Tag: Excise Minister Nagesh

  • ಆನ್‍ಲೈನ್ ಮದ್ಯ ಮಾರಾಟದ ಅಧ್ಯಯನಕ್ಕೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ: ಎಚ್‌.ನಾಗೇಶ್

    ಆನ್‍ಲೈನ್ ಮದ್ಯ ಮಾರಾಟದ ಅಧ್ಯಯನಕ್ಕೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ: ಎಚ್‌.ನಾಗೇಶ್

    ಬೆಂಗಳೂರು: ಆನ್‍ಲೈನ್ ನಲ್ಲಿ ಮಧ್ಯ ಮಾರಾಟ ಮಾಡಲು ಸರ್ಕಾರದ ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.

    ವಿಕಾಸಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಬಕಾರಿ ಸಚಿವ ನಾಗೇಶ್ ಅವರು, ಬೇರೆ ರಾಜ್ಯಗಳಲ್ಲಿ ಆನ್‍ಲೈನ್‍ನಲ್ಲಿ ಮದ್ಯ ಮಾರಾಟ ಹೇಗೆ ಮಾಡಲಾಗುತ್ತಿದೆ. ಈ ಬಗ್ಗೆ ವರದಿ ನೀಡಲು ಅಬಕಾರಿ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಆನ್ ಲೈನ್ ನಲ್ಲಿ ಮದ್ಯ ಮಾರಾಟ ವಿಚಾರವಾಗಿ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಹೇಗಿದೆ ಅನ್ನೋದರ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಆ ವರದಿಯ ಸಾಧಕ ಬಾಧಕಗಳ ಬಳಿಕ ಈ ಬಗ್ಗೆ ತೀರ್ಮಾನ ಮಾಡುತ್ತೇವೆ. ಬಳಿಕ ಸಿಎಂ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದವರ ವಯಸ್ಸು ಎಷ್ಟು? ಯಾರು ಆರ್ಡರ್ ಮಾಡುತ್ತಿದ್ದಾರೆ ಎಂಬ ಮಾಹಿತಿ ತಿಳಿಯಬೇಕಿದೆ. ಇದಕ್ಕಾಗಿ ಅಧಿಕಾರಿಗಳ ತಂಡ ವರದಿ ಸಿದ್ಧಪಡಿಸುತ್ತಿದೆ ಎಂದರು.

    ಮದ್ಯ ಖರೀದಿ ಮಾಡಲು ಕೆಲವರು ಹಿಂಜರಿಯುತ್ತಾರೆ. ಮದ್ಯದ ಅಂಗಡಿಗೆ ಹೋಗಲು ಹಿಂದೇಟು ಹಾಕುತ್ತಾರೆ. ಇಂಥದವರಿಗೆ ಇದರಿಂದ ಅನುಕೂಲ ಆಗುತ್ತೆ. ಹೀಗಾಗಿ ಈ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ತಜ್ಞರು, ಬುದ್ಧಿಜೀವಿಗಳ ಜೊತೆ ಚರ್ಚೆ ಮಾಡುತ್ತೇವೆ. ಕೆಲವೊಂದು ವಿರೋಧಗಳು ಕೂಡ ಇದೆ. ಎಲ್ಲವೂ ವರದಿ ಬಂದ ಮೇಲೆಯೇ ತೀರ್ಮಾನ ತೆಗೆದುಕೊಳ್ಳುತ್ತೇವೆ.

    ಆದಾಯದ ನಿರೀಕ್ಷೆ ಹಿನ್ನೆಲೆಯಲ್ಲಿ ಬಾರ್ ಬಂದ್ ಮಾಡಿರಲಿಲ್ಲ. ಇವತ್ತಿನಿಂದ ಬಾರ್ ಅಂಡ್ ರೆಸ್ಟೋರೆಂಟ್ ಆರಂಭಕ್ಕೆ ಅವಕಾಶ ನೀಡಲಾಗಿದೆ. ನಿತ್ಯ 80 ಕೋಟಿ ರೂ. ಆದಾಯ ಲಭಿಸುತ್ತಿದ್ದು, ಸದ್ಯ ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಅವಕಾಶ ನೀಡುರುವುದರಿಂದ ಈಗ ಮತ್ತೆ ಅದು ಶೇ.50 ಆದಾಯ ಜಾಸ್ತಿಯಾಗುವ ನಿರೀಕ್ಷೆ ಇದೆ. 2019-20 ರಲ್ಲಿ 20,900 ಸಾವಿರ ಕೋಟಿ ರೂ. ಆದಾಯ ಗಳಿಸುವ ಟಾರ್ಗೆಟ್ ಇತ್ತು. ಈಗ 22,700 ಕೋಟಿ ರೂ. ಆದಾಯದ ಟಾರ್ಗೆಟ್ ಇದೆ. ಎಂಎಸ್‍ಐಎಲ್ ಹೊಸದಾಗಿ ಲೈಸೆನ್ಸ್ ನೀಡುತ್ತಿದ್ದು, ಬೇರೆ ಯಾವುದೇ ಲೈಸನ್ಸ್ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

    ಡ್ರಗ್ಸ್ ದಂಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಡ್ರಗ್ಸ್ ವಿಚಾರಗಳು ಇಲಾಖೆ ಗಮನಕ್ಕೆ ಬಂದರೆ ಪೊಲೀಸ್ ಇಲಾಖೆಯ ಗಮನ ತರುವ ಕೆಲಸ ಮಾಡುತ್ತೇವೆ. ಪೊಲೀಸ್ ಅಧಿಕಾರಿಗಳ ಜೊತೆ ಅಬಕಾರಿ ಅಧಿಕಾರಿಗಳು ಜಂಟಿ ಕಾರ್ಯಚರಣೆಗೆ ಚಿಂತನೆ ನಡೆಯುತ್ತಿದೆ. ಸಿಸಿಬಿ ಸೆಂಟ್ರಲ್ ಐಜಿ ಬೆಂಗಳೂರು ನಗರ ಅಯುಕ್ತರ ನೇತೃತ್ವದಲ್ಲಿ ಕಾರ್ಯಚರಣೆಗೆ ಚಿಂತನೆ ಇದೆ. ಶೀಘ್ರದಲ್ಲೇ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.

  • ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

    ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

    -ಖಾಕಿ ಸರ್ಪಗಾವಲಿನ ನಡ್ವೆ  ಬಿಂದಾಸ್ ಮಾರಾಟ
    -ಹಸಿವು ತುಂಬಿಸುವರಿಂದಲೇ ಮದ್ಯ ಪೂರೈಕೆ

    ಬೆಂಗಳೂರು: ಕೊರೊನಾ ತಡೆಗಾಗಿ ವಿಧಿಸಿರುವ ಲಾಕ್‍ಡೌನ್ ನ್ನು ಕೆಲ ಖದೀಮರು ಬಂಡವಾಳವಾಗಿ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಎಣ್ಣೆ ದಂಧೆ ಬಯಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೆಲ ದಂಧೆಕೋರರು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು 90 ರೂ. ಬೆಲೆಯ ಮದ್ಯವನ್ನು ಬರೋಬ್ಬರಿ 600 ರೂ.ಗೆ ಮಾರಾಟ ಮಾಡುತ್ತಿರೋದು ಪಬ್ಲಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರಾಜ್ಯದ ಮೂಲೆ ಮೂಲೆಗಳಿಂದ ಮದ್ಯವನ್ನು ತರುತ್ತಿರುವ ದಂಧೆಕೋರರು ಖಾಕಿ ಸರ್ಪಗಾವಲಿನಲ್ಲೇ ರಾಜಾರೋಷವಾಗಿ ದಂಧೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಖಾಕಿ ಬಂದೋಬಸ್ತ್ ಕಲ್ಪಿಸಲಾಗಿದ್ದರೂ, ಮದ್ಯ ಸಿಲಿಕಾನ್ ಸಿಟಿ ಪ್ರವೇಶಿಸುತ್ತಿರೋದು ಗಮನಿಸಿದ್ರೆ, ಮೇಲ್ನೋಟಕ್ಕೆ ಪೊಲೀಸರ ವೈಫಲ್ಯ ಎದ್ದು ಕಾಣಿಸುತ್ತಿದೆ.

    ಮಧ್ಯರಾತ್ರಿ ಎರಡು, ಮೂರು ಗಂಟೆಗೆ ರಾಮನಗರ, ಕುಣಿಗಲ್, ತುಮಕೂರಿನಿಂದ ಬೆಂಗಳೂರಿಗೆ ಮದ್ಯ ಪೂರೈಕೆ ಆಗುತ್ತಿದೆ. ಈ ಮದ್ಯವನ್ನು ಸ್ವಿಗ್ಗಿ, ಝೋಮ್ಯಾಟೊ ಬ್ಯಾಗ್ ಗಳಲ್ಲಿ ಖದೀಮರು ಹಾಕಿಕೊಂಡು ಸಿಲಿಕಾನ್ ಸಿಟಿಯಲ್ಲಿ ಮನೆ ಮನೆಗೆ ತೆರಳಿ ಸರಬರಾಜು ಮಾಡುತ್ತಿದ್ದಾರೆ. ಯಾರ ಭಯವಿಲ್ಲದೇ ಮದ್ಯ ಮಾರಾಟ ಮಾಡುತ್ತಿರೋದು ಸಿಲಿಕಾನ್ ಸಿಟಿ ಪೊಲೀಸರಿಗೆ ಗೊತ್ತೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

    ಅಕ್ರಮ ಮದ್ಯ ಮಾರಾಟದ ಸುದ್ದಿ ತಿಳಿಯುತ್ತಿದ್ದಂತೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ತಂಡದ ಕ್ಯಾಮೆರಾದಲ್ಲಿ ಎಣ್ಣೆ ದಂಧೆ ಸಂಪೂರ್ಣವಾಗಿ ಸೆರೆಯಾಗಿದೆ. ಪಬ್ಲಿಕ್ ಟಿವಿ ಪ್ರತಿನಿಧಿ ಮದ್ಯ ಖರೀದಿಸುವ ಗ್ರಾಹಕನಾಗಿ ಮಾರುವೇಷದಲ್ಲಿ ಹೋದಾಗ ದಂಧೆಕೋರ ದಂಧೆಯ ಸಂಪೂರ್ಣ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ.

    ಸ್ಥಳ- ಸುಂಕದಕಟ್ಟೆ
    ಪಬ್ಲಿಕ್ ಟಿವಿ: ಎಷ್ಟು ಹೇಳಿದ್ರು
    ಮದ್ಯ ವಿತರಕ : 600 ರೂಪಾಯಿ
    ಪಬ್ಲಿಕ್ ಟಿವಿ: ಹೇ..ನನ್ಗೆ 550 ಹೇಳಿದ್ರು
    ಮದ್ಯ ವಿತರಕ: ಇಲ್ಲ.. ಕೇಳ್ರಿ..ಸಿಗೊದೆ ನಮ್ಗೆ 250. ಊರು ಕಡೆಯಿಂದ ತರಿಸೋದು ನಾವು. ಇಲ್ಲೆಲ್ಲ ಸೀಲ್ ಹೊಡೆದಿದಾರೆ.
    ಪಬ್ಲಿಕ್ ಟಿವಿ: ನೈಂಟಿ ರೂಪಿಸ್ ಬ್ರೋ ಇದು
    ಮದ್ಯ ವಿತರಕ: ಗೊತ್ತು ಗುರು..ನಮ್ಗೂ ಗೊತ್ತು ನಿಮ್ಗೂ ಗೊತ್ತು. ನಾವು ಅಲ್ಲಿಂದ ತರಬೇಕಲ್ಲ
    ಪಬ್ಲಿಕ್ ಟಿವಿ: ಎಲ್ಲಿಂದ ತರೋದು
    ಮದ್ಯ ವಿತರಕ: ಬೇರೆ ಕಡೆಯಿಂದ.
    ಪಬ್ಲಿಕ್ ಟಿವಿ: ಒಂದು ರೇಟ್ ಮಾಡಿ ಕೊಡಿ. ಇವತ್ತಿಗಷ್ಟೆ ಅಲ್ಲ.
    ಮದ್ಯ ವಿತರಕ: ನೋಡಣ್ಣ. ನಮ್ದು ಆಗಿದ್ರೆ ಹೇಗಾದ್ರೂ ಆಗ್ತಿತ್ತು. ಅಲ್ಲೇ 550 ರೂಪಾಯಿ ಕೊಟ್ಟು ತರ್ತಿವಿ.
    ಮತ್ತೊಬ್ಬ ಮದ್ಯ ವಿತರಕ: ಅದ್ರಲ್ಲಿ ಏನು ಸಿಗಲ್ಲಣ್ಣ. ಸುಮ್ನೆ
    ಪಬ್ಲಿಕ್ ಟಿವಿ: ನೀವು ಎಲ್ಲಿಂದ ತರೋದು?
    ಮದ್ಯ ವಿತರಕ: ರಾಮನಗರ ಆಕಡೆ ಈಕಡೆಯಿಂದ ತರೋದು.ಕುಣಿಗಲ್ ಯಡಿಯೂರುಯಿಂದ ತರ್ತಾರೆ. ಇಲ್ಲಿ ಎಲ್ಲಿಯೂ ಸಿಗಲ್ಲಣ್ಣ
    ಪಬ್ಲಿಕ್ ಟಿವಿ: ಬೇರೆ ಕಡೆಯಿಂದ ತರ್ತಿರಲ್ಲ..ನಿಮ್ಗೆ ಭಯ ಆಗಲ್ವಾ..!
    ಮದ್ಯ ವಿತರಕ: ಆಗ್ತದೆ ಏನು ಮಾಡೋದು ಅಣ.
    ಪಬ್ಲಿಕ್ ಟಿವಿ: ಕವರ್ ಇಲ್ವಾ?
    ಮದ್ಯ ವಿತರಕ: ಹಂಗೆ ಎತ್ಕೊಂಡು ಬಿಡಿ
    ಪಬ್ಲಿಕ್ ಟಿವಿ: ಹೇಗೆ ಒಟ್ಟಿಗೆ ಕಾಟನ್ ತರ ತರಿಸ್ತೀರಾ..?
    ಮದ್ಯ ವಿತರಕ: ಒಂದು ಕೇಸ್ ತರಿಸ್ತೀವಿ
    ಪಬ್ಲಿಕ್ ಟಿವಿ : ಎಲ್ಲಿಂದ ಹೇಗೆ ತರಿಸ್ತಿರಿ?
    ಮದ್ಯ ವಿತರಕ: ಇದ್ರಲ್ಲಿ ಇಟ್ಕೊಳ್ಳೋದು
    ಪಬ್ಲಿಕ್ ಟಿವಿ: ಬೈಕಾ..? ಬೈಕ್ ಬಿಡಲ್ವಾಲ್ಲ?
    ಮದ್ಯ ವಿತರಕ: ಬರಬಹುದು
    ಪಬ್ಲಿಕ್ ಟಿವಿ: ಬೈಕ್ ಓಡಾಡಂಗಿಲ್ವಲ್ಲ. ಹಂಗೆ ಮಾಡ್ತಿರಿ?
    ಮದ್ಯ ವಿತರಕ: ಅದು ಇದು ಹುಷಾರಿಲ್ಲ ಅಂತ ಹೇಳ್ಕೊಂಡು ಹೋಗಬೇಕು.
    ಪಬ್ಲಿಕ್ ಟಿವಿ: ಕೇಸಲ್ಲಿ ಎಷ್ಟಿರುತ್ತೆ?
    ಮದ್ಯ ವಿತರಕ : 48
    ಪಬ್ಲಿಕ್ ಟಿವಿ : 48ನೂ ಗಾಡಿಯಲ್ಲೇ ಇಡುತ್ತಾ…?
    ಮದ್ಯ ವಿತರಕ: ಅಲ್ಲಿಲ್ಲಿ ಇಡ್ಕೊಂಡು ಬರ್ತಿವಿ
    ಪಬ್ಲಿಕ್ ಟಿವಿ: ಅಷ್ಟು ರಿಸ್ಕ್ ತೊಗೋತಿರಿ. ಯಾರದ್ರೂ ಏನಾದ್ರು ಮಾಡಿದ್ರೆ
    ಮದ್ಯ ವಿತರಕ: ಸಿಗೋದು 50 ರೂಪಾಯಿ ಅಷ್ಟೆ
    ಪಬ್ಲಿಕ್ ಟಿವಿ: ಮತ್ತೆ ಯಾಕೆ ಅಷ್ಟೊಂದು ರಿಸ್ಕ್ ತೊಗೊತಿರಿ. ಕಾಲೇಜಿಗೆ ಹೋಗಲ್ವಾ..?
    ಮದ್ಯ ವಿತರಕ: ಇನ್ನೊಂದು ಎಕ್ಸಾಂ ಇದೆ. ಇಂಗ್ಲೀಷ್.
    ಪಬ್ಲಿಕ್ ಟಿವಿ: ಸೆಕೆಂಡ್ ಪಿಯುಸಿನಾ
    ಮದ್ಯ ವಿತರಕ: ಹು.
    ಪಬ್ಲಿಕ್ ಟಿವಿ: ಈಗ ನಿಮ್ಗೆ ಪಾಸ್ ಇರಲ್ವಲ್ಲ. ಹೇಗೆ ಹೊರಗಡೆ ಬರ್ತಿರಿ
    ಮದ್ಯ ವಿತರಕ: ನೈಟ್ 2, 3 ಗಂಟೆಗೆ ಹೋಗ್ತಿವಿ

    ಸುಂಕದಕಟ್ಟೆ, ಕುರುಬರ ಹಳ್ಳಿ ಹೀಗೆ ಬೆಂಗಳೂರಿನ ಹಲವು ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಧ್ಯರಾತ್ರಿ ತರಕಾರಿ, ದಿನಸಿ ತರುವ ವಾಹನಗಳ ಮೂಲಕವೂ ಮದ್ಯ ನಗರಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ. ಟೋಲ್ ಗಳಲ್ಲಿ ಸಾಲು ಸಾಲು ಪೊಲೀಸರು ಇದ್ರೂ, ಅವರ ದಿಕ್ಕು ತಪ್ಪಿಸಿ ಎಣ್ಣೆ ರವಾನೆ ಮಾಡಲಾಗುತ್ತದೆ. ಈ ಸುದ್ದಿ ನೋಡಿಯಾದ್ರೂ ಅಬಕಾರಿ ಸಚಿವ ನಾಗೇಶ್ ಮತ್ತು ಪೊಲೀಸರು ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ.