೊಂಡು ನಾವು ಮೂವರು ಯುವಕರನ್ನು ಬಂಧಿಸಿದ್ದೆವು. ಬಳಿಕ ಯುವತಿಯನ್ನು ಕರೆದು ವಿಚಾರಣೆ ನಡೆಸಿದಾಗ, ಪ್ರಿಯಕರನ ಒತ್ತಾಯಕ್ಕಾಗಿ ಸಾಮೂಹಿಕ ಅತ್ಯಾಚಾರ ದೂರು ನೀಡಿರುವ ವಿಚಾರ ಬೆಳಕಿಗೆ ಬಂತು ಎಂದು ತಿಳಿಸಿದರು.

    ಯುವತಿಯ ಪ್ರಿಯಕರನಾಗಿರುವ ಅನಿಲ್ ಕೊಲೆ ಎಸಗಿದ್ದ. ಈ ಪ್ರಕರಣಕ್ಕೆ ಮೂವರು ಯುವಕರು ಪ್ರಮುಖ ಸಾಕ್ಷಿಯಾಗಿದ್ದರು. ನಾವು ಯುವತಿಯನ್ನು ನಿರಂತವಾಗಿ ಪ್ರಶ್ನಿಸಿದಾಗ ಆಕೆ ಬೇರೆ ಬೇರೆ ಕತೆ ಹೇಳುತ್ತಿದ್ದಳು. ಈ ವೇಳೆ ಆಕೆ ಸುಳ್ಳು ಹೇಳುತ್ತಿರುವುದು ದೃಢವಾಯಿತು ಎಂದು ಸಚೀಂದ್ರ ತಿಳಿಸಿದ್ದಾರೆ.

    ಯುವತಿ ದೂರಿನಲ್ಲಿ ಹೇಳಿದ್ದೇನು?
    ನಾನು ಆಗ್ರಾದ ಹರಿಪರ್ವತ್ ಏರಿಯಾದಲ್ಲಿರುವ ಕೋಚಿಂಗ್ ಸೆಂಟರ್ ಗೆ ಹೋಗುತ್ತಿದ್ದೆ. ಈ ವೇಳೆ ಮೂವರು ಯುವಕರು ಬಂದು ನಿನ್ನ ಸಹೋದರನಿಗೆ ಅಪಘಾತ ಆಗಿದೆ ಎಂದು ಹೇಳಿ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬಳಿಕ ಪಚೋಖರಾ ಪೊಲೀಸ್ ಠಾಣಾ ವ್ಯಪ್ತಿಯ ಗಲಿಬ್ ಗ್ರಾಮದಲ್ಲಿ ಯಾರು ಇಲ್ಲದ ಜಾಗದಲ್ಲಿ ನನ್ನನ್ನು ಕಾರಿನಿಂದ ಹೊರಗೆ ಎಸೆದು ಹೋದರು ಎಂದು ದೂರು ನೀಡಿದ್ದಳು.

  • ಬಳ್ಳಾರಿ ವಿವಿ ನೇಮಕಾತಿಯಲ್ಲಿ ಅಕ್ರಮದ ವಾಸನೆ – ವರದಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ಮೇಲೆ ಕೇಸ್

    ಬಳ್ಳಾರಿ ವಿವಿ ನೇಮಕಾತಿಯಲ್ಲಿ ಅಕ್ರಮದ ವಾಸನೆ – ವರದಿ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ಮೇಲೆ ಕೇಸ್

    ಬೆಂಗಳೂರು: ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿ ಅಕ್ರಮದ ಬಗ್ಗೆ ವರದಿ ಮಾಡಿದಕ್ಕೆ ಪಬ್ಲಿಕ್ ಟಿವಿಯ ಬಳ್ಳಾರಿ ವರದಿಗಾರ ವೀರೇಶ್ ದಾನಿ ವಿರುದ್ಧ ಸುಳ್ಳು ಕೇಸ್ ದಾಖಲಿಸಿ, ಬಲವಂತವಾಗಿ ವಿಚಾರಣೆ ನಡೆಸಲಾಗಿದೆ.

    ಹೌದು. ಬಳ್ಳಾರಿ ವಿಎಸ್‍ಕೆ ವಿವಿ ನೇಮಕಾತಿ ಅಕ್ರಮದ ಬಗ್ಗೆ ವರದಿ ಮಾಡಿದ್ದೇ ತಪ್ಪಾ? ಪರೀಕ್ಷಾ ಹಾಲ್ ಟಿಕೆಟ್‍ನಲ್ಲಿನ ಲೋಪದೋಷ ಪ್ರಶ್ನಿಸಿದ್ದೇ ತಪ್ಪಾ ಎಂಬ ಪ್ರಶ್ನೆ ಸದ್ಯ ಹುಟ್ಟುಕೊಂಡಿದೆ. ಯಾಕೆಂದರೆ ವಿವಿ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ವರದಿ ಪ್ರಸಾರ ಮಾಡಿದ್ದಕ್ಕೆ ಪಬ್ಲಿಕ್ ಟಿವಿ ವರದಿಗಾರನ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಅಲ್ಲದೆ ರಾತ್ರೋರಾತ್ರಿ ವರದಿಗಾರನ ಮನೆಗೆ ಬಂದು ಪೊಲೀಸರು ದರ್ಪ ಮೆರೆದಿದ್ದಾರೆ. ಹಾಗೆಯೇ ಬಲವಂತವಾಗಿ ವಿಚಾರಣೆ ಕೂಡ ನಡೆಸಿದ್ದಾರೆ.

    ಏನಿದು ಪ್ರಕರಣ?
    ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ನಡೆದಿತ್ತು. ಈ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಅಭ್ಯರ್ಥಿಗಳ ಫೋಟೋ ಇರುವ ಜಾಗದಲ್ಲಿ ಖಾಲಿ ಜಾಗವನ್ನು ಬಿಡಲಾಗಿತ್ತು. ಸರ್ಕಾರಿ ಹುದ್ದೆಗೆ ನಡೆಯುವ ಪರೀಕ್ಷೆಗಳ ಹಾಲ್ ಟಿಕೆಟ್ ಗಳು ಫೋಟೋದೊಂದಿಗೆ ಮುದ್ರಣವಾಗುತ್ತದೆ. ಆದರೆ ಈ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಅಭ್ಯರ್ಥಿಗಳೇ ಫೋಟೋ ಅಂಟಿಸಬೇಕಿತ್ತು. ಈ ರೀತಿಯ ಪರೀಕ್ಷೆಯಲ್ಲಿ ಅಭ್ಯರ್ಥಿ ಯಾರೋ ಪರೀಕ್ಷೆ ಬರೆಯುವವರು ಯಾರೋ ಆಗುವ ಸಾಧ್ಯತೆ ಇರುತ್ತದೆ. ಪರೀಕ್ಷಾ ಕೊಠಡಿ ಮೇಲ್ವಿಚಾರಕಾರಿಗೆ ಸಹ ಖಚಿತವಾಗಿ ಪರಿಶೀಲಿಸಲು ಸಾಧ್ಯವಿಲ್ಲ. ಈ ವಿಚಾರವನ್ನು ಇಟ್ಟುಕೊಂಡು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಆದರೆ ಈಗ ವರದಿ ಮಾಡಿ ಪ್ರಶ್ನಿಸಿದ್ದನ್ನೇ ಮುಂದಿಟ್ಟುಕೊಂಡು ಪಬ್ಲಿಕ್ ಟಿವಿ ವರದಿಗಾರನ ವಿರುದ್ಧವೇ ಕೇಸ್ ದಾಖಲಾಗಿದೆ.

    ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ಹಾಲ್ ಟಿಕೆಟ್‍ನಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾರ ಫೋಟೋಗಳಿರುವುದು ಕಂಡುಬಂದಿದೆ. ಇವರ ಫೋಟೋ ಇದ್ದು ಇವರೇ ಪರೀಕ್ಷೆ ಬರೆದರ ಅನ್ನೋ ಅನುಮಾನ ಮೂಡುತ್ತಿದೆ ಎಂದು ಹೋರಾಟಗಾರ ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದರು.

    ವಿವಿ ನೇಮಕಾತಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಪಡೆದು ನೇಮಕಾತಿ ಮಾಡಲಾಗುತ್ತಿದೆ ಅನ್ನೋ ಆರೋಪವಿದೆ. ಇದೀಗ ಪರೀಕ್ಷಾರ್ಥಿಗಳ ಹಾಲ್ ಟಿಕೆಟ್‍ನಲ್ಲಿ ಸ್ವತಃ ಸಿಎಂ ಕುಮಾರಸ್ವಾಮಿ ಹಾಗೂ ರಾಜ್ಯಪಾಲರ ಫೋಟೋ ಪ್ರತ್ಯಕ್ಷವಾದ್ರೂ ವಿವಿ ಆಡಳಿತ ಮಂಡಳಿ ತನಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿದೆ ಎಂದು ವರದಿ ಮಾಡಲಾಗಿತ್ತು.