Tag: europe tour

  • ಸಿದ್ದರಾಮಯ್ಯ ಯುರೋಪ್ ಪ್ರವಾಸಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಆತಂಕ..!

    ಸಿದ್ದರಾಮಯ್ಯ ಯುರೋಪ್ ಪ್ರವಾಸಕ್ಕೆ ಸಮ್ಮಿಶ್ರ ಸರ್ಕಾರದಲ್ಲಿ ಆತಂಕ..!

    ಬೆಂಗಳೂರು: ಮಾಜಿ ಸಿಎಂ ಹಾಗು ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯರ ಯುರೋಪ್ ಪ್ರವಾಸ ಕಾಂಗ್ರೆಸ್ ಪಾಳಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯನವರು ಸ್ಥಳೀಯ ಚುನಾವಣೆ ಬಳಿಕ ಪ್ರವಾಸ ಕೈಗೊಳ್ಳುವ ಮೂಲಕ ಡಿಸಿಎಂ ಜಿ.ಪರಮೇಶ್ವರ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಶಾಕ್ ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿವೆ.

    ಇಷ್ಟು ದಿನ ಆಷಾಢ ಬಳಿಕ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಲಾಗುತ್ತಿತ್ತು. ಆದ್ರೆ ಕಾಂಗ್ರೆಸ್ ಸ್ಥಳೀಯ ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಮಾಡೋದು ಸೂಕ್ತ ಎಂದು ಕಾಂಗ್ರೆಸ್ ಹಿರಿಯ ನಾಯಕರು ಚಿಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಚುನಾವಣೆಗೆ ಮುನ್ನ ಸಂಪುಟ ವಿಸ್ತರಣೆವಾದ್ರೆ ಸಚಿವ ಸ್ಥಾನ ಸಿಗದ ಅಸಮಾಧಾನಿತ ಶಾಸಕರ ಕ್ಷೇತ್ರಗಳಲ್ಲಿ ಚುನಾವಣೆ ಗೆಲ್ಲೋದು ಕಷ್ಟ ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕುತ್ತಿದೆ. ಹಾಗಾಗಿ ಸಂಪುಟ ವಿಸ್ತರಣೆಯ ದಿನಾಂಕ ಮುಂದೂಡುವ ಕುರಿತು ಕಾಂಗ್ರೆಸ್ ನಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ.

    ಈ ಎಲ್ಲ ಗೊಂದಲಗಳ ನಡುವೆಯೇ ಸಿದ್ದರಾಮಯ್ಯನವರು ಯುರೋಪ್ ಪ್ರವಾಸ ಕೈಗೊಳ್ಳುತ್ತೀರೋದು ಕಾಂಗ್ರೆಸ್ ಶಾಸಕರ ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ. ಸೆಪ್ಟೆಂಬರ್ 2ರಂದು ಯುರೋಪ್ ಗೆ ತೆರಳಿದ್ರೆ ಸೆ.13ಕ್ಕೆ ವಾಪಾಸ್ಸ ಆಗಲಿದ್ದಾರೆ. ಚುನಾವಣೆ ಬಳಿಕ ಸಂಪುಟ ವಿಸ್ತರಣೆ ಆದರೂ ಸಿದ್ದರಾಮಯ್ಯ ಯುರೋಪ್ ಪ್ರವಾಸದಲ್ಲಿ ಇರುತ್ತಾರೆ. ಸಚಿವ ಸಿಗದ ಅಸಮಾಧಾನಿತರ ಕೈಗೆ ಮಾಜಿ ಸಿಎಂ ಸಿಗಲ್ಲ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಶಾಸಕರು ಪ್ರವಾಸಕ್ಕೂ ಮುನ್ನವೇ ಸಂಪುಟ ವಿಸ್ತರಣೆ ನಡೆಯಬೇಕೆಂದು ಬಿಗಿಪಟ್ಟು ಹಿಡಿದಿದ್ದಾರಂತೆ. ಸ್ಥಳೀಯ ಚುನಾವಣೆ ಮುಗಿಯವರೆಗೂ ನಮಗೆ ಕಾಯೋದಕ್ಕೆ ಆಗಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್ ಮತ್ತು ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಭೆ ನಡೆದಿದೆ ಎನ್ನಲಾಗಿದೆ. ಸಭೆಯಲ್ಲಿ ಸ್ಥಳೀಯ ಚುನಾವಣೆಯ ದಿನಾಂಕ ಸಮೀಪಿಸುತ್ತಿದ್ದು, ಕಾಂಗ್ರೆಸ್‍ನಲ್ಲಿ ಹಣಕಾಸಿನ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ಈ ಸಂಬಂಧ ಚುನಾವಣೆಗೆ ಹಣ ಹೇಗೆ ಹೊಂದಿಸಬೇಕು? ಹೇಗೆ ವ್ಯಯಿಸಬೇಕೆಂಬುದರ ಬಗ್ಗೆ ರಹಸ್ಯ ಮಾತುಕತೆಗಳು ನಡೆದಿವೆಯಂತೆ. ಪಕ್ಷ ಕರೆದ ಸಭೆಗೆ ಸಚಿವ ಸ್ಥಾನ ಆಕಾಂಕ್ಷಿಗಳು ದೂರ ಉಳಿದಿದ್ದು, ಅಧಿಕಾರ ಮಾತ್ರ ನಿಮಗೆ ಹಣ ನಮ್ಮದು ಹೇಗೆ ಅಂತಾ ಹಿರಿಯ ನಾಯಕರನ್ನು ಪ್ರಶ್ನಿಸುತ್ತಿದ್ದಾರಂತೆ. ಮೊದಲು ಸಂಪುಟ ವಿಸ್ತರಣೆ ಮಾಡಿ, ಆಮೇಲೆ ಹಣ ಕೇಳಿ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಕೆಪಿಸಿಸಿ ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಜನ ಐಸ್‍ಲ್ಯಾಂಡಿಗೆ ಪ್ರವಾಸ ಯಾಕೆ ಹೋಗ್ತಾರೆ? ಅಂಥ ವಿಶೇಷತೆ ಏನಿದೆ?

    ಜನ ಐಸ್‍ಲ್ಯಾಂಡಿಗೆ ಪ್ರವಾಸ ಯಾಕೆ ಹೋಗ್ತಾರೆ? ಅಂಥ ವಿಶೇಷತೆ ಏನಿದೆ?

    ಸುತ್ತಲು ನೀರು, ಅಷ್ಟೇ ಅಲ್ಲದೇ ಮಂಜುಗೆಡ್ಡೆ, ಇದರ ಜೊತೆ ಜ್ವಾಲಾಮುಖಿಗಳು ಒಂದೇ ಕಡೆ ಇರುವುದು ಅಪರೂಪ. ಆದರೆ ಯುರೋಪ್ ಖಂಡದಲ್ಲಿರುವ ಐಸ್‍ಲ್ಯಾಂಡ್‍ಗೆ ನೀವು ಪ್ರವಾಸ ಹೋದರೆ ನೀವು ಈ ಮೂರು ದೃಶ್ಯಗಳನ್ನು ಕಣ್ತುಂಬಿ ನೋಡಬಹುದು.

    ಯುರೋಪ್ ಖಂಡ ಮತ್ತು ಗ್ರೀನ್ ಲ್ಯಾಂಡ್ ಮಧ್ಯೆ ಇರುವ ಅಟ್ಲಾಂಟಿಕ್ ಮಹಾಸಾಗರದಲ್ಲಿ ಐಸ್‍ಲ್ಯಾಂಡ್ ದ್ವೀಪವಿದೆ. ಪ್ರಪಂಚದ 18ನೇ ದೊಡ್ಡ ದ್ವೀಪ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಐಸ್‍ಲ್ಯಾಂಡ್ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಐಸ್‍ಲ್ಯಾಂಡ್‍ನ ಜಿಡಿಪಿಯಲ್ಲಿ ಶೇ.5ರಷ್ಟು ಪಾಲನ್ನು ಪಡೆದುಕೊಂಡಿರುವುದು ಪ್ರವಾಸೋದ್ಯಮದ ಹೆಗ್ಗಳಿಕೆ.

    ಕಳೆದ 15 ವರ್ಷದಲ್ಲಿ ಪ್ರವಾಸೋದ್ಯಮ ಉದ್ಯಮ ಭಾರೀ ಬೆಳವಣಿಗೆಯಾಗಿದ್ದು ಜುಲೈ- ಸೆಪ್ಟೆಂಬರ್ ನಡುವಿನ ಬೇಸಿಗೆಯ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಐಸ್‍ಲ್ಯಾಂಡಿಗೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಐಸ್‍ಲ್ಯಾಂಡ್ ನಲ್ಲಿ ಅಂಥ ವಿಶೇಷತೆ ಏನಿದೆ? ನೀವು ಯಾಕೆ ತೆರಳಬೇಕು ಎನ್ನುವುದಕ್ಕೆ ಟಾಪ್ 10 ಕಾರಣಗಳನ್ನು ಇಲ್ಲಿ ನೀಡಲಾಗಿದೆ.

    #1. ನೀವು ಗಮನಿಸಿರಬಹುದು ಭಾರತದಲ್ಲಿ ಮಧ್ಯಾಹ್ನದ ವೇಳೆ ಸೂರ್ಯ ನಡು ನೆತ್ತಿಯಲ್ಲಿ ಇರುತ್ತಾನೆ. ಆದರೆ ಐಸ್‍ಲ್ಯಾಂಡ್‍ನಲ್ಲಿ ಸೂರ್ಯ ನಡು ನೆತ್ತಿಗೆ ಬರೋದಿಲ್ಲ. ಉತ್ತರಧ್ರುವದ ಹತ್ತಿರ ಐಸ್‍ಲ್ಯಾಂಡ್ ಇರುವ ಕಾರಣ ಅಲ್ಲಿ ಸೂರ್ಯನ ಬೆಳಕು ಅಷ್ಟಾಗಿ ಬೀಳುವುದಿಲ್ಲ. ಗರಿಷ್ಟ ಅಂದ್ರೆ ಬೆಳಗ್ಗೆ 9 ಗಂಟೆಗೆ ಭಾರತದಲ್ಲಿ ಸೂರ್ಯ ಹೇಗೆ ಕಾಣುತ್ತಾನೋ ಅದೇ ರೀತಿಯಾಗಿ ಮಧ್ಯಾಹ್ನದ ಅವಧಿಯಲ್ಲಿ ಅಲ್ಲಿ ಕಾಣುತ್ತಾನೆ.

    #2. ಬೆಂಗಳೂರು ಮಹಾನಗರದಲ್ಲಿರುವ ಜನಸಂಖ್ಯೆ ಸುಮಾರು 1 ಕೋಟಿ. ಆದರೆ ಐಸ್‍ಲ್ಯಾಂಡ್‍ನಲ್ಲಿರುವ ಒಟ್ಟು ಜನಸಂಖ್ಯೆಯೇ 3 ಲಕ್ಷ ಮಂದಿ. 39,682 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ದೇಶದ ಈ ಜನಸಂಖ್ಯೆ 2/3ರಷ್ಟು ಜನ ರಾಜಧಾನಿಯಾದ ರೆಕ್ಟವಿಕ್‍ನಲ್ಲಿ ವಾಸಿಸುತ್ತಿದ್ದಾರೆ. ಉಳಿದ ಕಡೆ ಜನಸಂಖ್ಯೆ ಹೇಗಿದೆ ಅಂದರೆ ಪೂರ್ವ ಭಾಗದಲ್ಲಿ ನೀವು ರಸ್ತೆಯಲ್ಲಿ ಸಂಚರಿಸಿದರೆ ಹಲವು ಕಿಲೋಮೀಟರ್ ದೂರಕ್ಕೆ ಒಂದೊಂದು ಮನೆ ಕಾಣಸಿಗುತ್ತದೆ. ಕೆಲವು ಕಡೆ 100 ಕಿ.ಮೀ -200 ಕಿ.ಮೀ ಅಂತರದಲ್ಲಿ ಮನೆ ಕಾಣಸಿಗುತ್ತದೆ.

    #3. ಚಳಿಗಾಲದಲ್ಲಿ ಸಂಪೂರ್ಣ ಐಸ್‍ಲ್ಯಾಂಡ್ ದೇಶವೇ ಮಂಜಿನಿಂದ ಆವೃತವಾಗಿರುತ್ತದೆ. ಅಟ್ಲಾಂಟಿಕ್ ವಲಯದಲ್ಲಿದ್ದರೂ ಕನಿಷ್ಠ ಉಷ್ಣಾಂಶ ಮೈನಸ್ 10 ಡಿಗ್ರಿಗೆ ಇಳಿಯುತ್ತದೆ. ಹತ್ತಿರದಲ್ಲೇ ಗಲ್ಫ್ ಸ್ಟ್ರೀಮ್ ಇರುವ ಕಾರಣ ಅಲ್ಲಿಯ ಬಿಸಿಗಾಳಿಯಿಂದಾಗಿ ಐಸ್‍ಲ್ಯಾಂಡ್ ಸ್ವಲ್ಪ ಬೆಚ್ಚಗೆ ಇರುತ್ತದೆ.

    #4. ಉತ್ತರದಿಂದ ಮೂಡುವ ಸೂರ್ಯನ ಬೆಳಕುಗಳನ್ನು ವೀಕ್ಷಿಸಲು ಐಸ್‍ಲ್ಯಾಂಡ್ ಹೇಳಿ ಮಾಡಿಸಿದ ಸ್ಥಳ.

    #5. ಐಸ್‍ಲ್ಯಾಂಡ್ ಅನ್ನು ನೀವು ಎರಡೂ ರೀತಿಯಲ್ಲಿ ನೋಡಬಹುದು. ಚಳಿಗಾಲದಲ್ಲಿ ಸಂಪೂರ್ಣ ಮಂಜು ಆವರಿಸಿ, ಬಹುತೇಕ ರಸ್ತೆಗಳು ಸಂರ್ಪೂಣವಾಗಿ ಬಂದ್ ಆಗಿರುತ್ತದೆ. ಬಹುತೇಕ ಜಲಪಾತಗಳು ಹೆಪ್ಪುಗಟ್ಟಿರುತ್ತವೆ. ಆದರೆ ಬೇಸಿಗೆಯಲ್ಲಿ ರಸ್ತೆಗಳು ಓಪನ್ ಆಗಿರುತ್ತದೆ. ಜೂನ್, ಜುಲೈ ಸೆಪ್ಟೆಂಬರ್ ಅವಧಿಯಲ್ಲಿ ಪ್ರವಾಸಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಐಸ್‍ಲ್ಯಾಂಡ್‍ಗೆ ಭೇಟಿ ನೀಡುತ್ತಾರೆ.

    #6. ಅತಿಹೆಚ್ಚು ಗಾಳಿ ಬೀಸೋ ದೇಶಗಳ ಪಟ್ಟಿಯಲ್ಲಿ ಐಸ್‍ಲ್ಯಾಂಡಿಗೆ ವಿಶ್ವದಲ್ಲೇ ಎರಡನೇ ಸ್ಥಾನ. ಗಾಳಿ ಎಷ್ಟು ರಭಸವಾಗಿ ಬೀಸುತ್ತದೆ ಎಂದರೆ ಕೆಲವೊಮ್ಮೆ ಕಾರುಗಳನ್ನೇ ಅಲುಗಾಡಿಸಿ ಬಿಡುತ್ತದೆ. ಹೊರಗಡೆ ನಿಲ್ಲುವುದಂತೂ ಅಸಾಧ್ಯವಾದ ಮಾತು. ಕೊಠಡಿಗಳನ್ನು ಬುಕ್ ಮಾಡಿದ್ರೆ ಗಾಳಿ ಬೀಸುವ ಕಡೆ ಓಪನ್ ಮಾಡದಿರುವಂತೆ ಕಂಪೆನಿಗಳು ಪ್ರವಾಸಿಗರಿಗೆ ಸೂಚಿಸುತ್ತವೆ. ಒಂದು ವೇಳೆ ಓಪನ್ ಮಾಡಿದರೆ ಗಾಳಿಯ ರಭಸಕ್ಕೆ ಬಾಗಿಲು ಮುರಿದು ಬೀಳುವ ಸಾಧ್ಯತೆ ಇರುತ್ತದೆ. ಕೆಲವೊಂದು ಕಡೆಯಲ್ಲಿ ಮುರಿದು ಬಿದ್ದಿರುವ ಉದಾಹರಣೆ ಇದೆಯಂತೆ.

    #7. ಐಸ್‍ಲ್ಯಾಂಡ್ ದ್ವೀಪದೇಶವಾಗಿರುವದರಿಂದ ಸುತ್ತಲೂ ಸಮುದ್ರ ಇದೆ ಎನ್ನುವುದು ನಿಮಗೆ ತಿಳಿದಿದೆ. ಆದರೆ ಈ ಸಮುದ್ರದ ದಂಡೆಯ ಭಾರತೀಯರಿಗೆ ವಿಶೇಷವಾಗಿ ಕಂಡರೆ ಆಶ್ಚರ್ಯ ಏನಿಲ್ಲ. ಭಾರತದ ಸಮುದ್ರದಲ್ಲಿ ಬಿಳಿ ಮರಳು ಸಿಕ್ಕಿದರೆ ಅಲ್ಲಿ ಒಂದೆ ಒಂದು ಕಡೆ ಬಿಳಿ ಮರಳು ಸಿಗೋದಿಲ್ಲ. ಅಲ್ಲಿ ಕಪ್ಪು ಬಣ್ಣದ ಮರಳು ಮಾತ್ರ ಸಿಗುತ್ತದೆ. ಇದು ಅಲ್ಲಿನ ಮತ್ತೊಂದು ವಿಶೇಷತೆ.

    #8. ಕಪ್ಪು ಮರಳು ಸಮುದ್ರದ ದಂಡೆಯಲ್ಲಿ ಯಾಕೆ ಸಿಗುತ್ತೆ ಅಂತ ನೀವು ಕೇಳಬಹುದು. ಅದಕ್ಕೂ ಕಾರಣ ಇದೆ. ಅಲ್ಲಿ ಜ್ವಾಲಾಮುಖಿಗಳು ಸಾಮಾನ್ಯ. ಈ ಹಿಂದಿನ ಒಂದು ಜ್ವಾಲಾಮುಖಿ ಸುಮಾರು 1 ವರ್ಷಗಳ ಕಾಲ ಜೀವಂತವಾಗಿತ್ತು. ಜ್ವಾಲಾಮುಖಿ ಇರುವಿಕೆ ಪತ್ತೆಯಾದರೆ ಆ ಸ್ಥಳವನ್ನು ಸಂಪರ್ಕಿಸುವ ರಸ್ತೆಗಳ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಈ ವೇಳೆ ಸ್ಥಳೀಯ ಕಂಪೆನಿಗಳು ಇದನ್ನು ವೀಕ್ಷಿಸಲೆಂದೇ ಹೆಲಿಕಾಪ್ಟರ್ ಟೂರ್‍ಗಳನ್ನು ಆಯೋಜಿಸುತ್ತದೆ.

    #9 ದೇಶದ ಹೆಸರಿನಲ್ಲಿ ‘ಐಸ್’ ಇದೆ. ಹೀಗಾಗಿ ಐಸ್‍ಲ್ಯಾಂಡಿನಲ್ಲಿ ದೊಡ್ಡ ದೊಡ್ಡ ಹಿಮದ ಪರ್ವತಗಳಿರುವುದು ಇಲ್ಲಿ ಇರುವುದು ಸಾಮಾನ್ಯ. ಅದರಲ್ಲೂ ವಟನ್‍ಜೋಕುಲ್ ಹೆಸರಿನ ಗೆಡ್ಡೆ ಐಸ್‍ಲ್ಯಾಂಡ್ ಭೂಮಿಯ ಶೇ.8ರಷ್ಟು ಜಾಗದಲ್ಲಿ ಆವರಿಸಿಕೊಂಡಿದೆ. ಹಿಮದ ಗೆಡ್ಡೆಗಳಿರುವ ಪ್ರದೇಶಗಳಲ್ಲಿ ಹೋಗುವಾಗ ಜಾಗೃತೆಯಿಂದ ಇರಬೇಕಾಗುತ್ತದೆ. ಸ್ಥಳೀಯ ಗೈಡ್‍ಗಳ ಸಹಕಾರವಿಲ್ಲದೇ ಇಲ್ಲಿ ನಡೆಯಲು ಸಾಧ್ಯವೇ ಇಲ್ಲ.

    #10 ಪ್ರಾಕೃತಿಕ ಸೌಂದರ್ಯ ಹೊರತುಪಡಿಸಿ ಐಸ್‍ಲ್ಯಾಂಡಿನ ಮತ್ತೊಂದು ವಿಶೇಷ ಏನೆಂದರೆ ಅಲ್ಲಿ ಶುದ್ಧವಾದ ಗಾಳಿಯನ್ನು ಮಾರಾಟ ಮಾಡಲಾಗುತ್ತದೆ. ಹೌದು ಬಹುತೇಕ ಅಂಗಡಿಗಳು “ಫ್ರೆಶ್ ಐಸ್‍ಲ್ಯಾಂಡಿಕ್ ಮೌಂಟೇನ್ ಏರ್” ಹೆಸರಿನ್ ಸಣ್ಣ ಟಿನ್‍ನಲ್ಲಿ ಗಾಳಿಯನ್ನು ಮಾರಾಟ ಮಾಡುತ್ತಿವೆ. ಒಂದು ಟಿನ್‍ಗೆ ಭಾರತ ಬೆಲೆ 600 ರೂ. ಅಷ್ಟೇ!.

    ಐಸ್‍ಲ್ಯಾಂಡ್ ಬಗ್ಗೆ ನೀವು ಈ ಬರಹ ಓದಿ ತಿಳಿದುಕೊಂಡಾಯ್ತು. ನೀವು ಈಗ ಅಲ್ಲಿಗೆ ಪ್ರವಾಸಕ್ಕೆ ಹೋಗಬೇಕು ಎಂದರೆ ನಿಮಗೆ ಒಂದು ಸುವರ್ಣ ಅವಕಾಶವಿದೆ. wildvoyager ಸಂಸ್ಥೆಯವರು ಐಸ್‍ಲ್ಯಾಂಡ್ ಪ್ರವಾಸವನ್ನು ಆಯೋಜಿಸಿದೆ. ಈ ಪ್ರವಾಸದ ಮೊದಲ ಬ್ಯಾಚ್ ಜೂನ್ 24ಕ್ಕೆ ಐಸ್‍ಲ್ಯಾಂಡಿಗೆ ತೆರಳಲಿದೆ

    ದೆಹಲಿ ಮೂಲದ ವೈಲ್ಡ್ ಲೈಫ್ ಫೋಟೋಗ್ರಾಫಿಯಲ್ಲಿ ಆಸಕ್ತಿ ಇರುವ ಅಲಂಕಾರ್ ಚಂದ್ರ ಎಂಬವರು ಈ ಸಂಸ್ಥೆಯನ್ನು ಹುಟ್ಟಿ ಹಾಕಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್ ನಲ್ಲಿ ಇವರ ಬರಹಗಳು ಪ್ರಕಟಗೊಂಡಿದ್ದು, ಹಲವಾರು ದೇಶಗಳಿಗೆ ಈ ಸಂಸ್ಥೆಯ ಮೂಲಕ ಪ್ರವಾಸವನ್ನು ಆಯೋಜಿಸುತ್ತಾರೆ. ಸೋ ನೀವು ಐಸ್‍ಲ್ಯಾಂಡಿಗೆ ಹೋಗಬೇಕು ಎಂದು ಕನಸು ಕಾಣುತ್ತಿದ್ದರೆ ಈ ವೆಬ್‍ಸೈಟ್ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಆಸಕ್ತರು info@wildvoyager.com ಮೇಲ್ ಮಾಡುವ  ಮೂಲಕ ನೇರವಾಗಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

    ಪ್ರವಾಸಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಈ ವೆಬ್‍ಸೈಟನ್ನು ಕ್ಲಿಕ್ಕಿಸಿ: https://wildvoyager.com/destinations/iceland