Tag: Europe

  • ನೋಂದಾಯಿತ ಪ್ರಮಾಣದ ಗೋಧಿ ರಫ್ತಿಗೆ ಕೇಂದ್ರಸರ್ಕಾರ ನಿರ್ಧಾರ

    ನೋಂದಾಯಿತ ಪ್ರಮಾಣದ ಗೋಧಿ ರಫ್ತಿಗೆ ಕೇಂದ್ರಸರ್ಕಾರ ನಿರ್ಧಾರ

    ನವದೆಹಲಿ: ಉತ್ಪಾದನೆ ಇಳಿಕೆಯಾದ ಹಿನ್ನೆಲೆಯಲ್ಲಿ ಭಾರತವು ಗೋಧಿ ರಫ್ತಿಗೆ ನಿಷೇಧ ಹೇರಿತ್ತು. ಆದರೆ ನಿಷೇಧ ಹೇರುವುದಕ್ಕೂ ಮುನ್ನವೇ ಕಸ್ಟಮ್ಸ್ ಪ್ರಾಧಿಕಾರದಲ್ಲಿ ನೋಂದಾಯಿಸಲಾದ ನಿಗದಿತ ಪ್ರಮಾಣದ ಗೋಧಿಯನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ಮೇ 13ಕ್ಕೂ ಮುನ್ನವೇ ಕಸ್ಟಮ್ಸ್ ವ್ಯವಸ್ಥೆಗಳಲ್ಲಿ ನೋಂದಾಯಿಸಲಾಗಿದ್ದು, ಅಂತಹ ಸರಕುಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿಸಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ ಯುದ್ಧ – ಭಾರತದಿಂದ ಈಜಿಪ್ಟ್‌ಗೆ ರಫ್ತು ಆಗಲಿದೆ ಗೋಧಿ

    Wheat 1

    ಜೊತೆಗೆ ಗೋಧಿ ರಫ್ತು ಮಾಡಲು ತೊಡಗಿರುವ ಮೇರಾ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈ.ಲಿ. ಈಜಪ್ಟ್‌ 61,500 ಮೆಟ್ರಿಕ್ ಟನ್ ಲೋಡ್ ಗೋಧಿ ರಫ್ತಿಗೆ ಅನುಮತಿ ನೀಡಿದೆ. ಅದರಲ್ಲಿ 44,340 ಮೆಟ್ರಿಕ್ ಟನ್ ಈಗಾಗಲೇ ಲೋಡ್ ಮಾಡಲಾಗಿದೆ. ಇನ್ನು 17,160 ಮೆಟ್ರಿಕ್ ಟನ್ ಮಾತ್ರ ಬಾಕಿ ಉಳಿದಿದೆ. ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದ ಗೋಧಿಯನ್ನು ಸರಬರಾಜು ಮಾಡಲು ನಿರ್ಧರಿಸಿದೆ ಎಂದು ಹೇಳಿದೆ.

    WHEAT

    ರಫ್ತಿಗೆ ನಿಷೇಧ ಹೇರಿದ್ದು ಏಕೆ?: ಭಾರತದಲ್ಲಿ ಉಷ್ಣತೆಯಲ್ಲಿ ಏರಿಕೆ ಕಂಡಿದ್ದರಿಂದ ಗೋಧಿ ಉತ್ಪಾದನೆಗೆ ಹೊಡೆತ ಬಿದ್ದಿತ್ತು. ಇದರ ಜೊತೆಗೆ ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿತ್ತು. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿತ್ತು. ಇದನ್ನೂ ಓದಿ: ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    WHEAT EXPORT

    ಭಾರತದ ಈ ನಿರ್ಧಾರವನ್ನು US, ಕೆನಡಾ, EU ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ತರಾಟೆಗೆ ತೆಗೆದುಕೊಂಡಿದೆ. ಆದರೆ ಭಾರತದಲ್ಲಿ ಗೋಧಿಯ ರಫ್ತು ನಿಷೇಧ ಮಾಡಿರುವುದಕ್ಕೆ ಚೀನಾ ಬೆಂಬಲ ನೀಡಿದೆ. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಸರಿಯಲ್ಲ. G7 ರಾಷ್ಟ್ರಗಳು ತಮ್ಮ ರಫ್ತುಗಳನ್ನು ಹೆಚ್ಚಿಸುವ ಮೂಲಕ ಆಹಾರ ಮಾರುಕಟ್ಟೆ ಪೂರೈಕೆಯನ್ನು ಸ್ಥಿರಗೊಳಿಸಲು ಏಕೆ ಮುಂದಾಗುವುದಿಲ್ಲ ಎಂದು ಚೀನಾ ಪ್ರಶ್ನಿಸಿದೆ.

  • ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ರಫ್ತಿಗೆ ನಿಷೇಧ ಹೇರಿದ ಭಾರತ- ಗೋಧಿ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

    ಪ್ಯಾರಿಸ್: ಭಾರತದಲ್ಲಿ ಗೋಧಿ ರಫ್ತು ನಿಷೇಧಿಸಿದ ಬೆನ್ನಲ್ಲೇ ವಿಶ್ವ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯು ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.

    ಯುರೋಪ್ ಮಾರುಕಟ್ಟೆಯಲ್ಲಿ ಪ್ರತಿ ಟನ್‍ಗೆ 435 ಯುರೋಗಳಿಗೆ (35,311 ರೂ.) ಏರಿಕೆ ಕಂಡಿದೆ. ಅಂದರೆ ಪ್ರತಿ ಟನ್‍ಗೆ ಅಂದಾಜು 1,053 ರೂ.ನಷ್ಟು ಹೆಚ್ಚಳವಾಗಿದೆ.

    ಗೋಧಿ ರಫ್ತು ಮಾಡುವ ರಾಷ್ಟ್ರಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಪ್ರಮುಖವಾಗಿದ್ದವು. ಆದರೆ ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಎಲ್ಲಾ ಬೆಲೆಯೂ ಗಗನಕ್ಕೆ ಏರಿತ್ತು. ಅದರ ಜೊತೆಗೆ ಗೋಧಿ ಬೆಲೆಯೂ ಏರಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಗೋಧಿಗೆ ಹೆಚ್ಚಿನ ಬೆಲೆ ಬಂದಿತ್ತು. ಇದನ್ನೂ ಓದಿ: ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುವ ಶಾಸಕನ ತಾಯಿ BPL ಹೋಲ್ಡರ್

    ರಫ್ತಿಗೆ ನಿಷೇಧ ಹೇರಿದ್ದು ಯಾಕೆ?: ಭಾರತದಲ್ಲಿ ಉಷ್ಣತೆಯಲ್ಲಿ ಏರಿಕೆ ಕಂಡಿದ್ದರಿಂದ ಗೋಧಿ ಉತ್ಪಾದನೆಗೆ ಹೊಡೆತ ಬಿದ್ದಿತ್ತು. ಇದರ ಜೊತೆಗೆ ಕಡಿಮೆ ಉತ್ಪಾದನೆ ಮತ್ತು ಜಾಗತಿಕ ಬೆಲೆಗಳು ತೀವ್ರವಾಗಿ ಹೆಚ್ಚಿರುವುದು ಸೇರಿದಂತೆ ತನ್ನದೇ ಆದ 1.4 ಶತಕೋಟಿ ಜನರ ಆಹಾರ ಭದ್ರತೆಯ ಬಗ್ಗೆ ಭಾರತ ಚಿಂತಿಸಿತ್ತು. ಇದರಿಂದಾಗಿ ರಫ್ತು ವ್ಯಾಪಾರಕ್ಕೆ ನಿಷೇಧದ ನಿರ್ಧಾರವನ್ನು ತೆಗೆದುಕೊಂಡಿತ್ತು.

    ಭಾರತದ ಈ ನಿರ್ಧಾರವನ್ನು US, ಕೆನಡಾ, EU ಮತ್ತು ಆಸ್ಟ್ರೇಲಿಯಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಷ್ಟ್ರಗಳು ತರಾಟೆಗೆ ತೆಗೆದುಕೊಂಡಿದೆ. ಆದರೆ ಭಾರತದಲ್ಲಿ ಗೋಧಿಯ ರಫ್ತು ನಿಷೇಧ ಮಾಡಿರುವುದಕ್ಕೆ ಚೀನಾ ಬೆಂಬಲ ನೀಡಿದೆ. ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಸರಿಯಲ್ಲ. G7 ರಾಷ್ಟ್ರಗಳು ತಮ್ಮ ರಫ್ತುಗಳನ್ನು ಹೆಚ್ಚಿಸುವ ಮೂಲಕ ಆಹಾರ ಮಾರುಕಟ್ಟೆ ಪೂರೈಕೆಯನ್ನು ಸ್ಥಿರಗೊಳಿಸಲು ಏಕೆ ಮುಂದಾಗುವುದಿಲ್ಲ ಎಂದು ಚೀನಾ ಪ್ರಶ್ನಿಸಿದೆ. ಇದನ್ನೂ ಓದಿ: ಭೂ ವಿವಾದದ ತೀರ್ಪು 108 ವರ್ಷದ ಬಳಿಕ ಪ್ರಕಟ

  • ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್

    ರುಬೆಲ್ ಮೂಲಕ ಖರೀದಿಸಿದರಷ್ಟೇ ತೈಲ: ವಿರೋಧಿಗಳಿಗೆ ಶಾಕ್ ಕೊಟ್ಟ ಪುಟಿನ್

    ಮಾಸ್ಕೋ: ಆರ್ಥಿಕ ನಿರ್ಬಂಧ ಹೇರಿದ ನ್ಯಾಟೋ ರಾಷ್ಟ್ರಗಳಿಗೆ ಈಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತೈಲ ಶಾಕ್ ನೀಡಿದ್ದಾರೆ.

    ಉಕ್ರೇನ್ ಮೇಲೆ ಸಮರ ಸಾರಿದ ಬಳಿಕ ಡಾಲರ್ ಮುಂದೆ ದಿನೇ ದಿನೇ ರಷ್ಯದ ಕರೆನ್ಸಿ ರುಬೆಲ್ ಮೌಲ್ಯ ಕಡಿಮೆಯಾಗುತ್ತಿದೆ. ಇದನ್ನು ಸರಿ ಮಾಡಲು ಪುಟಿನ್ ತನ್ನ ವಿರೋಧಿ ರಾಷ್ಟ್ರಗಳು ರುಬೆಲ್ ಮೂಲಕವೇ ತೈಲ ಖರೀದಿ ಮಾಡಬೇಕು ಎಂದು ಆದೇಶ ಪ್ರಕಟಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಯುದ್ಧವನ್ನು 2ನೇ ಮಹಾಯುದ್ಧಕ್ಕೆ ಹೋಲಿಸಿದ ಝೆಲೆನ್ಸ್ಕಿ

    ಉಕ್ರೇನ್ ಮೇಲೆ ಯುದ್ಧದಿಂದಾಗಿ ಹಲವು ದೇಶಗಳು ರಷ್ಯಾದ ಕಚ್ಚಾತೈಲದ ಮೇಲೆ ನಿರ್ಬಂಧ ಹೇರಿದೆ. ಯುರೋಪಿಯನ್ ಕಮಿಷನ್ ಸಹ ಈ ವರ್ಷ ರಷ್ಯಾದ ಅನಿಲದ ಮೇಲಿನ ಯುರೋಪಿಯನ್ ಅವಲಂಬನೆ 2/3 ರಷ್ಟು ಕಡಿತಗೊಳಿಸಲು ಯೋಜಿಸಿದ್ದು, 2030ರ ವೇಳೆಗೆ ರಷ್ಯಾದ ಮೇಲಿನ ಅವಲಂಬನೆಯನ್ನು ಸಂಪೂರ್ಣ ಸ್ಥಗಿತಗೊಳಿಸಲು ಚಿಂತನೆ ನಡೆಸಿವೆ. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್‌ ಎಷ್ಟು ಶ್ರೀಮಂತ? ರಷ್ಯಾ ನಾಯಕನ ಜೀವನ ಶೈಲಿ ಹೇಗಿದೆ ಗೊತ್ತಾ?

    ಈ ನಡುವೆಯೂ ಹಲವು ಯುರೋಪಿಯನ್ ದೇಶಗಳು ರಷ್ಯಾದ ತೈಲದ ಮೇಲೆ ಅವಲಂಬಿತವಾಗಿದೆ. ಜರ್ಮನಿಯ ಅನೇಕ ಕಂಪನಿಗಳು ರಷ್ಯಾದದಿಂದ ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡುತ್ತಿವೆ. ಹೀಗಾಗಿ ಈಗ ತನ್ನ ವಿರುದ್ಧ ನಿರ್ಬಂಧ ಹೇರಿದ್ದಕ್ಕೆ ಪ್ರತಿಯಾಗಿ ರಷ್ಯಾ ತನ್ನ ಸ್ನೇಹಿಯಲ್ಲದ ರಾಷ್ಟ್ರಗಳು ರುಬೆಲ್ ಮೂಲಕವೇ ತೈಲ ಖರೀದಿಸಬೇಕಿದೆ ಎಂಬ ಷರತ್ತನ್ನು ವಿಧಿಸಿದೆ.

    ಯುರೋಪಿಯನ್ ದೇಶಗಳ ಬಳಕೆಯ ಒಟ್ಟು ಅನಿಲಯದಲ್ಲಿ ಶೇ.40 ರಷ್ಟು ಅನಿಲವನ್ನು ರಷ್ಯಾ ಒಳಗೊಂಡಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಬ್ಯಾರಲ್‍ಗೆ 100 ಡಾಲರ್ (ಸುಮಾರು 7,594.67 ರೂ.) ಇದ್ದ ಕಚ್ಚಾತೈಲ 140 ಡಾಲರ್‍ಗೆ (ಸುಮಾರು 10,632.53 ರೂ.) ತಲುಪಿದೆ. ಅಲ್ಲದೆ, ಕೆಲವು ಯುರೋಪಿಯನ್ ದೇಶಗಳು ಅನಿಲ ಬೆಲೆಯನ್ನು ಬುಧವಾರ ಶೇ.30ರಚ್ಚು ಹೆಚ್ಚಿಸಿದೆ. ಇದು ಗರಿಷ್ಠ ಮಟ್ಟದ ಏರಿಕೆಯಾಗಿದೆ ಎಂದು ತೈಲ ಕಂಪನಿಗಳು ಅಂದಾಜಿಸಿವೆ. ಹಾಗಾಗಿ ಎದುರಾಳಿ ದೇಶಗಳನ್ನು ಬಗ್ಗು ಬಡಿಯಲು ಪುಟಿನ್  ಷರತ್ತನ್ನು ವಿಧಿಸಿದ್ದಾರೆ.

    ವಿರೋಧಿ ರಾಷ್ಟ್ರಗಳು ರಷ್ಯಾ ದೇಶಗಳಿಂದ ಅನಿಲ ಖರೀದಿಯನ್ನು ರುಬೆಲ್ ಮೂಲಕವೇ ಖರೀದಿಸಬೇಕು. ನಮ್ಮ ಅನಿಲ ಬೇಕಾದರೆ, ನಮ್ಮ ದೇಶದ ಕರೆನ್ಸಿಯಲ್ಲೇ ವಹಿವಾಟು ನಡೆಸಬೇಕು. ರಷ್ಯಾವು ಹಿಂದೆ ತೀರ್ಮಾನಿಸಿದ ಒಪ್ಪಂದಗಳಂತೆ ನಿಗದಿತ ಬೆಲೆಗಳಿಗೆ ಅನುಗುಣವಾಗಿ ಕಚ್ಚಾತೈಲ ಪೂರೈಕೆ ಮಾಡುವುದನ್ನು ಮುಂದುವರಿಸುತ್ತದೆ. ಆದರೆ, ನಮ್ಮ ಕರೆನ್ಸಿಯಲ್ಲೇ ಅವರು ವ್ಯವಹರಿಸಬೇಕು ಎಂದು ಪುಟಿನ್ ಷರತ್ತು ವಿಧಿಸಿದ್ದಾರೆ.

    ಯುದ್ಧ ಆರಭದ ಬಳಿಕ ಒಂದು ಡಾಲರ್ ರುಬೆಲ್ ಮೌಲ್ಯ 100ರ ಗಡಿ ದಾಟಿತ್ತು. ಪುಟಿನ್ ನಿರ್ಧಾರದ ಬಳಿಕ ರುಬೆಲ್ ಬಲವಾಗಿದ್ದು ಒಂದು ಡಾಲರ್ ರುಬೆಲ್ ಮೌಲ್ಯ 98 ವಿನಿಮಯವಾಗುತ್ತಿದೆ.

  • ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಉಕ್ರೇನ್‍ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ

    ಕೀವ್: ಉಕ್ರೇನ್‍ನಲ್ಲಿ ಯುದ್ಧ ನಿಲ್ಲದಿದ್ದರೇ ಎಲ್ಲವೂ ಯುರೋಪ್‍ನ ವಿರುದ್ಧ ಹೋಗುತ್ತದೆ. ಆದ್ದರಿಂದ ಉಕ್ರೇನ್‍ಗೆ ಸಹಾಯ ಮಾಡುವುದರ ಮೂಲಕ ನಿಮಗೆ ಸಹಾಯ ಮಾಡಿಕೊಳ್ಳಿ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮನವಿ ಮಾಡಿದರು.

    ಯೂರೋಪ್ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಸ್ಕೋ ಪಡೆಗಳು ಬಾಂಬ್ ದಾಳಿಯನ್ನು ಹೆಚ್ಚಿಸುತ್ತಿದೆ. ಇದರಿಂದಾಗಿ ರಷ್ಯಾದ ಆಕ್ರಮಣಕಾರಿ ದಾಳಿಯನ್ನು ಎದುರಿಸಲು ಹೆಚ್ಚಿನ ಶಸ್ತ್ರಸ್ತ್ರಗಳ ಅಗತ್ಯವಿದೆ ಎಂದು ಮನವಿ ಮಾಡಿದರು.

    ಪಾಶ್ಚಿಮಾತ್ಯ ರಾಷ್ಟ್ರಗಳು ಒದಗಿಸಿದ ಶಸ್ತ್ರಾಸ್ತ್ರಗಳು ಮತ್ತು ಇತರೆ ಆಧುನಿಕ ತಂತ್ರಾಂಶಗಳನ್ನು ಉಕ್ರೇನ್‍ನ ಮಿಲಿಟರಿ ವೇಗವಾಗಿ ಬಳಸುತ್ತಿದೆ. ಇದರಿಂದಾಗಿ ಕೀವ್‍ನಲ್ಲಿ ರಷ್ಯಾ ಮತ್ತು ಉಕ್ರೇನ್‍ನ ಹೋರಾಟ ತೀವ್ರವಾಗಿದೆ ಎಂದರು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ರಷ್ಯಾದ ಬಾಂಬ್ ದಾಳಿಯಿಂದಾಗಿ ಅಪಾರ್ಟ್‍ಮೆಂಟ್‍ಗಳು ಹೊತ್ತಿ ಉರಿಯುತ್ತಿದೆ. ನಾಗರಿಕರ ಮೇಲೂ ದಾಳಿನಡೆಯುತ್ತಿದೆ. ದಿನೇ ದಿನೇ ರಷ್ಯಾ ದಾಳಿಗೆ ನಾಗರಿಕರು ಸಾವನ್ನಪ್ಪಿರುವ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದಾಗಿ ಇಡೀ ನಗರವೇ ಯುದ್ಧದಿಂದ ಕೋಲಾಹಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ತಡರಾತ್ರಿ ಕಾರು ಅಪಘಾತ- ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

  • ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಯೂರೋಪ್‌ನಲ್ಲಿ ಸೈಬರ್ ಅಟ್ಯಾಕ್ – ಇಂಟರ್‌ನೆಟ್ ಇಲ್ಲದೇ ಸಾವಿರಾರು ಜನ ಪರದಾಟ

    ಪ್ಯಾರಿಸ್: ಉಕ್ರೇನ್-ರಷ್ಯಾದ ಯುದ್ಧ ಪ್ರಾರಂಭವಾದ ಬಳಿಕ ಶುಕ್ರವಾರ ಸೈಬರ್ ಅಟ್ಯಾಕ್ ಆಗಿರುವ ಬಗ್ಗೆ ವದಂತಿಗಳು ಹಬ್ಬಿವೆ. ಈ ಕಾರಣದಿಂದ ಯೂರೋಪ್‌ನಾದ್ಯಂತ ಇಂಟರ್‌ನೆಟ್ ಅನ್ನು ಸ್ಥಗಿತಗೊಳಿಸಿದ್ದು, ಸಾವಿರಾರು ಬಳಕೆದಾರರು ಇಂಟರ್‌ನೆಟ್ ಇಲ್ಲದೇ ದಿನದೂಡುತ್ತಿದ್ದಾರೆ.

    ಫ್ರಾನ್ಸ್ ಅಂಗಸಂಸ್ಥೆ ನಾರ್ಡ್‌ನೆಟ್ ಒದಗಿಸುತ್ತಿದ್ದ ಉಪಗ್ರಹ ಇಂಟರ್‌ನೆಟ್ ಸೇವೆಯನ್ನು ಸುಮಾರು 9 ಸಾವಿರ ಚಂದಾದಾರರು ಬಳಸುತ್ತಿದ್ದು, ಈ ಸೇವೆಯನ್ನು ಫೆಬ್ರವರಿ 24ರಂದು ಸ್ಥಗಿತಗೊಳಿಸಲಾಗಿದೆ. ಇದೀಗ ಅಷ್ಟೂ ಜನರು ಇಂಟರ್‌ನೆಟ್ ಸೇವೆ ಇಲ್ಲದೇ ಇರಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಇತರ ಇಂಟರ್‌ನೆಟ್ ಮೂಲಗಳನ್ನು ಹುಡುಕಬೇಕಾದ ಸಂದಿಗ್ಧತೆ ಎದುರಾಗಿದೆ. ಇದನ್ನೂ ಓದಿ: ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

    ಯೂರೋಪ್, ಜರ್ಮನಿ, ಫ್ರಾನ್ಸ್, ಹಂಗೇರಿ, ಗ್ರೀಸ್, ಇಟಲಿ ಹಾಗೂ ಪೋಲೆಂಡ್‌ನಲ್ಲಿ ಬಿಗ್‌ಬ್ಲೂನ 40,000 ಚಂದಾದಾರರಿದ್ದಾರೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಜನರಿಗೆ ಇಂಟರ್‌ನೆಟ್ ಸ್ಥಗಿತದ ಪರಿಣಾಮ ಬೀರಿದೆ. ಈ ಮಾಹಿತಿಯನ್ನು ಬಿಗ್‌ಬ್ಲೂ ಉಪಗ್ರಹ ಇಂಟರ್‌ನೆಟ್ ಸೇವೆಯ ಮೂಲ ಕಂಪನಿ ಯುಟೆಲ್‌ಸಾಟ್ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ 28 ಮಕ್ಕಳು ಸಾವು, 840 ಮಕ್ಕಳಿಗೆ ಗಾಯ – ಉಕ್ರೇನ್ ಸರ್ಕಾರ

    ಉಕ್ರೇನ್ ರಷ್ಯಾದ ಯುದ್ಧದಿಂದಾಗಿ ಸೈಬರ್ ದಾಳಿ ನಡೆದಿದೆ. ಹೀಗಾಗಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಫ್ರಾನ್ಸ್‌ನ ಬಾಹ್ಯಾಕಾಶ ಕಮಾಂಡ್ ಮುಖ್ಯಸ್ಥ ಜನರಲ್ ಮೈಕೆಲ್ ಫ್ರೆಡ್ಲಿಂಗ್ ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಲಾಗಿಲ್ಲ. ಇದರ ಬಗ್ಗೆ ಪೊಲೀಸ್ ಹಾಗೂ ರಾಜ್ಯದ ಪಾಲುದಾರರಿಗೆ ಸೂಚನೆ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

  • ರಷ್ಯಾ ಯುದ್ಧ ಇಡೀ ಯೂರೋಪ್‌ ಭದ್ರತೆಗೆ ಪೆಟ್ಟು ನೀಡಿದೆ: ಬ್ರಿಟಿಷ್‌ ಪ್ರಧಾನಿ ಕಳವಳ

    ರಷ್ಯಾ ಯುದ್ಧ ಇಡೀ ಯೂರೋಪ್‌ ಭದ್ರತೆಗೆ ಪೆಟ್ಟು ನೀಡಿದೆ: ಬ್ರಿಟಿಷ್‌ ಪ್ರಧಾನಿ ಕಳವಳ

    ಲಂಡನ್‌: ಉಕ್ರೇನ್‌ ವಿರುದ್ಧದ ರಷ್ಯಾ ಅಜಾಗರೂಕ ಕಾರ್ಯಾಚರಣೆಯು ಇಡೀ ಯೂರೋಪ್‌ ಭದ್ರತೆಗೆ ಕೊಟ್ಟ ಹೊಡೆತವಾಗಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್‌ ಜಾನ್ಸನ್‌ ಕಳವಳ ವ್ಯಕ್ತಪಡಿಸಿದ್ದಾರೆ.

    ರಷ್ಯಾದ ಪಡೆಗಳು ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರವನ್ನು ಆಕ್ರಮಿಸಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಯುರೋಪಿನಾದ್ಯಂತ ಅಪಾಯವನ್ನುಂಟುಮಾಡುತ್ತಿದ್ದಾರೆ ಎಂದು ಬೋರಿಸ್ ಜಾನ್ಸನ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಬಾಹ್ಯಾಕಾಶ ರಾಕೆಟ್‌ನಿಂದ ಅಮೆರಿಕ, ಜಪಾನ್‌ ಧ್ವಜ ತೆಗೆದು ಭಾರತ ಧ್ವಜ ಉಳಿಸಿಕೊಂಡ ರಷ್ಯಾ- Video Viral

    ರಷ್ಯಾ ಅಧ್ಯಕ್ಷ ಪುಟಿನ್ ಅವರ ಅಜಾಗರೂಕ ಕ್ರಮಗಳು ಈಗ ನೇರವಾಗಿ ಯುರೋಪ್‌ನ ಸುರಕ್ಷತೆಗೆ ಬೆದರಿಕೆ ಹಾಕಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ಅಗತ್ಯವಿದೆ ಎಂದು ಜಾನ್ಸನ್‌ ಆಶಯ ವ್ಯಕ್ತಪಡಿಸಿದ್ದಾರೆ.

    ನ್ಯಾಟೋ ಒಕ್ಕೂಟಕ್ಕೆ ಸೇರುವ ಉಕ್ರೇನ್‌ ನಿರ್ಧಾರವನ್ನು ವಿರೋಧಿಸಿ ಉಕ್ರೇನ್‌ ಮೇಲೆ ರಷ್ಯಾ ಯುದ್ಧವನ್ನು ನಡೆಸುತ್ತಿದೆ. ಆದರೆ ಯೂರೋಪ್‌ ರಾಷ್ಟ್ರಗಳು ರಷ್ಯಾ ಕ್ರಮವನ್ನು ಖಂಡಿಸಿವೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ, ಸಾಮಾನ್ಯ ಸಭೆಯಲ್ಲಿ ಬ್ರಿಟನ್‌ ಸೇರಿದಂತೆ 141 ರಾಷ್ಟ್ರಗಳು ರಷ್ಯಾ ವಿರುದ್ಧ ಮತ ಚಲಾಯಿಸಿವೆ. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು

  • ಟಾರ್ಗೆಟ್ 150 – 129 ಮಕ್ಕಳ ಜನನಕ್ಕೆ ಕಾರಣನಾದ 66ರ ವೀರ್ಯದಾನಿ

    ಟಾರ್ಗೆಟ್ 150 – 129 ಮಕ್ಕಳ ಜನನಕ್ಕೆ ಕಾರಣನಾದ 66ರ ವೀರ್ಯದಾನಿ

    ಲಂಡನ್: ಯುರೋಪ್‍ನ ನಿವೃತ್ತ ಗಣಿತ ಶಿಕ್ಷಕರೊಬ್ಬರು ವೀರ್ಯ ದಾನ ಮಾಡಿ 129 ಮಕ್ಕಳ ಜನನಕ್ಕೆ ಕಾರಣವಾಗಿ ಸುದ್ದಿಯಾಗಿದ್ದಾರೆ.

    ಹೌದು 66 ವರ್ಷದ ಕ್ಲೈವ್ ಜೋನ್ಸ್ ಅವರು ಸುಮಾರು ಒಂದು ದಶಕದಿಂದ ಫೇಸ್‍ಬುಕ್ ಮೂಲಕ ತಮ್ಮನ್ನು ಸಂಪರ್ಕಿಸುವವರಿಗೆ ವೀರ್ಯ ದಾನ ಮಾಡುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ 129 ಮಕ್ಕಳ ಜನನಕ್ಕೆ ಕ್ಲೈವ್ ಜೋನ್ಸ್ ಕಾರಣರಾಗಿದ್ದಾರೆ. ಅಲ್ಲದೇ ಇನ್ನೂ ಒಂಬತ್ತು ಮಹಿಳೆಯರು ಗರ್ಭಿಣಿಯಾಗಿದ್ದು, ಮುಂದೆ ಇವರಿಂದ 138 ಮಕ್ಕಳು ಜನಿಸಿದಂತಾಗುತ್ತದೆ.

    ಈ ಕುರಿತಂತೆ ಕ್ಲೈವ್ ಜೋನ್ಸ್ ವೀರ್ಯದಾನದ ಮೂಲಕ 150 ಮಕ್ಕಳ ಜನನಕ್ಕೆ ತಾವು ಕಾರಣವಾಗಬೇಕು ಎನ್ನುವ ಗುರಿಯನ್ನು ಹೊಂದಿದ್ದು, ಜಗತ್ತಿನ ಅತ್ಯಂತ ಸಮೃದ್ಧ ವೀರ್ಯ ದಾನಿ ಎಂದು ತಮ್ಮನ್ನು ಕರೆಸಿಕೊಳ್ಳಲು ಇಚ್ಛಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‍ನಲ್ಲಿ ವೈನ್‍ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ

    ಫೇಸ್‍ಬುಕ್ ಮೂಲಕ ಉಚಿತವಾಗಿ ಅನೇಕ ಕುಟುಂಬಗಳಿಗೆ ತಮ್ಮ ವೀರ್ಯ ದಾನ ಮಾಡುವುದರ ಬಗ್ಗೆ ಕ್ಲೈವ್ಸ್ ಜೋನ್ಸ್ ಸಂತಸ ವ್ಯಕ್ತಪಡಿಸಿದ್ದಾರೆ. ನನಗೆ ಹಲವಾರು ಕ್ಲಿನಿಕ್‌ಗಳು ಮತ್ತು ವೀರ್ಯ ಪಡೆಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುವುದು ತಿಳಿದಿದೆ. ಆದರೆ ಎಲ್ಲರಿಗೂ ದಾನ ಮಾಡುವುದಿಲ್ಲ. ಬದಲಿಗೆ ಅಗತ್ಯವಿರುವವರಿಗೆ ಮಾತ್ರ ವೀರ್ಯ ದಾನ ಮಾಡುತ್ತೇನೆ. ನನಗೆ ಬರುವ ಸಂದೇಶಗಳು ಮತ್ತು ಶಿಶುವಿನೊಂದಿಗೆ ತಾಯಂದಿರು ಸಂತೋಷವಾಗಿರುವ ಫೋಟೋಗಳನ್ನು ನೋಡಿದಾಗ ನನಗೂ ಕೂಡ ಸಂತಸವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಕೇರಳದ ಬಾಲಿಕಾ ಗೃಹದಿಂದ 6 ಹುಡುಗಿಯರು ನಾಪತ್ತೆ – ಒಬ್ಬಳು ಬೆಂಗ್ಳೂರಿನಲ್ಲಿ ಪತ್ತೆ

    ವೀರ್ಯ ನೀಡಲು ಹಣ ಪಡೆಯುವುದು ನನ್ನ ಪ್ರಕಾರ ಕಾನೂನು ಬಾಹಿರ. ಹಾಗಾಗಿ ನಾನು ಹಣಪಡೆಯುವುದಿಲ್ಲ ಬದಲಿಗೆ ಗಾಡಿಗೆ ಪೆಟ್ರೋಲ್ ಮಾತ್ರ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ವೀರ್ಯವನ್ನು 45 ವರ್ಷದವರೆಗೂ ಪಡೆಯಬಹುದು. ಆದರೆ ಕ್ಲೈವ್ಸ್ ಜೋನ್ಸ್ ಅವರಿಗೆ 66 ವರ್ಷವಾಗಿದ್ದು, ಅವರಿಂದ ವೀರ್ಯ ಪಡೆದು, ಗರ್ಭ ಬೆಳೆಸುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಕ್ಲೈವ್ಸ್ ಜೋನ್ಸ್‍ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೇಡಿಕೆ ಇದೆ.

  • ಬುದ್ಧಿ ಚುರುಕಾಗುತ್ತೆಂದು 70ರ ವೃದ್ಧನ ಮೆದುಳು, ಅಂಗಾಂಗಗಳನ್ನೇ ಕಿತ್ತು ತಿಂದ!

    ಬುದ್ಧಿ ಚುರುಕಾಗುತ್ತೆಂದು 70ರ ವೃದ್ಧನ ಮೆದುಳು, ಅಂಗಾಂಗಗಳನ್ನೇ ಕಿತ್ತು ತಿಂದ!

    ವಾಷಿಂಗ್ಟನ್: ಬುದ್ಧಿ ಚುರುಕಾಗುತ್ತದೆ ಎಂದು ಭಾವಿಸಿ 70 ವರ್ಷದ ವೃದ್ಧನ ಹತ್ಯೆಗೈದು ಆತನ ಮೆದುಳು ಮತ್ತು ಅಂಗಾಂಗಗಳನ್ನು ವ್ಯಕ್ತಿಯೋರ್ವ ಸೇವಿಸುವ ಮೂಲಕ ನರಭಕ್ಷಕನಂತೆ ವಿಕೃತ ಮೆರೆದಿರುವ ಘಟನೆ ಯುರೋಪ್‍ನಲ್ಲಿ ನಡೆದಿದೆ.

    ಮೃತ ದುರ್ದೈವಿಯನ್ನು ಡೇವಿಡ್ ಫ್ಲಾಗೆಟ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಜೇಮ್ಸ್ ಡೇವಿಡ್ ರಸ್ಸೆಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜೇಮ್ಸ್ ಡೇವಿಡ್ ರಸ್ಸೆಲ್ ಮನೆಯ ಆವರಣದಲ್ಲಿರುವ ವಾಹನದಲ್ಲಿ ಡೇವಿಡ್ ಫ್ಲಾಗೆಟ್ ಶವ ಪತ್ತೆಯಾಗಿದೆ. ಆತನ ಕೈ, ಕಾಲುಗಳನ್ನು ಟೇಪಿನಿಂದ ಕಟ್ಟಲಾಗಿದೆ. ಅಲ್ಲದೆ ಆತನ ದೇಹದ ಹಲವಾರು ಭಾಗಗಳು ನಾಪತ್ತೆಯಾಗಿದೆ.

    ಮೊದಲಿಗೆ ಪೊಲೀಸರೊಂದಿಗೆ ವಾದ ಮಾಡಿದ ಜೇಮ್ಸ್ ಡೇವಿಡ್ ರಸ್ಸೆಲ್ ನಂತರ ತಪ್ಪೊಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಘಟನೆ ಕುರಿತಂತೆ ಆರೋಪಿ ಮನೆಯನ್ನು ಪರಿಶೀಲಿಸುವ ವೇಳೆ ಮೈಕ್ರೋವೇವ್, ಬೌಲ್, ಡಫಲ್ ಬ್ಯಾಗ್ ಮತ್ತು ಚಾಕುವಿನ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಇದನ್ನೂ ಓದಿ:  ಪತ್ನಿ ನೆರವಿನಿಂದ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ- ಸಂತ್ರಸ್ತೆ ವಿದೇಶಕ್ಕೆ ಹೋದ್ರೂ ಬಿಟ್ಟಿಲ್ಲ ಆತನ ಕಾಮದಾಟ

    ಈ ಕೃತ್ಯ ಕುರಿತಂತೆ ಪ್ರತಿಕ್ರಿಯಿಸಿದ ತನಿಖಾಧಿಕಾರಿ, ಇದು ನಮ್ಮ ಆತ್ಮ ಸಾಕ್ಷಿಗೆ ದಕ್ಕೆಯನ್ನುಂಟು ಮಾಡಿದೆ. ರಸ್ಸೆಲ್‍ನ ಈ ವಿಕೃತ ಕೃತ್ಯ ಇಡಾಹೊ ರಾಜ್ಯದಲ್ಲಿಯೇ ಮೊದಲನೆಯದಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ ಎಂದು ಹೇಳಿದ್ದಾರೆ.

    ಆರೋಪಿ ರಸ್ಸೆಲ್ ವೃದ್ಧನ ಮಾಂಸವನ್ನು ತಿನ್ನುವುದರಿಂದ ತನ್ನ ಬುದ್ಧಿಯನ್ನು ಚುರುಕುಗೊಳಿಸಬಹುದು ಎಂದು ಭಾವಿಸಿ ಈ ಭಯಾನಕ ಕೃತ್ಯವೆಸಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾದ ಮಗಳು – ತಾಳಿ ಕಿತ್ತು, ಜುಟ್ಟು ಹಿಡಿದು ಧರ, ಧರನೇ ಎಳೆದಾಡಿದ ತಂದೆ

  • ಇಟಲಿ, ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ

    ಇಟಲಿ, ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ

    ನವದೆಹಲಿ: ಯುರೋಪಿಯನ್ ರಾಷ್ಟ್ರಗಳಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್‍ಡೌನ್ ಆರಂಭವಾಗಿದೆ.

    ಯೂರೋಪ್ ರಾಷ್ಟ್ರಗಳಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆಯಾಗಿದ್ದು, ಮಾರ್ಚ್ 15 ರಿಂದ ಇಟಲಿಯಲ್ಲಿ ಲಾಕ್‍ಡೌನ್ ಘೋಷಣೆಯಾದರೆ, ಫ್ರಾನ್ಸ್ ನಲ್ಲೂ ಮಾರ್ಚ್ 17 ರಿಂದಲೂ ಲಾಕ್‍ಡೌನ್ ಮಾಡಲಾಗುವುದು ಎಂಬ ನಿರ್ಧಾರ ಹೊರಬಿದ್ದಿದೆ.

    ಜರ್ಮನಿಯಲ್ಲೂ ಕೊರೊನಾ ಅಲೆ ಜೋರಾಗುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸೀಮಿತ ಪ್ರದೇಶಗಳಲ್ಲಿ ಲಾಕ್‍ಡೌನ್ ಮಾಡಲು ಜರ್ಮನಿ ನಿರ್ಧರಿಸಿದೆ, ಹಂಗೇರಿಯಲ್ಲಿ ನೈಟ್ ಕಫ್ರ್ಯೂ ಮಾಡಲು ಕ್ರಮ ಕೈಗೊಂಡರೆ, ಪೋಲ್ಯಾಂಡ್‍ನಲ್ಲಿ ಥಿಯೇಟರ್, ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ಮತ್ತೆ ಬೀಗ ಹಾಕಲಾಗಿದೆ ಎಂದು ವರದಿಯಾಗಿದೆ.

    ಯೂರೋಪ್ ರಾಷ್ಟ್ರಗಳಂತೆ ಭಾರತದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸೀಮಿತ ಪ್ರದೇಶಗಳ ಲಾಕ್ ಡೌನ್ ಪ್ರಕ್ರಿಯೆ ಆರಂಭವಾಗಿದೆ. ಹಾಗೆ ಕರ್ನಾಟಕದಲ್ಲಿ ಕಳೆದ ಒಂದೇ ದಿನದಲ್ಲಿ 1488 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಬರೋಬ್ಬರಿ 925 ಪ್ರಕರಣ ಪತ್ತೆಯಾಗಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.

  • ರಸ್ತೆಯಲ್ಲಿ ಓಡಿಸಲು ಅನುಮತಿ – ವಿಶ್ವಕ್ಕೆ ರಫ್ತಾಗಲಿದೆ ಮೇಡ್‌ ಇನ್‌ ಗುಜರಾತ್‌ ಫ್ಲೈಯಿಂಗ್‌ ಕಾರು

    ರಸ್ತೆಯಲ್ಲಿ ಓಡಿಸಲು ಅನುಮತಿ – ವಿಶ್ವಕ್ಕೆ ರಫ್ತಾಗಲಿದೆ ಮೇಡ್‌ ಇನ್‌ ಗುಜರಾತ್‌ ಫ್ಲೈಯಿಂಗ್‌ ಕಾರು

    ಆಂಸ್ಟರ್ಡ್ಯಾಮ್: ಗುಜರಾತಿನಲ್ಲಿ ಘಟಕ ತೆರೆದಿರುವ ನೆದರ್‌ಲ್ಯಾಂಡ್‌ನ ಪಾಲ್‌ -ವಿ ಕಂಪನಿಯ ಹಾರುವ ಕಾರು ಮುಂದಿನ ಎರಡು ವರ್ಷದಲ್ಲಿ ರಸ್ತೆಯಲ್ಲಿ ಇಳಿಯಲಿದೆ.

    ನಾವು ಅಭಿವೃದ್ಧಿ ಪಡಿಸಿರುವ ಲಿಬರ್ಟಿ ಕಾರು ಯುರೋಪ್‌ ರಸ್ತೆಯಲ್ಲಿ ಸಂಚರಿಸಲು ಕಾನೂನಿನ ಮಾನ್ಯತೆ ಸಿಕ್ಕಿದೆ ಎಂದು ಕಂಪನಿ ತಿಳಿಸಿದೆ.

    ಈ ವರ್ಷದ ಫೆಬ್ರವರಿಯಿಂದ ವೇಗ, ಬ್ರೇಕ್‌, ಎಮಿಷನ್‌, ಶಬ್ಧಮಾಲಿನ್ಯ ಸೇರಿದಂತೆ ವಿವಿಧ ಡ್ರೈವಿಂಗ್‌ ಪರೀಕ್ಷೆಗಳನ್ನು ಕಾರು ಎದುರಿಸಿತ್ತು. ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ಮೈಕ್‌ ಸ್ಟೇಕಲನ್‌ಬರ್ಗ್‌ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಇಲಾಖೆಗಳ ಜೊತೆ ಹಲವು ವರ್ಷಗಳ ಕಾಲ ಸಹಕಾರ ನೀಡಿ ನಾವು ಈ ಮೈಲಿಗಲ್ಲನ್ನು ಸೃಷ್ಟಿಸಿದ್ದೇವೆ. ನೆಲ ಮತ್ತು ಆಕಾಶದಲ್ಲಿ ಓಡುವ ಕಾರನ್ನು ವಿನ್ಯಾಸ ಮಾಡುವ ಕೆಲಸ ಸವಾಲಿನದ್ದಾಗಿತ್ತು ಎಂದು ಹೇಳಿದ್ದಾರೆ.‌

     

    ತೆರಿಗೆ ಹೊರತುಪಡಿಸಿದರೆ ಈ ಕಾರಿಗೆ ಕಂಪನಿ 3,99,000 ಡಾಲರ್‌(ಅಂದಾಜು 2.52 ಕೋಟಿ ರೂ.) ಬೆಲೆಯನ್ನು ನಿಗದಿ ಪಡಿಸಿದೆ. 2012ರಲ್ಲಿ ಕಂಪನಿ ಭೂಮಿ ಮತ್ತು ಆಕಾಶದಲ್ಲಿ ಹಾರುವ ಕಾರಿನ ಮಾದರಿಯನ್ನು ತಯಾರಿಸಿತ್ತು. 2015ರಿಂದ ಯುರೋಪಿಯನ್‌ ಏವಿಯೇಶನ್‌ ಸೇಫ್ಟಿ ಏಜೆನ್ಸಿಯಿಂದ ಪ್ರಮಾಣಪತ್ರ ಪಡೆದುಕೊಳ್ಳಲು ಕೆಲಸ ಮಾಡುತ್ತಿದೆ. 150 ಗಂಟೆಗಳ ಹಾರಾಟದ ಪರೀಕ್ಷೆಯ ಬಳಿಕ ಕಂಪನಿಗೆ ಪ್ರಮಾಣಪತ್ರ ಸಿಗಲಿದೆ. 2022ರಲ್ಲಿ ಪ್ರಮಾಣಪತ್ರ ಸಿಗಲಿದ್ದು, ಆ ಬಳಿಕ ಕಾರು ಗ್ರಾಹಕರ ಕೈ ಸೇರಲಿದೆ.

    ಮೊಟ್ಟೆ ಆಕಾರದ ಕ್ಯಾಬಿನ್‌ ಹೊಂದಿರುವ ಕಾರು ಡಬಲ್‌ ಸೀಟರ್‌ ಆಗಿದ್ದು ಟ್ವಿನ್‌ ಎಂಜಿನ್‌ ಇದೆ. ರಸ್ತೆಯಲ್ಲಿ ಗಂಟೆಗೆ 160 ಕಿ.ಮೀ ವೇಗದಲ್ಲಿ ಹೋಗುವ ಸಾಮರ್ಥ ಹೊಂದಿರುವ ಕಾರು 9 ಸೆಕೆಂಡ್‌ನಲ್ಲಿ 100 ಕೀ.ಮೀ ವೇಗವನ್ನು ತಲಪಬಲ್ಲದು. ಫ್ಲೈಟ್‌ ಮೋಡ್‌ನಲ್ಲಿ ಗಂಟೆಗೆ 180 ಕಿ.ಮೀ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಪೆಟ್ರೋಲ್‌ ಭರ್ತಿ ಮಾಡಿದರೆ 500 ಕಿ.ಮೀ ಹಾರಾಟ ನಡೆಸಬಹುದು ಎಂದು ಕಂಪನಿ ಹೇಳಿದೆ.

    ಈಗಾಗಲೇ ಬುಕ್ಕಿಂಗ್‌ ಆರಂಭವಾಗಿದ್ದು ಗ್ರಾಹಕರ ಮನಸ್ಸು ಗೆದ್ದಿದೆ. ಆದರೆ ಶೇ.80 ರಷ್ಟು ಮಾಲೀಕರಿಗೆ ಹಾರಾಟದ ಲೈಸೆನ್ಸ್‌ ಇಲ್ಲ. ಹೀಗಾಗಿ ನಾವು ಗ್ರಾಹಕರಿಗೆ ಹಾರಾಟದ ತರಬೇತಿ ನೀಡಲು ಒಂದು ಅಕಾಡೆಮಿಯನ್ನು ತೆರೆದಿದ್ದೇವೆ ಎಂದು ಪಾಲ್‌ -ವಿ ಕಂಪನಿ ತಿಳಿಸಿದೆ.

    ಕಂಪನಿ ಈಗಾಗಲೇ ಗುಜರಾತ್‌ ಸರ್ಕಾರದ ಜೊತೆ ಘಟಕ ಸ್ಥಾಪನೆ ಸಂಬಂಧ ಮಾತುಕತೆ ನಡೆಸಿದೆ. ಗುಜರಾತಿನಲ್ಲೇ ಕಾರನ್ನು ಉತ್ಪಾದಿಸಿ ವಿಶ್ವಕ್ಕೆ ಮಾರಾಟ ಮಾಡಲು ಕಂಪನಿ ಸಿದ್ಧತೆ ನಡೆಸುತ್ತಿದೆ.