Tag: england

  • ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಲೋಚನೆ ಅವಾಸ್ತವಿಕ: ರಾಹುಲ್ ದ್ರಾವಿಡ್

    ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಲೋಚನೆ ಅವಾಸ್ತವಿಕ: ರಾಹುಲ್ ದ್ರಾವಿಡ್

    – 2ನೇ ದಿನದಾಟದಲ್ಲಿ ಆಟಗಾರನಿಗೆ ಕೊರೊನಾ ಪಾಸಿಟಿವ್ ಬಂದರೆ?

    ಬೆಂಗಳೂರು: ಬಯೋ ಸೆಕ್ಯೂಲರ್ ಪರಿಸರಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಡೆಸಿರುವ ಚಿಂತನೆ ಉತ್ತಮವಲ್ಲ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

    ಸದ್ಯದ ಬ್ಯುಸಿ ವೇಳಾಪಟ್ಟಿಯಲ್ಲಿ ಇಂತಹ ಸಿದ್ಧತೆಗಳನ್ನು ಕೈಗೊಳ್ಳಲು ಎಲ್ಲಾ ಕ್ರಿಕೆಟ್ ಮಂಡಳಿಗಳಿಂದ ಸಾಧ್ಯವಿಲ್ಲ. ಮುಖ್ಯವಾಗಿ ಯಾವುದೇ ಕ್ರಿಕೆಟ್ ಟೂರ್ನಿಗಳಲ್ಲಿ ಹಲವು ಮಂದಿಯೊಂದಿಗೆ ವ್ಯವಹಾರ ನಡೆಸಬೇಕಾದ ಕಾರಣ ಬಯೋ ಸೆಕ್ಯೂರ್ ಪರಿಸರಲ್ಲಿ ಟೂರ್ನಿ ಆಯೋಜಿಸಲು ಕಷ್ಟಸಾಧ್ಯ ಎಂದು ರಾಹುಲ್ ದ್ರಾವಿಡ್ ಅಭಿಪ್ರಾಯ ಪಟ್ಟಿದ್ದಾರೆ.

    ಟೂರ್ನಿಯ ಸಂದರ್ಭದಲ್ಲಿ ಪ್ರತಿ ದಿನ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಆರೋಗ್ಯ ಪರೀಕ್ಷೆ ನಡೆಸಬೇಕಾಗುತ್ತದೆ. ಆದರೆ ಪಂದ್ಯದ 2ನೇ ದಿನದಾಟದ ಸಂದರ್ಭದಲ್ಲಿ ಒಬ್ಬ ಆಟಗಾರನಿಗೆ ಕೊರೊನಾ ಪಾಸಿಟಿವ್ ವರದಿ ಬಂದರೇ ಉಳಿದ ಟೂರ್ನಿಯನ್ನು ರದ್ದು ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈಗಾಗಲೇ ಆರೋಗ್ಯ ಇಲಾಖೆ ಎಲ್ಲರನ್ನು ಕ್ವಾರಂಟೈನ್ ಮಾಡಲು ಸೂಚಿಸುತ್ತಿದೆ. ಅಲ್ಲದೇ ಖಾಲಿ ಮೈದಾನದಲ್ಲಿ ಪಂದ್ಯವನ್ನು ನಿರ್ವಹಿಸುವುದರಿಂದ ಪ್ರೇಕ್ಷಕರಿಲ್ಲದ ಕೊರತೆಯನ್ನು ಆಟಗಾರರು ಎದುರಿಸುತ್ತಾರೆ ಎಂದು ತಿಳಿಸಿದ್ದಾರೆ.

    ಇಂಗ್ಲೆಂಡ್ ಕ್ರಿಕೆಟ್ ಬೋರ್ಡಿಗೆ ಬಯೋ ಸೆಕ್ಯೂರ್ ಪರಿಸರಲ್ಲಿ ಟೂರ್ನಿ ಆಯೋಜಿಸುವ ಸಾಮರ್ಥ್ಯವಿದೆ. ಅವರಿಗೆ ಈ ಟೂರ್ನಿ ಬಿಟ್ಟು ಬೇರೆ ಆಯ್ಕೆಗಳಿಲ್ಲ. ಆದರೂ ಆಟಗಾರರ ಪ್ರಯಾಣ, ಪ್ರವಾಸ ಸಂದರ್ಭದಲ್ಲಿ ಎದುರಾಗುವ ಎಲ್ಲರನ್ನು ಗಣನೆಗೆ ತೆಗೆದುಕೊಳ್ಳಲು ಹಾಗೂ ಇಂತಹ ವ್ಯವಸ್ಥೆಯನ್ನು ಎಲ್ಲಡೆ ಕಲ್ಪಿಸಲು ಸಾಧ್ಯವಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. ಅಂದಹಾಗೇ ಇತ್ತೀಚೆಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ವಿರುದ್ಧದ ಟೂರ್ನಿಗಳನ್ನು ಬಯೋ ಸೆಕ್ಯೂರ್ ಪರಿಸರದಲ್ಲಿ ನಡೆಸುವುದಾಗಿ ಘೋಷಿಸಿತ್ತು.

    ಇದೇ ವೇಳೆ ಆಟಗಾರರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಆಟದ ಬಗ್ಗೆ ಗಮನಿಸುವ ಅಗತ್ಯವಿದೆ ಎಂದು ದ್ರಾವಿಡ್ ಸಲಹೆ ನೀಡಿದ್ದಾರೆ. ಲಾಕ್‍ಡೌನ್ ಕಾರಣದಿಂದ ಕಳೆದ 2 ತಿಂಗಳಿನಿಂದ ಕ್ರೀಡಾ ಜಗತ್ತು ಸ್ತಬ್ಧವಾಗಿದೆ. ಹಲವು ದೇಶಗಳಲ್ಲಿ ಲಾಕ್‍ಡೌನ್ ನಿಯಮಗಳನ್ನು ಸಡಿಲಿಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು ಹಲವು ಬೋರ್ಡ್‍ಗಳು ಪ್ರಯತ್ನಿಸುತ್ತಿವೆ. ಇತ್ತ ದಕ್ಷಿಣ ಆಫ್ರಿಕಾ ಕೂಡ ಭಾರತ ವಿರುದ್ಧದ ಟೂರ್ನಿಯನ್ನು ಬಯೋ ಸೆಕ್ಯೂರ್ ಪರಿಸರದಲ್ಲಿ ನಡೆಸಲು ಸಲಹೆ ನೀಡಿತ್ತು.

  • 10 ಮಂದಿ ಬ್ಯಾಟ್ಸ್‌ಮನ್ ಜತೆ ರಾಹುಲ್ ದ್ರಾವಿಡ್ ಜೊತೆಯಾಟ

    10 ಮಂದಿ ಬ್ಯಾಟ್ಸ್‌ಮನ್ ಜತೆ ರಾಹುಲ್ ದ್ರಾವಿಡ್ ಜೊತೆಯಾಟ

    – ಇತಿಹಾಸದ ಪುಟ ಸೇರಿದ ಇಂಗ್ಲೆಂಡ್ ವಿರುದ್ಧದ ಪಂದ್ಯ

    ನವದೆಹಲಿ: ‘ದಿ ವಾಲ್’ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಈ ಪೈಕಿ ತಂಡ 10 ಮಂದಿ ಬ್ಯಾಟ್ಸ್‌ಮನ್ ಜೊತೆಗೆ ದ್ರಾವಿಡ್ ಜೊತೆಯಾಟವಾಡಿದ್ದು ಇತಿಹಾಸ.

    ಇದನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಇನ್ನಿಂಗ್ಸ್ ಎಂದು ವರ್ಗೀಕರಿಸಬಹುದಾಗಿದೆ. ಅಪ್ರತಿಮ ಟೀಂ ಇಂಡಿಯಾ ಮಾಜಿ ಆಟಗಾರ ರಾಹುಲ್ ದ್ರಾವಿಡ್ 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ತಂಡದ ಎಲ್ಲಾ 10 ಸಹ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡಿದ್ದರು. ಅವರ ಅಜೇಯ 146 ರನ್‍ಗಳಿಂದ ಭಾರತ ಅಂದಿನ ಪಂದ್ಯದಲ್ಲಿ ಒಟ್ಟು 300 ರನ್ ಪೇರಿಸಿತ್ತು.

    ಇಂಗ್ಲೆಂಡ್‍ನ ದಿ ಓವಲ್ ಕ್ರೀಡಾಂಗಣದಲ್ಲಿ 2011ರ ಆಗಸ್ಟ್ 18 ರಂದು ಭಾರತ ಹಾಗೂ ಇಂಗ್ಲೆಂಡ್ ನಡುವೆ 4ನೇ ಟೆಸ್ಟ್ ನಡೆದಿತ್ತು. ಈ ವೇಳೆ ರಾಹುಲ್ ದ್ರಾವಿಡ್ ಓಪನರ್ ಆಗಿ ವಿರೇಂದ್ರ ಸೆಹ್ವಾಗ್ ಅವರೊಂದಿಗೆ ಮೈದಾನಕ್ಕೆ ಇಳಿದಿದ್ದರು. ಆದರೆ 8 ರನ್ ಗಳಿಸಿದ್ದ ಸೆಹ್ವಾಗ್ ವಿಕೆಟ್ ಒಪ್ಪಿಸಿದರು. ಈ ಬೆನ್ನಲ್ಲೇ ವಿ.ವಿ.ಎಸ್.ಲಕ್ಷ್ಮಣ್ 2 ರನ್, ಸಚಿನ್ ತೆಂಡೂಲ್ಕರ್ 23 ರನ್, ಸುರೇಶ್ ರೈನಾ 0 ರನ್, ಇಶಾಂತ್ ಶರ್ಮಾ 1, ಎಂ.ಎಸ್.ಧೋನಿ 17 ಗಳಿಸಿ ವಿಕೆಟ್ ಒಪ್ಪಿಸಿ ಪೆವಿಯನ್‍ಗೆ ಪರೇಡ್ ನಡೆಸಿದ್ದರು.

    ಇನ್ನಿಂಗ್ಸ್ ನ 45.4ನೇ ಓವರಿಗೆ ಭಾರತ 6 ವಿಕೆಟ್ ನಷ್ಟಕ್ಕೆ ಕೇವಲ 137 ರನ್ ಗಳಿಸಿತ್ತು. ಈ ವೇಳೆ ಮೈದಾನಕ್ಕಿಳಿದ ಅಮಿತ್ ಮಿಶ್ರಾ ಅವರು ರಾಹುಲ್ ದ್ರಾವಿಡ್‍ಗೆ ಸಾಥ್ ನೀಡಿದರು. ಈ ಜೋಡಿಯು 7ನೇ ವಿಕೆಟ್‍ಗೆ 143 ಎಸೆತಗಳಲ್ಲಿ ಒಟ್ಟು 87 ರನ್ ಚಚ್ಚಿ ತಂಡದ ಮೊತ್ತವನ್ನು 244ಕ್ಕೆ ಏರಿಸಿತ್ತು. ಅಂದು ಅಮಿತ್ ಮಿಶ್ರಾ 77 ಎಸೆತಗಳಲ್ಲಿ 43 ರನ್ ಗಳಿಸಿದ್ದರು. ಬಳಿಕ ಬಂದ ಗೌತಮ್ ಗಂಭೀರ್ 25 ರನ್, ಆರ್.ಪಿ.ಸಿಂಗ್ 25 ರನ್ ಹಾಗೂ ಶ್ರೀಶಾಂತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

    ಅಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಗ್ರೇಮ್ ಸ್ವಾನ್ ಮತ್ತು ಟಿಮ್ ಬ್ರೆಸ್ನಾನ್ ತಲಾ ಮೂರು ವಿಕೆಟ್ ಪಡೆದಿದ್ದರೆ, ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ತಲಾ ಎರಡು ವಿಕೆಟ್ ಕಿತ್ತಿದ್ದರು. ಇದು ಟೀಂ ಇಂಡಿಯಾ ಬ್ಯಾಟಿಂಗ್ ಸಾಮಾನ್ಯ ಪ್ರದರ್ಶನವಾಗಿದ್ದರೂ, ದ್ರಾವಿಡ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. ಭಾರತದ ತಂಡಕ್ಕೆ ದ್ರಾವಿಡ್ ಎಷ್ಟು ವಿಶ್ವಾಸಾರ್ಹರಾಗಿದ್ದರು ಎಂಬುದಕ್ಕೆ ಇನಿಂಗ್ಸ್‍ನ ಸ್ಕೋರ್ ಕಾರ್ಡ್ ನಿಜವಾದ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಒಂದು ಇನ್ನಿಂಗ್ಸ್ ಹಾಗೂ 8 ರನ್‍ಗಳಿಂದ ಗೆದ್ದು ಬೀಗಿತ್ತು.

  • ವಿರಾಟ್ ಅಲ್ಲ ‘ಮಿಸ್ಟರ್ 360’ ಇಂಗ್ಲೆಂಡ್ ಸ್ಪಿನ್ನರ್‌ನ ನೆಚ್ಚಿನ ವಿಕೆಟ್

    ವಿರಾಟ್ ಅಲ್ಲ ‘ಮಿಸ್ಟರ್ 360’ ಇಂಗ್ಲೆಂಡ್ ಸ್ಪಿನ್ನರ್‌ನ ನೆಚ್ಚಿನ ವಿಕೆಟ್

    ಲಂಡನ್: ಇಂಗ್ಲೆಂಡ್‍ನ ಎಡಗೈ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ನೆಚ್ಚಿನ ವಿಕೆಟ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಲ್ವಂತೆ. ‘ಮಿಸ್ಟರ್ 360’ ಖ್ಯಾತಿಯ ಕೆ.ಎಲ್.ರಾಹುಲ್ ಅವರು ರಶೀದ್ ನೆಚ್ಚಿನ ವಿಕೆಟ್ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ರಿವೀಲ್ ಮಾಡಿದೆ.

    2018ರಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಪಿನ್ನರ್ ಆದಿಲ್ ರಶೀದ್ ನೀಡಿದ ಅದ್ಭುತ ಎಸೆತ ಹಾಗೂ ವಿಕೆಟ್ ಕಿತ್ತ ವಿಡಿಯೋವನ್ನು ಕೆಲವು ದಿನಗಳ ಹಿಂದೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿತ್ತು. ಅದೊಂದು ಅದ್ಭುತ ಎಸೆತವಾಗಿತ್ತು. ಆದಾಗ್ಯೂ ಇಂಗ್ಲಿಷ್ ಸ್ಪಿನ್ನರ್ ರಶೀದ್ ಅವರ ನೆಚ್ಚಿನ ಎಸೆತ ಹಾಗೂ ವಿಕೆಟ್ ಭಾರತೀಯ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಎಂದು ಹೇಳಿದೆ.

    ಭಾರತವು 2018ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಈ ವೇಳೆ ನಡೆದ ಟೆಸ್ಟ್ ಪಂದ್ಯದಲ್ಲಿ ಆದಿಲ್ ರಶೀದ್ ಅವರು ಅದ್ಭುತವಾಗಿ ಕೆ.ಎಲ್.ರಾಹುಲ್ ಅವರ ವಿಕೆಟ್ ಪಡೆದಿದ್ದರು. ಈ ವಿಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶನಿವಾರ ಟ್ವೀಟ್ ಮಾಡಿದೆ.

    ಆದಿಲ್ ರಶೀದ್ ಎಸೆದ ಬಾಲ್ ಪ್ಯಾಚ್ ರೀತಿಯಲ್ಲಿ ಲೆಗ್ ಸೈಡ್‍ಗೆ ಬಿದ್ದು ಸ್ಪಿನ್ ಆಗಿ ವಿಕೆಟ್‍ಗೆ ಬಿದ್ದಿತ್ತು. ಪರಿಣಾಮ 150 ರನ್ ಪೂರೈಸಲು ಜಸ್ಟ್ 1 ರನ್ ಬೇಕಿದ್ದಾಗಲೇ ರಾಹುಲ್ ವಿಕೆಟ್ ಕಳೆದುಕೊಂಡಿದ್ದರು.

    ಈ ಪಂದ್ಯವು ಟೆಸ್ಟ್ ಸರಣಿಯ 5ನೇ ಪಂದ್ಯವಾಗಿತ್ತು. 223 ಎಸೆತಗಳಲ್ಲಿ 149 ರನ್ ಗಳಿಸಿದ್ದ ರಾಹುಲ್ ಉತ್ತಮವಾಗಿ ಆಡುತ್ತಿದ್ದರು. ಜೊತೆಗೆ ಅಂದಿನ ಅಂತಿಮ ಓವರ್ ವರೆಗೂ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ರಶೀದ್ ಅವರ ಮಾಂತ್ರಿಕ ಎಸೆತದಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೈಚೆಲ್ಲಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತದ ಇಂಗ್ಲೆಂಡ್ ವಿರುದ್ಧ 118 ರನ್‍ಗಳಿಂದ ಸೋಲು ಕಂಡಿತ್ತು. ಅಷ್ಟೇ ಅಲ್ಲದೆ ಟೀಂ ಇಂಡಿಯಾ ಸರಣಿಯನ್ನು 4-1 ಅಂತರದಿಂದ ಸೋತಿತ್ತು.

  • ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

    ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

    ಲಂಡನ್: ವಿಶ್ವವೇ ಚುಟುಕು ಕ್ರಿಕೆಟ್ ಕದನದತ್ತ ಮುಖ ಮಾಡಿದ್ದು, ಪ್ರತಿಯೊಂದು ಪಂದ್ಯಗಳೂ ರೋಚಕತೆಗೆ ಸಾಕ್ಷಿಯಾಗುತ್ತಿದೆ. ಟಿ20 ಕ್ರಿಕೆಟ್ ಟೂರ್ನಿಗಳನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈಗ ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್‍ಗೆ ಒಲವು ವ್ಯಕ್ತವಾಗಿದೆ.

    ಕೇವಲ 10 ದಿನಗಳಲ್ಲಿ ಇಡೀ ಟೂರ್ನಿಯನ್ನ ಮುಗಿಸುವುದು ಕಷ್ಟ. ಹೀಗಾಗಿ ಒಲಿಂಪಿಕ್ಸ್ ನಂತಹ ಜಾಗತಿಕ ಕ್ರೀಡಾಕೂಟದಲ್ಲಿ 10 ಓವರ್‌ಗಳ ಕ್ರಿಕೆಟ್ ಮಾದರಿ ಸೂಕ್ತವಾಗಿದೆ ಎಂದು ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    1900ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿತ್ತು. ಬಳಿಕ 1998ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಆಡಲ್ಪಟ್ಟಿತ್ತು. ಆ ಬಳಿಕ ಅನೇಕ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಆದರೆ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುವ 2022ರ ಕಾಮನ್ವೆಲ್ತ್ ಕ್ರೀಡಾಕೂಟವು ಮಹಿಳೆಯರ ಟಿ20 ಟೂರ್ನಿಯನ್ನು ಒಳಗೊಂಡಿದೆ. ಆದರೆ ಮೋರ್ಗನ್ ಅವರು ಟಿ10 ಮಾದರಿಯು ಟಿ20, 50 ಓವರ್‍ಗಳ ಅಥವಾ ಟೆಸ್ಟ್ ಕ್ರಿಕೆಟ್‍ಗಿಂತ ಉತ್ತಮ ಎಂದು ಹೇಳಿದ್ದಾರೆ.

    “ಟೆಸ್ಟ್, ಏಕದಿನ, ಟಿ20 ಮೂರು ಮಾದರಿಗಳಿಗಿಂತ ಟಿ10 ಒಲಿಂಪಿಕ್ಸ್ ಅಥವಾ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಈ ಮೂಲಕ 10 ದಿನಗಳಲ್ಲಿ ಇಡೀ ಟೂರ್ನಿಯನ್ನು ಮುಗಿಸಬಹುದಾಗಿದೆ” ಎಂದು ಇಯಾನ್ ಮೋರ್ಗಾನ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದಾರೆ.

    “ಟಿ20 ಪಂದ್ಯದಿಂದ 8-10 ದಿನಗಳಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಡಲು ಸಾಧ್ಯವಾಗುತ್ತದೆ. ಹೀಗಾಗಿ ಈ ಆಯ್ಕೆಯು ಎಲ್ಲರಿಗೂ ಇಷ್ಟವಾಗುತ್ತದೆ, ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಮತ್ತೊಂದು ವಿಚಾರವೆಂದರೆ ಟಿ10 ಪಂದ್ಯದಿಂದ ಹೆಚ್ಚಿನ ಮನರಂಜನೆ ಸಿಗುತ್ತದೆ” ಎಂದು ಮೋರ್ಗಾನ್ ಹೇಳಿದ್ದಾರೆ.

    ಲಾಭದಾಯಕ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವಾದ್ಯಂತ ಹಲವಾರು ಫ್ರ್ಯಾಂಚೈಸ್ ಆಧಾರಿತ ಲೀಗ್‍ಗಳನ್ನು ಹುಟ್ಟುಹಾಕಿದ ಟಿ20 ಕ್ರಿಕೆಟ್ ಅತ್ಯಂತ ಜನಪ್ರಿಯ ಸ್ವರೂಪವಾಗಿ ಹೊರಹೊಮ್ಮಿದೆ. ಈಗ ಟಿ10 ಮಾದರಿಯ ಕ್ರಿಕೆಟ್ ಒಲವು ವ್ಯಕ್ತವಾಗಿದ್ದು ಅಚ್ಚರಿಯೆನಲ್ಲ. ಕೆಲ ಅಭಿಮಾನಿಗಳು ಟೆಸ್ಟ್, ಏಕದಿನ ಪಂದ್ಯಕ್ಕಿಂತಲೂ ಚುಟುಕು ಕ್ರಿಕೆಟ್‍ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

  • ‘ನನ್ನ ಮಗನ ಕೆರಿಯರ್ ಮುಗಿಸಿಬಿಟ್ಟೆ’

    ‘ನನ್ನ ಮಗನ ಕೆರಿಯರ್ ಮುಗಿಸಿಬಿಟ್ಟೆ’

    ನವದೆಹಲಿ: ‘ನನ್ನ ಮಗನ ವೃತ್ತಿ ಜೀವನವನ್ನೇ ಇಲ್ಲಿಗೆ ಮುಗಿಸಿಬಿಟ್ಟೆ’ ಅಂತ ಇಂಗ್ಲೆಂಡ್‍ನ ಮಾಜಿ ಆಟಗಾರ, ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ನನ್ನ ವಿರುದ್ಧ ದೂರಿದ್ದರು ಎಂದು ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ನೆನೆದಿದ್ದಾರೆ.

    ಯುವಿ ಸಂದರ್ಶನವೊಂದರಲ್ಲಿ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. 2007ರ ಟಿ20 ವಿಶ್ವಕಪ್‍ನ ಟೂರ್ನಿಯಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಓವರಿನಲ್ಲಿ ಯುವರಾಜ್ ಸಿಂಗ್ ಬ್ಯಾಕ್ ಟು ಬ್ಯಾಕ್ ಆರು ಸಿಕ್ಸರ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ದರು. ಟಿ20 ಮಾದರಿಯಲ್ಲಿ ಈ ಸಾಧನೆಯನ್ನು ಮಾಡಿದ ಮೊದಲ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅಂದು ನಡೆದ ಘಟನೆ ಬಳಿಕ ನಡೆದ ಆಸಕ್ತಿಕಾರ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

    ಅಂದು ಯುವಿ ಸಿಡಿಸಿದ ‘ಸಿಕ್ಸ‌ರ್‌ಗಳು’ ಸ್ಟುವರ್ಟ್ ಬ್ರಾಡ್ ಅವರ ವೃತ್ತಿಜೀವನವನ್ನು ಅಲ್ಲಿಗೆ ಕೊನೆಗೊಳಿಸಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಸ್ಟುವರ್ಟ್ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿ, ತಂಡದಲ್ಲಿ ಉಳಿದರು. ಸದ್ಯ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್‍ನ ಟೆಸ್ಟ್ ತಂಡದಲ್ಲಿ ಜೇಮ್ಸ್ ಆಂಡರ್ಸನ್ ಜೊತೆಗೆ ವೇಗದ ಬೌಲರ್ ಪಟ್ಟಿಯಲ್ಲಿದ್ದಾರೆ. ಅವರು 2012 ಮತ್ತು 2014ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿದ್ದರು.

    ಅಂದಿನ ಪಂದ್ಯವನ್ನು ನೆನೆದ ಯುವಿ, ”ಸ್ಟುವರ್ಟ್ ಬ್ರಾಡ್ ತಂದೆ, ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರು ಪಂದ್ಯದ ಮರುದಿನ ನನ್ನ ಬಳಿಗೆ ಬಂದಿದ್ದರು. ಆಗ ಅವರು, ನೀವು ನನ್ನ ಮಗನ ವೃತ್ತಿಜೀವನವನ್ನು ಬಹುತೇಕ ಮುಗಿಸಿದ್ದೀರಿ. ಈಗ ನೀವು ಅವನ ಶರ್ಟ್ ಮೇಲೆ ಸಹಿ ಮಾಡಬೇಕಾಗಿದೆ ಎಂದು ಹೇಳಿದ್ದರು. ಹಾಗಾಗಿ ನಾನು ನನ್ನ ಜರ್ಸಿಯ ಮೇಲೆ ‘ಆಲ್ ದಿ ಬೆಸ್ಟ್’ ಎಂದು ಬರೆದು ಅವರಿಗೆ ಕೊಟ್ಟಿದ್ದೆ” ಎಂದರು.

    ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಪರ ಆಡಿದ ಅತ್ಯುತ್ತಮ ವೇಗದ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಯುವರಾಜ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 485 ಟೆಸ್ಟ್ ವಿಕೆಟ್‍ಗಳನ್ನು ಪಡೆದಿರುವ ಅವರು ಇಂಗ್ಲೆಂಡ್ ತಂಡದ ಪರ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಎರಡನೇ ಬೌಲರ್ ಆಗಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 178 ವಿಕೆಟ್ ಮತ್ತು ಟಿ20ಯಲ್ಲಿ 65 ವಿಕೆಟ್ ಗಳಿಸಿದ್ದಾರೆ. ಬ್ರಾಡ್ 2017ರಿಂದ ವೈಟ್-ಬಾಲ್ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ.

    ಅಂದಿನ ಪಂದ್ಯದಲ್ಲಿ ಏನಾಗಿತ್ತು?:
    2007ರ ಸೆಪ್ಟೆಂಬರ್ 10ರಂದು ನಡೆದಿದ್ದ ಪಂದ್ಯದ ಇನ್ನಿಂಗ್ಸ್ ನ 17 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್‌ನಲ್ಲೇ ಫ್ಲಿಂಟಾಫ್ ವಿರುದ್ಧ ತಿರುಗಿಬಿದ್ದಿದ್ದ ಯುವಿ, ಬ್ಯಾಟ್ ತೋರಿಸಿ ಮುನ್ನುಗ್ಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 18ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಡಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಈ ಹಿಂದೆ ಹೇಳಿದ್ದರು.

  • ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ

    ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ

    ಮುಂಬೈ: ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಸ್ಫೋಟಕ ಆಟಗಾರರಲ್ಲಿ ಒಬ್ಬರು. ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದ ಯುವಿ, ಟೀಂ ಇಂಡಿಯಾ 2007 ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು. ಸದ್ಯ ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದಿರುವ ಯುವಿ, ಕ್ರಿಕೆಟ್ ವೃತ್ತಿ ಜೀವನದ ಕುರಿತು ಕೆಲ ವಿಶೇಷ ಮಾಹಿತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಸದಾ ಇತರೇ ಆಟಗಾರರೊಂದಿಗೆ ಹಾಸ್ಯಮಯವಾಗಿ ಕಾಣಿಸಿಕೊಳ್ಳುತ್ತಿದ್ದ ಯುವರಾಜ್ ಸಿಂಗ್, ಎದುರಾಳಿ ಬೌಲರ್ ಗಳನ್ನು ಅಷ್ಟೇ ಸುಲಲಿತಾಗಿ ದಂಡಿಸುತ್ತಿದ್ದರು. 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಮಾತಿಗೆ ತಿರುಗೇಟು ನೀಡಿದ್ದ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ನಡೆದ ಘಟನೆ ಬಳಿಕ ನಡೆದ ಕೆಲ ಆಸ್ತಕಿಕಾರ ಮಾಹಿತಿಯನ್ನು ಯುವಿ ತಿಳಿಸಿದ್ದಾರೆ.

    2007ರ ಸೆ.10 ರಂದು ನಡೆದಿದ್ದ ಪಂದ್ಯದ ಇನ್ನಿಂಗ್ಸ್ ನ 18 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್ ನಲ್ಲೇ ಫ್ಲಿಂಟಾಫ್ ವಿರುದ್ಧ ತಿರುಗಿಬಿದಿದ್ದ ಯುವಿ ಬ್ಯಾಟ್ ತೋರಿಸಿ ಮುನ್ನುಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 19ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಡಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಹೇಳಿದ್ದಾರೆ.

    ಅಂದು ತಮ್ಮ ಬಳಿಗೆ ಆಗಮಿಸಿದ್ದ ಆಸ್ಟ್ರೇಲಿಯಾ ತಂಡದ ಕೋಚ್, ನಿಮ್ಮ ಬ್ಯಾಟ್ ಹಿಂದೆ ಫೈಬರ್ ಇದೆಯೇ? ಅಲ್ಲದೇ ಅದು ಕಾನೂನು ಬದ್ಧವಾಗಿದೆಯಾ ಎಂದು ಪ್ರಶ್ನಿಸಿದ್ದರು. ಆಗ ಪಂದ್ಯದ ರೆಫರಿಗೆ ಬ್ಯಾಟ್ ಪರೀಕ್ಷಿಸಲು ತಿಳಿಸಿದ್ದೆ. ಗಿಲ್‍ಕ್ರಿಸ್ಟ್ ಕೂಡ ಘಟನೆ ಬಳಿಕ ಇಂತಹ ಬ್ಯಾಟ್‍ಗಳನ್ನು ಎಲ್ಲಿ? ಯಾರು? ತಯಾರಿಸಿಕೊಡುತ್ತಾರೆ ಎಂದು ತಮ್ಮ ಬಳಿ ಕೇಳಿದ್ದರು ಎಂದು ತಿಳಿಸಿದ್ದಾರೆ. 2007 ಹಾಗೂ 2011ರ ವಿಶ್ವಕಪ್‍ನಲ್ಲಿ ನಾನು ಆಡಿದ್ದ ಎರಡು ಬ್ಯಾಟ್‍ಗಳು ನನಗೆ ವಿಶೇಷ ಎಂದು ಯುವರಾಜ್ ತಿಳಿಸಿದ್ದಾರೆ.

  • ‘ಧೋನಿಯಂತಹ ಆಟಗಾರರು ಅನೇಕ ತಲೆಮಾರುಗಳ ಬಳಿಕ ಬರುತ್ತಾರೆ’

    ‘ಧೋನಿಯಂತಹ ಆಟಗಾರರು ಅನೇಕ ತಲೆಮಾರುಗಳ ಬಳಿಕ ಬರುತ್ತಾರೆ’

    – ನಿವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ

    ಲಂಡನ್: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಿವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ ಎಂದು ಇಂಗ್ಲೆಂಡ್‍ನ ಮಾಜಿ ನಾಯಕ, ನಿರೂಪಕ ನಾಸಿರ್ ಹುಸೇನ್ ಮನವಿ ಮಾಡಿಕೊಂಡಿದ್ದಾರೆ.

    ಮಾಧ್ಯಮ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಎಂ.ಎಸ್.ಧೋನಿ ಒಮ್ಮೆ ನಿವೃತ್ತಿ ಘೋಷಿಸಿ ಬಿಟ್ಟರೆ ಅವರು ಹಿಂತಿರುಗುವುದಿಲ್ಲ. ಅವರಂತಹ ಆಟಗಾರರು ಅನೇಕ ತಲೆಮಾರುಗಳ ನಂತರ ಬರುತ್ತಾರೆ. ಧೋನಿ ಅವರನ್ನು ನಾನು ಗಮನಿಸಿದ ಪ್ರಕಾರ ಅವರು ಇನ್ನೂ ಭಾರತೀಯ ಕ್ರಿಕೆಟ್‍ಗೆ ಸಾಕಷ್ಟು ಕೊಡುಗೆ ನೀಡಬಲ್ಲರು ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

    ಧೋನಿ ಒಂದು ಅಥವಾ ಎರಡು ಬಾರಿ ಗುರಿಯನ್ನು ಬೆನ್ನಟ್ಟಲಿಲ್ಲ ಎಂಬುದು ನಿಜ. ವಿಶೇಷವಾಗಿ ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಹಾಗೆ ಆಗಿದೆ. ಆದರೆ ಅವರಿಗೆ ಇನ್ನೂ ಪ್ರತಿಭೆ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ವೃತ್ತಿ ಘೋಷಿಸುವಂತೆ ಒತ್ತಾಯಿಸಬೇಡಿ ಎಂದು ಕೇಳಿಕೊಂಡರು.

    ಇಷ್ಟು ಸುದೀರ್ಘ ವಿರಾಮದ ನಂತರ ಎಂ.ಎಸ್.ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮರಳುವುದು ಸುಲಭವಲ್ಲ ಎಂದು ಸುನಿಲ್ ಗವಾಸ್ಕರ್, ಕಪಿಲ್ ದೇವ್, ವಿರೇಂದ್ರ ಸೆಹ್ವಾಗ್ ಅವರಂತಹ ಅನೇಕ ಟೀಂ ಇಂಡಿಯಾದ ಪ್ರಮುಖ ಮಾಜಿ ಆಟಗಾರರು ಹೇಳಿದ್ದಾರೆ. ಆದರೆ 1999ರಿಂದ 2003ರವರೆಗೆ ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಹುಸೇನ್ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಎಂ.ಎಸ್.ಧೋನಿ ಉತ್ತಮ ಪ್ರದರ್ಶನ ನೀಡಿದರೆ ಅವರಿಗೆ ತಂಡದಲ್ಲಿ ಸ್ಥಾನ ಸಿಗುತ್ತದೆ. ಇದು ಪ್ರತಿಯೊಬ್ಬ ಆಟಗಾರನಿಗೂ ಅನ್ವಯಿಸುತ್ತದೆ. ಧೋನಿಗೆ ಅವರ ಮಾನಸಿಕ ಸ್ಥಿತಿಯ ಅರಿವಿದೆ ಮತ್ತು ಅಂತಿಮವಾಗಿ ಆಯ್ಕೆದಾರರು ಅವರನ್ನು ಕೈಬಿಡಬಾರದು ಎಂದು ಹುಸೇನ್ ಹೇಳಿದ್ದಾರೆ.

    ಧೋನಿ ಕಮ್‍ಬ್ಯಾಕ್‍ಗೆ ಐಪಿಎಲ್ ಹೊಡೆತ:
    ಧೋನಿ ಕಳೆದ ವರ್ಷ ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‍ನ ಸೆಮಿಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿತ್ತು. ಅಂದಿನಿಂದ ಧೋನಿ ತಂಡದಿಂದ ಹೊರಗುಳಿಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಬಿಸಿಸಿಐ ಅವರನ್ನು ಒಪ್ಪಂದದ ಪಟ್ಟಿಯಿಂದ ಕೈಬಿಟ್ಟಿತ್ತು. ಅಂದಿನಿಂದ ಅವರ ನಿವೃತ್ತಿಯ ಬಗ್ಗೆ ಉಹಾಪೋಹಗಳು ಕೇಳಿ ಬಂದಿದ್ದವು. ಅದೇ ಸಮಯದಲ್ಲಿ ಎಂಎಸ್‍ಡಿ ಮರಳುವ ಏಕೈಕ ದಾರಿಯೆಂದರೆ ಐಪಿಎಲ್ ಆಗಿತ್ತು. ಆದರೆ ಅದು ಕೂಡ ಕೊರೊನಾ ವೈರಸ್‍ನಿಂದಾಗಿ ಇಕ್ಕಟ್ಟಿಗೆ ಸಿಲುಕಿದೆ. ಬಿಸಿಸಿಐ ಈಗಾಗಲೇ ಏಪ್ರಿಲ್ 15 ರವರೆಗೆ ಮುಂದೂಡಿದೆ. ಈಗ ಏ.30ರವರೆಗೆ ಲಾಕ್‍ಡೌನ್ ಘೋಷಣೆಯಾಗಿರುವ ಕಾರಣ ಐಪಿಎಲ್ ನಡೆಯುವುದು ಅನುಮಾನ.

    ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಧೋನಿ ತಂಡಕ್ಕೆ ಮರಳುವುದು ಐಪಿಎಲ್‍ನಲ್ಲಿ ಅವರು ತೋರುವ ಪ್ರದರ್ಶನದ ಮೇಲೆ ಮಾತ್ರ ನಿರ್ಧಾರವಾಗುತ್ತದೆ ಎಂದು ಹೇಳಿದ್ದರು.

  • ಲಂಡನ್‍ನಲ್ಲಿ ಬಸವಣ್ಣನ ಪ್ರತಿಮೆ ನಿರ್ಮಿಸಿದ ಕನ್ನಡಿಗ ನೀರಜ್ ಪಾಟೀಲ್‍ಗೆ ಕೊರೊನಾ

    ಲಂಡನ್‍ನಲ್ಲಿ ಬಸವಣ್ಣನ ಪ್ರತಿಮೆ ನಿರ್ಮಿಸಿದ ಕನ್ನಡಿಗ ನೀರಜ್ ಪಾಟೀಲ್‍ಗೆ ಕೊರೊನಾ

    – ರೋಗಿಗೆ ಚಿಕಿತ್ಸೆ ನೀಡುವಾಗ ತಗುಲಿದ ಸೋಂಕು
    – ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ ಎಚ್‍ಡಿಡಿ

    ಲಂಡನ್/ ಬೆಂಗಳೂರು: ವಿಶ್ವವ್ಯಾಪಿ ಹರಡುತ್ತಿರುವ ಕೊರೊನಾ ವೈರಸ್‍ಗೆ ಘಟಾನುಘಟಿ ದೇಶವೇ ತತ್ತರಿಸಿ ಹೋಗಿವೆ. ಹೀಗಿರುವಾಗ ಇಂಗ್ಲೆಂಡ್‍ನ ಥೇಮ್ಸ್ ನದಿಯ ದಡದಲ್ಲಿ ಜಗಜ್ಯೋತಿ ಬಸವಣ್ಣ ಅವರ ಪ್ರತಿಮೆ ಸ್ಥಾಪಿಸಿದ ಕನ್ನಡಿಗ ಲ್ಯಾಂಬೆತ್ ನಗರ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಅವರಿಗೂ ಕೊರೊನಾ ಸೋಂಕು ತಗುಲಿದೆ.

    ನೀರಜ್ ಪಾಟೀಲ್ ಅವರಿಗೆ ಸೋಂಕು ತಗುಲಿರುವುದನ್ನು ತಿಳಿದು ಸಿಎಂ ಯಡಿಯೂರಪ್ಪ ಕೂಡ ಶಾಕ್ ಆಗಿದ್ದಾರೆ. ಯಾಕೆಂದರೆ ಮಾರ್ಚ್ ಮೊದಲ ವಾರದಲ್ಲಿ ವಿಧಾನಸೌಧದಲ್ಲಿ ನೀರಜ್ ಪಾಟೀಲ್ ಅಧಿವೇಶನ ಸಂದರ್ಭದಲ್ಲಿ ಓಡಾಡಿದ್ದರು. ಫೆಬ್ರವರಿ 29ರಂದು ಸಿಎಂ ಬಿಎಸ್‍ವೈರನ್ನು ಭೇಟಿ ಕೂಡ ಮಾಡಿದ್ದರು. ಇತ್ತ ಎಚ್‍ಡಿಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ನೀರಜ್ ಪಾಟೀಲ್ ಅವರು ಬೇಗ ಗುಣವಾಗಲಿ ಎಂದು ಪ್ರಾರ್ಥಿಸೋಣ ಎಂದು ಬರೆದುಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಇಂಗ್ಲೆಂಡ್ ದೇಶದ ಲಂಡನ್‍ನ ಥೇಮ್ಸ್ ನದಿಯ ದಡದಲ್ಲಿ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ನಿರ್ಮಿಸಿದ್ದ ಹೆಮ್ಮೆಯ ಕನ್ನಡಿಗರು, ಆತ್ಮೀಯರು, ಲ್ಯಾಂಬೆತ್ ನಗರದ ಮಾಜಿ ಮಹಾಪೌರರಾದ ಡಾ. ನೀರಜ್ ಪಾಟೀಲ್ ರವರಿಗೆ ಕೊರೊನಾ ಸೋಂಕು ತಗುಲಿರುವುದು ದುರದೃಷ್ಟಕರ. ಸ್ವತಃ ವೈದ್ಯರೂ ಆಗಿರುವ ಅವರು ಈ ಸಂಕಷ್ಟದಿಂದ ಶೀಘ್ರ ಪಾರಾಗಲೆಂದು ಸಮಸ್ತ ಭಾರತೀಯರೂ ಪ್ರಾರ್ಥಿಸೋಣ ಎಂದು ನೀರಜ್ ಅವರ ಜೊತೆ ತಾವು ಇರುವ ಫೋಟೋಗಳನ್ನು ಎಚ್‍ಡಿಡಿ ಶೇರ್ ಮಾಡಿದ್ದಾರೆ.

    ಸ್ವತಃ ವೈದ್ಯರಾಗಿರುವ ನೀರಜ್ ಪಾಟೀಲ್ ಅವರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಸೋಂಕಿಗೆ ತುತ್ತಾಗಿದ್ದಾರೆ ಎನ್ನಲಾಗಿದೆ. ತಮಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ಸ್ವತಃ ನೀರಜ್ ಅವರೇ ಪ್ರತಿಕ್ರಿಯಿಸಿದ್ದಾರೆ. ನಾನು ತೀವ್ರ ಚಳಿ ಜ್ವರ ಹಾಗೂ ಚೆಸ್ಟ್ ಇನ್‍ಫೆಕ್ಷನ್‍ನಿಂದ ಬಳಲುತ್ತಿದ್ದೇನೆ. ನನಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಸೆಲ್ಫ್ ಇಸೋಲೇಷನ್‍ನಲ್ಲಿ ಇದ್ದೇನೆ. ಎಲ್ಲರಿಂದ ಪ್ರತ್ಯೇಕವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ. ನನಗೆ ಈ ಸೋಂಕು ತಗುಲುತ್ತದೆ ಎಂದು ಕನಸಲ್ಲೂ ನಾನು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

    ಬಹುಶಃ ನಾನು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲನಾಗಿದ್ದೇನೆ ಎನಿಸುತ್ತದೆ. ನಾನು ಸದಾ ಜಿಮ್ ಮಾಡುತ್ತಿದ್ದೆ, ಡಯಟ್ ಮಾಡುತ್ತಿದ್ದೆ. ಹೀಗಾಗಿ ನನ್ನಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿದೆ. ನಾನು ಆದಷ್ಟು ಬೇಗ ಗುಣಮುಖನಾಗಿ ಮತ್ತೆ ಕರ್ತವ್ಯಕ್ಕೆ ವಾಪಸ್ಸಾಗುತ್ತೇನೆ ಎಂದು ನೀರಜ್ ಹೇಳಿಕೊಂಡಿದ್ದಾರೆ.

  • ಮತ್ತೆ ವೈದ್ಯೆ ವೃತ್ತಿಗೆ ಮರಳಿದ ಮಿಸ್ ಇಂಗ್ಲೆಂಡ್

    ಮತ್ತೆ ವೈದ್ಯೆ ವೃತ್ತಿಗೆ ಮರಳಿದ ಮಿಸ್ ಇಂಗ್ಲೆಂಡ್

    ಲಂಡನ್: ವಿಶ್ವವ್ಯಾಪಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕೊರೊನಾವನ್ನು ಓಡಿಸಲು ವೈದ್ಯರು ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಈ ಹೋರಾಟದಲ್ಲಿ ಭಾಗಿಯಾಗಲು ಮಿಸ್ ಇಂಗ್ಲೆಂಡ್-2019 ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ಮಿಸ್ ಇಂಗ್ಲೆಂಡ್-2019 ಭಾಷಾ ಮುಖರ್ಜಿ ವೈದ್ಯರಾಗಿ ತಮ್ಮ ವೃತ್ತಿ ಜೀವನವನ್ನು ಪುನರಾರಂಭಿಸಿದ್ದಾರೆ. ಪ್ರವಾಸದ ಸಲುವಾಗಿ ಭಾರತದಲ್ಲಿದ್ದ ಮುಖರ್ಜಿ, ಕೊರೊನಾ ವೈರಸ್ ಪ್ರಕರಣಗಳು ಜಗತ್ತಿನಾದ್ಯಂತ ಹೆಚ್ಚಾಗುತ್ತಿದ್ದಂತೆ ವೈದ್ಯರಾಗಿ ತಮ್ಮ ಕೆಲಸವನ್ನು ಮುಂದುವರಿಸಲು ಯುಕೆಗೆ ಮರಳಿದ್ದಾರೆ.

    https://www.instagram.com/p/B-Hr4eXnaOZ/

    ಕೋಲ್ಕತ್ತಾದಲ್ಲಿ ಜನಿಸಿದ ಭಾಷಾ ಮುಖರ್ಜಿ ಮೂಲತಃ ವೈದ್ಯರು. ಕಳೆದ ವರ್ಷ ಆಗಸ್ಟ್‍ನಲ್ಲಿ ನಡೆದ ಮಿಸ್ ಇಂಗ್ಲೆಂಡ್ ಸ್ಪರ್ಧೆಯಲ್ಲಿ ಮಿಸ್ ಇಂಗ್ಲೆಂಡ್-2019 ಕಿರೀಟವನ್ನು ಮೂಡಿಗೇರಿಸಿಕೊಂಡಿದ್ದರು. ಇದಾದ ನಂತರ ತನ್ನ ವೈದ್ಯಕೀಯ ವೃತ್ತಿ ಜೀವನದಿಂದ ವಿರಾಮ ತೆಗೆದುಕೊಂಡು ನಂತರ ಚಾರಿಟಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದರು. ಆದರೆ ಈಗ ಕೊರೊನಾದಿಂದ ದೇಶ ಸಂಕಷ್ಟದಲ್ಲಿ ಸಲುಕಿದೆ ಎಂದು ಮತ್ತೆ ತನ್ನ ವೈದ್ಯಕೀಯ ವೃತ್ತಿಗೆ ಬಂದಿದ್ದಾರೆ.

    https://www.instagram.com/p/B9jAzMZHDpD/

    ಈ ವಿಚಾರವಾಗಿ ಮಾತನಾಡಿರುವ ಮುಖರ್ಜಿ, ಇದು ನನಗೆ ಕಠಿಣ ನಿರ್ಧಾರ ಎಂದು ಎನಿಸುತ್ತಿಲ್ಲ. ನಾನು ಸದ್ಯ ಆಫ್ರಿಕಾ ಮತ್ತು ಟರ್ಕಿ ಪ್ರವಾಸ ಮುಗಿಸಿದ್ದೇನೆ. ಏಷ್ಯಾ ದೇಶಗಳ ಪೈಕಿ ಮೊದಲು ನಾನು ಭಾರತಕ್ಕೆ ಪ್ರವಾಸ ಕೈಗೊಂಡಿದ್ದೆ. ಭಾರತದ ನಂತರ ನಾನು ಇನ್ನೂ ಹಲವಾರು ದೇಶಗಳಿಗೆ ಪ್ರವಾಸಕ್ಕೆ ಹೋಗಬೇಕಿತ್ತು. ಆದರೆ ಕೊರೊನಾ ವೈರಸ್‍ನಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ನಾನು ಮತ್ತೆ ವೈದ್ಯಕೀಯ ವೃತ್ತಿಗೆ ಮರಳಿ ಜನಸೇವೆ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

    ಎಂ.ಎಸ್. ಮುಖರ್ಜಿ ಮಾರ್ಚ್ ಆರಂಭದ ವಾರಗಳಲ್ಲಿ ಭಾರತದಲ್ಲಿದ್ದರು. ಈ ನಡುವೆ ಯುಕೆಯಲ್ಲಿ ಕೊರೊನಾ ವೈರಸ್ ನಿಂದ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಈ ಬಗ್ಗೆ ಪೂರ್ವ ಇಂಗ್ಲೆಂಡ್‍ನ ಬೋಸ್ಟನ್ ನಲ್ಲಿರುವ ಪಿಲ್ಗ್ರಿಮ್ ಆಸ್ಪತ್ರೆಯಲ್ಲಿರುವ ಅವರ ಮಾಜಿ ಸಹೋದ್ಯೋಗಿಗಳು ದೇಶದಲ್ಲಿ ಪರಿಸ್ಥಿತಿ ಬಹಳ ಭೀಕರವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕಾರಣದಿಂದ ಮುಖರ್ಜಿ ಮತ್ತೆ ವೈದ್ಯ ವೃತ್ತಿಗೆ ಮರಳಲು ತೀರ್ಮಾನಿಸಿದ್ದಾರೆ.

    ನಾನು ಕೊರೊನಾ ವೈರಸ್ ಬಗ್ಗೆ ನನ್ನ ಸಹೋದ್ಯೋಗಿಗಳಿಂದ ಕೇಳಿ ತಿಳಿದುಕೊಂಡೆ. ಅವರು ಅಲ್ಲಿ ತುಂಬಾ ಕಷ್ಟಪಡುತ್ತಿದ್ದರು. ಆಗ ನನಗೆ ಅವರ ಕಷ್ಟದಲ್ಲಿ ಭಾಗಿಯಾಗಬೇಕು ಮತ್ತು ವೈದ್ಯಕೀಯ ವೃತ್ತಿಗೆ ಮರಳಬೇಕು ಅನಿಸಿತು. ಅದಕ್ಕಾಗಿ ಭಾರತದಿಂದ ನನ್ನ ದೇಶಕ್ಕೆ ಬಂದೆ. ಅಲ್ಲಿಂದ ಬಂದ ನಂತರ ಎರಡು ವಾರ ಸ್ವಯಂ ನಿರ್ಬಂಧದಲ್ಲಿ ಇದ್ದೆ. ಇದಾದ ನಂತರ ಮಂಗಳವಾರದಿಂದ ಪಿಲ್ಗ್ರಿಮ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಮುಖರ್ಜಿ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    https://www.instagram.com/p/B8_g9kNHEab/

    ಇಂಗ್ಲೆಂಡ್ ನಲ್ಲೂ ಕೂಡ ಕೊರೊನಾ ಮಹಾಮಾರಿ ರುದ್ರನರ್ತನ ಮಾಡುತ್ತಿದೆ. ಇಲ್ಲಿಯವರೆಗೂ ಯುಕೆಯಲ್ಲಿ ಸುಮಾರು 786 ಜನ ಸಾವನ್ನಪ್ಪಿದ್ದಾರೆ. ಜೊತೆಗೆ 50 ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕಿತರು ಇದ್ದಾರೆ.

  • ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

    ಮೋದಿಯಿಂದ ದೀಪ ಹಚ್ಚುವಂತೆ ಕರೆ – ವೈರಲ್ ಆಯ್ತು ಜೋಫ್ರಾ ಆರ್ಚರ್ ನುಡಿದಿದ್ದ ಭವಿಷ್ಯ

    ನವದೆಹಲಿ: ತಮ್ಮ ಟ್ವಿಟ್ಟರ್ ಮೂಲಕವೇ ಭವಿಷ್ಯದ ಘಟನೆಗಳ ಕುರಿತು ಸುಳಿವು ನೀಡುತ್ತಿರುವ ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ಪ್ರಧಾನಿ ಮೋದಿ ಅವರು ಇಂದು ನೀಡಿದ ವಿಡಿಯೋ ಸಂದೇಶದ ಬಳಿಕ ಆರ್ಚರ್ ಅವರ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

    ಅನೇಕ ಬಾರಿ ಭವಿಷ್ಯದ ಘಟನೆಗಳ ಬಗ್ಗೆ ಸುಳಿವು ನೀಡುವ ಮೂಲಕ ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸಿರುವ ಇಂಗ್ಲೆಡ್ ವೇಗದ ಬೌಲರ್ ಜೋಫ್ರಾ ಆರ್ಚರ್, ಮಗದೊಮ್ಮೆ ಸುದ್ದಿಯಲ್ಲಿದ್ದಾರೆ.

    ಮಾರ್ಚ್ 23ರಂದು ದೇಶದ ಜನರಲ್ಲಿ ಮನವಿ ಮಾಡಿದ್ದ ಪ್ರಧಾನಿ ಮೋದಿ ಮೂವರು ವಾರಗಳ ಲಾಕ್‍ಡೌನ್ ಮಾಹಿತಿ ನೀಡಿ ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಇತ್ತ 2017ರ ಅಕ್ಟೋಬರ್ ನಲ್ಲಿ ಟ್ವೀಟ್ ಮಾಡಿದ್ದ ಆರ್ಚರ್ ‘ಮನೆಯಲ್ಲೇ ಮೂರು ವಾರಗಳ ಉಳಿವುಯುವುದು ಸಾಕಾಗುವುದಿಲ್ಲ’ ಎಂದು ಬರೆದುಕೊಂಡಿದ್ದರು.

    ಲಾಕ್‍ಡೌನ್ ಆದೇಶದ ಬಳಿಕ ಮತ್ತೆ ಶುಕ್ರವಾರ ವಿಡಿಯೋ ಸಂದೇಶ ರವಾನೆ ಮಾಡಿರೋ ಮೋದಿ ಅವರು, ಏಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ಲೈಟ್ ಆಫ್ ಮಾಡಿ ದೀಪ ಬೆಳಗಿ ಎಂದು ಮನವಿ ಮಾಡಿ ಎಲ್ಲರೂ ಒಟ್ಟಾಗೋಣ ಎಂದು ಮನವಿ ಮಾಡಿದ್ದರು. ಸದ್ಯ ಜೋಫ್ರಾ ಆರ್ಚರ್ ಅವರ ಹಳೆಯ ಟ್ವೀಟ್‍ಗಳಲ್ಲಿ ಮೋದಿ ಅವರ ಮನವಿಯಂತೆ 9 ಫಾರ್ಮ್ 9 ಲೈಟ್ ಅಫ್ ಮಾಡಿ ಟಾರ್ಚ್ ಹಾಕಿ ಎಂದು ಟ್ವೀಟ್ ಮಾಡಿರುವುದು ಸಾಕಷ್ಟು ವೈರಲ್ ಆಗುತ್ತಿದೆ.

    ಆರ್ಚರ್ ಅವರು ಸುಮಾರು ಆರು ವರ್ಷಗಳ ಹಿಂದೆಯೇ ಭವಿಷ್ಯತ್ ಪರಿಣಾಮದ ಬಗ್ಗೆ ಟ್ವೀಟ್ ಮಾಡಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಆರ್ಚರ್ ಅವರ ಟ್ವೀಟ್ ಭಾರೀ ವೈರಲ್ ಆಗಿತ್ತು. ‘ಓಡಲು ಜಾಗವಿಲ್ಲದ ಆ ದಿನಗಳು ಬರಲಿದೆ’ ಎಂದು ಜೋಫ್ರಾ ಆರ್ಚರ್ 2014ರ ಆಗಸ್ಟ್ 20ರಂದು ಟ್ವೀಟ್ ಮಾಡಿದ್ದರು. ಅಕ್ಷರಶ: ಜೋಫ್ರಾ ಆರ್ಚರ್ ನುಡಿದ ಭವಿಷ್ಯ ನಿಜವಾಗಿದೆ. ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಆಟಗಾರರೆಲ್ಲ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ. ಕ್ರಿಕೆಟಿಗರ ಅಭ್ಯಾಸ ಸಂಪೂರ್ಣವಾಗಿ ರದ್ದುಗೊಂಡಿದೆ. ಮೈದಾನಕ್ಕಿಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವೈರಲ್ ಟ್ವೀಟ್ ಗಮನಿಸಿರುವ ನೆಟ್ಟಿಗರು ಆರ್ಚರ್ ಅವರನ್ನು ಗಾಡ್ (ದೇವರು) ಎಂದು ಸಂಬೋಧಿಸುತ್ತಾರೆ. ಜೋಫ್ರಾ ಆರ್ಚರ್ ಅವರ ಟ್ವೀಟ್‍ಗಳು ಸಾಕಷ್ಟು ಅಚ್ಚರಿಯನ್ನು ಮೂಡಿಸಿದೆ.

    ಕಳೆದ ಏಕದಿನ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೋಫ್ರಾ ಆರ್ಚರ್, ಬಳಿಕ ಆಸ್ಟ್ರೇಲಿಯಾ ವಿರುದ್ಧ ಆ್ಯಶಸ್ ಸರಣಿ ವೇಳೆ ಟೆಸ್ಟ್ ಕ್ರಿಕೆಟ್‍ಗೂ ಡೆಬ್ಯು ಮಾಡಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಿಂದ ಹೊರಗುಳಿಯುವಂತಾಗಿದೆ.