Tag: erode

  • ರಸ್ತೆ ಬದಿ ಸಿಕ್ಕ 50 ಸಾವಿರ ಹಣವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ 2ನೇ ತರಗತಿ ವಿದ್ಯಾರ್ಥಿ

    ರಸ್ತೆ ಬದಿ ಸಿಕ್ಕ 50 ಸಾವಿರ ಹಣವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ 2ನೇ ತರಗತಿ ವಿದ್ಯಾರ್ಥಿ

    ಚೆನ್ನೈ: ದಾರಿಯಲ್ಲಿ ಬಿಡಿಗಾಸು ಬಿದ್ದಿದ್ದರೆ, ಯಾರಿಗೂ ಗೊತ್ತಾಗದಂತೆ ಅದನ್ನು ತಮ್ಮ ಜೇಬಿಗೆ ಇಳಿಸುವ ಅನೇಕರ ಬಗ್ಗೆ ನಾವು ಕೇಳಿದ್ದೇವೆ, ನೋಡಿದ್ದೇವೆ. ಆದರೆ 2ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯ ಸಮೀಪದಲ್ಲಿ ಸಿಕ್ಕ 50 ಸಾವಿರ ರೂ. ಹಣವನ್ನು ಪೊಲೀಸರಿಗೆ ಮುಟ್ಟಿಸಿ ಪ್ರಮಾಣಿಕತೆ ಮೆರೆದಿದ್ದಾನೆ.

    ತಮಿಳುನಾಡಿನ ಈರೋಡ್ ಜಿಲ್ಲೆಯ ಚಿನ್ನಸೆಮುರ್ ಗ್ರಾಮದಲ್ಲಿ ಬುಧವಾರ ಘಟನೆ ನಡೆದಿದೆ. ಗ್ರಾಮದ ಪಂಚಾಯತ್ ಯುನಿಯನ್ ಮಿಡಲ್ ಸ್ಕೂಲ್‍ನ ವಿದ್ಯಾರ್ಥಿ ಮೊಹಮ್ಮದ್ ಯಾಸೀನ್ ಹಣವನ್ನು ಪೊಲೀಸರಿಗೆ ಹಸ್ತಾಂತರಿಸಿದ ಏಳು ವರ್ಷದ ಬಾಲಕ.

    ನಡೆದದ್ದು ಏನು?
    ಮೂತ್ರ ವಿಸರ್ಜನೆಗಾಗಿ ಶಾಲೆಯಿಂದ ಮೊಹಮ್ಮದ್ ಹೊರ ಬಂದಿದ್ದನು. ಈ ವೇಳೆ ಶಾಲೆಯ ಬಳಿಯ ರಸ್ತೆ ಪಕ್ಕದಲ್ಲಿ ಯಾರೋ ಚೀಲವನ್ನು ಏಸೆದು ಹೋಗಿದ್ದರು. ಅದರಲ್ಲಿ ಏನು ಇದೆ ಎಂದು ಮೊಹಮ್ಮದ್ ಚೀಲ ತೆರೆದು ನೋಡಿದ್ದಾನೆ. ಹಣ ಇರುವುದು ಗೊತ್ತಾಗಿದೆ. ತಕ್ಷಣವೇ ಅದನ್ನು ತರಗತಿಯ ಶಿಕ್ಷಕಿ ವಿ.ಜಯಂತಿ ಬಾಯಿ ಅವರಿಗೆ ತಂದು ಕೊಟ್ಟಿದ್ದನು. ಜಯಂತಿ ಅವರು ಘಟನೆಯನ್ನು ಮುಖ್ಯಶಿಕ್ಷಕಿಗೆ ವಿವರಿಸಿ, ನಂತರ ಹಣವನ್ನು ಜಿಲ್ಲಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

     

    ಬಾಲಕನ ಪ್ರಾಮಾಣಿಕತೆ ಮೆಚ್ಚಿದ ಈರೋಡ್ ಠಾಣೆಯ ಎಸ್‍ಪಿ ಶಕ್ತಿ ಗಣೇಶನ್ ಅವರು ಮೊಹಮ್ಮದ್‍ಗೆ 1 ಸಾವಿರ ರೂ. ಪುರಸ್ಕಾರ ನೀಡಲು ಮುಂದಾದರು. ಆದರೆ ಮೊಹಮದ್ ಅದನ್ನು ಪಡೆಯಲಿಲ್ಲ. ನಂತರ 2,500 ರೂ. ನೀಡಲು ಮುಂದಾದರೂ ಮೊಹ್ಮದ್ ಪಡೆಯದೇ ಇದ್ದಾಗ ಆತನಿಗೆ ಮತ್ತು ಆತನ ತಮ್ಮನಿಗೆ ಬ್ಯಾಗ್ ಕೊಡಿಸುವುದಾಗಿ ಶಕ್ತಿ ಗಣೇಶ್ ಭರವಸೆ ನೀಡಿದರು. ಅಲ್ಲದೆ ಜುಲೈ 19ರಂದು ಮೊಹಮ್ಮದ್ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದ್ದಾರೆ.

    ಮೊಹಮ್ಮದ್ ತಾಯಿ ಅಬ್ರುತ್ ಬೇಗಂ ಮತ್ತು ತಂದೆ ಬಾಷಾ ಮಗನ ಪ್ರಮಾಣಿಕತೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬಾಷಾ ಅವರು ಬಟ್ಟೆ ವ್ಯಾಪಾರಿಯಾಗಿದ್ದು, ಒಂದು ದಿನಕ್ಕೆ 300 ರೂ. ರಿಂದ 500 ರೂ. ಸಂಪಾದನೆ ಮಾಡುತ್ತಾರೆ. ಮೊಹ್ಮದ್ ತಾಯಿ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಕೇವಲ 1 ಸಾವಿರ ರೂ. ಪಡೆಯುತ್ತಿದ್ದಾರೆ. ಇಂತಹ ಬಡತನದಲ್ಲಿ ಬೆಳೆದಿರುವ ಮೊಹ್ಮದ್ ಇಂದು ಅನೇಕರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

  • ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

    ಹೆಲ್ಮೆಟ್ ಹಾಕಿ ಬಸ್ ಚಲಾಯಿಸಿದ ಚಾಲಕ- ಕಾರಣ ಕೇಳಿದ್ರೆ ನಿಮಗೆ ಇಷ್ಟವಾಗುತ್ತೆ

    ಚೆನ್ನೈ: ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

    ಬಸ್ ಚಾಲಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಬಸ್ ಕೊಯಮತ್ತೂರಿನಿಂದ ಈರೋಡ್ ಕಡೆ ಸಂಚರಿಸುತ್ತಿತ್ತು. ಈ ಬಸ್ ನಲ್ಲಿ ಇದೇ ಮೊದಲ ಬಾರಿಗೆ ಬಸ್ ಚಾಲಕ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೂ ಐಎಸ್‍ಐ ಹೆಲ್ಮೆಟ್ ಕಡ್ಡಾಯ- ಮೈಸೂರು ಪೊಲೀಸ್ ಆಯುಕ್ತರಿಂದ ಸುತ್ತೋಲೆ

    ಹೆಲ್ಮೆಟ್ ಧರಿಸಲು ಕಾರಣವೇನು?
    ತಮಿಳುನಾಡು ಸಾರಿಗೆ ಇಲಾಖೆಯ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆ ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದಾಗಿ ಕೊಯಮತ್ತೂರು ಪ್ರಯಾಣಿಕರು ಬಸ್ ಗಾಗಿ ಕಾದು ಸುಸ್ತಾಗಿದ್ದರು. ಕೊನೆಗೊಂದು ಬಸ್ ಬಂತು. ಆ ಬಸ್ ನಲ್ಲಿ ಜನವಿಲ್ಲದ ಕಾರಣ ಪ್ರಯಾಣಿಕರು ಬೇಗ ಬೇಗ ಹತ್ತಿ ಸೀಟ್ ನಲ್ಲಿ ಕುಳಿತುಕೊಂಡ್ರು. ಇದನ್ನೂ ಓದಿ: ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು

    ಈ ವೇಳೆ ಬಸ್ ಚಾಲಕ ಹೆಲ್ಮೆಟ್ ಹಾಕಿರುವುದು ಕೆಲ ಮಂದಿಯ ಗಮನಕ್ಕೆ ಬಂದಿದೆ. ಕೂಡಲೇ ಅದರಲ್ಲೊಬ್ಬ ಪ್ರಯಾಣಿಕ ಚಾಲಕನ ಹತ್ತಿರ ಹೋಗಿ ಯಾಕೆ ಹೆಲ್ಮೆಟ್ ಧರಿಸಿದ್ದೀರಿ ಎಂದು ಕೇಳಿದ್ದಾನೆ. ಈ ವೇಳೆ ಚಾಲಕ ಸಾರಿಗೆ ನೌಕರರು ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಮಾತ್ರ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾನು ಅವರಿಗೆ ಟಾರ್ಗೆಟ್ ಆಗಬಾರದೆಂದು, ನನ್ನ ರಕ್ಷಣೆಗೋಸ್ಕರ ನಾನು ಹೆಲ್ಮೆಟ್ ಹಾಕ್ಕೊಂಡು ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿದ್ದಾರೆ. ಚಾಲಕನ ಒಳ್ಳೆಯತನದ ಗುಣಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

     

    https://youtu.be/5-2to324ssU