Tag: Experts

  • ಬೆಂಗ್ಳೂರಿಗರೇ ಎಚ್ಚರ- ಮೇ ಅಂತ್ಯಕ್ಕೆ ಹೆಚ್ಚಾಗಲಿದೆ ಕೊರೊನಾ ಅಬ್ಬರ

    ಬೆಂಗ್ಳೂರಿಗರೇ ಎಚ್ಚರ- ಮೇ ಅಂತ್ಯಕ್ಕೆ ಹೆಚ್ಚಾಗಲಿದೆ ಕೊರೊನಾ ಅಬ್ಬರ

    – ಕೊರೊನಾ ಕಂಟ್ರೋಲ್‍ಗೆ ‘ಪ್ಲ್ಯಾನ್ ಬಿ’ ಸೂತ್ರ

    ಬೆಂಗಳೂರು: ಭಾರತದಲ್ಲಿ ಜೂನ್, ಜುಲೈ ಅಂತ್ಯಕ್ಕೆ ಕೊರೊನಾ ಇನ್ನಿಲ್ಲದಂತೆ ಬಾಧಿಸಲಿದೆ ಅಂತ ಎಚ್ಚರಿಸಲಾಗಿದೆ. ಆದರೆ ಬೆಂಗಳೂರಿಗೆ ಮಾತ್ರ ಮೇ ತಿಂಗಳೇ ಕಂಟಕವಾಗಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

    ಮುಂದಿನ ವಾರ ಬೆಂಗಳೂರಿನಲ್ಲಿ ಮತ್ತಷ್ಟು ಕೊರೊನಾ ಹೆಚ್ಚಳವಾಗಲಿದ್ದು, ಮೇ ಅಂತ್ಯಕ್ಕೆ 5 ಸಾವಿರ ಪ್ರಕರಣ ಪತ್ತೆಯಾಗಬಹುದು ಅಂತ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಲಾಕ್‍ಡೌನ್ ಸಡಿಲಿಕೆ ಆಗಿ ನಾಲ್ಕು ದಿನದಲ್ಲಿ ಅಂತಹ ಕಂಟಕ ಬೆಂಗಳೂರಿಗೆ ಎದುರಾಗಿಲ್ಲ. ಆದರೆ ಮುಂದಿನ ವಾರ ಹೈ ರಿಸ್ಕ್ ಎದುರಾಗಲಿದೆ ಅಂತ ತಜ್ಞರು ಹೇಳಿದ್ದಾರೆ.

    ಬೆಂಗಳೂರಿಗೆ ಹೈ ಅಲರ್ಟ್ ನೀಡಿದ ತಜ್ಞರು ಕೊರೊನಾ ಕಂಟ್ರೋಲ್‍ಗೆ ‘ಪ್ಲಾನ್ ಬಿ’ ಸೂತ್ರ ರೆಡಿ ಮಾಡುವಂತೆ ಸಲಹೆ ನೀಡಿದ್ದಾರೆ. ಸೋಂಕು ಪೀಡಿತ ದೇಶದಿಂದ ಬರುವವರ ಮೇಲೆ ಹದ್ದಿನ ಕಣ್ಣು ಇಡಲು ಸೂಚಿಸಿದ್ದಾರೆ.

    ‘ಪ್ಲ್ಯಾನ್ ಬಿ’ ಸೂತ್ರ:
    ಮೊದಲಿಗೆ ಎಲ್ಲಾ ವಾರ್ಡ್ ಗಳಲ್ಲಿ ಮತ್ತಷ್ಟು ತಂಡ ರಚನೆ ಮಾಡಿ. ಗ್ರೀನ್ ಝೋನ್ ಅಂತ ನಿರ್ಲಕ್ಷ್ಯ ಮಾಡಬೇಡಿ. ನಿರಂತರ ಹೆಲ್ತ್ ಸ್ಕ್ರೀನಿಂಗ್ ಇರಲಿ ಎಂದಿದ್ದಾರೆ. ಮುಖ್ಯವಾಗಿ ಸಿಸಿಟಿವಿ ಅಳವಡಿಸಿ, ಸಿಕ್ಕಸಿಕ್ಕಲ್ಲಿ ಉಗುಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ. ಜೊತೆಗೆ ಸ್ವಚ್ಛ ಬೆಂಗಳೂರಿನತ್ತ ಗಮನ ಹರಿಸಿ ಅಂತ ಸಲಹೆ ನೀಡಿದ್ದಾರೆ. ಬಿಬಿಎಂಪಿ ವಿಪತ್ತು ನಿರ್ವಹಣ ಕೋಶ ಸದ್ಬಳಕೆ ಮಾಡಿ ಕಾರ್ಮಿಕರು, ದುರ್ಬಲರು, ಗರ್ಭಿಣಿಯರು, ವಯಸ್ಸಾದವರ ಡೇಟಾ ಬೇಸ್ ರೆಡಿ ಇಟ್ಟುಕೊಳ್ಳಿ ಎಂದಿದ್ದಾರೆ.

    ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಬಲಪಡಿಸಿ, ಜನ ಖಾಸಗಿ ಆಸ್ಪತ್ರೆಗಳತ್ತ ಹೆಚ್ಚು ಹೋಗದಂತೆ ಗಮನ ಹರಿಸಿ. ವಾರ್ಡ್ ಮಟ್ಟದಲ್ಲಿ ಆರೋಗ್ಯ ಮೇಲ್ವಿಚಾರಣೆಗೆ ಟೀಮ್ ರಚಿಸಿ, ಇಂತಿಷ್ಟು ಮನೆಯ ಸರ್ವೆ ಕಾರ್ಯವನ್ನು ನಿಗದಿ ಪಡಿಸಿ. ಯಾಕೆಂದರೆ ಲಾಕ್‍ಡೌನ್ ಸಡಿಲಿಕೆ ಎಫೆಕ್ಟ್ ಗೊತ್ತಾಗಲು ಇನ್ನೊಂದು ವಾರ ಕಾಯಬೇಕು ಎಂದಿದ್ದಾರೆ.

    ಬೆಂಗಳೂರು ಜಿಲ್ಲಾಡಳಿತ ಹೊರ ಜಿಲ್ಲೆಯಿಂದ ಬರುವವರ ಕೈಗೆ ಸೀಲ್ ಹಾಕಿ, ಹೋಮ್ ಕ್ವಾರಂಟೈನ್ ಮಾಡಿ ಅಂತ ಸೂಚಿಸಿದ್ದಾರೆ.

  • ಮನೆಯಲ್ಲಿ ಕಾಣಿಸಿಕೊಂಡ್ವು ಎರಡು ವಿಷಕಾರಿ ಹಾವುಗಳು

    ಮನೆಯಲ್ಲಿ ಕಾಣಿಸಿಕೊಂಡ್ವು ಎರಡು ವಿಷಕಾರಿ ಹಾವುಗಳು

    ಹಾಸನ: ಜಿಲ್ಲೆಯ ಆಲೂರು ತಾಲೂಕಿನ ಯಡಿಯೂರು ಗ್ರಾಮದ ಮನೆಯಲ್ಲಿ ಎರಡು ವಿಷಕಾರಿ ಹಾವುಗಳು ಪತ್ತೆಯಾಗಿವೆ.

    ಯಡಿಯೂರು ಗ್ರಾಮದ ಇಂದ್ರಕುಮಾರ್ ಎಂಬವರ ಮನೆಯಲ್ಲಿ ತಡರಾತ್ರಿ ಎರಡು ಜಾತಿಯ ವಿಷಪೂರಿತ ಹಾವುಗಳು ಕಾಣಿಸಿಕೊಂಡಿವೆ. ಒಂದು ನಾಗರಹಾವಿಗಿದ್ದರೆ, ಇನ್ನೊಂದು ಕೊಳಕುಮಂಡಲದ ಹಾವು. ತಡರಾತ್ರಿ ಹಾವುಗಳು ಪರಸ್ಪರ ಬುಸುಗುಡುತ್ತಿರುವುದನ್ನು ಮನೆಯವರು ಗಮನಿಸಿದ್ದಾರೆ. ಅದೃಷ್ಟವಶಾತ್ ಹಾವುಗಳಿಂದ ಯಾರಿಗೂ ಯಾವುದೇ ಅಪಾಯ ಆಗಿಲ್ಲ.

    ಕೂಡಲೇ ಉರಗತಜ್ಞ ಬಾಬು ಎಂಬವರಿಗೆ ಮನೆಯಲ್ಲಿ ಬೇರೆ ಬೇರೆ ಜಾತಿಯ ಹಾವುಗಳಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಾಬು ಎರಡು ಹಾವುಗಳನ್ನು ಜಾಗರೂಕತೆಯಿಂದ ರಕ್ಷಿಸಿದ್ದಾರೆ. ಬಳಿಕ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಒಂದು ಕಿಮೀ ದೂರದ ಟಾರ್ಗೆಟ್ ಉರುಳಿಸುವ `ಸ್ಟಾರ್ ವಾರ್ಸ್ ಗನ್’ – ಚೀನಾ ಸೈನ್ಯಕ್ಕೆ ಹೊಸ ಆಸ್ತ್ರ

    ಒಂದು ಕಿಮೀ ದೂರದ ಟಾರ್ಗೆಟ್ ಉರುಳಿಸುವ `ಸ್ಟಾರ್ ವಾರ್ಸ್ ಗನ್’ – ಚೀನಾ ಸೈನ್ಯಕ್ಕೆ ಹೊಸ ಆಸ್ತ್ರ

    ಬಿಜೀಂಗ್: ಹಾಲಿವುಡ್ ನ ಸ್ಟಾರ್ ವಾರ್ಸ್ ಸಿನಿಮಾ ಶ್ರೇಣಿಯಲ್ಲಿ ಕಾಣಿಸಿಕೊಂಡಿರುವ ಕಾಲ್ಪಿನಿಕ ಗನ್ ಗೆ ಚೀನಾ ನೈಜ ರೂಪು ನೀಡಲು ಸಿದ್ಧತೆ ನಡೆಸಿದ್ದು, ಸುಮಾರು ಒಂದು ಕಿಮೀ ದೂರದ ಟಾರ್ಗೆಟ್ ಅನ್ನು ಹೊಡೆದುರುಳಿಸಬಲ್ಲ ಸುಧಾರಿತ ಗನ್ ಅಭಿವೃದ್ಧಿ ಪಡಿಸುತ್ತಿದೆ ಎಂದು ವರದಿಯಾಗಿದೆ.

    ಮಾನವ ದೇಹಕ್ಕೆ ಅತ್ಯಂತ ಮಾರಣಾಂತಿಕ ಲೇಸರ್ ಕಿರಣವನ್ನು ಬಳಸಿಕೊಂಡು ಗನ್ ಅಭಿವೃದ್ಧಿ ಪಡಿಸುತ್ತಿದೆ. ಈ ಕುರಿತು ಸೌತ್ ಚೈನಾ ಮಾರ್ನಿಂಗ್ ಪತ್ರಿಕೆ ವರದಿ ಮಾಡಿದ್ದು, ಝಡ್‍ಕೆಝೆಎಂ-500 ಹೆಸರಿನ ಗನ್ ಅಭಿವೃದ್ಧಿ ಪಡಿಸುತ್ತಿರುವುದಾಗಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

    ಸದ್ಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸುತ್ತಿರುವ ಗನ್ 3 ಕೆಜಿ ತೂಕ ಹೊಂದಿರಲಿದ್ದು, ಎಕೆ47 ಗನ್ ಮಾದರಿಯನ್ನು ಹೊಂದಿರುತ್ತದೆ. ಗನ್ ಸಾಮಥ್ರ್ಯ ಬರಿ ಕಣ್ಣಿಗೆ ಕಾಣದಷ್ಟು ಶಕ್ತಿಯನ್ನು ಹೊಂದಿರಲಿದ್ದು, ಎದುರಾಳಿ ದೇಹದ ಸೀಳುವಂತಹ ಶಕ್ತಿಯನ್ನು ಹೊಂದಿರುತ್ತದೆ. ಗನ್ ರಿಚಾರ್ಜ್ ಮಾಡಲು ಲಿಥಿಯಂ ಬ್ಯಾಟರಿ ಪವರ್ ಕೂಡ ನೀಡಲಾಗುತ್ತಿದ್ದು, 2 ಸೆಕೆಂಡ್ ಗೆ 1 ಸಾವಿರದಷ್ಟು ಲೇಸರ್ ಕಿರಣಗಳನ್ನು ಉಗುಳುವ ಸಾಮಥ್ರ್ಯ ಹೊಂದಿರುತ್ತದೆ. ಅಲ್ಲದೇ ಇದನ್ನು ಕಾರು, ಬೋಟ್ ಮತ್ತು ವಿಮಾನಗಳಲ್ಲಿ ಅಳವಡಿಸಿ ಕಾರ್ಯಾಚರಣೆ ನಡೆಸಬಹುದಾಗಿದೆ.

    ಸದ್ಯ ಈ ಗನ್ ಗಳನ್ನು ಅಭಿವೃದ್ಧಿ ಪಡಿಸಿದ ಬಳಿಕ ಭಯೋತ್ಪಾದನ ಚಟುವಟಿಕೆ ನಡೆಸುವವರ ವಿರುದ್ಧ ಬಳಕೆ ಮಾಡಲು ಚೀನಾ ನಿರ್ಧರಿಸಿದ್ದು, ಗನ್ ಗಳ ಮೊದಲ ಸರಣಿಯನ್ನು ಬಿಡುಗಡೆಗೆ ಸಿದ್ಧಪಡಿಸಲಾಗುತ್ತಿದೆ. ಒಂದೊಮ್ಮೆ ಈ ಪ್ರಯೋಗ ಯಶಸ್ವಿಯಾದರೆ ಚೀನಾ ಅಗಾಧ ಪ್ರಮಾಣದ ಲಾಭ ಪಡೆಯಬಹುದಾಗಿದೆ. ಸದ್ಯ ಒಂದು ಗನ್‍ಬೆಲೆ 10 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.