‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಸ್ಪರ್ಧಿ ಇಶಾನಿ (Eshani) ಇದೀಗ ಹಾಟ್ ಅವತಾರ ತಾಳಿದ್ದಾರೆ. ಬಿಕಿನಿ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್ ಶಾಕ್

ಪಿಂಕ್ ಕಲರ್ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋವನ್ನು ಇಶಾನಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ‘ನನಗೆ ನಿಮ್ಮ ಅನುಮತಿ ಬೇಡ’ ಎಂದು ನೆಗೆಟಿವ್ ಕಾಮೆಂಟ್ ಮಾಡೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದಾರೆ. ನಟಿಯ ಪೋಸ್ಟ್ಗೆ ಬಗೆ ಬಗೆಯ ಕಾಮೆಂಟ್ಗಳು ಹರಿದು ಬಂದಿದೆ.

ಅಂದಹಾಗೆ, ದೊಡ್ಮನೆಯಲ್ಲಿ ಮೈಕಲ್ ಜೊತೆ ಲವ್ ವಿಚಾರವಾಗಿ ಇಶಾನಿ ಹೈಲೈಟ್ ಆಗಿದ್ದರು. ಆಟಕ್ಕಿಂತ ಮೈಕಲ್ ಜೊತೆಗಿನ ಗೆಳೆತನದಿಂದ ಇಶಾನಿ ಗುರುತಿಸಿಕೊಂಡಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದರು.

ಇನ್ನೂ ಬಿಗ್ ಬಾಸ್ನಲ್ಲಿ ಡ್ರೋನ್ ಪ್ರತಾಪ್ಗೆ ಕಾಗೆ ಎಂದು ವಾಗ್ದಾಳಿ ನಡೆಸಿದ್ದರು. ಸಿಂಪಥಿ ಕಾರ್ಡ್ ಯೂಸ್ ಮಾಡಿಕೊಂಡು ಬಿಗ್ ಬಾಸ್ನಲ್ಲಿದ್ದಾರೆ ಎಂದು ಇಶಾನಿ ಕೆಣಕಿದ್ದರು.

ಇದು ಪ್ರತಾಪ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಇಶಾನಿ ಕ್ಷಮೆಯಾಚಿಸುವರೆಗೂ ಬಿಟ್ಟಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಆ ನಂತರ ಇಶಾನಿ ಕ್ಷಮೆ ಕೇಳಿದ್ದರು.

ಸದ್ಯ ಇಶಾನಿ ಆಲ್ಬಂ ಸಾಂಗ್ ಹಾಗೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.









ಇಶಾನಿ (Eshani) ನನ್ನ ಗರ್ಲ್ಫ್ರೆಂಡ್ ಎಂದು ಮೈಕಲ್ ಬಿಗ್ ಮನೆಯಲ್ಲಿ ಸಾರಿ ಸಾರಿ ಹೇಳಿದ್ದರು. ಪ್ರೇಮ ಪಕ್ಷಿಗಳಾಗಿ ಇಬ್ಬರೂ ಹೈಲೆಟ್ ಆಗಿದ್ರು. ಅದಾದ ಮೈಕಲ್ ಇಶಾನಿ ಕಟುವಾಗಿ ನಡೆದುಕೊಳ್ಳುವ ರೀತಿ.. ನಾನ್ನ ಮಾತೇ ನಡೆಯಬೇಕು ಎನ್ನುವ ನಡೆ, ಅದರಲ್ಲೂ ಟಾಸ್ಕ್ನಲ್ಲಿ ಉಸ್ತುವಾರಿ ಸಮಯದಲ್ಲಿ ಮೈಕಲ್ ಫೇರ್ ಆಗಿ ಆಟ ಆಡೋಕೆ ಬಿಟ್ಟಿರಲಿಲ್ಲ. ಹೀಗೆ ಹಲವು ವಿಚಾರಗಳಿಂದ ಇಬ್ಬರ ನಡುವೆ ಮನಸ್ತಾಪದ ಹೊಗೆಯಾಡಿತ್ತು.
ಮೈಕಲ್ಗೆ ಕಿಚ್ಚನ ಕ್ಲಾಸ್ ಬಳಿಕ ಸಾಕಮ್ಮಾ ಸಾಕು ನಿನ್ನ ಜೊತೆಗಿನ ರಿಲೇಷನ್ಶಿಪ್ ಸಾಕು ಎನ್ನುವಂತೆ ಮೈಕಲ್ ಸಾಷ್ಟಾಂಗ ನಮಸ್ಕಾರ ಹಾಕಿದ್ರು. ಇಬ್ಬರ ನಡುವಿನ ಲವ್ವಿ-ಡವ್ವಿ ಅಷ್ಟೇನೂ ವರ್ಕ್ ಆಗಿರಲಿಲ್ಲ. ವಾರಾಂತ್ಯದಲ್ಲಿ ಸುದೀಪ್ ಮುಂದೆ ತಮ್ಮ ಹಳೆಯ ರಿಲೇಷನ್ಶಿಪ್ ಬಗ್ಗೆ ಹೇಳಿ ಇಶಾನಿ ಕಣ್ಣೀರು ಇಟ್ಟಿದ್ದರು. ಬಳಿಕ ಅವರ ಕಳಪೆ ಆಟಕ್ಕೆ ಎಲಿಮಿನೇಟ್ ಆಗುವ ಮೂಲಕ ಮನೆಮಂದಿಗೆ ಶಾಕ್ ಕೊಟ್ಟಿದ್ದರು. ಇದನ್ನೂ ಓದಿ:






ದಸರಾ ಹಬ್ಬವಿದ್ದ ಕಾರಣ ಭಾಗ್ಯಶ್ರೀ ಅವರು ಅಂದು ಜಸ್ಟ್ ಮಿಸ್ ಆಗಿದ್ದರು. ಎಲಿಮಿನೇಷನ್ ಬಿಸಿ ಇಟ್ಟಿದ ಮೇಲೆ ಭಾಗ್ಯ ಅವರು ಎಚ್ಚೆತ್ತುಕೊಂಡಿದ್ದರು. ಅದಾದ ಬಳಿಕ ಮನೆಯಲ್ಲಿ ಸಖತ್ ಆಗಿ ಭಾಗ್ಯ ಅವರು ಆಟ ಆಡಿದ್ದರು.
ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ರೂ, ಭಾಗ್ಯಶ್ರೀ ಅವರು ಬಿಗ್ ಮನೆಗೆ ಕಾಲಿಟ್ಟ ದಿನದಿಂದಲೇ ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಮೊದಲ ವಿನಯ್ ಬಾಯಿಗೆ ಆಹಾರವಾಗಿದ್ದರು. ಆ ನಂತರ ಸ್ನೇಹಿತ್ ಕೆಂಗಣ್ಣಿಗೆ ಗುರಿಯಾಗಿದ್ದರು. ಬೇರೇ ಅವರ ವಿಚಾರದಲ್ಲಿ ಭಾಗ್ಯ ಮುಗುತುರಿಸುತ್ತಾರೆ ಎಂದು ಕಾರಣ ನೀಡಿ ಭಾಗ್ಯ ಕಳಪೆ ಎಂದಿದ್ದರು ಸ್ನೇಹಿತ್.




‘ಗಂಧದ ಗುಡಿ’ ಟೀಮ್ ಜಾಸ್ತಿ ನೀರು ಹಾಕಿದ್ದರು. ಆದರೆ ಇಶಾನಿ ಅದನ್ನು ಒಪ್ಪುವುದಕ್ಕೆ ರೆಡಿ ಇಲ್ಲ. ತನಿಷಾ ಎರಡು ಬಲೂನ್ ಕೈಯಲ್ಲಿ ಒಡೆದರು. ಹೀಗಾಗಿ ನೀರು ತೆಗೆಯಬೇಕು ಎಂದು ವಾದ ಮಾಡಿದರು. ಒಂದು ಬಲೂನ್ ತೆಗೆದುಕೊಂಡು ಹೋಗಿ, ಒಡೆದು ನೀರು ಹಾಕಿ ಬಂದಿದ್ದಾರೆ. ಆದರೆ, ಬಿಗ್ ಬಾಸ್ ಅದನ್ನು ಪರಿಗಣನೆಗೆ ತೆಗದುಕೊಳ್ಳದೆ ಹೆಚ್ಚು ನೀರು ಇರುವುದನ್ನು ನೋಡಿ, ಗೆದ್ದವರನ್ನು ಘೋಷಿಸಿ ಎಂದಿದ್ದಾರೆ. ಆದರೆ, ಮೈಕಲ್ ಮಾತ್ರ, ‘ಗಂಧದ ಗುಡಿ’ ಗೆದ್ದಿದೆ ಎಂಬುದನ್ನು ಬೇಸರದಲ್ಲಿಯೇ ಹೇಳಿದ್ದಾರೆ.