Tag: Experience

  • 23ನೇ ವಯಸ್ಸಿಗೆ ಜೈಲು ನೋಡಿದ್ನಲ್ಲ ಅಂತ ಬೇಸರವಿದೆ: ಸೋನು ಶ್ರೀನಿವಾಸ್ ಗೌಡ

    23ನೇ ವಯಸ್ಸಿಗೆ ಜೈಲು ನೋಡಿದ್ನಲ್ಲ ಅಂತ ಬೇಸರವಿದೆ: ಸೋನು ಶ್ರೀನಿವಾಸ್ ಗೌಡ

    ರೀಲ್ಸ್ ರಾಣಿ ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಕಾನೂನು ಬಾಹಿರವಾಗಿ ಹೆಣ್ಣು ಮಗು ದತ್ತು ಪಡೆದ ವಿಚಾರವಾಗಿ 11 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು. ಏ.6ರಂದು ಸೋನು ಜೈಲಿನಿಂದ (Jail) ರಿಲೀಸ್ ಆಗಿದ್ದಾರೆ. ಜೈಲಿನಿಂದ ಹೊರಬಂದ್ಮೇಲೆ ಸೋನು ಸಖತ್ ಸೈಲೆಂಟ್ ಆಗಿದ್ದರು.

    ಪರಪ್ಪನ ಅಗ್ರಹಾರದಿಂದ ರಿಲೀಸ್ ಆದ್ಮೇಲೆ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡೋಕೆ ಸೋನು ನಿರಾಕರಿಸಿದ್ದರು. ಆದರೆ ಅವರ ಲಾಯರ್ ಸೂಚನೆಯ ಮೇರೆಗೆ ಸೋನು ಯಾವುದೇ ರಿಯಾಕ್ಷನ್ ನೀಡಿರಲಿಲ್ಲ. ಆದರೆ ಈ ಪ್ರಕರಣ ಇನ್ನೂ ನಡೆಯುತ್ತಿದೆ. ಜಾಮೀನಿನ ಮೇಲೆ ಸೋನು ಹೊರಬಂದಿದ್ದಾರೆ.

    ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಮೊದಲ ಪ್ರತಿಕ್ರಿಯೆ ಮುಂದಿನ ನಡೆ ಏನು ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಮೂಡಿಸಿದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇರುವ ನಟಿ ಈಗ ಸಿಕ್ಕಾಪಟ್ಟೆ ಸೈಲೆಂಟ್‌ ಆಗಿದ್ದರು. ತಮ್ಮ ಮನೆಯಲ್ಲಿ ಸೋನು ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಆಗಿರುವ ವಿವಾದದಿಂದ ಸೋನು ಮೌನಕ್ಕೆ ಶರಣಾಗಿದ್ದರು. ಈಗ ವಿಡಿಯೋವೊಂದನ್ನು ಮಾಡಿ ಜೈಲು ಎಕ್ಸಪಿರಿಯನ್ಸ್ ಹೇಳಿಕೊಂಡಿದ್ದಾರೆ.

    ಕೇಸ್ ಬಗ್ಗೆ ಏನೂ ಮಾತನಾಡಬಾರದು ಎನ್ನುವ ಲಾಯರ್ ಮಾತನ್ನು ಪಾಲಿಸಿರುವ ಅವರು, ಜೈಲು ಅನುಭವವನ್ನು ತೆರೆದಿಟ್ಟಿದ್ದಾರೆ. ನಾಲ್ಕು ಗೋಡೆ ಮಧ್ಯ ಬದುಕೋದು ತುಂಬಾ ಕಷ್ಟ ಅನಿಸಿತು ಎಂದಿದ್ದಾರೆ. ಜೈಲಿನಲ್ಲಿ ತುಂಬಾ ಸೊಳ್ಳೆಗಳು ಇದ್ದವು. ನನಗೆ ಮಲಗೋಕೆ ಕಷ್ಟ ಆಗುತ್ತಿತ್ತು ಅಂತಾನೂ ಹೇಳಿಕೊಂಡಿದ್ದಾರೆ.

     

    23ನೇ ವಯಸ್ಸಿಗೆ ಜೈಲು ನೋಡಿ ಬಂದಿದ್ದು ಅವರಿಗೆ ಆಘಾತ ತರಿಸಿದೆ. ನಾನು ಯಾವತ್ತೂ ಇಂಥದ್ದೊಂದು ಸನ್ನಿವೇಶ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕೇಸ್ ಬಗ್ಗೆ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ. ಯಾವ ವಿಷಯವನ್ನೂ ಮುಚ್ಚಿಡಲ್ಲ ಎಂದು ಪ್ರಾಮೀಸ್ ಮಾಡಿದ್ದಾರೆ. ಕಷ್ಟದ ದಿನಗಳಲ್ಲಿ ಸಾಥ್ ಕೊಟ್ಟವರನ್ನು ನೆನಪಿಸಿಕೊಂಡಿದ್ದಾರೆ ಸೋನು.

  • ಕೆಜಿಎಫ್‍ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ – ಬಾಲ ರಾಕಿ ಹೇಳ್ತಾನೆ ಓದಿ

    ಕೆಜಿಎಫ್‍ನಲ್ಲಿ ಅವಕಾಶ ಸಿಕ್ಕಿದ್ದು ಹೇಗೆ – ಬಾಲ ರಾಕಿ ಹೇಳ್ತಾನೆ ಓದಿ

    ಬೆಂಗಳೂರು: ಕನ್ನಡದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ನಲ್ಲಿ ಬಾಲನಟನಾಗಿ ಅಭಿನಯಿಸಿರುವ ಮಾಸ್ಟರ್ ಅನ್ಮೋಲ್ ಚಿತ್ರದ ಕುರಿತು ಪಬ್ಲಿಕ್ ಟಿವಿ ಜೊತೆ ಚಿತ್ರದ ಅನುಭವ ಹಂಚಿಕೊಂಡಿದ್ದಾನೆ.

    ಬಾಕ್ಸ್ ಆಫೀಸ್‍ನಲ್ಲಿ ದೂಳೆಬ್ಬಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಅನ್ಮೋಲ್ ಯಶ್ ಬಾಲ್ಯದ ಪಾತ್ರಧಾರಿಯಾಗಿ ಅಭಿನಯಿಸಿದ್ದಾನೆ. ಮಾಸ್ಟರ್ ಅನ್ಮೋಲ್ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೆಜಿಎಫ್ ಚಿತ್ರಕ್ಕೆ ಅವಕಾಶ ಹೇಗೆ ದೊರೆಯಿತು, ಚಿತ್ರದಲ್ಲಿ ನಟಿಸಿದ ಅನಿಭವವನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾನೆ.

    ಹಲವು ವರ್ಷಗಳಿಂದ ಡ್ಯಾನ್ಸ್, ಜಿಮ್ನಾಸ್ಟಿಕ್, ಕರಾಟೆ ಹೀಗೆ ಎಲ್ಲತರಹದ ಕಲೆಯನ್ನು ನನ್ನ ಗುರುಗಳಾದ ಚಾಮರಾಜ್ ಸಾರ್ ಬಳಿ ಕಲಿಯುತ್ತಿದ್ದೇನೆ. ಕೆಜಿಎಫ್ ಚಿತ್ರದಲ್ಲಿ ಬಾಲನಟನಾಗಿ ನಟಿಸಲು ಅವರೇ ನಿರ್ದೇಶಕ ಪ್ರಶಾಂತ್ ನೀಲ್ ಬಳಿ ಮಾತನಾಡಿ ಅವಕಾಶ ಕೊಡಿಸಿದ್ದರು ಎಂದು ತಿಳಿಸಿದನು.

    ಮೊದಲು ಕೆಜಿಎಫ್ ಚಿತ್ರಕ್ಕೆ ಯಶ್ ಅವರು ನಾಯಕ ನಟ ಅಂತ ಗೊತ್ತಿರಲಿಲ್ಲ. ಬಳಿಕ ನಿರ್ದೇಶಕರು ಹೇಳಿದ ಮೇಲೆ ತಿಳಿಯಿತು. ಚಿತ್ರದಲ್ಲಿ ನಟಿಸುವಾಗ ನನ್ನ ಪೋಷಕರು, ಗುರುಗಳು ಹಾಗೂ ಕೆಜಿಎಫ್ ಚಿತ್ರ ತಂಡದವರು ತುಂಬಾ ಸರ್ಪೋಟ್ ಮಾಡಿದರು. ಇವತ್ತು ಬೆಳಗ್ಗೆ ಚಿತ್ರವನ್ನು ನಾನು ಚಿತ್ರಮಂದಿರಕ್ಕೆ ಹೋಗಿ ನೋಡಿದೆ. ಕೆಜಿಎಫ್ ಅಂತಹ ದೊಡ್ಡ ಚಿತ್ರದಲ್ಲಿ ನಟಿಸಿದಕ್ಕೆ ತುಂಬಾ ಖುಷಿಯಾಗ್ತಿದೆ. ಸುಮಾರು ಒಂದು ತಿಂಗಳು ಶೂಟಿಂಗ್ ಇತ್ತು, ಅದರಲ್ಲೂ ಮುಂಬೈನಲ್ಲಿ ಶೂಟಿಂಗ್ ನನಗೆ ತುಂಬಾ ಇಷ್ಟ. ಈ ಚಿತ್ರದಿಂದ ಬಹಳಷ್ಟು ಕಲಿತ್ತಿದ್ದೇನೆ. ಶೂಟಿಂಗ್ ಸಮಯದಲ್ಲಿ ತುಂಬಾ ಎಂಜಾಯ್ ಮಾಡಿದ್ದೀನಿ. ಚಿತ್ರವು ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ ಎಂದು ಅನ್ಮೋಲ್ ಅನುಭವ ಹಂಚಿಕೊಂಡನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv