Tag: Explainer

  • PublicTv Explainer: ಬೆಳ್ಳಿಗೂ ಬಂತು ಬಂಗಾರದ ಹೊಳಪು – ದಿಢೀರ್‌ ಏರಿಕೆ ಯಾಕೆ?

    PublicTv Explainer: ಬೆಳ್ಳಿಗೂ ಬಂತು ಬಂಗಾರದ ಹೊಳಪು – ದಿಢೀರ್‌ ಏರಿಕೆ ಯಾಕೆ?

    ಚಿನ್ನ, ಬೆಳ್ಳಿ ಯಾವಾಗಲೂ ಒಂದು ಸಮೃದ್ಧಿಯ ಹೊಳಪು. ನೀವು ಎಷ್ಟೇ ಖರೀದಿ ಮಾಡಿದರೂ ಸಾಕೇನಿಸೊಲ್ಲ. ಹಾಗಂತ ಬೇಕಾದಷ್ಟು ಖರೀದಿ ಮಾಡೋಕೂ ಆಗಲ್ಲ. ಆದರೆ ಖರೀದಿ ಮಾಡಿದ್ದು ಯಾವೂದು ಹಾಳಾಗೋದು ಇಲ್ಲ. ಇದೇ ಚಿನ್ನ ಹಾಗೂ ಬೆಳ್ಳಿಯಲ್ಲಿರುವ ಒಂದು ಸೊಬಗು. ಆದರೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಹಾಗೂ ಚಿನ್ನ ಸ್ಪರ್ಧೆಗಿಳಿಂತಿದೆ. ಪ್ರತಿ ದಿನವೂ ನಾ ಮುಂದು, ತಾ ಮುಂದು ಎಂದು ಓಟವನ್ನು ನಿಲ್ಲಿಸುತ್ತಲೇ ಇಲ್ಲ ಎನ್ನುವಂತಾಗಿದೆ. ಇವೆರಡರ ಓಟಗಳ ನಡುವೆ ಗ್ರಾಹಕರು ಪರದಾಡುವಂತಾಗಿದೆ.

    ಹೌದು, ಮೊದಲೆಲ್ಲ ಚಿನ್ನದ ಬೆಲೆ ಏರಿಕೆಯಾದಾಗ ಬೆಳ್ಳಿ ದರ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ಸ್ಥಿರವಾಗಿರುವಂತೆ ಭಾಸವಾಗುತ್ತಿತ್ತು. ಹೆಚ್ಚು ವ್ಯತ್ಯಾಸವೇನು ಕಂಡುಬರುತ್ತಿರಲಿಲ್ಲ. ಆದರೆ ಈಗ ಚಿನ್ನದ ಬೆಲೆ ಏರಿಕೆಯಾದಂತೆ ಬೆಳ್ಳಿಯ ದರವೂ ಏರಿಕೆಯಾಗುತ್ತಿದೆ. ಆದರೆ ಭಾರತಕ್ಕೆ ಬೆಳ್ಳಿ ಆಮದು ತೀರಾ ಕಡಿಮೆಯಾಗಿದೆ. ಇದರಿಂದ ಬೆಳ್ಳಿ ಕೊರತೆ ಎದ್ದು ಕಾಣುತ್ತಿದೆ. ಹಬ್ಬ ಬಂತೆಂದರೆ ಸಾಕು ಚಿನ್ನ, ಬೆಳ್ಳಿ ಖರೀದಿ ಹೆಚ್ಚಾಗುತ್ತದೆ. ಆದರೆ ಇದೀಗ ವಿಶ್ವದಲ್ಲೇ ಅತಿ ದೊಡ್ಡ ಬೆಳ್ಳಿ ಖರೀದಿ ರಾಷ್ಟ್ರವಾಗಿರುವ ಭಾರತದಲ್ಲಿ ಬೆಳ್ಳಿ ಕೊರತೆ ಉಂಟಾಗಿದೆ. ಇದರ ಪರಿಣಾಮ ವಿಶ್ವದ ಬೇರೆ ದೇಶಗಳಿಗೆ ತುಲನೆ ಮಾಡಿದಾಗ ಭಾರತದಲ್ಲಿ ಬೆಳ್ಳಿ ಬೆಲೆ ಶೇ.10 ರಷ್ಟು ಏರಿಕೆಯಾಗಿದೆ. 

    ಬೆಳ್ಳಿ ಕೊರತೆಗೆ ಕಾರಣ:
    ಸಾಮಾನ್ಯವಾಗಿ ಹಬ್ಬಗಳು ಬಂದಾಗ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗುತ್ತದೆ.  ಹಬ್ಬದ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಶುಭದಿನದಂದು ಚಿನ್ನ, ಬೆಳ್ಳಿ ಖರೀದಿಸುವುದು ಭಾರತೀಯರ ಸಂಪ್ರದಾಯ ಎಂಬ ನಂಬಿಕೆಯಿದೆ. ಆದರೆ ಇದೀಗ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ಜನರು ಬೆಳ್ಳಿ ಖರೀದಿಗೆ ಮುಗಿಬೀಳುತ್ತಿದ್ದಾರೆ.

    ಇನ್ನೂ ಭಾರತಕ್ಕೆ ಚಿನ್ನದ ಆಮದು ಕಡಿಮೆಯಾಗಿದ್ದು, ಶೇ.42ಗೆ ಕುಸಿತಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ವಿಶ್ವದಲ್ಲಿ ಬೆಳ್ಳಿ ಬೇಡಿಕೆ ಪೂರೈಕೆಗಿಂತ ಹೆಚ್ಚಾಗಿದೆ. ಇದರಿಂದಾಗಿ ಐದು ವರ್ಷಗಳಲ್ಲಿ ಉತ್ಪಾದಿಸಲಾಗಿದ್ದ  ಹೆಚ್ಚುವರಿಯೂ ಬೆಳ್ಳಿಯು ಖಾಲಿಯಾಗದೆ. ಹೀಗಾಗಿ ಈ ವರ್ಷ ಚಿನ್ನದ ಬೆಲೆ ಹೆಚ್ಚಾದ ಪರಿಣಾಮ ಬೆಳ್ಳಿ ಬೆಳಿಗ್ಗೆ ಹೆಚ್ಚಾಗಿದೆ. ಇದರಿಂದ ಜನರ ಬೇಡಿಕೆಯನ್ನು ಸದ್ಯದ ಪೂರೈಕೆಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ. 

    ಬೆಳ್ಳಿ ದರ ಏರಿಕೆಗೆ ಕಾರಣ:
    ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಸಮರವನ್ನು ಆರಂಭಿಸಿದ್ದಾರೆ. ಟ್ರಂಪ್ ಆರಂಭದಲ್ಲಿ 50ಕ್ಕು ಹೆಚ್ಚು ದೇಶಗಳ ಮೇಲೆ ಸುಂಕ ಸಮರ ಹೇರಿದ್ದರು. ಅಮೆರಿಕ ಹಾಗೂ ಚೀನಾದ ನಡುವಿನ ಸುಂಕ ಸಮರದ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗುತ್ತಿದೆ. ಹಿನ್ನೆಲೆ ಜನರು ಬೆಳ್ಳಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದು, ಪರಿಣಾಮ ಎರಡರ ಬೆಲೆಯೂ ಏರಿಕೆಯಾಗುತ್ತದೆ.

    ಇನ್ನು ಬೆಳ್ಳಿಯಂತೆ ಚಿನ್ನದ ಉತ್ಪಾದನೆಯು ಕೆಲವು ದೇಶಗಳಲ್ಲಿ ಮಾತ್ರವಿದೆ. ಬೆರಳೆಣಿಕೆಯಷ್ಟು ಮಾತ್ರ ಕೆಲ ದೇಶಗಳು ಬೆಳ್ಳಿ ಗಣಿಗಾರಿಕೆ ಮಾಡುತ್ತವೆ. ಮೆಕ್ಸಿಕೊ, ಪೋಲ್ಯಾಂಡ್,  ಯುಕೆ, ಆಸ್ಟ್ರೇಲಿಯ ಮಾತ್ರ ಬೆಳ್ಳಿ ಗಣಿಗಾರಿಕೆ ಮಾಡಲಾಗುತ್ತದೆ. ಅಲ್ಲದೆ ಸೌರ ಶಕ್ತಿ , ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಮಾಡಲಾಗುತ್ತಿರುವುದರಿಂದ, ಆ ಕ್ಷೇತ್ರಗಳಲ್ಲೂ ಕೂಡ ಬೆಳ್ಳಿ ಬೇಡಿಕೆ ಹೆಚ್ಚಾಗಿದೆ. ಇದೆಲ್ಲ ಕಾರಣಗಳಿಂದ ಬೆಳ್ಳಿ ದರ ಏರಿಕೆಯಾಗಿದೆ.

    ಬೆಳ್ಳಿ ಆಮದು ಎಷ್ಟಿದೆ?
    ಕಳೆದ ಐದು ವರ್ಷಗಳ ಹಿಂದೆ ಅಂದರೆ 2020ರಿಂದ 2021ರಲ್ಲಿ 2218 ರಿಂದ 2773 ಟನ್ ಬೆಳ್ಳಿ ಭಾರತಕ್ಕೆ ಆಮದಾಗುತ್ತಿತ್ತು. 2022 ರಲ್ಲಿ ದಾಖಲೆಯ 8000 ದಿಂದ 9450 ಟನ್ ಬೆಳ್ಳಿ ಆಮದಾಗುತ್ತು. ಬಳಿಕ 2023 ರಲ್ಲಿ 3625 ಟನ್, 2024 ರಲ್ಲಿ 7000 ಟನ್ ಸದ್ಯ 2025 ರ ಅಂತ್ಯದವರೆಗೆ 5500 ರಿಂದ 6000 ಟನ್ ಆಮದಾಗುವ ನಿರೀಕ್ಷೆಯಿದ್ದು, ಆಗಸ್ಟ್ ವರೆಗೆ 3,302 ಟನ್ ಆಮದಾಗಿದ್ದು, ಭಾರತಕ್ಕೆ ಬೆಳ್ಳಿ ಆಮದು ಶೇಕಡ 42ಕ್ಕೆ ಕುಸಿದಿದೆ.

    ಐದು ವರ್ಷಗಳಿಗೂ ತುಲನೆ ಮಾಡಿದಾಗ ಹೆಚ್ಚೇನು ವ್ಯತ್ಯಾಸವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಿರುವದರಿಂದ ಬೆಳ್ಳಿಯ ಬೇಡಿಕೆ ಹೆಚ್ಚಾಗುತ್ತದೆ. ಪರಿಣಾಮ ಕೊರತೆ ಹೆಚ್ಚು ಕಾಣುತ್ತಿದೆ. ಅಲ್ಲದೆ ಹೆಚ್ಚಿನ ಕ್ಷೇತ್ರಗಳಲ್ಲಿ ಬೆಳ್ಳಿಯ ಬೇಡಿಕೆ ಹೆಚ್ಚಿರುವುದರಿಂದ ಕೊರತೆ ಉಂಟಾದಂತೆ ತೋರುತ್ತಿದೆ.

    ಬೆಳ್ಳಿ ಕೊರತೆಯಿಂದ ಸಾಮಾಗ್ರಿಗಳ ತಯಾರಿಕೆಗೆ ಅಥವಾ ಆಭರಣಗಳ ತಯಾರಿಕೆಗೆ ಕಷ್ಟಕರವಾಗುವ ಸಾಧ್ಯತೆಯಿದೆ. ಸದ್ಯ ಚಿನ್ನ ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನ ಬೆಳ್ಳಿಯನ್ನು ಖರೀದಿಸುತ್ತಾರೆ. ಹೀಗಾಗಿ ಬೆಳ್ಳಿ ಮಾರಾಟಗಾರರಿಗೂ ಇದರಿಂದ ಸಮಸ್ಯೆಯುಂಟಾಗುವ ಸಾಧ್ಯತೆಯಿದೆ. ಆಭರಣ ವ್ಯಾಪಾರಿಗಳು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಪರದಾಡುವಂತಾಗಿದೆ. ತಮಗೂ ಪೂರೈಕೆಯಿಲ್ಲದೇ ಗ್ರಾಹಕರಿಗೂ ಪೂರೈಕೆ ಮಾಡಲು ಸಾಧ್ಯವಾಗದಂತಾಗಿದೆ.

    ಸದ್ಯ ಕೆ.ಜಿಗೆ ಬೆಳ್ಳಿಯ ಬೆಲೆ 1,70,000ಕ್ಕೂ ಅಧಿಕವಾಗಿದೆ. ಇತ್ತ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದ್ದು, ಬೆಳ್ಳಿಯೂ ಅದರ ಬೆನ್ಹಿಂದೆ ಓಟಕ್ಕಿಳಿದಂತಾಗಿದೆ.

  • ಭಾರತದ ಮೊದಲ ನದಿ ಡಾಲ್ಫಿನ್‌ ಸಮೀಕ್ಷೆ – ವರದಿ ಹೇಳೋದೇನು?

    ಭಾರತದ ಮೊದಲ ನದಿ ಡಾಲ್ಫಿನ್‌ ಸಮೀಕ್ಷೆ – ವರದಿ ಹೇಳೋದೇನು?

    ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ನದಿ ಡಾಲ್ಫಿನ್‌ಗಳ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಸಮೀಕ್ಷೆಯ ಅಂದಾಜು ವರದಿಯನ್ನು ಬಿಡುಗಡೆಗೊಳಿಸಿದರು.

    ಸಾಮಾನ್ಯವಾಗಿ ಸಮುದ್ರ-ಸಾಗರಗಳಲ್ಲಿ ಇರುವ ಡಾಲ್ಫಿನ್ ಗಳ ಬಗ್ಗೆ ದತ್ತಾಂಶದ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಭಾರತದಲ್ಲಿ ಮೊದಲ ಬಾರಿಗೆ ನದಿ ಡಾಲ್ಫಿನ್ ಗಳ ಸಮೀಕ್ಷೆಯನ್ನು ನಡೆಸಲಾಗಿದೆ. 2021 ಹಾಗೂ 2023ರ ನಡುವೆ ಗಂಗಾ, ಬ್ರಹ್ಮಪುತ್ರ ಹಾಗೂ ಸಿಂಧೂ ನದಿ ಹೇಳಿದಂತೆ ಹಲವು ಉಪನದಿಗಳಲ್ಲಿ ಡಾಲ್ಫಿನ್ ಸಮೀಕ್ಷೆ ನಡೆಸಲಾಯಿತು.

    ಕೇಂದ್ರ ಸಚಿವಾಲಯದ ಅಡಿಯಲ್ಲಿ ಬರುವ ವೈಲ್ಡ್ ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದಲ್ಲಿ, 8,000 ಕಿಲೋಮೀಟರ್ ವ್ಯಾಪ್ತಿಯ ಸಮೀಕ್ಷೆ ಇದಾಗಿದ್ದು, ಎರಡು ಜಾತಿಯ ನದಿ ಡಾಲ್ಫಿನ್ ಗಳ ವರದಿ ಸಂಗ್ರಹಿಸಲಾಗಿದೆ.

    ಗಂಗಾ ನದಿಯಲ್ಲಿ ಸುಮಾರು 6,324 ಡಾಲ್ಫಿನ್ಗಳು ಇರುವುದಾಗಿ ಮಾಹಿತಿ ಲಭ್ಯವಾಗಿದೆ. ಸಿಂಧೂ ನದಿಯಲ್ಲಿ ಕೇವಲ ಮೂರು ಡಾಲ್ಫಿನ್ ಮಾತ್ರ ಇದ್ದು, ಇನ್ನುಳಿದಂತೆ ಪಂಜಾಬ್ ನ ಬಿಯಾಸ್ ನದಿಯಲ್ಲಿ ಡಾಲ್ಫಿನ್ ಗಳು ಇರುವುದಾಗಿ ತಿಳಿದು ಬಂದಿದೆ. ಈ ಸಮೀಕ್ಷೆಯಲ್ಲಿ 28 ನದಿಗಳನ್ನು ದೋಣಿ ಮೂಲಕ ಹಾಗೂ 30 ನದಿಗಳನ್ನು ರಸ್ತೆ ಮೂಲಕ ಸಮೀಕ್ಷೆ ಮಾಡಲಾಗಿದೆ.

    ಉತ್ತರ ಪ್ರದೇಶ, ಬಿಹಾರ್, ಜಾರ್ಖಂಡ್, ಮಧ್ಯ ಪ್ರದೇಶ್ ಹಾಗೂ ರಾಜಸ್ಥಾನಗಳಲ್ಲಿ ಗಂಗಾ ನದಿ ಹಾಗೂ ಅದರ ಉಪನದಿಗಳ ಒಟ್ಟು 7,109 ಕಿಮೀ ಗಳ ಸಮೀಕ್ಷೆ ನಡೆಸಲಾಗಿದೆ. ಬ್ರಹ್ಮಪುತ್ರ ನದಿ ಹಾಗೂ ಉಪನದಿಗಳು ಸೇರಿ ಒಟ್ಟು 1,297 ಕಿಮೀ ಗಳ ಸಮೀಕ್ಷೆ ನಡೆಸಲಾಗಿದೆ. ಪಂಜಾಬ್ ಬಿಯಾಸ್ ನದಿಯಲ್ಲಿ 101 ಕಿಮೀ ಸಮೀಕ್ಷೆ ನಡೆಸಲಾಯಿತು. ಗಂಗಾ ನದಿಯ ಮುಖ್ಯಭೂಮಿಯಲ್ಲಿ 3,275 ಡಾಲ್ಫಿನ್ ಗಳು, ಉಪನದಿಗಳಲ್ಲಿ 2,414 ಡಾಲ್ಫಿನ್, ಬ್ರಹ್ಮಪುತ್ರ ನದಿಯ ಮುಖ್ಯ ಭೂಮಿಯಲ್ಲಿ 584 ಹಾಗೂ ಉಪನದಿಗಳಲ್ಲಿ 51 ಡಾಲ್ಫಿನ್ ಇರುವುದಾಗಿ ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗಂಗಾ ನದಿಯ ಡಾಲ್ಫಿನ್ ಗಳು ಕಂಡುಬಂದಿವೆ. ಎರಡನೇ ಸ್ಥಾನದಲ್ಲಿ ಬಿಹಾರ ಹಾಗೂ ಮೂರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳ ಕಂಡುಬಂದಿದೆ.

    ಸಮೀಕ್ಷೆಯ ಸವಾಲುಗಳು:
    ಸಾಮಾನ್ಯವಾಗಿ ನದಿ ಡಾಲ್ಫಿನ್ ಗಳು ಕೆಸರಿನ ನೀರಿನಲ್ಲಿ ವಾಸಿಸುತ್ತವೆ. ಕೇವಲ ಕೆಲವು ಸಮಯದಲ್ಲಿ ಮಾತ್ರ ನೀರಿನ ಮೇಲ್ಮೈಗೆ ಬರುತ್ತವೆ. ಹೀಗಿರುವಾಗ ಡಾಲ್ಫಿನ್ ಜನಸಂಖ್ಯೆಯನ್ನು ಅಂದಾಜಿಸುವುದು ಕಷ್ಟಕರವಾಗಿರುತ್ತದೆ.

    ಜನಸಂಖ್ಯೆಯ ಅಂದಾಜು ವರದಿಯ ಪ್ರಕಾರ, ಡಾಲ್ಫಿನ್ ಕೇವಲ 1.26 ಸೆಕೆಂಡ್ ಗಳ ಕಾಲ ಮಾತ್ರ ನೀರಿನ ಮೇಲ್ಮೈ ಗೆ ಬರುತ್ತವೆ. ಜನರಿರುವ ಕಡೆ ಡಾಲ್ಫಿನ್ ಗಳು ನೀರಿನ ಮೇಲ್ಮೈಗೆ ಬರಲು ಹೆದರುತ್ತವೆ. ಈ ಕಾರಣದಿಂದ ಡಾಲ್ಫಿನ್ ಗಳು ಎಣಿಕೆಗೆ ಸುಲಭವಾಗಿ ಸಿಗುವುದಿಲ್ಲ.

    ಸಮೀಕ್ಷೆ ನಡೆಸಲು ನೀರಿನಲ್ಲಿ ಡಾಲ್ಫಿನ್ ಚಿತ್ರಗಳನ್ನು ಸೆರೆಹಿಡಿಯಲು ಮೈಕ್ರೋಫೋನ್ ಹಾಗೂ ಹೈಡ್ರೋಫೋನ್ ಗಳನ್ನು ಬಳಸಲಾಗುತ್ತದೆ. ಇವುಗಳು ನೀರಿನಲ್ಲಿ ಚಲಿಸುವ ವಸ್ತುಗಳ ಫೋಟೋಗಳನ್ನು ಸೆರೆಹಿಡಿಯುತ್ತದೆ. ಈ ಪ್ರಕ್ರಿಯೆಯನ್ನು ಎಖೋಲೇಶನ್ ಎಂದು ಕರೆಯಲಾಗುತ್ತದೆ.

    ನೀರಿನ ಆಳದ ಆಧಾರದ ಮೇಲೆ ಹಡಗುಗಳ ಕೆಳಗೆ ಈ ಮೈಕ್ರೋಫೋನ್ ಗಳನ್ನು ಅಂಟಿಸಲಾಗುತ್ತದೆ. ನದಿಗಳು ತುಂಬಾ ಅಗಲವಾಗಿದ್ದರೆ ಒಂದು ದೋಣಿಗೆ ಎರಡು ಮೈಕ್ರೋಫೋನ್ ಅಥವಾ ಹೈಡ್ರೋಫೋನ್ ಗಳನ್ನು ಅಂಟಿಸಲಾಗುತ್ತದೆ. ಈ ದೋಣಿಗಳು ಡಾಲ್ಫಿನ್ ಗಳಿಗಿಂತ ವೇಗವಾಗಿ ಚಲಿಸುವುದರಿಂದ ಒಂದೇ ಡಾಲ್ಫಿನ್ ಎರಡು ಬಾರಿ ಚಲಿಸುವುದನ್ನು ತಡೆಹಿಡಿಯುತ್ತದೆ. ಇದರಿಂದ ಒಂದೇ ಡಾಲ್ಫಿನ್ ಫೋಟೋ ಎರಡು ಬಾರಿ ಕ್ಲಿಕ್ಕಿಸಲು ಸಾಧ್ಯವಾಗುವುದಿಲ್ಲ.

    ನದಿ ಡಾಲ್ಫಿನ್ ಸಮೀಕ್ಷೆ ನಡೆಸುವುದು ಯಾಕೆ?
    ಇತ್ತೀಚಿನ ದಿನಗಳಲ್ಲಿ ನದಿಗಳು ಮಾಲಿನ್ಯವಾಗುತ್ತಿರುವುದು, ಗಣಿಗಾರಿಕೆ, ಕಡಿಮೆ ನೀರಿನ ಆಳ ಈ ರೀತಿಯ ನದಿ ನೀರಿನ ಬಳಕೆಯಿಂದಾಗಿ ಜಲಚರ ಸಸ್ತನಿಗಳ ಆವಾಸಸ್ಥಾನಗಳು ಹಾನಿಯಾಗುತ್ತಿದೆ. ಬೇಟೆಯಾಡುತ್ತಿರುವುದು ಮತ್ತು ಹವಾಮಾನ ಬದಲಾವಣೆ. ಈ ರೀತಿಯ ಕಾರಣಗಳಿಂದಾಗಿ ಜಲಚರ ಸಸ್ತನಿಗಳು ಅಳಿವಿನಂಚಿನಲ್ಲಿವೆ. ಹೀಗಾಗಿ ಅವುಗಳ ಅಂದಾಜು ವರದಿಗಾಗಿ ಈ ಸಮೀಕ್ಷೆ ನಡೆಸಲಾಗಿದೆ.

    ನದಿಯಲ್ಲಿ ಡಾಲ್ಫಿನ್ ಇರಲು ಕಾರಣವೇನು?
    ಭಾರತ ಸರ್ಕಾರ 2020ರಲ್ಲಿ ಪ್ರಾರಂಭಿಸಿದ ಪ್ರಾಜೆಕ್ಟ್ ಡಾಲ್ಫಿನ್ ಯೋಜನೆಯ ಮೂಲಕ ಸಿಹಿ ನೀರಿನ ನದಿಗಳು ಮತ್ತು ಕರಾವಳಿ ನದಿಗಳಲ್ಲಿ ಡಾಲ್ಫಿನ್ ಗಳ ರಕ್ಷಣೆ ಮಾಡಲಾಗುತ್ತಿದೆ.

    ಡಾಲ್ಫಿನ್ ಗಳು ಶುದ್ಧ, ಹರಿಯುವ ನೀರಿನಲ್ಲಿ ಮಾತ್ರ ಬದುಕುತ್ತವೆ. ನದಿಗಳಲ್ಲಿ ಡಾಲ್ಫಿನ್ ಗಳು ಇದ್ದರೆ ಆ ನದಿ ಆರೋಗ್ಯಕರ ನದಿ ವ್ಯವಸ್ಥೆಯನ್ನು ಹೊಂದಿದೆ ಎಂದು ನಿರ್ಣಯಿಸಲಾಗುತ್ತದೆ. ಪ್ರಾಜೆಕ್ಟ್ ಡಾಲ್ಫಿನ್ ಯೋಜನೆಯು ನದಿ ಮಾತ್ರವಲ್ಲದೆ ಸಮುದ್ರ ಹಾಗೂ ಸಾಗರಗಳ ಡಾಲ್ಫಿನ್ ಗಳ ರಕ್ಷಣೆಯ ಗುರಿಯನ್ನು ಹೊಂದಿದೆ.

    ಡಾಲ್ಫಿನ್ ಅತ್ಯಂತ ಬುದ್ಧಿವಂತ ಸಸ್ತನಿಯಾಗಿವೆ. ಸದ್ಯ ಪರಿಸರದ ಸೂಕ್ಷ್ಮ ಪ್ರದೇಶಗಳನ್ನು ಕೇಂದ್ರೀಕರಿಸಿ ಭಾರತ ಸರ್ಕಾರ ಸಮುದ್ರ ಡಾಲ್ಫಿನ್ ಜನಸಂಖ್ಯೆಯನ್ನು ಕೂಡ ಅಂದಾಜಿಸಲು ಯೋಜಿಸುತ್ತಿದೆ.