Tag: england

  • ಕೌಂಟಿ ಕ್ರಿಕೆಟ್ ನಿಂದ ವಿರಾಟ್ ಕೊಹ್ಲಿ ಔಟ್

    ಕೌಂಟಿ ಕ್ರಿಕೆಟ್ ನಿಂದ ವಿರಾಟ್ ಕೊಹ್ಲಿ ಔಟ್

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ ನ ಕೌಂಟಿ ಕ್ರಿಕೆಟ್ ಆಡುತ್ತಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

    ನಾಯಕ ವಿರಾಟ್ ಕೊಹ್ಲಿ ಕುತ್ತಿಗೆ ಉಳುಕು ಹಾಗೂ ಬೆನ್ನು ಹುರಿ (ಹರ್ನಿಯೇಟೆಡ್ ಡಿಸ್ಕ್) ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆ ಹಂತಕ್ಕೆ ತಲುಪಿದ್ದಾರೆ. ಹೀಗಾಗಿ ಅವರು ಇಂಗ್ಲೆಂಡ್‍ನ ಕೌಂಟಿ ಕ್ರಿಕೆಟ್ ಪಂದ್ಯಗಳಿಗೆ ಲಭ್ಯವಾಗುತ್ತಿಲ್ಲ ಎಂದು ಬಿಸಿಸಿಐ ಗುರುವಾರ ಸ್ಪಷ್ಟನೆ ನೀಡಿದೆ.

    ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಮಹತ್ವದ ಸರಣಿ ನಿಗದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕೊಹ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಕೆಲ ದಿನಗಳು ವಿಶ್ರಾಂತಿ ಪಡೆಯಲಿದ್ದು, ಜೂನ್ 15 ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಆಕಾಡೆಮಿಯಿಂದ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಬಿಸಿಸಿಐ ವೈದ್ಯಕೀಯ ವಿಭಾಗ, ಮುಂದಿನ ಐರ್ಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ ವೇಳೆಗೆ ಗಾಯದ ಸಮಸ್ಯೆಯಿಂದ ಗುಣಮುಖರಾಗಲಿದ್ದಾರೆ ಎಂದು ತಿಳಿಸಿದೆ. 

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಹೆಚ್ಚಿನ ಹಿಡಿತ ಸಾಧಿಸುವ ಉದ್ದೇಶದಿಂದ ಕೊಹ್ಲಿ ಕೌಂಟಿ ಕ್ರಿಕೆಟ್ ಆಡಲಿ ನಿರ್ಧರಿಸಿದ್ದರು. ಈ ಹಿಂದೆ 2014 ರಲ್ಲಿ ಇಂಗ್ಲೆಂಡ್ ಸರಣಿಯಲ್ಲಿ ಆಡಿದ್ದ ಕೊಹ್ಲಿ ಕಳಪೆ ಆಟ ಪ್ರದರ್ಶಿಸಿದ್ದರು. ಕೆಲ ದಿನಗಳ ಹಿಂದೆ ಕೌಂಟಿ ಕ್ರಿಕೆಟ್ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದ ಕೊಹ್ಲಿ 3 ಚಾಂಪಿಯನ್ ಗೇಮ್ಸ್, ಐದು ದೇಶಿಯ ಏಕದಿನ ಪಂದ್ಯಗಳಲ್ಲಿ ಸರ್ರೆ ತಂಡದ ಪರ ಆಡಲಿದ್ದರು.

  • ಬೆಂಗ್ಳೂರಿನ ಟೆಸ್ಟ್ ವೇಳೆ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಕೊಹ್ಲಿ!

    ಬೆಂಗ್ಳೂರಿನ ಟೆಸ್ಟ್ ವೇಳೆ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಕೊಹ್ಲಿ!

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುವುದು ಖಚಿತವಾಗಿದ್ದು, ಈ ಕುರಿತು Surrey ತಂಡದ ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿಗೆ ಸ್ವಾಗತ ಕೋರಿ ಟ್ವೀಟ್ ಮಾಡಿದೆ.

    ಕೌಂಟಿ ಕ್ರಿಕೆಟ್ ನಲ್ಲಿ ಕೊಹ್ಲಿ ಭಾಗವಹಿಸುತ್ತಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿರುವ Surrey  ಕ್ಲಬ್, ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ನಮ್ಮ ತಂಡದಲ್ಲಿ ಆಡಲಿದ್ದಾರೆ ಎಂಬುದು ಸಂತಸದ ವಿಷಯ. ಜೂನ್ ತಿಂಗಳು ಪೂರ್ತಿ ಕೊಹ್ಲಿ ಅವರು ಕೌಂಟಿ ಕ್ರಿಕೆಟ್‍ನಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ಲಬ್ ತಿಳಿಸಿದೆ.

    ಕೌಂಟಿ ಕ್ರಿಕೆಟ್‍ನ ಭವಿಷ್ಯದ ಕುರಿತು ಪ್ರಶ್ನಿಸುತ್ತಿದ್ದ ವೇಳೆ ಕೊಹ್ಲಿಯಂತಹ ಆಟಗಾರರು ತಂಡದ ಪರ ಆಡುತ್ತಿರುವುದು ಉತ್ತಮ ಬೆಳವಣಿಗೆ. ಇದು ದೇಶಿಯ ಕ್ರಿಕೆಟ್‍ಗೆ ಪ್ರೇರಣೆ ನೀಡಲಿದೆ. ಅಲ್ಲದೇ ನಮ್ಮ ತಂಡದಲ್ಲಿ ಕೊಹ್ಲಿ ಆಡುವುದರಿಂದ ಅವರಿಂದ ಅನೇಕ ಸಲಹೆಗಳನ್ನು ಪಡೆದುಕೊಳ್ಳಲು ಆಟಗಾರರಿಗೆ ಅನುಕೂಲವಾಗುತ್ತದೆ ಎಂದು Surrey ತಂಡದ ನಿರ್ದೇಶಕ ಅಲೆಕ್ಸ್ ಸ್ಟಿವರ್ಟ್ ಹೇಳಿದ್ದಾರೆ.

    ಮುಂಬರುವ ಇಂಗ್ಲೆಂಡ್ ನಡುವಿನ ಟೂರ್ನಿಗೆ ಸಿದ್ಧತೆ ನಡೆಸಿಕೊಳ್ಳುವ ಉದ್ದೇಶದಿಂದ ವಿರಾಟ್ ಕೊಹ್ಲಿ ಕೌಟಿ ಕ್ರಿಕೆಟ್‍ನಲ್ಲಿ ಆಡುತ್ತಿದ್ದು, Surrey ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಕೌಂಟಿ ಕ್ರಿಕೆಟ್ ನಲ್ಲಿ ಆಡಬೇಕೆನ್ನುವುದು ನನ್ನ ಕನಸಾಗಿತ್ತು. ಇದನ್ನು Surrey ಕ್ಲಬ್ ನನಸಾಗಿಸಿದೆ. ಇದಕ್ಕಾಗಿ ತಂಡದ ನಿರ್ದೇಶಕ ಅಲೆಕ್ ಸ್ಟಿವರ್ಟ್ ಹಾಗೂ ಅದರ ಆಡಳಿತ ಮಂಡಳಿಗೆ ಕೃತಜ್ಞನಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ನಡೆದ ಪೂರ್ಣಾವಧಿಯ ಟೂರ್ನಿಯಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಸರಣಿಯಲ್ಲಿ ಸ್ವಿಂಗ್ ಬೌಲಿಂಗ್ ಎದುರಿಸಲು ಕಷ್ಟಪಟ್ಟಿದ್ದರು. ಅದರಲ್ಲೂ ಟೆಸ್ಟ್ ಮಾದರಿಯಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಕೌಂಟಿ ಕ್ರಿಕೆಟ್ ಪರ ಆಡಲು ಕೊಹ್ಲಿ ಸಹಿ ಹಾಕಿದ್ದಾರೆ.

    ಕೊಹ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಭಾಗವಹಿಸುವುದರಿಂದ ಇಂಗ್ಲೆಂಡ್ ಟೂರ್ನಿಗೂ ಮೊದಲು ಅಫ್ಘಾನಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಜೂನ್ 14 ರಿಂದ 18 ವರೆಗೆ ನಡೆಯುವ ಏಕೈಕ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

  • ಮೋದಿ ದೇಶದಲ್ಲಿ `ಮೌನಿ ಬಾಬಾ’, ವಿದೇಶದಲ್ಲಿ ಮಾತ್ರ ಮಾತಾಡ್ತಾರೆ : ಶಿವಸೇನೆ

    ಮೋದಿ ದೇಶದಲ್ಲಿ `ಮೌನಿ ಬಾಬಾ’, ವಿದೇಶದಲ್ಲಿ ಮಾತ್ರ ಮಾತಾಡ್ತಾರೆ : ಶಿವಸೇನೆ

    ಮುಂಬೈ: ಬಿಜೆಪಿ ಪಕ್ಷದ ಬಹುಕಾಲದ ಮಿತ್ರ ಪಕ್ಷವಾಗಿದ್ದ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮೋದಿ ದೇಶದ ಸ್ಥಳೀಯ ವಿಷಯಗಳನ್ನು ವಿದೇಶಿದಲ್ಲಿ ನಿಂತು ಮಾತನಾಡುತ್ತಾರೆ. ಪ್ರಧಾನಿಗಳ ಈ ನಡೆ ಸೂಕ್ತವಲ್ಲ ಎಂದು ಕಿಡಿಕಾರಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಇಂಗ್ಲೆಂಡ್ ಪ್ರವಾಸವನ್ನು ಟೀಕಿಸಿರುವ ಶಿವಸೇನೆ, ಬಹುಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ಪರಾರಿಯಾಗಿರುವ ವಿಜಯ್ ಮಲ್ಯ ಅಲ್ಲೇ ಇದ್ದರೂ ಪ್ರಧಾನಿಗಳು ಬರಿಗೈ ನಲ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ ಅಂತಾ ವ್ಯಂಗ್ಯ ಮಾಡಿದೆ.

    ತನಗೆ ಕಾಂಗ್ರೆಸ್ ಅಥವಾ ಗಾಂಧಿ ಹೆಸರಿನ ಕುಟುಂಬದ ವಿರುದ್ಧ ಅಸಮಾಧಾನವಿದ್ದು, ಆದರೆ ದೇಶದ ವಿಷಯಗಳ ಕುರಿತು ವಿದೇಶದಲ್ಲಿ ಮಾತನಾಡುವುದು ಯಾರಿಗೂ ಲಾಭ ತಂದು ಕೊಡುವುದಿಲ್ಲ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳಿದೆ.

    ಇದೇ ವೇಳೆ ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಯನ್ನು ಅನುಸರಿಸಬೇಕು ಎಂದು ತಿಳಿಸಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಮನಮೋಹನ್ ಸಿಂಗ್ ತಮ್ಮ ಆಡಳಿತ ಅವಧಿಯಲ್ಲಿ ಹೇಗೆ ತಮ್ಮನ್ನು ಮೌನಿ ಎಂದು ಟೀಕಿಸುತ್ತಿದ್ದು ಇಂದು ತಮಗೂ ಆನ್ವಯವಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಶೀವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

    ಇಂಗ್ಲೆಂಡ್ ಪ್ರವಾಸದ ವೇಳೆ ಪ್ರಧಾನಿ ಮೋದಿ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಲಂಡನ್ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಭಾವುಕರಾಗಿದ್ದರು. ಅಲ್ಲದೇ ಕಳೆದ ಬಾರಿ ಜಪಾನ್ ಪ್ರವಾಸದ ವೇಳೆ ಸಭೆಯೊಂದರಲ್ಲಿ ಭ್ರಷ್ಟಾಚಾರದ ಕುರಿತು ಹೇಳಿಕೆ ನೀಡಿದ್ದರು. ಈ ಎರಡು ಘಟನೆಗಳನ್ನು ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿರುವ ಶಿವಶೇನೆ ವಿದೇಶದಲ್ಲಿ ಭಾರತ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ ದೇಶದ ಹೆಸರಿಗೆ ಕೆಟ್ಟ ಅಭಿಪ್ರಾಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.  ಇದನ್ನೂ ಓದಿ : ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಮೋದಿ ಗಮನ ಹರಿಸಬೇಕು- ಐಎಂಎಫ್ ಮುಖ್ಯಸ್ಥೆ

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸದ್ಯ ಮಾತನಾಡಲು ಆರಂಭಿಸಿದ್ದಾರೆ. ಆದರೆ ಪ್ರಧಾನಿಗಳು ಮೌನಿಯಾಗಿದ್ದಾರೆ. ರಾಹುಲ್ ಗಾಂಧಿ ಮೋದಿ ಅವರನ್ನು ಮೌನವಾಗಿ ಮಾಡಲು 15 ನಿಮಿಷ ಸಮಯಾವಕಾಶ ಕೇಳಿರುವುದು ಪ್ರಧಾನಿ ಮೌನಿಯಾಗಿದ್ದರೆ ಎಂಬುವುದಕ್ಕೆ ಸೂಕ್ತ ಸಾಕ್ಷಿ ಎಂದು ಹೇಳಿದೆ.  ಇದನ್ನೂ ಓದಿ: ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ

     

  • ಭಾರತದ ಕ್ಷಮೆಯಾಚಿಸಿದ ಬ್ರಿಟೀಷ್ ವಿದೇಶಾಂಗ ಕಚೇರಿ

    ಭಾರತದ ಕ್ಷಮೆಯಾಚಿಸಿದ ಬ್ರಿಟೀಷ್ ವಿದೇಶಾಂಗ ಕಚೇರಿ

    ಲಂಡನ್: ಇಂಗ್ಲೆಂಡಿನ ಲಂಡನ್ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಭಾರತದ ತ್ರಿವರ್ಣ ಧ್ವಜಕ್ಕೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಇಂಗ್ಲೆಂಡ್ ವಿದೇಶಾಂಗ ಕಚೇರಿ ಕ್ಷಮೆಯಾಚಿಸಿದೆ.

    ಜನರಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕಿದೆ. ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿದ್ದ ಕೆಲ ಸದಸ್ಯರ ನಡವಳಿಕೆಯಿಂದ ಬೇಸರವಾಗಿದೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಭಾರತೀಯ ರಾಯಭಾರಿ ಯಶ್‍ವರ್ಧನ್ ಕುಮಾರ್ ಸಿನ್ಹಾ ಅವರೊಂದಿಗೆ ಮಾತುಕತೆ ಮಾಡಿದ್ದೇವೆ ಎಂದು ಲಂಡನ್ ವಿದೇಶಾಂಗ ಕಚೇರಿ ಮತ್ತು ಕಾಮನ್ ವೆಲ್ತ್ ಕಚೇರಿ ತಿಳಿಸಿದೆ.

    ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಮತ್ತೆ ಭಾರತದ ತ್ರಿವರ್ಣ ಧ್ವಜ ಹಾರಿಸಲು ಬ್ರಿಟೀಷ್ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ.

    ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿಯಿಂದ ಭಾರತದೊಂದಿನ ಸಂಬಂಧ ಮತ್ತಷ್ಟು ಉತ್ತಮವಾಗಿದೆ. ಮತ್ತಷ್ಟು ಹತ್ತಿರದಿಂದ ಜೊತೆಯಾಗಿ ಕಾರ್ಯನಿರ್ವಹಿಸಲು ನಾವು ಬಯಸಿದ್ದೇವೆ ಎಂದು ಬ್ರಿಟೀಷ್ ವಿದೇಶಾಂಗ ಕಚೇರಿ ತಿಳಿಸಿದೆ.

    53 ಕಾಮನ್ ವೆಲ್ತ್ ದೇಶಗಳ ಧ್ವಜಗಳ ಮಧ್ಯೆ ಹಾರುತ್ತಿದ್ದ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಸುಟ್ಟಿರುವ ಗುಂಪಿನ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದು ಕೊಳ್ಳುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಇಂಗ್ಲೆಂಡ್ ಸರ್ಕಾರವನ್ನು ಆಗ್ರಹಿಸಿದೆ.

    ಏನಿದು ಘಟನೆ?
    ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧವಾಗಿ ಇಲ್ಲಿನ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಕೆಲವರು ಪ್ರತಿಭಟನೆ ನಡೆಸುತ್ತಿದ್ದರು. ಭಾರತದಲ್ಲಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳನ್ನು ಖಂಡಿಸುವ ಉದ್ದೇಶದಿಂದ ಸೇರಿದ್ದರು. ಪಾರ್ಲಿಮೆಂಟ್ ಸ್ಕ್ವೇರ್ ಮೇಲೆ ಹಾರಾಡುತ್ತಿದ್ದ ಭಾರತೀಯ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿರುವ ಪಾಕ್ ಹಾಗೂ ಖಲೀಸ್ತಾನದ ಕೆಲ ಪ್ರತಿನಿಧಿಗಳು ಅದನ್ನು ಸುಟ್ಟು ಹಾಕಿದ್ದಾರೆ. ಭಾರತದ ಧ್ವಜವನ್ನು ಕೆಳಗಿಳಿಸಿದ ಬಳಿಕ ಅದೇ ಜಾಗದಲ್ಲಿ ಪಾಕ್ ಧ್ವಜನ್ನು ಹಾರಿಸಿದ್ದಾರೆ. ಭದ್ರತಾ ಸಿಬ್ಬಂದಿ ಮುಂದುಗಡೆಯೇ ಪ್ರತಿಭಟನಾಕಾರರು ತ್ರಿವರ್ಣ ಧ್ಚಜವನ್ನು ಸುಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ಇಂಗ್ಲೆಂಡ್ ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

     

     

  • ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

    ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಇನ್ನಿಲ್ಲ

    ಲಂಡನ್: ಖ್ಯಾತ ಬ್ರಿಟಿಷ್ ಭೌತಶಾಸ್ತ್ರ ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಧಿವಶರಾಗಿದ್ದಾರೆ.

    ಇಂಗ್ಲೆಂಡಿನ ಕೇಂಬ್ರಿಡ್ಜ್ ನಲ್ಲಿರೋ ತನ್ನ ಮನೆಯಲ್ಲಿ ಹಾಕಿಂಗ್ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಹಾಕಿಂಗ್ ಅವರಿಗೆ 76 ವರ್ಷ ವಯಸ್ಸಾಗಿತ್ತು.

    ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಹಾಗೂ ಟಿಮ್ ಈ ಬಗ್ಗೆ ಹೇಳಿಕೆ ನೀಡಿದ್ದು, ನಮ್ಮ ಪ್ರೀತಿಯ ತಂದೆ ನಿಧನರಾಗಿರುವುದಕ್ಕೆ ನಮಗೆ ತುಂಬಾ ದುಃಖವಾಗಿದೆ. ಅವರೊಬ್ಬ ಮಹಾನ್ ವಿಜ್ಞಾನಿ ಹಾಗೂ ಅಸಾಮಾನ್ಯ ವ್ಯಕ್ತಿಯಾಗಿದ್ದರು. ಅವರ ಕಾರ್ಯಗಳು ಮುಂದಿನ ಅನೇಕ ವರ್ಷಗಳವರೆಗೆ ಜೀವಂತವಾಗಿರುತ್ತದೆ. ಅವರ ಧೈರ್ಯ ಹಾಗೂ ಪ್ರತಿಭೆ ಜಗತ್ತಿನಾದ್ಯಂತ ಅನೇಕರಿಗೆ ಸ್ಫೂರ್ತಿಯಾಗಿದೆ ಎಂದು ಹೇಳಿದ್ದಾರೆ.

    ಸ್ಟೀಫನ್ ಹಾಕಿಂಗ್ ಅವರ ಕೊಡುಗೆಗಳೆಂದರೆ ಕಪ್ಪು ರಂಧ್ರಗಳು ವಿಕಿರಣಗಳನ್ನ ಹೊರಸೂಸುತ್ತವೆಂಬ ಹಾಕಿಂಗ್ ಅವರ ಸೈದ್ಧಾಂತಿಕ ಭವಿಷ್ಯ, ಅದನ್ನು ಹಾಕಿಂಗ್ ರೇಡಿಯೇಷನ್ ಎಂದೇ ಕರೆಯಲಾಗುತ್ತದೆ. ಹಾಗೂ ಕಾಸ್ಮೋಲಜಿ ಬಗ್ಗೆ ಸಿದ್ಧಾಂತ ಹೊರಡಿಸಿದ ಮೊದಲಿಗರು ಹಾಕಿಂಗ್. ಹಾಕಿಂಗ್ ಅವರ ‘ಎ ಬ್ರೀಫ್ ಹಿಸ್ಟರಿ ಆಫ್ ಟೈಮ್’ ಪುಸ್ತಕ ಬ್ರಿಟಿಷ್ ಸಂಡೇ ಟೈಮ್ಸ್ ನ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ದಾಖಲೆಯ 237 ವಾರಗಳವರೆಗೆ(4 ವರ್ಷಗಳವರೆಗೆ) ಇತ್ತು. 20 ವರ್ಷಗಳಲ್ಲಿ ಅವರ ಪುಸ್ತಕದ 1 ಕೋಟಿಗೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದವು.

    ನಿಧಾನ ಗತಿಯ ಅಮ್ಯೋಟ್ರಾಫಿಕ್ ಲ್ಯಾಟೆರಲ್ ಸ್ಕ್ಲೆರೋಸಿಸ್ ನಿಂದಾಗಿ ಸ್ಟೀಫನ್ ಹಾಕಿಂಗ್ ಪಾರ್ಶ್ವವಾಯುವಿಗೆ ತುತ್ತಾಗಿದ್ದರು.

  • ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್ ಮಾಡ್ಕೊಂಡು ನೆಕ್ಲೆಸ್‍ನೊಂದಿಗೆ ಧರಿಸಿದ್ಳು!

    ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್ ಮಾಡ್ಕೊಂಡು ನೆಕ್ಲೆಸ್‍ನೊಂದಿಗೆ ಧರಿಸಿದ್ಳು!

    ಲಂಡನ್: ಬೆರಳುಗಳ ಮಾಲೆ ಧರಿಸಿದ್ದ ಅಂಗುಲಿಮಾಲನ ಕಥೆಯನ್ನ ನೀವು ಕೇಳಿರ್ತೀರ. ಅದನ್ನೇ ನೆನಪಿಸುವಂತೆ ಇಲ್ಲೊಬ್ಬಳು ಮಹಿಳೆ ತನ್ನ ಕಿರುಬೆರಳನ್ನೇ ಕತ್ತರಿಸಿ ಪೆಂಡೆಂಟ್‍ನಂತೆ ಮಾಡಿಕೊಂಡು ಕುತ್ತಿಗೆಗೆ ನೆಕ್ಲೆಸ್ ಜೊತೆ ಧರಿಸಿದ್ದಾಳೆ.

    ಇಂಗ್ಲೆಂಡಿನ ಎಸ್ಸೆಕ್ಸ್ ನಗರದ ನಿವಾಸಿ ಟಾರ್ಸ್ ರೆನಾಲ್ಡ್ಸ್(30) ತನ್ನ ಎಡಗೈ ಕಿರುಬೆರಳನ್ನ ಮರಗಟ್ಟುವಂತೆ ಮಾಡಿ ನಂತರ ಬೋಲ್ಟ್ ಕಟ್ಟರ್‍ನಿಂದ ಅರ್ಧ ಬೆರಳನ್ನೇ ತುಂಡು ಮಾಡಿದ್ದಾಳೆ.

    ವೃತ್ತಿಯಲ್ಲಿ ಬಾಡಿ ಪಿಯರ್ಸರ್ ಆಗಿರೋ ಈಕೆ ಈ ಬಗ್ಗೆ ಮಾತನಾಡಿ, ನಾನು ಮೊದಲಿಗೆ ಬೆರಳನ್ನ ಫ್ರೀಜರ್‍ನಲ್ಲಿ ಬಟಾಣಿಯ ಜೊತೆ ಇಟ್ಟು ಮರೆತುಬಿಟ್ಟಿದ್ದೆ ಎಂದು ಹೇಳಿದ್ದಾಳೆ. ಆದ್ರೆ ನಂತರ ಆಕೆ ಅದನ್ನ ಆಗಾಗ ನೆಕ್ಲೇಸ್ ಜೊತೆ ಹೇಕಿಕೊಳ್ಳಲು ಮದ್ಯದ ದ್ರಾವಣದ ಜೊತೆ ಹಾಕಿ ಚಿಕ್ಕ ಗಾಜಿನ ಬಾಟಲಿಯಲ್ಲಿ ತುಂಬಿಸಿ ಪೆಂಡೆಂಟ್ ಮಾಡಿಕೊಂಡಿದ್ದಾಳೆ.

    ಈ ಐಡಿಯಾ ತುಂಬಾ ಕ್ಯೂಟ್ ಅನ್ನಿಸ್ತು. ಹಲವಾರು ವರ್ಷಗಳಿಂದ ಇದನ್ನ ಮಾಡಬೇಕೆಂದುಕೊಂಡಿದ್ದೆ ಎಂದು ಟಾರ್ಸ್ ಹೇಳಿದ್ದಾಳೆ. ತುಂಡರಿಸಿದ ಬೆರಳಿಗೆ ವಿಗ್ಗಲ್ಸ್ ಎಂದು ಹೆಸರಿಟ್ಟಿದ್ದಾಳೆ.

    ನಾನು ಅದನ್ನ ಮರೆತೇಬಿಟ್ಟಿದ್ದೆ. ಅದನ್ನ ವೇಸ್ಟ್ ಮಾಡುವ ಬದಲು ನೆಕ್ಲೇಸ್ ಮಾಡಿಕೊಂಡರೆ ಹೇಗೆ ಅನ್ನಿಸಿತು. ನೆಕ್ಲೇಸ್ ಮಾಡುವುದು ತುಂಬಾ ಸುಲಭ ಎಂದೆನಿಸಿತು. ವಿಗ್ಗಲ್ಸ್ ನ ಮೊದಲ ಹುಟ್ಟುಹಬ್ಬಕ್ಕೆ ಏನಾದ್ರೂ ಮಾಡಬೇಕು ಎಂದುಕೊಂಡಿದ್ದೆ ಎಂದು ಹೇಳಿದ್ದಾಳೆ.

    ಇತ್ತೀಚೆಗೆ ಟಾರ್ಸ್ ವಿಗ್ಗಲ್ಸ್ ಹುಟ್ಟುಹಬ್ಬಕ್ಕೆ ಅದರ ಜೊತೆ ಫೋಟೋಶೂಟ್ ಕೂಡ ಮಾಡಿಸಿದ್ದಾಳೆ. ಆಕೆಯ ಬಾಯ್‍ಫ್ರೆಂಡ್ ತುಂಡಾದ ಕಿರುಬೆರಳಿಗೆ ತೊಡಿಸಲು ಪುಟಾಣಿ ಟೋಪಿಯನ್ನೂ ತಂದುಕೊಟ್ಟಿದ್ದಾನೆ. ವಿಗ್ಗಲ್ಸ್ ನ ಹುಟ್ಟುಹಬ್ಬಕ್ಕೆ ನನ್ನ ಬಾಯ್‍ಫ್ರೆಂಡ್ ಟೋಪಿಗಳನ್ನ ಉಡುಗೊರೆಯಾಗಿ ಕೊಟ್ಟ. ಇದು ತುಂಬಾ ಅದ್ಭುತ ಉಡುಗೊರೆ ಎಂದು ಟಾರ್ಸ್ ಹೇಳಿದ್ದಾಳೆ.

    ತನ್ನ ಸ್ನೇಹಿತರೊಬ್ಬರು ಕೂಡ ಇದೇ ರೀತಿ ಮಾಡಿದ್ದು ನೋಡಿದ ನಂತರ ಬೆರಳನ್ನ ತುಂಡು ಮಾಡಿದ್ದಾಗಿ ಆಕೆ ಹೇಳಿದ್ದಾಳೆ. ಬೆರಳನ್ನ ಕಟ್ ಮಾಡುವ ಮುನ್ನ, ಎಡಗೈನಲ್ಲಿ ಕೇವಲ ಅರ್ಧ ಕಿರುಬೆರಳಿದ್ದರೆ ಹೇಗಿರುತ್ತದೆ ಎಂದು ತಿಳಿಯಲು ಬೆರಳನ್ನ ಹಿಂದಕ್ಕೆ ಬಗ್ಗಿಸಿ ಪ್ರಾಕ್ಟೀಸ್ ಮಾಡಿದ್ದಳಂತೆ.

    ಟಾರ್ಸ್ ಈ ರೀತಿಯ ವಿಚಿತ್ರ ನಡೆವಳಿಕೆಗಳ ಇತಿಹಾಸ ಹೊಂದಿದ್ದಾಳೆ. ಈ ಹಿಂದೆ ಈಕೆಯ ಬಾಯ್‍ಫ್ರೆಂಡ್ ಮೋಸ ಮಾಡಿದನೆಂದು ಆತನ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಬಳಿಕ ತನ್ನ ಕೈ ಮೇಲಿನ ಟ್ಯಾಟೂವನ್ನೇ ಕತ್ತರಿಸಿ ಪೋಸ್ಟ್‍ನಲ್ಲಿ ಕಳಿಸಿದ್ದಳು ಎಂದು ವರದಿಯಾಗಿದೆ.

    ಅದು ನಿಜವಾಗ್ಲೂ ಉಡುಗೊರೆಯಂತೆ ಕಾಣುವ ರೀತಿ ಪ್ಯಾಕ್ ಮಾಡಿದ್ದೆ. ಇದನ್ನ ಕಳಿಸುತ್ತಿರೋದು ನಾನೇ ಎಂದು ಗೊತ್ತಾಗಬಾರದೆಂದು ಬೇರೆ ರೀತಿಯ ಬರವಣಿಗೆ ಬಳಸಿದ್ದೆ. ಆತನ ಪ್ರತಿಕ್ರಿಯೆ ಹೇಗಿತ್ತು ಎಂದು ಊಹಿಸಿಕೊಳ್ಳಲು ಕೂಡ ಆಗಲ್ಲ. ಅದನ್ನ ನೋಡಲು ನಾನು ಅಲ್ಲಿರಬೇಕಿತ್ತು ಎಂದಿದ್ದಾಳೆ.

  • ಪ್ರಿಯಕರನಿಗೆ ಮಿಸ್ಸಾಗಿ ಫೋಟೋ ಕಳ್ಸಿ ಆತ್ಮಹತ್ಯೆ ಮಾಡ್ಕೊಂಡ 17ರ ಯುವತಿ!

    ಪ್ರಿಯಕರನಿಗೆ ಮಿಸ್ಸಾಗಿ ಫೋಟೋ ಕಳ್ಸಿ ಆತ್ಮಹತ್ಯೆ ಮಾಡ್ಕೊಂಡ 17ರ ಯುವತಿ!

    ಇಂಗ್ಲೆಂಡ್: 17 ವರ್ಷದ ಯುವತಿಯೊಬ್ಬಳು ಆಕಸ್ಮಿಕವಾಗಿ ಆಕೆಯ ಪ್ರಿಯಕರನಿಗೆ ಫೋಟೋವೊಂದನ್ನು ಕಳುಹಿಸಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.

    ಷಾರ್ಲೆಟ್ ತನ್ನ ಮನೆಯ ಹೊರಗೆ ಇದ್ದ ಮರಕ್ಕೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಳೆದ ಎರಡು ವರ್ಷಗಳಿಂದ ಈಕೆ 20 ವರ್ಷದ ಜ್ಯಾಕ್ ಹಸ್ಟ್ರ ನನ್ನು ಪ್ರೀತಿಸುತ್ತಿದ್ದಳು. ನಂತರ ಅವರಿಬ್ಬರ ಸಂಬಂಧ ಕಡಿತಗೊಂಡಿತ್ತು.

    ಇತ್ತೀಚೆಗೆ ಆಕೆ ಬೇರೊಬ್ಬ ಸ್ನೇಹಿತನ ಜೊತೆ ಮಲಗಿದ್ದ ಫೋಟೋವನ್ನು ಅಕಸ್ಮತಾಗಿ ಜ್ಯಾಕ್ ಗೆ ಕಳುಹಿಸಿದ್ದಾಳೆ. ಬಳಿಕ ತನ್ನ ತಪ್ಪನ್ನು ಅರಿತುಕೊಂಡು ಕ್ಷಮೆಯನ್ನು ಕೇಳಿದ್ದಾಳೆ. ನಂತರ ಜ್ಯಾಕ್‍ಗೆ `ಗುಡ್ ಬೈ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಮೆಸೇಜ್ ಕಳುಹಿಸಿದಳು. ನಂತರ ಮತ್ತೆ “ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ನೀನು ನನ್ನನ್ನು ದ್ವೇಷಿಸುತ್ತಿದ್ದಿಯಾ ಎಂದು ನನಗೆ ತಿಳಿದಿದೆ” ಎಂದು ಮರು ಮೆಸೇಜ್ ಕಳುಹಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಷಾರ್ಲೆಟ್‍ಗೆ ನನ್ನ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ಅವಳು ನನ್ನಿಂದ ದೂರವಾಗಲು ಬಯಸಿದ್ದಳು. ಕೆಲ ದಿನಗಳ ಹಿಂದೆಯಷ್ಟೇ ನನಗೆ ಕರೆ ಮಾಡುತ್ತಿದ್ದಳು ಮತ್ತು ಕೋಪದಿಂದ ನಾನು ಮಾಡಿದ ಮೆಸೇಜ್‍ಗೆ ಉತ್ತರಿಸುತ್ತಿದ್ದಳು. ಯಾರೋ ನನ್ನ ಬಗ್ಗೆ ಅವಳಿಗೆ ಕೆಟ್ಟದಾಗಿ ಹೇಳಿರಬಹುದು. ಆಕೆಗೆ ನನ್ನ ಜಗತ್ತು ಸರಿಹೊಂದುವುದಿಲ್ಲ ಮತ್ತು ಅವಳು ಎಂದಿಗೂ ನನ್ನ ಬಳಿ ಬರುವುದಿಲ್ಲ ಎಂದು ಭಾವಿಸಿದ್ದೆ ಎಂದು ಆಕೆಯೆ ಗೆಳೆಯ ಜ್ಯಾಕ್ ಹೇಳಿದ್ದಾರೆ.

    ಘಟನೆಗೂ ಸ್ವಲ್ಪ ದಿನದ ಮೊದಲು ಆಕೆ ಕಾಲೇಜಿಗೆ ಹೋಗಲಾರಂಭಿಸಿದ್ದಾಳೆ. ಅಲ್ಲಿ ಹೊಸ ಸ್ನೇಹಿತರನ್ನು ಭೇಟಿ ಮಾಡಿ ಮಾಡಿಕೊಂಡು ಸಂತೋಷದಿಂದ ಇದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತರೊಂದಿಗೆ ಹೊರ ಹೋಗಿದ್ದಳು. ಆದರೆ ಈ ವಿಚಾರವನ್ನು ಮರುದಿನ ನನ್ನ ಬಳಿ ಪ್ರಸ್ತಾಪಿಸಿದ್ದು, ಆ ರಾತ್ರಿ ನಾನು ಬೇರೊಬ್ಬನಿಗೆ ಕಿಸ್ ಮಾಡಿದ್ದೆ ಎಂದು ಹೇಳಿದ್ದಳು ಎಂದು ಜ್ಯಾಕ್ ವಿವರಿಸಿದ್ದಾರೆ.

    ಷಾರ್ಲೆಟ್ ಜ್ಯಾಕ್ ಜೊತೆ ಈ ವಿಚಾರದ ಬಗ್ಗೆ ಮಾತನಾಡಲು ಬಯಸಿದ್ದಳು. ಆದರೆ ಜ್ಯಾಕ್ ಬ್ಯುಸಿಯಾಗಿದ್ದ. ಮತ್ತೆ ಅವಳು ಬೇರೊಬ್ಬನ ಜೊತೆ ಮಲಗಿದ್ದ ಫೋಟೋ ಕಳುಹಿಸಿದ್ದಾಳೆ. ಆದರೂ ಜ್ಯಾಕ್ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ. ಕೊನೆಗೆ ಸರಿ ನಾನು ಉತ್ತರ ಪಡೆದಿದ್ದೇನೆ ಎಂದು ಮೆಸೇಜ್ ಮಾಡಿದ್ದಾಳೆ. ತಕ್ಷಣ ಜ್ಯಾಕ್ ಅವಳಿಗೆ ಕರೆ ಮಾಡಲು ಪ್ರಯತ್ನಿಸಿದನು. ಆದರೆ ಅವಳು ಯಾವುದೇ ಪ್ರತಿಕ್ರಿಯೆ ಮಾಡಲಿಲ್ಲ. ನಂತರ ಜ್ಯಾಕ್ ಪೊಲೀಸರಿಗೆ ಮಾಹಿತಿ ನೀಡಿ ಅವರ ಜೊತೆ ಅವಳ ಮನೆಗೆ ಹೋಗಿದ್ದಾನೆ. ಆದರೆ ಅಷ್ಟರಲ್ಲಿ ಅವಳು ಆತ್ಮಹತ್ಯೆಗೆ ಶರಣಾಗಿದ್ದಳು ಎಂಬುದಾಗಿ ವರದಿಯಾಗಿದೆ.

    ಷಾರ್ಲೆಟ್ ಮರಣೋತ್ತರ ಪರೀಕ್ಷೆಯ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮದ್ಯಪಾನ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

  • ಕೊಹ್ಲಿಗೆ ಅಂದು ಪ್ರಪೋಸ್ ಮಾಡಿದ್ದ ಮಹಿಳಾ ಕ್ರಿಕೆಟರ್ ವಿರುಷ್ಕಾ ಮದ್ವೆ ಬಗ್ಗೆ ಹೇಳಿದ್ದು ಹೀಗೆ

    ಕೊಹ್ಲಿಗೆ ಅಂದು ಪ್ರಪೋಸ್ ಮಾಡಿದ್ದ ಮಹಿಳಾ ಕ್ರಿಕೆಟರ್ ವಿರುಷ್ಕಾ ಮದ್ವೆ ಬಗ್ಗೆ ಹೇಳಿದ್ದು ಹೀಗೆ

    ಮುಂಬೈ: ಟಿಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಗೆ ಈ ಹಿಂದೆ ತನ್ನನ್ನು ಮದುವೆಯಾಗು ಎಂದು ಹೇಳಿದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟರ್ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಢಾಕಾದಲ್ಲಿ ನಡೆದ 2014ರ ಟಿ 20 ವಿಶ್ವಕಪ್ ಸೆಮಿಫೈನಲ್‍ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಕೊಹ್ಲಿ 72 ರನ್(44 ಎಸೆತ, 5 ಬೌಂಡರಿ, 2 ಸಿಕ್ಸರ್) ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದರು. ಈ ಆಟಕ್ಕೆ ಪಂದ್ಯಶ್ರೇಷ್ಠ ಗೌರವ ಕೊಹ್ಲಿಗೆ ಸಿಕ್ಕಿತ್ತು.

    ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಶೈಲಿಗೆ ಮನಸೋತ ಡೇನಿಯಲ್ ವ್ಯಾಟ್ ಏಪ್ರಿಲ್ 4ರ ರಾತ್ರಿ “ಕೊಹ್ಲಿ ನನ್ನನ್ನು ಮದುವೆಯಾಗು” ಎಂದು ಟ್ವೀಟ್ ಮಾಡಿ ಪ್ರಪೋಸ್ ಮಾಡಿದ್ದರು. ಬಳಿಕ 2014ರಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ವೇಳೆ ಡೇನಿಯಲ್ ವ್ಯಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದರು. ಇದನ್ನೂ ಓದಿ: ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

    ಈಗ ಕೊಹ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ವ್ಯಾಟ್ ಟ್ವೀಟ್ ಮಾಡಿ ವಿರುಷ್ಕಾ ದಂಪತಿಗೆ ಶುಭಾಶಯ ಹೇಳಿದ್ದಾರೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ವ್ಯಾಟ್ ಕೊಹ್ಲಿ ನೀಡಿದ ಬ್ಯಾಟಿನ ಫೋಟೋವನ್ನು ಟ್ವೀಟ್ ಮಾಡಿ ಕೊಹ್ಲಿಗೆ ಧನ್ಯವಾದ ಹೇಳಿದ್ದರು. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    https://twitter.com/Ankit55225/status/940286578684858373

     

     

  • ತನ್ನ ಮಾಲಕಿಯ ಮೇಲೆ ಅತ್ಯಾಚಾರ ನಡೆಯೋದನ್ನ ತಪ್ಪಿಸಿದ ನಾಯಿ

    ತನ್ನ ಮಾಲಕಿಯ ಮೇಲೆ ಅತ್ಯಾಚಾರ ನಡೆಯೋದನ್ನ ತಪ್ಪಿಸಿದ ನಾಯಿ

    ಇಂಗ್ಲೆಂಡ್: ನಾಯಿಗಳಿಗೆ ಮತ್ತೊಂದು ಹೆಸರೇ ನಿಯತ್ತು. ಅವುಗಳ ನಿಷ್ಠೆಗೆ ಯಾವುದೇ ಪ್ರಾಣಿಯೂ ಸರಿಸಾಟಿ ಇಲ್ಲ. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ತನ್ನ ಯಜಮಾನಿಯ ಮೇಲೆ ಆಗುತ್ತಿದ್ದ ಅತ್ಯಾಚಾರವನ್ನು ನಾಯಿಯೊಂದು ತಡೆದಿದೆ.

    ಇಂಗ್ಲೆಂಡಿನ ಬರ್ಕ್‍ಶೈರ್‍ನ ವಿನ್ನೇರ್ಶ್‍ನ ಪಾರ್ಕ್‍ನಲ್ಲಿ ಈ ಘಟನೆ ನಡೆದಿದೆ.

    ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ 36 ವರ್ಷದ ಮಹಿಳೆ ತನ್ನ ನಾಯಿ ಜೊತೆ ಸಮೀಪದ ಪಾರ್ಕ್‍ವೊಂದರಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಕಾಮುಕನೋಬ್ಬ ಹಿಂಬದಿಯಿಂದ ಬಂದು ಆಕೆಯನ್ನು ಪಕ್ಕಕ್ಕೆ ಎಳೆದೊಯ್ದಿದ್ದಾನೆ ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಕಾಮುಕ ಸಂತ್ರಸ್ತೆಯ ಜೊತೆ ಅಸಭ್ಯವಾಗಿ ನಡೆದುಕೊಂಡು ಆಕೆಯ ಬಟ್ಟೆಯನ್ನು ತೆಗೆಯಲು ಹಾಗೂ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ನಾಯಿ ರೋಷದಿಂದ ಕಾಮುಕನ ಮೇಲೆ ಆಕ್ರಮಣ ಮಾಡಿದೆ. ನಂತರ ನಾಯಿ ದಾಳಿಯಿಂದ ಭಯಗೊಂಡು ಆರೋಪಿ ಪರಾರಿಯಾಗಿದ್ದಾನೆ.


    ಈ ಘಟನೆಯಿಂದ ಸಂತ್ರಸ್ತ ಮಹಿಳೆ ಆಘಾತಗೊಂಡಿದ್ದು, ನಂತರ ಅಧಿಕಾರಿಗಳು ಆಕೆಯನ್ನು ಸಂತೈಸಿ ಧೈರ್ಯ ತುಂಬಿದ್ದಾರೆ. ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆದಷ್ಟು ಬೇಗ ಆತನನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

    ಇದನ್ನು ಓದಿ: 7 ವರ್ಷದ ನಂತರ ತನ್ನ ಪೋಷಕನನ್ನು ಗುರುತಿಸಿದ ಬಳ್ಳಾರಿಯ ಜಿಂಕೆ!

  • ಇದು ಒನ್ ಡೇ ಮ್ಯಾಚು ಕಣೋ, 6-6-2-4-6-6-6-6, 8 ಬಾಲಲ್ಲಿ 42 ರನ್!

    ಇದು ಒನ್ ಡೇ ಮ್ಯಾಚು ಕಣೋ, 6-6-2-4-6-6-6-6, 8 ಬಾಲಲ್ಲಿ 42 ರನ್!

    ಬೆಂಗಳೂರು: ವಿಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಆಕ್ರಮಣಕಾರಿ ಆಟವಾಡಿ ವಿಶ್ವದಾಖಲೆ ಮಾಡಿದ್ದಾರೆ.

    ಮೊಯೀನ್ ಅಲಿ ಆಟದ ತೀವ್ರತೆ ಎಷ್ಟಿತ್ತೆಂದರೆ ಕೇವಲ 10 ನಿಮಿಷದಲ್ಲಿ 14 ಬಾಲಲ್ಲಿ 61 ರನ್ ಗಳಿಸಿದ್ದರು.

    45ನೇ ಓವರ್ ನಿಂದ ಆಕ್ರಮಣಕಾರಿ ಆಟಕ್ಕಿಳಿದ ಕಮಿನ್ಸ್ ಹಾಗೂ ಹೋಲ್ಡರ್ ಎಸೆತಗಳನ್ನು ಮನಸೋಇಚ್ಛೆ ಥಳಿಸಿದರು. ಅದರಲ್ಲೂ ಕೊನೆಯ 8 ಬಾಲ್ ನಲ್ಲಿ 6-6-2-4-6-6-6-6 ಬಾರಿಸಿ 42 ರನ್ ಗಳಿಸಿದರು.

    ಈ ಆಟದ ಮೂಲಕ ಮೊಯೀನ್ ಅಲಿ ಇಂಗ್ಲೆಂಡ್ ಪರ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೂ ಪಾತ್ರರಾದರು. ವಿಂಡೀಸ್ ವಿರುದ್ಧದ ಈ ಪಂದ್ಯವನ್ನು ಇಂಗ್ಲೆಂಡ್ 124 ರನ್ ಗಳಿಂದ ಗೆದ್ದಿತ್ತು. 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆಯಲ್ಲಿದೆ.